Homeಮುಖಪುಟವೈಚಾರಿಕ ಜಾಗೃತಿ ತುಂಬಿದ ನನ್ನ ಪಪ್ಪ

ವೈಚಾರಿಕ ಜಾಗೃತಿ ತುಂಬಿದ ನನ್ನ ಪಪ್ಪ

- Advertisement -
- Advertisement -

ಮತ್ತೆ ಫೆಬ್ರವರಿ ತಿಂಗಳು. 2004ರ ಇದೇ ತಿಂಗಳ ಮೂರನೆಯ ತಾರೀಕು ಅವರು ನಮ್ಮನ್ನು ಬಿಟ್ಟು ಹೋದ ದಿನ ಮತ್ತು 13 ಅವರು ಹುಟ್ಟಿದ ದಿನ. ಹುಟ್ಟು ಸಾವು ನಿಸರ್ಗದಲ್ಲಿ ಒಂದು ಸಹಜ ಪ್ರಕ್ರಿಯೆ. ಆದರೆ ಬದುಕಿಗೆ ಸಾರ್ಥಕತೆ ತಂದುಕೊಳ್ಳಲೆಂದು ಜೀವನ ನಡೆಸುವವರು ಕೆಲವರು. ಅವರೊಳಗೆ ನನ್ನ ಪಪ್ಪ ಕೂಡ ಒಬ್ಬರು. ನನಗೆ ಸಿಕ್ಕ ಒಂದು ಅದ್ಭುತ ಜಗತ್ತು ಅವರು. ನನ್ನ ಬದುಕಿನ ಒಂದು ಅಪರೂಪದ ಅನುಭವ ಅವರಾಗಿದ್ದರು.

ನನಗೆ ಗೊತ್ತಾಗದಂತೆಯೇ ಅವರು ನನ್ನನ್ನು ಆವರಿಸಿಕೊಂಡುಬಿಟ್ಟಿದ್ದರು ಅನ್ನಿಸುತ್ತೆ. ಎಷ್ಟರ ಮಟ್ಟಿಗೆ ಎಂದರೆ ನನಗಾಗ ಎರಡು ಮೂರು ವರ್ಷ ಇರಬಹುದು. ನಾನು ಅವರ ಹಾಗೇ ಕೈ ಹಿಂದೆ ಕೈಕಟ್ಟಿಕೊಂಡು ನಡೆಯುತ್ತಿದ್ದನಂತೆ. ಅವರ ಒಡನಾಡಿಗಳಾಗಿದ್ದ ಪ್ರೊ. ರವಿವರ್ಮ ಕುಮಾರ್ ಮತ್ತು ನ್ಯಾಯಾಧೀಶರಾಗಿದ್ದ ಶ್ರೀ. ಎಸ್. ಆರ್.ನಾಯಕರು ನಾನು ಪಪ್ಪನ ರೀತಿ ನಡೆಯುತ್ತಿದ್ದನ್ನು ನೋಡಿ ಎಲ್ಲರಿಗೂ ತೋರಿಸುತ್ತಾ ಖುಷಿ ಪಡುತ್ತಿದ್ದರಂತೆ. ಅಮ್ಮ ಆಗಾಗ ಈ ವಿಷಯ ಹೇಳುತ್ತಲೇ ಇರುತ್ತಿದ್ದರು.

ನನ್ನನ್ನು ಅತೀ ಹೆಚ್ಚು ಪ್ರೇರೇಪಿಸಿದ ವ್ಯಕ್ತಿ ಅವರು. ನಾನು ಅತಿ ಹೆಚ್ಚು ಪ್ರೀತಿಸಿದ ಮತ್ತು ಪ್ರೀತಿಸುವ ವ್ಯಕ್ತಿ ಅವರು. ನಾನು ಮಾಡುತ್ತಿದ್ದ ಚಿಕ್ಕಪುಟ್ಟ ಸಾಧನೆಗಳಿಗೆ ಅವರಿಂದ ಮನ್ನಣೆ ಸಿಕ್ಕಿತೆಂದರೆ ಜಗತ್ತೇ ಗೆದ್ದ ಖುಷಿ ಆಗುತ್ತಿತ್ತು.

