Homeಮುಖಪುಟಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‌ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

ಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‌ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

- Advertisement -
- Advertisement -

ಯಾರಿಗೆಲ್ಲ ಖಲಿಸ್ತಾನ್ ಬೇಕೋ, ಯಾರೆಲ್ಲ ಗಜವಾ-ಏ-ಹಿಂದ್‌ನ ಕನಸು ಕಾಣುತ್ತಾರೋ ಅಥವಾ ಯಾರು ಹಿಂದೂ ರಾಷ್ಟ್ರ ಮಾಡಲು ಬಯಸುತ್ತಾರೋ ಅವರಿಗೆ ಭಾರತದಲ್ಲಿ ಯಾವ ಜಾಗವೂ ಇಲ್ಲ. ಈ ಮೂರೂ ವಿಚಾರಧಾರೆಗಳು ಭಾರತದ ಸ್ವಧರ್ಮದ ವಿರುದ್ಧವಾಗಿವೆ. ಈ ದೇಶವು ಸ್ವಧರ್ಮದಲ್ಲಿ ನಂಬಿಕೆ ಇರಿಸುವ ಎಲ್ಲಾ ಜಾತಿ, ಜನಾಂಗ, ಶ್ರದ್ಧೆ, ಪಂಥ ಹಾಗೂ ಸಂಪ್ರದಾಯದವರಿಗೆ ಸೇರಿದ್ದಾಗಿದೆ ಎಂಬುದು ಭಾರತೀಯ ಗಣತಂತ್ರದ ಮೂಲ ಆಧಾರವಾಗಿದೆ. ಭಾರತ ದೇಶದಲ್ಲಿ ಹುಟ್ಟಿದ ಸಂಯೋಗ ಅಥವಾ ನಂಬಿಕೆಯ ಆಧಾರದ ಮೇಲೆ ಯಾರೂ ಮನೆಯೊಡೆಯ ಅಥವಾ ಯಾರೂ ಬಾಡಿಗೆದಾರರು ಆಗಲು ಸಾಧ್ಯವಿಲ್ಲ.

ಕೇವಲ ವಿಚಾರದ ಆಧಾರದ ಮೇಲೆ ನೋಡಿದರೆ ಈ ಮೂರು ವಿಚಾರಗಳು ಒಂದೇ ತೆರನಾಗಿವೆ. ಮೂರೂ ಸಾಂಸ್ಥಿಕ ಧರ್ಮ ಮತ್ತು ಸರಕಾರವನ್ನು ಜೋಡಿಸಿ ನೋಡುತ್ತವೆ ಹಾಗೂ ಇದು ಅತ್ಯಂತ ಅಪಾಯಕಾರಿಯಾದ ವಿಚಾರವಾಗಿದೆ. ಈ ಮೂರೂ ಒಂದು ಸಾಂಸ್ಥಿಕ ಧರ್ಮದ (ಸಿಖ್, ಇಸ್ಲಾಂ ಅಥವಾ ಹಿಂದೂ) ಅನುಯಾಯಿಗಳದ್ದೇ ಅಧಿಕಾರ ದೇಶದಲ್ಲೆಲ್ಲಾ ನಡೆಯಬೇಕು ಎಂದು ಬಯಸುತ್ತಾರೆ, ಅದು ಅನ್ಯಾಯ ಮಾತ್ರವಲ್ಲ, ಅಸಾಧ್ಯವೂ ಆಗಿದೆ. ಇಂದಿನ ಯುಗದಲ್ಲಿ ಭಾರತದಂತಹ ದೇಶದಲ್ಲಿ, ಅಥವಾ ದೇಶದ ಯಾವುದೇ ಪ್ರದೇಶದಲ್ಲಿ, ಯಾವುದೇ ಸಂಪ್ರದಾಯದ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನ ದೇಶದಲ್ಲಿ ಆಂತರಿಕ ಯುದ್ಧಕ್ಕೆ ಆಹ್ವಾನ ನೀಡಿದಂತಾಗುವುದು ಮತ್ತು ಅದರಿಂದ ಎಲ್ಲರ ಪಾಲಿಗೆ ದೊರಕುವುದು ಕೇವಲ ವಿನಾಶ ಮಾತ್ರ. ಮೂರೂ ವಿಚಾರಗಳು ತಮ್ಮ ವಿಚಾರವನ್ನು ಸಮರ್ಥಿಸಲು ಧರ್ಮ ಗ್ರಂಥಗಳ ಆಸರೆ ಪಡೆದುಕೊಳ್ಳುತ್ತವೆ, ಆದರೆ ಗುರು ಗ್ರಂಥ ಸಾಹಿಬ್, ಕುರಾನ್ ಶರೀಕ್ ಅಥವಾ ಹದೀಸ್ ಅಥವಾ ಹಿಂದೂ ಧರ್ಮ ಗ್ರಂಥಗಳಲ್ಲಿ ಇಂತಹ ಯಾವ ನಿರ್ದೇಶನವೂ ಕಾಣಿಸುವುದಿಲ್ಲ. ಮೂರೂ ವಿಚಾರಗಳು ಭಾರತೀಯ ಸಂವಿಧಾನದ ಮೂಲ ಭಾವನೆಯ ವಿರುದ್ಧವಾಗಿವೆ.

