Homeಬಹುಜನ ಭಾರತಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

- Advertisement -
- Advertisement -

ಆಡುವ ನುಡಿಗಳಿಗೆ ಸಾಧಕ ಬಾಧಕಗಳಿರುತ್ತವೆ. ಉಳಿದೆಲ್ಲರಿಗಿಂತ ಹೆಚ್ಚಾಗಿ ನಿತ್ಯ ಜನಸಮೂಹಗಳೊಂದಿಗೆ ಪ್ರತ್ಯಕ್ಷ-ಪರೋಕ್ಷ ಸಂವಾದದಲ್ಲಿ ತೊಡಗುವ ಜನಪ್ರತಿನಿಧಿಗಳಿಗೆ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ಜನರಿಗೆ ಮತ್ತು ಜನರಿಂದ ರೂಪಿತವಾಗಿರುವ ಸಂವಿಧಾನದ ಆಶಯಗಳಿಗೆ ಅವರು ಬದ್ಧರಾಗಿರಬೇಕು. ಹಾಗೆಂದು ಶಾಸನಸಭೆ ಮತ್ತು ಸಂಸತ್ತಿನಲ್ಲಿ ನಿಂತು ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರಮಾಣವಚನ ಸ್ವೀಕರಿಸಿದ ನಂತರವೇ ಅವರಿಗೆ ಶಾಸನಸಭೆಗಳು- ಸಂಸತ್ತಿನಲ್ಲಿ ಆಸನಗಳು ದೊರೆಯುತ್ತವೆ. ಮಾತಾಡುವ ಹಕ್ಕು ಲಭಿಸುತ್ತದೆ. ಸಂಬಳ-ಸಾರಿಗೆ-ಭತ್ಯೆಗಳು ಮತ್ತು ಸಂಸದೀಯ ಅಧಿಕಾರಗಳು ದತ್ತವಾಗುತ್ತವೆ. ಮಂತ್ರಿಗಳು ಈ ಪ್ರಮಾಣವಚನವನ್ನು ಎರಡು ಸಲ ಸ್ವೀಕರಿಸುತ್ತಾರೆ. ಸ್ಪೀಕರ್-ಸಭಾಪತಿ ರಾಜ್ಯಪಾಲರು- ರಾಷ್ಟ್ರಪತಿಯವರು ಬೋಧಿಸುವ ಈ ಶಪಥವನ್ನು ಬಹಿರಂಗವಾಗಿ ಬಾಯಲ್ಲಿ ನುಡಿದು ಆಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

‘… ಎಂಬುವವನಾದ ನಾನು ದೇವರ- ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ. ವಿಧಿ ದ್ವಾರಾ ಸ್ಥಾಪಿಸಲಾದ ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇನೆ. ನಾನು ಭಾರತದ ಪ್ರಭುತೆ ಮತ್ತು ಅಖಂಡತೆಯನ್ನು ಕಾಪಾಡುತ್ತೇನೆ. ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಶುದ್ಧ ಅಂತಃಕರಣದಿಂದ ನಿರ್ವಹಿಸುತ್ತೇನೆ. ಭಯ ಅಥವಾ ಪಕ್ಷಪಾತ, ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ, ಎಲ್ಲ ರೀತಿಯ ಜನರಿಗೆ ಸಂವಿಧಾನ ಮತ್ತು ವಿಧಿಯ ಅನುಸಾರ ನ್ಯಾಯ ಸಲ್ಲಿಸುತ್ತೇನೆ’ ಎಂಬುದಾಗಿ ಶಾಸಕರು- ಸಂಸದರು ಸ್ವೀಕರಿಸುವ ಪ್ರತಿಜ್ಞೆಯ ಜೊತೆಗೆ ಪ್ರಧಾನಮಂತ್ರಿ-ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಗೌಪ್ಯತೆಯ ಶಪಥವನ್ನೂ ಸ್ವೀಕರಿಸುತ್ತಾರೆ.

