Homeಕರ್ನಾಟಕ‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ನಡೆಸುವ ಚರ್ಚೆ ಹೀಗಿದೆ...

- Advertisement -
- Advertisement -

‘ಪೇಸಿಎಂ’ ಪೋಸ್ಟರ್‌ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್‌, ಮತ್ತೊಂದು ಸೃಜನಶೀಲ ಪ್ರಯೋಗವನ್ನು ಮಾಡಿದೆ. ‘ಪೇಸಿಎಂ ಆಕ್ಷನ್‌ ಕಮಿಟಿ’ (PayCM Action Committee) ಎಂಬ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ಚರ್ಚಿಸುತ್ತಿರುವಂತೆ ವಿಡಿಯೊ ರಚಿಸಲಾಗಿದೆ.

ಈ ವಿಡಿಯೊವನ್ನು ‘40% ಸರ್ಕಾರ’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಗ್ರೂಪ್‌ನಲ್ಲಿ ಆಗುವ ಚರ್ಚೆಗಳು ಸ್ವಾರಸ್ಯಕರವಾಗಿವೆ. ಬಿಜೆಪಿಯವರು ಹೀಗೆ ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಅಣಕ ಮಾಡಿದೆ.

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ ಹೀಗಿದೆ…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ಗ್ರೂಪ್ ರಚಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಡಾ.ಕೆ.ಸುಧಾಕರ್‌, ಅಶ್ವತ್ಥ್ ನಾರಾಯಣ್, ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಇದ್ದಾರೆ.

ಬೊಮ್ಮಾಯಿ ಮಾತು ಆರಂಭಿಸುತ್ತಾರೆ.

ಬೊಮ್ಮಾಯಿ: ಎಲ್ಲಿಗೆ ಬಂತಪ್ಪ? ಅಪ್‌ಡೇಟ್ ಏನು?

ಆರಗ: ತನಿಖೆ ನಡೆಯುತ್ತಿದೆ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಟಾಬ್ಲೇಟ್ ತಗೊಂಡ್ರು ನಿದ್ದೆ ಬರುತ್ತಿಲ್ಲ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಜನ ಬಿಜೆಪಿಯವರು ಪೇಸಿಎಂ ಕಾಪಿ ಮಾಡಿರೋದು ಮಜಾ ಬರುತ್ತಿಲ್ಲ ಅಂತಿದ್ದಾರೆ.

ಸುಧಾಕರ್‌: ಲೆಸ್ಟ್ ಬ್ರಿಂಗ್‌ ಔಟ್ ಲಿಂಗಾಯತ್ ಕಾರ್ಡ್ (ಲಿಂಗಾಯತ ಕಾರ್ಡ್ ಹಾಕೋಣ)

ಬೊಮ್ಮಾಯಿ: ಮಾಸ್ಟರ್‌ ಸ್ಟ್ರೋಕ್‌ ಸುಧಾಕರ್‌, ಯೂ ಡು ಇಟ್‌

ಸುಧಾಕರ್‌: ಓಕೆ (ಇಮೋಜಿ ಬಳಸಿದ್ದಾರೆ.)

(ವಿಜಯೇಂದ್ರ ಲೆಫ್ಟ್‌)

ಬೊಮ್ಮಾಯಿ: ಛೇ ಇವ್ನು ಇರೋದು ಮರೆತುಬಿಟ್ಟೆ.

ಬೊಮ್ಮಾಯಿ: (‘ಸುಧಾಕರ್‌ ಮೋಸ್ಟ್‌ಲಿ ಮೂರ್ಖ ಅನಿಸುತ್ತೆ: ಸಿದ್ದರಾಮಯ್ಯ’ ಎಂದಿರುವ ಸುದ್ದಿ ಶೇರ್‌ ಮಾಡುತ್ತಾರೆ)

ಬೊಮ್ಮಾಯಿ: ಇವಾಗ ಏನ್ ಮಾಡೋಣ.

ಈಶ್ವರಪ್ಪ: ನನಗೆ ಮಂತ್ರಿ ಸ್ಥಾನ ಕೊಟ್ಟರೆ ಐಡಿಯಾ ಕೊಡ್ತೀನಿ.

(ಬೊಮ್ಮಾರಿ ರಿಮೂವ್ಡ್‌ ಈಶ್ವರಪ್ಪ)

ಬೊಮ್ಮಾಯಿ: ಕಟೀಲ್‌ ಮೋದೀಜಿ ಹತ್ತಿರ ಮಾತಾಡಿ, ಏನಾದರೂ ಐಡಿಯಾ ಕೊಡ್ತಾರೆ.

