Homeಕರ್ನಾಟಕನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಮೋದಿಯ ನೋಟ್ ಬ್ಯಾನ್: ಅರವಿಂದ ಜತ್ತಿಯವರ ರಾಜ್ಯಸಭಾ ಸದಸ್ಯತ್ವದ ಕನಸು ಹಾಗೂ ಹಲವು ಕತ್ತೆಗಳು ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಸನ್ಮಾನ್ಯ ಶ್ರೀ ಅರವಿಂದ ಜತ್ತಿಯವರಿಗೆ ರಾಜ್ಯಸಭೆಯ ಕನಸುಗಳು ಬೀಳುವುದಕ್ಕೆ ಶುರುವಾಗಿ ಐದು ವರ್ಷಗಳು ಗತಿಸಿ ಹೋದವು. ತಮ್ಮ ಕನಸಿಗಾಗಿ ಅವರು ಪ್ರಧಾನಿ ಮೋದಿಯವರನ್ನು ಆಗಾಗ ಹೋಗಳುತ್ತಲೆ ಇರುತ್ತಾರೆ. ಮೋದಿಯವರು ಏನೇ ಮಾಡಿದರು ಅದು ಅವರಿಗೆ ದಿವ್ಯವಾಗಿ ಕಂಡುಬರುತ್ತದೆ. ಆ ಕುರಿತು ಮೆದುಳು ಬೆಳೆಯದ ಮಕ್ಕಳು ಕೂಗುವಂತೆ ಮೋದಿ ಮೋದಿ ಮೋದಿ ಎಂದು ಕೂಗುವ ಮೂಲಕ ತಮ್ಮ ಮನದ ಇಂಗಿತವನ್ನು ಮತ್ತೊಂದು ರೂಪದಲ್ಲಿ ಹೊರ ಹಾಕುತ್ತಾರೆ.

ಪ್ರಧಾನಿ ಮೋದಿಯವರನ್ನು ನಿತ್ಯ, ಕ್ಷಣ ಕ್ಷಣವೂ ಹೊಗಳಲಿ. ರಾಜ್ಯ ಸಭೆಯ ಸದಸ್ಯರೂ ಆಗಲಿ ಯಾರ ತಕರಾರು ಇಲ್ಲ. ಆದರೆ ಮೋದಿ ಹೊಗಳುವ ಭರದಲ್ಲಿ “ನೋಟು ಅಮಾನ್ಯೀಕರಣದ ಕುರಿತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಉಲ್ಲೇಖಿಸಿದ್ದರು. ಈಗ ಅದು ನಿಜವಾಗಿದೆ. ಈ ವಿಷಯವನ್ನು ಪ್ರಧಾನಿ ಮೋದಿಯವರಿಗೆ ಈ ವಿಷಯ ತಿಳಿಸಿದಾಗ ಅವರು ನಿಬ್ಬೆರಗಾಗಿದ್ದರು” ಎಂದು ಪತ್ರಿಕೆಯೊಂದಕ್ಕೆ ಹೇಳೀಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 

ಒಂದು ಕಡೆಯಲ್ಲಿ ಸಮಾನತವಾದಿ ಬಸವಣ್ಣ ಮತ್ತೊಂದು ಕಡೆಯಲ್ಲಿ ಮನುವಾದವನ್ನು ಎತ್ತಿ ಹಿಡಿಯುವ ಮೋದಿ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ನಾವು ಅನಿವಾರ್ಯವಾಗಿ ಪ್ರಶ್ನಿಸಲೆಬೇಕಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ ! ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂದ ಬಸವಣ್ಣನವರೆಲ್ಲಿ, ರಾಮ ಮಂದಿರ ಕಟ್ಟಲೇಬೇಕು ಎಂಬ ತುಡಿತ ಇರುವ ಮೋದಿಯವರೆಲ್ಲಿ ? ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವವರು ಬಿ.ಜೆ.ಪಿಗರು. ಇದನ್ನು ಇಡೀ ರಾಷ್ಟ್ರದ ಜನತೆ ಬಲ್ಲುದು. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವ ಬಸವಣ್ಣನವರದು. ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ್ದು ಬಸವಣ್ಣನವರಾದರೆ ಮೋದಿ ನೇತೃತ್ವದ ಸರಕಾರ ಮಹಿಳೆಗೆ ಮತ್ತೆ ಕಟ್ಟಳೆಗಳನ್ನು ವಿಧಿಸಿ ಮನುವಾದವನ್ನು ಮುನ್ನೆಲೆಗೆ ತರಲು ಹಾತೊರೆಯುತ್ತದೆ.

