Homeಮುಖಪುಟನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

- Advertisement -
- Advertisement -

ಜನವರಿ 3ರಂದು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊರೆಗೆ ಅಂಜಿ ಮೊನ್ನೆಯಷ್ಟೆ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್ ಕುಮಾರ್ ಯಾದವ್‌ನ ಹೆಸರು ಮತ್ತೆಮತ್ತೆ ಮನಸ್ಸಿಗೆ ಬರುತ್ತಿದೆ. ಮಗನ ಕೊನೆಯ ದರ್ಶನಕ್ಕೂ ಬರಲಾಗದ ಹೆತ್ತವರ ಆರ್ಥಿಕ ಸ್ಥಿತಿ ನೆನೆದು ಕಣ್ಣು ಹನಿಗೂಡುತ್ತದೆ. ’ಇಲ್ಲಿ ಮಾನವ ಮೌಲ್ಯಗಳಿಗೆ ಬೆಲೆಯಿಲ್ಲ. ವ್ಯಕ್ತಿಯ ಗುರುತು ಮತ್ತು ಸಂಖ್ಯೆಯಿಂದ ಅಳೆಯಲಾಗುತ್ತದೆ. ಬೌದ್ಧಿಕತೆಯಿಂದ ಗುರುತಿಸುವುದಲ್ಲ’ ಎಂದ ರೋಹಿತ್ ವೇಮುಲ ನಮ್ಮನ್ನಗಲಿ 5ವರ್ಷಗಳಾದವು. ನಮ್ಮ ದೇಶದ ಸಾಮಾನ್ಯ ಜನರಿಗೆ ಶಿಕ್ಷಣ ಎಂಬುದು ಇನ್ನೂ ನಿಲುಕದ ಕುಸುಮ, ಒಂದೊಮ್ಮೆ ಪ್ರವೇಶ ಪಡೆದರೂ ಸಾಗುವ ಹಾದಿ ಅವರಲ್ಲಿನ ಸತ್ವವನ್ನೇ ಉಡುಗಿಸುವಂತಿದೆ ಎಂಬುದನ್ನು ಇವು ತೋರಿಸುತ್ತಿವೆ.

ಜೊತೆಗೆ, ನಮ್ಮಲ್ಲಿ ಈಗಾಗಲೇ ಇರುವ ಶ್ರೇಣೀಕರಣದ ಜೊತೆಗೆ ಜಾಗತೀಕರಣದ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಹಿಂದುಳಿದವರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ನಮ್ಮ ಗ್ರಾಮೀಣ ಪರಿಸರದ ಬಹುಪಾಲು ಇಂದು ವಿದ್ಯುತ್, ಅಂತರ್ಜಾಲದ ಕನಿಷ್ಟ ಸೌಲಭ್ಯ ಹೊಂದಿರುವ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣ, ಶಿಕ್ಷಣದ ಖಾಸಗೀಕರಣ ದೊಡ್ಡ ವಿದ್ಯಾರ್ಥಿ ಸಮೂಹವನ್ನೇ ಶಿಕ್ಷಣ ವಂಚಿತರನ್ನಾಗಿಸುತ್ತದೆ. ಯಾವ ದಲಿತ, ಹಿಂದುಳಿದ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಫುಲೆ ದಂಪತಿಗಳು ಶ್ರಮಿಸಿದರೋ ಇಂದು ಅದೇ ಸಮುದಾಯಕ್ಕೆ ದುರ್ಗಮ ಹಾದಿ ಎದುರಾಗಿದೆ. ಈ ಬದಲಾವಣೆಗಳು ಕಂಗೆಡಿಸುವಂತಿವೆ.

