Homeಗೌರಿ ಕಣ್ಣೋಟನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! - ಗೌರಿ ಕಣ್ಣೋಟ

ನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! – ಗೌರಿ ಕಣ್ಣೋಟ

- Advertisement -
- Advertisement -

ನನಗೆ ಅಚ್ಚರಿ ಮೂಡಿಸಿದ್ದು ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ದಮನ. ಸಭ್ಯನಂತೆ ಸ್ವಚ್ಛಹಸ್ತನಂತೆ ಕಾಣುವ ನಿತೀಶ್ ಕುಮಾರ್ ಹೇಗೆ ತಮ್ಮ ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಕುರಿತು ‘ಓಪನ್’ ಪತ್ರಿಕೆಯಲ್ಲಿ ಒಂದು ಸುದೀರ್ಘವಾದ ವರದಿ ಪ್ರಕಟಗೊಂಡಿದೆ. ಅದನ್ನು ಓದಿದನಂತರ ನಿತೀಶ್ ಕುಮಾರ್ ಅವರ ಬಗ್ಗೆ ಅಚ್ಚರಿ ಆಯಿತು.

‘ಓಪನ್’ ಪತ್ರಿಕೆಯಲ್ಲಿ ಧೀರೇಂದ್ರ ಕೆ. ಝಾ ಎಂಬುವವರು ಬರೆದಿರುವ ವರದಿಯ ಸಾರಾಂಶ ಹೀಗಿದೆ:

ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಒಂದು ಮನೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಆ ದಾಳಿಯಲ್ಲಿ ಅವರಿಗೆ ಐದು ಕೋಟಿ ರೂಪಾಯಿಗಳು ಸಿಕ್ಕವಲ್ಲದೆ, ಪಾಟ್ನಾದಲ್ಲಿರುವ ಸುಮಾರು ಐವತ್ತು ಮನೆಗಳ ಖರೀದಿ ಪತ್ರಗಳೂ ಸಿಕ್ಕವು. ಐದು ಕೋಟಿಯಷ್ಟು ದೊಡ್ಡಮೊತ್ತ ಮತ್ತು ಐವತ್ತು ಮನೆಗಳ ದಾಖಲೆಗಳು ಸಿಕ್ಕಿದ್ದರೂ ಬಿಹಾರದ ಯಾವ ಪತ್ರಿಕೆಯೂ ಈ ದಾಳಿಯ ಬಗ್ಗೆ ವರದಿ ಮಾಡಲಿಲ್ಲ. ಅದಕ್ಕೆ ಕಾರಣ ಆ ಮನೆಯಲ್ಲಿ ವಾಸಿಸುತ್ತಿರುವಾತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಪ್ತನಾಗಿರುವ ಮತ್ತು ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾದಳದ ಖಜಾಂಚಿ ಆಗಿರುವ ವಿನಯ್‌ಕುಮಾರ್ ಸಿನ್ಹಾ! ಅಂದಹಾಗೆ ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಆಗುವತನಕ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅದನ್ನು ತಮ್ಮ ಆಪ್ತನಿಗೆ ಬಿಟ್ಟುಕೊಟ್ಟಿದ್ದಾರೆ.

ಭ್ರಷ್ಟಾಚಾರ ಮತ್ತು ರಾಜಕೀಯ ವಾಸನೆ ಇರುವ ಈ ದಾಳಿಯ ಬಗ್ಗೆ ಯಾಕೆ ಬಿಹಾರದ ಪತ್ರಿಕೆಗಳು ವರದಿ ಮಾಡಲಿಲ್ಲ ಎಂದು ನೋಡಿದಾಗ ಇದು ಒಂದು ವಿಶೇಷ ಸಂಗತಿ ಅಲ್ಲವೆಂದೂ, ಇಂತಹ ‘ಮರೆಮಾಚುವ’ ಕೆಲಸದಲ್ಲಿ ಆ ರಾಜ್ಯದ ಪತ್ರಿಕೆಗಳೂ ದಿನನಿತ್ಯ ತೊಡಗಿವೆ ಎಂದೂ ಗೊತ್ತಾಯಿತು.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆದಾಗಿನಿಂದಲೂ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಪತ್ರಿಕೆಗಳ ಆದಾಯ ಮೂಲಗಳನ್ನು ಕಡಿದು ಹಾಕುವಮೂಲಕ ಅಂತಹ ‘ದಾರಿ ತಪ್ಪಿದ’ ಮಾಧ್ಯಮಗಳನ್ನು ‘ಸರಿದಾರಿಗೆ’ ತರುತ್ತಿದ್ದಾರೆ. ಹಾಗೆ ‘ಸರಿ ದಾರಿಗೆ’ ಎಳೆಯಲ್ಪಟ್ಟ ಪತ್ರಿಕೆಗಳಲ್ಲಿ ‘ಪಿಂಡಾರ್’ ಎಂಬ ಉರ್ದು ಪತ್ರಿಕೆಯೂ ಒಂದು.