ಭಯ ಅಥವಾ ಪಕ್ಷಪಾತ ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ ಶುದ್ಧ ಅಂತಃಕರಣದಿಂದ ತಮ್ಮ ಕರ್ತವ್ಯಗಳನ್ನು ಆಳುವ ಪಕ್ಷದ ಜನಪ್ರತಿನಿಧಿಗಳು ಮಂತ್ರಿಗಳು ಪ್ರಧಾನಮಂತ್ರಿ ನಿರ್ವಹಿಸುತ್ತಿದ್ದಾರೆಯೇ, ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಒಮ್ಮೆ ಕೇಳಿಕೊಳ್ಳಬೇಕಿದೆ.

ಎಲ್ಲ ನೈತಿಕ ಎಲ್ಲೆಗಳನ್ನು ಎದೆ ಸೆಟೆಸಿ ಉಲ್ಲಂಘಿಸುವ ಭಂಡತನದಲ್ಲಿ ಪೈಪೋಟಿ ನಡೆಯತೊಡಗಿದೆ. ದ್ವೇಷ, ದ್ರುವೀಕರಣ ಹಾಗೂ ಹಿಂಸೆಗಳನ್ನು ಪ್ರಚೋದಿಸುವ ಪಂದ್ಯಗಳಲ್ಲಿ ತಾವು ಭಾಗವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ಬಿಜೆಪಿಯಲ್ಲಿ ಮತ್ತು ಈ ಪಕ್ಷದ ಕಟ್ಟರ್‌ವಾದಿ ಬೆಂಬಲಿಗರಲ್ಲಿ ಉತ್ತೇಜಿಸಲಾಗುತ್ತಿದೆ. ಈ ನಾಚಿಕೆಗೇಡಿನಲ್ಲಿ ತೊಡಗಿದವರಿಗೆ ಇಂದಲ್ಲದಿದ್ದರೆ ನಾಳೆ ಪಕ್ಷ ಬಹುಮಾನಗಳನ್ನು ನೀಡಿ ಬೆನ್ನು ತಟ್ಟುತ್ತಿದೆ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿರುವ ಭಯೋತ್ಪಾದಕರಿಗೂ ಮುಂದೊಂದು ದಿನ ಬಿಜೆಪಿ ಚುನಾವಣಾ ಟಿಕೆಟ್ ಗಳು ದೊರೆತರೆ ಚಕಿತರಾಗಬೇಕಿಲ್ಲ.

ಸಿ.ಎ.ಎ – ಎನ್.ಆರ್.ಸಿ. ವಿರುದ್ಧ ಶಾಂತಿಯುತ ಪ್ರತಿಭಟನೆ ಜರುಗುತ್ತಿರುವ ಶಾಹೀನ್‌ಬಾಗ್ ಅನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು, ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ ಎಂಬ ಘೋಷಣೆಗಳನ್ನು ಜನಸಭೆಗಳಲ್ಲಿ ಕೂಗಿಸುವುದು, ಎಷ್ಟು ಸಿಟ್ಟಿನಿಂದ ನೀವು ಚುನಾವಣಾ ಮತಯಂತ್ರದ ಗುಂಡಿ ಒತ್ತಬೇಕೆಂದರೆ ಅದರ ಆಘಾತ ಶಾಹೀನ್‌ಬಾಗ್‌ಗೆ ತಗುಲಬೇಕು ಎಂದು ಪ್ರಚೋದಿಸುವುದು, ಕಾಶ್ಮೀರದಲ್ಲಿ ಪಂಡಿತರನ್ನು ಹಿಂಸಿಸಿ ಬೆದರಿಸಿ ಓಡಿಸಿದಂತೆಯೇ ದೆಹಲಿಯಲ್ಲಿ ಶಾಹೀನ್‌ಬಾಗ್‌ನ ಪ್ರತಿಭಟನಕಾರರು ನಾಳೆ ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲ್ಲಬಹುದು ಎಂದು ಒಂದು ಜನಾಂಗದ ವಿರುದ್ಧ ಹೇವರಿಕೆ ಭಯ ದ್ವೇಷ ಹುಟ್ಟಿಸುವುದು, ಶಾಹೀನ್‌ಬಾಗ್ ಪ್ರತಿಭಟನೆಯ ಹಿಂದೆ ದೇಶವನ್ನು ಒಡೆಯುವ ಹುನ್ನಾರವಿದೆ ಎಂಬುವ ವಿಷ ಕಕ್ಕುವ ಮಾತುಗಳು ಬಿಜೆಪಿಯವು.

