Homeಕರ್ನಾಟಕಆಷಾಢದ ಗಾಳಿಯಲ್ಲಿ ಹಾರಿದ ಪಟ ಬಸವರಾಜ ಬೊಮ್ಮಾಯಿ

ಆಷಾಢದ ಗಾಳಿಯಲ್ಲಿ ಹಾರಿದ ಪಟ ಬಸವರಾಜ ಬೊಮ್ಮಾಯಿ

- Advertisement -
- Advertisement -

ಆಷಾಢದ ಗಾಳಿ ಬಹಳ ವಿಚಿತ್ರ. ಮಳೆಯೂ ಸುರಿಯುವ ಕಾಲದಲ್ಲಿ ಗಾಳಿ ಬಲು ಜೋರು. ದಟ್ಟ ಮೋಡಗಳನ್ನು ಹೊತ್ತು ತರುವ ಈ ಗಾಳಿ, ಜೊತೆಗೆ ಗುಡುಗು-ಮಿಂಚುಗಳ ಆರ್ಭಟದೊಂದಿಗೆ ಬೆಚ್ಚಿ ಬೀಳಿಸುತ್ತದೆ. ಚೈತ್ರದಲ್ಲಿ ಚಿಗುರಿ, ಅರಳಿ ನಿಂತ ಎಂತಹ ಗಟ್ಟಿ ಮರವನ್ನು ನೀನೆಷ್ಟು ಗಟ್ಟಿ ಎಂದು ಅಲುಗಾಡಿಸಿ, ಅದರ ಬೇರುಗಳನ್ನೇ ಬುಡಮೇಲುಮಾಡುವ ತಾಕತ್ತು ಆಷಾಢದ ಗಾಳಿಗೆ ಇದೆ.

ಒಂದು ರೀತಿಯ ಅಸಮತೋಲನ, ಒಂದು ರೀತಿಯ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸುವ ಈ ಕಾಲ, ನಿಜವಾದ ಕಸುವನ್ನು ಒರೆಹಚ್ಚುತ್ತಿರುತ್ತದೆ. ಇದೇ ಕಾಲದಲ್ಲಿ ಗಾಳಿಪಟ ಕೂಡ ಆಕಾಶದಲ್ಲಿ ಹಾರಾಡುತ್ತದೆ.

ಸದ್ಯ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವದ ಕುರಿತು ಇರುವ ಬಿಕ್ಕಟ್ಟಿನ ಕಾಲದಲ್ಲಿ ಗಾಳಿಪಟದಂತೆ ಆಕಾಶಕ್ಕೆ ಹಾರಿರುವುದು ಬಸವರಾಜ ಬೊಮ್ಮಾಯಿ. ಕರ್ನಾಟಕದ ಇಪ್ಪತ್ತನೆಯ ಮುಖ್ಯಮಂತ್ರಿಯಾಗಿ ಜುಲೈ 28ರಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಆರು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಡೆದ ತೆರೆಮರೆಯ ಚರ್ಚೆಗಳು, ರಾಷ್ಟ್ರ ನಾಯಕರ ಭೇಟಿಗಳು, ಆರ್‌ಎಸ್‌ಎಸ್‌ನವರಂತೆ, ಹೊರಗಿನವರಂತೆ ಎಂಬೆಲ್ಲಾ ಚರ್ಚೆಗಳಿಗೆ ಅಲ್ಪವಿರಾಮ ಬಿದ್ದಿದೆ.

ಬಸವರಾಜ ಬೊಮ್ಮಾಯಿ ಅವರ ಈ ಆಯ್ಕೆ ವಿಶೇಷಗಳನ್ನು ದಾಖಲಿಸಿದೆ. ಬಿಜೆಪಿಯೂ ಮೂಲನಿವಾಸಿಯಲ್ಲದ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದೆ. ಹಾಗೇ ಕರ್ನಾಟಕದಲ್ಲಿ ಅಪ್ಪ-ಮಗ ಈ ಸ್ಥಾನಕ್ಕೇರಿದ ಎರಡನೆಯ ಕುಟುಂಬ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ (ಕುಟುಂಬ ರಾಜಕಾರಣದ ಚರ್ಚೆ ಒತ್ತಟ್ಟಿಗಿರಲಿ).

