Homeಮುಖಪುಟಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಭಾರತದ ಸೈನ್ಯ ಶ್ರೀನಗರ ತಲಪಿದ ದಿನವೇ ಪಟೇಲರ ಬೇಡಿಕೆಯನ್ನು ಮೌಂಟ್‌ಬ್ಯಾಟನ್ ಲಾಹೋರಿಗೆ ಕೊಂಡೊಯ್ದಿದ್ದರು. ಇತಿಹಾಸ ಅಥವಾ ಭೂಗೋಳದ ಗಂಧಗಾಳಿಯಿಲ್ಲದ ಲಿಯಾಕತ್ ಆಲಿ ಆಗುವುದಿಲ್ಲ ಎಂದರು- ಪತ್ರಕರ್ತ ಶೇಖರ್ ಗುಪ್ತ ಅವರ ಜೊತೆ ಮಾತನಾಡುತ್ತಾ ಹೀಗೆಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ಮಾಜಿ ಸಚಿವ ಸೈಫುದ್ದೀನ್ ಸೋಝ್!

- Advertisement -
- Advertisement -

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದವರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ! ಎಂದು ಮಾಜಿ ಸಚಿವ ಸೈಫುದ್ದೀನ್ ಸೋಝ್ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದಲ್ಲಿ ಗೃಹಮಂತ್ರಿಯಾಗಿದ್ದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಹೈದರಾಬಾದಿಗೆ ಪ್ರತಿಯಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಾಗಿದ್ದರು. ಆದರೆ, ನೆಹರೂ ಅವರ ಒತ್ತಾಯದ ಮೇರೆಗೆ ಕಾಶ್ಮೀರ ಭಾರತದಲ್ಲಿ ಉಳಿಯಿತು ಎಂಬ ದಂಗುಬಡಿಸುವ ಮಾಹಿತಿಯನ್ನು ನೀಡಿದ್ದಾರೆ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ, ಕಾಶ್ಮೀರದವರೇ ಆದ ಸೈಫುದ್ದೀನ್ ಸೋಝ್.

1947ರ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಶ್ರೀನಗರವನ್ನು ಪ್ರವೇಶಿಸಿದ ದಿನವೇ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ವಲ್ಲಭಭಾಯ್ ಪಟೇಲ್ ಅವರ ಪ್ರಸ್ತಾಪವನ್ನು ಲಾಹೋರಿಗೆ ಕೊಂಡೊಯ್ದಿದ್ದರು ಎಂದು ಸೋಝ್ ಅವರು ‘ದಿ ಪ್ರಿಂಟ್’  ಪ್ರಧಾನ ಸಂಪಾದಕ ಶೇಖರ್ ಗುಪ್ತ ಅವರಿಗೆ ಎನ್‌ಡಿಟಿವಿಯ ‘ವಾಕ್ ದ ಟಾಕ್ ಶೋ’ದಲ್ಲಿ ತಿಳಿಸಿದ್ದಾರೆ.

“ಮೊದಲ ದಿನದಿಂದಲೇ ಕಾಶ್ಮೀರವು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸರ್ದಾರ್ ಪಟೇಲ್ ಹಠಹಿಡಿದಿದ್ದರು. ಕಾಶ್ಮೀರವನ್ನು ತೆಗೆದುಕೊಂಡು ಹೈದರಾಬಾದ್-ದಖ್ಖಣವನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂದು ಪಾಕ್ ನಾಯಕ ಲಿಯಾಕತ್ ಆಲಿಯವರ ಮನವೊಲಿಸಲು ಪಟೇಲ್ ಅವರು ದೇಶವಿಭಜನಾ ಮಂಡಳಿಯಲ್ಲಿ ಶತಾಯಗತಾಯ ಯತ್ನಿಸಿದ್ದರು” ಎಂದು ಸೋಝ್ ಹೇಳಿದ್ದಾರೆ.

“ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸರ್ದಾರ್ ಮೊಹಮ್ಮದ್ ಆಲಿ ಮತ್ತು ನಮ್ಮ ರೆಡ್ಡಿ ಉಪಸ್ಥಿತರಿದ್ದರು. ಹೈದರಾಬಾದ್-ದಖ್ಖಣದ ಬಗ್ಗೆ ಮಾತೆತ್ತುವುದೇ ಬೇಡ; ಅದು ಪಾಕಿಸ್ತಾನದ ಜೊತೆಗೆ ಸಂಬಂಧವನ್ನೇ ಹೊಂದಿಲ್ಲ. ಹೈದರಾಬಾದನ್ನು ನಮಗೆ ಬಿಡಿ. ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಸರ್ದಾರ್ ಪಟೇಲ್ ಲಿಯಾಕತ್ ಆಲಿಯವರಿಗೆ ಹೇಳಿದರು.