ಭಾರತದ ಸಂವಿಧಾನ ಬೇರೆ ಅಲ್ಲ, ಬಸವಾದಿ ಶರಣರು ಬರೆದ ವಚನಗಳು ಬೇರೆ ಅಲ್ಲವೇ ಅಲ್ಲ. ಎರಡೂ ಒಂದರೊಳಗೆ ಒಂದು ಹಾಸು ಹೊಕ್ಕಾಗಿ ಇರುವಂಥವು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಬದುಕಿದ ಶರಣರು ಸುಖಿಯಾದ ಸಮಾಜವನ್ನು ಕಟ್ಟಲು ಸಾಧ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರರವರು ನಮಗಾಗಿ ಕಟ್ಟಿಕೊಟ್ಟ ಭಾರತೀಯ ಸಂವಿಧಾನ ವಿಶ್ವದ ಸಂವಿಧಾನದಲ್ಲಿಯೇ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮೋದಿ ಸರಕಾರದ ಕೆಲವು ಮಂತ್ರಿಗಳೆ ಬೀದಿಯಲ್ಲಿ ನಿಂತು ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಹೇಳುತ್ತಾರೆ. ಈ ಮಾತುಗಳ ಪ್ರಚೋದನೆ ಪಡೆದ ಕೆಲವು ಅಬ್ಬೆಪಾರಿ ಜನಗಳು ಸಂವಿಧಾನದ ಪ್ರತಿಯನ್ನು ದೆಹಲಿಯ ಸಂಸತ್ತಿನ ಮುಂದೆಯೇ ಸುಡುತ್ತಾರೆ. ಇದನ್ನು ಕಂಡೂ ಕಾಣದಂತೆ ಮೋದಿಯವರು ದೊಡ್ಡ ಕೌದಿಯನ್ನು ತಮ್ಮ ಕಣ್ಣ ಮೇಲೆ ಹಾಕಿಕೊಂಡು ಕುಳಿತ್ತಿದ್ದಾರಲ್ಲ ! ಇದೆಲ್ಲ ನಮ್ಮ ಅರವಿಂದ ಜತ್ತಿಯವರಿಗೆ ಕಾಣುವುದಿಲ್ಲವೆ ?

ನೋಟು ಅಮಾನ್ಯೀಕರಣವನ್ನು ದೇಶದ ಮಹತ್ವದ ಆರ್ಥಿಕ ಚಿಂತಕ ಮನಮೋಹನ ಸಿಂಗ್ “ವ್ಯವಸ್ಥಿತ ಸಂಘಟಿತ ಲೂಟಿ’’ ಎಂದು ಜರಿದರು. ಇವತ್ತಿಗೂ ಬಡವರು, ಮಧ್ಯಮ ವರ್ಗದ ಜನ ನೋಟು ಅಮಾನ್ಯೀಕರಣದ ಬಿಸಿಗೆ ಬೀದಿಗೆ ಬಿದ್ದಿದ್ದಾರೆ. ನೊಂದವರ ನೋವ ಅರಿಯುವುದೆ ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಸಮಿತಿಯ ಆಯಿಲ್ ಪೆಂಟ್ ಜತ್ತಿಯವರಿಗೆ ಇದು ಕಾಣಲಿಲ್ಲವೇಕೆ ? ತಮ್ಮ ಯಾವುದೋ ಒಂದು ವೈಯಕ್ತಿಕ ಬಯಕೆಗೆ ಲಿಂಗಾಯತ ಧರ್ಮದ ತತ್ವಗಳನ್ನು ಬಲಿಕೊಡುವುದು ಎಷ್ಟು ಸರಿ ?

ಶರಣರು ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಹೇಳಿಲ್ಲ. ಆದರೆ ಜತ್ತಿಯವರು ಮಾತ್ರ ಅದೆಲ್ಲಿಯ ವಚನ ಅಧ್ಯಯನ ಮಾಡಿದರೊ ಕಾಣೆ. ನೋಟು ಅಮಾನ್ಯೀಕರಣದ ಕುರಿತು ಶರಣರು ಹೇಳಿದ್ದಾರೆಂದು ಜತ್ತಿಯವರು ಹೇಳಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಅಧ್ಯಯನ ಮಾಡಿದಂತೆ ವಚನದಲ್ಲಿ ತೆರಿಗೆಯನ್ನು ವಂಚಿಸಬಾರದು ಎಂದಿದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಲಿಂಗ ಸಂಬಂಧಿಯಾದಡೆ
ಜಂಗಮ ಪ್ರೇಮಿ ನೀನಾಗು.
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ
ಜಂಗಮದಲ್ಲಿ ನಿರುತ ಭರಿತ
ಕೂಡಲಸಂಗಮದೇವಾ

