Homeಅಂಕಣಗಳುಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

- Advertisement -
- Advertisement -

[ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ದಲಿತರು ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಪ್ರಮಾಣ ಶೇ.51]

ಭರತ ಭೂಮಿಯಲ್ಲಿ ಬಡವರಾಗಿ ಹುಟ್ಟುವುದು ಅಪರಾಧ. ದಲಿತರು ಮತ್ತು ಆದಿವಾಸಿಗಳಾಗಿ ಜನಿಸುವುದು ನೂರುಪಟ್ಟು ಅಪರಾಧ. ದಲಿತರಾಗಿ ರೈತ-ಕಾರ್ಮಿಕರ ಹಕ್ಕುಗಳ ಪರವಾಗಿ ದನಿಯೆತ್ತುವುದೆಂದರೆ ಅವಹೇಳನ, ಬಂಧನ, ಅಪನಿಂದೆ, ಚಿತ್ರಹಿಂಸೆಗಳಿಗೆ ಆಹ್ವಾನ ನೀಡಿದಂತೆಯೇ. ಪಂಜಾಬ್-ಹರಿಯಾಣ ಹೈಕೋರ್ಟಿನಿಂದ ಮೊನ್ನೆ ಜಾಮೀನು ಪಡೆದು 44 ದಿನಗಳ ಬಂಧನದಿಂದ ಹೊರಬಿದ್ದ ನೌದೀಪ್ ಕೌರ್ ಬಡವರಷ್ಟೇ ಅಲ್ಲ ದಲಿತರು. ಮೇಲಾಗಿ ರೈತ ಕಾರ್ಮಿಕರ ಹಕ್ಕುಗಳಿಗೆ ಹೋರಾಡುವ ದಿಟ್ಟ ಹೆಣ್ಣುಮಗಳು.

ಈಕೆಯ ತಾಯಿ ಅಕ್ಕ ತಂಗಿ ಎಲ್ಲ ಹೋರಾಟಗಾರರೇ. ಹುಟ್ಟು ಮತ್ತು ಬಡತನದ ಕಾರಣ ಎದುರಿಸಿದ ದಬ್ಬಾಳಿಕೆಯೇ ಹೋರಾಟವನ್ನು ಕಲಿಸಿಕೊಟ್ಟಿದೆ. ನೌದೀಪ್ ಅಕ್ಕ ರಾಜವೀರ್ ಕೌರ್ ಕೂಡ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಹೆಣ್ಣುಮಗಳು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಅನ್ಯಾಯದ ವಿರುದ್ಧ ಸಿಡಿದೇಳುವ ದಿಟ್ಟತನ ನೌದೀಪ್‌ಗೆ ರಕ್ತಗತ. ತಾಯಿ ಪಂಜಾಬಿನ ಮುಖ್ತಸರ್ ಸಾಹೀಬ್‌ನ ಖೇತ್ ಯೂನಿಯನ್ ಸದಸ್ಯೆ. ಹೋರಾಟಗಳಿಂದಾಗಿ ಜೈಲು ಪಾಲಾಗಿದ್ದಾಕೆ. ತಮ್ಮ ಹಳ್ಳಿಯಲ್ಲಿ ಭೂಹೀನ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿದ ಮೇಲ್ಜಾತಿಯ ಜಮೀನುದಾರನ ವಿರುದ್ಧ ಪ್ರತಿಭಟಿಸಿದಾಕೆ. ಪರಿಣಾಮವಾಗಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ ತೆಲಂಗಾಣಕ್ಕೆ ವಲಸೆ ಹೋಗಬೇಕಾಯಿತು. ತಂದೆ ಹೈದರಾಬಾದಿನಲ್ಲಿ ವಾಹನ ಚಾಲಕ. ನೌದೀಪ್ ಓದುಬರೆಹಕ್ಕೆ ಅಡಚಣೆಯಾಯಿತು. 12ನೆಯ ತರಗತಿಯನ್ನು ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಬೇಕಾಯಿತು. 2019ರಲ್ಲಿ ದೆಹಲಿಗೆ ಬಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಬಯಸಿದರು.

