Homeಕರ್ನಾಟಕಎಲೆಮರೆ-8 : ನಮ್ಮ ನಡುವಿನ ಮಂದಣ್ಣ - ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

ಎಲೆಮರೆ-8 : ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

- Advertisement -
- Advertisement -

ಎಲೆಮರೆ-8

ಅರುಣ್‌ ಜೋಳದ ಕೂಡ್ಲಿಗಿ

ಕಳೆದ ಹದಿನಾಲ್ಕು ವರ್ಷದಿಂದ ಪಂಪಯ್ಯನ ಜತೆಗಿನ ಒಡನಾಟವನ್ನು `ಮಳೇಮಠದ ಪಂಪಯ್ಯನಿಂದಿಡಿದು ಪರಿಸರದ ಪಂಪಯ್ಯನವರೆಗೆ ಎನ್ನಬಹುದೇನೋ’. ಹೌದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನು ಎಂ.ಎ.ಪಿಹೆಚ್.ಡಿಗೆ 2002-03 ರ ಹೊತ್ತಿಗೆ ವಿದ್ಯಾರ್ಥಿಯಾಗಿ ಸೇರಿದ ಆಸುಪಾಸಿನಲ್ಲೆ ಮೆಕಾನಿಕಲ್ ಡಿಪ್ಲೊಮಾ ಓದಿದ್ದ ಪಂಪಯ್ಯ ಕನ್ನಡ ವಿವಿಯ ವಿದ್ಯಾರಣ್ಯದಲ್ಲಿ ಬುಕ್ ಅಂಡ್ ಜನರಲ್ ಸ್ಟೋರ್ ತೆರೆದು ವ್ಯಾಪಾರಿಯಾಗಿ ಕ್ಯಾಂಪಸ್ ಪ್ರವೇಶಿಸಿದರು. ನಾವು ಆತನ ಅಂಗಡಿಯ ನಿತ್ಯದ ಒಡನಾಡಿಗಳಾದೆವು. ಅವರ ಮಾತುಕತೆ ನಮ್ಮನ್ನು ಆಪ್ತರನ್ನಾಗಿಸಿತು. ಹಕ್ಕಿ, ಹಾವು, ಕ್ರಿಮಿ, ಕೀಟ, ಕರಡಿಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳನ್ನು ಅಚ್ಚರಿಪಡುವಂತೆ ಕಥನ ಮಾಡಿ ವಿವರಿಸುತ್ತಿದ್ದರು. ಕನ್ನಡ ಸಾಹಿತ್ಯ ಜಾನಪದ ಅಂತೆಲ್ಲಾ ಪಾಠ ಮಾಡುವ ಅಧ್ಯಾಪಕರ ಜತೆ ಪಂಪಯ್ಯನೂ ಆಗ ಪರಿಸರದ ಅಧ್ಯಾಪಕನಂತೆ ಕಂಡದ್ದು ವಿಶೇಷವೇನಲ್ಲ. ಹಾಗಾಗಿಯೇ ಪ್ರೊ.ರಹಮತ್ ತರೀಕೆರೆ ಅವರು ಪಂಪಯ್ಯನನ್ನು ತೇಜಸ್ವಿ ಜೊತೆಗಿನ ಮಂದಣ್ಣನಿದ್ದಂತೆ ಎನ್ನುತ್ತಾರೆ.

ವಿದ್ಯಾರಣ್ಯ ಕ್ಯಾಂಪಸ್ಸಿನ ಮತ್ತು ಕಮಲಾಪುರದ ಅವರ ಜನರಲ್ ಸ್ಟೋರುಗಳಿಗೆ ಗುಡ್‍ಬೈ ಹೇಳಿದ ನಂತರ ವ್ಯಾಪಾರಿ ಪಂಪಯ್ಯನು ಪೂರ್ಣಪ್ರಮಾಣದಲ್ಲಿ `ಪರಿಸರದ ಪಂಪಯ್ಯ’ನಾಗಿ ಬದಲಾದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಇವರು ಹಂಪಿ ಪರಿಸರದ ಪಕ್ಷಿಪ್ರಾಣಿಗಳನ್ನು ಒಳಗೊಂಡ ವನ್ಯಜೀವಿಗಳನ್ನು ಸೆರೆಹಿಡಿದು ಈ ಭಾಗದ ಜೀವವೈವಿಧ್ಯಗಳನ್ನು ಲೋಕದೆದುರು ತೆರೆದಿಟ್ಟರು.

