Homeಮುಖಪುಟಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಭಾರತದ ಸೈನ್ಯ ಶ್ರೀನಗರ ತಲಪಿದ ದಿನವೇ ಪಟೇಲರ ಬೇಡಿಕೆಯನ್ನು ಮೌಂಟ್‌ಬ್ಯಾಟನ್ ಲಾಹೋರಿಗೆ ಕೊಂಡೊಯ್ದಿದ್ದರು. ಇತಿಹಾಸ ಅಥವಾ ಭೂಗೋಳದ ಗಂಧಗಾಳಿಯಿಲ್ಲದ ಲಿಯಾಕತ್ ಆಲಿ ಆಗುವುದಿಲ್ಲ ಎಂದರು- ಪತ್ರಕರ್ತ ಶೇಖರ್ ಗುಪ್ತ ಅವರ ಜೊತೆ ಮಾತನಾಡುತ್ತಾ ಹೀಗೆಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ಮಾಜಿ ಸಚಿವ ಸೈಫುದ್ದೀನ್ ಸೋಝ್!

- Advertisement -
- Advertisement -

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದವರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ! ಎಂದು ಮಾಜಿ ಸಚಿವ ಸೈಫುದ್ದೀನ್ ಸೋಝ್ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದಲ್ಲಿ ಗೃಹಮಂತ್ರಿಯಾಗಿದ್ದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಹೈದರಾಬಾದಿಗೆ ಪ್ರತಿಯಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಾಗಿದ್ದರು. ಆದರೆ, ನೆಹರೂ ಅವರ ಒತ್ತಾಯದ ಮೇರೆಗೆ ಕಾಶ್ಮೀರ ಭಾರತದಲ್ಲಿ ಉಳಿಯಿತು ಎಂಬ ದಂಗುಬಡಿಸುವ ಮಾಹಿತಿಯನ್ನು ನೀಡಿದ್ದಾರೆ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ, ಕಾಶ್ಮೀರದವರೇ ಆದ ಸೈಫುದ್ದೀನ್ ಸೋಝ್.

1947ರ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಶ್ರೀನಗರವನ್ನು ಪ್ರವೇಶಿಸಿದ ದಿನವೇ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ವಲ್ಲಭಭಾಯ್ ಪಟೇಲ್ ಅವರ ಪ್ರಸ್ತಾಪವನ್ನು ಲಾಹೋರಿಗೆ ಕೊಂಡೊಯ್ದಿದ್ದರು ಎಂದು ಸೋಝ್ ಅವರು ‘ದಿ ಪ್ರಿಂಟ್’  ಪ್ರಧಾನ ಸಂಪಾದಕ ಶೇಖರ್ ಗುಪ್ತ ಅವರಿಗೆ ಎನ್‌ಡಿಟಿವಿಯ ‘ವಾಕ್ ದ ಟಾಕ್ ಶೋ’ದಲ್ಲಿ ತಿಳಿಸಿದ್ದಾರೆ.

“ಮೊದಲ ದಿನದಿಂದಲೇ ಕಾಶ್ಮೀರವು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸರ್ದಾರ್ ಪಟೇಲ್ ಹಠಹಿಡಿದಿದ್ದರು. ಕಾಶ್ಮೀರವನ್ನು ತೆಗೆದುಕೊಂಡು ಹೈದರಾಬಾದ್-ದಖ್ಖಣವನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂದು ಪಾಕ್ ನಾಯಕ ಲಿಯಾಕತ್ ಆಲಿಯವರ ಮನವೊಲಿಸಲು ಪಟೇಲ್ ಅವರು ದೇಶವಿಭಜನಾ ಮಂಡಳಿಯಲ್ಲಿ ಶತಾಯಗತಾಯ ಯತ್ನಿಸಿದ್ದರು” ಎಂದು ಸೋಝ್ ಹೇಳಿದ್ದಾರೆ.

“ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸರ್ದಾರ್ ಮೊಹಮ್ಮದ್ ಆಲಿ ಮತ್ತು ನಮ್ಮ ರೆಡ್ಡಿ ಉಪಸ್ಥಿತರಿದ್ದರು. ಹೈದರಾಬಾದ್-ದಖ್ಖಣದ ಬಗ್ಗೆ ಮಾತೆತ್ತುವುದೇ ಬೇಡ; ಅದು ಪಾಕಿಸ್ತಾನದ ಜೊತೆಗೆ ಸಂಬಂಧವನ್ನೇ ಹೊಂದಿಲ್ಲ. ಹೈದರಾಬಾದನ್ನು ನಮಗೆ ಬಿಡಿ. ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಸರ್ದಾರ್ ಪಟೇಲ್ ಲಿಯಾಕತ್ ಆಲಿಯವರಿಗೆ ಹೇಳಿದರು.

