Homeಬಹುಜನ ಭಾರತಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

- Advertisement -
- Advertisement -

ಆಡುವ ನುಡಿಗಳಿಗೆ ಸಾಧಕ ಬಾಧಕಗಳಿರುತ್ತವೆ. ಉಳಿದೆಲ್ಲರಿಗಿಂತ ಹೆಚ್ಚಾಗಿ ನಿತ್ಯ ಜನಸಮೂಹಗಳೊಂದಿಗೆ ಪ್ರತ್ಯಕ್ಷ-ಪರೋಕ್ಷ ಸಂವಾದದಲ್ಲಿ ತೊಡಗುವ ಜನಪ್ರತಿನಿಧಿಗಳಿಗೆ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ಜನರಿಗೆ ಮತ್ತು ಜನರಿಂದ ರೂಪಿತವಾಗಿರುವ ಸಂವಿಧಾನದ ಆಶಯಗಳಿಗೆ ಅವರು ಬದ್ಧರಾಗಿರಬೇಕು. ಹಾಗೆಂದು ಶಾಸನಸಭೆ ಮತ್ತು ಸಂಸತ್ತಿನಲ್ಲಿ ನಿಂತು ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರಮಾಣವಚನ ಸ್ವೀಕರಿಸಿದ ನಂತರವೇ ಅವರಿಗೆ ಶಾಸನಸಭೆಗಳು- ಸಂಸತ್ತಿನಲ್ಲಿ ಆಸನಗಳು ದೊರೆಯುತ್ತವೆ. ಮಾತಾಡುವ ಹಕ್ಕು ಲಭಿಸುತ್ತದೆ. ಸಂಬಳ-ಸಾರಿಗೆ-ಭತ್ಯೆಗಳು ಮತ್ತು ಸಂಸದೀಯ ಅಧಿಕಾರಗಳು ದತ್ತವಾಗುತ್ತವೆ. ಮಂತ್ರಿಗಳು ಈ ಪ್ರಮಾಣವಚನವನ್ನು ಎರಡು ಸಲ ಸ್ವೀಕರಿಸುತ್ತಾರೆ. ಸ್ಪೀಕರ್-ಸಭಾಪತಿ ರಾಜ್ಯಪಾಲರು- ರಾಷ್ಟ್ರಪತಿಯವರು ಬೋಧಿಸುವ ಈ ಶಪಥವನ್ನು ಬಹಿರಂಗವಾಗಿ ಬಾಯಲ್ಲಿ ನುಡಿದು ಆಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

‘… ಎಂಬುವವನಾದ ನಾನು ದೇವರ- ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ. ವಿಧಿ ದ್ವಾರಾ ಸ್ಥಾಪಿಸಲಾದ ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇನೆ. ನಾನು ಭಾರತದ ಪ್ರಭುತೆ ಮತ್ತು ಅಖಂಡತೆಯನ್ನು ಕಾಪಾಡುತ್ತೇನೆ. ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಶುದ್ಧ ಅಂತಃಕರಣದಿಂದ ನಿರ್ವಹಿಸುತ್ತೇನೆ. ಭಯ ಅಥವಾ ಪಕ್ಷಪಾತ, ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ, ಎಲ್ಲ ರೀತಿಯ ಜನರಿಗೆ ಸಂವಿಧಾನ ಮತ್ತು ವಿಧಿಯ ಅನುಸಾರ ನ್ಯಾಯ ಸಲ್ಲಿಸುತ್ತೇನೆ’ ಎಂಬುದಾಗಿ ಶಾಸಕರು- ಸಂಸದರು ಸ್ವೀಕರಿಸುವ ಪ್ರತಿಜ್ಞೆಯ ಜೊತೆಗೆ ಪ್ರಧಾನಮಂತ್ರಿ-ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಗೌಪ್ಯತೆಯ ಶಪಥವನ್ನೂ ಸ್ವೀಕರಿಸುತ್ತಾರೆ.