ಶಾಹೀನ್‌ಬಾಗ್ ನಲ್ಲಿ ಧರಣಿ ಕುಳಿತಿರುವ ಮಹಿಳೆಯರು ಮತ್ತು ಮಕ್ಕಳು ಸಾಯಬಾರದೇಕೆ, ಉತ್ತರಪ್ರದೇಶದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಿಎಎ ಪ್ರತಿಭಟನಾಕಾರರನ್ನು ನಾಯಿಗಳಂತೆ ಗುಂಡು ಹೊಡೆದು ಸಾಯಿಸಲಾಗಿದೆ ಎನ್ನುತ್ತಾರೆ. ತಮ್ಮ ಕಾರ್ಯಕರ್ತರು ಸಿಎಎ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳನ್ನು ಬೆಂಬತ್ತಿ ಛೇಡಿಸುವುದನ್ನು ಬೆಂಬಲಿಸುತ್ತಾರೆ. ಅವಳ ಅದೃಷ್ಟ ಚೆನ್ನಾಗಿತ್ತು, ನಮ್ಮ ಕಾರ್ಯಕರ್ತರು ಆಕೆಯನ್ನು ಅಷ್ಟಕ್ಕೇ ಬಿಟ್ಟುಬಿಟ್ಟರು ಎನ್ನುತ್ತಾರೆ ದ್ವೇಷದ ಕಿಚ್ಚು ಹಚ್ಚುವ ನುಡಿಗಳು. ಕಪಿಲ್ ಮಿಶ್ರಾ ಎಂಬ ಪುಡಿ ಪುಢಾರಿಯಿಂದ ಹಿಡಿದು, ಸಂಸದ ಪ್ರವೇಶ್‌ವರ್ಮಾ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಕೇಂದ್ರ ಸರ್ಕಾರದ ಕಿರಿಯ ಮಂತ್ರಿ ಅನುರಾಗ್ ಠಾಕೂರ್, ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕೋಮುವಾದದ ಕಾಳ್ಗಿಚ್ಚನ್ನು ಹೊತ್ತಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಈ ದ್ವೇಷದ ಕಿಚ್ಚನ್ನು ಜನಮಾನಸದ ಎದೆಯಲ್ಲಿ ಹೊತ್ತಿಸಿ ದಾರಿ ತಪ್ಪಿಸುವ ಅಪಾಯಕಾರಿ ಆಟವಿದು. ಜನರನ್ನು ಒಡೆದು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ಕೊಲ್ಲಿಸುವ ಆಟ. ಈ ಆಟದಲ್ಲಿ ಕಿಚ್ಚು ಹೊತ್ತಿಸುವವರು ಗೆಲ್ಲಬಹುದು, ಆದರೆ ದೇಶ ಸೋಲುತ್ತದೆ.

ಗೋಲಿ ಮಾರೋ ಸಾಲೋಂ ಕೋ ಎಂಬ ತಮ್ಮ ನಾಯಕರು ಕುಡಿಸಿರುವ ದ್ವೇಷದ ನಶೆಯನ್ನು ಏರಿಸಿಕೊಂಡಿರುವ ಯುವಕರು ಈಗಾಗಲೆ ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸತೊಡಗಿದ್ದಾರೆ.