“ನಾನು ನಿಮಗೆ ಕುತೂಹಲಕಾರಿ ಕತೆಯೊಂದನ್ನು ಹೇಳುವೆ. ನಮ್ಮ ಸೇನೆಯು ಶ್ರೀನಗರದಲ್ಲಿ ಬಂದಿಳಿದ ಮಧ್ಯಾಹ್ನವೇ ಮೌಂಟ್‌ಬ್ಯಾಟನ್ ಲಾಹೋರಿಗೆ ಹೋದರು. ಪಾಕಿಸ್ತಾನದ ಗವರ್ನರ್ ಲಿಯಾಕತ್ ಆಲಿ ಮತ್ತು ಇತರ ನಾಲ್ವರು ಸಚಿವರ ಜೊತೆ ಔತಣ ನಡೆಯಿತು. ನಾನು ಭಾರತದ ಶಕ್ತಿಶಾಲಿ ಮನುಷ್ಯ ಸರ್ದಾರ್ ಪಟೇಲರಿಂದ ಸಂದೇಶವೊಂದನ್ನು ತಂದಿದ್ದೇನೆ. ನೀವು ಹೈದರಾಬಾದ್-ದಖ್ಖಣವನ್ನು ಮರೆತುಬಿಡಿ; ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಮೌಂಟ್‌ಬ್ಯಾಟನ್ ಹೇಳಿದರು.

“ಆದರೆ ಸರ್ದಾರ್ ಶೌಕತ್ ಹಯಾತ್ ಖಾನ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಲಿಯಾಕತ್ ಆಲಿಯವರಿಗೆ ಇತಿಹಾಸವೂ ಗೊತ್ತಿರಲಿಲ್ಲ; ಭೂಗೋಳವೂ ಗೊತ್ತಿರಲಿಲ್ಲ. ಆದುದರಿಂದ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ” ಎಂದು ಸೋಝ್ ಹೇಳಿದ್ದಾರೆ.

“ಪಟೇಲರ ಮಾತು ನಡೆಯಲಿಲ್ಲ ಏಕೆಂದರೆ ನೆಹರೂ ಬಲವಾಗಿ ನಿಂತಿದ್ದರು. ಕಾಶ್ಮೀರದ ಜೊತೆ ಅವರ ಸಂಬಂಧವೂ ಬಲವಾಗಿತ್ತು. ಕಾಶ್ಮೀರವು ಜಾತ್ಯತೀತ ಭಾರತಕ್ಕೆ ಬರಬೇಕು, ಅದು ಇಲ್ಲಿ ಸುರಕ್ಷಿತವಾಗಿರುತ್ತದೆ ಅವರು ನಂಬಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೂ ತುಂಬಾ ಹತ್ತಿರವಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಸೋಪುರ್ ಸಮಾವೇಶದಲ್ಲಿ ಭಾಷಣ ಕೂಡಾ ಮಾಡಿದ್ದರು. ಅವರಿಗೆ ಕಾಶ್ಮೀರದ ಇತಿಹಾಸ ಸಂಪೂರ್ಣವಾಗಿ ಗೊತ್ತಿತ್ತು” ಎಂದು ಸೋಝ್ ಹೇಳಿದ್ದಾರೆ.

“ಶೇಖ್ ಅಬ್ದುಲ್ಲಾ ಅವರು ಎರಡು ದೇಶ ವಾದವನ್ನು ತಿರಸ್ಕರಿಸಿದ್ದರು. 1947ರ ಅಗಸ್ಟ್ 15ರಿಂದ ಅಕ್ಟೋಬರ್ 22ರ ತನಕ ಕಾಶ್ಮೀರ ಸ್ವತಂತ್ರ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು ಕೂಡಾ. ಆದರೆ, ಪಾಕಿಸ್ತಾನದ ದಾಳಿಕೋರರು ಒಳನುಗ್ಗಿದಾಗ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿತ್ತು” ಎಂದವರು ಹೇಳಿದ್ದಾರೆ.

“ನಮ್ಮ ನೆರೆಯಲ್ಲಿರುವ ಐದು ದೇಶಗಳಾದ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಅಫಘಾನಿಸ್ತಾನ ಕಾಶ್ಮೀರದ ಸ್ವಾತಂತ್ರ್ಯವನ್ನು ಯಾವತ್ತೂ ಒಪ್ಪುವುದಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ ಎಂದು ಶೇಖ್ ಅಬ್ದುಲ್ಲಾ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ” ಎಂದು ಸೋಝ್ ತಿಳಿಸಿದ್ದಾರೆ. ಅವರಿಗೆ ಭಾರತವು ಜಾತ್ಯತೀತ, ಬಹುಮುಖಿ ಮತ್ತು ಕಾಶ್ಮೀರದ ಕುರಿತು ಉದಾರಭಾವ ಹೊಂದಿರುವ ತನಕ ಭಾರತದಿಂದ ಹೊರಹೋಗುವ ಮನಸ್ಸೇ ಇರಲಿಲ್ಲ ಮತ್ತು ಇದರಿಂದಲೇ ದಿಲ್ಲಿ ಒಪ್ಪಂದ ಉಂಟಾಯಿತು ಎಂದೂ ಅವರು ಹೇಳಿದ್ದಾರೆ.