ಈ ‘ಪಿಂಡಾರ್’ ಪತ್ರಿಕೆಗೆ ಡಾ. ರೈಹಾನ್ ಘಾಣಿ ಎಂಬುವವರು ಸಂಪಾದಕರಾಗಿದ್ದರು. 2007ರಲ್ಲಿ ನಿತೀಶ್ ಕುಮಾರ್ ಅವರ ಪತ್ನಿ ಮಡಿದಾಗ ಆಕೆಯ ಅಂತ್ಯಸಂಸ್ಕಾರವನ್ನು ಒಂದು ರಾಜಕೀಯ ಸಭೆಯಾಗಿ ಮುಖ್ಯಮಂತ್ರಿ ಪರಿವರ್ತಿಸಿದ್ದರು. ಇದನ್ನು ಟೀಕಿಸಿ ಘಾಣಿ ಅವರು ಮಾಡಿದ ಈ ‘ಪ್ರಮಾದ’ಕ್ಕೆ ಮಾರನೆ ದಿನವೇ ಅವರಿಗೆ ಬಿಸಿಮುಟ್ಟಿಸಿದ್ದರು ನಿತೀಶ್ ಕುಮಾರ್ ‘ಪಿಂಡಾರ್’ ಪತ್ರಿಕೆಯ ಮಾಲೀಕರ ಮೇಲೆ ಒತ್ತಡ ತಂದು ಘಾಣಿ ಅವರನ್ನು ಸಂಪಾದಕ ಹುದ್ದೆಯಿಂದ ಓಡಿಸಲಾಯಿತು, ಅವರು ಹಲವಾರು ವರ್ಷಗಳಿಂದ ಬರೆಯುತ್ತಿದ್ದ ಅಂಕಣಕ್ಕೆ ಕತ್ತರಿ ಬಿತ್ತು. ಇಂತಹ ಅವಮಾನವನ್ನು ಸಹಿಸದೆ ಘಾಣಿ ಅವರು ರಾಜೀನಾಮೆ ಕೊಟ್ಟು ಆ ಪತ್ರಿಕೆಯಿಂದ ಹೊರಬಿದ್ದರು.

ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ. ನಿತೀಶ್ ಕುಮಾರ್ ಅವರ ಆಸೆಗೆ ತಕ್ಕಂತೆ ‘ಪಿಂಡಾರ್’ ಪತ್ರಿಕೆಯ ಮಾಲೀಕ ಎ.ಕೆ.ಎಹಸಾನಿ ಅವರು ನಡೆದುಕೊಂಡಿದ್ದರಿಂದ ಆ ಪತ್ರಿಕೆಗೆ ಬಿಹಾರ ಸರ್ಕಾರದಿಂದ ಸಾಕಷ್ಟು ಲಾಭ ಸಿಕ್ಕಿತು. ಘಾಣಿ ಅವರು ಸಂಪಾದಕರಾಗಿದ್ದಾಗ 2007ರಲ್ಲಿ ‘ಪಿಂಡಾರ್’ ಪತ್ರಿಕೆಗೆ ಬಿಹಾರದ ಸರ್ಕಾರದಿಂದ ಕೇವಲ ಒಂದು ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಸಿಕ್ಕಿದ್ದವು. ಆದರೆ ಘಾಣಿ ಅವರು ಹೊರನಡೆದ ನಂತರ ಮಾಲೀಕ ಎಹಸಾನಿ ಅವರೇ ಸಂಪಾದಕರಾದ ನಂತರ ಅದೇ ಪತ್ರಿಕೆಗೆ 2008 ರಲ್ಲಿ 24 ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಹರಿದುಬಂದವು. ಅದರ ಮುಂದಿನ ವರ್ಷವೂ ‘ಪಿಂಡಾರ್’ ಪತ್ರಿಕೆ ನಿತೀಶ್ ಕುಮಾರ್ ಅವರ ತಾಳಕ್ಕೆ ಕುಣಿದಿದ್ದರಿಂದ 2009ರಲ್ಲಿ ಬರೋಬ್ಬರಿ 40 ಲಕ್ಷದ ಸರ್ಕಾರಿ ಜಾಹೀರಾತುಗಳು ಸಿಕ್ಕಿದವು. 2010ರಲ್ಲಿ ಅದು 48 ಲಕ್ಷಕ್ಕೆ ಏರಿತು! ಸಹಜವಾಗಿಯೇ ‘ಪಿಂಡಾರ್’ ಪತ್ರಿಕೆ ಇವತ್ತು ನಿತೀಶ್ ಕುಮಾರರ ಭಟ್ಟಂಗಿ ಪತ್ರಿಕೆಯಾಗಿದೆ.

