Homeನಿಜವೋ ಸುಳ್ಳೋಹೊಸ ವರ್ಷದಲ್ಲಿ ನಾವು ನಂಬಿಬಿಟ್ಟಿದ್ದ ಟಾಪ್‌ ಸುಳ್ಳು ಸುದ್ದಿಗಳು ಇಲ್ಲಿವೆ...

ಹೊಸ ವರ್ಷದಲ್ಲಿ ನಾವು ನಂಬಿಬಿಟ್ಟಿದ್ದ ಟಾಪ್‌ ಸುಳ್ಳು ಸುದ್ದಿಗಳು ಇಲ್ಲಿವೆ…

- Advertisement -
- Advertisement -
  1. ಗ್ರಾಮ ಪಂಚಾಯಿತಿ ಚುನಾವಣೆ ಏಪ್ರಿಲ್ 5 ಮತ್ತು 9ಕ್ಕೆ: ಇದು ಸುಳ್ಳು ಸುದ್ದಿ

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು 10ನೇ ತರಗತಿ ಪಾಸಾಗಿರಬೇಕು, ಪಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಕಡ್ಡಾಯ ಎಂಬ ಸುದ್ದಿ ಹರಿದಾಡಿತ್ತು. ಏಪ್ರಿಲ್ 5 ಮತ್ತು 9ಕ್ಕೆ ಚುನಾವಣೆ ಸಹ ನಡೆಯಲಿದೆ ಎಂಬ ಆದೇಶವೂ ಬಂದಿತ್ತು.]

ಆದರೆ ಇದು ಸುಳ್ಳು ಸುದ್ದಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇನ್ನು ಅಧಿಸೂಚನೆ ಹೊರಡಿಸಿಲ್ಲ ಮತ್ತು ಯಾವುದೇ ನಿಯಮಗಳಿಲ್ಲ ಎಂದು ಹೊಸ ಪ್ರಕಟಣೆ ಹೊರಡಿಸಿದೆ.

2. ಚಪಾಕ್ ಚಿತ್ರದಲ್ಲಿ ಮುಸ್ಲಿಂ ಆರೋಪಿಯ ಹೆಸರನ್ನು ಹಿಂದೂ ಹೆಸರಾಗಿ ಬದಲಾಯಿಸಲಾಗಿದೆಯೇ?

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಆಸಿಡ್ ದಾಳಿಗೊಳಗಾದ ಹೆಣ್ಣುಮಗಳ ಬದುಕಿನ ಘಟನೆಯಾಧಾರಿತ ಚಪಾಕ್ ಎಂಬ ಚಿತ್ರದಲ್ಲಿ ಹಣ ಹೂಡಿದ್ದಲ್ಲದೇ ತಾನೂ ನಟಿಸಿದ್ದಾಳೆ. ಈ ಚಿತ್ರವೂ ಜನವರಿ 10ರಂದು ಬಿಡುಗಡೆಯಾಗಿದೆ.

ಇದಕ್ಕೂ ಮೊದಲು ಜನವರಿ 05ರಂದು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಎಬಿವಿಪಿ, ಬಿಜೆಪಿ ಗೂಂಡಾಗಳು ನುಗ್ಗಿ ಹಲ್ಲೆ ಮಾಡಿದ್ದನ್ನು ಖಂಡಿಸಿ ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು.

ಇಷ್ಟಕ್ಕೆ ದೀಪಿಕಾ ವಿರುದ್ಧ ದ್ವೇಷ ಸಾಧಿಸಿದ ಕೆಲವರು ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ಹರಡಲು ಮುಂದಾಗಿದ್ದರು. ಅದರಲ್ಲಿ ಮುಖ್ಯವಾದುದು ಅವರ ಚಪಾಕ್ ಚಿತ್ರದಲ್ಲಿ ಸಂತ್ರಸ್ತೆ ಮೇಲೆ ಆಸಿಡ್ ಎರಚಿದ ಆರೋಪಿ ನದೀಮ್ ಖಾನ್ ಎಂಬ ಹೆಸರನ್ನು ರಾಜೇಶ್ ಶರ್ಮಾ ಎಂದು ಬದಲಿಸಲಾಗಿದೆ ಎಂಬ ಆರೋಪ..

