Homeಅಂಕಣಗಳುಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

- Advertisement -
- Advertisement -

[ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ದಲಿತರು ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಪ್ರಮಾಣ ಶೇ.51]

ಭರತ ಭೂಮಿಯಲ್ಲಿ ಬಡವರಾಗಿ ಹುಟ್ಟುವುದು ಅಪರಾಧ. ದಲಿತರು ಮತ್ತು ಆದಿವಾಸಿಗಳಾಗಿ ಜನಿಸುವುದು ನೂರುಪಟ್ಟು ಅಪರಾಧ. ದಲಿತರಾಗಿ ರೈತ-ಕಾರ್ಮಿಕರ ಹಕ್ಕುಗಳ ಪರವಾಗಿ ದನಿಯೆತ್ತುವುದೆಂದರೆ ಅವಹೇಳನ, ಬಂಧನ, ಅಪನಿಂದೆ, ಚಿತ್ರಹಿಂಸೆಗಳಿಗೆ ಆಹ್ವಾನ ನೀಡಿದಂತೆಯೇ. ಪಂಜಾಬ್-ಹರಿಯಾಣ ಹೈಕೋರ್ಟಿನಿಂದ ಮೊನ್ನೆ ಜಾಮೀನು ಪಡೆದು 44 ದಿನಗಳ ಬಂಧನದಿಂದ ಹೊರಬಿದ್ದ ನೌದೀಪ್ ಕೌರ್ ಬಡವರಷ್ಟೇ ಅಲ್ಲ ದಲಿತರು. ಮೇಲಾಗಿ ರೈತ ಕಾರ್ಮಿಕರ ಹಕ್ಕುಗಳಿಗೆ ಹೋರಾಡುವ ದಿಟ್ಟ ಹೆಣ್ಣುಮಗಳು.

ಈಕೆಯ ತಾಯಿ ಅಕ್ಕ ತಂಗಿ ಎಲ್ಲ ಹೋರಾಟಗಾರರೇ. ಹುಟ್ಟು ಮತ್ತು ಬಡತನದ ಕಾರಣ ಎದುರಿಸಿದ ದಬ್ಬಾಳಿಕೆಯೇ ಹೋರಾಟವನ್ನು ಕಲಿಸಿಕೊಟ್ಟಿದೆ. ನೌದೀಪ್ ಅಕ್ಕ ರಾಜವೀರ್ ಕೌರ್ ಕೂಡ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಹೆಣ್ಣುಮಗಳು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಅನ್ಯಾಯದ ವಿರುದ್ಧ ಸಿಡಿದೇಳುವ ದಿಟ್ಟತನ ನೌದೀಪ್‌ಗೆ ರಕ್ತಗತ. ತಾಯಿ ಪಂಜಾಬಿನ ಮುಖ್ತಸರ್ ಸಾಹೀಬ್‌ನ ಖೇತ್ ಯೂನಿಯನ್ ಸದಸ್ಯೆ. ಹೋರಾಟಗಳಿಂದಾಗಿ ಜೈಲು ಪಾಲಾಗಿದ್ದಾಕೆ. ತಮ್ಮ ಹಳ್ಳಿಯಲ್ಲಿ ಭೂಹೀನ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿದ ಮೇಲ್ಜಾತಿಯ ಜಮೀನುದಾರನ ವಿರುದ್ಧ ಪ್ರತಿಭಟಿಸಿದಾಕೆ. ಪರಿಣಾಮವಾಗಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ ತೆಲಂಗಾಣಕ್ಕೆ ವಲಸೆ ಹೋಗಬೇಕಾಯಿತು. ತಂದೆ ಹೈದರಾಬಾದಿನಲ್ಲಿ ವಾಹನ ಚಾಲಕ. ನೌದೀಪ್ ಓದುಬರೆಹಕ್ಕೆ ಅಡಚಣೆಯಾಯಿತು. 12ನೆಯ ತರಗತಿಯನ್ನು ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಬೇಕಾಯಿತು. 2019ರಲ್ಲಿ ದೆಹಲಿಗೆ ಬಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಬಯಸಿದರು.