ಬಸವರಾಜ ಬೊಮ್ಮಾಯಿ ಅವರ ಆಯ್ಕೆಯು ಲಿಂಗಾಯತ ರಾಜಕಾರಣದ ದಾಳದಂತೆ ಕಾಣುವುದು ಸಹಜ. ಯಡಿಯೂರಪ್ಪನವರ ರಾಜೀನಾಮೆ, 500ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರ ಸಭೆ, ಆಗ್ರಹಗಳು ಎಲ್ಲವೂ ರಾಜ್ಯದ ಶೇ.17ರಷ್ಟಿರುವ ಮತಬ್ಯಾಂಕ್‌ನ ಬಗ್ಗೆ ಬಿಜೆಪಿಗೆ ಆತಂಕ ಹುಟ್ಟಿಸುವಂತಹ ಬೆಳವಣಿಗೆಗಳು ಇವೆಲ್ಲವೂ ಲೆಕ್ಕಾಚಾರದ ಭಾಗ. ಹಾಗೆ ನೋಡಿದರೆ ಲಿಂಗಾಯತರ ಮತ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಹಿರಿಯ, ಆರ್‌ಎಸ್‌ಎಸ್‌ನ ದೀರ್ಘಕಾಲದ ನಂಟಿರುವ ನಾಯಕರಿದ್ದರು. ಯತ್ನಾಳ್, ನಿರಾಣಿ, ಬೆಲ್ಲದ್ ಅವರ ಹೆಸರುಗಳೆಲ್ಲಾ ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿರುವುದನ್ನು ಜನ ನೋಡಿದ್ದಾರೆ. ಆದರೂ ಅನುಭವ, ಆರ್‌ಎಸ್‌ಎಸ್ ಹಿನ್ನೆಲೆಗಳ ಲೆಕ್ಕ ಮೀರಿ ಬೊಮ್ಮಾಯಿ ಅವರು ಆಯ್ಕೆಯಾಗುವುದಕ್ಕೆ ಇನ್ನೂ ಬೇರೆ ಕಾರಣಗಳಿವೆ.

ಯಡಿಯೂರಪ್ಪ ಬಾಲ್ಯದಲ್ಲೇ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಬೆಳೆದರೂ, ಇಟ್ಟಿಗೆ ಹೊತ್ತರೂ, ರಥಯಾತ್ರೆಯಲ್ಲಿ ಮುಂದಿದ್ದರೂ, ಕೋಮುವಾದಿ ಎಂದು ಗುರುತಿಸಿಕೊಳ್ಳಲಿಲ್ಲ. ಕೇಸರಿ ಬದಲು ಹಸಿರು ಶಾಲು ಹೊದ್ದು ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿಯೇ ಉಳಿದಿದ್ದರು. ಹಿಂದುತ್ವದ ರಾಜಕಾರಣವನ್ನು ದೇಶದೆಲ್ಲೆಡೆ ಬಿತ್ತಿ ಬೆಳೆಯುವ ಉತ್ಸಾಹದಲ್ಲಿರುವ ಸಂಘಕ್ಕೆ ಕರ್ನಾಟಕದಲ್ಲೂ ತೀವ್ರ ಹಿಂದೂವಾದಿಯೊಬ್ಬರನ್ನು ಮುಖ್ಯಮಂತ್ರಿ ಮಾಡುವ ಆಸೆಯೂ ಇತ್ತು. ಇಂತಹ ಪ್ರಯೋಗ ಮಾಡುವುದಕ್ಕೆ ದಕ್ಷಿಣ ಭಾರತದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಹಾಗಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಸಂಘದ ಪ್ರಮುಖರಾದ ಬಿ ಎಲ್ ಸಂತೋಷ್ ಅವರು ಯುವ ಹಾಗೂ ಹಿಂದುತ್ವದ ರಾಜಕಾರಣ ಮಾಡುವವರನ್ನು ಸಿಎಂ ಸ್ಥಾನಕ್ಕೆ ತಂದುಕೂರಿಸುವ ಉಮೇದಿಯಲ್ಲಿದ್ದರು. ಆದರೆ ಯಡಿಯೂರಪ್ಪನವರ ವರ್ಚಸ್ಸು ಮತ್ತು ಜಾತಿ ರಾಜಕಾರಣವನ್ನು ಒಡೆದು ಮುಖ್ಯಮಂತ್ರಿಯೊಬ್ಬರನ್ನು ತಂದು ಕೂರಿಸುವ ಕೆಲಸ ಮಾಡುವುದು ಅಷ್ಟು ಸುಲಭವಿರಲಿಲ್ಲ. ಜಾತಿ ಓಟುಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಕರ್ನಾಟಕದಲ್ಲಿ ನೇರವಾಗಿ ಹಿಂದೂ ರಾಜಕಾರಣಕ್ಕೆ ಇಳಿಯುವ ಬಗ್ಗೆ ಇನ್ನೂ ಅಳುಕಿರುವ ಕಾರಣಕ್ಕೆ ಜನತಾ ಪರಿವಾರದಿಂದ ಬಂದ ಬಸವರಾಜ ಬೊಮ್ಮಾಯಿ ಇಂದು ಮುಖ್ಯಮಂತ್ರಿಯಾಗಿದ್ದಾರೆ!