ಅಶೋಕ್ ಗೆಹ್ಲೋಟ್

ಈ ನಿಟ್ಟಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿದ ಈ ಹೇಳಿಕೆ ಅತ್ಯಂತ ಸೂಕ್ತವಾಗಿದೆ; ’ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವುದರಿಂದ ಖಲಿಸ್ತಾನದ ಬೇಡಿಕೆಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ.’ ಒಂದು ವೇಳೆ ದೇಶದ ಸರ್ವೋಚ್ಚ ಸ್ಥಾನಗಳಲ್ಲಿ ಆಸೀನರಾದ ಜನರು ಹಿಂದೂ ರಾಷ್ಟ್ರದ ಮಾತುಗಳನ್ನು ಆಡಬಹುದಾದರೆ ಇದರಿಂದ ಇನ್ನೊಂದು ಸಾಂಸ್ಥಿಕ ಧರ್ಮಾಧಾರಿತ ಸಂಪ್ರದಾಯವೊಂದು ಪ್ರಾಬಲ್ಯದ ಮಾತುಗಳನ್ನು ಆಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ಕೆಲವು ಜನರು ಬಹುಮತದ ಆಧಾರದ ಮೇಲೆ ಹಿಂದೂ ರಾಷ್ಟ್ರದ ವಕಾಲತ್ತು ಮಾಡಿದರೆ ಇತರ ಜನರು ಬೇರಾವುದೋ ಒಂದು ಪ್ರದೇಶದಲ್ಲಿ ಸಿಖ್‌ರ ಪ್ರಾಬಲ್ಯ ಇರಬೇಕೆಂದು ವಕಾಲತ್ತು ಹೂಡುತ್ತಾರೆ. ಮತ್ತೊಬ್ಬರು ಮತ್ತೊಂದಾವುದೋ ಪ್ರದೇಶ ಅಥವಾ ಇಡೀ ದೇಶದಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಅಥವಾ ಇನ್ನೊಂದಾವುದೋ ಮತದ ಅಧಿಪತ್ಯ ಸಾಧಿಸುವ ದಾವೆ ಹೂಡುತ್ತಾರೆ.