ಅನೇಕ ಹಾರ್ಡ್‌ಕೋರ್ ಚಳವಳಿಗಾರರಿಗೆ ಮೊದಲ ವಿರೋಧಿ ತಮ್ಮ ಕುಟುಂಬದವರೇ ಆಗಿರುತ್ತಾರೆ. ಅವರು ಕುಟುಂಬಕ್ಕೆ ಹೆಚ್ಚು ಗಮನ ಕೊಡುತ್ತಿಲ್ಲವೆಂಬ ಕಾರಣಕ್ಕೆ. ನಮ್ಮ ಕುಟುಂಬವೂ ಇದಕ್ಕೆ ಹೊರತಾಗಿರಲಿಲ್ಲ. ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತಿದ್ದವು. ಅದೆಲ್ಲದರ ನಡುವೆಯೂ ನಮ್ಮ ಜೊತೆ ಖುಷಿಯಾಗಿ ಕಾಲ ಕಳೆದದ್ದು, ನಮಗೆ ಕನ್ನಡ ವ್ಯಾಕರಣ ಹೇಳಿಕೊಡುತ್ತಿದ್ದುದು, ಅಮ್ಮನಿಗೆ ಕ್ರೋಷಾ ಎಣಿಸುವಾಗ ಕೈಜೋಡಿಸುತ್ತಿದ್ದುದು, ತಾನು ಜರ್ಮನಿಯಿಂದ ತಂದ ಮಿಕ್ಸರ್‌ಅನ್ನು ಹೊರಗೆ ರಿಪೇರಿಗೆ ಕೊಡದೆ ತಾನೆ ಜೋಪಾನವಾಗಿ ರಿಪೇರಿ ಮಾಡುತ್ತಿದ್ದದ್ದು, ನಮಗೆ ಒಂದಗಳೂ ಬಿಡದಂತೆ ಊಟ ಮಾಡಲು ಹೇಳಿಕೊಡುತ್ತಿದ್ದದ್ದು, ಮಗ್ಗಿ ಕಲಿಯಿರಿ..ಮಗ್ಗಿ ಕಲಿಯಿರಿ.. ಅಂತ ಕೆನಡಾದಿಂದ, ಸ್ಜಿಜರ್‌ಲ್ಯಾಂಡನಿಂದ ಪೋಸ್ಟ್ ಕಾರ್ಡ್ ಕಳಿಸುತ್ತಿದ್ದುದು.. ತಮ್ಮ ಕಾರಿಗೆ ಹಾಕುತ್ತಿದ್ದ ರೈತ ಸಂಘದ ಬಾವುಟದ ನೇಗಿಲನ್ನೂ ಪೇಯಿಂಟ್ ಮಾಡುತ್ತಿದ್ದುದು.. ಹೀಗೆ ಅವರು ನಮ್ಮೊಡನೆ ಕಳೆಯುತ್ತಿದ್ದ ಕಾಲ ಅತ್ಯಮೂಲ್ಯವಾದದ್ದು. ಹಾಗಾಗಿಯೇ ಅವರು ನನಗೆ ಸಿಕ್ಕಿದ್ದು ಕೇವಲ ಇಪ್ಪತ್ತೆರಡು ವರ್ಷವಾದರೂ ಅವರು ನನ್ನೊಂದಿಗೆ ಇದ್ದಷ್ಟು ಕಾಲ ಪ್ರಭಾವಿಸಿದ್ದು ಇಂದಿಗೂ ನನಗೆ ಪ್ರಸ್ತುತ ಅನ್ನಿಸುವುದು.

