Homeಕರ್ನಾಟಕನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಮೋದಿಯ ನೋಟ್ ಬ್ಯಾನ್: ಅರವಿಂದ ಜತ್ತಿಯವರ ರಾಜ್ಯಸಭಾ ಸದಸ್ಯತ್ವದ ಕನಸು ಹಾಗೂ ಹಲವು ಕತ್ತೆಗಳು ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಸನ್ಮಾನ್ಯ ಶ್ರೀ ಅರವಿಂದ ಜತ್ತಿಯವರಿಗೆ ರಾಜ್ಯಸಭೆಯ ಕನಸುಗಳು ಬೀಳುವುದಕ್ಕೆ ಶುರುವಾಗಿ ಐದು ವರ್ಷಗಳು ಗತಿಸಿ ಹೋದವು. ತಮ್ಮ ಕನಸಿಗಾಗಿ ಅವರು ಪ್ರಧಾನಿ ಮೋದಿಯವರನ್ನು ಆಗಾಗ ಹೋಗಳುತ್ತಲೆ ಇರುತ್ತಾರೆ. ಮೋದಿಯವರು ಏನೇ ಮಾಡಿದರು ಅದು ಅವರಿಗೆ ದಿವ್ಯವಾಗಿ ಕಂಡುಬರುತ್ತದೆ. ಆ ಕುರಿತು ಮೆದುಳು ಬೆಳೆಯದ ಮಕ್ಕಳು ಕೂಗುವಂತೆ ಮೋದಿ ಮೋದಿ ಮೋದಿ ಎಂದು ಕೂಗುವ ಮೂಲಕ ತಮ್ಮ ಮನದ ಇಂಗಿತವನ್ನು ಮತ್ತೊಂದು ರೂಪದಲ್ಲಿ ಹೊರ ಹಾಕುತ್ತಾರೆ.

ಪ್ರಧಾನಿ ಮೋದಿಯವರನ್ನು ನಿತ್ಯ, ಕ್ಷಣ ಕ್ಷಣವೂ ಹೊಗಳಲಿ. ರಾಜ್ಯ ಸಭೆಯ ಸದಸ್ಯರೂ ಆಗಲಿ ಯಾರ ತಕರಾರು ಇಲ್ಲ. ಆದರೆ ಮೋದಿ ಹೊಗಳುವ ಭರದಲ್ಲಿ “ನೋಟು ಅಮಾನ್ಯೀಕರಣದ ಕುರಿತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಉಲ್ಲೇಖಿಸಿದ್ದರು. ಈಗ ಅದು ನಿಜವಾಗಿದೆ. ಈ ವಿಷಯವನ್ನು ಪ್ರಧಾನಿ ಮೋದಿಯವರಿಗೆ ಈ ವಿಷಯ ತಿಳಿಸಿದಾಗ ಅವರು ನಿಬ್ಬೆರಗಾಗಿದ್ದರು” ಎಂದು ಪತ್ರಿಕೆಯೊಂದಕ್ಕೆ ಹೇಳೀಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 

ಒಂದು ಕಡೆಯಲ್ಲಿ ಸಮಾನತವಾದಿ ಬಸವಣ್ಣ ಮತ್ತೊಂದು ಕಡೆಯಲ್ಲಿ ಮನುವಾದವನ್ನು ಎತ್ತಿ ಹಿಡಿಯುವ ಮೋದಿ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ನಾವು ಅನಿವಾರ್ಯವಾಗಿ ಪ್ರಶ್ನಿಸಲೆಬೇಕಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ ! ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂದ ಬಸವಣ್ಣನವರೆಲ್ಲಿ, ರಾಮ ಮಂದಿರ ಕಟ್ಟಲೇಬೇಕು ಎಂಬ ತುಡಿತ ಇರುವ ಮೋದಿಯವರೆಲ್ಲಿ ? ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವವರು ಬಿ.ಜೆ.ಪಿಗರು. ಇದನ್ನು ಇಡೀ ರಾಷ್ಟ್ರದ ಜನತೆ ಬಲ್ಲುದು. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವ ಬಸವಣ್ಣನವರದು. ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ್ದು ಬಸವಣ್ಣನವರಾದರೆ ಮೋದಿ ನೇತೃತ್ವದ ಸರಕಾರ ಮಹಿಳೆಗೆ ಮತ್ತೆ ಕಟ್ಟಳೆಗಳನ್ನು ವಿಧಿಸಿ ಮನುವಾದವನ್ನು ಮುನ್ನೆಲೆಗೆ ತರಲು ಹಾತೊರೆಯುತ್ತದೆ.

