Homeಗೌರಿ ಕಣ್ಣೋಟನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! - ಗೌರಿ ಕಣ್ಣೋಟ

ನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! – ಗೌರಿ ಕಣ್ಣೋಟ

- Advertisement -
- Advertisement -

ನನಗೆ ಅಚ್ಚರಿ ಮೂಡಿಸಿದ್ದು ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ದಮನ. ಸಭ್ಯನಂತೆ ಸ್ವಚ್ಛಹಸ್ತನಂತೆ ಕಾಣುವ ನಿತೀಶ್ ಕುಮಾರ್ ಹೇಗೆ ತಮ್ಮ ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಕುರಿತು ‘ಓಪನ್’ ಪತ್ರಿಕೆಯಲ್ಲಿ ಒಂದು ಸುದೀರ್ಘವಾದ ವರದಿ ಪ್ರಕಟಗೊಂಡಿದೆ. ಅದನ್ನು ಓದಿದನಂತರ ನಿತೀಶ್ ಕುಮಾರ್ ಅವರ ಬಗ್ಗೆ ಅಚ್ಚರಿ ಆಯಿತು.

‘ಓಪನ್’ ಪತ್ರಿಕೆಯಲ್ಲಿ ಧೀರೇಂದ್ರ ಕೆ. ಝಾ ಎಂಬುವವರು ಬರೆದಿರುವ ವರದಿಯ ಸಾರಾಂಶ ಹೀಗಿದೆ:

ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಒಂದು ಮನೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಆ ದಾಳಿಯಲ್ಲಿ ಅವರಿಗೆ ಐದು ಕೋಟಿ ರೂಪಾಯಿಗಳು ಸಿಕ್ಕವಲ್ಲದೆ, ಪಾಟ್ನಾದಲ್ಲಿರುವ ಸುಮಾರು ಐವತ್ತು ಮನೆಗಳ ಖರೀದಿ ಪತ್ರಗಳೂ ಸಿಕ್ಕವು. ಐದು ಕೋಟಿಯಷ್ಟು ದೊಡ್ಡಮೊತ್ತ ಮತ್ತು ಐವತ್ತು ಮನೆಗಳ ದಾಖಲೆಗಳು ಸಿಕ್ಕಿದ್ದರೂ ಬಿಹಾರದ ಯಾವ ಪತ್ರಿಕೆಯೂ ಈ ದಾಳಿಯ ಬಗ್ಗೆ ವರದಿ ಮಾಡಲಿಲ್ಲ. ಅದಕ್ಕೆ ಕಾರಣ ಆ ಮನೆಯಲ್ಲಿ ವಾಸಿಸುತ್ತಿರುವಾತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಪ್ತನಾಗಿರುವ ಮತ್ತು ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾದಳದ ಖಜಾಂಚಿ ಆಗಿರುವ ವಿನಯ್‌ಕುಮಾರ್ ಸಿನ್ಹಾ! ಅಂದಹಾಗೆ ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಆಗುವತನಕ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅದನ್ನು ತಮ್ಮ ಆಪ್ತನಿಗೆ ಬಿಟ್ಟುಕೊಟ್ಟಿದ್ದಾರೆ.

ಭ್ರಷ್ಟಾಚಾರ ಮತ್ತು ರಾಜಕೀಯ ವಾಸನೆ ಇರುವ ಈ ದಾಳಿಯ ಬಗ್ಗೆ ಯಾಕೆ ಬಿಹಾರದ ಪತ್ರಿಕೆಗಳು ವರದಿ ಮಾಡಲಿಲ್ಲ ಎಂದು ನೋಡಿದಾಗ ಇದು ಒಂದು ವಿಶೇಷ ಸಂಗತಿ ಅಲ್ಲವೆಂದೂ, ಇಂತಹ ‘ಮರೆಮಾಚುವ’ ಕೆಲಸದಲ್ಲಿ ಆ ರಾಜ್ಯದ ಪತ್ರಿಕೆಗಳೂ ದಿನನಿತ್ಯ ತೊಡಗಿವೆ ಎಂದೂ ಗೊತ್ತಾಯಿತು.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆದಾಗಿನಿಂದಲೂ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಪತ್ರಿಕೆಗಳ ಆದಾಯ ಮೂಲಗಳನ್ನು ಕಡಿದು ಹಾಕುವಮೂಲಕ ಅಂತಹ ‘ದಾರಿ ತಪ್ಪಿದ’ ಮಾಧ್ಯಮಗಳನ್ನು ‘ಸರಿದಾರಿಗೆ’ ತರುತ್ತಿದ್ದಾರೆ. ಹಾಗೆ ‘ಸರಿ ದಾರಿಗೆ’ ಎಳೆಯಲ್ಪಟ್ಟ ಪತ್ರಿಕೆಗಳಲ್ಲಿ ‘ಪಿಂಡಾರ್’ ಎಂಬ ಉರ್ದು ಪತ್ರಿಕೆಯೂ ಒಂದು.

