Homeಅಂತರಾಷ್ಟ್ರೀಯಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

ಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

- Advertisement -
- Advertisement -

ಸುಡಾನ್‌ನ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್‌ ಅನ್ನು ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಫ್ ಸೂಡಾನ್‌ನ ಒಂದು ಶಕ್ತಿಶಾಲಿ ಪ್ಯಾರಾ ಮಿಲಿಟರಿ ದಳವಾಗಿದ್ದು, ಇದು ಸಾಮಾನ್ಯ ಸೇನೆಯಾದ ಸೂಡಾನೀಸ್ ಆರ್ಮ್ಡ್ ಫೋರ್ಸಸ್ (ಎಸ್‌ಎಎಫ್‌) ಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

2003ರಲ್ಲಿ ದಾರ್ಫರ್‌ನಲ್ಲಿ ನಡೆದ ಜನಾಂಗೀಯ ದಬ್ಬಾಳಿಕೆಯ ಸಮಯದಲ್ಲಿ ಸರ್ಕಾರಿ ಬೆಂಬಲಿತ ಜಂಜಾವೀದ್ ಮಿಲೀಷ್ಯಾಗಳಿಂದ ಉಗಮವಾದ ಈ ಗುಂಪನ್ನು 2013ರಲ್ಲಿ ಔಪಚಾರಿಕವಾಗಿ ಆರ್‌ಎಸ್‌ಎಫ್‌ ಘೋಷಿಸಲಾಯಿತು.

ಇದರ ನಾಯಕ ಮೊಹಮ್ಮದ್ ಹಮದಾನ್ ದಗಾಲೋ (ಹೆಮೆದ್ತಿ) ಚಿನ್ನದ ಗಣಿಗಳು ಮತ್ತು ಯುಎಇ ಒಡಂಬಡಿಕೆಗಳ ಮೂಲಕ ಭಾರೀ ಆರ್ಥಿಕ ಶಕ್ತಿಯನ್ನು ಸಂಗ್ರಹಿಸಿದ್ದಾನೆ. 2023ರಲ್ಲಿ ಆರಂಭವಾದ ಸೂಡಾನ್ ಆಂತರಿಕ ಯುದ್ಧದಲ್ಲಿ ಆರ್‌ಎಸ್‌ಎಫ್‌ ಮತ್ತು ಸರ್ಕಾರಿ ಸೇನೆ ನಡುವೆ ಘೋರ ಸಂಘರ್ಷ ನಡೆಯುತ್ತಿದ್ದು, ಅಕ್ಟೋಬರ್ 26,2025ರಂದು ಅಲ್‌ ಫಾಶೆರ್ ನಗರವನ್ನು ವಶಪಡಿಸಿಕೊಂಡು ದಾರ್ಫರ್‌ನ ಐದೂ ರಾಜ್ಯಗಳನ್ನು ಆರ್‌ಎಸ್‌ಎಫ್‌ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತಂದುಕೊಂಡಿದೆ.

ಆರ್‌ಎಸ್‌ಎಫ್‌ ಮೇಲೆ ಜನಾಂಗೀಯ ಶುದ್ಧೀಕರಣ, ಅತ್ಯಾಚಾರ, ನಾಗರಿಕರ ಹತ್ಯೆ, ಆಹಾರ ಸರಬರಾಜಿಗೆ ತಡೆ ಮತ್ತು ಮಾನವೀಯತೆ ವಿರೋಧಿ ಕೃತ್ಯಗಳ ಆರೋಪಗಳಿವೆ. ಇದು ಸರ್ಕಾರಿ ಸೇನೆಯ ಭಾಗವಲ್ಲದಿದ್ದರೂ, ಹಿಂದೆ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸಂಪೂರ್ಣ ದಂಗೆಗಾರ ಶಕ್ತಿಯಾಗಿ ಪರಿಣಮಿಸಿದೆ.

ಆರ್‌ಎಸ್‌ಎಫ್‌ ಅಲ್‌-ಪಾಶೆರ್‌ ಅನ್ನು ವಶಪಡಿಸಿಕೊಂಡ ಬಳಿಕ ದಾರ್ಫರ್‌ ಪ್ರದೇಶದಲ್ಲಿ ಭಯಾನಕ ಮಾನವೀಯ ಸಂಕಷ್ಟಗಳು ಮತ್ತು ರಾಜಕೀಯ ಬದಲಾವಣೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಸೂಡಾನ್ ಸೇನೆಯ ನಾಯಕ ಅಬ್ದುಲ್ ಫತ್ಹ್ ಅಲ್-ಬುರ್ಹಾನ್ ಅವರು ಅಕ್ಟೋಬರ್ 27ರಂದು ಸೇನೆಯನ್ನು ‘ಸುರಕ್ಷಿತ ಸ್ಥಳಗಳಿಗೆ’ ಕರೆಸಿಕೊಂಡಿರುವುದಾಗಿ ಘೋಷಿಸಿದ್ದಾರೆ.

