Homeಮುಖಪುಟಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಭಾರತದ ಸೈನ್ಯ ಶ್ರೀನಗರ ತಲಪಿದ ದಿನವೇ ಪಟೇಲರ ಬೇಡಿಕೆಯನ್ನು ಮೌಂಟ್‌ಬ್ಯಾಟನ್ ಲಾಹೋರಿಗೆ ಕೊಂಡೊಯ್ದಿದ್ದರು. ಇತಿಹಾಸ ಅಥವಾ ಭೂಗೋಳದ ಗಂಧಗಾಳಿಯಿಲ್ಲದ ಲಿಯಾಕತ್ ಆಲಿ ಆಗುವುದಿಲ್ಲ ಎಂದರು- ಪತ್ರಕರ್ತ ಶೇಖರ್ ಗುಪ್ತ ಅವರ ಜೊತೆ ಮಾತನಾಡುತ್ತಾ ಹೀಗೆಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ಮಾಜಿ ಸಚಿವ ಸೈಫುದ್ದೀನ್ ಸೋಝ್!

- Advertisement -
- Advertisement -

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದವರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ! ಎಂದು ಮಾಜಿ ಸಚಿವ ಸೈಫುದ್ದೀನ್ ಸೋಝ್ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದಲ್ಲಿ ಗೃಹಮಂತ್ರಿಯಾಗಿದ್ದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಹೈದರಾಬಾದಿಗೆ ಪ್ರತಿಯಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಾಗಿದ್ದರು. ಆದರೆ, ನೆಹರೂ ಅವರ ಒತ್ತಾಯದ ಮೇರೆಗೆ ಕಾಶ್ಮೀರ ಭಾರತದಲ್ಲಿ ಉಳಿಯಿತು ಎಂಬ ದಂಗುಬಡಿಸುವ ಮಾಹಿತಿಯನ್ನು ನೀಡಿದ್ದಾರೆ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ, ಕಾಶ್ಮೀರದವರೇ ಆದ ಸೈಫುದ್ದೀನ್ ಸೋಝ್.

1947ರ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಶ್ರೀನಗರವನ್ನು ಪ್ರವೇಶಿಸಿದ ದಿನವೇ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ವಲ್ಲಭಭಾಯ್ ಪಟೇಲ್ ಅವರ ಪ್ರಸ್ತಾಪವನ್ನು ಲಾಹೋರಿಗೆ ಕೊಂಡೊಯ್ದಿದ್ದರು ಎಂದು ಸೋಝ್ ಅವರು ‘ದಿ ಪ್ರಿಂಟ್’  ಪ್ರಧಾನ ಸಂಪಾದಕ ಶೇಖರ್ ಗುಪ್ತ ಅವರಿಗೆ ಎನ್‌ಡಿಟಿವಿಯ ‘ವಾಕ್ ದ ಟಾಕ್ ಶೋ’ದಲ್ಲಿ ತಿಳಿಸಿದ್ದಾರೆ.

“ಮೊದಲ ದಿನದಿಂದಲೇ ಕಾಶ್ಮೀರವು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸರ್ದಾರ್ ಪಟೇಲ್ ಹಠಹಿಡಿದಿದ್ದರು. ಕಾಶ್ಮೀರವನ್ನು ತೆಗೆದುಕೊಂಡು ಹೈದರಾಬಾದ್-ದಖ್ಖಣವನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂದು ಪಾಕ್ ನಾಯಕ ಲಿಯಾಕತ್ ಆಲಿಯವರ ಮನವೊಲಿಸಲು ಪಟೇಲ್ ಅವರು ದೇಶವಿಭಜನಾ ಮಂಡಳಿಯಲ್ಲಿ ಶತಾಯಗತಾಯ ಯತ್ನಿಸಿದ್ದರು” ಎಂದು ಸೋಝ್ ಹೇಳಿದ್ದಾರೆ.

“ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸರ್ದಾರ್ ಮೊಹಮ್ಮದ್ ಆಲಿ ಮತ್ತು ನಮ್ಮ ರೆಡ್ಡಿ ಉಪಸ್ಥಿತರಿದ್ದರು. ಹೈದರಾಬಾದ್-ದಖ್ಖಣದ ಬಗ್ಗೆ ಮಾತೆತ್ತುವುದೇ ಬೇಡ; ಅದು ಪಾಕಿಸ್ತಾನದ ಜೊತೆಗೆ ಸಂಬಂಧವನ್ನೇ ಹೊಂದಿಲ್ಲ. ಹೈದರಾಬಾದನ್ನು ನಮಗೆ ಬಿಡಿ. ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಸರ್ದಾರ್ ಪಟೇಲ್ ಲಿಯಾಕತ್ ಆಲಿಯವರಿಗೆ ಹೇಳಿದರು.

