Homeಮುಖಪುಟನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್‌ ಖುರಾನ

ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್‌ ಖುರಾನ

- Advertisement -
- Advertisement -

ಹೊಸ ವರ್ಷವನ್ನು ಸಮಾನತೆ ಮತ್ತು ಹೆಮ್ಮೆಯಿಂದ ಸ್ವಾಗತಿಸಿರುವ ಖ್ಯಾತ ಬಾಲಿವುಟ್‌ ನಟ ಆಯುಷ್ಮಾನ್ ಖುರಾನಾ, ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ ಎಂದು ಹೇಳಿದ್ದಾರೆ.

ದೇಶದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹಿಂದೂಸ್ತಾನ್‌ ಟೈಮ್ಸ್‌ನೊಂದಿಗಿನ ಸಂದರ್ಶನದಲ್ಲಿ ಅವರು “ಸಮಾನತೆಯ ಬಗ್ಗೆ ಹೆಮ್ಮೆಪಡುವ ತಾನು ಸಾಮಾಜಿಕವಾಗಿ ಜಾಗೃತ ನಾಗರಿಕ ಎಂದು ಹೇಳಿಕೊಂಡಿದ್ದಾರೆ. ಅವರ ಸಿನೆಮಾ ಆಯ್ಕೆಯು ಯಾವಾಗಲೂ ಸಾಮಾಜಿಕವಾಗಿ ಸಂಬಂಧಿಸಿದ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ, ಅದು ಚರ್ಚೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.

ಅವರ ಚೊಚ್ಚಲ ಬಾಲಿವುಡ್ ಚಿತ್ರ ’ವಿಕ್ಕಿಂಗ್ ವಿಕಿ ದಾನಿ (2012) ದಿಂದ ಅವರ ಕೊನೆಯ ತೆರೆಯ ಬಂದ ಜಾಯ್‌ರೈಡ್ ಬಾಲಾ (2019) ಮತ್ತು ಮುಂಬರುವ ಸಲಿಂಗಕಾಮದ ಕುರಿತ “ಶುಭ್ ಮಂಗಲ್ ಜ್ಯಾದ ಸಾವಧಾನ್”ವರೆಗೂ ಸಾಮಾಜಿಕ ಬದಲಾವಣೆಯು ತಮ್ಮ ಚಲನಚಿತ್ರಗಳಲ್ಲಿ ಮುಖ್ಯ ಆಧಾರವಾಗಿದೆ ಎಂದು ಆಯುಷ್ಮಾನ್ ಖುರಾನಾ ಹೇಳಿದ್ದಾರೆ.

ಚಿತ್ರವೊಂದರಲ್ಲಿಅ ವರು ಒಂದು ಕೈಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ ಹೆಮ್ಮೆಯ ಭಾವುಟವನ್ನು ಹಿಡಿದುಕೊಂಡಿದ್ದಾರೆ. ಇದು ಸಲಿಂಗಕಾಮ ಮತ್ತು ಎಲ್ಜಿಬಿಟಿಕ್ ಸಮುದಾಯದ ವಿಷಯಕ್ಕೆ ಬಂದಾಗ ಭಾರತವನ್ನು ಪ್ರಗತಿಪರ ನಿಲುವಿನಲ್ಲಿ ತೋರಿಸುತ್ತದೆ. ಇದು ಸೆಕ್ಷನ್ 377 (ಭಾರತೀಯ ದಂಡ ಸಂಹಿತೆಯ) ಯನ್ನು ತಾರತಮ್ಯಗೊಳಿಸಿದೆ ಮತ್ತು ನಾವು ಹೆಚ್ಚು ಹೆಮ್ಮೆಪಡುವಂತಿಲ್ಲ ಎಂದು ಅವರು ಹೇಳುತ್ತಾರೆ.

ಅವರ ಚಲನಚಿತ್ರಗಳ ಆಯ್ಕೆಯ ಕುರಿತು (ಆರ್ಟಿಕಲ್ 15) (ಶುಭ್ ಮಂಗಲ್ ಜ್ಯಾದ ಸಾವಧಾನ್)  ಸಾಮಾಜಿಕವಾಗಿ ಪ್ರಸ್ತುತವಾದ, ಒಂದು ಕೋಲಾಹಲವನ್ನು ಉಂಟುಮಾಡುವ ಅಥವಾ ಕೆಲವು ರೀತಿಯ ಚರ್ಚೆಯನ್ನು ಉಂಟುಮಾಡುವ ವಿಷಯಗಳನ್ನು ಆಯ್ಕೆ ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಹೌದು, ನಾನು ಸಾಮಾಜಿಕವಾಗಿ ಜಾಗೃತ ನಾಗರಿಕ. ನಾನು ಸಾಮಾಜಿಕವಾಗಿ ಸಂಬಂಧಿಸಿದ ಅನೇಕ ಸಮಸ್ಯೆಗಳ ಕುರಿತ ಬೀದಿ ನಾಟಕವನ್ನು ಮಾಡಿದ್ದೇನೆ ಮತ್ತು ನಾನು ಮಾಡುತ್ತಿರುವ ಸಿನೆಮಾ ನನ್ನ ರಂಗಭೂಮಿ ದಿನಗಳ ವಿಸ್ತರಣೆಯಾಗಿದೆ ಎನ್ನುತ್ತಾರೆ.

