Homeಎಚ್.ಎಸ್.ದೊರೆಸ್ವಾಮಿಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

ಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

- Advertisement -
- Advertisement -

ಕರ್ನಾಟಕಕ್ಕೊಂದು ಸವಾಲು ಎದುರಾಗಿದೆ- ಇದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ಸು ಒಡೆದ ಮನೆಯಾಗಿದೆ. ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕೋಲಾರದ ಮುನಿಯಪ್ಪನವರ ನಾಯಕತ್ವ ಕೋಲಾರಕ್ಕೆ ಸೀಮಿತವಾಗಿತ್ತು. ಈಗ ಅದೂ ಇಲ್ಲವಾಗಿದೆ. ಅಲ್ಲೂ ಅವರಿಗೆ ಎದುರಾಳಿಗಳು ಹುಟ್ಟಿಕೊಂಡು ಅವರ ವರ್ಚಸ್ಸು ಕಡಿಮೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮತ್ತು ದೊಡ್ಡ ನಾಯಕರಾದರೂ, ಅವರ ಪ್ರಭಾವ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾಗಿತ್ತು. ಅವರು ನಾಯಕತ್ವ ವಿಸ್ತಾರಗೊಳಿಸುವ ಸಾಮಥ್ರ್ಯ ಹೊಂದಿದ್ದಾರೆ. ಎಚ್.ಕೆ.ಪಾಟೀಲರು ಉತ್ತರ ಕರ್ನಾಟಕದ ಎತ್ತರಕ್ಕೆ ಬೆಳೆದ ನಾಯಕರು. ಸಾರ್ವಜನಿಕ ಜೀವನವನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಮಾಜ ಸೇವಕರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯದಲ್ಲಿ ಅವರಿನ್ನೂ ದೊಡ್ಡ ಹೆಜ್ಜೆಗಳನ್ನು ಹಾಕಿಲ್ಲ. ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ ಚುನಾವಣೆ ನಡೆಸುವ ದೊಡ್ಡ ಜವಾಬ್ದಾರಿಯನ್ನು ಪಾಟೀಲರಿಗೆ ವಹಿಸಲಾಗಿತ್ತು. ಅದನ್ನು ನಿಭಾಯಿಸುವುದರಲ್ಲಿ ಅವರು ಫಲಕಾರಿಯಾಗಿಲ್ಲ.

ಪರಮೇಶ್ವರರು ಬುದ್ಧಿವಂತರು, ರಾಜಕೀಯ ಬಲ್ಲವರು. ಅವರು ತಮ್ಮ ತಂದೆಯವರ ಮೂಸೆಯಲ್ಲಿ ಬೆಳೆದವರು. ಆದರೆ ಅವರಿಗೆ Dashing ಸ್ವಭಾವ ಇಲ್ಲ. ಸಂಘಟನೆ ಮಾಡುವ ಅನುಭವವಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 3-4 ಸಾರಿ ಕಾಂಗ್ರೆಸ್ ಜಯಗಳಿಸಿರುವುದು ನಿಜ. ಅದು ಅವರ ಅದೃಷ್ಟ ಎಂದು ಹೇಳಬಹುದೇ ಹೊರತು ಅವರ ರಾಜಕೀಯ ಕೌಶಲದಿಂದ ಆದ ಗೆಲುವು ಎಂದು ಹೇಳಲು ಪುರಾವೆಗಳಿಲ್ಲ.

