Homeಮುಖಪುಟ25ರಂದು ಆನ್‌ಲೈನ್ ಗೋ ಪರೀಕ್ಷೆ: ಯುಜಿಸಿಯ ರಾಯಭಾರ - ಸುಳ್ಳು, ಅರ್ಧ ಸತ್ಯಗಳ ಸಿಲಬಸ್!

25ರಂದು ಆನ್‌ಲೈನ್ ಗೋ ಪರೀಕ್ಷೆ: ಯುಜಿಸಿಯ ರಾಯಭಾರ – ಸುಳ್ಳು, ಅರ್ಧ ಸತ್ಯಗಳ ಸಿಲಬಸ್!

ಈ ಒಂದು ವಿಲಕ್ಷಣ ಪರೀಕ್ಷೆಗೆ ಸರ್ಕಾರದ ಎಲ್ಲ ಶಿಕ್ಷಣ ಸಂಸ್ಥೆಗಳು ಪ್ರಚಾರ ನೀಡುವಂತೆ ಮತ್ತು ನೆರವಾಗುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಒತ್ತಾಯ ಮಾಡಿದೆ!

- Advertisement -
- Advertisement -

ರಾಷ್ಟ್ರೀಯ ಕಾಮಧೇನು ಆಯೋಗ್ ಆಯೋಜಿಸಿರುವ ‘ಹಸು ವಿಜ್ಞಾನ’ ಕುರಿತ ಅಖಿಲ ಭಾರತ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಎಲ್ಲಾ ಉಪಕುಲಪತಿಗಳಿಗೆ ಸೂಚಿಸಿದೆ ಎಂದು ದಿ ವೈರ್ ಮತ್ತು ದಿ ಪ್ರಿಂಟ್ ವರದಿ ಮಾಡಿವೆ. ಇದಲ್ಲದೇ, ಈ ಪರೀಕ್ಷೆಗೆಂದು ಸಿದ್ಧಪಡಿಸಿದ ಪಠ್ಯಕ್ರಮವು ಸುಳ್ಳು ಮತ್ತು ಅರ್ಧ ಸತ್ಯಗಳಿಂದ ಕೂಡಿದೆ ಎಂದು ದಿ ವೈರ್ ಹೇಳಿದೆ.

ಕಾಮಧೇನು ಗೋ-ವಿಜ್ಞಾನ್ ಪ್ರಚಾರ್-ಪ್ರಸಾರ್ ಪರೀಕ್ಷೆ ಎಂದು ಕರೆಯಲ್ಪಡುವ ಈ ಆನ್‌ಲೈನ್ ಪರೀಕ್ಷೆಯು ಫೆಬ್ರವರಿ 25 ರಂದು ನಡೆಯಲಿದ್ದು, ಇದು ಸ್ವಯಂಪ್ರೇರಿತ ಪರೀಕ್ಷೆಯಾಗಿದ್ದು, ಪೂರ್ವ ನೋಂದಣಿ ಅಗತ್ಯವಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಲ್ಲದವರಿಗೆ ಸಮಾನವಾಗಿ ತೆರೆದಿರುತ್ತದೆ. ಪ್ರಾಥಮಿಕ ವಿಭಾಗಗಳು (8 ನೇ ತರಗತಿಯವರೆಗೆ), ಮಾಧ್ಯಮಿಕ ವಿದ್ಯಾರ್ಥಿಗಳು (9 ನೇ ತರಗತಿಯಿಂದ 12 ರವರೆಗೆ), ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಅನಿವಾಸಿ ಭಾರತೀಯರು-ಹೀಗೆ ಐದು ವಿಭಾಗಗಳಿಗೆ ಪರೀಕ್ಷೆ ನಡೆಯಲಿದೆ. ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮಧೇನು ಆಯೋಗ್ ಈ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಮಟ್ಟದ ನೆರವಿನೊಂದಿಗೆ ಆಯೋಜಿಸಿದೆ ಎನ್ನಲಾಗಿದೆ.