ಈ ‘ಪಿಂಡಾರ್’ ಪತ್ರಿಕೆಗೆ ಡಾ. ರೈಹಾನ್ ಘಾಣಿ ಎಂಬುವವರು ಸಂಪಾದಕರಾಗಿದ್ದರು. 2007ರಲ್ಲಿ ನಿತೀಶ್ ಕುಮಾರ್ ಅವರ ಪತ್ನಿ ಮಡಿದಾಗ ಆಕೆಯ ಅಂತ್ಯಸಂಸ್ಕಾರವನ್ನು ಒಂದು ರಾಜಕೀಯ ಸಭೆಯಾಗಿ ಮುಖ್ಯಮಂತ್ರಿ ಪರಿವರ್ತಿಸಿದ್ದರು. ಇದನ್ನು ಟೀಕಿಸಿ ಘಾಣಿ ಅವರು ಮಾಡಿದ ಈ ‘ಪ್ರಮಾದ’ಕ್ಕೆ ಮಾರನೆ ದಿನವೇ ಅವರಿಗೆ ಬಿಸಿಮುಟ್ಟಿಸಿದ್ದರು ನಿತೀಶ್ ಕುಮಾರ್ ‘ಪಿಂಡಾರ್’ ಪತ್ರಿಕೆಯ ಮಾಲೀಕರ ಮೇಲೆ ಒತ್ತಡ ತಂದು ಘಾಣಿ ಅವರನ್ನು ಸಂಪಾದಕ ಹುದ್ದೆಯಿಂದ ಓಡಿಸಲಾಯಿತು, ಅವರು ಹಲವಾರು ವರ್ಷಗಳಿಂದ ಬರೆಯುತ್ತಿದ್ದ ಅಂಕಣಕ್ಕೆ ಕತ್ತರಿ ಬಿತ್ತು. ಇಂತಹ ಅವಮಾನವನ್ನು ಸಹಿಸದೆ ಘಾಣಿ ಅವರು ರಾಜೀನಾಮೆ ಕೊಟ್ಟು ಆ ಪತ್ರಿಕೆಯಿಂದ ಹೊರಬಿದ್ದರು.

ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ. ನಿತೀಶ್ ಕುಮಾರ್ ಅವರ ಆಸೆಗೆ ತಕ್ಕಂತೆ ‘ಪಿಂಡಾರ್’ ಪತ್ರಿಕೆಯ ಮಾಲೀಕ ಎ.ಕೆ.ಎಹಸಾನಿ ಅವರು ನಡೆದುಕೊಂಡಿದ್ದರಿಂದ ಆ ಪತ್ರಿಕೆಗೆ ಬಿಹಾರ ಸರ್ಕಾರದಿಂದ ಸಾಕಷ್ಟು ಲಾಭ ಸಿಕ್ಕಿತು. ಘಾಣಿ ಅವರು ಸಂಪಾದಕರಾಗಿದ್ದಾಗ 2007ರಲ್ಲಿ ‘ಪಿಂಡಾರ್’ ಪತ್ರಿಕೆಗೆ ಬಿಹಾರದ ಸರ್ಕಾರದಿಂದ ಕೇವಲ ಒಂದು ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಸಿಕ್ಕಿದ್ದವು. ಆದರೆ ಘಾಣಿ ಅವರು ಹೊರನಡೆದ ನಂತರ ಮಾಲೀಕ ಎಹಸಾನಿ ಅವರೇ ಸಂಪಾದಕರಾದ ನಂತರ ಅದೇ ಪತ್ರಿಕೆಗೆ 2008 ರಲ್ಲಿ 24 ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಹರಿದುಬಂದವು. ಅದರ ಮುಂದಿನ ವರ್ಷವೂ ‘ಪಿಂಡಾರ್’ ಪತ್ರಿಕೆ ನಿತೀಶ್ ಕುಮಾರ್ ಅವರ ತಾಳಕ್ಕೆ ಕುಣಿದಿದ್ದರಿಂದ 2009ರಲ್ಲಿ ಬರೋಬ್ಬರಿ 40 ಲಕ್ಷದ ಸರ್ಕಾರಿ ಜಾಹೀರಾತುಗಳು ಸಿಕ್ಕಿದವು. 2010ರಲ್ಲಿ ಅದು 48 ಲಕ್ಷಕ್ಕೆ ಏರಿತು! ಸಹಜವಾಗಿಯೇ ‘ಪಿಂಡಾರ್’ ಪತ್ರಿಕೆ ಇವತ್ತು ನಿತೀಶ್ ಕುಮಾರರ ಭಟ್ಟಂಗಿ ಪತ್ರಿಕೆಯಾಗಿದೆ.

