Homeಮುಖಪುಟನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

- Advertisement -
- Advertisement -

ಜನವರಿ 3ರಂದು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊರೆಗೆ ಅಂಜಿ ಮೊನ್ನೆಯಷ್ಟೆ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್ ಕುಮಾರ್ ಯಾದವ್‌ನ ಹೆಸರು ಮತ್ತೆಮತ್ತೆ ಮನಸ್ಸಿಗೆ ಬರುತ್ತಿದೆ. ಮಗನ ಕೊನೆಯ ದರ್ಶನಕ್ಕೂ ಬರಲಾಗದ ಹೆತ್ತವರ ಆರ್ಥಿಕ ಸ್ಥಿತಿ ನೆನೆದು ಕಣ್ಣು ಹನಿಗೂಡುತ್ತದೆ. ’ಇಲ್ಲಿ ಮಾನವ ಮೌಲ್ಯಗಳಿಗೆ ಬೆಲೆಯಿಲ್ಲ. ವ್ಯಕ್ತಿಯ ಗುರುತು ಮತ್ತು ಸಂಖ್ಯೆಯಿಂದ ಅಳೆಯಲಾಗುತ್ತದೆ. ಬೌದ್ಧಿಕತೆಯಿಂದ ಗುರುತಿಸುವುದಲ್ಲ’ ಎಂದ ರೋಹಿತ್ ವೇಮುಲ ನಮ್ಮನ್ನಗಲಿ 5ವರ್ಷಗಳಾದವು. ನಮ್ಮ ದೇಶದ ಸಾಮಾನ್ಯ ಜನರಿಗೆ ಶಿಕ್ಷಣ ಎಂಬುದು ಇನ್ನೂ ನಿಲುಕದ ಕುಸುಮ, ಒಂದೊಮ್ಮೆ ಪ್ರವೇಶ ಪಡೆದರೂ ಸಾಗುವ ಹಾದಿ ಅವರಲ್ಲಿನ ಸತ್ವವನ್ನೇ ಉಡುಗಿಸುವಂತಿದೆ ಎಂಬುದನ್ನು ಇವು ತೋರಿಸುತ್ತಿವೆ.

ಜೊತೆಗೆ, ನಮ್ಮಲ್ಲಿ ಈಗಾಗಲೇ ಇರುವ ಶ್ರೇಣೀಕರಣದ ಜೊತೆಗೆ ಜಾಗತೀಕರಣದ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಹಿಂದುಳಿದವರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ನಮ್ಮ ಗ್ರಾಮೀಣ ಪರಿಸರದ ಬಹುಪಾಲು ಇಂದು ವಿದ್ಯುತ್, ಅಂತರ್ಜಾಲದ ಕನಿಷ್ಟ ಸೌಲಭ್ಯ ಹೊಂದಿರುವ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣ, ಶಿಕ್ಷಣದ ಖಾಸಗೀಕರಣ ದೊಡ್ಡ ವಿದ್ಯಾರ್ಥಿ ಸಮೂಹವನ್ನೇ ಶಿಕ್ಷಣ ವಂಚಿತರನ್ನಾಗಿಸುತ್ತದೆ. ಯಾವ ದಲಿತ, ಹಿಂದುಳಿದ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಫುಲೆ ದಂಪತಿಗಳು ಶ್ರಮಿಸಿದರೋ ಇಂದು ಅದೇ ಸಮುದಾಯಕ್ಕೆ ದುರ್ಗಮ ಹಾದಿ ಎದುರಾಗಿದೆ. ಈ ಬದಲಾವಣೆಗಳು ಕಂಗೆಡಿಸುವಂತಿವೆ.