ಈ ಪರೀಕ್ಷೆಗೆ ಮೊದಲ ಬಾರಿಗೆ ಅಧಿಸೂಚನೆ ನೀಡಿದಾಗ, ಈ ಪ್ರಕ್ರಿಯೆಗೆ “ಕೇಂದ್ರ ಶಿಕ್ಷಣ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯ ಶಿಕ್ಷಣ ಮಂತ್ರಿಗಳು, ಎಲ್ಲಾ ರಾಜ್ಯಗಳ ಗೋ ಸೇವಾ ಆಯೋಗಗಳ ಅಧ್ಯಕ್ಷರು, ಎಲ್ಲಾ ರಾಜ್ಯಗಳ ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಎಲ್ಲ ಪ್ರಾಂಶುಪಾಲರು ಭಾಗವಹಿಸುವ ಅಗತ್ಯವಿದೆ ಎಂದು ಕಾಮಧೇನು ಆಯೋಗ ಹೇಳಿತ್ತು. ಶಾಲೆಗಳು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು, ಎನ್‌ಜಿಒಗಳು ಮತ್ತು ಹಸು ದಾನಿಗಳು, ಗೋಪ್ರೇಮಿಗಳು ಇದಕ್ಕೆ ಪ್ರಚಾರ ನೀಡಲು ಕೋರಲಾಗಿತ್ತು.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಮತ್ತೆ ತೆರೆಯುವುದರಿಂದ ಈಗಾಗಲೇ 11 ತಿಂಗಳ ಅಂತರವನ್ನು ಹೊಂದಿರುವ ಶಾಲಾ ವಿದ್ಯಾರ್ಥಿಗಳು ತಮ್ಮ ಅವಧಿಯ ಪರೀಕ್ಷೆಗಳಿಗೆ ಹೆಚ್ಚು ಹತ್ತಿರವಾಗುತ್ತಾರೆ. ದೇಶಾದ್ಯಂತ, ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಥವಾ ಭೌತಿಕ ತರಗತಿಗಳಿಗೆ ಮತ್ತೆ ಸೇರಲು ಹೆಣಗಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಪರೀಕ್ಷೆಗೆ ಹಾಜರಾಗಿ ಎಂದು ಒತ್ತಾಯಿಸಿದರೆ ಅವರು ಸಂದಿಗ್ಧತೆಗೆ ಒಳಗಾಗಲಿದ್ದಾರೆ.

ಜನವರಿ 18, 2021 ರಂದು, ಆಯೋಗ್ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಶಿಕ್ಷಣ ರಾಜ್ಯ ಸಚಿವ ಸಂಜಯ್ ಧೋತ್ರಾಗೆ ಪತ್ರ ಬರೆದು ಪರೀಕ್ಷೆಗೆ “ವ್ಯಾಪಕ ಪ್ರಚಾರ” ನೀಡುವಲ್ಲಿ ಬೆಂಬಲ ಕೇಳಿದ್ದರು.

ಪರೀಕ್ಷೆಯಲ್ಲಿ “ಎಲ್ಲಾ ಬ್ಯೂರೋಗಳು, ಎಲ್ಲಾ ಸಂಬಂಧಿತ ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ತಮ್ಮ ಆಡಳಿತಾತ್ಮಕ ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಮತ್ತು ಅಗತ್ಯ ಸೂಚನೆಗಳನ್ನು ನೀಡುವಂತೆ” ಒತ್ತಾಯಿಸುವ ಶಿಕ್ಷಣ ಸಚಿವಾಲಯದ ಕಚೇರಿಯ ಜ್ಞಾಪಕ ಪತ್ರವನ್ನು ದಿ ವೈರ್ ಹೊಂದಿದೆ.

ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ವಿಸಿಗಳಿಗೆ “ಈ ಉಪಕ್ರಮಕ್ಕೆ ವ್ಯಾಪಕ ಪ್ರಚಾರ” ನೀಡುವಂತೆ ಹೇಳಿದ್ದರೂ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಒತ್ತಾಯಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಯುಜಿಸಿ ಅಡಿಯಲ್ಲಿ 1,000 ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.

ದಿ ಪ್ರಿಂಟ್ ಪ್ರಕಾರ, ಯುಜಿಸಿ ಕಾರ್ಯದರ್ಶಿ, ವಿವಿಗಳು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಅಡಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ.

