‘ಒಂದು ದೇಶ – ಒಂದು ಚುನಾವಣೆ’ ಮಸೂದೆಗಳನ್ನು ಮಂಡಿಸುವ ವೇಳೆ ಸಂಸತ್ತಿಗೆ ಗೈರುಹಾಜರಾಗಿದ್ದ ಬಿಜೆಪಿಯ ಸಂಸದರಿಗೆ ಪಕ್ಷವು ನೋಟಿಸ್ ಕಳುಹಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಮಸೂದೆಗಳನ್ನು ಮಂಡಿಸಲು ಮಂಗಳವಾರ ಮತದಾನ ನಡೆದಾಗ ಬಿಜೆಪಿಯ ಹಲವಾರು ಸಂಸದರು ಸಂಸತ್ತಿಗೆ ಗೈರುಹಾಜರಾಗಿದ್ದರು. ಹಾಗಾಗಿ ಪಕ್ಷವು ತಮ್ಮ ಸದಸ್ಯರು ಯಾಕೆ ಗೈರಾಗಿದ್ದರು ಎಂಬುದನ್ನು ವಿವರಿಸುವಂತೆ ಕಳುಹಿಸಲಿದೆ.
ಪಕ್ಷವು ತನ್ನ ಲೋಕಸಭಾ ಸಂಸದರಿಗೆ ಮೂರು ಸಾಲಿನ ವಿಪ್ ಕಳುಹಿಸಿದ್ದು, ಮಂಗಳವಾರ ಸದನಕ್ಕೆ ಹಾಜರಾಗುವಂತೆ ಹೇಳಿತ್ತು. ಆದರೆ, ಇದರ ಹೊರತಾಗಿಯೂ 20 ಕ್ಕೂ ಹೆಚ್ಚು ಬಿಜೆಪಿ ಸಂಸದರು ಸಂವಿಧಾನದ ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ – 2024 ರ ಮತದಾನದ ವೇಳೆ ಗೈರುಹಾಜರಾಗಿದ್ದರು. ಒಂದು ದೇಶ – ಒಂದು ಚುನಾವಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದಾಗ್ಯೂ, ಕೆಲವು ಕೇಂದ್ರ ಸಚಿವರು ಮತ್ತು ಸಂಸದರು ಅಧಿಕೃತ ಕಾರ್ಯಕ್ರಮಗಳು ಮೊದಲೇ ನಿಗದಿಪಡಿಸಿದ್ದರು, ಹಾಗಾಗಿ ತಾವು ಅಂದು ಸದನದಲ್ಲಿ ಇರುವುದಿಲ್ಲ ಎಂದು ಬಿಜೆಪಿಯ ಸದನದ ವ್ಯವಸ್ಥಾಪಕರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ. ಒಟ್ಟು 461 ಮತಗಳಲ್ಲಿ 269 ಸಂಸದರು ವಿಧೇಯಕಗಳನ್ನು ಮಂಡಿಸುವ ಪರವಾಗಿ ಮತ ಚಲಾಯಿಸಿದರೆ, ವಿಪಕ್ಷಗಳ 198 ಸಂಸದರು ಪ್ರಸ್ತಾವನೆಯ ವಿರುದ್ಧವಾಗಿ ಮತ ಚಲಾಯಿಸಿದ್ದರು.
ಮಸೂದೆಗಳನ್ನು ಮಂಡಿಸಲು ಸರಳ ಬಹುಮತದ ಅಗತ್ಯವಿದ್ದರೂ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು 307 ಸಂಸದರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಸರಿಸಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪವನ್ನು ಮಾಡಲಾಗಿದೆ.
ಏಕಕಾಲದ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಟ್ಟುಗೂಡಿಸುವ ಮೊದಲು ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳಿಂದ ಪ್ರಾರಂಭಿಸಿ ಹಂತ ಹಂತದ ವಿಧಾನವನ್ನು ಸಮಿತಿಯು ಸೂಚಿಸಿತ್ತಿ. ಸಂಸತ್ತಿನಲ್ಲಿ ಮಸೂದೆಗಳು ಅಂಗೀಕಾರಗೊಂಡರೂ, ಏಕಕಾಲಿಕ ಚುನಾವಣೆಗಳ ಅನುಷ್ಠಾನಕ್ಕೆ ಕಾಲಮಿತಿ ಸ್ಪಷ್ಟ ಹೇಳಲಾಗಿಲ್ಲ.
ಮಂಗಳವಾರ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಸೂದೆಗಳ ಪರಿಚಯದ ವೇಳೆ ನಡೆದ ಮತದಾನವು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ತೋರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ: ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ವಾಗ್ದಾಳಿ
ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ: ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ವಾಗ್ದಾಳಿ


