Homeಗೌರಿ ಕಣ್ಣೋಟನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! - ಗೌರಿ ಕಣ್ಣೋಟ

ನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! – ಗೌರಿ ಕಣ್ಣೋಟ

- Advertisement -
- Advertisement -

ನನಗೆ ಅಚ್ಚರಿ ಮೂಡಿಸಿದ್ದು ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ದಮನ. ಸಭ್ಯನಂತೆ ಸ್ವಚ್ಛಹಸ್ತನಂತೆ ಕಾಣುವ ನಿತೀಶ್ ಕುಮಾರ್ ಹೇಗೆ ತಮ್ಮ ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಕುರಿತು ‘ಓಪನ್’ ಪತ್ರಿಕೆಯಲ್ಲಿ ಒಂದು ಸುದೀರ್ಘವಾದ ವರದಿ ಪ್ರಕಟಗೊಂಡಿದೆ. ಅದನ್ನು ಓದಿದನಂತರ ನಿತೀಶ್ ಕುಮಾರ್ ಅವರ ಬಗ್ಗೆ ಅಚ್ಚರಿ ಆಯಿತು.

‘ಓಪನ್’ ಪತ್ರಿಕೆಯಲ್ಲಿ ಧೀರೇಂದ್ರ ಕೆ. ಝಾ ಎಂಬುವವರು ಬರೆದಿರುವ ವರದಿಯ ಸಾರಾಂಶ ಹೀಗಿದೆ:

ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಒಂದು ಮನೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಆ ದಾಳಿಯಲ್ಲಿ ಅವರಿಗೆ ಐದು ಕೋಟಿ ರೂಪಾಯಿಗಳು ಸಿಕ್ಕವಲ್ಲದೆ, ಪಾಟ್ನಾದಲ್ಲಿರುವ ಸುಮಾರು ಐವತ್ತು ಮನೆಗಳ ಖರೀದಿ ಪತ್ರಗಳೂ ಸಿಕ್ಕವು. ಐದು ಕೋಟಿಯಷ್ಟು ದೊಡ್ಡಮೊತ್ತ ಮತ್ತು ಐವತ್ತು ಮನೆಗಳ ದಾಖಲೆಗಳು ಸಿಕ್ಕಿದ್ದರೂ ಬಿಹಾರದ ಯಾವ ಪತ್ರಿಕೆಯೂ ಈ ದಾಳಿಯ ಬಗ್ಗೆ ವರದಿ ಮಾಡಲಿಲ್ಲ. ಅದಕ್ಕೆ ಕಾರಣ ಆ ಮನೆಯಲ್ಲಿ ವಾಸಿಸುತ್ತಿರುವಾತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಪ್ತನಾಗಿರುವ ಮತ್ತು ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾದಳದ ಖಜಾಂಚಿ ಆಗಿರುವ ವಿನಯ್‌ಕುಮಾರ್ ಸಿನ್ಹಾ! ಅಂದಹಾಗೆ ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಆಗುವತನಕ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅದನ್ನು ತಮ್ಮ ಆಪ್ತನಿಗೆ ಬಿಟ್ಟುಕೊಟ್ಟಿದ್ದಾರೆ.

ಭ್ರಷ್ಟಾಚಾರ ಮತ್ತು ರಾಜಕೀಯ ವಾಸನೆ ಇರುವ ಈ ದಾಳಿಯ ಬಗ್ಗೆ ಯಾಕೆ ಬಿಹಾರದ ಪತ್ರಿಕೆಗಳು ವರದಿ ಮಾಡಲಿಲ್ಲ ಎಂದು ನೋಡಿದಾಗ ಇದು ಒಂದು ವಿಶೇಷ ಸಂಗತಿ ಅಲ್ಲವೆಂದೂ, ಇಂತಹ ‘ಮರೆಮಾಚುವ’ ಕೆಲಸದಲ್ಲಿ ಆ ರಾಜ್ಯದ ಪತ್ರಿಕೆಗಳೂ ದಿನನಿತ್ಯ ತೊಡಗಿವೆ ಎಂದೂ ಗೊತ್ತಾಯಿತು.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆದಾಗಿನಿಂದಲೂ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಪತ್ರಿಕೆಗಳ ಆದಾಯ ಮೂಲಗಳನ್ನು ಕಡಿದು ಹಾಕುವಮೂಲಕ ಅಂತಹ ‘ದಾರಿ ತಪ್ಪಿದ’ ಮಾಧ್ಯಮಗಳನ್ನು ‘ಸರಿದಾರಿಗೆ’ ತರುತ್ತಿದ್ದಾರೆ. ಹಾಗೆ ‘ಸರಿ ದಾರಿಗೆ’ ಎಳೆಯಲ್ಪಟ್ಟ ಪತ್ರಿಕೆಗಳಲ್ಲಿ ‘ಪಿಂಡಾರ್’ ಎಂಬ ಉರ್ದು ಪತ್ರಿಕೆಯೂ ಒಂದು.