ವಿವಾದಾತ್ಮಕ ಪಠ್ಯಕ್ರಮ

ಪರೀಕ್ಷೆಯು ಹಸುಗಳ ಮೌಲ್ಯ ಮತ್ತು ಅವುಗಳ ಉಪ ಉತ್ಪನ್ನಗಳ ಗಮನವನ್ನು ಸೆಳೆಯಲು ಆದರ್ಶಪ್ರಾಯವಾಗಿದ್ದರೂ, ರಾಷ್ಟ್ರೀಯ ಕಾಮಧೇನು ಆಯೋಗ್ ಸಂಕಲಿಸಿದ ಈ ಪರೀಕ್ಷೆಯ ಪಠ್ಯಕ್ರಮವೇ ಹೆಚ್ಚು ಮೋಸಗೊಳಿಸುವ ಸಂಗತಿಯಾಗಿದೆ. ಭಾರತೀಯ ಹಸುಗಳ ಮೇಲೆ ಹಲವಾರು ಆಧಾರರಹಿತ ಸಂಗತಿಗಳನ್ನು ನೀಡುವ ಪಠ್ಯಕ್ರಮವನ್ನು ರೂಪಿಸಲಾಗಿದೆ.
‘ದೇಸಿ’ ಹಸುಗಳು ಮತ್ತು ‘ವಿಲಕ್ಷಣ’ ಹಸುಗಳು ಎಂದು ವಿಭಾಗಿಸುವ ಪಠ್ಯಕ್ರಮವು, ಪ್ರತಿಯೊಂದು ಅಂಶದಲ್ಲೂ, ಹಸುವಿನ ಉಪಉತ್ಪನ್ನಗಳ ಆರೋಗ್ಯ ಪ್ರಯೋಜನಗಳಿಂದ ಹಿಡಿದು ಒಟ್ಟಾರೆ ವರ್ತನೆಯವರೆಗೆ, ಮೊದಲಿನದು ಅಂದರೆ ದೇಸಿ ಹಸು ಶ್ರೇಷ್ಠವಾದುದು ಎನ್ನುತ್ತದೆ.

ಭಾರತೀಯ ಹಸುವಿನ ಹಾಲಿನ ಬಣ್ಣವು “ತಿಳಿ ಹಳದಿ ಬಣ್ಣದ್ದಾಗಿರುವುದರಿಂದ ಅದರಲ್ಲಿ ಚಿನ್ನದ ಕುರುಹುಗಳಿವೆ” (ಇದು ಜರ್ಸಿ ಹಸು ಹೊಂದಿಲ್ಲ) ಎಂದು ಸಹ ಹೇಳುತ್ತದೆ.
ಅನೇಕ ಸಂಶೋಧಕರು ಇದನ್ನು ಅಲ್ಲಗಳೆದಿದ್ದಾರೆ. ಭಾರತೀಯ ಹಸುಗಳು ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತವೆ, “ಕೊಳಕು ಸ್ಥಳಗಳಲ್ಲಿ ಕುಳಿತುಕೊಳ್ಳಲಾರವು ಸಾಕಷ್ಟು ಗಟ್ಟಿಮುಟ್ಟಾದ ಮತ್ತು ಬುದ್ಧಿವಂತ” ಈ ಹಸುಗಳು ಎಂದು ಪಠ್ಯಕ್ರಮವು ಹೇಳುತ್ತದೆ. ಆದರೆ ಜರ್ಸಿ ಹಸು ಸೋಮಾರಿಯಾಗಿದೆ ಮತ್ತು ರೋಗಗಳಿಗೆ ಗುರಿಯಾಗುತ್ತದೆ ಎಂದು ವಿವರಿಸಲಾಗಿದೆ.

ಎಲ್ಲಾ ಮಾನವ ಮತ್ತು ಬೆಳೆ ರೋಗಗಳನ್ನು ಹಸುವಿನ ಉಪಉತ್ಪನ್ನದಿಂದ ಗುಣಪಡಿಸಲಾಗುತ್ತದೆ ಎಂದು ಪಠ್ಯಕ್ರಮವು ಹಲವಾರು ಬಾರಿ ಹೇಳುತ್ತದೆ. ಇದು ಗೋಮಾಂಸ ಸೇವನೆಗಾಗಿ ಹಸುವಿನ ಹತ್ಯೆಗೆ ತಡೆಯಾಗಿ ಕರ್ಮವನ್ನು ತರುತ್ತದೆ ಮತ್ತು ಅಂತಿಮವಾಗಿ ಗೋಹತ್ಯೆಯನ್ನು ಭೂಕಂಪಗಳಿಗೆ ಜೋಡಿಸುವ ಸಂಪೂರ್ಣ ಆಧಾರರಹಿತ ಮತ್ತು ಅವೈಜ್ಞಾನಿಕ ಸಮರ್ಥನೆಯೊಂದಿಗೆ ಕೊನೆಗೊಳ್ಳುತ್ತದೆ.


ಇದನ್ನೂ ಓದಿ: ಬಿಜೆಪಿಯವರನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ- ನರೇಶ್ ಟಿಕಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...