Homeಅಂಕಣಗಳುಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

ಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

- Advertisement -
- Advertisement -

29 ಸೆಪ್ಟೆಂಬರ್ ಇದೇ ಹೊತ್ತಿಗೆ ಗಾಂಧಿ ಸಂಚಿಕೆಯ ಕೆಲಸವನ್ನು ಮುಗಿಸಿದ್ದೆವು. ಹದಿನಾರು ಪುಟಗಳ ನಮ್ಮ ಪುಟ್ಟ ವಾರಪತ್ರಿಕೆಯಲ್ಲಿ ಸುಮಾರು ಹತ್ತು ಪುಟಗಳಷ್ಟು ಗಾಂಧಿ ನೆನಪಿಗೆ ಮೀಸಲಿಟ್ಟಿದ್ದೆವು. ಇಂದಿನ ಕಾಲಧರ್ಮಕ್ಕೆ ಗಾಂಧಿ ಚಿಂತನೆಗಳ ಪ್ರಸ್ತುತತೆಯನ್ನು ಚರ್ಚೆ ಮಾಡುವುದು ಅದರ ಉದ್ದೇಶ ಆಗಿತ್ತು. ವಿಶ್ವದೆಲ್ಲೆಡೆ ಬಿಕ್ಕಟ್ಟು ಎದುರಿಸುತ್ತಿರುವ ಸ್ಟೇಟ್ ಅಥವಾ ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಪರಿಕಲ್ಪನೆಯ ಬಗ್ಗೆ, ಆರ್ಥಿಕ ವ್ಯವಸ್ಥೆ ಬಗ್ಗೆ ಗಾಂಧಿ ಅವರ ಚಿಂತನೆಗಳು ಇಂದಿಗೆ ಹೊಸ ಹೊಳಹುಗಳನ್ನು ನೀಡಬಲ್ಲವೇ ಎಂಬುದರ ಬಗ್ಗೆ ನ್ಯಾಯಪಥದ ಹಲವು ಲೇಖಕರು ಚರ್ಚಿಸಿದ್ದರು.

ಗಾಂಧಿ ಚಿಂತನೆಗಳ ಬಗ್ಗೆ ದೇಶದೆಲ್ಲೆಡೆ ನಡೆಯುವ ಇಂತಹ ಹುಡುಕಾಟದಲ್ಲಿ ನಾವೂ ಭಾಗಿಯಾಗಿದ್ದ ಸಮಯದಲ್ಲಿ ಆ ದಿನದಿಂದ ಮುಂದಿನ ಒಂದು ವಾರ ನಡೆದ ಸಂಗತಿಗಳು ಇವತ್ತಿನ ಯುಗಧರ್ಮದ ಬಗ್ಗೆ ಇನ್ನಷ್ಟು ಆತಂಕಕ್ಕೀಡಾಗುವಂತೆ ಮಾಡಿವೆ. zeitgeist ಎಂಬ ಪದ ಈ ದಿನಗಳಲ್ಲಿ ಬಹಳ ಪ್ರಚಲಿತದಲ್ಲಿ ಇದೆ. ಶಬ್ದಕೋಶದ ಪ್ರಕಾರ ಒಂದು ನಿರ್ದಿಷ್ಟ ಕಾಲದ ಚಿಂತನೆಗಳು ಮತ್ತು ನಂಬಿಕೆಗಳ ಅನುಗುಣವಾಗಿ ಜನರು ಒಟ್ಟಾರೆಯಾಗಿ ಪ್ರತಿನಿಧಿಸುವ ಮನೋಧರ್ಮ. ಈ zeitgeist ಮೇಲೆ ಆರೋಪಿಸಿ ಅದರ ಹಿಂದೆ ಅವಿತು ಆತಂಕಕ್ಕೀಡುಮಾಡಿದ ಆ ಸಂಗತಿಗಳನ್ನು ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬಹುದೇ?