ಅಕ್ಕ ರಾಜವೀರ್ ಜೊತೆ ವಿಶ್ವವಿದ್ಯಾಲಯದ ಭಗತ್ ಸಿಂಗ್ ವಿದ್ಯಾರ್ಥಿ ಐಕ್ಯವೇದಿಕೆಯ ಸದಸ್ಯೆಯಾಗಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದರು. ದೇಶದ್ರೋಹದ ಆರೋಪ ಹೊತ್ತು ಜೈಲು ಪಾಲಾಗಿರುವ ವಿದ್ಯಾರ್ಥಿ ನಾಯಕಿಯರಾದ ದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ ಸಂಗದಲ್ಲಿ ಹೋರಾಡಿದವರು. ಹಣಕಾಸಿನ ಬಿಕ್ಕಟ್ಟಿನ ಕಾರಣ ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಕೈಗಾರಿಕೆ ಪ್ರದೇಶದ ಕಂಪನಿಯೊಂದನ್ನು ಸೇರಿದರು. ಅಲ್ಲಿ ಕಾರ್ಮಿಕರ ಶೋಷಣೆ ಮತ್ತು ಅವಮಾನ ಕಂಡು ಆಕೆಯ ಮನಸು ಕುದಿಯಿತು. ಕನಿಷ್ಠ ಕೂಲಿ ಕಾಯಿದೆಯ ಪ್ರಕಾರ ಕೂಲಿದರಗಳನ್ನು ನೀಡುವಂತೆ ಆಗ್ರಹಿಸಿದರು. ಮತ್ತು ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದಲ್ಲಿ ಅವರಿಗೂ ಸಮಾನ ವೇತನ ಸಲ್ಲಬೇಕೆಂಬ ಬೇಡಿಕೆ ಇಟ್ಟರು.

ಓವರ್ ಟೈಮ್‌ಗೆ ಪ್ರತ್ಯೇಕವಾಗಿ ಕೂಲಿ ಪಾವತಿಗಾಗಿ ಒತ್ತಾಯಿಸಿದರು. ಈ ದಿಸೆಯಲ್ಲಿ ಮಜದೂರ್ ಅಧಿಕಾರ್ ಸಂಘಟನೆಯನ್ನು ಸೇರಿದರು. ಸಮೀಪದ ಸಿಂಘು ಗಡಿಯಲ್ಲಿ ಜರುಗಿದ್ದ ರೈತ ಹೋರಾಟವನ್ನು ಬೆಂಬಲಿಸಿ 1,200 ಮಂದಿ ಕಾರ್ಮಿಕರನ್ನು ಸಂಘಟಿಸಿ ಮೆರವಣಿಗೆ ನಡೆಸಿದರು. ನಿತ್ಯ 300 ಮಂದಿ ಕಾರ್ಮಿಕರು ರೈತರ ಪರವಾಗಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದರು ನೌದೀಪ್. ಕುಂಡ್ಲಿ ಕೈಗಾರಿಕೆಗಳು ಕಾರ್ಮಿಕರನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದು, ರೈತ ಆಂದೋಲನವನ್ನು ಬೆಂಬಲಿಸಿದ ಕಾರಣಕ್ಕಾಗಿ ಅನೇಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಹೀಗೆ ಬಂಧನಕ್ಕೆ ಮುನ್ನವೇ ನೌದೀಪ್ ಕೂಡ ಉದ್ಯೋಗ ಕಳೆದುಕೊಳ್ಳಬೇಕಾಗಿತ್ತು.