ಈ ‘ಪಿಂಡಾರ್’ ಪತ್ರಿಕೆಗೆ ಡಾ. ರೈಹಾನ್ ಘಾಣಿ ಎಂಬುವವರು ಸಂಪಾದಕರಾಗಿದ್ದರು. 2007ರಲ್ಲಿ ನಿತೀಶ್ ಕುಮಾರ್ ಅವರ ಪತ್ನಿ ಮಡಿದಾಗ ಆಕೆಯ ಅಂತ್ಯಸಂಸ್ಕಾರವನ್ನು ಒಂದು ರಾಜಕೀಯ ಸಭೆಯಾಗಿ ಮುಖ್ಯಮಂತ್ರಿ ಪರಿವರ್ತಿಸಿದ್ದರು. ಇದನ್ನು ಟೀಕಿಸಿ ಘಾಣಿ ಅವರು ಮಾಡಿದ ಈ ‘ಪ್ರಮಾದ’ಕ್ಕೆ ಮಾರನೆ ದಿನವೇ ಅವರಿಗೆ ಬಿಸಿಮುಟ್ಟಿಸಿದ್ದರು ನಿತೀಶ್ ಕುಮಾರ್ ‘ಪಿಂಡಾರ್’ ಪತ್ರಿಕೆಯ ಮಾಲೀಕರ ಮೇಲೆ ಒತ್ತಡ ತಂದು ಘಾಣಿ ಅವರನ್ನು ಸಂಪಾದಕ ಹುದ್ದೆಯಿಂದ ಓಡಿಸಲಾಯಿತು, ಅವರು ಹಲವಾರು ವರ್ಷಗಳಿಂದ ಬರೆಯುತ್ತಿದ್ದ ಅಂಕಣಕ್ಕೆ ಕತ್ತರಿ ಬಿತ್ತು. ಇಂತಹ ಅವಮಾನವನ್ನು ಸಹಿಸದೆ ಘಾಣಿ ಅವರು ರಾಜೀನಾಮೆ ಕೊಟ್ಟು ಆ ಪತ್ರಿಕೆಯಿಂದ ಹೊರಬಿದ್ದರು.

ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ. ನಿತೀಶ್ ಕುಮಾರ್ ಅವರ ಆಸೆಗೆ ತಕ್ಕಂತೆ ‘ಪಿಂಡಾರ್’ ಪತ್ರಿಕೆಯ ಮಾಲೀಕ ಎ.ಕೆ.ಎಹಸಾನಿ ಅವರು ನಡೆದುಕೊಂಡಿದ್ದರಿಂದ ಆ ಪತ್ರಿಕೆಗೆ ಬಿಹಾರ ಸರ್ಕಾರದಿಂದ ಸಾಕಷ್ಟು ಲಾಭ ಸಿಕ್ಕಿತು. ಘಾಣಿ ಅವರು ಸಂಪಾದಕರಾಗಿದ್ದಾಗ 2007ರಲ್ಲಿ ‘ಪಿಂಡಾರ್’ ಪತ್ರಿಕೆಗೆ ಬಿಹಾರದ ಸರ್ಕಾರದಿಂದ ಕೇವಲ ಒಂದು ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಸಿಕ್ಕಿದ್ದವು. ಆದರೆ ಘಾಣಿ ಅವರು ಹೊರನಡೆದ ನಂತರ ಮಾಲೀಕ ಎಹಸಾನಿ ಅವರೇ ಸಂಪಾದಕರಾದ ನಂತರ ಅದೇ ಪತ್ರಿಕೆಗೆ 2008 ರಲ್ಲಿ 24 ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಹರಿದುಬಂದವು. ಅದರ ಮುಂದಿನ ವರ್ಷವೂ ‘ಪಿಂಡಾರ್’ ಪತ್ರಿಕೆ ನಿತೀಶ್ ಕುಮಾರ್ ಅವರ ತಾಳಕ್ಕೆ ಕುಣಿದಿದ್ದರಿಂದ 2009ರಲ್ಲಿ ಬರೋಬ್ಬರಿ 40 ಲಕ್ಷದ ಸರ್ಕಾರಿ ಜಾಹೀರಾತುಗಳು ಸಿಕ್ಕಿದವು. 2010ರಲ್ಲಿ ಅದು 48 ಲಕ್ಷಕ್ಕೆ ಏರಿತು! ಸಹಜವಾಗಿಯೇ ‘ಪಿಂಡಾರ್’ ಪತ್ರಿಕೆ ಇವತ್ತು ನಿತೀಶ್ ಕುಮಾರರ ಭಟ್ಟಂಗಿ ಪತ್ರಿಕೆಯಾಗಿದೆ.