photo courtesy : Het Parool

ಗಾಂಧಿ ಜಯಂತಿಗೆ ಇನ್ನು ಎರಡು ದಿನ ಇದೆ ಎನ್ನುವಾಗ ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸದ ಕ್ರಿಮಿನಲ್ ಪ್ರಕರಣದ ತೀರ್ಪು ಸಂಘಪರಿವಾರ ಮತ್ತು ಬಿಜೆಪಿ ಪಕ್ಷಗಳು ತಾವು ಬಹು ದಿನಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ತಿರುಚಿದ ಇತಿಹಾಸಕ್ಕೆ ಸಿಕ್ಕ ಜಯ ಎಂಬಂತೆ ವಿಜಯೋತ್ಸವ ಆಚರಿಸುವುದರೊಂದಿಗೆ ತಣ್ಣಗೆ ಕಳೆದುಹೋಯಿತು. ಬಾಬ್ರಿ ಮಸೀದಿ ಧ್ವಂಸ ಮಾಡುವುದರ ಹಿಂದೆ ಇದ್ದ ಸಂಚಿನ ಬಗ್ಗೆ ಇದ್ದ ಎಷ್ಟೋ ಲಕ್ಷ ಪುಟಗಟ್ಟಲೆ ದಾಖಲೆಗಳು, ವಿಡಿಯೋ ದೃಶ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆದವು. ಈ ತೀರ್ಪಿನ ನಂತರ ನಮ್ಮ ಮಾಧ್ಯಮಗಳಲ್ಲಿ ಅಂತಹ ನಿರೀಕ್ಷಿತ ಆಕ್ರೋಶ ಏನಾದರು ಕಂಡಿತೇ? ಲಂಕೇಶ್, ಪುತಿನರಂತಹ ಸಾಹಿತಿಗಳು ಒಂದು ಧರ್ಮದ ಪ್ರಾರ್ಥನಾ ಮಂದಿರ ಉರುಳಿಸುವುದರ ವಿರುದ್ಧ ಕನ್ನಡ ಮನಸ್ಸುಗಳಿಗೆ ತಿಳಿಸಿಕೊಟ್ಟಿದ್ದ ವಿವೇಕವನ್ನು ಇಂದು ಚಾಲ್ತಿಯಲ್ಲಿರುವ ಅದೆಷ್ಟು ಜನಪ್ರಿಯ ಸಾಹಿತಿಗಳು- ಕಲಾವಿದರು ಈ ಸಮಯದಲ್ಲಿ ನೆನಪಿಸಿಕೊಂಡರು? ಅವರಲ್ಲಿ ಅದೆಷ್ಟು ಜನ ತಮ್ಮ ಪ್ರಭಾವ ಬಳಸಿಕೊಂಡು ಸಾಮಾನ್ಯ ಜನತೆಗೆ ಇದರ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನ ಮಾಡಿದರು? ಇದು zeitgeist ಮೊಮೆಂಟ್ ಎಂದು ಆಲಕ್ಷಿಸಬೇಕೇ? ಸುಪ್ರೀಂ ಕೋರ್ಟ್ ಮತ್ತು ಲಿಬರ್ಹಾನ್ ಆಯೋಗ ಈ ಹಿಂದೆಯೇ ಹೇಳಿರುವಂತೆ ಮಸೀದಿ ಉರುಳಿಸುವುದು ಪೂರ್ವನಿಯೋಜಿತ ಸಂಚಾಗಿತ್ತು ಎಂಬುದನ್ನು ನೆನಪಿಸಿ ಇದರ ವಿರುದ್ಧ ಧ್ವನಿಯೆತ್ತುವಂತೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಒತ್ತಡ ತರಲು ಜನಾಂದೋಲನ ಸೃಷ್ಟಿಸಲು ಸಾಧ್ಯವಾಗುವ ಕಾಲದಲ್ಲಿ ನಾವು ಬದುಕಿದ್ದೇವೆಯೇ?

