Homeಕಥೆಕಠೋಪನಿಷತ್ತು - ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

- Advertisement -
- Advertisement -

ಆಚರಣೆಯು ಅನುಷ್ಠಾನದಿಂದ ಹೊರತಾಗಿರುವುದರ ವಿರುದ್ಧವಾಗಿ ಬಂಡಾಯವೇಳುವ ನಚಿಕೇತನೆಂಬ ಹುಡುಗನ ಕತೆ ಈ ಕಠೋಪನಿಷತ್ತು.

ಉದ್ದಾಲಕ ನಚಿಕೇತನ ತಂದೆ. ಅವನು ಸರ್ವವೇದಸ್ ಎಂಬ ಯಜ್ಞವನ್ನು ಮಾಡಿದ. ಅದರ ಪ್ರಕಾರ ತನ್ನಲ್ಲಿರುವ ಎಲ್ಲವನ್ನೂ ಕೂಡಾ ಯಜ್ಞಕರ್ತೃವು ಕೊಡಬೇಕು. ಹಸುಗಳೇ ಅವರ ಸಂಪತ್ತು. ಉದ್ದಾಲಕನು ತನ್ನಲ್ಲಿರುವ ಎಲ್ಲಾ ಹಸುಗಳನ್ನು ದಾನ ಮಾಡುವ ಬದಲು ಉತ್ತಮವಾದ ಹಸುಗಳನ್ನು ಇಟ್ಟುಕೊಂಡು ಗೊಡ್ಡು ಹಸುಗಳನ್ನು ಬಂದವರಿಗೆ ದಾನವಾಗಿ ನೀಡುತ್ತಿದ್ದ.

ಇದನ್ನು ನಚಿಕೇತ ಗಮನಿಸಿದ. ತನ್ನಲ್ಲಿರುವ ಸರ್ವಸ್ವವನ್ನೂ ಕೊಟ್ಟು ಲೌಕಿಕ ಭಾರದಿಂದ ಮುಕ್ತನಾಗಬೇಕಿದ್ದ ತಂದೆ ಆಚರಣೆಯಲ್ಲಿ ಹಾಗೆ ತೋರುತ್ತಿದ್ದಾನೆ ಆದರೆ ವಾಸ್ತವದಲ್ಲಿ ಲೋಭಿಯೇ ಆಗಿದ್ದಾನೆ. ನಡೆನುಡಿ ಹೊಂದದ, ಆಚರಣೆ ಅನುಷ್ಠಾನಗಳಿಗೆ ತಾಳೆಯಾಗದ ಈ ಯಜ್ಞವನ್ನು ಅವನು ಪ್ರತಿಭಟಿಸುವ ರೀತಿ ವಿಶಿಷ್ಟವಾಗಿದೆ.

ನಚಿಕೇತ ಅವರ ಮನೆಯಲ್ಲಿ ಜಾಣನಾಗಿ ಗುರುತಿಸಿಕೊಂಡಿರುವವನಲ್ಲ. ಒಂದು ರೀತಿಯಲ್ಲಿ ಕೆಲಸಕ್ಕೆ ಬಾರದವನು. ಏನೂ ಕೆಲಸಕ್ಕೆ ಬಾರದ ಹಸುಗಳನ್ನು ದಕ್ಷಿಣೆಯಾಗಿ ಕೊಡುತ್ತಿದ್ದ ತಂದೆಯ ಗಮನ ಸೆಳೆದು ಇದೇ ಕೆಲಸಕ್ಕೆ ಬಾರದ ಮಗ ಕೇಳಿದ “ನನ್ನನ್ನು ಯಾರಿಗೆ ಕೊಡುತ್ತೀರಿ?” ಎಂದು.

ಈ ಪ್ರಶ್ನೆಯೇ ಅವನ ಪ್ರತಿಭಟನೆ. ಈ ಪ್ರಶ್ನೆಯಲ್ಲಿ ತಂದೆಯ ಡಾಂಭಿಕತನವನ್ನು ಪ್ರಶ್ನಿಸುತ್ತಾನೆ. ಶುಷ್ಕ ಆಚರಣೆಗಳನ್ನು, ಆಧ್ಯಾತ್ಮ ಮೌಲ್ಯಗಳನ್ನು ಗ್ರಹಿಸದ ವಿಧಿಗಳನ್ನು, ತನ್ನ ಸಂಪತ್ತನ್ನು ದಾನ ತೆಗೆದುಕೊಳ್ಳಿ ಎಂದು ಪೊಳ್ಳನ್ನು ಕೊಡುವ ಮೋಸವನ್ನು ಪ್ರಶ್ನಿಸುತ್ತಾನೆ. ಕೆಲಸಕ್ಕೆ ಬಾರದ ಮಗನನ್ನು ಏನು ಮಾಡುತ್ತೀಯಾ ಎಂದು ಕೆಲಸಕ್ಕೆ ಬಾರದವೆಂದು ಹಸುಗಳನ್ನು ದಾನದ ಹೆಸರಲ್ಲಿ ಕೈ ತೊಳೆದುಕೊಳ್ಳುವ ಮನುಷ್ಯನ ವ್ಯಾಮೋಹವನ್ನು ಪ್ರಶ್ನಿಸುತ್ತಾನೆ.