“ನಾನು ನಿಮಗೆ ಕುತೂಹಲಕಾರಿ ಕತೆಯೊಂದನ್ನು ಹೇಳುವೆ. ನಮ್ಮ ಸೇನೆಯು ಶ್ರೀನಗರದಲ್ಲಿ ಬಂದಿಳಿದ ಮಧ್ಯಾಹ್ನವೇ ಮೌಂಟ್‌ಬ್ಯಾಟನ್ ಲಾಹೋರಿಗೆ ಹೋದರು. ಪಾಕಿಸ್ತಾನದ ಗವರ್ನರ್ ಲಿಯಾಕತ್ ಆಲಿ ಮತ್ತು ಇತರ ನಾಲ್ವರು ಸಚಿವರ ಜೊತೆ ಔತಣ ನಡೆಯಿತು. ನಾನು ಭಾರತದ ಶಕ್ತಿಶಾಲಿ ಮನುಷ್ಯ ಸರ್ದಾರ್ ಪಟೇಲರಿಂದ ಸಂದೇಶವೊಂದನ್ನು ತಂದಿದ್ದೇನೆ. ನೀವು ಹೈದರಾಬಾದ್-ದಖ್ಖಣವನ್ನು ಮರೆತುಬಿಡಿ; ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಮೌಂಟ್‌ಬ್ಯಾಟನ್ ಹೇಳಿದರು.

“ಆದರೆ ಸರ್ದಾರ್ ಶೌಕತ್ ಹಯಾತ್ ಖಾನ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಲಿಯಾಕತ್ ಆಲಿಯವರಿಗೆ ಇತಿಹಾಸವೂ ಗೊತ್ತಿರಲಿಲ್ಲ; ಭೂಗೋಳವೂ ಗೊತ್ತಿರಲಿಲ್ಲ. ಆದುದರಿಂದ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ” ಎಂದು ಸೋಝ್ ಹೇಳಿದ್ದಾರೆ.

“ಪಟೇಲರ ಮಾತು ನಡೆಯಲಿಲ್ಲ ಏಕೆಂದರೆ ನೆಹರೂ ಬಲವಾಗಿ ನಿಂತಿದ್ದರು. ಕಾಶ್ಮೀರದ ಜೊತೆ ಅವರ ಸಂಬಂಧವೂ ಬಲವಾಗಿತ್ತು. ಕಾಶ್ಮೀರವು ಜಾತ್ಯತೀತ ಭಾರತಕ್ಕೆ ಬರಬೇಕು, ಅದು ಇಲ್ಲಿ ಸುರಕ್ಷಿತವಾಗಿರುತ್ತದೆ ಅವರು ನಂಬಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೂ ತುಂಬಾ ಹತ್ತಿರವಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಸೋಪುರ್ ಸಮಾವೇಶದಲ್ಲಿ ಭಾಷಣ ಕೂಡಾ ಮಾಡಿದ್ದರು. ಅವರಿಗೆ ಕಾಶ್ಮೀರದ ಇತಿಹಾಸ ಸಂಪೂರ್ಣವಾಗಿ ಗೊತ್ತಿತ್ತು” ಎಂದು ಸೋಝ್ ಹೇಳಿದ್ದಾರೆ.

“ಶೇಖ್ ಅಬ್ದುಲ್ಲಾ ಅವರು ಎರಡು ದೇಶ ವಾದವನ್ನು ತಿರಸ್ಕರಿಸಿದ್ದರು. 1947ರ ಅಗಸ್ಟ್ 15ರಿಂದ ಅಕ್ಟೋಬರ್ 22ರ ತನಕ ಕಾಶ್ಮೀರ ಸ್ವತಂತ್ರ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು ಕೂಡಾ. ಆದರೆ, ಪಾಕಿಸ್ತಾನದ ದಾಳಿಕೋರರು ಒಳನುಗ್ಗಿದಾಗ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿತ್ತು” ಎಂದವರು ಹೇಳಿದ್ದಾರೆ.

“ನಮ್ಮ ನೆರೆಯಲ್ಲಿರುವ ಐದು ದೇಶಗಳಾದ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಅಫಘಾನಿಸ್ತಾನ ಕಾಶ್ಮೀರದ ಸ್ವಾತಂತ್ರ್ಯವನ್ನು ಯಾವತ್ತೂ ಒಪ್ಪುವುದಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ ಎಂದು ಶೇಖ್ ಅಬ್ದುಲ್ಲಾ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ” ಎಂದು ಸೋಝ್ ತಿಳಿಸಿದ್ದಾರೆ. ಅವರಿಗೆ ಭಾರತವು ಜಾತ್ಯತೀತ, ಬಹುಮುಖಿ ಮತ್ತು ಕಾಶ್ಮೀರದ ಕುರಿತು ಉದಾರಭಾವ ಹೊಂದಿರುವ ತನಕ ಭಾರತದಿಂದ ಹೊರಹೋಗುವ ಮನಸ್ಸೇ ಇರಲಿಲ್ಲ ಮತ್ತು ಇದರಿಂದಲೇ ದಿಲ್ಲಿ ಒಪ್ಪಂದ ಉಂಟಾಯಿತು ಎಂದೂ ಅವರು ಹೇಳಿದ್ದಾರೆ.

