Homeಮುಖಪುಟನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

- Advertisement -
- Advertisement -

ಜನವರಿ 3ರಂದು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊರೆಗೆ ಅಂಜಿ ಮೊನ್ನೆಯಷ್ಟೆ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್ ಕುಮಾರ್ ಯಾದವ್‌ನ ಹೆಸರು ಮತ್ತೆಮತ್ತೆ ಮನಸ್ಸಿಗೆ ಬರುತ್ತಿದೆ. ಮಗನ ಕೊನೆಯ ದರ್ಶನಕ್ಕೂ ಬರಲಾಗದ ಹೆತ್ತವರ ಆರ್ಥಿಕ ಸ್ಥಿತಿ ನೆನೆದು ಕಣ್ಣು ಹನಿಗೂಡುತ್ತದೆ. ’ಇಲ್ಲಿ ಮಾನವ ಮೌಲ್ಯಗಳಿಗೆ ಬೆಲೆಯಿಲ್ಲ. ವ್ಯಕ್ತಿಯ ಗುರುತು ಮತ್ತು ಸಂಖ್ಯೆಯಿಂದ ಅಳೆಯಲಾಗುತ್ತದೆ. ಬೌದ್ಧಿಕತೆಯಿಂದ ಗುರುತಿಸುವುದಲ್ಲ’ ಎಂದ ರೋಹಿತ್ ವೇಮುಲ ನಮ್ಮನ್ನಗಲಿ 5ವರ್ಷಗಳಾದವು. ನಮ್ಮ ದೇಶದ ಸಾಮಾನ್ಯ ಜನರಿಗೆ ಶಿಕ್ಷಣ ಎಂಬುದು ಇನ್ನೂ ನಿಲುಕದ ಕುಸುಮ, ಒಂದೊಮ್ಮೆ ಪ್ರವೇಶ ಪಡೆದರೂ ಸಾಗುವ ಹಾದಿ ಅವರಲ್ಲಿನ ಸತ್ವವನ್ನೇ ಉಡುಗಿಸುವಂತಿದೆ ಎಂಬುದನ್ನು ಇವು ತೋರಿಸುತ್ತಿವೆ.

ಜೊತೆಗೆ, ನಮ್ಮಲ್ಲಿ ಈಗಾಗಲೇ ಇರುವ ಶ್ರೇಣೀಕರಣದ ಜೊತೆಗೆ ಜಾಗತೀಕರಣದ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಹಿಂದುಳಿದವರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ನಮ್ಮ ಗ್ರಾಮೀಣ ಪರಿಸರದ ಬಹುಪಾಲು ಇಂದು ವಿದ್ಯುತ್, ಅಂತರ್ಜಾಲದ ಕನಿಷ್ಟ ಸೌಲಭ್ಯ ಹೊಂದಿರುವ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣ, ಶಿಕ್ಷಣದ ಖಾಸಗೀಕರಣ ದೊಡ್ಡ ವಿದ್ಯಾರ್ಥಿ ಸಮೂಹವನ್ನೇ ಶಿಕ್ಷಣ ವಂಚಿತರನ್ನಾಗಿಸುತ್ತದೆ. ಯಾವ ದಲಿತ, ಹಿಂದುಳಿದ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಫುಲೆ ದಂಪತಿಗಳು ಶ್ರಮಿಸಿದರೋ ಇಂದು ಅದೇ ಸಮುದಾಯಕ್ಕೆ ದುರ್ಗಮ ಹಾದಿ ಎದುರಾಗಿದೆ. ಈ ಬದಲಾವಣೆಗಳು ಕಂಗೆಡಿಸುವಂತಿವೆ.

ಈ ಸಂದರ್ಭದಲ್ಲಿ ಫುಲೆ ದಂಪತಿಗಳು ಕೈಗೊಂಡ ಬಹುದೊಡ್ಡ ಕೆಲಸವನ್ನು ಮತ್ತೆ ಕಣ್ಣಮುಂದೆ ತಂದುಕೊಂಡು ಇಂದಿನ ಬಿಕ್ಕಟ್ಟನ್ನು ದಾಟಲು ಬೇಕಾದ ಶಕ್ತಿಯನ್ನು ಪಡೆಯಬೇಕಾಗಿದೆ. ಇತ್ತೀಚೆಗೆ ಹೊರಬಂದ ಸಂಗೀತಾ ಮುಳೆಯವರ ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕೃತಿ ಸಾವಿತ್ರಿಬಾಯಿಯವರ ಬದುಕಿನಿಂದ ಶಬರಿ ಎನ್ನುವ ದಲಿತ ಹುಡುಗಿ ಸ್ಫೂರ್ತಿ ಪಡೆದು ತನಗೆದುರಾದ ಸವಾಲುಗಳನ್ನು ದಾಟುವ ಕತೆ ಹೇಳುತ್ತದೆ. ಈ ಬಗೆಯ ಪ್ರೇರಣೆಯನ್ನು ನಾವು ಒಂದು ಸಮುದಾಯವಾಗಿ ಒಟ್ಟು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಕ್ಕೆ ಮುಖಾಮುಖಿಯಾಗುವ ನಿಟ್ಟಿನಲ್ಲಿ ಪಡೆಯಬೇಕಾಗಿದೆ.

ಸಾವಿತ್ರಿಬಾಯಿಫುಲೆಯವರು 1831, ಜನವರಿ 3ರಂದು ಬಾಂಬೆ ಸಂಸ್ಥಾನಕ್ಕೆ ಸೇರಿದ್ದ ಸತಾರಾದ ನಯೀಗಾಂವ್‌ನಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಜ್ಯೋತಿಬಾರನ್ನು ಮದುವೆಯಾದ ಸಾವಿತ್ರಿಬಾಯಿಯವರು ಪತಿಯ ಒತ್ತಾಸೆಯಿಂದ ಶಿಕ್ಷಣ ಪಡೆದರು. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಜೊತೆಯಾಗಿ ಪುಣೆಯಲ್ಲಿ 1848ರಲ್ಲಿ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸುತ್ತಾರೆ. ನಂತರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ಶಿಕ್ಷಣವಂಚಿತ ಸಮುದಾಯಗಳಿಗಾಗಿ ಶಾಲೆಗಳನ್ನು ತೆರೆಯುತ್ತಾರೆ. ಸಂಪ್ರದಾಯವಾದಿ ಮನಸ್ಸುಗಳು ಇದನ್ನು ಸಹಿಸದೆ ಇಲ್ಲದ ಉಪಟಳಗಳನ್ನು ಕೊಟ್ಟರೂ ಧೃತಿಗೆಡದೆ ತಾವು ನಂಬಿದ ಮೌಲ್ಯದಿಂದ ದೂರಸರಿಯದೇ ಫುಲೆ ದಂಪತಿಗಳು ಬದುಕು ನಡೆಸಿದವರು.

ಸಾವಿತ್ರಿಬಾಯಿಯವರು ಜ್ಯೋತಿಬಾರೊಂದಿಗೆ ನೊಂದ, ತ್ಯಕ್ತ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು 1854ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸುತ್ತಾರೆ. ಮಹಿಳಾ ಮಂಡಲಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲ ಮಹಿಳೆಯರೂ ಬೆರೆಯುವ ವಾತಾವರಣ ನಿರ್ಮಿಸುತ್ತಾರೆ. ವಿಧವಾ ಕೇಶಮುಂಡನದ ವಿರುದ್ಧ ದನಿಯೆತ್ತುತ್ತಾ ಇಂತಹ ಕೆಲಸ ಮಾಡದಂತೆ ಕ್ಷೌರಿಕರ ಮನವೊಲಿಸುತ್ತಾರೆ. ಸಮಾಜದ ತಳವರ್ಗದ ಜನರಿಗೆ ಬಾವಿಯಿಂದ ನೀರು ಸೇದುವ ಅವಕಾಶವಿಲ್ಲದಿದ್ದಾಗ ತಮ್ಮ ಮನೆಯ ಬಾವಿಯನ್ನು ಎಲ್ಲರಿಗೆ ಮುಕ್ತವಾಗಿರಿಸುತ್ತಾರೆ. ಜ್ಯೋತಿಬಾರ ಜೊತೆಯಲ್ಲಿ ಸತ್ಯಶೋಧಕ ಸಮಾಜ ಆರಂಭಿಸುವಲ್ಲಿ ಪ್ರೇರಕಶಕ್ತಿಯಾಗುತ್ತಾರೆ.

ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ, ಸಾಮಾಜಿಕ ಜಾಗೃತಿ ಮೂಡಿಸಲು ತಮ್ಮ ಬದುಕನ್ನೇ ತೆತ್ತವರು. 1897ರಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಹರಡಿತ್ತು. ಸಾವಿತ್ರಿಬಾಯಿಯವರು ತಮ್ಮ ಜೊತೆಗಾರರೊಂದಿಗೆ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರೂ ಸೋಂಕಿಗೆ ತುತ್ತಾಗಿ 1897, ಮಾರ್ಚ್ 10ರಂದು ಮರಣ ಹೊಂದುತ್ತಾರೆ. ಹೀಗೆ ತಮ್ಮ ಬದುಕಿನ ಕೊನೆಯ ಗಳಿಗೆಯಲ್ಲೂ ಅವರ ಮನಸ್ಸು ಮತ್ತು ದೇಹ ನೊಂದ ಜನರಿಗೆ ನೆರವಾಗಲು ತುಡಿಯುತ್ತಿತ್ತು.

ಒಂದು ಕಡೆಯಲ್ಲಿ ಜಾತಿಶ್ರೇಣೀಕರಣ, ಅಸ್ಪೃಶ್ಯತೆ, ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ, ಇನ್ನೊಂದು ಕಡೆಯಲ್ಲಿ ವಸಾಹತುಶಾಹಿಯ ಹಿಡಿತ, ಇವುಗಳ ಮಧ್ಯೆ ನಿಜವಾದ ಬಿಡುಗಡೆ ಶಿಕ್ಷಣದ ಮೂಲಕ ಸಾಧ್ಯ ಎಂದು ದೃಢವಾಗಿ ನಂಬಿ ನಡೆದವರು ಸಾವಿತ್ರಿಬಾಯಿಯವರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯದ ಸಂಕಲೆಗಳನ್ನು ಮುರಿಯಿರಿ” ಎಂಬ ಅವರ ಮಾತಿಗೆ ಅವರ ಬದುಕೇ ಒಂದು ನಿದರ್ಶನ. ಫುಲೆ ದಂಪತಿಗಳು ಅನಾಥ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತುಮಗನಾಗಿ ಸ್ವೀಕರಿಸುತ್ತಾರೆ. ಯಶವಂತ ರಾವ್ ಕೂಡಾ ತಂದೆತಾಯಿ ಸಾಗಿದ ದಾರಿಯಲ್ಲೇ ಸಾಗುತ್ತಾರೆ. ತಮ್ಮ ಪತಿ ಜ್ಯೋತಿಬಾ ತೀರಿಕೊಂಡಾಗ ಸಾಂಪ್ರದಾಯಿಕ ರೂಢಿಗೆ ವಿರುದ್ಧವಾಗಿ ಸ್ವತಃ ಸಾವಿತ್ರಿಬಾಯಿ ಅಂತಿಮ ವಿಧಿ ನೆರವೇರಿಸುತ್ತಾರೆ. ಸಾವಿತ್ರಿಬಾಯಿ ಅವರ ಇಂತಹ ನಡೆ, ಎಷ್ಟೋ ವರ್ಷಗಳ ನಂತರ ಕುವೆಂಪು ಅವರು ನುಡಿದ ’ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬುದನ್ನು ನೆನಪಿಸುತ್ತದೆ.