ನಚಿಕೇತ ಎಲ್ಲೋ ಮೂಲೆಯಲ್ಲಿ ಕೇಳಲಿಲ್ಲ. ಯಜ್ಞ ನಡೆಯುವಲ್ಲಿ ಎಲ್ಲರ ಮುಂದೆ ಕೇಳಿದ. ಮುಜುಗರಗೊಂಡ ತಂದೆ ಉತ್ತರಿಸದೇ ತಪ್ಪಿಸಿಕೊಳ್ಳುತ್ತಾನೆ. ಆದರೆ ಇವನು ಬಿಡದೇ ಮೂರು ಬಾರಿ ಕೇಳುತ್ತಾನೆ. ಕೆರಳಿದ ತಂದೆ ನಿನ್ನ ಸಾವಿಗೆ ಕೊಡುತ್ತೇನೆ ಎನ್ನುತ್ತಾನೆ.

ಮಾತು ಮತ್ತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿಯುವ ನಚಿಕೇತನ ಪ್ರತಿಭಟನೆ ಮುಂದುವರಿಯುತ್ತದೆ. ನಾನು ಸಾವಿಗೆ ಹೋಗುತ್ತೇನೆ ಎಂದು ಹೋಗುತ್ತಾನೆ ನಚಿಕೇತ.
ಮುಂದಿನ ಭಾಗ ರೂಪಕ. ಏಕೆಂದರೆ ಮೃತ್ಯುವಿನ ದೇವತೆಯಾದ ಯಮನಿಗಾಗಿ ಮೂರು ದಿನಗಳ ಕಾಲ ಕಾದು ನಂತರ ಅವನನ್ನು ಸಂಧಿಸಿ ಮರಣದಾಚೆಯ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾನೆ.

ವೈದಿಕರ ಯಾವ ಯಜ್ಞವನ್ನು ವಿರೋಧಿಸಿ ಮಾತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದನೋ ಆ ನಚಿಕೇತನೇ ಮುಂದೆ ಯಮನಿಂದ ಯಜ್ಞ ಮಾಡುವುದನ್ನು ಕಲಿತುಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ಅದು ಸಮಿತ್ತುಗಳನ್ನಿಟ್ಟು ಅಗ್ನಿಕಾರ್ಯದಿಂದ ಮಾಡುವ ಯಜ್ಞವಾಗಿರದೇ ಆಂತರಿಕ ಯಜ್ಞವಾಗಿ ಅನಾವರಣಗೊಳ್ಳುತ್ತದೆ.

ಅದೇನೇ ಇರಲಿ, ಒಬ್ಬ ಪ್ರತಿಭಟನಾಕಾರನಿಗೆ ಇರಬೇಕಾದ ಆತ್ಮವಿಶ್ವಾಸವನ್ನು ನಚಿಕೇತ ಅಲ್ಲಿ ತೋರುತ್ತಾನೆ. “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ತಂದೆ ಹೇಳಿದಾಗ, “ಬಹುಜನರಲ್ಲಿ ಪ್ರಥಮನಾಗಿ, ಬಹುಜನರಲ್ಲಿ ಮಧ್ಯಮನಾಗಿರುವ ನನ್ನಿಂದ ಯಾವ ಕೆಲಸ ಮೃತ್ಯುವಿಗೆ ಆಗುತ್ತದೆ?” ಎಂದು ಯೋಚಿಸುತ್ತಾನೆ. ತಾನು ಅಧಮನಲ್ಲ ಎಂಬ ಆತ್ಮವಿಶ್ವಾಸವಿದೆ ಅವನಲ್ಲಿ. ಅಷ್ಟೇಅಲ್ಲದೇ ತಾನು ಪ್ರತಿಭಟಿಸಿದ ತಂದೆಗೆ ನಿದ್ರೆಗಳಿಂದ ಕೂಡಿರುವ ರಾತ್ರಿಯಿರಲಿ ಎಂದು ಒತ್ತಡರಹಿತವಾದ ಮನಸ್ಥಿತಿ ಬಯಸುತ್ತಾನೆ. ಪ್ರತಿಭಟನೆ ಮತ್ತು ಪ್ರೀತಿ ತೋರುವ ಆತ್ಮೀಯ ಭಾವ ನಚಿಕೇತದಲ್ಲಿ.

ಕಠೋಪನಿಷತ್ತಿನಲ್ಲಿ ಮೂಲಕತೆಯೊಂದಿಗೆ ನುಸುಳುವಿಕೆಗಳಿವೆ ಎಂದು ತೋರುತ್ತದೆ. ಆದರೆ, ನಚಿಕೇತನೆಂಬ ಸಾತ್ವಿಕ ಬಂಡಾಯಗಾರನ ಪ್ರತಿಮೆ ಮಾತ್ರ ಅತ್ಯಂತ ಆಪ್ತ. ಇದನ್ನೇ ಆಧರಿಸಿ ತ ರಾ ಸು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ರಚಿಸಿದ್ದಾರೆ. ಇದೂ ಕೂಡಾ ನಚಿಕೇತನ ವ್ಯಕ್ತಿತ್ವದ ದರ್ಶನ ಮಾಡಿಸುವಂತದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...