“ದುರದೃಷ್ಟವಶಾತ್ ನೆಹರೂ ಅವರಿಗೆ ಸ್ವಂತ ಸಂಪುಟದಲ್ಲಿಯೇ ಸೋಲಾಯಿತು. ಅದರಿಂದಾಗಿ ಅವರು ಶೇಖ್ ಅಬ್ದುಲ್ಲಾ ಅವರ ಸರಕಾರವನ್ನು ವಜಾಗೊಳಿಸಿ, ಅವರನ್ನು ಬಂಧನದಲ್ಲಿಡುವುದು ಅನಿವಾರ್ಯವಾಯಿತು. ಅವರಿಗೆ ಈ ಕುರಿತು ಪಶ್ಚಾತ್ತಾಪವಿತ್ತು. ಆದರೆ, ಅವರು ಏಕಾಂಗಿಯಾಗಿದ್ದರು” ಎಂದು ಸೋಝ್ ತಿಳಿಸಿದ್ದಾರೆ.

ಸರ್ದಾರ್ ಎ ರಿಯಾಸತ್ ಎಂದು ಕರೆಯಲ್ಪಡುವ  ಡಾ. ಕರಣ್ ಸಿಂಗ್ ಅವರು 1953ರಲ್ಲಿ ತನ್ನ ವಿರುದ್ಧ ಸಂಚು ಹೂಡಿದವರಲ್ಲಿ ಒಬ್ಬರು ಎಂದೂ ಶೇಖ್ ಅಬ್ದುಲ್ಲಾ ತನ್ನ ಪುಸ್ತಕದಲ್ಲಿ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

“ಕಾಶ್ಮೀರದ ಸಾಂವಿಧಾನಿಕ ವಿಧಾನಸಭೆಯನ್ನು ಮುಂದುವರಿಯಲು ಬಿಡಬೇಕಿತ್ತು. ನೀವು ಬೇಕಾದರೆ ರಾಮ್ ಜೇಠ್ಮಲಾನಿಯವರನ್ನು ಕೇಳಿ. ಅವರು ಕೂಡಾ ಅದನ್ನು ನಂಬಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯು ರಫಿ ಆಹ್ಮದ್ ಕಿದ್ವಾಯಿ, ಅಜಿತ್ ಪ್ರಸಾದ್ ಜೈನ್ ಮುಂತಾದ ಅಲ್ಪ ಮನಸ್ಸುಗಳು ನೆಹರೂ ಅವರ ಸುತ್ತಲಿನ ವಾತಾವರಣವನ್ನು ವಿಷಮಯ ಮಾಡಿದುದರಿಂದಾಗಿ ಕೆಟ್ಟುಹೋಯಿತು ಎಂದೂ ಸೋಝ್ ಹೇಳಿದ್ದಾರೆ. ಆಗ ರಾಜಕೀಯ ಕೆಲಸವನ್ನು ಗುಪ್ತಚರ ಸಂಸ್ಥೆಗಳ ಅದಕ್ಕಿಂತಲೂ ಅಲ್ಪ ಮನಸ್ಸುಗಳಿಗೆ ವಹಿಸಲಾಗುತ್ತಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೋಝ್ ವಿಷಾದಿಸಿದ್ದಾರೆ.

ಈಗಲೂ ಸಮಸ್ಯೆಗೆ ಪರಿಹಾರ ಎಂದರೆ ಹುರಿಯತ್ ನಾಯಕರ ಜೊತೆ ಮಾತನಾಡುವುದು ಮಾತ್ರ ಎಂದು ಹೇಳಿರುವ ಸೈಫುದ್ದೀನ್ ಸೋಝ್, ಯುವ ಕಾಶ್ಮೀರಿಗಳು ಕೋಪಗೊಂಡಿದ್ದಾರೆ; ಕುಟುಂಬದ ಇಬ್ಬರು ಮಕ್ಕಳು ಈಗಾಗಲೇ ಸತ್ತು, ಮೂರನೆಯವನು ಉಗ್ರಗಾಮಿಗಳ ಜೊತೆ ಹೋಗಿರುವಾಗ ಬಲಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೃಪೆ: ದಿ ಪ್ರಿಂಟ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಪೆರಿಯಾರ್ ಹೇಳಿಕೆ ಉಲ್ಲೇಖಿಸಿ 370 ನೇ ವಿಧಿ ರದ್ದತಿಯನ್ನು ಖಂಡಿಸಿದ ನಟ ವಿಜಯ್ ಸೇತುಪಥಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...