Homeಕರ್ನಾಟಕನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಮೋದಿಯ ನೋಟ್ ಬ್ಯಾನ್: ಅರವಿಂದ ಜತ್ತಿಯವರ ರಾಜ್ಯಸಭಾ ಸದಸ್ಯತ್ವದ ಕನಸು ಹಾಗೂ ಹಲವು ಕತ್ತೆಗಳು ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಸನ್ಮಾನ್ಯ ಶ್ರೀ ಅರವಿಂದ ಜತ್ತಿಯವರಿಗೆ ರಾಜ್ಯಸಭೆಯ ಕನಸುಗಳು ಬೀಳುವುದಕ್ಕೆ ಶುರುವಾಗಿ ಐದು ವರ್ಷಗಳು ಗತಿಸಿ ಹೋದವು. ತಮ್ಮ ಕನಸಿಗಾಗಿ ಅವರು ಪ್ರಧಾನಿ ಮೋದಿಯವರನ್ನು ಆಗಾಗ ಹೋಗಳುತ್ತಲೆ ಇರುತ್ತಾರೆ. ಮೋದಿಯವರು ಏನೇ ಮಾಡಿದರು ಅದು ಅವರಿಗೆ ದಿವ್ಯವಾಗಿ ಕಂಡುಬರುತ್ತದೆ. ಆ ಕುರಿತು ಮೆದುಳು ಬೆಳೆಯದ ಮಕ್ಕಳು ಕೂಗುವಂತೆ ಮೋದಿ ಮೋದಿ ಮೋದಿ ಎಂದು ಕೂಗುವ ಮೂಲಕ ತಮ್ಮ ಮನದ ಇಂಗಿತವನ್ನು ಮತ್ತೊಂದು ರೂಪದಲ್ಲಿ ಹೊರ ಹಾಕುತ್ತಾರೆ.

ಪ್ರಧಾನಿ ಮೋದಿಯವರನ್ನು ನಿತ್ಯ, ಕ್ಷಣ ಕ್ಷಣವೂ ಹೊಗಳಲಿ. ರಾಜ್ಯ ಸಭೆಯ ಸದಸ್ಯರೂ ಆಗಲಿ ಯಾರ ತಕರಾರು ಇಲ್ಲ. ಆದರೆ ಮೋದಿ ಹೊಗಳುವ ಭರದಲ್ಲಿ “ನೋಟು ಅಮಾನ್ಯೀಕರಣದ ಕುರಿತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಉಲ್ಲೇಖಿಸಿದ್ದರು. ಈಗ ಅದು ನಿಜವಾಗಿದೆ. ಈ ವಿಷಯವನ್ನು ಪ್ರಧಾನಿ ಮೋದಿಯವರಿಗೆ ಈ ವಿಷಯ ತಿಳಿಸಿದಾಗ ಅವರು ನಿಬ್ಬೆರಗಾಗಿದ್ದರು” ಎಂದು ಪತ್ರಿಕೆಯೊಂದಕ್ಕೆ ಹೇಳೀಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 

ಒಂದು ಕಡೆಯಲ್ಲಿ ಸಮಾನತವಾದಿ ಬಸವಣ್ಣ ಮತ್ತೊಂದು ಕಡೆಯಲ್ಲಿ ಮನುವಾದವನ್ನು ಎತ್ತಿ ಹಿಡಿಯುವ ಮೋದಿ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ನಾವು ಅನಿವಾರ್ಯವಾಗಿ ಪ್ರಶ್ನಿಸಲೆಬೇಕಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ ! ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂದ ಬಸವಣ್ಣನವರೆಲ್ಲಿ, ರಾಮ ಮಂದಿರ ಕಟ್ಟಲೇಬೇಕು ಎಂಬ ತುಡಿತ ಇರುವ ಮೋದಿಯವರೆಲ್ಲಿ ? ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವವರು ಬಿ.ಜೆ.ಪಿಗರು. ಇದನ್ನು ಇಡೀ ರಾಷ್ಟ್ರದ ಜನತೆ ಬಲ್ಲುದು. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವ ಬಸವಣ್ಣನವರದು. ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ್ದು ಬಸವಣ್ಣನವರಾದರೆ ಮೋದಿ ನೇತೃತ್ವದ ಸರಕಾರ ಮಹಿಳೆಗೆ ಮತ್ತೆ ಕಟ್ಟಳೆಗಳನ್ನು ವಿಧಿಸಿ ಮನುವಾದವನ್ನು ಮುನ್ನೆಲೆಗೆ ತರಲು ಹಾತೊರೆಯುತ್ತದೆ.