ಈ ಸಂದರ್ಭದಲ್ಲಿ ಫುಲೆ ದಂಪತಿಗಳು ಕೈಗೊಂಡ ಬಹುದೊಡ್ಡ ಕೆಲಸವನ್ನು ಮತ್ತೆ ಕಣ್ಣಮುಂದೆ ತಂದುಕೊಂಡು ಇಂದಿನ ಬಿಕ್ಕಟ್ಟನ್ನು ದಾಟಲು ಬೇಕಾದ ಶಕ್ತಿಯನ್ನು ಪಡೆಯಬೇಕಾಗಿದೆ. ಇತ್ತೀಚೆಗೆ ಹೊರಬಂದ ಸಂಗೀತಾ ಮುಳೆಯವರ ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕೃತಿ ಸಾವಿತ್ರಿಬಾಯಿಯವರ ಬದುಕಿನಿಂದ ಶಬರಿ ಎನ್ನುವ ದಲಿತ ಹುಡುಗಿ ಸ್ಫೂರ್ತಿ ಪಡೆದು ತನಗೆದುರಾದ ಸವಾಲುಗಳನ್ನು ದಾಟುವ ಕತೆ ಹೇಳುತ್ತದೆ. ಈ ಬಗೆಯ ಪ್ರೇರಣೆಯನ್ನು ನಾವು ಒಂದು ಸಮುದಾಯವಾಗಿ ಒಟ್ಟು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಕ್ಕೆ ಮುಖಾಮುಖಿಯಾಗುವ ನಿಟ್ಟಿನಲ್ಲಿ ಪಡೆಯಬೇಕಾಗಿದೆ.

ಸಾವಿತ್ರಿಬಾಯಿಫುಲೆಯವರು 1831, ಜನವರಿ 3ರಂದು ಬಾಂಬೆ ಸಂಸ್ಥಾನಕ್ಕೆ ಸೇರಿದ್ದ ಸತಾರಾದ ನಯೀಗಾಂವ್‌ನಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಜ್ಯೋತಿಬಾರನ್ನು ಮದುವೆಯಾದ ಸಾವಿತ್ರಿಬಾಯಿಯವರು ಪತಿಯ ಒತ್ತಾಸೆಯಿಂದ ಶಿಕ್ಷಣ ಪಡೆದರು. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಜೊತೆಯಾಗಿ ಪುಣೆಯಲ್ಲಿ 1848ರಲ್ಲಿ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸುತ್ತಾರೆ. ನಂತರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ಶಿಕ್ಷಣವಂಚಿತ ಸಮುದಾಯಗಳಿಗಾಗಿ ಶಾಲೆಗಳನ್ನು ತೆರೆಯುತ್ತಾರೆ. ಸಂಪ್ರದಾಯವಾದಿ ಮನಸ್ಸುಗಳು ಇದನ್ನು ಸಹಿಸದೆ ಇಲ್ಲದ ಉಪಟಳಗಳನ್ನು ಕೊಟ್ಟರೂ ಧೃತಿಗೆಡದೆ ತಾವು ನಂಬಿದ ಮೌಲ್ಯದಿಂದ ದೂರಸರಿಯದೇ ಫುಲೆ ದಂಪತಿಗಳು ಬದುಕು ನಡೆಸಿದವರು.

ಸಾವಿತ್ರಿಬಾಯಿಯವರು ಜ್ಯೋತಿಬಾರೊಂದಿಗೆ ನೊಂದ, ತ್ಯಕ್ತ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು 1854ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸುತ್ತಾರೆ. ಮಹಿಳಾ ಮಂಡಲಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲ ಮಹಿಳೆಯರೂ ಬೆರೆಯುವ ವಾತಾವರಣ ನಿರ್ಮಿಸುತ್ತಾರೆ. ವಿಧವಾ ಕೇಶಮುಂಡನದ ವಿರುದ್ಧ ದನಿಯೆತ್ತುತ್ತಾ ಇಂತಹ ಕೆಲಸ ಮಾಡದಂತೆ ಕ್ಷೌರಿಕರ ಮನವೊಲಿಸುತ್ತಾರೆ. ಸಮಾಜದ ತಳವರ್ಗದ ಜನರಿಗೆ ಬಾವಿಯಿಂದ ನೀರು ಸೇದುವ ಅವಕಾಶವಿಲ್ಲದಿದ್ದಾಗ ತಮ್ಮ ಮನೆಯ ಬಾವಿಯನ್ನು ಎಲ್ಲರಿಗೆ ಮುಕ್ತವಾಗಿರಿಸುತ್ತಾರೆ. ಜ್ಯೋತಿಬಾರ ಜೊತೆಯಲ್ಲಿ ಸತ್ಯಶೋಧಕ ಸಮಾಜ ಆರಂಭಿಸುವಲ್ಲಿ ಪ್ರೇರಕಶಕ್ತಿಯಾಗುತ್ತಾರೆ.

ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ, ಸಾಮಾಜಿಕ ಜಾಗೃತಿ ಮೂಡಿಸಲು ತಮ್ಮ ಬದುಕನ್ನೇ ತೆತ್ತವರು. 1897ರಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಹರಡಿತ್ತು. ಸಾವಿತ್ರಿಬಾಯಿಯವರು ತಮ್ಮ ಜೊತೆಗಾರರೊಂದಿಗೆ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರೂ ಸೋಂಕಿಗೆ ತುತ್ತಾಗಿ 1897, ಮಾರ್ಚ್ 10ರಂದು ಮರಣ ಹೊಂದುತ್ತಾರೆ. ಹೀಗೆ ತಮ್ಮ ಬದುಕಿನ ಕೊನೆಯ ಗಳಿಗೆಯಲ್ಲೂ ಅವರ ಮನಸ್ಸು ಮತ್ತು ದೇಹ ನೊಂದ ಜನರಿಗೆ ನೆರವಾಗಲು ತುಡಿಯುತ್ತಿತ್ತು.

ಒಂದು ಕಡೆಯಲ್ಲಿ ಜಾತಿಶ್ರೇಣೀಕರಣ, ಅಸ್ಪೃಶ್ಯತೆ, ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ, ಇನ್ನೊಂದು ಕಡೆಯಲ್ಲಿ ವಸಾಹತುಶಾಹಿಯ ಹಿಡಿತ, ಇವುಗಳ ಮಧ್ಯೆ ನಿಜವಾದ ಬಿಡುಗಡೆ ಶಿಕ್ಷಣದ ಮೂಲಕ ಸಾಧ್ಯ ಎಂದು ದೃಢವಾಗಿ ನಂಬಿ ನಡೆದವರು ಸಾವಿತ್ರಿಬಾಯಿಯವರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯದ ಸಂಕಲೆಗಳನ್ನು ಮುರಿಯಿರಿ” ಎಂಬ ಅವರ ಮಾತಿಗೆ ಅವರ ಬದುಕೇ ಒಂದು ನಿದರ್ಶನ. ಫುಲೆ ದಂಪತಿಗಳು ಅನಾಥ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತುಮಗನಾಗಿ ಸ್ವೀಕರಿಸುತ್ತಾರೆ. ಯಶವಂತ ರಾವ್ ಕೂಡಾ ತಂದೆತಾಯಿ ಸಾಗಿದ ದಾರಿಯಲ್ಲೇ ಸಾಗುತ್ತಾರೆ. ತಮ್ಮ ಪತಿ ಜ್ಯೋತಿಬಾ ತೀರಿಕೊಂಡಾಗ ಸಾಂಪ್ರದಾಯಿಕ ರೂಢಿಗೆ ವಿರುದ್ಧವಾಗಿ ಸ್ವತಃ ಸಾವಿತ್ರಿಬಾಯಿ ಅಂತಿಮ ವಿಧಿ ನೆರವೇರಿಸುತ್ತಾರೆ. ಸಾವಿತ್ರಿಬಾಯಿ ಅವರ ಇಂತಹ ನಡೆ, ಎಷ್ಟೋ ವರ್ಷಗಳ ನಂತರ ಕುವೆಂಪು ಅವರು ನುಡಿದ ’ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬುದನ್ನು ನೆನಪಿಸುತ್ತದೆ.