ಆರ್‌ಎಸ್‌ಎಫ್‌ ದೇಶವನ್ನು ವಿಭಜಿಸುವ ಆಂತಕ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳಲ್ಲಿ ಆರ್‌ಎಸ್‌ಎಫ್‌ನವರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುವ, ನಾಗರಿಕರು ಜೀವ ಉಳಿಸಿಕೊಳ್ಳಲು ಓಡುವ ಮತ್ತು ಆರ್‌ಎಸ್‌ಎಫ್‌ನವರು ಅವರನ್ನು ಹಿಡಿದು ಬೇಕಾಬಿಟ್ಟಿ ಹತ್ಯೆ ಮಾಡಿ ಸಂಭ್ರಮಿಸಿದ ಭಯಾನಕರ ದೃಶ್ಯಗಳಿವೆ.

ಆರ್‌ಎಸ್‌ಎಫ್‌ ಅಲ್‌-ಫಾಶೆರ್‌ ಅನ್ನು ವಶಪಡಿಸಿಕೊಂಡು ದಾರ್ಫರ್ ಅನ್ನು ನಿಯಂತ್ರಣಕ್ಕೆ ಪಡೆದ ಬಳಿಕ 2,000ಕ್ಕೂ ಹೆಚ್ಚು ನಾಗರಿಕರನ್ನು (ಮಹಿಳೆಯರು ಮತ್ತು ಮಕ್ಕಳು ಸೇರಿ) ನಿರ್ದಯವಾಗಿ ಕೊಂದಿದೆ ಎಂದು ಐರೋಪಾ ಸಂಸ್ಥೆಯ ಒಂದು ವರದಿಯ ಆರೋಪಿಸಿದೆ.

ಯೇಲ್ ಹ್ಯೂಮನಿಟೇರಿಯನ್ ರಿಸರ್ಚ್ ಲ್ಯಾಬ್‌ನ ಸ್ಯಾಟೆಲೈಟ್ ಚಿತ್ರಗಳು ದಾರ್ಫರ್‌ನಲ್ಲಿ ಶವಗಳ ರಾಶಿ ಮತ್ತು ಜನರು ಜೀವ ಉಳಿಸಿಕೊಳ್ಳು ಓಡುತ್ತಿರುವುದನ್ನು ತೋರಿಸಿವೆ ಎಂದು ವರದಿಯಾಗಿದೆ.

ವಿಶ್ವ ಸಂಸ್ಥೆ (ಯುಎನ್‌) ಮತ್ತು ಆಫ್ರಿಕನ್ ಯೂನಿಯನ್ (ಎಯು) ನಾಗರಿಕರ ರಕ್ಷಣೆ ಮತ್ತು ತಕ್ಷಣದ ಶಾಂತಿ ಘೋಷಣೆಗೆ ಕರೆ ನೀಡಿವೆ. ಯುಎನ್‌ ಅಧ್ಯಕ್ಷ ಅಂಟೊನಿಯೋ ಗುಟೆರೆಸ್ ಅಲ್- ಪಾಶೆರ್ ವಶಪಡಿಸಿಕೊಂಡ ಬಳಿಕದ ಬೆಳವಣಿಗಯನ್ನು ‘ಅತ್ಯಂತ ಭೀಕರ’ ಎಂದಿದ್ದಾರೆ.

ದಾರ್ಫರ್ ಗವರ್ನರ್ ಮಿನ್ನಿ ಅರ್ಕೋ ಮಿನಾವಿ ವಿದೇಶಿ ಗೌಪ್ಯ ಸೇವೆಗಳು (ಯುಎಇ ಸೇರಿ) ಆರ್‌ಎಸ್‌ಎಫ್‌ಗೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಕಾನೂನುಸಭಾ ಸದಸ್ಯರು ಯುಎಇಯನ್ನು ಹೊಣೆ ಮಾಡಲು ಆಗ್ರಹಿಸಿದ್ದಾರೆ.

ಸುಡಾನ್‌ನ ರಾಜಕೀಯ ಮತ್ತು ಮಾನವ ಹಕ್ಕು ಸಂಘಟನೆಗಳು ಮಾನವೀಯತೆ ಮೇಲಿನ ಈ ಭೀಕರ ಹಿಂಸಾಚಾರಕ್ಕೆ ಆರ್‌ಎಸ್‌ಎಫ್‌ ಮತ್ತು ಎಸ್‌ಎಎಫ್‌ ಇಬ್ಬರನ್ನೂ ಯುದ್ಧಪರಾಧದ ಹೊಣೆ ಮಾಡುವಂತೆ ಒತ್ತಾಯಿಸಿವೆ.

ಗಾಝಾ ಮೇಲೆ ‘ಪ್ರಬಲ ದಾಳಿ’ಗೆ ನೆತನ್ಯಾಹು ಆದೇಶ : 30 ಪ್ಯಾಲೆಸ್ತೀನಿಯರನ್ನು ಹತ್ಯೆಗೈದ ಇಸ್ರೇಲ್ ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ಅಂತರ್ಜಾತಿ ವಿವಾಹ, ಸೊಸೆಯ ಕುಟುಂಬದವರಿಂದ ದಲಿತ ವ್ಯಕ್ತಿ ಕೊಲೆ.