ಅಕ್ಟೋಬರ್ ಎರಡು – ಗಾಂಧಿ ಜಯಂತಿ ದಿನ. ಗಾಂಧಿ ಜಯಂತಿಯಂದು, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವೂ ಆಗಿರುವುದರಿಂದ, ಅವರನ್ನು ಗಾಂಧಿ ವಿರೋಧಿಯಾಗಿ ಚಿತ್ರಿಸಿ, ಶಾಸ್ತ್ರಿ ಅವರ ಜನ್ಮದಿನವನ್ನು ನಾವು ದೊಡ್ಡದಾಗಿ ಆಚರಿಸಬೇಕು ಎಂದು ತಮ್ಮ ಗಾಂಧಿ ವಿರೋಧಿತನವನ್ನು – ಗೋಡ್ಸೆ ಪ್ರೀತಿಯನ್ನು ನಾಜೂಕಾಗಿ ಪ್ರದರ್ಶನ ಮಾಡುತ್ತಿದ್ದ ಸಂಘಪರಿವಾರ, ಈಗ ತಮ್ಮ ನೆಚ್ಚಿನ ಪಕ್ಷ ಅಧಿಕಾರದಲ್ಲಿ ಇರುವಾಗ ಮಹಾತ್ಮ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಪ್ರೀತಿಯನ್ನು ಕದ್ದುಮುಚ್ಚಿ ಪ್ರದರ್ಶನ ಮಾಡುವ ಹಂತವನ್ನು ಮೀರಿ ಬೆಳೆದಿದೆ. ಟ್ವಿಟ್ಟರ್ ನಲ್ಲಿ ‘#ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಹಲವು ಗಂಟೆಗಳ ಕಾಲ ಅದು ಟ್ರೆಂಡಿಂಗ್‍ನಲ್ಲಿ ಇರುವಂತೆ ಸಂಘ ಪರಿವಾರದ ಸದಸ್ಯರು ನೋಡಿಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಸಂಸದರಾದ ಸಾಕ್ಷಿ ಮಹರಾಜ್, ಸಾಧ್ವಿ ಪ್ರಾಗ್ಯ ಮುಂತಾದವರು ಬಹಿರಂಗವಾಗಿಯೇ ಗೋಡ್ಸೆಯನ್ನು ಹೊಗಳಿ ಕೊಂಡಾಡಿದ್ದಾರೆ. ಅವರು ಇಂದಿಗೂ ಬಿಜೆಪಿ ಸಂಸದರಾಗಿ ಮುಲಾಜಿಲ್ಲದೆ ಮುಂದುವರೆದಿದ್ದಾರೆ. ಹೋದ ವರ್ಷದ ಗಾಂಧಿ ಜಯಂತಿಯ ದಿನ ಗೋಡ್ಸೆ ಪರವಾಗಿ ಮೂಡಿದ್ದ ಟ್ವೀಟ್‍ಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಟ್ರೆಂಡ್ ಇನ್ನೂ ದೊಡ್ಡದಾಗಿ ಬೆಳೆದಿದೆ. ಇದರಿಂದ ಉತ್ತೇಜಿತರಾಗಿ ಹಿಂದೂ ಮಹಾಸಭಾನವರು ಗೋಡ್ಸೆಗಾಗಿಯೇ ಒಂದು ನೂತನ ಯುಟ್ಯೂಬ್ ಚಾನೆಲ್ ತೆರೆಯಲು ಮುಂದಾಗಿರುವ ಸುದ್ದಿ ಕೂಡ ಬಂದಿದೆ. ಗೋಡ್ಸೆಯನ್ನು ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಸಂಭ್ರಮಿಸುವ ಹೊಸ ಸಹಜ ಮನೋಧರ್ಮವನ್ನು zeitgeist ಎಂದು ಎಣಿಸಿದರೂ ಕೈಕಟ್ಟಿ ಕೂರುವ ಆಯ್ಕೆ ಒಂದೇ ಉಳಿದಿರುವುದಾ? ‘ತಟ್ಟು ಚಪ್ಪಾಳೆ ಪುಟ್ಟ ಮಗು ಗಾಂಧಿಗಿಂದು ಜನ್ಮದಿನ’ ಎಂಬ ಸಾಲುಗಳು ಮತ್ತೆ ಎಳೆಯ ಮಕ್ಕಳ ನಡುವೆ ರಿಂಗಣಿಸಿ, ಯುವಕರಿಗೆ ಗೋಡ್ಸೆಯ ಚಿಂತನೆಗಳ ಅಪಾಯವನ್ನು ತಿಳಿಯುವಂತೆ ಮಾಡಿ, ವಿಶಾಲವಾಗಿ ಹರಡಿ ಟ್ರೆಂಡ್ ಮಾಡುವುದು ಹೇಗೆ?

