ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತ ಮುಖಂಡರು ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಡೆಸುವ ವೇಳೆ ದೇಶಾದ್ಯಂತ ಮನೆಯಿಂದ ಹೊರಬಂದು ತಟ್ಟೆ ಬಾರಿಸುವಂತೆ ಕರೆ ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಜಗ್ಜಿತ್ ಸಿಂಗ್ ದಾಲೆವಾಲಾ ಮಾತನಾಡಿ “ಕೊರೊನಾ ಆರಂಭದ ಸಮಯದಲ್ಲಿ ಪ್ರಧಾನಿ ಮೋದಿ ನಮಗೆಲ್ಲಾ ತಟ್ಟೆ ಬಾರಿಸುವಂತೆ ಕರೆ ನೀಡಿದ್ದರು. ಈಗ ಅವರು ಮನ್ ಕಿ ಬಾತ್ ಆಡುವ ವೇಳೆ, ಅವರು ಮಾತು ಮುಗಿಸುವವರೆಗೂ ನಾವು ತಟ್ಟೆ ಬಾರಿಸಿ ಅವರನ್ನು ವಿರೋಧಿಸೋಣ” ಎಂದು ತಿಳಿಸಿದ್ದಾರೆ.
On December 27, during Prime Minister Modi's Mann Ki Baat. We would appeal to everyone to beat 'thali' at their homes till the time he speaks during the program: Jagjit Singh Dalewala, Bharatiya Kisan Union. #FarmersProtest pic.twitter.com/r1Cbava6tF
— ANI (@ANI) December 20, 2020
ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಮಾತನಾಡಿ “ರೈತ ಹೋರಾಟ ಬೆಂಬಲಿಸಿ ನಾಳೆಯಿಂದ 11 ಜನರ ತಂಡ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿ. ನಂತರ ಅದನ್ನು ಮತ್ತೆ 11 ಜನರ ಮುಂದುವರೆಸುವುದು. ಈಗೆ ರಿಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳೋಣ” ಎಂದು ಕರೆ ನಿಡಿದ್ದಾರೆ.
ಪತ್ರಿಕಾಗೋಷ್ಟಿಯ ಲೈವ್ ನೋಡಿ.
ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!