ಭಯ ಅಥವಾ ಪಕ್ಷಪಾತ ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ ಶುದ್ಧ ಅಂತಃಕರಣದಿಂದ ತಮ್ಮ ಕರ್ತವ್ಯಗಳನ್ನು ಆಳುವ ಪಕ್ಷದ ಜನಪ್ರತಿನಿಧಿಗಳು ಮಂತ್ರಿಗಳು ಪ್ರಧಾನಮಂತ್ರಿ ನಿರ್ವಹಿಸುತ್ತಿದ್ದಾರೆಯೇ, ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಒಮ್ಮೆ ಕೇಳಿಕೊಳ್ಳಬೇಕಿದೆ.

ಎಲ್ಲ ನೈತಿಕ ಎಲ್ಲೆಗಳನ್ನು ಎದೆ ಸೆಟೆಸಿ ಉಲ್ಲಂಘಿಸುವ ಭಂಡತನದಲ್ಲಿ ಪೈಪೋಟಿ ನಡೆಯತೊಡಗಿದೆ. ದ್ವೇಷ, ದ್ರುವೀಕರಣ ಹಾಗೂ ಹಿಂಸೆಗಳನ್ನು ಪ್ರಚೋದಿಸುವ ಪಂದ್ಯಗಳಲ್ಲಿ ತಾವು ಭಾಗವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ಬಿಜೆಪಿಯಲ್ಲಿ ಮತ್ತು ಈ ಪಕ್ಷದ ಕಟ್ಟರ್‌ವಾದಿ ಬೆಂಬಲಿಗರಲ್ಲಿ ಉತ್ತೇಜಿಸಲಾಗುತ್ತಿದೆ. ಈ ನಾಚಿಕೆಗೇಡಿನಲ್ಲಿ ತೊಡಗಿದವರಿಗೆ ಇಂದಲ್ಲದಿದ್ದರೆ ನಾಳೆ ಪಕ್ಷ ಬಹುಮಾನಗಳನ್ನು ನೀಡಿ ಬೆನ್ನು ತಟ್ಟುತ್ತಿದೆ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿರುವ ಭಯೋತ್ಪಾದಕರಿಗೂ ಮುಂದೊಂದು ದಿನ ಬಿಜೆಪಿ ಚುನಾವಣಾ ಟಿಕೆಟ್ ಗಳು ದೊರೆತರೆ ಚಕಿತರಾಗಬೇಕಿಲ್ಲ.

ಸಿ.ಎ.ಎ – ಎನ್.ಆರ್.ಸಿ. ವಿರುದ್ಧ ಶಾಂತಿಯುತ ಪ್ರತಿಭಟನೆ ಜರುಗುತ್ತಿರುವ ಶಾಹೀನ್‌ಬಾಗ್ ಅನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು, ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ ಎಂಬ ಘೋಷಣೆಗಳನ್ನು ಜನಸಭೆಗಳಲ್ಲಿ ಕೂಗಿಸುವುದು, ಎಷ್ಟು ಸಿಟ್ಟಿನಿಂದ ನೀವು ಚುನಾವಣಾ ಮತಯಂತ್ರದ ಗುಂಡಿ ಒತ್ತಬೇಕೆಂದರೆ ಅದರ ಆಘಾತ ಶಾಹೀನ್‌ಬಾಗ್‌ಗೆ ತಗುಲಬೇಕು ಎಂದು ಪ್ರಚೋದಿಸುವುದು, ಕಾಶ್ಮೀರದಲ್ಲಿ ಪಂಡಿತರನ್ನು ಹಿಂಸಿಸಿ ಬೆದರಿಸಿ ಓಡಿಸಿದಂತೆಯೇ ದೆಹಲಿಯಲ್ಲಿ ಶಾಹೀನ್‌ಬಾಗ್‌ನ ಪ್ರತಿಭಟನಕಾರರು ನಾಳೆ ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲ್ಲಬಹುದು ಎಂದು ಒಂದು ಜನಾಂಗದ ವಿರುದ್ಧ ಹೇವರಿಕೆ ಭಯ ದ್ವೇಷ ಹುಟ್ಟಿಸುವುದು, ಶಾಹೀನ್‌ಬಾಗ್ ಪ್ರತಿಭಟನೆಯ ಹಿಂದೆ ದೇಶವನ್ನು ಒಡೆಯುವ ಹುನ್ನಾರವಿದೆ ಎಂಬುವ ವಿಷ ಕಕ್ಕುವ ಮಾತುಗಳು ಬಿಜೆಪಿಯವು.