ಕಟೀಲ್: ಮೋದೀಜಿ ನವಿಲಿನೊಟ್ಟಿಗೆ ಫೋಟೋಶೂಟ್ ಮಾಡ್ತಾ ಇದ್ದಾರಂತೆ.  ಮೆಸೇಜ್ ಮಾಡಿದ್ದೇನೆ.

ಬೊಮ್ಮಾಯಿ: ಓಕೆ, ಅಶ್ವತ್ಥ್ ಎನಿ ಐಡಿಯಾ?

ಅಶ್ವತ್ಥ್‌: ವೀ ಕೆನ್‌ ಮೇಕ್ ಎ ಮೂವಿ. ಯೂವರ್‌ ಬಯೋಗ್ರಫಿ.

ಮಾಧುಸ್ವಾಮಿ: ಪೂರ್ತಿ ಮೂವಿ ಟ್ರೇಲರ್‌ರಷ್ಟು ಉದ್ದ ಕೂಡ ಬರಲ್ಲ.

ಬೊಮ್ಮಾಯಿ: ಕಟೀಲ್, ಸಮ್‌ಥಿಂಗ್ ಬಿಗ್ ವೀ ಶುಡ್ ಡೂ.

ನಳೀನ್‌: ಹಿಂದುತ್ವ ತರೋಣ.

ಬೊಮ್ಮಾಯಿ: ಹೌ? (ಹೇಗೆ)

ನಳೀನ್: ಸೇಮ್‌ ಆಸ್ ಆಲ್ವೇಸ್‌ (ನಗುವ ಇಮೋಜಿ.)

ಆರಗ: ನೋ. ಆಮೇಲೆ ನಾನು ತನಿಖೆ ಮಾಡಿಸಬೇಕು.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

ಸಿ.ಟಿ.ರವಿ: ಯೆಸ್ ಟಿಪ್ಪು ಸುಲ್ತಾನ್ ತರೋಣ.

ಬೊಮ್ಮಾಯಿ: (ಹಣೆಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ.)

ಕಟೀಲ್: ಮೋದೀಜಿ ಮೆಸೇಜ್ ಮಾಡಿದ್ದಾರೆ. (ಬ್ಯುಸಿ ಎಂಬ ಆಡಿಯೋ ಸಂದೇಶ ಬಂದಿದೆ.)

ಸಿಟಿ ರವಿ: ಪಿಎಫ್‌ಐನವರು ದೇವಸ್ಥಾನದಲ್ಲಿ ಪಾಕಿಸ್ತಾನ್ ಬಾವುಟ ಹಾರಿಸಲಿ. ಬೊಮ್ಮಾಯಿ ಸರ್‌ ಅದಕ್ಕೆ ಬೆಂಗಳೂರಿಂದ ಪಾದಯಾತ್ರೆ ಹೋಗಿ ಹಿಂದುತ್ವ ಫ್ಲಾಗ್ ಹಾರಿಸಬೇಕು.

ಕಟೀಲ್: ಗುಡ್ ಐಡಿಯಾ

ಬೊಮ್ಮಾಯಿ: ನೋ. ನನಗೆ ಪಾದೆಯಾತ್ರೆ ಆಗಲ್ಲ, ಕಾಲ್ ನೋವು.

ಕಟೀಲ್: ಶಾ ಟೆಕ್ಸ್ಟ್‌ ಮಾಡಿದ್ದಾರೆ.

ಬೊಮ್ಮಾಯಿ: ವಾಟ್ ಡಿಡ್ ಶಾ ಟೆಲ್?

(ನಳೀನ್‌ ಕುಮಾರ್ ಕಟೀಲ್‌ ಬೊಮ್ಮಾಯಿಯವರನ್ನು ರಿಮೂವ್ ಮಾಡುತ್ತಾರೆ.)

– ಈ ರೀತಿಯಲ್ಲಿ ಸಂಭಾಷಣೆ ನಡೆದಿರುವಂತೆ ಟ್ರೋಲ್ ಮಾಡಲಾಗಿದೆ.

40 % ಕಮಿಷನ್ ಸರ್ಕಾರ ಎಂಬ ಅಸ್ತ್ರವನ್ನು ಕಾಂಗ್ರೆಸ್ ಬಲವಾಗಿ ಪ್ರಯೋಗಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...