ಈ ಸಂದರ್ಭದಲ್ಲಿ ಫುಲೆ ದಂಪತಿಗಳು ಕೈಗೊಂಡ ಬಹುದೊಡ್ಡ ಕೆಲಸವನ್ನು ಮತ್ತೆ ಕಣ್ಣಮುಂದೆ ತಂದುಕೊಂಡು ಇಂದಿನ ಬಿಕ್ಕಟ್ಟನ್ನು ದಾಟಲು ಬೇಕಾದ ಶಕ್ತಿಯನ್ನು ಪಡೆಯಬೇಕಾಗಿದೆ. ಇತ್ತೀಚೆಗೆ ಹೊರಬಂದ ಸಂಗೀತಾ ಮುಳೆಯವರ ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕೃತಿ ಸಾವಿತ್ರಿಬಾಯಿಯವರ ಬದುಕಿನಿಂದ ಶಬರಿ ಎನ್ನುವ ದಲಿತ ಹುಡುಗಿ ಸ್ಫೂರ್ತಿ ಪಡೆದು ತನಗೆದುರಾದ ಸವಾಲುಗಳನ್ನು ದಾಟುವ ಕತೆ ಹೇಳುತ್ತದೆ. ಈ ಬಗೆಯ ಪ್ರೇರಣೆಯನ್ನು ನಾವು ಒಂದು ಸಮುದಾಯವಾಗಿ ಒಟ್ಟು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಕ್ಕೆ ಮುಖಾಮುಖಿಯಾಗುವ ನಿಟ್ಟಿನಲ್ಲಿ ಪಡೆಯಬೇಕಾಗಿದೆ.

ಸಾವಿತ್ರಿಬಾಯಿಫುಲೆಯವರು 1831, ಜನವರಿ 3ರಂದು ಬಾಂಬೆ ಸಂಸ್ಥಾನಕ್ಕೆ ಸೇರಿದ್ದ ಸತಾರಾದ ನಯೀಗಾಂವ್‌ನಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಜ್ಯೋತಿಬಾರನ್ನು ಮದುವೆಯಾದ ಸಾವಿತ್ರಿಬಾಯಿಯವರು ಪತಿಯ ಒತ್ತಾಸೆಯಿಂದ ಶಿಕ್ಷಣ ಪಡೆದರು. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಜೊತೆಯಾಗಿ ಪುಣೆಯಲ್ಲಿ 1848ರಲ್ಲಿ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸುತ್ತಾರೆ. ನಂತರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ಶಿಕ್ಷಣವಂಚಿತ ಸಮುದಾಯಗಳಿಗಾಗಿ ಶಾಲೆಗಳನ್ನು ತೆರೆಯುತ್ತಾರೆ. ಸಂಪ್ರದಾಯವಾದಿ ಮನಸ್ಸುಗಳು ಇದನ್ನು ಸಹಿಸದೆ ಇಲ್ಲದ ಉಪಟಳಗಳನ್ನು ಕೊಟ್ಟರೂ ಧೃತಿಗೆಡದೆ ತಾವು ನಂಬಿದ ಮೌಲ್ಯದಿಂದ ದೂರಸರಿಯದೇ ಫುಲೆ ದಂಪತಿಗಳು ಬದುಕು ನಡೆಸಿದವರು.

ಸಾವಿತ್ರಿಬಾಯಿಯವರು ಜ್ಯೋತಿಬಾರೊಂದಿಗೆ ನೊಂದ, ತ್ಯಕ್ತ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು 1854ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸುತ್ತಾರೆ. ಮಹಿಳಾ ಮಂಡಲಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲ ಮಹಿಳೆಯರೂ ಬೆರೆಯುವ ವಾತಾವರಣ ನಿರ್ಮಿಸುತ್ತಾರೆ. ವಿಧವಾ ಕೇಶಮುಂಡನದ ವಿರುದ್ಧ ದನಿಯೆತ್ತುತ್ತಾ ಇಂತಹ ಕೆಲಸ ಮಾಡದಂತೆ ಕ್ಷೌರಿಕರ ಮನವೊಲಿಸುತ್ತಾರೆ. ಸಮಾಜದ ತಳವರ್ಗದ ಜನರಿಗೆ ಬಾವಿಯಿಂದ ನೀರು ಸೇದುವ ಅವಕಾಶವಿಲ್ಲದಿದ್ದಾಗ ತಮ್ಮ ಮನೆಯ ಬಾವಿಯನ್ನು ಎಲ್ಲರಿಗೆ ಮುಕ್ತವಾಗಿರಿಸುತ್ತಾರೆ. ಜ್ಯೋತಿಬಾರ ಜೊತೆಯಲ್ಲಿ ಸತ್ಯಶೋಧಕ ಸಮಾಜ ಆರಂಭಿಸುವಲ್ಲಿ ಪ್ರೇರಕಶಕ್ತಿಯಾಗುತ್ತಾರೆ.

ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ, ಸಾಮಾಜಿಕ ಜಾಗೃತಿ ಮೂಡಿಸಲು ತಮ್ಮ ಬದುಕನ್ನೇ ತೆತ್ತವರು. 1897ರಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಹರಡಿತ್ತು. ಸಾವಿತ್ರಿಬಾಯಿಯವರು ತಮ್ಮ ಜೊತೆಗಾರರೊಂದಿಗೆ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರೂ ಸೋಂಕಿಗೆ ತುತ್ತಾಗಿ 1897, ಮಾರ್ಚ್ 10ರಂದು ಮರಣ ಹೊಂದುತ್ತಾರೆ. ಹೀಗೆ ತಮ್ಮ ಬದುಕಿನ ಕೊನೆಯ ಗಳಿಗೆಯಲ್ಲೂ ಅವರ ಮನಸ್ಸು ಮತ್ತು ದೇಹ ನೊಂದ ಜನರಿಗೆ ನೆರವಾಗಲು ತುಡಿಯುತ್ತಿತ್ತು.

ಒಂದು ಕಡೆಯಲ್ಲಿ ಜಾತಿಶ್ರೇಣೀಕರಣ, ಅಸ್ಪೃಶ್ಯತೆ, ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ, ಇನ್ನೊಂದು ಕಡೆಯಲ್ಲಿ ವಸಾಹತುಶಾಹಿಯ ಹಿಡಿತ, ಇವುಗಳ ಮಧ್ಯೆ ನಿಜವಾದ ಬಿಡುಗಡೆ ಶಿಕ್ಷಣದ ಮೂಲಕ ಸಾಧ್ಯ ಎಂದು ದೃಢವಾಗಿ ನಂಬಿ ನಡೆದವರು ಸಾವಿತ್ರಿಬಾಯಿಯವರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯದ ಸಂಕಲೆಗಳನ್ನು ಮುರಿಯಿರಿ” ಎಂಬ ಅವರ ಮಾತಿಗೆ ಅವರ ಬದುಕೇ ಒಂದು ನಿದರ್ಶನ. ಫುಲೆ ದಂಪತಿಗಳು ಅನಾಥ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತುಮಗನಾಗಿ ಸ್ವೀಕರಿಸುತ್ತಾರೆ. ಯಶವಂತ ರಾವ್ ಕೂಡಾ ತಂದೆತಾಯಿ ಸಾಗಿದ ದಾರಿಯಲ್ಲೇ ಸಾಗುತ್ತಾರೆ. ತಮ್ಮ ಪತಿ ಜ್ಯೋತಿಬಾ ತೀರಿಕೊಂಡಾಗ ಸಾಂಪ್ರದಾಯಿಕ ರೂಢಿಗೆ ವಿರುದ್ಧವಾಗಿ ಸ್ವತಃ ಸಾವಿತ್ರಿಬಾಯಿ ಅಂತಿಮ ವಿಧಿ ನೆರವೇರಿಸುತ್ತಾರೆ. ಸಾವಿತ್ರಿಬಾಯಿ ಅವರ ಇಂತಹ ನಡೆ, ಎಷ್ಟೋ ವರ್ಷಗಳ ನಂತರ ಕುವೆಂಪು ಅವರು ನುಡಿದ ’ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬುದನ್ನು ನೆನಪಿಸುತ್ತದೆ.