ಅಕ್ಕ ರಾಜವೀರ್ ಜೊತೆ ವಿಶ್ವವಿದ್ಯಾಲಯದ ಭಗತ್ ಸಿಂಗ್ ವಿದ್ಯಾರ್ಥಿ ಐಕ್ಯವೇದಿಕೆಯ ಸದಸ್ಯೆಯಾಗಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದರು. ದೇಶದ್ರೋಹದ ಆರೋಪ ಹೊತ್ತು ಜೈಲು ಪಾಲಾಗಿರುವ ವಿದ್ಯಾರ್ಥಿ ನಾಯಕಿಯರಾದ ದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ ಸಂಗದಲ್ಲಿ ಹೋರಾಡಿದವರು. ಹಣಕಾಸಿನ ಬಿಕ್ಕಟ್ಟಿನ ಕಾರಣ ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಕೈಗಾರಿಕೆ ಪ್ರದೇಶದ ಕಂಪನಿಯೊಂದನ್ನು ಸೇರಿದರು. ಅಲ್ಲಿ ಕಾರ್ಮಿಕರ ಶೋಷಣೆ ಮತ್ತು ಅವಮಾನ ಕಂಡು ಆಕೆಯ ಮನಸು ಕುದಿಯಿತು. ಕನಿಷ್ಠ ಕೂಲಿ ಕಾಯಿದೆಯ ಪ್ರಕಾರ ಕೂಲಿದರಗಳನ್ನು ನೀಡುವಂತೆ ಆಗ್ರಹಿಸಿದರು. ಮತ್ತು ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದಲ್ಲಿ ಅವರಿಗೂ ಸಮಾನ ವೇತನ ಸಲ್ಲಬೇಕೆಂಬ ಬೇಡಿಕೆ ಇಟ್ಟರು.

ಓವರ್ ಟೈಮ್‌ಗೆ ಪ್ರತ್ಯೇಕವಾಗಿ ಕೂಲಿ ಪಾವತಿಗಾಗಿ ಒತ್ತಾಯಿಸಿದರು. ಈ ದಿಸೆಯಲ್ಲಿ ಮಜದೂರ್ ಅಧಿಕಾರ್ ಸಂಘಟನೆಯನ್ನು ಸೇರಿದರು. ಸಮೀಪದ ಸಿಂಘು ಗಡಿಯಲ್ಲಿ ಜರುಗಿದ್ದ ರೈತ ಹೋರಾಟವನ್ನು ಬೆಂಬಲಿಸಿ 1,200 ಮಂದಿ ಕಾರ್ಮಿಕರನ್ನು ಸಂಘಟಿಸಿ ಮೆರವಣಿಗೆ ನಡೆಸಿದರು. ನಿತ್ಯ 300 ಮಂದಿ ಕಾರ್ಮಿಕರು ರೈತರ ಪರವಾಗಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದರು ನೌದೀಪ್. ಕುಂಡ್ಲಿ ಕೈಗಾರಿಕೆಗಳು ಕಾರ್ಮಿಕರನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದು, ರೈತ ಆಂದೋಲನವನ್ನು ಬೆಂಬಲಿಸಿದ ಕಾರಣಕ್ಕಾಗಿ ಅನೇಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಹೀಗೆ ಬಂಧನಕ್ಕೆ ಮುನ್ನವೇ ನೌದೀಪ್ ಕೂಡ ಉದ್ಯೋಗ ಕಳೆದುಕೊಳ್ಳಬೇಕಾಗಿತ್ತು.