ಗಣರಾಜ್ಯೋತ್ಸವದ ಮಹತ್ವ ಮತ್ತು ದೇಶಪ್ರೇಮವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಎಂಬ ಪ್ರಶ್ನೆಗೆ
ಗಣರಾಜ್ಯೋತ್ಸವು ನಮ್ಮ ದೇಶದಲ್ಲಿ ಒಬ್ಬರಾಗಿ ನಮ್ಮ ದೇಶವು ಹೊಂದಿರು ಬಹು – ಸಾಂಸ್ಕೃತಿಕ ವಿಭಿನ್ನತೆಯನ್ನು ಸಂಭ್ರಮಿಸಬೆಕು. ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ. ದೇಶಪ್ರೇಮವು ಒಂದು ಜವಾಬ್ದಾರಿಯೊಂದಿಗೆ ಬರುತ್ತದೆ, ನಿಮ್ಮ ದೇಶದ ಮೇಲಿನ ಪ್ರೀತಿಯು ನಾನು ಪುನರುಚ್ಚರಿಸಿದಂತೆ ಇದು ಕುರುಡು ಪ್ರೀತಿ ಆಗಿರಬಾರದು ಎನ್ನುತ್ತಾರೆ.

ನಮ್ಮ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಇದು ನಮ್ಮ ಅತಿದೊಡ್ಡ ಶಕ್ತಿ ಮತ್ತು ನಮ್ಮ ದೊಡ್ಡ ದೌರ್ಬಲ್ಯವೂ ಆಗಿದೆ. ನಾವು ವೈವಿಧ್ಯಮಯರು ಜೊತೆಗೆ ನಾವು ಒಟ್ಟಾಗಿರಬೇಕು. ನಾನು ಆಚರಿಸುವುದು ಭಾರತವು ಸಂಸ್ಕೃತಿಯಾಗಿದೆ. ನಮ್ಮ ಕೊರತೆಯೆಂದರೆ ನಾವು ದೇಶವನ್ನು ಸ್ವಚ್ಛವಾಗಿಟ್ಟಿಲ್ಲ. ಸಣ್ಣ ಆರ್ಥಿಕತೆಯನ್ನು ಹೊಂದಿರುವ ದೇಶಗಳು ಸಹ ನಮಗಿಂತ ಸ್ವಚ್ಛವಾಗಿವೆ ಎನ್ನುತ್ತಾರೆ.

ಎಲ್ಜಿಬಿಟಿಕ್ ಸಮುದಾಯ ಮತ್ತು ವಿವಿಧ ಜಾತಿಯ ಜನರಿಗೆ ಸಾಂವಿಧಾನಿಕ ಸಿಂಧುತ್ವ ಇರಬಹುದು, ಆದರೆ ಅಂತಿಮವಾಗಿ ಸ್ವೀಕಾರಾರ್ಹತೆಯ ಜವಾಬ್ದಾರಿ ರಾಷ್ಟ್ರದ ಜನರ ಮೇಲಿದೆ ಎಂದು ನೀವು ನಂಬುತ್ತೀರಾ? ಎಂಬ ಪ್ರಶ್ನೆಗೆ ಅವರು ಈ ಸಮುದಾಯದ ಕುರಿತು ಯೂಟ್ಯೂಬ್‌ನಲ್ಲಿ ಟ್ರೈಲರ್‌ನಲ್‌ಇ ನಾವು ನೋಡಿದ ರೀತಿಯ ವೀಕ್ಷಣೆಗಳು ಮತ್ತು ಕಾಮೆಂಟ್‌ಗಳು ನಮ್ಮ ದೇಶದ ಪ್ರಗತಿಪರ ನಿಲುವನ್ನು ತೋರಿಸುತ್ತದೆ. ಇದು ಸಲಿಂಗಕಾಮವನ್ನು ಆಧರಿಸಿದ ಚಿತ್ರಕ್ಕಾಗಿ ಸಿದ್ಧವಾಗಿದೆ. ಚಿತ್ರದ ಟ್ರೈಲರ್ ಅನ್ನು ನಮ್ಮ ದೇಶ ಸ್ವೀಕರಿಸಿದೆ ಎಂದು ಅದು ತೋರಿಸುತ್ತದೆ. ಇದು 2020ರ ಸಲಿಂಗಕಾಮಿ ಪ್ರೇಮಕಥೆಯ ಮುಖ್ಯವಾಹಿನಿಯ ಅತಿ ದೊಡ್ಡ ಕಮರ್ಷಿಯಲ್‌ ಹಿಂದಿ ಸಿನೆಮಾವಾಗಿದೆ ಎಂದಿದ್ದಾರೆ.

ನಮ್ಮ ಚಲನಚಿತ್ರೋದ್ಯಮದ ಸಾಮಾಜಿಕ ಒಳಗೊಳ್ಳುವಿಕೆ ಸಾಕಷ್ಟಿದೆಯೇ? ಎಂಬ ಪ್ರಶ್ನೆಗೆ ಉದ್ಯಮದಲ್ಲಿ ನಾವು ಮುಕ್ತತೆಯಿಂದ ಇದ್ದೇವೆ. ನೀವು ಯಾವ ಜಾತಿ, ಬಣ್ಣ, ಧರ್ಮಕ್ಕೆ ಸೇರಿದವರು ಅಥವಾ ನಿಮ್ಮ ಲೈಂಗಿಕತೆ ಏನೆಂಬುದು ನಮಗೆ ಮುಖ್ಯವಲ್ಲ. ನಿಮ್ಮ ಪ್ರತಿಭೆಯ ಬಗ್ಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ. ನೀವು ಸಾಕಷ್ಟು ಒಳ್ಳೆಯವರಾಗಿದ್ದರೆ, ನೀವು ಅಲ್ಲಿಗೆ ಹೋಗುತ್ತೀರಿ ಮತ್ತು ನಿಮಗಾಗಿ ಒಳ್ಳೆಯದನ್ನು ಮಾಡುತ್ತೀರಿ ಎಂದು ಅವರು ಹೇಳಿದ್ದಾರೆ.

ಕೃಪೆ: ಹಿಂದೂಸ್ತಾನ್‌ ಟೈಮ್ಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...