ಶಾಹೀನ್‌ಬಾಗ್ ನಲ್ಲಿ ಧರಣಿ ಕುಳಿತಿರುವ ಮಹಿಳೆಯರು ಮತ್ತು ಮಕ್ಕಳು ಸಾಯಬಾರದೇಕೆ, ಉತ್ತರಪ್ರದೇಶದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಿಎಎ ಪ್ರತಿಭಟನಾಕಾರರನ್ನು ನಾಯಿಗಳಂತೆ ಗುಂಡು ಹೊಡೆದು ಸಾಯಿಸಲಾಗಿದೆ ಎನ್ನುತ್ತಾರೆ. ತಮ್ಮ ಕಾರ್ಯಕರ್ತರು ಸಿಎಎ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳನ್ನು ಬೆಂಬತ್ತಿ ಛೇಡಿಸುವುದನ್ನು ಬೆಂಬಲಿಸುತ್ತಾರೆ. ಅವಳ ಅದೃಷ್ಟ ಚೆನ್ನಾಗಿತ್ತು, ನಮ್ಮ ಕಾರ್ಯಕರ್ತರು ಆಕೆಯನ್ನು ಅಷ್ಟಕ್ಕೇ ಬಿಟ್ಟುಬಿಟ್ಟರು ಎನ್ನುತ್ತಾರೆ ದ್ವೇಷದ ಕಿಚ್ಚು ಹಚ್ಚುವ ನುಡಿಗಳು. ಕಪಿಲ್ ಮಿಶ್ರಾ ಎಂಬ ಪುಡಿ ಪುಢಾರಿಯಿಂದ ಹಿಡಿದು, ಸಂಸದ ಪ್ರವೇಶ್‌ವರ್ಮಾ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಕೇಂದ್ರ ಸರ್ಕಾರದ ಕಿರಿಯ ಮಂತ್ರಿ ಅನುರಾಗ್ ಠಾಕೂರ್, ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕೋಮುವಾದದ ಕಾಳ್ಗಿಚ್ಚನ್ನು ಹೊತ್ತಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಈ ದ್ವೇಷದ ಕಿಚ್ಚನ್ನು ಜನಮಾನಸದ ಎದೆಯಲ್ಲಿ ಹೊತ್ತಿಸಿ ದಾರಿ ತಪ್ಪಿಸುವ ಅಪಾಯಕಾರಿ ಆಟವಿದು. ಜನರನ್ನು ಒಡೆದು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ಕೊಲ್ಲಿಸುವ ಆಟ. ಈ ಆಟದಲ್ಲಿ ಕಿಚ್ಚು ಹೊತ್ತಿಸುವವರು ಗೆಲ್ಲಬಹುದು, ಆದರೆ ದೇಶ ಸೋಲುತ್ತದೆ.

ಗೋಲಿ ಮಾರೋ ಸಾಲೋಂ ಕೋ ಎಂಬ ತಮ್ಮ ನಾಯಕರು ಕುಡಿಸಿರುವ ದ್ವೇಷದ ನಶೆಯನ್ನು ಏರಿಸಿಕೊಂಡಿರುವ ಯುವಕರು ಈಗಾಗಲೆ ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸತೊಡಗಿದ್ದಾರೆ.