PC : Sabrang India

ಉತ್ತರಪ್ರದೇಶ, ಬಿಹಾರ, ಪಂಜಾಬಿನಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಎರಡು ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಕುಂಡ್ಲಿ ಕೈಗಾರಿಕೆ ಪ್ರದೇಶದಲ್ಲಿ ಕೂಲಿಗಾಗಿ ಸೇರಿದ್ದಾರೆ. ಇವರ ಪೈಕಿ ವಿಶೇಷವಾಗಿ ಭೂಹೀನ ರೈತರು, ಬಡರೈತರು, ದಲಿತರು, ಮುಸಲ್ಮಾನರದೇ ದೊಡ್ಡ ಸಂಖ್ಯೆ.

ಪುರುಷ ಪೊಲೀಸರು ರಾತ್ರಿಯ ವೇಳೆ ನೌದೀಪ್ ಅವರನ್ನು ಕುಂಡ್ಲಿ ಕೈಗಾರಿಕೆ ಪ್ರದೇಶದ ನಿರ್ಜನ ಪ್ರದೇಶಕ್ಕೆ ಎಳೆದೊಯ್ಯುತ್ತಾರೆ. ಥಳಿಸಿ ಚಿತ್ರಹಿಂಸೆ ನೀಡುತ್ತಾರೆ. ವ್ಯಾನಿನಲ್ಲಿ, ಪೊಲೀಸ್ ಠಾಣೆಯಲ್ಲಿ ಮತ್ತೆ ಮತ್ತೆ ಥಳಿಸುತ್ತಾರೆ, ಗುಪ್ತಾಂಗಗಳ ಮೇಲೆ ಲಾಠಿ ಬೂಟುಗಳಿಂದ ಬಾರಿಸುತ್ತಾರೆ. ರಕ್ತಸ್ರಾವವಾಗುತ್ತದೆ. ಇಬ್ಬಿಬ್ಬರು ಮೈಮೇಲೆ ಕುಳಿತು ಖಾಲಿ ಕಾಗದದ ಮೇಲೆ ಬಲವಂತವಾಗಿ ರುಜು ಹಾಕಿಸಿಕೊಳ್ಳುತ್ತಾರೆ. ಜಾತಿಯ ಹೆಸರಿಡಿದು ಅಶ್ಲೀಲ ಬೈಗುಳ ಬೈಯ್ಯುತ್ತಾರೆ. ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಕಪಾಳಕ್ಕೆ ಬಾರಿಸಿದ್ದಾರೆ. ಕೆಲ ದಿನಗಳ ಕಾಲ ನಡೆದಾಡುವುದೂ ನೌದೀಪ್‌ಗೆ ದುಸ್ತರವಾಗಿದೆ. ಚರಂಡಿ ಗಟಾರ ಸ್ವಚ್ಛ ಮಾಡುವ ಕುಲದಲ್ಲಿ ಹುಟ್ಟಿದ ನೀನು ರೈತ- ಕಾರ್ಮಿಕ ಪ್ರತಿಭಟನೆಗೆ ಯಾಕೆ ಬಂದಿದ್ದೀ ಎಂದು ಅವಹೇಳನ ಮಾಡಿದ್ದಾರೆ. ಮತ್ತು ಥಳಿಸಿದ ಮತ್ತು ನಿಂದಿಸಿದ ಆರೋಪಗಳನ್ನು ಎಂದಿನಂತೆ ತಳ್ಳಿ ಹಾಕಿದ್ದಾರೆ ಕೂಡ.

ಆಕೆಯೊಂದಿಗೆ ದಸ್ತಗಿರಿಯಾದ ಮತ್ತೊಬ್ಬ ಯುವ ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರನ್ನೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ. ಎಡಗೈ ಮತ್ತು ಬಲಪಾದದಲ್ಲಿ ಮೂಳೆಗಳು ಮುರಿದಿವೆ. ನೌದೀಪ್‌ಗೆ ಎರಡು ಸಲ ಜಾಮೀನು ನಿರಾಕರಿಸಲಾಗುತ್ತದೆ. ಮಂದ ದೃಷ್ಟಿಯ ಆತ ಕನ್ನಡಕವನ್ನು ಧರಿಸಲು ಕೂಡ ಅವಕಾಶ ಕೊಡದೆ ಅಪಹರಿಸಿ ಹಲವು ದಿನಗಳ ಕಾಲ ಅನಧಿಕೃತ ಬಂಧನದಲ್ಲಿ ಇರಿಸಿ ಚಿತ್ರಹಿಂಸೆ ನೀಡಿದ್ದಾರೆ. ಇಲ್ಲಿಯವರೆಗೆ ಆತನ ಭೇಟಿಗೆ ಯಾರಿಗೂ ಅವಕಾಶ ನೀಡಲಾಗಿಲ್ಲ.