ಈ ಕಿಚ್ಚು ಇಷ್ಟಕ್ಕೇ ನಿಲ್ಲುತ್ತದೆಯೇ, ಪಕ್ಕದ ಮನೆ ಸುಟ್ಟರೆ, ಆ ಬೆಂಕಿ ಇಂದಲ್ಲ ನಾಳೆ ನನ್ನ ಮನೆಯನ್ನೂ ಸುಟ್ಟೀತಲ್ಲವೇ ಎಂಬ ಪ್ರಜ್ಞೆ ಮೂಡಬೇಕಿದೆ. ಚುನಾವಣೆಗಳಲ್ಲಿ ಗೆಲ್ಲುವ ಅಲ್ಪಕಾಲೀನ ತಂತ್ರ ಮಾತ್ರವಲ್ಲದೆ ಮತ್ತು ಕೇಸರಿ ಸೈದ್ಧಾಂತಿಕ ನೆಲೆಯ ಶಾಶ್ವತ ಸ್ಥಾಪನೆಗಾಗಿ ಮುಸ್ಲಿಮರು, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರು, ಉದಾರವಾದಿಗಳು, ಪ್ರಜ್ಞಾವಂತರು, ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳನ್ನು ವಿರೋಧಿಸುವ ಯಾರೇ ಇರಲಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಅವರಿಗೆ ಗುಂಡು ಹೊಡೆಯಬೇಕೆಂದು ಕರೆ ನೀಡಲಾಗುತ್ತಿದೆ. ಈ ಕರೆಯನ್ನು ದೇಶದ ಪ್ರಧಾನಮಂತ್ರಿ- ಗೃಹಮಂತ್ರಿ ಪ್ರತ್ಯಕ್ಷ ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ. ಇನ್ನು ಬಂಧನ ಕೇಂದ್ರಗಳು ಆರಂಭ ಆಗತೊಡಗಿವೆ.

ವಿದ್ಯಾರ್ಥಿ ಪರಿಷತ್ತಿನ ಸಂಬಂಧವಿದ್ದ ಬಲಪಂಥೀಯ ಮುಸುಕುಧಾರಿಗಳು ಜೆ.ಎನ್.ಯು ಹಾಸ್ಟೆಲುಗಳ ನುಗ್ಗಿ ವಿದ್ಯಾರ್ಥಿಗಳನ್ನು ತಲೆ ಒಡೆದು ರಕ್ತ ಹರಿಸಿ ತಿಂಗಳೇ ಉರುಳಿತು. ಒಬ್ಬನೇ ಒಬ್ಬನನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿದ ಗೋಪಾಲ ಶರ್ಮನನ್ನು ಅಪ್ರಾಪ್ತ ವಯಸ್ಕನೆಂದು ಸಾರಿ ರಕ್ಷಿಸಲಾಗಿದೆ. ಅತ್ತ ಬೀದರಿನಲ್ಲಿ ಮನೆಗೆಲಸ ಮಾಡಿ ಹೊಟ್ಟೆ ಹೊರೆವ ಮುಸ್ಲಿಂ ತಾಯಿಯನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ. ಹೊರಗಿರುವ ಆಕೆಯ ಒಂಬತ್ತು ವರ್ಷದ ಮಗಳು ಈಗ ಏಕಾಂಗಿ. ಕಾಗದ ತೋರಿಸಬೇಕೆಂದು ತೋರಿಸುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಮಾತು ಇರುವ ನಾಟಕ ಆಡಿಸಿದರೆಂದು ಅಲ್ಪಸಂಖ್ಯಾತ ಶಾಲೆಯೊಂದರ ಮಕ್ಕಳನ್ನು ಪೊಲೀಸರು ಪ್ರಶ್ನಿಸತೊಡಗಿದ್ದಾರೆ. ಗೋಲಿ ಮಾರೋ ಸಾಲೋಂ ಕೋ ಎಂಬುದಾಗಿ ಪ್ರಚೋದಿಸುವವರ ಮೇಲೆ ಕನಿಷ್ಠ ಎಫ್.ಐ.ಆರ್ ಕೂಡ ಇಲ್ಲ.

ನಾಜಿ ಜರ್ಮನಿಯ ಇತಿಹಾಸ ಭಾರತದಲ್ಲಿ ಸುರುಳಿ ಬಿಚ್ಚತೊಡಗಿದೆ. ಅನುಮಾನವೇ ಇಲ್ಲ, ಇದು ದೀರ್ಘ ಇರುಳು. ಆದರೆ ನೆನಪಿಡೋಣ ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಅದೆಷ್ಟೇ ಪ್ರಚಂಡನಾದರೂ ಜನತೆಗಿಂತ ದೊಡ್ಡವನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...