ವಧುವಿನ ಕುಟುಂಬವು ಈ ಹಿಂದೆ ವರನ ತಂದೆಯನ್ನು ಬೆದರಿಸಿ ಸೊಸೆಯನ್ನು ತಮ್ಮ ಮನೆಗೆ ವಾಪಸ್‌ ಕಳುಹಿಸಲು ಒತ್ತಾಯಿಸಿತ್ತು ಎಂದು ವರನ ಕುಟುಂಬದವರು ಆರೋಪಿಸಿದ್ದಾರೆ. ಗುಜರಾತ್‌ ನ ನರೋಲ್‌ ಬಳಿ ಅಂತರ್ಜಾತಿ ವಿವಾಹವಾದ ನಂತರ ಮೇಲ್ಜಾತಿಗೆ...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ-ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ಬಿಹಾರದ ಒಂದೇ ಎಂಜಿನ್ ಸರ್ಕಾರ ಕೇಂದ್ರದಿಂದ ನಡೆಸಲ್ಪಡುತ್ತಿದೆ: ಪ್ರಿಯಾಂಕಾ ಗಾಂಧಿ

ಮುಂಬರುವ ರಾಜ್ಯ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಬಿಹಾರದ ಜನರಲ್ಲಿ ಮನವಿ ಮಾಡಿದರು. ಬೇಗುಸರಾಯ್‌ನಲ್ಲಿ ನಡೆದ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಬಿಹಾರದ ಎನ್‌ಡಿಎ ಸರ್ಕಾರದ ಉದ್ದೇಶಗಳು...

‘ನನ್ನ ಮಾತು ಕೇಳಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಿರಲಿಲ್ಲ’: ಜಮೀರ್ ಅಹಮದ್ ಖಾನ್

ಹೊಸಪೇಟೆ: ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ವಿಚಾರಣೆಯಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ, ನನ್ನ ಮಾತನ್ನು ತಿರಸ್ಕರಿಸಿ, ಯಡಿಯೂರಪ್ಪನವರು ಜೈಲಿಗೆ ಹೋಗುವಂತಾಯಿತು. ನನ್ನ ಮಾತು...

ಮಸೀದಿ ಧ್ವಂಸಕ್ಕೆ ‘ಜೈಶ್ರೀರಾಮ್-ಜೈ ಬಜರಂಗಬಲಿ’ ಘೋಷಣೆ ಸಾಧನವಾಗಿ ಬಳಸಲಾಗುತ್ತಿದೆ: ಸ್ವಾಮಿ ಪ್ರಸಾದ್ ಮೌರ್ಯ

ಬಿಜೆಪಿ ಆಡಳಿತದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಈಗ ಜೈ ಶ್ರೀ...

ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಕಾಲ್ತುಳಿತ: ಆಯೋಜಕರ ಮೇಲೆ ಆರೋಪ ಹೊರಿಸಿದ ಆಂಧ್ರ ಮುಖ್ಯಮಂತ್ರಿ

ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾ ಪ್ರದೇಶದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹತ್ತು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡ ಘಟನೆಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವು ಖಾಸಗಿ ವ್ಯಕ್ತಿಗೆ ಸೇರಿದ್ದು,...

ದೆಹಲಿ ವಿಷಕಾರಿ ಗಾಳಿ: ಪ್ರತಿ ಏಳು ಸಾವುಗಳಲ್ಲಿ ಒಂದು ಮಾಲಿನ್ಯಕ್ಕೆ ಸಂಬಂಧಿಸಿದ್ದು

ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್‌ಎಂಇ) ನಡೆಸಿದ ವಿಶ್ಲೇಷಣೆಯ ಪ್ರಕಾರ, ವಾಯು ಮಾಲಿನ್ಯವು ದೆಹಲಿಗೆ ಅತ್ಯಂತ ಮಾರಕ ಆರೋಗ್ಯ ಸಮಸ್ಯೆಯಾಗಿ ಮುಂದುವರೆದಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಬೊಜ್ಜುಗಿಂತ ಹೆಚ್ಚಿನ ಜೀವಗಳನ್ನು...

ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ…ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಬಿಜೆಪಿ ಸಂಸದನ ಒತ್ತಾಯ

ರಾಷ್ಟ್ರ ರಾಜಧಾನಿ ದೆಹಲಿಯನ್ನು ಮಹಾಭಾರತ ಯುಗದಲ್ಲಿ ಪಾಂಡವರು ಸ್ಥಾಪಿಸಿದರು ಎಂದು ನಂಬಲಾದ ಪ್ರಾಚೀನ ನಗರದ ಹೆಸರಾದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಕೇಂದ್ರ ಗೃಹ ಸಚಿವ...