“ನಾನು ನಿಮಗೆ ಕುತೂಹಲಕಾರಿ ಕತೆಯೊಂದನ್ನು ಹೇಳುವೆ. ನಮ್ಮ ಸೇನೆಯು ಶ್ರೀನಗರದಲ್ಲಿ ಬಂದಿಳಿದ ಮಧ್ಯಾಹ್ನವೇ ಮೌಂಟ್‌ಬ್ಯಾಟನ್ ಲಾಹೋರಿಗೆ ಹೋದರು. ಪಾಕಿಸ್ತಾನದ ಗವರ್ನರ್ ಲಿಯಾಕತ್ ಆಲಿ ಮತ್ತು ಇತರ ನಾಲ್ವರು ಸಚಿವರ ಜೊತೆ ಔತಣ ನಡೆಯಿತು. ನಾನು ಭಾರತದ ಶಕ್ತಿಶಾಲಿ ಮನುಷ್ಯ ಸರ್ದಾರ್ ಪಟೇಲರಿಂದ ಸಂದೇಶವೊಂದನ್ನು ತಂದಿದ್ದೇನೆ. ನೀವು ಹೈದರಾಬಾದ್-ದಖ್ಖಣವನ್ನು ಮರೆತುಬಿಡಿ; ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಮೌಂಟ್‌ಬ್ಯಾಟನ್ ಹೇಳಿದರು.

“ಆದರೆ ಸರ್ದಾರ್ ಶೌಕತ್ ಹಯಾತ್ ಖಾನ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಲಿಯಾಕತ್ ಆಲಿಯವರಿಗೆ ಇತಿಹಾಸವೂ ಗೊತ್ತಿರಲಿಲ್ಲ; ಭೂಗೋಳವೂ ಗೊತ್ತಿರಲಿಲ್ಲ. ಆದುದರಿಂದ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ” ಎಂದು ಸೋಝ್ ಹೇಳಿದ್ದಾರೆ.

“ಪಟೇಲರ ಮಾತು ನಡೆಯಲಿಲ್ಲ ಏಕೆಂದರೆ ನೆಹರೂ ಬಲವಾಗಿ ನಿಂತಿದ್ದರು. ಕಾಶ್ಮೀರದ ಜೊತೆ ಅವರ ಸಂಬಂಧವೂ ಬಲವಾಗಿತ್ತು. ಕಾಶ್ಮೀರವು ಜಾತ್ಯತೀತ ಭಾರತಕ್ಕೆ ಬರಬೇಕು, ಅದು ಇಲ್ಲಿ ಸುರಕ್ಷಿತವಾಗಿರುತ್ತದೆ ಅವರು ನಂಬಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೂ ತುಂಬಾ ಹತ್ತಿರವಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಸೋಪುರ್ ಸಮಾವೇಶದಲ್ಲಿ ಭಾಷಣ ಕೂಡಾ ಮಾಡಿದ್ದರು. ಅವರಿಗೆ ಕಾಶ್ಮೀರದ ಇತಿಹಾಸ ಸಂಪೂರ್ಣವಾಗಿ ಗೊತ್ತಿತ್ತು” ಎಂದು ಸೋಝ್ ಹೇಳಿದ್ದಾರೆ.

“ಶೇಖ್ ಅಬ್ದುಲ್ಲಾ ಅವರು ಎರಡು ದೇಶ ವಾದವನ್ನು ತಿರಸ್ಕರಿಸಿದ್ದರು. 1947ರ ಅಗಸ್ಟ್ 15ರಿಂದ ಅಕ್ಟೋಬರ್ 22ರ ತನಕ ಕಾಶ್ಮೀರ ಸ್ವತಂತ್ರ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು ಕೂಡಾ. ಆದರೆ, ಪಾಕಿಸ್ತಾನದ ದಾಳಿಕೋರರು ಒಳನುಗ್ಗಿದಾಗ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿತ್ತು” ಎಂದವರು ಹೇಳಿದ್ದಾರೆ.

“ನಮ್ಮ ನೆರೆಯಲ್ಲಿರುವ ಐದು ದೇಶಗಳಾದ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಅಫಘಾನಿಸ್ತಾನ ಕಾಶ್ಮೀರದ ಸ್ವಾತಂತ್ರ್ಯವನ್ನು ಯಾವತ್ತೂ ಒಪ್ಪುವುದಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ ಎಂದು ಶೇಖ್ ಅಬ್ದುಲ್ಲಾ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ” ಎಂದು ಸೋಝ್ ತಿಳಿಸಿದ್ದಾರೆ. ಅವರಿಗೆ ಭಾರತವು ಜಾತ್ಯತೀತ, ಬಹುಮುಖಿ ಮತ್ತು ಕಾಶ್ಮೀರದ ಕುರಿತು ಉದಾರಭಾವ ಹೊಂದಿರುವ ತನಕ ಭಾರತದಿಂದ ಹೊರಹೋಗುವ ಮನಸ್ಸೇ ಇರಲಿಲ್ಲ ಮತ್ತು ಇದರಿಂದಲೇ ದಿಲ್ಲಿ ಒಪ್ಪಂದ ಉಂಟಾಯಿತು ಎಂದೂ ಅವರು ಹೇಳಿದ್ದಾರೆ.

