Homeಅಂತರಾಷ್ಟ್ರೀಯಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

ಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

- Advertisement -
- Advertisement -

ಸುಡಾನ್‌ನ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್‌ ಅನ್ನು ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಫ್ ಸೂಡಾನ್‌ನ ಒಂದು ಶಕ್ತಿಶಾಲಿ ಪ್ಯಾರಾ ಮಿಲಿಟರಿ ದಳವಾಗಿದ್ದು, ಇದು ಸಾಮಾನ್ಯ ಸೇನೆಯಾದ ಸೂಡಾನೀಸ್ ಆರ್ಮ್ಡ್ ಫೋರ್ಸಸ್ (ಎಸ್‌ಎಎಫ್‌) ಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

2003ರಲ್ಲಿ ದಾರ್ಫರ್‌ನಲ್ಲಿ ನಡೆದ ಜನಾಂಗೀಯ ದಬ್ಬಾಳಿಕೆಯ ಸಮಯದಲ್ಲಿ ಸರ್ಕಾರಿ ಬೆಂಬಲಿತ ಜಂಜಾವೀದ್ ಮಿಲೀಷ್ಯಾಗಳಿಂದ ಉಗಮವಾದ ಈ ಗುಂಪನ್ನು 2013ರಲ್ಲಿ ಔಪಚಾರಿಕವಾಗಿ ಆರ್‌ಎಸ್‌ಎಫ್‌ ಘೋಷಿಸಲಾಯಿತು.

ಇದರ ನಾಯಕ ಮೊಹಮ್ಮದ್ ಹಮದಾನ್ ದಗಾಲೋ (ಹೆಮೆದ್ತಿ) ಚಿನ್ನದ ಗಣಿಗಳು ಮತ್ತು ಯುಎಇ ಒಡಂಬಡಿಕೆಗಳ ಮೂಲಕ ಭಾರೀ ಆರ್ಥಿಕ ಶಕ್ತಿಯನ್ನು ಸಂಗ್ರಹಿಸಿದ್ದಾನೆ. 2023ರಲ್ಲಿ ಆರಂಭವಾದ ಸೂಡಾನ್ ಆಂತರಿಕ ಯುದ್ಧದಲ್ಲಿ ಆರ್‌ಎಸ್‌ಎಫ್‌ ಮತ್ತು ಸರ್ಕಾರಿ ಸೇನೆ ನಡುವೆ ಘೋರ ಸಂಘರ್ಷ ನಡೆಯುತ್ತಿದ್ದು, ಅಕ್ಟೋಬರ್ 26,2025ರಂದು ಅಲ್‌ ಫಾಶೆರ್ ನಗರವನ್ನು ವಶಪಡಿಸಿಕೊಂಡು ದಾರ್ಫರ್‌ನ ಐದೂ ರಾಜ್ಯಗಳನ್ನು ಆರ್‌ಎಸ್‌ಎಫ್‌ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತಂದುಕೊಂಡಿದೆ.

ಆರ್‌ಎಸ್‌ಎಫ್‌ ಮೇಲೆ ಜನಾಂಗೀಯ ಶುದ್ಧೀಕರಣ, ಅತ್ಯಾಚಾರ, ನಾಗರಿಕರ ಹತ್ಯೆ, ಆಹಾರ ಸರಬರಾಜಿಗೆ ತಡೆ ಮತ್ತು ಮಾನವೀಯತೆ ವಿರೋಧಿ ಕೃತ್ಯಗಳ ಆರೋಪಗಳಿವೆ. ಇದು ಸರ್ಕಾರಿ ಸೇನೆಯ ಭಾಗವಲ್ಲದಿದ್ದರೂ, ಹಿಂದೆ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸಂಪೂರ್ಣ ದಂಗೆಗಾರ ಶಕ್ತಿಯಾಗಿ ಪರಿಣಮಿಸಿದೆ.

ಆರ್‌ಎಸ್‌ಎಫ್‌ ಅಲ್‌-ಪಾಶೆರ್‌ ಅನ್ನು ವಶಪಡಿಸಿಕೊಂಡ ಬಳಿಕ ದಾರ್ಫರ್‌ ಪ್ರದೇಶದಲ್ಲಿ ಭಯಾನಕ ಮಾನವೀಯ ಸಂಕಷ್ಟಗಳು ಮತ್ತು ರಾಜಕೀಯ ಬದಲಾವಣೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಸೂಡಾನ್ ಸೇನೆಯ ನಾಯಕ ಅಬ್ದುಲ್ ಫತ್ಹ್ ಅಲ್-ಬುರ್ಹಾನ್ ಅವರು ಅಕ್ಟೋಬರ್ 27ರಂದು ಸೇನೆಯನ್ನು ‘ಸುರಕ್ಷಿತ ಸ್ಥಳಗಳಿಗೆ’ ಕರೆಸಿಕೊಂಡಿರುವುದಾಗಿ ಘೋಷಿಸಿದ್ದಾರೆ.