ಒಪಿಇಂಡಿಯಾ, ಸ್ವರಾಜ್ಯ ಎಂಬ ಬಿಜೆಪಿ ಬೆಂಬಲಿತ ವೆಬ್‌ಗಳು ಇದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದವು. ಸುಬ್ರಮಣ್ಯಸ್ವಾಮಿ ಅಂತೂ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದರು. ಹಲವು ಬಿಜೆಪಿ ಸಂಸದರಿಂದ ಶುರುವಾಗಿ ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇದನ್ನು ಷೇರ್ ಮಾಡಿದ್ದರು.

ಆದರೆ ಸಿನಿಮಾ ನೋಡಿದ ಬಹುತೇಕರು ಸ್ಪಷ್ಟಪಡಿಸಿರುವುದೇನೆಂದರೆ ನದೀಮ್ ಖಾನ್ ಬದಲಾಗಿ ಬಶೀರ್ ಎಂದು ಮುಸ್ಲಿಂ ಹೆಸರನ್ನೇ ಇಡಲಾಗಿದೆ. ಅಂದರೆ ಬಿಜೆಪಿಗರು, ಸ್ವರಾಜ್ ಹೇಳಿದ್ದೆಲ್ಲ ಹಸಿ ಸುಳ್ಳು ಎಂದು ಜಗಜ್ಜಾಹೀರಾಗಿದೆ.

3. ಇಂದಿರಾಗಾಂಧಿ 1975ರಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಸಿದ್ದರೆ?

“1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿ, ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿದ್ದ ಸಿಪಿಐ ಮುಖಂಡ ಸೀತಾರಾಮ್ ಯೆಚೂರಿಗೆ ಹೊಡೆದು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕೆ ಕ್ಷಮೆಯಾಚಿಸುವ ಪತ್ರವನ್ನು ಸೀತಾರಾಮ್ ಯೆಚೂರಿ ಓದಿದರು. ಇದನ್ನು ಕಮ್ಯುನಿಸ್ಟರೊಂದಿಗೆ ವ್ಯವಹರಿಸುವ ಉಕ್ಕಿನಹಸ್ತ ಎಂದು ಕರೆಯಲಾಗುತ್ತದೆ. ಅಮಿತ್ ಶಾ ಅವರ ಮುಂದೆ ಸಂತನಾಗಿ ಕಾಣಿಸುತ್ತಾನೆ.”

ಈ ರೀತಿಯ ಸಂದೇಶವೊಂದನ್ನು ಮೋಹನ್ ದಾಸ್ ಪೈ ‘ಇದು ನಿಜವೇ’ ಎಂಬ ತಲೆಬರಹದೊಂದಿಗೆ ಹಂಚಿಕೊಂಡಿದ್ದಾರೆ.