ಇನ್ನುಳಿದಂತೆ ಹಾಳೂರಿಗೆ ಉಳಿದವನೇ ಒಡೆಯ ಎಂಬ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಭಿನ್ನ. ಆಡಳಿತದ ಅನುಭವವುಳ್ಳವರು. ನಾಯಕತ್ವದ ಲಕ್ಷಣ ಉಳ್ಳವರು, ರಾಮಕೃಷ್ಣ ಹೆಗ್ಡೆ, ದೇವೇಗೌಡರ ಮೂಸೆಯಲ್ಲಿ ಬೆಳೆದು ಬಂದವರು. ಸ್ವಲ್ಪ ಮಟ್ಟಿಗೆ ಮೈನಾರಿಟಿಗಳಲ್ಲಿ ಮೈನಾರಿಟಿಗಳಾದ ದೇವರಾಜ ಅರಸರಂತೆ ಅಲ್ಪಸಂಖ್ಯಾತರ ಏಳ್ಗೆಯ ಬಗೆಗೆ ಗಮನ ಹರಿಸುವವರು. ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಹೆಚ್ಚಿನ ವರ್ಚಸ್ಸಿನ ವ್ಯಕ್ತಿ ಸಿದ್ದರಾಮಯ್ಯ. ಆದರೆ ಇವರು ಕೊನೆಯ ಪಕ್ಷ ರಾಮಕೃಷ್ಣ ಹೆಗ್ಡೆ, ದೇವರಾಜ ಅರಸರು, ದೇವೇಗೌಡರಷ್ಟು ದಕ್ಷ ಹೋರಾಟಗಾರರಲ್ಲ ಎಂಬುದು ಕಟುಸತ್ಯ. ಆದ್ದರಿಂದ ಸಿದ್ದರಾಮಯ್ಯ ಮೊದಲುಗೊಂಡು ಇತರ ನಾಯಕರು ತಮ್ಮ Ego ಬಿಟ್ಟು ಸಾಮೂಹಿಕ ನಾಯಕತ್ವ ವಹಿಸಿಕೊಂಡರೆ ಮಾತ್ರ ಕರ್ನಾಟಕ ಕಾಂಗ್ರೆಸ್‍ಗೆ ಭವಿಷ್ಯ ಇರುವುದು. ಇವರು ಸ್ಥಾನಮಾನಗಳನ್ನು ನ್ಯಾಯಯುತವಾಗಿ ಹಂಚಿಕೊಂಡು, ಒಟ್ಟಾಗಿ ನಿಂತು ಸಂಘರ್ಷಕ್ಕೆ ಇಳಿದರೆ ಮಾತ್ರ ಮೋದಿ ಮತ್ತು ಶಾರವರ onslaughtನ್ನು ಎದುರಿಸಲು ಸಾಧ್ಯವಾದೀತು.

ನನ್ನ ದೃಷ್ಟಿಯಲ್ಲಿ ಮೋದಿ ಈಗ ಕರ್ನಾಟಕವನ್ನು ಬಿಜೆಪಿ ವಶಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅವರು ಲಿಂಗಾಯತ, ಒಕ್ಕಲಿಗರ ಎರಡು ರಾಜಕೀಯ ಬಲಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದಾರೆ. ಈ ಎರಡು ಬಣಗಳನ್ನು ಒಡೆದರೆ ತನ್ನ ಗುರಿ ಸಾಧನೆಯಾದೀತೆಂದು ನಂಬಿದ್ದಾರೆ. ಇಂಗ್ಲಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ಶಾ ಮತ್ತು ಮೋದಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಪ್ರಯೋಗ ಮಾಡಲು ತೀರ್ಮಾನಿಸಿರುವಂತಿದೆ. ಯಡಿಯೂರಪ್ಪನವರನ್ನು ಬಹಳಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರು ಬಿಡುವುದಿಲ್ಲ. ಅವರ ರಾಜೀನಾಮೆ ಪಡೆದು, ರಾಷ್ಟ್ರಾಧ್ಯಕ್ಷರ ಆಡಳಿತ ಹೇರಿ ಆರು ತಿಂಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ಅವರದು. ಈ ಪ್ರಯೋಗಕ್ಕೆ ಇದು ಸಕಾಲ ಎಂಬುದು ಅವರ ಲೆಕ್ಕಾಚಾರ.