ಇದಕ್ಕೆ ಉತ್ತರವಾಗಿ ಖಲಿಸ್ತಾನದಿಂದ ದೇಶದ ವಿಭಜನೆಯಾಗುವುದು, ಹಿಂದೂ ರಾಷ್ಟ್ರ ದೇಶದ ವಿಭಜನೆ ಮಾಡುವುದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಯಾವುದೇ ದೇಶದ ಶಕ್ತಿಶಾಲಿ ಅಥವಾ ಬಹುಸಂಖ್ಯಾತವಾದ ವರ್ಗವು ದೇಶದ ವಿಭಜನೆಯ ವಿಚಾರಕ್ಕೆ ರಾಷ್ಟ್ರವಾದದ ಮುಖವಾಡ ಹಾಕಿರುತ್ತದೆ.

ಪಶ್ಚಿಮ ಪಾಕಿಸ್ತಾನದ ಪಂಜಾಬಿ ಸಮುದಾಯದ ಮೂಲಕ ಉರ್ದು ಹೇರುವ ಪ್ರಯತ್ನವೇ ಪಾಕಿಸ್ತಾನದ ವಿಭಜನೆ ಮಾಡಿತು. ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳಿ ಸಮಾಜದ ಮೂಲಕ ಅಲ್ಪಸಂಖ್ಯಾತ ತಮಿಳು ಮತ್ತು ಹಿಂದೂ ಜನರ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನವೇ ಅಲ್ಲಿ ಪ್ರತ್ಯೇಕತೆಗೆ ಅಡಿಪಾಯ ಹಾಕಿತು. ಇದೇ ರೀತಿಯಲ್ಲಿ ಇಂದು ಭಾರತದಲ್ಲಿ ಹಿಂದೂ ರಾಷ್ಟ್ರದ ಆಗ್ರಹವು ದೇಶವನ್ನು ಮುರಿಯುವ ವಿಚಾರವಾಗಿದೆ.

ಇದನ್ನೂ ಓದಿ: ವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

ಸೈದ್ಧಾಂತಿಕ ನೆಲೆಯನ್ನು ಬಿಟ್ಟು ಒಂದು ವೇಳೆ ರಾಜಕೀಯ ನೆಲೆಯಲ್ಲಿ ನೋಡಿದರೆ ಈ ಮೂರೂ ಬೇಡಿಕೆಗಳ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ವಾಸ್ತವ ಏನೆಂದರೆ ಭಾರತದಲ್ಲಿ ಗಜವಾ-ಏ-ಹಿಂದ್‌ದ ಕಲ್ಪನೆಗೆ ಯಾವುದೇ ನೆಲೆಯಿಲ್ಲ. ಭಾರತದ ಮೇಲೆ ಇಸ್ಲಾಂ ವಶಪಡಿಸಿಕೊಳ್ಳುವ ಕಲ್ಪನೆ ನೂರಾರು ವರ್ಷಗಳ ಹಿಂದೆ ಯಾವುದೋ ವಿದೇಶಿ ಆಕ್ರಮಣಕಾರಿಯ ಮನಸ್ಸಿನಲ್ಲಿ ಖಂಡಿತವಾಗಿಯೂ ಇದ್ದಿರಬಹುದು, ಆದರೆ ಕಾಲಕ್ರಮೇಣ ಇಂತಹ ಎಲ್ಲ ಕಲ್ಪನೆಗಳು ಈ ದೇಶದ ಮಣ್ಣಿನಲ್ಲಿ ಲೀನವಾದವು. ಭಾರತದ ಒಬ್ಬ ಸರಾಸರಿ ಮುಸಲ್ಮಾನನು ಈ ಪದವನ್ನೇ ಕೇಳಿರಲಿಕ್ಕಿಲ್ಲ, ಇದರ ಕನಸು ಕಾಣುವುದಂತೂ ದೂರದ ಮಾತು. ದೇಶದಲ್ಲಿ ಈ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಯಾವುದೇ ರಾಜಕೀಯ ದಳ, ಆಂದೋಲನ ಅಥವಾ ಗುಪ್ತ ಸಂಘಟನೆಯೂ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತರಹದ ಮುಸ್ಲಿಂ ಸಾಂಪ್ರದಾಯಿಕ ಸಂಘಟನೆಗಳು ಅಥವಾ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರೂ ಗಜವಾ-ಏ-ಹಿಂದ್‌ದ ಹೆಸರನ್ನೂ ಉಚ್ಛರಿಸುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ನಡೆಸಲಾಗುತ್ತಿದ್ದ ಅಲ್‌ಕೈದ ಸಂಘಟನೆಯ ಒಂದು ವೆಬ್‌ಸೈಟ್ ಈ ವಿಚಾರವನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡುತ್ತಿದೆ, ಆದರೆ ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಭಾರತದಲ್ಲಿ ಅದಕ್ಕೆ ಯಾವುದೇ ಸಫಲತೆ ಸಿಕ್ಕಿಲ್ಲ. ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿ ಈ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ್ದಾನೆ ಎಂದರೆ ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಅವರು 2022ರ ಚುನಾವಣೆಗೆ ಮುನ್ನ ತನ್ನ ಭಾಷಣದಲ್ಲಿ ಈ ಅಪಾಯವನ್ನು ಉಲ್ಲೇಖಿಸಿದರು, ಆದರೆ ಅದಕ್ಕೆ ಯಾವುದೇ ಪ್ರಮಾಣಗಳನ್ನು ನೀಡಲಿಲ್ಲ. ಒಂದು ವೇಳೆ ನೀವು ಗಜವಾ-ಏ-ಹಿಂದ್ ಎಂಬ ಪದಗುಚ್ಛವನ್ನು ಗೂಗಲ್ ಮಾಡಿದರೆ, ಇದರ ಉಲ್ಲೇಖ ಕೇವಲ ಆರ್‌ಎಸ್‌ಎಸ್‌ಗೆ ಸಂಬಂಧಿತ ಲಿಂಕ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು ಯಾವುದೇ ಭಾರತೀಯ ಮುಸ್ಲಿಂ ವ್ಯಕ್ತಿ ಅಥವಾ ಸಂಘಟನೆಗಳ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಯೋಗಿ ಆದಿತ್ಯನಾಥ