ಈ ಕುರಿತು ಫ್ಯಾಕ್ಟ್ ಚೆಕ್ ಮಾಡಲು ಬೂಮ್‌ಲೈವ್ ಸೀತಾರಾಂ ಯೆಚೂರಿಯವರನ್ನು ಸಂಪರ್ಕಿಸಿತು. ಆಗ ಅವರು “ಇದು 1975ರ ಚಿತ್ರವಲ್ಲ ಬದಲಿಗೆ 1977ರ ಸೆಪ್ಟಂಬರ್‌ನಲ್ಲಿ ತೆಗೆದ ಚಿತ್ರ. ಇಂದಿರಾಗಾಂಧಿಯವರು ಜೆಎನ್‌ಯು ವಿವಿಯ ಉಪಕುಲಪತಿಗಳಾಗಿದ್ದರು. ಅದನ್ನು ವಿರೋಧಿಸಿ ನಾವು ದೊಡ್ಡ ಹೋರಾಟ ನಡೆಸಿದ್ದವು. ಆಗ ಅವರು ಜೆಎನ್‌ಯುಗೆ ಬಂದಾಗ ನಾನು ನಮ್ಮ ಹಕ್ಕೊತ್ತಾಯ ಪತ್ರವನ್ನು ಓದಿ ರಾಜೀನಾಮೆಗೆ ಒತ್ತಾಯಿಸಿದೆವು. ಅಂತೆಯೇ ಅವರು ರಾಜೀನಾಮೆ ನೀಡಿದ್ದರು” ಎಂದಿದ್ದಾರೆ.

ನಂತರ ಬೂಮ್ “ಅವರು ನಿಮ್ಮ ಮೇಲೆ ಹಲ್ಲೆ ನಡೆಸಿದ್ದರೆ ಎಂಬ ಪ್ರಶ್ನೆಗೆ, ಇಲ್ಲ ಅವರು ಹಲ್ಲೆ ಮಾಡಿಸಿರಲಿಲ್ಲ, ಏಕೆಂದರೆ ಅವರು ನಾಗರಿಕರಾಗಿದ್ದರು ಎಂಬ ಉತ್ತರ ನೀಡಿದ್ದಾರೆ. ಅವರು ಅಲ್ಲಿಂದ ನಿಧಾನವಾಗಿ ನಡೆದುಕೊಂಡು ಹೋದರು ಅಷ್ಟೇ ಎಂದು ಅವರು ತಿಳಿಸಿದ್ದಾರೆ.

4 ಜೆಎನ್‌ಯು ಮೇಲೆ ದಾಳಿ ಮಾಡಿದ್ದು ನಾನೇ ಎಂದು ಒಪ್ಪಿಕೊಂಡ ಅಕ್ಷತ್ ಅವಾಸ್ಥಿ ನಮ್ಮ ಸದಸ್ಯನಲ್ಲ: ಎಬಿವಿಪಿ

ಜನವರಿ 10ರಂದು ಇಂಡಿಯಾ ಟುಡೆ ಟಿವಿಯು ಸ್ಟಿಂಗ್ ಆಪರೇಷನ್ ನಡೆಸಿತು. ಆಗ ಎಬಿವಿಪಿ ಸದಸ್ಯ ಅಕ್ಷತ್ ಅವಾಸ್ಥಿ ಎಂಬುವವನು ನಾನು 20 ಜನರನ್ನು ಒಟ್ಟುಗೂಡಿಸಿ ಹಲ್ಲೆ ನಡೆಸಿದೆ, ಗಡ್ಡಬಿಟ್ಟಿದ್ದ ಕಾಶ್ಮೀರದವನ ಹಾಗೆ ಕಾಣುತ್ತಿದ್ದವನ ಮೇಲೆ ಹೊಡೆದು ಎಂದು ಒಪ್ಪಿಕೊಂಡಿದ್ದ.

ನಂತರ ಎಬಿವಿಪಿ ಯಥಾಪ್ರಕಾರ ಆತ ನಮ್ಮ ಸದಸ್ಯನಲ್ಲ ಎಂದು ಜಾರಿಕೊಂಡಿತ್ತು.

ಆಲ್ಟ್‌ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿತು. ಆಗ ಆತ ಹಲವಾರು ಬಿಜೆಪಿ/ಎಬಿವಿಪಿ ಕಾರ್ಯಕ್ರಮ ಪ್ರತಿಭಟನೆಗಳನ್ನು ಭಾಗವಹಿಸಿರುವ ಫೋಟೊ, ವಿಡಿಯೋಗಳನ್ನು ಹುಡುಕಿ ಪ್ರಕಟಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...