ಲಿಂಗಾಯತರಿಗೆ ಶಾಸನಸಭೆಗೆ ಸಾಕಷ್ಟು ಸೀಟು ಕೊಟ್ಟಿಲ್ಲ. ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಹಲವು ಲಿಂಗಾಯತ ಮಠಗಳೂ ಡಿಮ್ಯಾಂಡಿಡುವುದು ಸರ್ವೇ ಸಾಮಾನ್ಯ ವಿಷಯ. ಇಷ್ಟರ ಮಟ್ಟಿಗೆ ಲಿಂಗಾಯತ ಮಠಗಳು ರಾಜಕೀಯಕ್ಕೆ ಕೈ ಹಾಕುವುದನ್ನು ಅನೇಕ ಸಾರಿ ಕಂಡಿದ್ದೇವೆ. ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದ್ಯವೇ ಸರಿ. ಅವರೆಡೆಗೆ ಲಿಂಗಾಯಿತ ಮಠಗಳಿಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮೋದಿಯ strategy ಒಕ್ಕಲಿಗ ಲಿಂಗಾಯತರನ್ನು ಬೇರ್ಪಡಿಸುವುದೇ ಆಗಿದೆ. ಲಿಂಗಾಯತರನ್ನು ಒಲಿಸಿಕೊಳ್ಳಲು ಲಿಂಗಾಯತ ಮಠಗಳ ಸಹಾಯ ಪಡೆಯುವುದು, ಒಕ್ಕಲಿಗ ನಾಯಕರನ್ನು ಮೂಲೆ ಗುಂಪು ಮಾಡುವುದು ಮೋದಿ-ಶಾ ಲೆಕ್ಕಾಚಾರ. ಕರ್ನಾಟಕದಲ್ಲಿ ಇರುವ ಪ್ರಭಾವಶಾಲಿ ಜಾತಿಗಳು ಇವೆರಡೇ. ಇವರನ್ನು ಒಡೆದರೆ ನಮ್ಮ ಪತಾಕೆ ಹಾರಿಸಬಹುದು ಎಂಬುದು ಮೋದಿ ಅವರ ಅಂಬೋಣ.

ಕರ್ನಾಟಕದಲ್ಲಿ ಒಕ್ಕಲಿಗರನ್ನು ಒಂದುಗೂಡಿಸುವ ರಾಜಕೀಯ ಶಕ್ತಿಯಾಗಿದ್ದವರು ಎಂದರೆ ದೇವೇಗೌಡರು, ಕುಮಾರಸ್ವಾಮಿಯವರು. ಮನೆತನದ ರಾಜಕೀಯಕ್ಕೆ ಬದ್ಧ ದೇವೇಗೌಡರನ್ನೂ ಇದುವರೆಗೂ ಒಕ್ಕಲಿಗರು ಪ್ರಶ್ನಿಸಿದ್ದಿಲ್ಲ. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ 7 ಸ್ಥಾನಗಳಲ್ಲಿ 3ನ್ನು ದೇವೇಗೌಡರು ತಮ್ಮ ಮನೆಗೆ ಕೊಂಡೊಯ್ದರು. ಅವುಗಳಲ್ಲಿ ಒಂದನ್ನು ಗೆದ್ದು ಎರಡರಲ್ಲಿ ಸೋತರು. ಈಗ ಒಕ್ಕಲಿಗರು ದೇವೇಗೌಡರನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭ ಮಾಡಿದ್ದಾರೆ. ಅವರ ವರ್ಚಸ್ಸು ಕುಗ್ಗುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಪ್ರಾಬಲ್ಯವನ್ನು ಕಡಿಮೆ ಮಾಡುವ ಹುನ್ನಾರ ಮಾಡಲೇಬೇಕೆಂದು ಮೋದಿ ತೀರ್ಮಾನಿಸಿದ್ದಾರೆ. ದೇವೇಗೌಡರಿಗೆ ಅದಕ್ಕಿಂತ ಮುಖ್ಯವಾಗಿ, ಒಕ್ಕಲಿಗ ಜನಾಂಗಕ್ಕೇ ಇದು ಒಂದು ಸವಾಲು.