PC : Sabrang India

ಉತ್ತರಪ್ರದೇಶ, ಬಿಹಾರ, ಪಂಜಾಬಿನಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಎರಡು ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಕುಂಡ್ಲಿ ಕೈಗಾರಿಕೆ ಪ್ರದೇಶದಲ್ಲಿ ಕೂಲಿಗಾಗಿ ಸೇರಿದ್ದಾರೆ. ಇವರ ಪೈಕಿ ವಿಶೇಷವಾಗಿ ಭೂಹೀನ ರೈತರು, ಬಡರೈತರು, ದಲಿತರು, ಮುಸಲ್ಮಾನರದೇ ದೊಡ್ಡ ಸಂಖ್ಯೆ.

ಪುರುಷ ಪೊಲೀಸರು ರಾತ್ರಿಯ ವೇಳೆ ನೌದೀಪ್ ಅವರನ್ನು ಕುಂಡ್ಲಿ ಕೈಗಾರಿಕೆ ಪ್ರದೇಶದ ನಿರ್ಜನ ಪ್ರದೇಶಕ್ಕೆ ಎಳೆದೊಯ್ಯುತ್ತಾರೆ. ಥಳಿಸಿ ಚಿತ್ರಹಿಂಸೆ ನೀಡುತ್ತಾರೆ. ವ್ಯಾನಿನಲ್ಲಿ, ಪೊಲೀಸ್ ಠಾಣೆಯಲ್ಲಿ ಮತ್ತೆ ಮತ್ತೆ ಥಳಿಸುತ್ತಾರೆ, ಗುಪ್ತಾಂಗಗಳ ಮೇಲೆ ಲಾಠಿ ಬೂಟುಗಳಿಂದ ಬಾರಿಸುತ್ತಾರೆ. ರಕ್ತಸ್ರಾವವಾಗುತ್ತದೆ. ಇಬ್ಬಿಬ್ಬರು ಮೈಮೇಲೆ ಕುಳಿತು ಖಾಲಿ ಕಾಗದದ ಮೇಲೆ ಬಲವಂತವಾಗಿ ರುಜು ಹಾಕಿಸಿಕೊಳ್ಳುತ್ತಾರೆ. ಜಾತಿಯ ಹೆಸರಿಡಿದು ಅಶ್ಲೀಲ ಬೈಗುಳ ಬೈಯ್ಯುತ್ತಾರೆ. ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಕಪಾಳಕ್ಕೆ ಬಾರಿಸಿದ್ದಾರೆ. ಕೆಲ ದಿನಗಳ ಕಾಲ ನಡೆದಾಡುವುದೂ ನೌದೀಪ್‌ಗೆ ದುಸ್ತರವಾಗಿದೆ. ಚರಂಡಿ ಗಟಾರ ಸ್ವಚ್ಛ ಮಾಡುವ ಕುಲದಲ್ಲಿ ಹುಟ್ಟಿದ ನೀನು ರೈತ- ಕಾರ್ಮಿಕ ಪ್ರತಿಭಟನೆಗೆ ಯಾಕೆ ಬಂದಿದ್ದೀ ಎಂದು ಅವಹೇಳನ ಮಾಡಿದ್ದಾರೆ. ಮತ್ತು ಥಳಿಸಿದ ಮತ್ತು ನಿಂದಿಸಿದ ಆರೋಪಗಳನ್ನು ಎಂದಿನಂತೆ ತಳ್ಳಿ ಹಾಕಿದ್ದಾರೆ ಕೂಡ.

ಆಕೆಯೊಂದಿಗೆ ದಸ್ತಗಿರಿಯಾದ ಮತ್ತೊಬ್ಬ ಯುವ ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರನ್ನೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ. ಎಡಗೈ ಮತ್ತು ಬಲಪಾದದಲ್ಲಿ ಮೂಳೆಗಳು ಮುರಿದಿವೆ. ನೌದೀಪ್‌ಗೆ ಎರಡು ಸಲ ಜಾಮೀನು ನಿರಾಕರಿಸಲಾಗುತ್ತದೆ. ಮಂದ ದೃಷ್ಟಿಯ ಆತ ಕನ್ನಡಕವನ್ನು ಧರಿಸಲು ಕೂಡ ಅವಕಾಶ ಕೊಡದೆ ಅಪಹರಿಸಿ ಹಲವು ದಿನಗಳ ಕಾಲ ಅನಧಿಕೃತ ಬಂಧನದಲ್ಲಿ ಇರಿಸಿ ಚಿತ್ರಹಿಂಸೆ ನೀಡಿದ್ದಾರೆ. ಇಲ್ಲಿಯವರೆಗೆ ಆತನ ಭೇಟಿಗೆ ಯಾರಿಗೂ ಅವಕಾಶ ನೀಡಲಾಗಿಲ್ಲ.