ಅಂದಹಾಗೆ ಈ ವಿದ್ಯಮಾನ ಕೇವಲ ‘ಪಿಂಡಾರ್’ ಪತ್ರಿಕೆಗೆ ಸೀಮಿತವಾಗಿಲ್ಲ. ಬಿಹಾರ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಖಾಸಗಿ ಉದ್ಯಮ, ಕಾರ್ಖಾನೆ, ಸಂಸ್ಥೆಗಳು ಇಲ್ಲ ಆದ್ದರಿಂದ ಅಲ್ಲಿನ ಪತ್ರಿಕೆಗಳು ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತುಗಳನ್ನೇ ಅವಲಂಬಿಸಲೇಬೇಕಿದೆ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿರುವ ನಿತೀಶ್‌ಕುಮಾರ್ ಅಲ್ಲಿನ ಪತ್ರಿಕೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಅವರು ಅದೆಷ್ಟು ಚಾಕಚಕ್ಯತೆಯಿಂದ ಮಾಡಿದ್ದಾರೆಂಬುದು ಅಚ್ಚರಿ ಮೂಡಿಸುತ್ತದೆ.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗುವತನಕ ಆ ರಾಜ್ಯದ ಬಜೆಟ್‌ನಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಕಡಿಮೆ ಹಣವನ್ನು ಎತ್ತಿಡಲಾಗುತ್ತಿತ್ತು. ಉದಾಹರಣೆಗೆ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬಿಹಾರದಲ್ಲಿ ಅಧಿಕಾರದಲ್ಲಿದ್ದ 2005-06ರಲ್ಲಿ ಇಂತಹ ಜಾಹೀರಾತುಗಳಿಗೆ 4.5 ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಗಿತ್ತು. ಆದರೆ ನಿತೀಶ್‌ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮರುವರ್ಷವೇ (2006-07ರಲ್ಲಿ) ಆ ಮೊತ್ತವನ್ನು 5.4 ಕೋಟಿಗಳಿಗೆ ಏರಿಸಲಾಯಿತು. 2007-08ರಲ್ಲಿ ಅದು ದುಪ್ಪಟ್ಟುಗೊಂಡು 9.65 ಕೋಟಿಯಾಯಿತು. 2008-09ರಲ್ಲಿ ಅದು ಮೂರುಪಟ್ಟು ಹೆಚ್ಚಾಗಿ 27.5 ಕೋಟಿಗೆ ಏರಿತು. 2009-10ರಲ್ಲಿ ಮತ್ತಷ್ಟು ಹೆಚ್ಚಾಗಿ 34.5 ಕೋಟಿ ರೂ. ಗೆ ಮುಟ್ಟಿತು.

ಇಷ್ಟು ದೊಡ್ಡ ಮೊತ್ತದಲ್ಲಿ ಯಾವ ಪತ್ರಿಕೆಗೆ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಸ್ವತಃ ನಿತೀಶ್‌ಕುಮಾರ್ ಅವರೇ ತೆಗೆದುಕೊಳ್ಳುವುದರಿಂದ ಇವತ್ತು ಅಲ್ಲಿಯ ಬಹಳಷ್ಟು ಪತ್ರಿಕೆಗಳು ಅವರ ಹೊಗಳುಭಟ್ಟ ಪತ್ರಿಕೆಗಳಾಗಿ ಮಾರ್ಪಾಟುಗೊಂಡಿವೆ. ಇದರ ಬಗ್ಗೆ ‘ಪಿಂಡಾರ್’ ಪತ್ರಿಕೆಯ ಮಾಜಿ ಸಂಪಾದಕ ಘಾಣಿ ಅವರು ಹೇಳುವುದೇನೆಂದರೆ “ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಾದ್ಯಂತ ಘೋಷಿತ ಪತ್ರಿಕಾ ಸೆನ್ಸಾರ್‌ಶಿಪ್ ಇತ್ತು. ಆದರೆ ನಿತೀಶ್‌ಕುಮಾರ್ ಆಡಳಿತದಡಿ ಬಿಹಾರದಲ್ಲಿ ಅಘೋಷಿತ ಸೆನ್ಸಾರ್‌ಶಿಪ್ ಜಾರಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಅಪಾಯಕಾರಿ” ಎಂದು.

  • ಗೌರಿ ಲಂಕೇಶ್.

ಮೇ 2, 2012

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...