ಭಾರತದ ಸಂವಿಧಾನ ಬೇರೆ ಅಲ್ಲ, ಬಸವಾದಿ ಶರಣರು ಬರೆದ ವಚನಗಳು ಬೇರೆ ಅಲ್ಲವೇ ಅಲ್ಲ. ಎರಡೂ ಒಂದರೊಳಗೆ ಒಂದು ಹಾಸು ಹೊಕ್ಕಾಗಿ ಇರುವಂಥವು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಬದುಕಿದ ಶರಣರು ಸುಖಿಯಾದ ಸಮಾಜವನ್ನು ಕಟ್ಟಲು ಸಾಧ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರರವರು ನಮಗಾಗಿ ಕಟ್ಟಿಕೊಟ್ಟ ಭಾರತೀಯ ಸಂವಿಧಾನ ವಿಶ್ವದ ಸಂವಿಧಾನದಲ್ಲಿಯೇ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮೋದಿ ಸರಕಾರದ ಕೆಲವು ಮಂತ್ರಿಗಳೆ ಬೀದಿಯಲ್ಲಿ ನಿಂತು ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಹೇಳುತ್ತಾರೆ. ಈ ಮಾತುಗಳ ಪ್ರಚೋದನೆ ಪಡೆದ ಕೆಲವು ಅಬ್ಬೆಪಾರಿ ಜನಗಳು ಸಂವಿಧಾನದ ಪ್ರತಿಯನ್ನು ದೆಹಲಿಯ ಸಂಸತ್ತಿನ ಮುಂದೆಯೇ ಸುಡುತ್ತಾರೆ. ಇದನ್ನು ಕಂಡೂ ಕಾಣದಂತೆ ಮೋದಿಯವರು ದೊಡ್ಡ ಕೌದಿಯನ್ನು ತಮ್ಮ ಕಣ್ಣ ಮೇಲೆ ಹಾಕಿಕೊಂಡು ಕುಳಿತ್ತಿದ್ದಾರಲ್ಲ ! ಇದೆಲ್ಲ ನಮ್ಮ ಅರವಿಂದ ಜತ್ತಿಯವರಿಗೆ ಕಾಣುವುದಿಲ್ಲವೆ ?

ನೋಟು ಅಮಾನ್ಯೀಕರಣವನ್ನು ದೇಶದ ಮಹತ್ವದ ಆರ್ಥಿಕ ಚಿಂತಕ ಮನಮೋಹನ ಸಿಂಗ್ “ವ್ಯವಸ್ಥಿತ ಸಂಘಟಿತ ಲೂಟಿ’’ ಎಂದು ಜರಿದರು. ಇವತ್ತಿಗೂ ಬಡವರು, ಮಧ್ಯಮ ವರ್ಗದ ಜನ ನೋಟು ಅಮಾನ್ಯೀಕರಣದ ಬಿಸಿಗೆ ಬೀದಿಗೆ ಬಿದ್ದಿದ್ದಾರೆ. ನೊಂದವರ ನೋವ ಅರಿಯುವುದೆ ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಸಮಿತಿಯ ಆಯಿಲ್ ಪೆಂಟ್ ಜತ್ತಿಯವರಿಗೆ ಇದು ಕಾಣಲಿಲ್ಲವೇಕೆ ? ತಮ್ಮ ಯಾವುದೋ ಒಂದು ವೈಯಕ್ತಿಕ ಬಯಕೆಗೆ ಲಿಂಗಾಯತ ಧರ್ಮದ ತತ್ವಗಳನ್ನು ಬಲಿಕೊಡುವುದು ಎಷ್ಟು ಸರಿ ?

ಶರಣರು ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಹೇಳಿಲ್ಲ. ಆದರೆ ಜತ್ತಿಯವರು ಮಾತ್ರ ಅದೆಲ್ಲಿಯ ವಚನ ಅಧ್ಯಯನ ಮಾಡಿದರೊ ಕಾಣೆ. ನೋಟು ಅಮಾನ್ಯೀಕರಣದ ಕುರಿತು ಶರಣರು ಹೇಳಿದ್ದಾರೆಂದು ಜತ್ತಿಯವರು ಹೇಳಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಅಧ್ಯಯನ ಮಾಡಿದಂತೆ ವಚನದಲ್ಲಿ ತೆರಿಗೆಯನ್ನು ವಂಚಿಸಬಾರದು ಎಂದಿದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಲಿಂಗ ಸಂಬಂಧಿಯಾದಡೆ
ಜಂಗಮ ಪ್ರೇಮಿ ನೀನಾಗು.
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ
ಜಂಗಮದಲ್ಲಿ ನಿರುತ ಭರಿತ
ಕೂಡಲಸಂಗಮದೇವಾ