“ದುರದೃಷ್ಟವಶಾತ್ ನೆಹರೂ ಅವರಿಗೆ ಸ್ವಂತ ಸಂಪುಟದಲ್ಲಿಯೇ ಸೋಲಾಯಿತು. ಅದರಿಂದಾಗಿ ಅವರು ಶೇಖ್ ಅಬ್ದುಲ್ಲಾ ಅವರ ಸರಕಾರವನ್ನು ವಜಾಗೊಳಿಸಿ, ಅವರನ್ನು ಬಂಧನದಲ್ಲಿಡುವುದು ಅನಿವಾರ್ಯವಾಯಿತು. ಅವರಿಗೆ ಈ ಕುರಿತು ಪಶ್ಚಾತ್ತಾಪವಿತ್ತು. ಆದರೆ, ಅವರು ಏಕಾಂಗಿಯಾಗಿದ್ದರು” ಎಂದು ಸೋಝ್ ತಿಳಿಸಿದ್ದಾರೆ.

ಸರ್ದಾರ್ ಎ ರಿಯಾಸತ್ ಎಂದು ಕರೆಯಲ್ಪಡುವ  ಡಾ. ಕರಣ್ ಸಿಂಗ್ ಅವರು 1953ರಲ್ಲಿ ತನ್ನ ವಿರುದ್ಧ ಸಂಚು ಹೂಡಿದವರಲ್ಲಿ ಒಬ್ಬರು ಎಂದೂ ಶೇಖ್ ಅಬ್ದುಲ್ಲಾ ತನ್ನ ಪುಸ್ತಕದಲ್ಲಿ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

“ಕಾಶ್ಮೀರದ ಸಾಂವಿಧಾನಿಕ ವಿಧಾನಸಭೆಯನ್ನು ಮುಂದುವರಿಯಲು ಬಿಡಬೇಕಿತ್ತು. ನೀವು ಬೇಕಾದರೆ ರಾಮ್ ಜೇಠ್ಮಲಾನಿಯವರನ್ನು ಕೇಳಿ. ಅವರು ಕೂಡಾ ಅದನ್ನು ನಂಬಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯು ರಫಿ ಆಹ್ಮದ್ ಕಿದ್ವಾಯಿ, ಅಜಿತ್ ಪ್ರಸಾದ್ ಜೈನ್ ಮುಂತಾದ ಅಲ್ಪ ಮನಸ್ಸುಗಳು ನೆಹರೂ ಅವರ ಸುತ್ತಲಿನ ವಾತಾವರಣವನ್ನು ವಿಷಮಯ ಮಾಡಿದುದರಿಂದಾಗಿ ಕೆಟ್ಟುಹೋಯಿತು ಎಂದೂ ಸೋಝ್ ಹೇಳಿದ್ದಾರೆ. ಆಗ ರಾಜಕೀಯ ಕೆಲಸವನ್ನು ಗುಪ್ತಚರ ಸಂಸ್ಥೆಗಳ ಅದಕ್ಕಿಂತಲೂ ಅಲ್ಪ ಮನಸ್ಸುಗಳಿಗೆ ವಹಿಸಲಾಗುತ್ತಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೋಝ್ ವಿಷಾದಿಸಿದ್ದಾರೆ.

ಈಗಲೂ ಸಮಸ್ಯೆಗೆ ಪರಿಹಾರ ಎಂದರೆ ಹುರಿಯತ್ ನಾಯಕರ ಜೊತೆ ಮಾತನಾಡುವುದು ಮಾತ್ರ ಎಂದು ಹೇಳಿರುವ ಸೈಫುದ್ದೀನ್ ಸೋಝ್, ಯುವ ಕಾಶ್ಮೀರಿಗಳು ಕೋಪಗೊಂಡಿದ್ದಾರೆ; ಕುಟುಂಬದ ಇಬ್ಬರು ಮಕ್ಕಳು ಈಗಾಗಲೇ ಸತ್ತು, ಮೂರನೆಯವನು ಉಗ್ರಗಾಮಿಗಳ ಜೊತೆ ಹೋಗಿರುವಾಗ ಬಲಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೃಪೆ: ದಿ ಪ್ರಿಂಟ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಪೆರಿಯಾರ್ ಹೇಳಿಕೆ ಉಲ್ಲೇಖಿಸಿ 370 ನೇ ವಿಧಿ ರದ್ದತಿಯನ್ನು ಖಂಡಿಸಿದ ನಟ ವಿಜಯ್ ಸೇತುಪಥಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...