Homeಅಂತರಾಷ್ಟ್ರೀಯಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

ಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

- Advertisement -
- Advertisement -

ಸುಡಾನ್‌ನ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್‌ ಅನ್ನು ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಫ್ ಸೂಡಾನ್‌ನ ಒಂದು ಶಕ್ತಿಶಾಲಿ ಪ್ಯಾರಾ ಮಿಲಿಟರಿ ದಳವಾಗಿದ್ದು, ಇದು ಸಾಮಾನ್ಯ ಸೇನೆಯಾದ ಸೂಡಾನೀಸ್ ಆರ್ಮ್ಡ್ ಫೋರ್ಸಸ್ (ಎಸ್‌ಎಎಫ್‌) ಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

2003ರಲ್ಲಿ ದಾರ್ಫರ್‌ನಲ್ಲಿ ನಡೆದ ಜನಾಂಗೀಯ ದಬ್ಬಾಳಿಕೆಯ ಸಮಯದಲ್ಲಿ ಸರ್ಕಾರಿ ಬೆಂಬಲಿತ ಜಂಜಾವೀದ್ ಮಿಲೀಷ್ಯಾಗಳಿಂದ ಉಗಮವಾದ ಈ ಗುಂಪನ್ನು 2013ರಲ್ಲಿ ಔಪಚಾರಿಕವಾಗಿ ಆರ್‌ಎಸ್‌ಎಫ್‌ ಘೋಷಿಸಲಾಯಿತು.

ಇದರ ನಾಯಕ ಮೊಹಮ್ಮದ್ ಹಮದಾನ್ ದಗಾಲೋ (ಹೆಮೆದ್ತಿ) ಚಿನ್ನದ ಗಣಿಗಳು ಮತ್ತು ಯುಎಇ ಒಡಂಬಡಿಕೆಗಳ ಮೂಲಕ ಭಾರೀ ಆರ್ಥಿಕ ಶಕ್ತಿಯನ್ನು ಸಂಗ್ರಹಿಸಿದ್ದಾನೆ. 2023ರಲ್ಲಿ ಆರಂಭವಾದ ಸೂಡಾನ್ ಆಂತರಿಕ ಯುದ್ಧದಲ್ಲಿ ಆರ್‌ಎಸ್‌ಎಫ್‌ ಮತ್ತು ಸರ್ಕಾರಿ ಸೇನೆ ನಡುವೆ ಘೋರ ಸಂಘರ್ಷ ನಡೆಯುತ್ತಿದ್ದು, ಅಕ್ಟೋಬರ್ 26,2025ರಂದು ಅಲ್‌ ಫಾಶೆರ್ ನಗರವನ್ನು ವಶಪಡಿಸಿಕೊಂಡು ದಾರ್ಫರ್‌ನ ಐದೂ ರಾಜ್ಯಗಳನ್ನು ಆರ್‌ಎಸ್‌ಎಫ್‌ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತಂದುಕೊಂಡಿದೆ.

ಆರ್‌ಎಸ್‌ಎಫ್‌ ಮೇಲೆ ಜನಾಂಗೀಯ ಶುದ್ಧೀಕರಣ, ಅತ್ಯಾಚಾರ, ನಾಗರಿಕರ ಹತ್ಯೆ, ಆಹಾರ ಸರಬರಾಜಿಗೆ ತಡೆ ಮತ್ತು ಮಾನವೀಯತೆ ವಿರೋಧಿ ಕೃತ್ಯಗಳ ಆರೋಪಗಳಿವೆ. ಇದು ಸರ್ಕಾರಿ ಸೇನೆಯ ಭಾಗವಲ್ಲದಿದ್ದರೂ, ಹಿಂದೆ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸಂಪೂರ್ಣ ದಂಗೆಗಾರ ಶಕ್ತಿಯಾಗಿ ಪರಿಣಮಿಸಿದೆ.

ಆರ್‌ಎಸ್‌ಎಫ್‌ ಅಲ್‌-ಪಾಶೆರ್‌ ಅನ್ನು ವಶಪಡಿಸಿಕೊಂಡ ಬಳಿಕ ದಾರ್ಫರ್‌ ಪ್ರದೇಶದಲ್ಲಿ ಭಯಾನಕ ಮಾನವೀಯ ಸಂಕಷ್ಟಗಳು ಮತ್ತು ರಾಜಕೀಯ ಬದಲಾವಣೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಸೂಡಾನ್ ಸೇನೆಯ ನಾಯಕ ಅಬ್ದುಲ್ ಫತ್ಹ್ ಅಲ್-ಬುರ್ಹಾನ್ ಅವರು ಅಕ್ಟೋಬರ್ 27ರಂದು ಸೇನೆಯನ್ನು ‘ಸುರಕ್ಷಿತ ಸ್ಥಳಗಳಿಗೆ’ ಕರೆಸಿಕೊಂಡಿರುವುದಾಗಿ ಘೋಷಿಸಿದ್ದಾರೆ.