ಸಾವಿತ್ರಿಬಾಯಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಹಾದಿ ಹಾಕಿಕೊಟ್ಟವರಲ್ಲಿ ಮೊದಲಿಗರು; ಜನಹಿತವನ್ನು ಮನದಲ್ಲಿರಿಸಿಕೊಂಡು, ಅದನ್ನು ಕಾರ್ಯರೂಪಗೊಳಿಸಿ ವೈಚಾರಿಕತೆಯ ದೀಪ ಬೆಳಗಿದವರು. ಭಾರತದಲ್ಲಿ ಮೊದಲ ಘಟ್ಟದಲ್ಲಿ ಸ್ತ್ರೀವಾದಿ ದನಿಯಾಗಿ ಕಾಣುವವರು ಸಾವಿತ್ರಿಬಾಯಿ. ಏನೂ ಸವಲತ್ತುಗಳಿಲ್ಲದ ಕಾಲದಲ್ಲಿ ನೈಜ ಕಾಳಜಿಯೊಂದನ್ನೇ ಗಟ್ಟಿಯಾಗಿ ಆತುಕೊಂಡು ಮುಂದುವರೆದವರು ಫುಲೆ ದಂಪತಿಗಳು. ಇವರ ಕೊಡುಗೆಯ ಬಗ್ಗೆ ಹೇಳುವಾಗ ಭಾರತದ ಮಹತ್ವದ ಚಿಂತಕ ಜಿ.ಎನ್.ದೇವಿಯವರ ಮಾತು ಇಲ್ಲಿ ಪ್ರಸ್ತುತ, “ಭಾರತದಲ್ಲಿ ಆಧುನಿಕ ಶಿಕ್ಷಣವೆಂಬುದು ಸರ್ಕಾರದಿಂದಲೇ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ ಅಲ್ಲ. ಹಲವಾರು ನಿಸ್ವಾರ್ಥ ವ್ಯಕ್ತಿಗಳು ತಮ್ಮದೆಲ್ಲವನ್ನೂ ತೆತ್ತು ಕಟ್ಟಿದ ಒಂದು ಸಾಂಸ್ಕೃತಿಕ ಉತ್ಪನ್ನ… …ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಭಾರತೀಯ ಸಮಾಜದ ಆಳ ಸತ್ವವನ್ನು ಪೋಷಿಸುವ ಶಿಕ್ಷಣದ ಶ್ರೇಷ್ಠ ಕಾಣ್ಕೆಗಳನ್ನು ಶಿಕ್ಷಣದೊಂದಿಗೆ ಬೆಸೆಯಲಾಗಲೇ ಇಲ್ಲ.” ಇವು ನಮಗೆ ಸಾವಿತ್ರಿಬಾಯಿಯವರ ಮಹತ್ವ ಮತ್ತು ಇಂದಿನ ಬಿಕ್ಕಟ್ಟಿನ ಮೂಲವನ್ನು ಒಟ್ಟಿಗೆ ಮನದಟ್ಟು ಮಾಡಿಸುತ್ತವೆ.

ಇಂದು ನಮ್ಮ ಮುಂದೆ ಎಲ್ಲರನ್ನೂ ಕಾಯುವ ಸಂವಿಧಾನವಿದೆ, ಶಿಕ್ಷಣ ಮೂಲಭೂತ ಹಕ್ಕಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಲಿಕೆಯ ಮಧ್ಯದಲ್ಲೇ ತೆರಳುವವರೂ ಹೆಚ್ಚಿದ್ದಾರೆ. ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ? ಎಂದು ನಾವು ಪ್ರಶ್ನೆ ಹಾಕಿಕೊಂಡು ನಮ್ಮನ್ನೇ ಅವಲೋಕನ ಮಾಡಿಕೊಳ್ಳದೇ ಹೋದರೆ ಆಶಯ ಕೇವಲ ಕಾಗದಕ್ಕಷ್ಟೆ ಮೀಸಲಾಗಿ, ಅರಳಬೇಕಾದ ಜೀವಗಳು ಕಣ್ಣಮುಂದೆಯೇ ಇಲ್ಲವಾಗುವ ದುರಂತವಷ್ಟೇ ಎದುಗಿರುತ್ತದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಸಾವಿತ್ರಿಬಾಯಿಯವರ ಬದುಕಿನ ಹೋರಾಟದಿಂದ ನಾವು ಸತ್ವವನ್ನು ಪಡೆದು ಮುನ್ನಡೆಯುವ ದೃಢತೆ ತೋರಬೇಕಿದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈಗ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಚೆಂದದ ಬರೆಹ ಮೇಡಂ, ಅಕ್ಷರದ ಅವ್ವನ ದಿಟ್ಟತನ ನಮ್ಮಲ್ಲಿ ಇನ್ನಾದರೂ ಗಟ್ಟಿಯಾಗಿ ಎದೆಗಿಳಿಯಬೇಕಿದೆ.

  2. ಪುಲೆ ಯವರ್ ಚಿಂತನೆಗಳನ್ನು ಮನ ಮುಟ್ಟಿಸುವ ಕೆಲಸ ಮಾಡುವ ನಿಮ್ಮ ಬರವಣಿಗೆ ನಿಜವಾಗಿಯೂ ಮೆಚ್ಚಿಕೊಳ್ಳುವುದರಲ್ಲಿ ಯಾವ ಬಗೆಯ ಎರಡು ಮಾತುಗಲ್ಲೂ ಇಲ್ಲ
    ಆದರೂ ಇಂದಿನ ಅಂದ ಭಕ್ತ ಗುಂಪು ಅನೇಕ ಮಹ್ನಿಯರ ಅನ್ನು ಅವೆಳ್ನಕಾರಿ ಮಾಡುತ್ತಿರುವುದು ವಿಷಾದ ಸಂಗತಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...