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಜನತಾ ಪರಿವಾರದ ದೊಡ್ಡ ನಾಯಕ. ಬಹುಮತವಿದ್ದೂ ರಾಜ್ಯಪಾಲರು 1989ರಲ್ಲಿ ಎಸ್ ಆರ್ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದಾಗ ಕಾನೂನು ಹೋರಾಟ ನಡೆಸಿದವರು. ಅಸಾಮಾನ್ಯ ತೀರ್ಪಿಗೆ ಕಾರಣವಾದವರು. ಕ್ರಾಂತಿಕಾರಿಯೂ, ಎಡಪಂಥೀಯ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ಎಸ್ ಆರ್ ಬೊಮ್ಮಾಯಿ ಅಧಿಕಾರ ವಿಕೇಂದ್ರೀಕರಣ, ಸಾಮಾನ್ಯ ಪ್ರಜೆಗಳ ಕೈಬಲಪಡಿಸುವ ಸಿದ್ಧಾಂತವನ್ನು ಹುಟ್ಟುಹಾಕಿದ್ದರು.

ಇಂತಹ ತಂದೆಯ ನೆರಳಲ್ಲಿ ಬೆಳೆದ ಬಸವರಾಜ್ ಬೊಮ್ಮಾಯಿ ಎಂಜಿನಿಯರಿಂಗ್ ಓದಿ, ಉದ್ಯಮಶೀಲರಾಗುವ ತಯಾರಿಯಲ್ಲಿದ್ದರು. ಆದರೆ ಅವರ ಸೆಳೆತ ರಾಜಕೀಯವೇ ಆಗಿತ್ತು. ಯುವ ಜನತಾದಳದಿಂದ ರಾಜಕೀಯ ಜೀವನ ಆರಂಭ ಮಾಡಿದರು.

ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ! | Naanu gauri

1996ರಲ್ಲಿ ಸಿಎಂ ಜೆ.ಹೆಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆ ಆಗಿದ್ದರು. ಕೃಷಿ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿದ್ದ ಬಸವರಾಜ್ ಅವರು 2007ರಲ್ಲಿ 21 ದಿನಗಳ ಕಾಲ ರೈತರೊಂದಿಗೆ ಪಾದ ಯಾತ್ರೆ ನಡೆಸಿ ರೈತರ ಹೋರಾಟಕ್ಕೆ ಬಲ ತುಂಬಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ, 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಅದೇ ವರ್ಷ ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದರು. ನಂತರ ಸತತ ಮೂರು ಬಾರಿ ಯಶಸ್ವಿಯಾಗಿ ಆಯ್ಕೆಯಾದರು. ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದರು.
ಯಡಿಯೂರಪ್ಪನವರ ಪರಮಾಪ್ತರಾಗಿ ಗುರುತಿಸಿಕೊಂಡು, ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಚಿವ ಸ್ಥಾನವನ್ನು ಖಚಿತವಾಗಿ ಪಡೆದುಕೊಂಡ ಬಸವರಾಜ್ ಬೊಮ್ಮಾಯಿ ವರ್ಚಸ್ಸಿಗೆ ಧಕ್ಕೆ ಬರದಷ್ಟು ಎಚ್ಚರವಹಿಸಿಕೊಂಡಿದ್ದರು. ಈ ಪ್ರಜ್ಞೆ ಎಷ್ಟರಮಟ್ಟಿಗೆ ಅವರು ಕಾಪಿಟ್ಟುಕೊಂಡಿದ್ದರೆಂದರೆ ಸ್ವತಃ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ನಿಷ್ಠರೆನಿಸಿಕೊಂಡ ಅನೇಕರು ಹಿಂಬಾಲಿಸಿದರು. ಆದರೆ ಬಸವರಾಜ್ ಬಿಜೆಪಿಯಲ್ಲೇ ಉಳಿದರು. ಮುಂದೇನಾಯಿತು ಎಂಬುದನ್ನು ಹೇಳಬೇಕಿಲ್ಲ. ತಮ್ಮ ನಡೆನುಡಿಗಳ ಮೂಲಕ ಪಕ್ಷದಲ್ಲಿ ಒಂದು ತೂಕ ಉಳಿಸಿಕೊಂಡೇ ಬಂದ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪನವರ ಖಾಸಾ ಮನುಷ್ಯ ಎಂಬ ಇಮೇಜನ್ನೂ ಕಳೆದುಕೊಳ್ಳಲಿಲ್ಲ.
ಯಡಿಯೂರಪ್ಪನವರ ಮುಂಗೋಪವನ್ನು ಎಲ್ಲರೂ ಬಲ್ಲರು. ಕೋಪದಲ್ಲಿ ಹೊಡೆಯುತ್ತಾರೆ ಎಂಬದನ್ನೂ ಅವರ ಆಪ್ತವಲಯ ಮಾತಾಡಿಕೊಳ್ಳುತ್ತದೆ. ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬೇಕು. 2011ರಲ್ಲಿ ನಡೆದಿದ್ದು. ಯಡಿಯೂರಪ್ಪನವರು ಪಕ್ಷ ತೊರೆಯುವ ಕಾಲ. ಪಕ್ಷದಲ್ಲಿ ತಮಗೆ ಬೆಂಬಲ ಪಡೆದುಕೊಳ್ಳಲು ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದರು. ಆ ಹೊತ್ತಿಗೆ ಈಗ ನಡೆದಂತೆ ಅಧಿಕಾರದಿಂದ ಇಳಿಯಲು ಯಡಿಯೂರಪ್ಪನವರಿಗೆ ಸೂಚನೆ ಬಂದಾಗಿತ್ತು.

ನಾಯಕರ ಸಮರ್ಥನೆ ಪಡೆದು ಸ್ಥಾನ ಉಳಿಸಿಕೊಳ್ಳುವ ಕರಸತ್ತು ನಡೆದಿತ್ತು. ಆದರೆ ಯಡಿಯೂರಪ್ಪನವರಿಗೆ ನಾಯ್ಡು ಬೆಂಬಲಿಸಲಿಲ್ಲ. ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಅರುಣ್ ಜೇಟ್ಲಿ, ರಾಜ್‌ನಾಥ್ ಸಿಂಗ್ ಕೂಡ ಇದ್ದರು. ಕೋಪಿಸಿಕೊಂಡು ರೇಸ್ ರಸ್ತೆಯ ನಿವಾಸಕ್ಕೆ ಬಂದ ಯಡಿಯೂರಪ್ಪನವರು ಮಲಗಿದ್ದರಂತೆ. ಆಗ ಭುಜ ತಟ್ಟಿ ಎಬ್ಬಿಸಲು ಹೋದ ಸಚಿವರೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದರಂತೆ. ಇದಿಷ್ಟು ಇಂಡಿಯಾ ಟುಡೆಯ ವರದಿಯೊಂದು ವಿವರಿಸಿತ್ತು (2, ಆಗಸ್ಟ್ 2011). ಹಾಗೆ ಕಪಾಳಕ್ಕೆ ಹೊಡೆಸಿಕೊಂಡ ಸಚಿವರು ಬಸವರಾಜ್ ಬೊಮ್ಮಾಯಿ!