ಅಂದಹಾಗೆ ಈ ವಿದ್ಯಮಾನ ಕೇವಲ ‘ಪಿಂಡಾರ್’ ಪತ್ರಿಕೆಗೆ ಸೀಮಿತವಾಗಿಲ್ಲ. ಬಿಹಾರ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಖಾಸಗಿ ಉದ್ಯಮ, ಕಾರ್ಖಾನೆ, ಸಂಸ್ಥೆಗಳು ಇಲ್ಲ ಆದ್ದರಿಂದ ಅಲ್ಲಿನ ಪತ್ರಿಕೆಗಳು ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತುಗಳನ್ನೇ ಅವಲಂಬಿಸಲೇಬೇಕಿದೆ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿರುವ ನಿತೀಶ್‌ಕುಮಾರ್ ಅಲ್ಲಿನ ಪತ್ರಿಕೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಅವರು ಅದೆಷ್ಟು ಚಾಕಚಕ್ಯತೆಯಿಂದ ಮಾಡಿದ್ದಾರೆಂಬುದು ಅಚ್ಚರಿ ಮೂಡಿಸುತ್ತದೆ.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗುವತನಕ ಆ ರಾಜ್ಯದ ಬಜೆಟ್‌ನಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಕಡಿಮೆ ಹಣವನ್ನು ಎತ್ತಿಡಲಾಗುತ್ತಿತ್ತು. ಉದಾಹರಣೆಗೆ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬಿಹಾರದಲ್ಲಿ ಅಧಿಕಾರದಲ್ಲಿದ್ದ 2005-06ರಲ್ಲಿ ಇಂತಹ ಜಾಹೀರಾತುಗಳಿಗೆ 4.5 ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಗಿತ್ತು. ಆದರೆ ನಿತೀಶ್‌ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮರುವರ್ಷವೇ (2006-07ರಲ್ಲಿ) ಆ ಮೊತ್ತವನ್ನು 5.4 ಕೋಟಿಗಳಿಗೆ ಏರಿಸಲಾಯಿತು. 2007-08ರಲ್ಲಿ ಅದು ದುಪ್ಪಟ್ಟುಗೊಂಡು 9.65 ಕೋಟಿಯಾಯಿತು. 2008-09ರಲ್ಲಿ ಅದು ಮೂರುಪಟ್ಟು ಹೆಚ್ಚಾಗಿ 27.5 ಕೋಟಿಗೆ ಏರಿತು. 2009-10ರಲ್ಲಿ ಮತ್ತಷ್ಟು ಹೆಚ್ಚಾಗಿ 34.5 ಕೋಟಿ ರೂ. ಗೆ ಮುಟ್ಟಿತು.

ಇಷ್ಟು ದೊಡ್ಡ ಮೊತ್ತದಲ್ಲಿ ಯಾವ ಪತ್ರಿಕೆಗೆ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಸ್ವತಃ ನಿತೀಶ್‌ಕುಮಾರ್ ಅವರೇ ತೆಗೆದುಕೊಳ್ಳುವುದರಿಂದ ಇವತ್ತು ಅಲ್ಲಿಯ ಬಹಳಷ್ಟು ಪತ್ರಿಕೆಗಳು ಅವರ ಹೊಗಳುಭಟ್ಟ ಪತ್ರಿಕೆಗಳಾಗಿ ಮಾರ್ಪಾಟುಗೊಂಡಿವೆ. ಇದರ ಬಗ್ಗೆ ‘ಪಿಂಡಾರ್’ ಪತ್ರಿಕೆಯ ಮಾಜಿ ಸಂಪಾದಕ ಘಾಣಿ ಅವರು ಹೇಳುವುದೇನೆಂದರೆ “ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಾದ್ಯಂತ ಘೋಷಿತ ಪತ್ರಿಕಾ ಸೆನ್ಸಾರ್‌ಶಿಪ್ ಇತ್ತು. ಆದರೆ ನಿತೀಶ್‌ಕುಮಾರ್ ಆಡಳಿತದಡಿ ಬಿಹಾರದಲ್ಲಿ ಅಘೋಷಿತ ಸೆನ್ಸಾರ್‌ಶಿಪ್ ಜಾರಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಅಪಾಯಕಾರಿ” ಎಂದು.

  • ಗೌರಿ ಲಂಕೇಶ್.

ಮೇ 2, 2012

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...