ಅಂದಹಾಗೆ ಈ ವಿದ್ಯಮಾನ ಕೇವಲ ‘ಪಿಂಡಾರ್’ ಪತ್ರಿಕೆಗೆ ಸೀಮಿತವಾಗಿಲ್ಲ. ಬಿಹಾರ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಖಾಸಗಿ ಉದ್ಯಮ, ಕಾರ್ಖಾನೆ, ಸಂಸ್ಥೆಗಳು ಇಲ್ಲ ಆದ್ದರಿಂದ ಅಲ್ಲಿನ ಪತ್ರಿಕೆಗಳು ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತುಗಳನ್ನೇ ಅವಲಂಬಿಸಲೇಬೇಕಿದೆ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿರುವ ನಿತೀಶ್‌ಕುಮಾರ್ ಅಲ್ಲಿನ ಪತ್ರಿಕೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಅವರು ಅದೆಷ್ಟು ಚಾಕಚಕ್ಯತೆಯಿಂದ ಮಾಡಿದ್ದಾರೆಂಬುದು ಅಚ್ಚರಿ ಮೂಡಿಸುತ್ತದೆ.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗುವತನಕ ಆ ರಾಜ್ಯದ ಬಜೆಟ್‌ನಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಕಡಿಮೆ ಹಣವನ್ನು ಎತ್ತಿಡಲಾಗುತ್ತಿತ್ತು. ಉದಾಹರಣೆಗೆ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬಿಹಾರದಲ್ಲಿ ಅಧಿಕಾರದಲ್ಲಿದ್ದ 2005-06ರಲ್ಲಿ ಇಂತಹ ಜಾಹೀರಾತುಗಳಿಗೆ 4.5 ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಗಿತ್ತು. ಆದರೆ ನಿತೀಶ್‌ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮರುವರ್ಷವೇ (2006-07ರಲ್ಲಿ) ಆ ಮೊತ್ತವನ್ನು 5.4 ಕೋಟಿಗಳಿಗೆ ಏರಿಸಲಾಯಿತು. 2007-08ರಲ್ಲಿ ಅದು ದುಪ್ಪಟ್ಟುಗೊಂಡು 9.65 ಕೋಟಿಯಾಯಿತು. 2008-09ರಲ್ಲಿ ಅದು ಮೂರುಪಟ್ಟು ಹೆಚ್ಚಾಗಿ 27.5 ಕೋಟಿಗೆ ಏರಿತು. 2009-10ರಲ್ಲಿ ಮತ್ತಷ್ಟು ಹೆಚ್ಚಾಗಿ 34.5 ಕೋಟಿ ರೂ. ಗೆ ಮುಟ್ಟಿತು.

ಇಷ್ಟು ದೊಡ್ಡ ಮೊತ್ತದಲ್ಲಿ ಯಾವ ಪತ್ರಿಕೆಗೆ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಸ್ವತಃ ನಿತೀಶ್‌ಕುಮಾರ್ ಅವರೇ ತೆಗೆದುಕೊಳ್ಳುವುದರಿಂದ ಇವತ್ತು ಅಲ್ಲಿಯ ಬಹಳಷ್ಟು ಪತ್ರಿಕೆಗಳು ಅವರ ಹೊಗಳುಭಟ್ಟ ಪತ್ರಿಕೆಗಳಾಗಿ ಮಾರ್ಪಾಟುಗೊಂಡಿವೆ. ಇದರ ಬಗ್ಗೆ ‘ಪಿಂಡಾರ್’ ಪತ್ರಿಕೆಯ ಮಾಜಿ ಸಂಪಾದಕ ಘಾಣಿ ಅವರು ಹೇಳುವುದೇನೆಂದರೆ “ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಾದ್ಯಂತ ಘೋಷಿತ ಪತ್ರಿಕಾ ಸೆನ್ಸಾರ್‌ಶಿಪ್ ಇತ್ತು. ಆದರೆ ನಿತೀಶ್‌ಕುಮಾರ್ ಆಡಳಿತದಡಿ ಬಿಹಾರದಲ್ಲಿ ಅಘೋಷಿತ ಸೆನ್ಸಾರ್‌ಶಿಪ್ ಜಾರಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಅಪಾಯಕಾರಿ” ಎಂದು.

  • ಗೌರಿ ಲಂಕೇಶ್.

ಮೇ 2, 2012

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...