ಸಾವಿತ್ರಿಬಾಯಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಹಾದಿ ಹಾಕಿಕೊಟ್ಟವರಲ್ಲಿ ಮೊದಲಿಗರು; ಜನಹಿತವನ್ನು ಮನದಲ್ಲಿರಿಸಿಕೊಂಡು, ಅದನ್ನು ಕಾರ್ಯರೂಪಗೊಳಿಸಿ ವೈಚಾರಿಕತೆಯ ದೀಪ ಬೆಳಗಿದವರು. ಭಾರತದಲ್ಲಿ ಮೊದಲ ಘಟ್ಟದಲ್ಲಿ ಸ್ತ್ರೀವಾದಿ ದನಿಯಾಗಿ ಕಾಣುವವರು ಸಾವಿತ್ರಿಬಾಯಿ. ಏನೂ ಸವಲತ್ತುಗಳಿಲ್ಲದ ಕಾಲದಲ್ಲಿ ನೈಜ ಕಾಳಜಿಯೊಂದನ್ನೇ ಗಟ್ಟಿಯಾಗಿ ಆತುಕೊಂಡು ಮುಂದುವರೆದವರು ಫುಲೆ ದಂಪತಿಗಳು. ಇವರ ಕೊಡುಗೆಯ ಬಗ್ಗೆ ಹೇಳುವಾಗ ಭಾರತದ ಮಹತ್ವದ ಚಿಂತಕ ಜಿ.ಎನ್.ದೇವಿಯವರ ಮಾತು ಇಲ್ಲಿ ಪ್ರಸ್ತುತ, “ಭಾರತದಲ್ಲಿ ಆಧುನಿಕ ಶಿಕ್ಷಣವೆಂಬುದು ಸರ್ಕಾರದಿಂದಲೇ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ ಅಲ್ಲ. ಹಲವಾರು ನಿಸ್ವಾರ್ಥ ವ್ಯಕ್ತಿಗಳು ತಮ್ಮದೆಲ್ಲವನ್ನೂ ತೆತ್ತು ಕಟ್ಟಿದ ಒಂದು ಸಾಂಸ್ಕೃತಿಕ ಉತ್ಪನ್ನ… …ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಭಾರತೀಯ ಸಮಾಜದ ಆಳ ಸತ್ವವನ್ನು ಪೋಷಿಸುವ ಶಿಕ್ಷಣದ ಶ್ರೇಷ್ಠ ಕಾಣ್ಕೆಗಳನ್ನು ಶಿಕ್ಷಣದೊಂದಿಗೆ ಬೆಸೆಯಲಾಗಲೇ ಇಲ್ಲ.” ಇವು ನಮಗೆ ಸಾವಿತ್ರಿಬಾಯಿಯವರ ಮಹತ್ವ ಮತ್ತು ಇಂದಿನ ಬಿಕ್ಕಟ್ಟಿನ ಮೂಲವನ್ನು ಒಟ್ಟಿಗೆ ಮನದಟ್ಟು ಮಾಡಿಸುತ್ತವೆ.

ಇಂದು ನಮ್ಮ ಮುಂದೆ ಎಲ್ಲರನ್ನೂ ಕಾಯುವ ಸಂವಿಧಾನವಿದೆ, ಶಿಕ್ಷಣ ಮೂಲಭೂತ ಹಕ್ಕಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಲಿಕೆಯ ಮಧ್ಯದಲ್ಲೇ ತೆರಳುವವರೂ ಹೆಚ್ಚಿದ್ದಾರೆ. ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ? ಎಂದು ನಾವು ಪ್ರಶ್ನೆ ಹಾಕಿಕೊಂಡು ನಮ್ಮನ್ನೇ ಅವಲೋಕನ ಮಾಡಿಕೊಳ್ಳದೇ ಹೋದರೆ ಆಶಯ ಕೇವಲ ಕಾಗದಕ್ಕಷ್ಟೆ ಮೀಸಲಾಗಿ, ಅರಳಬೇಕಾದ ಜೀವಗಳು ಕಣ್ಣಮುಂದೆಯೇ ಇಲ್ಲವಾಗುವ ದುರಂತವಷ್ಟೇ ಎದುಗಿರುತ್ತದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಸಾವಿತ್ರಿಬಾಯಿಯವರ ಬದುಕಿನ ಹೋರಾಟದಿಂದ ನಾವು ಸತ್ವವನ್ನು ಪಡೆದು ಮುನ್ನಡೆಯುವ ದೃಢತೆ ತೋರಬೇಕಿದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈಗ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಚೆಂದದ ಬರೆಹ ಮೇಡಂ, ಅಕ್ಷರದ ಅವ್ವನ ದಿಟ್ಟತನ ನಮ್ಮಲ್ಲಿ ಇನ್ನಾದರೂ ಗಟ್ಟಿಯಾಗಿ ಎದೆಗಿಳಿಯಬೇಕಿದೆ.

  2. ಪುಲೆ ಯವರ್ ಚಿಂತನೆಗಳನ್ನು ಮನ ಮುಟ್ಟಿಸುವ ಕೆಲಸ ಮಾಡುವ ನಿಮ್ಮ ಬರವಣಿಗೆ ನಿಜವಾಗಿಯೂ ಮೆಚ್ಚಿಕೊಳ್ಳುವುದರಲ್ಲಿ ಯಾವ ಬಗೆಯ ಎರಡು ಮಾತುಗಲ್ಲೂ ಇಲ್ಲ
    ಆದರೂ ಇಂದಿನ ಅಂದ ಭಕ್ತ ಗುಂಪು ಅನೇಕ ಮಹ್ನಿಯರ ಅನ್ನು ಅವೆಳ್ನಕಾರಿ ಮಾಡುತ್ತಿರುವುದು ವಿಷಾದ ಸಂಗತಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...