ಸಾವಿತ್ರಿಬಾಯಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಹಾದಿ ಹಾಕಿಕೊಟ್ಟವರಲ್ಲಿ ಮೊದಲಿಗರು; ಜನಹಿತವನ್ನು ಮನದಲ್ಲಿರಿಸಿಕೊಂಡು, ಅದನ್ನು ಕಾರ್ಯರೂಪಗೊಳಿಸಿ ವೈಚಾರಿಕತೆಯ ದೀಪ ಬೆಳಗಿದವರು. ಭಾರತದಲ್ಲಿ ಮೊದಲ ಘಟ್ಟದಲ್ಲಿ ಸ್ತ್ರೀವಾದಿ ದನಿಯಾಗಿ ಕಾಣುವವರು ಸಾವಿತ್ರಿಬಾಯಿ. ಏನೂ ಸವಲತ್ತುಗಳಿಲ್ಲದ ಕಾಲದಲ್ಲಿ ನೈಜ ಕಾಳಜಿಯೊಂದನ್ನೇ ಗಟ್ಟಿಯಾಗಿ ಆತುಕೊಂಡು ಮುಂದುವರೆದವರು ಫುಲೆ ದಂಪತಿಗಳು. ಇವರ ಕೊಡುಗೆಯ ಬಗ್ಗೆ ಹೇಳುವಾಗ ಭಾರತದ ಮಹತ್ವದ ಚಿಂತಕ ಜಿ.ಎನ್.ದೇವಿಯವರ ಮಾತು ಇಲ್ಲಿ ಪ್ರಸ್ತುತ, “ಭಾರತದಲ್ಲಿ ಆಧುನಿಕ ಶಿಕ್ಷಣವೆಂಬುದು ಸರ್ಕಾರದಿಂದಲೇ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ ಅಲ್ಲ. ಹಲವಾರು ನಿಸ್ವಾರ್ಥ ವ್ಯಕ್ತಿಗಳು ತಮ್ಮದೆಲ್ಲವನ್ನೂ ತೆತ್ತು ಕಟ್ಟಿದ ಒಂದು ಸಾಂಸ್ಕೃತಿಕ ಉತ್ಪನ್ನ… …ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಭಾರತೀಯ ಸಮಾಜದ ಆಳ ಸತ್ವವನ್ನು ಪೋಷಿಸುವ ಶಿಕ್ಷಣದ ಶ್ರೇಷ್ಠ ಕಾಣ್ಕೆಗಳನ್ನು ಶಿಕ್ಷಣದೊಂದಿಗೆ ಬೆಸೆಯಲಾಗಲೇ ಇಲ್ಲ.” ಇವು ನಮಗೆ ಸಾವಿತ್ರಿಬಾಯಿಯವರ ಮಹತ್ವ ಮತ್ತು ಇಂದಿನ ಬಿಕ್ಕಟ್ಟಿನ ಮೂಲವನ್ನು ಒಟ್ಟಿಗೆ ಮನದಟ್ಟು ಮಾಡಿಸುತ್ತವೆ.

ಇಂದು ನಮ್ಮ ಮುಂದೆ ಎಲ್ಲರನ್ನೂ ಕಾಯುವ ಸಂವಿಧಾನವಿದೆ, ಶಿಕ್ಷಣ ಮೂಲಭೂತ ಹಕ್ಕಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಲಿಕೆಯ ಮಧ್ಯದಲ್ಲೇ ತೆರಳುವವರೂ ಹೆಚ್ಚಿದ್ದಾರೆ. ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ? ಎಂದು ನಾವು ಪ್ರಶ್ನೆ ಹಾಕಿಕೊಂಡು ನಮ್ಮನ್ನೇ ಅವಲೋಕನ ಮಾಡಿಕೊಳ್ಳದೇ ಹೋದರೆ ಆಶಯ ಕೇವಲ ಕಾಗದಕ್ಕಷ್ಟೆ ಮೀಸಲಾಗಿ, ಅರಳಬೇಕಾದ ಜೀವಗಳು ಕಣ್ಣಮುಂದೆಯೇ ಇಲ್ಲವಾಗುವ ದುರಂತವಷ್ಟೇ ಎದುಗಿರುತ್ತದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಸಾವಿತ್ರಿಬಾಯಿಯವರ ಬದುಕಿನ ಹೋರಾಟದಿಂದ ನಾವು ಸತ್ವವನ್ನು ಪಡೆದು ಮುನ್ನಡೆಯುವ ದೃಢತೆ ತೋರಬೇಕಿದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈಗ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಚೆಂದದ ಬರೆಹ ಮೇಡಂ, ಅಕ್ಷರದ ಅವ್ವನ ದಿಟ್ಟತನ ನಮ್ಮಲ್ಲಿ ಇನ್ನಾದರೂ ಗಟ್ಟಿಯಾಗಿ ಎದೆಗಿಳಿಯಬೇಕಿದೆ.

  2. ಪುಲೆ ಯವರ್ ಚಿಂತನೆಗಳನ್ನು ಮನ ಮುಟ್ಟಿಸುವ ಕೆಲಸ ಮಾಡುವ ನಿಮ್ಮ ಬರವಣಿಗೆ ನಿಜವಾಗಿಯೂ ಮೆಚ್ಚಿಕೊಳ್ಳುವುದರಲ್ಲಿ ಯಾವ ಬಗೆಯ ಎರಡು ಮಾತುಗಲ್ಲೂ ಇಲ್ಲ
    ಆದರೂ ಇಂದಿನ ಅಂದ ಭಕ್ತ ಗುಂಪು ಅನೇಕ ಮಹ್ನಿಯರ ಅನ್ನು ಅವೆಳ್ನಕಾರಿ ಮಾಡುತ್ತಿರುವುದು ವಿಷಾದ ಸಂಗತಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...