ಮತಾಂಧ ಉಗ್ರಗಾಮಿ ಗಾಂಧಿಯವರನ್ನು ಕೊಂದ ನಂತರದ, ಮಹಾತ್ಮ ಗಾಂಧಿಯವರ ಶವದ ಮೆರವಣಿಗೆಯಲ್ಲಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದ ಅಪಾರ ಜನಸ್ತೋಮ ಹಾಗೂ ಸಾಗರದಂತೆ ನೆರೆದಿರುವ ಜನಸಂಖ್ಯೆಯ ಮಧ್ಯೆ ನಡೆಯುತ್ತಿರುವ ಗಾಂಧಿಯವರ ಅಂತಿಮ ಶವ ಸಂಸ್ಕಾರದ ಫೋಟೋಗಳು ಪೀಳಿಗೆಯಿಂದ ಪೀಳಿಗೆಗೆ ಮಹಾತ್ಮ ಸೃಷ್ಟಿಸಿದ್ದ ಮೌಲ್ಯಗಳ ಬಗ್ಗೆ ಹೇಳಿಕೆಯನ್ನು ನೀಡುತ್ತಿವೆ (ಕಾರ್ಟಿಯರ್-ಬ್ರೆಸ್ಸೋ ಫೋಟೋ). ಅಷ್ಟು ಜನರ ಆಕ್ರಂದನದ ನಡುವೆ ಶವ ಬೂದಿಯಾಗುತ್ತಿರುವ ದೃಶ್ಯ ಮನುಷ್ಯತ್ವವನ್ನು ಕೊಂದ ಉಗ್ರನ ಕಹಿ ನೆನಪನ್ನ ಜನಕ್ಕೆ ಮರುಕಳಿಸದೆ ಇರದು. ಇದೇ ಗಾಂಧಿ ಜಯಂತಿಗೆ ಎರಡು ದಿನದ ಹಿಂದೆ, ಅಂದರೆ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಅಲ್ಲ ಎಂಬ ತೀರ್ಪು ಕೊಟ್ಟು ಎಲ್ಲಾ ಆಪಾದಿತರನ್ನು ಖುಲಾಸೆ ಮಾಡಿದ ದಿನವೇ ಮತ್ತೊಂದು ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಬೇಕಿತ್ತು. ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ದಲಿತ ಬಾಲಕಿಯನ್ನು ಅಲ್ಲಿನ ಪ್ರಬಲ ಮತ್ತು ಶೋಷಕ ಜಾತಿಯ ಯುವಕರು ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ನಡುವೆಯೇ, ಅಲ್ಲಿನ ಆಡಳಿತ ವ್ಯವಸ್ಥೆ ಆ ಬಾಲಕಿಯ ಕುಟುಂಬ ವರ್ಗಕ್ಕೂ ಅವಕಾಶ ನೀಡದೆ ರಹಸ್ಯವಾಗಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿತ್ತು. ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆಯ ಪತ್ರಕರ್ತೆಯೊಬ್ಬರು ಆ ಮಧ್ಯರಾತ್ರಿಯಲ್ಲಿ ಪೊಲೀಸರ ಬೆದರಿಕೆಗೆ ಜಗ್ಗದೆ ತೆಗೆದ ಆ ಫೋಟೋ – ಶೋಷಕ ಜಾತಿಯ ಯುವಕರಿಂದ ಮೊದಲು ದೌರ್ಜನ್ಯಕ್ಕೆ ಒಳಗಾಗಿ – ಕೊಲೆಯಾಗಿ, ನಂತರ ಆಡಳಿತ ವ್ಯವಸ್ಥೆಯಿಂದ ಎರಡನೇ ಬಾರಿ ದೌರ್ಜನ್ಯಕ್ಕೆ ಒಳಗಾಗಿ ಅನಾಥ ಶವವಾಗಿ ಸುಡಲ್ಪಡುತ್ತಿದ – ಆ ಶವಸಂಸ್ಕಾರದ ಫೋಟೋ ಗಾಂಧಿ ಶವಸಂಸ್ಕಾರದ ಫೋಟೋದಷ್ಟೇ ಸಶಕ್ತವಾದ ಹೇಳಿಕೆ ಕೊಡುತ್ತಿದೆ. ಆದರೆ ಇವತ್ತಿನ ಕಾಲಧರ್ಮದ ಧೋರಣೆಯನ್ನು ಪ್ರತಿನಿಧಿಸಿದೆ. ಇನ್ನೂ ಹೆಚ್ಚು ಆತಂಕಮಯವಾಗಿದೆ. ಈ ಫೋಟೋ ಕೂಡ, ದಲಿತ ಬಾಲಕಿಯನ್ನು ದಮನಿಸಿದ, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹತ್ತಿರದವರಿಗೂ ಅವಕಾಶ ನೀಡದ ಆಡಳಿತ ವ್ಯವಸ್ಥೆಯ ಉಗ್ರತ್ವದ ಬಗ್ಗೆ ಮುಂದಿನ ಪೀಳಿಗೆಗಳಿಗೆ ನೆನಪು ಮಾಡಬಲ್ಲದೇ? ಈ ಸಂಗತಿ ಜನಸಾಮಾನ್ಯರಲ್ಲಿ ಆಕ್ರೋಶ ಹುಟ್ಟಿಸಿತೇ? ಅದರಿಂದ ಉತ್ತರಪ್ರದೇಶ ಆಡಳಿತ ಕೊಂಚವಾದರೂ ಬೆದರಿತೇ? ಸಂತ್ರಸ್ತೆಯ ಇಡೀ ಕುಟುಂಬವನ್ನು ಇನ್ನೂ ದಿಗ್ಭಂದನದಲ್ಲಿ ಇರಿಸಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಆಗುತ್ತಿರುವುದು ದಟ್ಟವಾಗಿ ಗೋಚರಿಸುತ್ತಿದೆಯಲ್ಲವೇ? ಗಾಯದ ಮೇಲೆ ಬರೆ ಎಳೆದಂತೆ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಶೋಷಕ ಜಾತಿಯ ಜನರು ಖಾಪ್ ಪಂಚಾಯಿತಿಗಳನ್ನು ನಡೆಸಿ, ಜಾತಿ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುವ ಸಂಗತಿಗಳು ನಡೆಯುತ್ತಿವೆ.