ಈತನಕ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಂತೆಯೇ ಹಾವುಗಳ ಬಗೆಗೆ ಜನರಿಗೆ ತಿಳಿವನ್ನೂ ಮೂಡಿಸಿದ್ದಾರೆ. ಇದರ ಪರಿಣಾಮವಾಗಿ, ಹಾವುಕಂಡರೆ ಹೊಡೆಯಲು ಕೋಲು ಹುಡುಕುತ್ತಿದ್ದವರು ಈಗ ಪಂಪಯ್ಯನ ನಂಬರಿಗೆ ಕಾಲ್ ಮಾಡಿ ಹಾವು ಹಿಡಿಯಲು ಕರೆಯುತ್ತಾರೆ.

ಹಂಪಿಗೆ ಬರುವ ವನ್ಯಜೀವಿ ಪ್ರೇಮಿಗಳಿಗೆ, ಫೋಟೋಗ್ರಾಫರ್‍ಗಳಿಗೆ ಈ ಭಾಗದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಕಾರಣ ಹಂಪಿಯ ಗೈಡ್‍ಗಳೆಲ್ಲಾ ಸ್ಮಾರಕಗಳಿಗೆ ಸೀಮಿತರಾದವರು. ಅಂತಹ ಕೊರತೆಯನ್ನು ಪಂಪಯ್ಯ ತುಂಬಿದರು. ಮೂರ್ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಪಂಪಯ್ಯ ಇದೀಗ ಯಾರೇ ವನ್ಯಜೀವಿ ಫೋಟೋಗ್ರಾಫರ್ಸ್ ಬಂದರೆ ಆತನೆ ಮಾರ್ಗದರ್ಶಿ. ಸ್ವತಃ ಪಂಪಯ್ಯ ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್. ಹಾರ್ನ್‍ಬಿಲ್‍ನಂತಹ ಅಂತಾರಾಷ್ಟ್ರೀಯ ವನ್ಯಜೀವಿ ಪತ್ರಿಕೆ ಮುಖಪುಟದಲ್ಲಿ ಪಂಪಯ್ಯ ಕ್ಲಿಕ್ಕಿಸಿದ ಬೆನ್ನ ಮೇಲೆ ಮರಿಗಳ ಹೊತ್ತ ಕರಡಿಯ ಫೋಟೋ ಪ್ರಕಟವಾಗಿತ್ತು. ದರೋಜಿಯ ಕರಡಿಧಾಮವನ್ನು ಒಳಗೊಂಡ ಅರಣ್ಯ ಇಲಾಖೆಯ ವರದಿ ಇತ್ಯಾದಿಗಳ ಸರಕಾರಿ ದಾಖಲೆಗಳ ಮುಖಪುಟವನ್ನೂ, ಕನ್ನಡ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರುಗಳನ್ನೂ ಪಂಪಯ್ಯನ ಫೋಟೋಗಳು ಆವರಿಸಿವೆ. ಹಂಪಿ ಉತ್ಸವಗಳಲ್ಲಿ ಫೋಟೋಪ್ರದರ್ಶನ ಮಾಡಿ ಜನಸಾಮಾನ್ಯರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹೀಗೆ ವನ್ಯಜೀವಿ ಫೋಟೋಗ್ರಫಿಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ವನ್ಯಜೀವಿ ಫೋಟೋಗ್ರಫಿಯಲ್ಲಿ ಪಂಪಯ್ಯ ತನ್ನದೇ ಆದ ಗುರುತನ್ನು ಕಾಯ್ದುಕೊಂಡಿದ್ದಾರೆ.

ವ್ಯಕ್ತಿಯಾಗಿ ಪಂಪಯ್ಯ ವನ್ಯಜೀವಿ ಪರಿಸರ ಅಂತೆಲ್ಲಾ ಹತ್ತಾರು ಸೂಕ್ಷ್ಮಗಳನ್ನು ಅರಿತಿರುವ ಇವರು ಶಾಲಾ ಮಕ್ಕಳಿಗೂ, ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗೂ ಭಾಷಣ, ಸಂವಾದ, ಚರ್ಚೆಗಳ ಮೂಲಕ ಈ ಅರಿವನ್ನು ಸಮುದಾಯಕ್ಕೆ ವಿಸ್ತರಿಸುತ್ತಿದ್ದಾರೆ. ಈ ಕಾರಣಕ್ಕೆ ಪಂಪಯ್ಯ ಸಮುದಾಯದ ಪರಿಸರ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದಾಗಲೂ, ಕಮಲಾಪುರ ಪಟ್ಟಣ ಪಂಚಾಯ್ತಿಯ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾಗಲೂ ಈ ಸರಕಾರಿ ಸಂಸ್ಥೆಗಳನ್ನು ಪರಿಸರ ಪ್ರಜ್ಞೆಯನ್ನು ರೂಪಿಸುವುದಕ್ಕೆ ಬಳಸಿಕೊಂಡದ್ದು ವಿಶೇಷ.