ಕಾರ್ಮಿಕರು ಮತ್ತು ರೈತರು ದೈಹಿಕ ಶ್ರಮವನ್ನೇ ನಂಬಿ ಬದುಕುವ ಶ್ರಮಜೀವಿಗಳು. ಇಬ್ಬರೂ ಉತ್ಪಾದಕರು. ರೈತ ಹೊಲಗದ್ದೆಗಳಲ್ಲಿ ಉತ್ಪಾದಿಸಿದರೆ, ಕಾರ್ಮಿಕರು ಗಿರಣಿಗಳಲ್ಲಿ ಉತ್ಪಾದನೆಯಲ್ಲಿ ತೊಡಗಿಕೊಂಡವರು. ಸರ್ಕಾರಗಳು ಈ ಇಬ್ಬರ ಹಕ್ಕುಗಳನ್ನೂ ಬಿಕರಿಗಿಟ್ಟಿದೆ. ಸರ್ಕಾರಿ ಉದ್ಯಮಗಳು ಕಂಪನಿಗಳನ್ನು ಮಾರಾಟಕ್ಕಿಡಲಾಗಿದೆ. ಹೀಗಾಗಿ ಇಬ್ಬರೂ ಒಟ್ಟಾಗಿ ಹೋರಾಡಬೇಕಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದಿದ್ದರೆ, ರೈತರ ವಿರೋಧೀ ಕಾನೂನುಗಳನ್ನು ರದ್ದು ಮಾಡದೆ ಹೋದರೆ ನಾವು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತೇವೆ. ಕಂಪನಿಗಳಿಗೆ ಬೀಗ ಹಾಕಿಸುತ್ತೇವೆ ಎಂಬ ನೌದೀಪ್ ಹೇಳಿಕೆ ಕಾರ್ಖಾನೆಗಳ ಮಾಲೀಕರನ್ನು ಕೆರಳಿಸಿತ್ತು.

ದಲಿತ ಜಾತಿ ಮತ್ತು ಬಡವರ್ಗಕ್ಕೆ ಸೇರಿದ ಕಾರಣವೇ ಮುಖ್ಯವಾಹಿನಿ ಮಾಧ್ಯಮಗಳು ನೌದೀಪ್ ಅವರ ಬಂಧನ ಮತ್ತು ಚಿತ್ರಹಿಂಸೆಯನ್ನು ನಿರ್ಲಕ್ಷಿಸಿದವು. ಭಾರತದಲ್ಲಿ ದಲಿತರು ಆದಿವಾಸಿಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.39. ದೇಶದ ಜೈಲು ಪಾಲಾಗಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಈ ಸಮುದಾಯಗಳ ಪ್ರಮಾಣ ಶೇ.51.

ಶೋಷಣೆ, ಬಡತನ, ಪೂರ್ವಗ್ರಹಗಳು, ಅನಕ್ಷರತೆ, ತಾರತಮ್ಯಕ್ಕೆ ಬಲಿಯಾಗುತ್ತಿರುವ, ದನಿ ಸತ್ತ ಜನಸಮುದಾಯಗಳಿವು.

ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಸರ್ಕಾರಿ ಅಂಕಿಅಂಶ ಕಟುಸತ್ಯದ ಕತೆಯನ್ನು ಕಿರುಚಿ ಹೇಳುತ್ತಿದೆ. ಉಳ್ಳವರ ಕಿವಿಗಳ ಮೇಲೆ ಅದು ಬೀಳುತ್ತಿಲ್ಲ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...