“ದುರದೃಷ್ಟವಶಾತ್ ನೆಹರೂ ಅವರಿಗೆ ಸ್ವಂತ ಸಂಪುಟದಲ್ಲಿಯೇ ಸೋಲಾಯಿತು. ಅದರಿಂದಾಗಿ ಅವರು ಶೇಖ್ ಅಬ್ದುಲ್ಲಾ ಅವರ ಸರಕಾರವನ್ನು ವಜಾಗೊಳಿಸಿ, ಅವರನ್ನು ಬಂಧನದಲ್ಲಿಡುವುದು ಅನಿವಾರ್ಯವಾಯಿತು. ಅವರಿಗೆ ಈ ಕುರಿತು ಪಶ್ಚಾತ್ತಾಪವಿತ್ತು. ಆದರೆ, ಅವರು ಏಕಾಂಗಿಯಾಗಿದ್ದರು” ಎಂದು ಸೋಝ್ ತಿಳಿಸಿದ್ದಾರೆ.

ಸರ್ದಾರ್ ಎ ರಿಯಾಸತ್ ಎಂದು ಕರೆಯಲ್ಪಡುವ  ಡಾ. ಕರಣ್ ಸಿಂಗ್ ಅವರು 1953ರಲ್ಲಿ ತನ್ನ ವಿರುದ್ಧ ಸಂಚು ಹೂಡಿದವರಲ್ಲಿ ಒಬ್ಬರು ಎಂದೂ ಶೇಖ್ ಅಬ್ದುಲ್ಲಾ ತನ್ನ ಪುಸ್ತಕದಲ್ಲಿ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

“ಕಾಶ್ಮೀರದ ಸಾಂವಿಧಾನಿಕ ವಿಧಾನಸಭೆಯನ್ನು ಮುಂದುವರಿಯಲು ಬಿಡಬೇಕಿತ್ತು. ನೀವು ಬೇಕಾದರೆ ರಾಮ್ ಜೇಠ್ಮಲಾನಿಯವರನ್ನು ಕೇಳಿ. ಅವರು ಕೂಡಾ ಅದನ್ನು ನಂಬಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯು ರಫಿ ಆಹ್ಮದ್ ಕಿದ್ವಾಯಿ, ಅಜಿತ್ ಪ್ರಸಾದ್ ಜೈನ್ ಮುಂತಾದ ಅಲ್ಪ ಮನಸ್ಸುಗಳು ನೆಹರೂ ಅವರ ಸುತ್ತಲಿನ ವಾತಾವರಣವನ್ನು ವಿಷಮಯ ಮಾಡಿದುದರಿಂದಾಗಿ ಕೆಟ್ಟುಹೋಯಿತು ಎಂದೂ ಸೋಝ್ ಹೇಳಿದ್ದಾರೆ. ಆಗ ರಾಜಕೀಯ ಕೆಲಸವನ್ನು ಗುಪ್ತಚರ ಸಂಸ್ಥೆಗಳ ಅದಕ್ಕಿಂತಲೂ ಅಲ್ಪ ಮನಸ್ಸುಗಳಿಗೆ ವಹಿಸಲಾಗುತ್ತಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೋಝ್ ವಿಷಾದಿಸಿದ್ದಾರೆ.

ಈಗಲೂ ಸಮಸ್ಯೆಗೆ ಪರಿಹಾರ ಎಂದರೆ ಹುರಿಯತ್ ನಾಯಕರ ಜೊತೆ ಮಾತನಾಡುವುದು ಮಾತ್ರ ಎಂದು ಹೇಳಿರುವ ಸೈಫುದ್ದೀನ್ ಸೋಝ್, ಯುವ ಕಾಶ್ಮೀರಿಗಳು ಕೋಪಗೊಂಡಿದ್ದಾರೆ; ಕುಟುಂಬದ ಇಬ್ಬರು ಮಕ್ಕಳು ಈಗಾಗಲೇ ಸತ್ತು, ಮೂರನೆಯವನು ಉಗ್ರಗಾಮಿಗಳ ಜೊತೆ ಹೋಗಿರುವಾಗ ಬಲಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೃಪೆ: ದಿ ಪ್ರಿಂಟ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಪೆರಿಯಾರ್ ಹೇಳಿಕೆ ಉಲ್ಲೇಖಿಸಿ 370 ನೇ ವಿಧಿ ರದ್ದತಿಯನ್ನು ಖಂಡಿಸಿದ ನಟ ವಿಜಯ್ ಸೇತುಪಥಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...