ಆರ್‌ಎಸ್‌ಎಫ್‌ ದೇಶವನ್ನು ವಿಭಜಿಸುವ ಆಂತಕ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳಲ್ಲಿ ಆರ್‌ಎಸ್‌ಎಫ್‌ನವರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುವ, ನಾಗರಿಕರು ಜೀವ ಉಳಿಸಿಕೊಳ್ಳಲು ಓಡುವ ಮತ್ತು ಆರ್‌ಎಸ್‌ಎಫ್‌ನವರು ಅವರನ್ನು ಹಿಡಿದು ಬೇಕಾಬಿಟ್ಟಿ ಹತ್ಯೆ ಮಾಡಿ ಸಂಭ್ರಮಿಸಿದ ಭಯಾನಕರ ದೃಶ್ಯಗಳಿವೆ.

ಆರ್‌ಎಸ್‌ಎಫ್‌ ಅಲ್‌-ಫಾಶೆರ್‌ ಅನ್ನು ವಶಪಡಿಸಿಕೊಂಡು ದಾರ್ಫರ್ ಅನ್ನು ನಿಯಂತ್ರಣಕ್ಕೆ ಪಡೆದ ಬಳಿಕ 2,000ಕ್ಕೂ ಹೆಚ್ಚು ನಾಗರಿಕರನ್ನು (ಮಹಿಳೆಯರು ಮತ್ತು ಮಕ್ಕಳು ಸೇರಿ) ನಿರ್ದಯವಾಗಿ ಕೊಂದಿದೆ ಎಂದು ಐರೋಪಾ ಸಂಸ್ಥೆಯ ಒಂದು ವರದಿಯ ಆರೋಪಿಸಿದೆ.

ಯೇಲ್ ಹ್ಯೂಮನಿಟೇರಿಯನ್ ರಿಸರ್ಚ್ ಲ್ಯಾಬ್‌ನ ಸ್ಯಾಟೆಲೈಟ್ ಚಿತ್ರಗಳು ದಾರ್ಫರ್‌ನಲ್ಲಿ ಶವಗಳ ರಾಶಿ ಮತ್ತು ಜನರು ಜೀವ ಉಳಿಸಿಕೊಳ್ಳು ಓಡುತ್ತಿರುವುದನ್ನು ತೋರಿಸಿವೆ ಎಂದು ವರದಿಯಾಗಿದೆ.

ವಿಶ್ವ ಸಂಸ್ಥೆ (ಯುಎನ್‌) ಮತ್ತು ಆಫ್ರಿಕನ್ ಯೂನಿಯನ್ (ಎಯು) ನಾಗರಿಕರ ರಕ್ಷಣೆ ಮತ್ತು ತಕ್ಷಣದ ಶಾಂತಿ ಘೋಷಣೆಗೆ ಕರೆ ನೀಡಿವೆ. ಯುಎನ್‌ ಅಧ್ಯಕ್ಷ ಅಂಟೊನಿಯೋ ಗುಟೆರೆಸ್ ಅಲ್- ಪಾಶೆರ್ ವಶಪಡಿಸಿಕೊಂಡ ಬಳಿಕದ ಬೆಳವಣಿಗಯನ್ನು ‘ಅತ್ಯಂತ ಭೀಕರ’ ಎಂದಿದ್ದಾರೆ.

ದಾರ್ಫರ್ ಗವರ್ನರ್ ಮಿನ್ನಿ ಅರ್ಕೋ ಮಿನಾವಿ ವಿದೇಶಿ ಗೌಪ್ಯ ಸೇವೆಗಳು (ಯುಎಇ ಸೇರಿ) ಆರ್‌ಎಸ್‌ಎಫ್‌ಗೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಕಾನೂನುಸಭಾ ಸದಸ್ಯರು ಯುಎಇಯನ್ನು ಹೊಣೆ ಮಾಡಲು ಆಗ್ರಹಿಸಿದ್ದಾರೆ.

ಸುಡಾನ್‌ನ ರಾಜಕೀಯ ಮತ್ತು ಮಾನವ ಹಕ್ಕು ಸಂಘಟನೆಗಳು ಮಾನವೀಯತೆ ಮೇಲಿನ ಈ ಭೀಕರ ಹಿಂಸಾಚಾರಕ್ಕೆ ಆರ್‌ಎಸ್‌ಎಫ್‌ ಮತ್ತು ಎಸ್‌ಎಎಫ್‌ ಇಬ್ಬರನ್ನೂ ಯುದ್ಧಪರಾಧದ ಹೊಣೆ ಮಾಡುವಂತೆ ಒತ್ತಾಯಿಸಿವೆ.

ಗಾಝಾ ಮೇಲೆ ‘ಪ್ರಬಲ ದಾಳಿ’ಗೆ ನೆತನ್ಯಾಹು ಆದೇಶ : 30 ಪ್ಯಾಲೆಸ್ತೀನಿಯರನ್ನು ಹತ್ಯೆಗೈದ ಇಸ್ರೇಲ್ ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...