ಇದರಲ್ಲಿ ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಚಕಾರ ಶಬ್ಧವೂ ಇಲ್ಲ. ಜತ್ತಿಯವರ ದಿವ್ಯ ದೃಷ್ಟಿಯಲ್ಲಿ ಕಂಡಿದ್ದರೆ ಅದನ್ನವರು ನಮಗೆಲ್ಲ ತಿಳಿಸಿಕೊಡಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರು ಬಸವಾದಿ ಶರಣರ ಡುಬ್ಬದ ಮೇಲೆ ಕುಳಿತು ತಮ್ಮ ಮೆರವಣಿಗೆ ಉರವಣಿಗೆ ನಡೆಸಿಕೊಂಡು ದೊಡ್ಡವರಾಗಿ ಮೆರೆದಿದ್ದಾರೆ. ಈಗ ಬಸವಣ್ಣನವರ ಹೆಸರಿನ ಮೇಲೆ ಸಮಿತಿ, ಪ್ರತಿಷ್ಠಾನ, ಕೇಂದ್ರಗಳ ಆರ್ಭಟ ನಡೆದಿದೆ. ಈ ಸೂಕ್ಷ್ಮವನ್ನು ಲಿಂಗಾಯತರು ಈಗ ಅರಿತಿದ್ದಾರೆ. ಹಿಂದೊಮ್ಮೆ ತಮ್ಮ ಬಸವ ಸಮಿತಿಯಿಂದ ಹೊರಡುವ ಪತ್ರಿಕೆಯ ಮುಖ ಪುಟದಲ್ಲಿ ಸರ್ವಜ್ಞನ ವಚನವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬಸಳಸಿಕೊಂಡಿದ್ದರು.

ಬಸವ ಸಮಿತಿ (ಪೀಠ)ವೂ ಎದ್ದು
ಒಸೆದು ನಾಣ್ಯವು ಹುಟ್ಟಿ
ಬಸವನಾ ಮುದ್ರೆ ಮೆರೆದಾವು ಲೋಕವವಗೆ ವಶವಾಗದಿಹುದೆ ಸರ್ವಜ್ಞ !

ಇದನ್ನು ಓದಿ: ಬಸವಣ್ಣ ಮತ್ತು ಅಕ್ಷಯ ತೃತೀಯ

ಸರ್ವಜ್ಞ ಬಳಸಿದ ಪೀಠ ಎಂಬ ಪದ ಹೃದಯ ಪೀಠ ಎಂದು ಅರ್ಥೈಸಿಕೊಳ್ಳದಷ್ಟು ದಡ್ಡರೇನು ಜತ್ತಿಯವರಲ್ಲ, ಮುದ್ದಾಂ ಆಗಿಯೆ ಈ ತಪ್ಪುಗಳನ್ನು ಮಾಡುವ ಮೂಲಕ ದೊಡ್ಡವರಾಗಬೇಕೆಂದು ಬಯಸುತ್ತಾರೆ. ಕೆಂಭೂತ ನವಿಲಿನಂತೆ ಕುಣಿಯಬಹುದು ಆದರೆ ಅದು ನವಿಲಾಗಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯರ ಗುಲಾಮರಾಗಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಲಿಂಗಾಯತ ಧರ್ಮದವರನ್ನು ಯಾರಿಗೂ ಒತ್ತೆ ಇಡಬೇಡಿ.

ವೇದವ ಮೀರಿದ ಮಹಾವೇದಿಗಳು ಲಿಂಗವಂತರು
ಶಾಸ್ತ್ರವ ಮೀರಿದ ಮಹಾಶಾಸ್ತ್ರಜ್ಞರು ಲಿಂಗವಂತರು
ಪುರಾಣವ ಮೀರಿದ ಮಹಾಪುರಾಣಿಕರು ಲಿಂಗವಂತರು
ಲಿಂಗವಂತ ನಡೆ, ನುಡಿ ಭಿನ್ನಕಾಣಿರೋ
ಎಂಬ ನಗೆ ಮಾರಿತಂದೆಗಳ ಮಾತು ಅರಿತು ಜತ್ತಿಯವರು ನಡೆಯಬೇಕಿದೆ. ಕುದುರೆಗೆ ಕುದುರೆ, ಕತ್ತೆಗೆ ಕತ್ತೆ ಎಂದೆನ್ನದೆ ಕತ್ತೆಗೆ ಕುದುರೆ ಅಂದರೆ ಜನ ಅದನ್ನು ಅರಿಯದಷ್ಟು ದಡ್ಡರಲ್ಲ. ಹಲವು ಕತ್ತೆಗಳ ನಡುವೆ ಕುದುರೆ ಜಾತಿ ಕಳೆದ ಹೋಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...