ಭಾರತದ ಸಂವಿಧಾನ ಬೇರೆ ಅಲ್ಲ, ಬಸವಾದಿ ಶರಣರು ಬರೆದ ವಚನಗಳು ಬೇರೆ ಅಲ್ಲವೇ ಅಲ್ಲ. ಎರಡೂ ಒಂದರೊಳಗೆ ಒಂದು ಹಾಸು ಹೊಕ್ಕಾಗಿ ಇರುವಂಥವು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಬದುಕಿದ ಶರಣರು ಸುಖಿಯಾದ ಸಮಾಜವನ್ನು ಕಟ್ಟಲು ಸಾಧ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರರವರು ನಮಗಾಗಿ ಕಟ್ಟಿಕೊಟ್ಟ ಭಾರತೀಯ ಸಂವಿಧಾನ ವಿಶ್ವದ ಸಂವಿಧಾನದಲ್ಲಿಯೇ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮೋದಿ ಸರಕಾರದ ಕೆಲವು ಮಂತ್ರಿಗಳೆ ಬೀದಿಯಲ್ಲಿ ನಿಂತು ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಹೇಳುತ್ತಾರೆ. ಈ ಮಾತುಗಳ ಪ್ರಚೋದನೆ ಪಡೆದ ಕೆಲವು ಅಬ್ಬೆಪಾರಿ ಜನಗಳು ಸಂವಿಧಾನದ ಪ್ರತಿಯನ್ನು ದೆಹಲಿಯ ಸಂಸತ್ತಿನ ಮುಂದೆಯೇ ಸುಡುತ್ತಾರೆ. ಇದನ್ನು ಕಂಡೂ ಕಾಣದಂತೆ ಮೋದಿಯವರು ದೊಡ್ಡ ಕೌದಿಯನ್ನು ತಮ್ಮ ಕಣ್ಣ ಮೇಲೆ ಹಾಕಿಕೊಂಡು ಕುಳಿತ್ತಿದ್ದಾರಲ್ಲ ! ಇದೆಲ್ಲ ನಮ್ಮ ಅರವಿಂದ ಜತ್ತಿಯವರಿಗೆ ಕಾಣುವುದಿಲ್ಲವೆ ?

ನೋಟು ಅಮಾನ್ಯೀಕರಣವನ್ನು ದೇಶದ ಮಹತ್ವದ ಆರ್ಥಿಕ ಚಿಂತಕ ಮನಮೋಹನ ಸಿಂಗ್ “ವ್ಯವಸ್ಥಿತ ಸಂಘಟಿತ ಲೂಟಿ’’ ಎಂದು ಜರಿದರು. ಇವತ್ತಿಗೂ ಬಡವರು, ಮಧ್ಯಮ ವರ್ಗದ ಜನ ನೋಟು ಅಮಾನ್ಯೀಕರಣದ ಬಿಸಿಗೆ ಬೀದಿಗೆ ಬಿದ್ದಿದ್ದಾರೆ. ನೊಂದವರ ನೋವ ಅರಿಯುವುದೆ ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಸಮಿತಿಯ ಆಯಿಲ್ ಪೆಂಟ್ ಜತ್ತಿಯವರಿಗೆ ಇದು ಕಾಣಲಿಲ್ಲವೇಕೆ ? ತಮ್ಮ ಯಾವುದೋ ಒಂದು ವೈಯಕ್ತಿಕ ಬಯಕೆಗೆ ಲಿಂಗಾಯತ ಧರ್ಮದ ತತ್ವಗಳನ್ನು ಬಲಿಕೊಡುವುದು ಎಷ್ಟು ಸರಿ ?

ಶರಣರು ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಹೇಳಿಲ್ಲ. ಆದರೆ ಜತ್ತಿಯವರು ಮಾತ್ರ ಅದೆಲ್ಲಿಯ ವಚನ ಅಧ್ಯಯನ ಮಾಡಿದರೊ ಕಾಣೆ. ನೋಟು ಅಮಾನ್ಯೀಕರಣದ ಕುರಿತು ಶರಣರು ಹೇಳಿದ್ದಾರೆಂದು ಜತ್ತಿಯವರು ಹೇಳಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಅಧ್ಯಯನ ಮಾಡಿದಂತೆ ವಚನದಲ್ಲಿ ತೆರಿಗೆಯನ್ನು ವಂಚಿಸಬಾರದು ಎಂದಿದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಲಿಂಗ ಸಂಬಂಧಿಯಾದಡೆ
ಜಂಗಮ ಪ್ರೇಮಿ ನೀನಾಗು.
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ
ಜಂಗಮದಲ್ಲಿ ನಿರುತ ಭರಿತ
ಕೂಡಲಸಂಗಮದೇವಾ