photo courtesy : India Today

ಇಲ್ಲಿಬರಲಿಸಂ, ಬಹುಸಂಖ್ಯಾತ ಕೋಮುವಾದ, ಧಾರ್ಮಿಕ ಮತ್ತು ಆರ್ಥಿಕ ಅಲ್ಪಸಂಖ್ಯಾತರನ್ನು ಕೃತಕವಾಗಿ ಕೇಡಿಗಳನ್ನಾಗಿಸಿ – ಅದನ್ನು ಪ್ರಚಾರ ಮಾಡಿ ಸಂಭ್ರಮಿಸುವ ಮನೋಭಾವ, ಪ್ರಾಚೀನದ ಪೊಳ್ಳು ಧಾರ್ಮಿಕ ವ್ಯವಸ್ಥೆಯಿಂದ ಸಿಕ್ಕಿರುವ ಪ್ರಿವಿಲೆಜ್ ಅನ್ನು ಬಿಟ್ಟುಕೊಡಲು ತಯಾರು ಆಗದ ಮನಸ್ಥಿತಿ, ಸಮತಾವಾದದ ಬಗ್ಗೆ ಕೆಟ್ಟ ಧೋರಣೆ, ಆರ್ಥಿಕ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಅದಕ್ಕೆ ಅವಕಾಶ ಕೊಡುವ ದೊಡ್ಡ ಕಾರ್ಪೋರೆಟ್‍ಗಳ ತಾಳಕ್ಕೆ ಕುಣಿಯುವ ಸಂಕಲ್ಪ – ಇವೆಲ್ಲಾ ಯಾವುದೇ ಅಂಕೆಯಿಲ್ಲದೆ ಬೆಳೆದಿರುವುದು ಇವತ್ತಿನ zeitgeist. ಕೆಡುಕಿನ ಲಕ್ಷಣಗಳು ಎಲ್ಲರಿಗೂ ತಿಳಿದಿವೆ. ಆ ಕಾಲದ ಜಾತ್ಯತೀತತೆಯ, ತಮ್ಮ ಜಾತಿಯ-ಧರ್ಮದ-ಜನಾಂಗದ ಪ್ರಿವಿಲೆಜ್ ತೊರೆದು ಸಮ ಸಮಾಜದ ಕನಸು ಕಾಣುವ, ದುರ್ಬಲ ಮತ್ತು ಅವಕಾಶವಂಚಿತ ಜನರ ಒಳಿತಿಗಾಗಿ ಕೆಲಸ ಮಾಡುವ, ದೌರ್ಜನ್ಯದ ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ zeitgeist ಈ ದೇಶದಲ್ಲಿ ಎಂದಾದರೂ ಇತ್ತೆ? ಅದು ಮತ್ತೆ ಮರುಕಳಿಸಬಹುದೇ? ಇಂದು ವ್ಯಾಕವಾಗಿರುವ zeitgeist ಅನ್ನು ಒಪ್ಪಿಕೊಳ್ಳದ, ಅದನ್ನು ಮುಖಾಮುಖಿಯಾಗಿ ಬದಲಿಗಳನ್ನು ಹುಡುಕುವಲ್ಲಿ ಬಹುಶಃ ವಿವೇಕದ ಸಮಾಜವನ್ನು ಮರುಕಟ್ಟುವ ಯಶಸ್ಸು ಅಡಗಿದೆ.