ಇದೀಗ ತನ್ನ ಪರಿಸರದ ಅರಿವು ಮತ್ತು ಕಾಳಜಿಯನ್ನು ವಿಸ್ತರಿಸುವ ಪ್ರಾಯೋಗಿಕ ಹಂತಕ್ಕೆ ಪಂಪಯ್ಯ ಬಂದಿದ್ದಾರೆ. ಐದು ವರ್ಷದ ಹಿಂದೆ ಬರಡಾಗಿದ್ದ ನೆಲವೊಂದನ್ನು ಹಸಿರಾಗಿಸಿ ಗಮನ ಸೆಳೆದಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರದಿಂದ ನಾಲ್ಕು ಕಿಲೋಮೀಟರ್ ಅಂತರದ ತುಂಗಭದ್ರಾ ಜಲಾಶಯದ (ಎಚ್.ಎಲ್.ಸಿ) ಮೇಲ್ಮಟ್ಟದ ಕಾಲುವೆಯ ಬಳಿ ತುಂಗಭದ್ರ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದದ್ದು ಬಿಟ್ಟರೆ, ನೀರು ಗೊಬ್ಬರ ಪಾಲನೆಯನ್ನು ಪಂಪಯ್ಯನೇ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ.

ಇದಕ್ಕೆ ಹೊಂದಿಕೊಂಡಂತೆ ಪಂಪಯ್ಯನ ಸ್ವಂತದ ಒಂದೆಕರೆ ಹೊಲವೂ ಕಾಡಿನಂತಿದೆ. ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳ ನೀರಿನ ದಾಹ ತಣಿಸಲು ಕೃಷಿಹೊಂಡ ಹಾಕಿಸಿದ್ದಾರೆ. ಫೋಟೋಗ್ರಫಿಗಾಗಿ ಬಂಕರ್ ನಿರ್ಮಿಸಿದ್ದಾರೆ. ಇದೀಗ ಹತ್ತಾರು ವಿಧದ ಪಕ್ಷಿ ಪ್ರಾಣಿ ವನ್ಯಜೀವಿಗಳು ಈ ಪುಟ್ಟ ಅರಣ್ಯದ ಸಂಗಾತಿಗಳಾಗಿವೆ. ಹೀಗೆ ಕಮಲಾಪುರದ ಮಳೇಮಠದ ಪಂಪಯ್ಯ ನಿಧಾನಕ್ಕೆ `ಪರಿಸರದ ಪಂಪಯ್ಯ’ನಾಗಿ ರೂಪಾಂತರಗೊಂಡ ಪಯಣವೇ ಕುತೂಹಲಕಾರಿಯಾಗಿದೆ.

`1994 ರಲ್ಲಿ ದರೋಜಿ ಕರಡಿಧಾಮ ಆದಾಗ ಅದರ ಓಡಾಟದಲ್ಲಿ ಸಿಕ್ಕ ಫೋಟೋಗ್ರಾಫರ್ಸ್, ವನ್ಯಜೀವಿ ತಜ್ಞರುಗಳ ಜತೆಗಿನ ಒಡನಾಟವೇ ನನ್ನನ್ನು ಪರಿಸರಕ್ಕೆ ಹತ್ತಿರ ತಂದಿತು. ಅಲ್ಲಿಂದ ನನ್ನ ಆಸಕ್ತಿ ವನ್ಯಜೀವಿ ಪರಿಸರ ಫೋಟೋಗ್ರಫಿ ಅಂತೆಲ್ಲಾ ಹೆಚ್ಚಾಯಿತು, ಇದೀಗ ಪುಟ್ಟ ಕಾಡು ಬೆಳೆಸುವ ಮಟ್ಟಕ್ಕೆ ಬಂದಿದೆ. ಪರಿಸರದ ಬಗೆಗೆ ಸಮುದಾಯಗಳಿಗೆ, ಈಗ ಬೆಳೆಯುವ ಮಕ್ಕಳಿಗೆ ಹೆಚ್ಚಿನ ತಿಳವಳಿಕೆ ಕೊಡಬೇಕು ಎನ್ನುವುದು ನನ್ನ ಕನಸು’ ಎಂದು ಪಂಪಯ್ಯ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...