ಇದರಲ್ಲಿ ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಚಕಾರ ಶಬ್ಧವೂ ಇಲ್ಲ. ಜತ್ತಿಯವರ ದಿವ್ಯ ದೃಷ್ಟಿಯಲ್ಲಿ ಕಂಡಿದ್ದರೆ ಅದನ್ನವರು ನಮಗೆಲ್ಲ ತಿಳಿಸಿಕೊಡಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರು ಬಸವಾದಿ ಶರಣರ ಡುಬ್ಬದ ಮೇಲೆ ಕುಳಿತು ತಮ್ಮ ಮೆರವಣಿಗೆ ಉರವಣಿಗೆ ನಡೆಸಿಕೊಂಡು ದೊಡ್ಡವರಾಗಿ ಮೆರೆದಿದ್ದಾರೆ. ಈಗ ಬಸವಣ್ಣನವರ ಹೆಸರಿನ ಮೇಲೆ ಸಮಿತಿ, ಪ್ರತಿಷ್ಠಾನ, ಕೇಂದ್ರಗಳ ಆರ್ಭಟ ನಡೆದಿದೆ. ಈ ಸೂಕ್ಷ್ಮವನ್ನು ಲಿಂಗಾಯತರು ಈಗ ಅರಿತಿದ್ದಾರೆ. ಹಿಂದೊಮ್ಮೆ ತಮ್ಮ ಬಸವ ಸಮಿತಿಯಿಂದ ಹೊರಡುವ ಪತ್ರಿಕೆಯ ಮುಖ ಪುಟದಲ್ಲಿ ಸರ್ವಜ್ಞನ ವಚನವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬಸಳಸಿಕೊಂಡಿದ್ದರು.

ಬಸವ ಸಮಿತಿ (ಪೀಠ)ವೂ ಎದ್ದು
ಒಸೆದು ನಾಣ್ಯವು ಹುಟ್ಟಿ
ಬಸವನಾ ಮುದ್ರೆ ಮೆರೆದಾವು ಲೋಕವವಗೆ ವಶವಾಗದಿಹುದೆ ಸರ್ವಜ್ಞ !

ಇದನ್ನು ಓದಿ: ಬಸವಣ್ಣ ಮತ್ತು ಅಕ್ಷಯ ತೃತೀಯ

ಸರ್ವಜ್ಞ ಬಳಸಿದ ಪೀಠ ಎಂಬ ಪದ ಹೃದಯ ಪೀಠ ಎಂದು ಅರ್ಥೈಸಿಕೊಳ್ಳದಷ್ಟು ದಡ್ಡರೇನು ಜತ್ತಿಯವರಲ್ಲ, ಮುದ್ದಾಂ ಆಗಿಯೆ ಈ ತಪ್ಪುಗಳನ್ನು ಮಾಡುವ ಮೂಲಕ ದೊಡ್ಡವರಾಗಬೇಕೆಂದು ಬಯಸುತ್ತಾರೆ. ಕೆಂಭೂತ ನವಿಲಿನಂತೆ ಕುಣಿಯಬಹುದು ಆದರೆ ಅದು ನವಿಲಾಗಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯರ ಗುಲಾಮರಾಗಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಲಿಂಗಾಯತ ಧರ್ಮದವರನ್ನು ಯಾರಿಗೂ ಒತ್ತೆ ಇಡಬೇಡಿ.

ವೇದವ ಮೀರಿದ ಮಹಾವೇದಿಗಳು ಲಿಂಗವಂತರು
ಶಾಸ್ತ್ರವ ಮೀರಿದ ಮಹಾಶಾಸ್ತ್ರಜ್ಞರು ಲಿಂಗವಂತರು
ಪುರಾಣವ ಮೀರಿದ ಮಹಾಪುರಾಣಿಕರು ಲಿಂಗವಂತರು
ಲಿಂಗವಂತ ನಡೆ, ನುಡಿ ಭಿನ್ನಕಾಣಿರೋ
ಎಂಬ ನಗೆ ಮಾರಿತಂದೆಗಳ ಮಾತು ಅರಿತು ಜತ್ತಿಯವರು ನಡೆಯಬೇಕಿದೆ. ಕುದುರೆಗೆ ಕುದುರೆ, ಕತ್ತೆಗೆ ಕತ್ತೆ ಎಂದೆನ್ನದೆ ಕತ್ತೆಗೆ ಕುದುರೆ ಅಂದರೆ ಜನ ಅದನ್ನು ಅರಿಯದಷ್ಟು ದಡ್ಡರಲ್ಲ. ಹಲವು ಕತ್ತೆಗಳ ನಡುವೆ ಕುದುರೆ ಜಾತಿ ಕಳೆದ ಹೋಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...