ಈ ಎಲ್ಲಾ ನಿರಾಶವಾದದ ನಡುವೆ ಭರವಸೆಯ ಕಿರಣಗಳು ಇನ್ನೂ ಅಲ್ಲಲ್ಲಿ ಉಳಿದಿವೆ. ಈ ಸರ್ವಾಧಿಕಾರಿ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿ ‘ದ ಕಾಕ್ ಇಸ್ ದ ಕಲ್ಪ್ರಿಟ್’ (ಪ್ರತಿ ಪೂವಂಕೋಳಿ) ಎಂಬ ನೀಳ್ಗತೆ ಬರೆದ ಮಲಯಾಳಂ ಸಾಹಿತಿ ಉನ್ನಿ. ಆರ್ ಇದ್ದಾರೆ. ಮಲಯಾಳಂನಲ್ಲಿ ಆ ಪುಸ್ತಕ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಕೊಂಡು ಓದಿದವರಿದ್ದಾರೆ. ಕೇಂದ್ರ ಸರ್ಕಾರ ರೈತ, ಕಾರ್ಮಿಕ ಮತ್ತು ಜನಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿರುವುದರ ಬಗ್ಗೆ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹಲವು ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯಹೋರಾಟ ನಡೆಸಿವೆ. ಈ ಹೋರಾಟವನ್ನು ಕವರ್ ಮಾಡುವಂತೆ ಯಾತಾಸ್ಥಿತಿವಾದದ ಪ್ರತಿಪಾದಕ ಮಾಧ್ಯಮಗಳ ಮೇಲೆ ಒತ್ತಡ ಹಾಕಲು ಸಫಲವಾಗಿವೆ. ಉತ್ತರ ಪ್ರದೇಶದ ಸರ್ಕಾರ ಸೃಷ್ಟಿಸಿರುವ ರಿಪ್ರೆಸಿವ್ ವಾತಾವರಣದ ನಡುವೆಯೂ ಕೆಲವೇ ಕೆಲವು ಪತ್ರಕರ್ತೆಯರಾದರೂ ಪೊಲೀಸರಿಗೆ ಸವಾಲೆಸೆದು ರೇಪ್ ಸಂತ್ರಸ್ತೆಯ ಕುಟುಂಬದವರ ಸಂಪರ್ಕ ಸಾಧಿಸಲು ಯಶಸ್ವಿಯಾಗಿದ್ದಾರೆ. ಪೊಲೀಸರ ಎದುರೇ ಒಬ್ಬಂಟಿಯಾಗಿ ಧರಣಿ ಕುಳಿತವರಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯವರನ್ನು ಮೊದಲ ಬಾರಿಗೆ ಪೊಲೀಸರು ತಡೆದು ಬಂಧಿಸಿ ದೆಹಲಿಗೆ ವಾಪಸ್ ಕಳಿಸಿದ್ದರೂ ವಿಚಲಿತರಾಗದೆ ಮತ್ತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಆಗಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶದ ಯುವ ರಾಜಕಾರಣಿ ಚಂದ್ರಶೇಖರ್ ಆಜಾದ್ ನಿಷೇಧದ ನಡುವೆಯೂ ಐದಾರು ಕಿಲೋಮೀಟರ್ ದೂರ ನಡೆದು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಆಡಳಿತ ವ್ಯವಸ್ಥೆಯ ದೌರ್ಜನ್ಯಕ್ಕೆ ಸವಾಲೆಸಿದಿದ್ದಾರೆ. ಟ್ವಿಟ್ಟರ್ – ಫೇಸ್‍ಬುಕ್ – ಇಂಸ್ಟಾಗ್ರಾಮ್‍ಗಳು ಸಮಾಜದಲ್ಲಿ ಸೃಷ್ಟಿ ಮಾಡುತ್ತಿರುವ ಒಡಕಿನ ಧ್ರುವೀಕರಣಕ್ಕೆ ಬೇಸತ್ತು ಆ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ತಂತ್ರಜ್ಞರು, ಇಂಜಿನಿಯರ್ ಗಳು ಹೊರನಡೆದು ‘ಸೋಶಿಯಲ್ ಡಿಲೆಮಾ’ ತರಹದ ಸಾಕ್ಷ್ಯಚಿತ್ರಗಳಲ್ಲಿ ತಾವೆಸಗಿದ ತಪ್ಪನ್ನು ನಿವೇದಿಸಿಕೊಂಡು ಸುಧಾರಣೆಗೆ ಮುಂದಾಗಲು ಅಲೋಚಿಸುತ್ತಿದ್ದಾರೆ – ಪ್ರೇರೇಪಿಸುತ್ತಿದ್ದಾರೆ.

ಇಂತಹ ಪ್ರತಿರೋಧಗಳು- ಪ್ರತಿಚಿಂತನೆಗಳು ನಾಳೆ ನಾಡಿದ್ದೇ ಬದಲಾವಣೆ ತರದೇ ಹೋದರೂ, ಬುದ್ಧ – ಬಸವ – ಗಾಂಧಿ – ಅಂಬೇಡ್ಕರ್ – ಟ್ಯಾಗೋರ್ – ನೆಹರೂ – ಕುವೆಂಪು ಇಂತಹ ಮಾನವತಾವಾದಿಗಳು ಕಟ್ಟಿಕೊಟ್ಟಿದ್ದ ಅತ್ಯುತ್ತಮ ಚಿಂತನೆಗಳನ್ನು ಸಿಂಥೆಸೈಸ್ ಮಾಡಿದ ಅಲೋಚನೆಗಳು ಜನರನ್ನು ಪ್ರೇರೇಪಿಸುವ ದಿನಗಳನ್ನು ಪ್ರತಿನಿಧಿಸುವ zeitgeist ಮೊಮೆಂಟ್‍ಗಳ ಬಗ್ಗೆ ಚರ್ಚಿಸುವ ದಿನಗಳ ಬರವನ್ನು ತಡವಾಗಿಯಾದರೂ ನಿರೀಕ್ಷಿಸಬಹುದೇನೋ!


ಇದನ್ನೂ ಓದಿ: ಹತ್ರಾಸ್‌: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...