ಈ ಕಿಚ್ಚು ಇಷ್ಟಕ್ಕೇ ನಿಲ್ಲುತ್ತದೆಯೇ, ಪಕ್ಕದ ಮನೆ ಸುಟ್ಟರೆ, ಆ ಬೆಂಕಿ ಇಂದಲ್ಲ ನಾಳೆ ನನ್ನ ಮನೆಯನ್ನೂ ಸುಟ್ಟೀತಲ್ಲವೇ ಎಂಬ ಪ್ರಜ್ಞೆ ಮೂಡಬೇಕಿದೆ. ಚುನಾವಣೆಗಳಲ್ಲಿ ಗೆಲ್ಲುವ ಅಲ್ಪಕಾಲೀನ ತಂತ್ರ ಮಾತ್ರವಲ್ಲದೆ ಮತ್ತು ಕೇಸರಿ ಸೈದ್ಧಾಂತಿಕ ನೆಲೆಯ ಶಾಶ್ವತ ಸ್ಥಾಪನೆಗಾಗಿ ಮುಸ್ಲಿಮರು, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರು, ಉದಾರವಾದಿಗಳು, ಪ್ರಜ್ಞಾವಂತರು, ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳನ್ನು ವಿರೋಧಿಸುವ ಯಾರೇ ಇರಲಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಅವರಿಗೆ ಗುಂಡು ಹೊಡೆಯಬೇಕೆಂದು ಕರೆ ನೀಡಲಾಗುತ್ತಿದೆ. ಈ ಕರೆಯನ್ನು ದೇಶದ ಪ್ರಧಾನಮಂತ್ರಿ- ಗೃಹಮಂತ್ರಿ ಪ್ರತ್ಯಕ್ಷ ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ. ಇನ್ನು ಬಂಧನ ಕೇಂದ್ರಗಳು ಆರಂಭ ಆಗತೊಡಗಿವೆ.

ವಿದ್ಯಾರ್ಥಿ ಪರಿಷತ್ತಿನ ಸಂಬಂಧವಿದ್ದ ಬಲಪಂಥೀಯ ಮುಸುಕುಧಾರಿಗಳು ಜೆ.ಎನ್.ಯು ಹಾಸ್ಟೆಲುಗಳ ನುಗ್ಗಿ ವಿದ್ಯಾರ್ಥಿಗಳನ್ನು ತಲೆ ಒಡೆದು ರಕ್ತ ಹರಿಸಿ ತಿಂಗಳೇ ಉರುಳಿತು. ಒಬ್ಬನೇ ಒಬ್ಬನನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿದ ಗೋಪಾಲ ಶರ್ಮನನ್ನು ಅಪ್ರಾಪ್ತ ವಯಸ್ಕನೆಂದು ಸಾರಿ ರಕ್ಷಿಸಲಾಗಿದೆ. ಅತ್ತ ಬೀದರಿನಲ್ಲಿ ಮನೆಗೆಲಸ ಮಾಡಿ ಹೊಟ್ಟೆ ಹೊರೆವ ಮುಸ್ಲಿಂ ತಾಯಿಯನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ. ಹೊರಗಿರುವ ಆಕೆಯ ಒಂಬತ್ತು ವರ್ಷದ ಮಗಳು ಈಗ ಏಕಾಂಗಿ. ಕಾಗದ ತೋರಿಸಬೇಕೆಂದು ತೋರಿಸುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಮಾತು ಇರುವ ನಾಟಕ ಆಡಿಸಿದರೆಂದು ಅಲ್ಪಸಂಖ್ಯಾತ ಶಾಲೆಯೊಂದರ ಮಕ್ಕಳನ್ನು ಪೊಲೀಸರು ಪ್ರಶ್ನಿಸತೊಡಗಿದ್ದಾರೆ. ಗೋಲಿ ಮಾರೋ ಸಾಲೋಂ ಕೋ ಎಂಬುದಾಗಿ ಪ್ರಚೋದಿಸುವವರ ಮೇಲೆ ಕನಿಷ್ಠ ಎಫ್.ಐ.ಆರ್ ಕೂಡ ಇಲ್ಲ.

ನಾಜಿ ಜರ್ಮನಿಯ ಇತಿಹಾಸ ಭಾರತದಲ್ಲಿ ಸುರುಳಿ ಬಿಚ್ಚತೊಡಗಿದೆ. ಅನುಮಾನವೇ ಇಲ್ಲ, ಇದು ದೀರ್ಘ ಇರುಳು. ಆದರೆ ನೆನಪಿಡೋಣ ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಅದೆಷ್ಟೇ ಪ್ರಚಂಡನಾದರೂ ಜನತೆಗಿಂತ ದೊಡ್ಡವನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...