ಆರ್‌ಎಸ್‌ಎಫ್‌ ದೇಶವನ್ನು ವಿಭಜಿಸುವ ಆಂತಕ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳಲ್ಲಿ ಆರ್‌ಎಸ್‌ಎಫ್‌ನವರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುವ, ನಾಗರಿಕರು ಜೀವ ಉಳಿಸಿಕೊಳ್ಳಲು ಓಡುವ ಮತ್ತು ಆರ್‌ಎಸ್‌ಎಫ್‌ನವರು ಅವರನ್ನು ಹಿಡಿದು ಬೇಕಾಬಿಟ್ಟಿ ಹತ್ಯೆ ಮಾಡಿ ಸಂಭ್ರಮಿಸಿದ ಭಯಾನಕರ ದೃಶ್ಯಗಳಿವೆ.

ಆರ್‌ಎಸ್‌ಎಫ್‌ ಅಲ್‌-ಫಾಶೆರ್‌ ಅನ್ನು ವಶಪಡಿಸಿಕೊಂಡು ದಾರ್ಫರ್ ಅನ್ನು ನಿಯಂತ್ರಣಕ್ಕೆ ಪಡೆದ ಬಳಿಕ 2,000ಕ್ಕೂ ಹೆಚ್ಚು ನಾಗರಿಕರನ್ನು (ಮಹಿಳೆಯರು ಮತ್ತು ಮಕ್ಕಳು ಸೇರಿ) ನಿರ್ದಯವಾಗಿ ಕೊಂದಿದೆ ಎಂದು ಐರೋಪಾ ಸಂಸ್ಥೆಯ ಒಂದು ವರದಿಯ ಆರೋಪಿಸಿದೆ.

ಯೇಲ್ ಹ್ಯೂಮನಿಟೇರಿಯನ್ ರಿಸರ್ಚ್ ಲ್ಯಾಬ್‌ನ ಸ್ಯಾಟೆಲೈಟ್ ಚಿತ್ರಗಳು ದಾರ್ಫರ್‌ನಲ್ಲಿ ಶವಗಳ ರಾಶಿ ಮತ್ತು ಜನರು ಜೀವ ಉಳಿಸಿಕೊಳ್ಳು ಓಡುತ್ತಿರುವುದನ್ನು ತೋರಿಸಿವೆ ಎಂದು ವರದಿಯಾಗಿದೆ.

ವಿಶ್ವ ಸಂಸ್ಥೆ (ಯುಎನ್‌) ಮತ್ತು ಆಫ್ರಿಕನ್ ಯೂನಿಯನ್ (ಎಯು) ನಾಗರಿಕರ ರಕ್ಷಣೆ ಮತ್ತು ತಕ್ಷಣದ ಶಾಂತಿ ಘೋಷಣೆಗೆ ಕರೆ ನೀಡಿವೆ. ಯುಎನ್‌ ಅಧ್ಯಕ್ಷ ಅಂಟೊನಿಯೋ ಗುಟೆರೆಸ್ ಅಲ್- ಪಾಶೆರ್ ವಶಪಡಿಸಿಕೊಂಡ ಬಳಿಕದ ಬೆಳವಣಿಗಯನ್ನು ‘ಅತ್ಯಂತ ಭೀಕರ’ ಎಂದಿದ್ದಾರೆ.

ದಾರ್ಫರ್ ಗವರ್ನರ್ ಮಿನ್ನಿ ಅರ್ಕೋ ಮಿನಾವಿ ವಿದೇಶಿ ಗೌಪ್ಯ ಸೇವೆಗಳು (ಯುಎಇ ಸೇರಿ) ಆರ್‌ಎಸ್‌ಎಫ್‌ಗೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಕಾನೂನುಸಭಾ ಸದಸ್ಯರು ಯುಎಇಯನ್ನು ಹೊಣೆ ಮಾಡಲು ಆಗ್ರಹಿಸಿದ್ದಾರೆ.

ಸುಡಾನ್‌ನ ರಾಜಕೀಯ ಮತ್ತು ಮಾನವ ಹಕ್ಕು ಸಂಘಟನೆಗಳು ಮಾನವೀಯತೆ ಮೇಲಿನ ಈ ಭೀಕರ ಹಿಂಸಾಚಾರಕ್ಕೆ ಆರ್‌ಎಸ್‌ಎಫ್‌ ಮತ್ತು ಎಸ್‌ಎಎಫ್‌ ಇಬ್ಬರನ್ನೂ ಯುದ್ಧಪರಾಧದ ಹೊಣೆ ಮಾಡುವಂತೆ ಒತ್ತಾಯಿಸಿವೆ.

ಗಾಝಾ ಮೇಲೆ ‘ಪ್ರಬಲ ದಾಳಿ’ಗೆ ನೆತನ್ಯಾಹು ಆದೇಶ : 30 ಪ್ಯಾಲೆಸ್ತೀನಿಯರನ್ನು ಹತ್ಯೆಗೈದ ಇಸ್ರೇಲ್ ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...