ಕಾರ್ಮಿಕರು ಮತ್ತು ರೈತರು ದೈಹಿಕ ಶ್ರಮವನ್ನೇ ನಂಬಿ ಬದುಕುವ ಶ್ರಮಜೀವಿಗಳು. ಇಬ್ಬರೂ ಉತ್ಪಾದಕರು. ರೈತ ಹೊಲಗದ್ದೆಗಳಲ್ಲಿ ಉತ್ಪಾದಿಸಿದರೆ, ಕಾರ್ಮಿಕರು ಗಿರಣಿಗಳಲ್ಲಿ ಉತ್ಪಾದನೆಯಲ್ಲಿ ತೊಡಗಿಕೊಂಡವರು. ಸರ್ಕಾರಗಳು ಈ ಇಬ್ಬರ ಹಕ್ಕುಗಳನ್ನೂ ಬಿಕರಿಗಿಟ್ಟಿದೆ. ಸರ್ಕಾರಿ ಉದ್ಯಮಗಳು ಕಂಪನಿಗಳನ್ನು ಮಾರಾಟಕ್ಕಿಡಲಾಗಿದೆ. ಹೀಗಾಗಿ ಇಬ್ಬರೂ ಒಟ್ಟಾಗಿ ಹೋರಾಡಬೇಕಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದಿದ್ದರೆ, ರೈತರ ವಿರೋಧೀ ಕಾನೂನುಗಳನ್ನು ರದ್ದು ಮಾಡದೆ ಹೋದರೆ ನಾವು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತೇವೆ. ಕಂಪನಿಗಳಿಗೆ ಬೀಗ ಹಾಕಿಸುತ್ತೇವೆ ಎಂಬ ನೌದೀಪ್ ಹೇಳಿಕೆ ಕಾರ್ಖಾನೆಗಳ ಮಾಲೀಕರನ್ನು ಕೆರಳಿಸಿತ್ತು.

ದಲಿತ ಜಾತಿ ಮತ್ತು ಬಡವರ್ಗಕ್ಕೆ ಸೇರಿದ ಕಾರಣವೇ ಮುಖ್ಯವಾಹಿನಿ ಮಾಧ್ಯಮಗಳು ನೌದೀಪ್ ಅವರ ಬಂಧನ ಮತ್ತು ಚಿತ್ರಹಿಂಸೆಯನ್ನು ನಿರ್ಲಕ್ಷಿಸಿದವು. ಭಾರತದಲ್ಲಿ ದಲಿತರು ಆದಿವಾಸಿಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.39. ದೇಶದ ಜೈಲು ಪಾಲಾಗಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಈ ಸಮುದಾಯಗಳ ಪ್ರಮಾಣ ಶೇ.51.

ಶೋಷಣೆ, ಬಡತನ, ಪೂರ್ವಗ್ರಹಗಳು, ಅನಕ್ಷರತೆ, ತಾರತಮ್ಯಕ್ಕೆ ಬಲಿಯಾಗುತ್ತಿರುವ, ದನಿ ಸತ್ತ ಜನಸಮುದಾಯಗಳಿವು.

ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಸರ್ಕಾರಿ ಅಂಕಿಅಂಶ ಕಟುಸತ್ಯದ ಕತೆಯನ್ನು ಕಿರುಚಿ ಹೇಳುತ್ತಿದೆ. ಉಳ್ಳವರ ಕಿವಿಗಳ ಮೇಲೆ ಅದು ಬೀಳುತ್ತಿಲ್ಲ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...