ಇದರಲ್ಲಿ ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಚಕಾರ ಶಬ್ಧವೂ ಇಲ್ಲ. ಜತ್ತಿಯವರ ದಿವ್ಯ ದೃಷ್ಟಿಯಲ್ಲಿ ಕಂಡಿದ್ದರೆ ಅದನ್ನವರು ನಮಗೆಲ್ಲ ತಿಳಿಸಿಕೊಡಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರು ಬಸವಾದಿ ಶರಣರ ಡುಬ್ಬದ ಮೇಲೆ ಕುಳಿತು ತಮ್ಮ ಮೆರವಣಿಗೆ ಉರವಣಿಗೆ ನಡೆಸಿಕೊಂಡು ದೊಡ್ಡವರಾಗಿ ಮೆರೆದಿದ್ದಾರೆ. ಈಗ ಬಸವಣ್ಣನವರ ಹೆಸರಿನ ಮೇಲೆ ಸಮಿತಿ, ಪ್ರತಿಷ್ಠಾನ, ಕೇಂದ್ರಗಳ ಆರ್ಭಟ ನಡೆದಿದೆ. ಈ ಸೂಕ್ಷ್ಮವನ್ನು ಲಿಂಗಾಯತರು ಈಗ ಅರಿತಿದ್ದಾರೆ. ಹಿಂದೊಮ್ಮೆ ತಮ್ಮ ಬಸವ ಸಮಿತಿಯಿಂದ ಹೊರಡುವ ಪತ್ರಿಕೆಯ ಮುಖ ಪುಟದಲ್ಲಿ ಸರ್ವಜ್ಞನ ವಚನವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬಸಳಸಿಕೊಂಡಿದ್ದರು.

ಬಸವ ಸಮಿತಿ (ಪೀಠ)ವೂ ಎದ್ದು
ಒಸೆದು ನಾಣ್ಯವು ಹುಟ್ಟಿ
ಬಸವನಾ ಮುದ್ರೆ ಮೆರೆದಾವು ಲೋಕವವಗೆ ವಶವಾಗದಿಹುದೆ ಸರ್ವಜ್ಞ !

ಇದನ್ನು ಓದಿ: ಬಸವಣ್ಣ ಮತ್ತು ಅಕ್ಷಯ ತೃತೀಯ

ಸರ್ವಜ್ಞ ಬಳಸಿದ ಪೀಠ ಎಂಬ ಪದ ಹೃದಯ ಪೀಠ ಎಂದು ಅರ್ಥೈಸಿಕೊಳ್ಳದಷ್ಟು ದಡ್ಡರೇನು ಜತ್ತಿಯವರಲ್ಲ, ಮುದ್ದಾಂ ಆಗಿಯೆ ಈ ತಪ್ಪುಗಳನ್ನು ಮಾಡುವ ಮೂಲಕ ದೊಡ್ಡವರಾಗಬೇಕೆಂದು ಬಯಸುತ್ತಾರೆ. ಕೆಂಭೂತ ನವಿಲಿನಂತೆ ಕುಣಿಯಬಹುದು ಆದರೆ ಅದು ನವಿಲಾಗಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯರ ಗುಲಾಮರಾಗಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಲಿಂಗಾಯತ ಧರ್ಮದವರನ್ನು ಯಾರಿಗೂ ಒತ್ತೆ ಇಡಬೇಡಿ.

ವೇದವ ಮೀರಿದ ಮಹಾವೇದಿಗಳು ಲಿಂಗವಂತರು
ಶಾಸ್ತ್ರವ ಮೀರಿದ ಮಹಾಶಾಸ್ತ್ರಜ್ಞರು ಲಿಂಗವಂತರು
ಪುರಾಣವ ಮೀರಿದ ಮಹಾಪುರಾಣಿಕರು ಲಿಂಗವಂತರು
ಲಿಂಗವಂತ ನಡೆ, ನುಡಿ ಭಿನ್ನಕಾಣಿರೋ
ಎಂಬ ನಗೆ ಮಾರಿತಂದೆಗಳ ಮಾತು ಅರಿತು ಜತ್ತಿಯವರು ನಡೆಯಬೇಕಿದೆ. ಕುದುರೆಗೆ ಕುದುರೆ, ಕತ್ತೆಗೆ ಕತ್ತೆ ಎಂದೆನ್ನದೆ ಕತ್ತೆಗೆ ಕುದುರೆ ಅಂದರೆ ಜನ ಅದನ್ನು ಅರಿಯದಷ್ಟು ದಡ್ಡರಲ್ಲ. ಹಲವು ಕತ್ತೆಗಳ ನಡುವೆ ಕುದುರೆ ಜಾತಿ ಕಳೆದ ಹೋಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...