ಆ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಜಾತಿವಾದಿಯಾಗಿಲ್ಲ. ಜಾತಿ ಪದ್ಧತಿ ರದ್ದಾಗಬೇಕೆನ್ನುವವನು ನಾನು. ಆದರೆ ಒಂದು ಬಣವನ್ನೇ ನಾಶ ಮಾಡುವುದಕ್ಕೆ ಅಥವಾ ನಿರ್ವೀಯರನ್ನಾಗಿ ಮಾಡುವುದಕ್ಕೆ ನಾನು ಕಡು ವಿರೋಧಿ. ಆದ್ದರಿಂದ ನನ್ನದು ಈ ನಿಲುವು.

ಒಕ್ಕಲಿಗರು ಮೈ ಕೊಡವಿಕೊಂಡು ಎದ್ದು ಮೋದಿಯವರ ಈ ಸವಾಲನ್ನು ಎದುರಿಸಲು ಸೆಡ್ಡು ಹೊಡೆಯಬೇಕು. ಕೂಡಲೇ ಒಕ್ಕಲಿಗ ನಾಯಕರು, ಲಿಂಗಾಯತ ಮಠಗಳ ಸಂಪರ್ಕ ಮಾಡಿ, ನಾವು ಹಿಂದಿನಂತೆಯೇ ಸಾಮರಸ್ಯದಿಂದ ಬಾಳುವ ಸಂಕಲ್ಪ ಮಾಡೋಣವೆಂದು ಪಕ್ಷ ಭೇದ ಮರೆತು ಮನವರಿಕೆ ಮಾಡಿಕೊಡಬೇಕು. ‘ಆಲಸ್ಯಂ ಅಮೃತಂ ವಿಷಂ’.

ಸಿದ್ದರಾಮಯ್ಯನವರಿಗೂ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೂ ಸಖ್ಯ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಕರ್ನಾಟಕ ಕಾಂಗ್ರೆಸ್ಸು ನೆಲ ಕಚ್ಚುವುದು ಹಾಗೂ ದೇವೇಗೌಡರ ವರ್ಚಸ್ಸು ಇಳಿಮುಖವಾಗುವ ಸಾಧ್ಯತೆಗಳಿವೆ. ಆ ಉಭಯರೂ ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಒಬ್ಬರಿಗೊಬ್ಬರು ಸ್ನೇಹಹಸ್ತ ನೀಡಬೇಕು. ಕಾಂಗ್ರೆಸ್ ಮತ್ತು ದೇವೇಗೌಡರ ಪಕ್ಷ ಎರಡೂ ತನ್ನ ಎಡವಟ್ಟುಗಳನ್ನು ಮನಗಂಡು, ಹೊಸ ಒಡಂಬಡಿಕೆ ಮಾಡಿಕೊಂಡು ಕೂಡಿ ಹೋರಾಡಬೇಕು. ನಿನ್ನದು ಎರಡು ಕಣ್ಣು ಹೋಗುವುದಾದರೆ, ನನ್ನದು ಒಂದು ಕಣ್ಣು ಹೋದರು ಸರಿ ಎಂದು ಸಿದ್ದರಾಮಯ್ಯ ಮೊದಲುಗೊಂಡು ಎಲ್ಲರೂ ತೀರ್ಮಾನಕ್ಕೆ ಬಂದಿದ್ದರೆ, ಮೋದಿಯವರ ಕೈಗೆ ಕರ್ನಾಟಕವನ್ನು ನೀವೇ ಕರೆದು ಒಪ್ಪಿಸಿದಂತೆ ಆಗುತ್ತದೆ. ಹೀಗೆ ನೀವಿಬ್ಬರು ಅವಿವೇಕಿಗಳಂತೆ ವರ್ತಿಸಿದರೆ, ಜನ ನಿಮ್ಮನ್ನು ಸುಮ್ಮನೆ ಬಿಡೊಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...