ಪಪ್ಪನಿಗೆ 1980ರಲ್ಲಿ ರೈತ ಹೋರಾಟ ಮತ್ತು ಬದುಕಿನ ಹೋರಾಟ ಒಟ್ಟಿಗೇ ಶುರುವಾದವು. ಪಪ್ಪ ನಾಸ್ತಿಕವಾದಿಯಾದರೆ ಅಮ್ಮನಿಗೆ ಆಧ್ಯಾತ್ಮದ ಕಡೆಗೆ ಒಲವು. ಮೊದಮೊದಲು ಪಪ್ಪ ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬ ಗ್ರಹಿಕೆ ಬಿಟ್ಟರೆ ಅಮ್ಮನಿಗೆ ಬೇರೇನೂ ಗೊತ್ತಾಗುತ್ತಿರಲಿಲ್ಲವಂತೆ. ಆ ಸಾಮಾನ್ಯ ಗ್ರಹಿಕೆಯಿಂದಲೇ ಅಮ್ಮ ಪಪ್ಪನ ಬೆನ್ನೆಲುಬಾಗಿದ್ದರು. ಚಳವಳಿ ಉತ್ತುಂಗಕ್ಕೆ ಹೋದಂತೆ ಅಮ್ಮ ಪೊಲೀಸರ ದಿಕ್ಕು ತಪ್ಪಿಸುವಷ್ಟು ಪ್ರಬುದ್ಧರಾಗಿಹೋಗಿದ್ದರು.

ಯಾವ ಅಧಿಕಾರ, ಸ್ಥಾನ-ಮಾನಗಳಿಗೂ ದುಂಬಾಲು ಬೀಳದೇ ತಾನು ನಂಬಿದ ಮತ್ತು ಪ್ರತಿಪಾದಿಸುತ್ತಿದ್ದ ವಿಚಾರಗಳನ್ನು ನಡೆಯುತ್ತಾ ನಡೆಸಿದ ಬದುಕೇ ನಮಗೆ ಮಾದರಿ.

ಯಾರಿಗೆ ಫೋನ್ ಮಾಡಿದರೂ.. ನಮಸ್ಕಾರ ನಾನು ನಂಜುಂಡಸ್ವಾಮಿ, ರೈತ ಸಂಘ ಎಂದಷ್ಟೇ ಪರಿಚಯಿಸಿಕೊಳ್ಳುತ್ತಿದ್ದರು. ಎಂದೂ ನಾನು ರಾಜ್ಯಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಅದರ ಹಿಂದಿದ್ದ ಒಂದೇ ಶಕ್ತಿ ಅವರಿಗಿದ್ದ ಅಪಾರವಾದ ಓದು ಮತ್ತು ಅಗಾಧವಾದ ಜ್ಞಾನ, ಜ್ಞಾನದಿಂದ ಬಂದ ವೈಚಾರಿಕ ಸ್ಪಷ್ಟತೆ, ವೈಚಾರಿಕ ಸ್ಪಷ್ಟತೆಯಿಂದ ಹೊರಬಂದ ರಾಜಿರಹಿತವಾದ ವ್ಯಕ್ತಿತ್ವ.

ರೈತ ಹೋರಾಟದ, ಸಮಾವೇಶಗಳ ಮತ್ತೆಲ್ಲ ಕಾರ್ಯಕ್ರಮಗಳ ಕರಪತ್ರಗಳ, ಪೋಸ್ಟರ್‌ಗಳ ಒಕ್ಕಣೆ ಅವರೇ ಬರೆಯುತ್ತಿದ್ದರು. ’ನಿದ್ದೆಯಲ್ಲಿರುವ ವಿಧಾನಸೌಧವನ್ನು ಎಬ್ಬಿಸಲು’, ’ಹೊಸ ಕರ್ನಾಟಕ ಕಟ್ಟಲು ರೈತರ ಬೃಹತ್ ಸಮಾವೇಶ’ ಎಂಬ ಕಬ್ಬನ್ ಪಾರ್ಕಿನ ಸಮಾವೇಶದ ಬ್ಯಾನರ್ ಇರಬಹುದು.. ಕುಲಾಂತರಿ ಬಿ.ಟಿ.ಹತ್ತಿಯ ವಿರುದ್ಧ ನಡೆದ ರೈತರ ನೇರ ಕಾರ್ಯಾಚರಣೆಗೆ ಅವರು ಇಟ್ಟ ಹೆಸರು ‘Cremation Action Monsanto’ (ಮೊನ್ಸ್ಯಾಂಟೋದ ಶವದಹನ ಕ್ರಿಯೆ). ಆಹಾರ ಭದ್ರತೆ ಬಗ್ಗೆಯಷ್ಟೇ ಮಾತನಾಡುತ್ತಿದ್ದ ವಿಶ್ವ ಸಂಸ್ಥೆಗೆ ಆಹಾರದ ಸಾರ್ವಭೌಮತೆಯ ಪರಿಕಲ್ಪನೆಯನ್ನು ಹೇಳಿಕೊಡುವ ಮುಖಾಂತರ ರೈತರ, ಶ್ರಮಿಕರ ಬದುಕುವ ಹಕ್ಕಿನ ಹೋರಾಟಕ್ಕೆ ನುಡಿಗಟ್ಟುಗಳನ್ನು ಕಟ್ಟಿಕೊಡುತ್ತಿದ್ದರು.