ಯಡಿಯೂರಪ್ಪನವರೊಂದಿಗೆ ವಿಶಿಷ್ಟ ಕೆಮಿಸ್ಟ್ರಿಯನ್ನು ಕಾಪಾಡಿಕೊಂಡ ಬಂದ ಬೊಮ್ಮಾಯಿ, ಸರ್ಕಾರದಲ್ಲಿ ಸದಾ ಸೂಕ್ತಸ್ಥಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಜಾತಿ ಪ್ರೇಮದ ಜೊತೆಗೆ ವಿದ್ಯಾಭ್ಯಾಸ, ಉದ್ಯಮಶೀಲತೆಯ ಹಿನ್ನೆಲೆಯಿರುವ, ಶುದ್ಧ ವರ್ಚಿಸ್ಸಿನ ಬೊಮ್ಮಾಯಿ ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿಯಂತೆ ಕಾಣುವುದಿಲ್ಲ. ಅವರ ಈ ಗುಣವನ್ನೇ ಯಡಿಯೂರಪ್ಪನವರು ತಮ್ಮ ರಾಜಕೀಯ ನಡೆಯೊಂದಿಗೆ ಸಮೀಕರಿಸಿ, ನಾಯಕತ್ವದ ಬದಲಾವಣೆಗೆ ಅನಿರೀಕ್ಷಿತ ತಿರುವು ನೀಡಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಅಜೆಂಡಾ ಜಾರಿಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ, ಪಕ್ಷದ ನಿಯಂತ್ರಣ ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಯಡಿಯೂರಪ್ಪನವರು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.

ಮೂರು ವರ್ಷಗಳ ಹಿಂದೆ ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಅವರ ’ದಿ ಲಾಸ್ಟ್ ಐಕಾನ್ ಆಫ್ ದಿ ಐಡಿಯಾಲಜಿಕಲ್ ಪಾಲಿಟಿಕ್ಸ್’ ಕೃತಿ ಬಿಡುಗಡೆ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಸೂಕ್ಷ್ಮ ಮಾತುಗಳನ್ನಾಡಿದ್ದರು, “ರಾಜಕಾರಣ ಎಂದರೆ ಆಡಳಿತ ಪಕ್ಷ, ವಿರೋಧ ಪಕ್ಷವೆಂಬಂತಾಗಿದೆ. ರಾಜಕಾರಣ ಜನರಿಗಾಗಿ ಎಂಬುದು ಹಿನ್ನೆಲೆಗೆ ಸರಿದಿದ್ದು ಅದು ಜನರಿಗಾಗಿ ಎಂಬ ಬದಲಾವಣೆ ಆಗಬೇಕಿದೆ. ಇದರಿಂದ ಜನ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾಗಬೇಕಾಗಿದೆ. ಜನರ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾದಾಗ ಮಾತ್ರ ಪ್ರಜಾಪ್ರಭುತ್ವದ ಘನತೆ ಉಳಿಯಲು ಸಾಧ್ಯ. ತಂದೆ ಎಸ್ ಆರ್ ಬೊಮ್ಮಾಯಿ ಪ್ರತಿಪಾದಿಸಿದ ವಿಚಾರಗಳನ್ನೇ ಈ ಮಾತುಗಳು ಪ್ರತಿಫಲಿಸುತ್ತವೆ. ಸಾಮಾನ್ಯನ ಹಕ್ಕನ್ನು ಕಸಿಯುತ್ತಿರುವ, ಅಧಿಕಾರ ಕೇಂದ್ರೀಕರಿಸುವ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕುತ್ತಿರುವ ಪಕ್ಷವೊಂದರಲ್ಲಿರುವ ಬಸವರಾಜ್ ಬೊಮ್ಮಾಯಿ ಈ ಮಾತುಗಳನ್ನಾಡಿರುವುದು ಅಚ್ಚರಿಯೇ.

ಆರಂಭದಲ್ಲಿ ಹೇಳಿದಂತೆ ಆಷಾಢದ ಬಿರುಗಾಳಿಯಲ್ಲಿ ಧುತ್ತನೇ ಆಕಾಶಕ್ಕೆ ಹಾರಿದ್ದರೂ, ಸೂತ್ರ ಹಳೆಯ ಮರದ ಕೊಂಬೆಗೆ ಸುತ್ತಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ರಹಸ್ಯ!

  • ಕುಮಾರ್ ಎಸ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...