ಕೊಲ್ಕೊತ್ತಾ ಹೈಕೋರ್ಟ್ ನಡೆಸಲಿರುವ ನಾಲ್ವರು ರಾಜಕಾರಣಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಸಿಬಿಐ ಸೋಮವಾರ ಮುಂಜಾನೆ ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.
ನಾರದಾ ಲಂಚ ಪ್ರಕರಣದಲ್ಲಿ ಬಂಗಾಳದ ನಾಲ್ವರು ರಾಜಕೀಯ ಮುಖಂಡರ ಗೃಹಬಂಧನಕ್ಕೆ ಅವಕಾಶ ನೀಡುವ ಕೊಲ್ಕೊತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಆರೋಪಿಗಳಲ್ಲಿ ಮೂವರು ಮಮತಾ ಬ್ಯಾನರ್ಜಿಯವರ ಟಿಎಂಸಿಗೆ ಸೇರಿದ್ದು, ಮತ್ತೊಬ್ಬರು ಪಕ್ಷದ ಮಾಜಿ ನಾಯಕರಾಗಿದ್ದಾರೆ.
ಇದನ್ನೂ ಓದಿ: ಸೆಪ್ಟಂಬರ್ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!
ಇಂದು ಹೈಕೋರ್ಟ್ ನಡೆಸಲಿರುವ ಈ ರಾಜಕಾರಣಿಗಳ ಜಾಮೀನು ಅರ್ಜಿ ವಿಚಾರಣೆ ರದ್ದು ಮಾಡಬೇಕೆಂದು ಸಿಬಿಐ ಕೇಳಿದೆ. ಶುಕ್ರವಾರ ಹೈಕೋರ್ಟ್ ಈ ನಾಲ್ವರಿಗೂ ಮಧ್ಯಂತರ ಜಾಮೀನು ನಿರಾಕರಿಸಿತ್ತು.
ಎರಡು ಸದಸ್ಯರ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಗೃಹಬಂಧನಕ್ಕೆ ಆದೇಶಿಸಿದ್ದರು, ಆದರೆ ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಮಧ್ಯಂತರ ಜಾಮೀನಿಗೆ ಆದೇಶಿಸಿದ್ದರು.
ಆದೇಶವನ್ನು ತಡೆಯಲು ಸಿಬಿಐ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದು ನಾಲ್ವರಿಗೆ ಜೈಲಿನಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟಿತು. ಅವರು ಪ್ರಭಾವಿ ನಾಯಕರು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಎಂದು ಸಿಬಿಐ ವಾದಿಸಿತ್ತು.
ಎಲ್ಲಾ ಪ್ರಕ್ರಿಯೆಗಳು ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಬೇಕೆಂದು ಸಿಬಿಐ ವಾದಿಸಿತ್ತು.
ಇದನ್ನೂ ಓದಿ: ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ವಿರೋಧ: ಪ್ಯಾಲೆಸ್ಟೈನ್ ಬೆಂಬಲಿಸಿದ ಭಾರತ ಸರ್ಕಾರ