ಅವರೆಂದೂ ಮನವಿ ಕೊಟ್ಟು ಫೋಟೋ ತೆಗೆಸಿಕೊಳ್ಳುವ ಹೋರಾಟಗಳನ್ನು ಮಾಡುತ್ತಿರಲಿಲ್ಲ. ಅವರಿಗಿದ್ದ ನಂಬಿಕೆ Direct Action ಬಗ್ಗೆ ಮಾತ್ರ. ಅದೂ ಅಹಿಂಸಾತ್ಮಕವಾದ ನೇರ ಕಾರ್ಯಾಚರಣೆ. ಅದು ಸಮಾಜದ ಗಮನ ಸೆಳೆಯಲು ಮತ್ತು ಸಮಾಜವನ್ನು ಎಚ್ಚರಿಸಲು ಬಳಸುತ್ತಿದ್ದ ಕಾರ್ಯತಂತ್ರವೂ ಆಗಿತ್ತು. ಜಪ್ತಿಗೆ ವಿರುದ್ಧ ಮರುಜಪ್ತಿ, ಸಾಮಾಜಿಕ ಅರಣ್ಯದ ಹೆಸರಿನಲ್ಲಿ ನೆಡುತ್ತಿದ್ದ ಮಾರಕ ನೀಲಗಿರಿ ಗಿಡಗಳನ್ನು ಕಿತ್ತು ಹಾಕಿದ ಕಾರ್ಯಕ್ರಮ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ರೈತರು ತಮ್ಮ ಹಳ್ಳಿಗಳಲ್ಲಿ ರಾತ್ರೋ ರಾತ್ರಿ ಕಾದು ಲಾರಿಗಳನ್ನು ತಡೆದು ಅಕ್ರಮವಾಗಿ ಸಾಗಿಸುತ್ತಿದ್ದ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ನಡೆದ ಹೋರಾಟ, ಬ್ರಿಗೇಡ್ ರೋಡಿನ ಕಾರ್ಗಿಲ್ ಬೀಜದ ಕಂಪೆನಿ ಮತ್ತು ಕೆಂಟುಕಿ ಫ್ರೈಡ್ ಚಿಕನ್ ಮೇಲೆ ನಡೆಸಿದ ನೇರ ಕಾರ್ಯಾಚರಣೆ, ನೀರಾ ಚಳವಳಿ, ಮೀಟರ್ ವಾಪಸಾತಿ ಚಳವಳಿ ಇವೆಲ್ಲಾ Direct Action ಚಳವಳಿಗೆ ಕೆಲವು ಉದಾಹರಣೆಗಳು..

ಈ ರೀತಿಯ ಚಳವಳಿಗಳು ಕೇವಲ ಇಲ್ಲಿಯ ರೈತರನ್ನಷ್ಟೇ ಅಲ್ಲ. ಬ್ರೆಜಿಲ್ ದೇಶದ ಭೂಹೀನರ ಸಂಘ, ಇಂಡೋನೇಷ್ಯಾದ ರೈತರ ಸಂಘ ಹಾಗೂ ಫ್ರಾನ್ಸ್ ದೇಶದ ರೈತ ಸಂಘಗಳನ್ನೂ ಪ್ರೇರೇಪಿಸಿದವು. ಅವರು ಪ್ರತಿಪಾದಿಸುತ್ತಿದ್ದ ಆಹಾರ ಸಾರ್ವಭೌಮತ್ವದ ಸಿದ್ಧಾಂತ ಮಾಲಿ, ನೇಪಾಳ ಮತ್ತು ಬೊಲಿವಿಯಾ ದೇಶಗಳ ಸಂವಿಧಾನದ ಮೂಲಭೂತ ಹಕ್ಕುಗಳಾಗಿ ಸೇರಿಕೊಂಡವು.