ಖಲಿಸ್ತಾನದ ವಿಚಾರದ ಕೆಲವೇ ಕೆಲವು ಸಮರ್ಥಕರು ದೀರ್ಘ ಕಾಲದಿಂದ ಇದ್ದಾರೆ ಹಾಗೂ ಇತ್ತೀಚಿಗೆ ವಾರಿಸ್ ಏ ಪಂಜಾಬ್‌ನ ಹೆಸರಿನಲ್ಲಿ ಅಮೃತಪಾಲ್ ಸಿಂಗ್ ಮೂಲಕ ಈ ಬೇಡಿಕೆಯನ್ನು ಮತ್ತೊಮ್ಮೆ ಎತ್ತಲಾಗಿದೆ. ನಿಜ ಏನೆಂದರೆ, ಪಂಜಾಬ್‌ನ ಬಹುಸಂಖ್ಯಾತ ಸಿಖ್ ಜನಸಮೂಹವು ಖಲಿಸ್ತಾನದ ವಿಚಾರವನ್ನು ಎಂದೂ ಸಮರ್ಥನೆ ಮಾಡಿಕೊಂಡಿಲ್ಲ. ವಾಸ್ತವದಲ್ಲಿ, ಪಂಜಾಬಿನ ಮೇಲೆ ದೆಹಲಿ ದರಬಾರಿನ ದಾದಾಗಿರಿಯನ್ನು ಪಂಜಾಬಿನ ಜನರು ಇಷ್ಟಪಡುವುದಿಲ್ಲ; ಅವರು ಪಂಜಾಬಿನ ಅಸ್ಮಿತೆಗೆ ಗೌರವ ನೀಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಿಸುವ ಒಂದು ಫೆಡರಲ್ ಭಾರತವನ್ನು ನೋಡಲು ಬಯಸುತ್ತಾರೆ. ಆದರೆ ಅವರು ಖಲಿಸ್ತಾನದಂತಹ ಪ್ರಯೋಗಗಳಿಂದ ಬೇಸತ್ತಿದ್ದಾರೆ. ಪಂಜಾಬಿನಲ್ಲಿ ಗೊತ್ತಿದ್ದವರು ಹೇಳುವುದೇನೆಂದರೆ, ಅಮೃತಪಾಲ್‌ನಂತಹ ಪ್ರತ್ಯೇಕತಾವಾದಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು. ಈಗ ಅವರ ಹಿಂಬಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಇಂತಹ ಯಾವುದೇ ಕ್ರಮವನ್ನು ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವವರ ಮೇಲೆ ಕೈಗೊಳ್ಳಲಾಗುವುದೇ? ಗಜವಾ-ಏ-ಹಿಂದ್‌ನ ಮಾತಂತೂ ಯಾರೂ ಆಡುವುದಿಲ್ಲ, ಖಲಿಸ್ತಾನದ ಮಾತುಗಳನ್ನು ಮೆತ್ತಗೆ ಅಲ್ಲೊಮ್ಮೆ ಇಲ್ಲೊಮ್ಮೆ ಆಡಲಾಗುತ್ತದೆ. ಆದರೆ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಹಿರಂಗವಾಗಿ ಘೋಷಣೆ ಮಾಡಲಾಗುತ್ತದೆ, ಅಲ್ಪಸಂಖ್ಯಾತರ ಮಾರಣಹೋಮ ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತದೆ, ಸಮ್ಮೇಳನಗಳನ್ನು ಮಾಡಿ ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡಲಾಗುತ್ತದೆ. ಹಾಗೂ ಪೊಲೀಸ್ ವ್ಯವಸ್ಥೆ ಇದನ್ನು ಕುಂತಲ್ಲೇ ಕುಳಿತು ನೋಡುತ್ತದೆ. ಇದಷ್ಟೇ ಅಲ್ಲ, ದೇಶದ ಸರ್ವೋನ್ನತ ಸ್ಥಾನಗಳಲ್ಲಿ ಆಸೀನರಾದ ಜನರು ಈ ವಿಚಾರಕ್ಕೆ ತಮ್ಮ ಆಶೀರ್ವಾದ ನೀಡುತ್ತಾರೆ. ಈಗ ನೀವೇ ಯೋಚಿಸಿ, ದೇಶಕ್ಕೆ ನಿಜವಾದ ಅಪಾಯ ಖಲಿಸ್ತಾನದ ವಿಚಾರದಿಂದ ಇದೆಯೇ, ಗಜವಾ-ಏ-ಹಿಂದ್‌ನಿಂದ ಇದೆಯಾ ಅಥವಾ ಹಿಂದೂ ರಾಷ್ಟ್ರದಿಂದ ಇದೆಯಾ? ಹಿಂದೂ ರಾಷ್ಟ್ರದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಖಾಲಿಸ್ತಾನಿಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆಯೇ ಹಾಗೂ ಗಜವಾ-ಏ-ಹಿಂದ್‌ನಂತಹ ಅಸ್ತಿತ್ವದಲ್ಲೇ ಇರದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆಯೇ? ಭಾರತದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. To counter two neighbouring Islamic countries we have to declare india as a Hindu rastra. Hindu rastra means Khalistha too. Hindu rastra means secular country. Hindustan means Hindurastea .
    The real problem is only caste system in India.
    This problem can be resolved if and only if every Indian citizen clean public streets and public toilets at least two hours per month.
    The next problems is Islam.
    We love muslims but not Mohammed Quran and Islam.
    Mohammed Quran and Islam hates khafirs and other religion. Otherwise we would have temples and churches and monasteries in mecca and madeena .
    This problem can be resolved if and only if we could build temples and churches and monasteries in mecca and madeena.
    As far as Christan is concern no problem.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...