ಆದರೆ ದುಃಖದ ಸಂಗತಿಯೆಂದರೆ ಅವರ ನಂತರ ಅವರ ಗರಡಿಯಲ್ಲೇ ಪಳಗಿದ ರೈತ ಚಳವಳಿಯ ಎರಡನೇ ಅಥವಾ ಮೂರನೇ ತಲೆಮಾರಿನ ರೈತ ನಾಯಕರುಗಳು ಇವ್ಯಾವ ವಿಚಾರಗಳನ್ನೂ ಗಂಭೀರವಾಗಿ ಮುನ್ನಡೆಸದೆ ಹೋದದ್ದು. ಹೊಸ ತಲೆಮಾರಿನ ರೈತ ಚಳವಳಿಗಾರರಿಗಂತೂ ವೈಚಾರಿಕ ಶೂನ್ಯತೆಯನ್ನು ಇದು ಕೊಡುಗೆಯಾಗಿ ಕೊಟ್ಟಿದೆ.

ಇಂದು ರೈತ ಸಂಘದ ಹೆಸರಿನಲ್ಲಿ ನೂರಾರು ಸಂಘಟನೆಗಳು ಹುಟ್ಟಿಕೊಂಡಿವೆ. ಅದರಲ್ಲಿ ಲೆಟರ್‌ಹೆಡ್ ಸಂಘಟನೆಗಳೇ ಹೆಚ್ಚು. ಎಲ್ಲರೂ ಪಪ್ಪನ ಫೋಟೋ ಬಳಸುತ್ತಾರೆ. ದುರಂತವೆಂದರೆ ಇವರ್‍ಯಾರೂ ಅವರ ವಿಚಾರಗಳ ಮೇಲೆ ಸಂಘಟನೆ ಕಟ್ಟುತ್ತಿಲ್ಲ ಎನ್ನುವುದು.

ಈ ಎಲ್ಲ ಸ್ನೇಹಿತರು ಒಮ್ಮೆ ನಂಜುಂಡಸ್ವಾಮಿಯವರನ್ನು ಮತ್ತು ಅವರು ಪ್ರತಿಪಾದಿಸುತ್ತಿದ್ದ ವಿಚಾರಗಳ ಬಗ್ಗೆ ಗಂಭೀರವಾಗಿ ತಿಳಿದುಕೊಳ್ಳುವಂತಾಗಲಿ. ಒಂದು ನಿಮಿಷ ಕಣ್ಣುಮುಚ್ಚಿ ಅವರ ನಡೆನುಡಿಯ ಬಗ್ಗೆ ಯೋಚಿಸುವಂತಾಗಲಿ. ಇದೊಂದೇ ಮಗಳಾಗಿ ಅವರ ಹುಟ್ಟಿದ ದಿನದ ಈ ಫೆಬ್ರವರಿ ತಿಂಗಳಿನಲ್ಲಿ ನಾನು ಮಾಡುವ ಮನವಿ…

ಮಿಸ್ ಯು ಪಪ್ಪಾ…

ಚುಕ್ಕಿ ನಂಜುಂಡಸ್ವಾಮಿ

ಚುಕ್ಕಿ ನಂಜುಂಡಸ್ವಾಮಿ
ಚಿಕ್ಕಂದಿನಿಂದಲೂ ರೈತ ಚಳವಳಿಯ ಜೊತೆಗೇ ಬೆಳೆದ ಚುಕ್ಕಿ, ಈಗ ರೈತ ಚಳವಳಿಯ ರಾಜ್ಯ ನಾಯಕಿಯರಲ್ಲೊಬ್ಬರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ತೃತೀಯ ದೇಶಗಳ ರೈತರನ್ನು ಪ್ರತಿನಿಧಿಸುವವರು. ಪ್ರಸ್ತುತ ಚಾಮರಾಜನಗರದ ಅಮೃತಭೂಮಿಯ ವಿಶಿಷ್ಟ ರೈತ ಪ್ರಯೋಗ ಶಾಲೆಯ ಮುಖ್ಯಸ್ಥರು.


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...