Homeಕರ್ನಾಟಕ‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ನಡೆಸುವ ಚರ್ಚೆ ಹೀಗಿದೆ...

- Advertisement -
- Advertisement -

‘ಪೇಸಿಎಂ’ ಪೋಸ್ಟರ್‌ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್‌, ಮತ್ತೊಂದು ಸೃಜನಶೀಲ ಪ್ರಯೋಗವನ್ನು ಮಾಡಿದೆ. ‘ಪೇಸಿಎಂ ಆಕ್ಷನ್‌ ಕಮಿಟಿ’ (PayCM Action Committee) ಎಂಬ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ಚರ್ಚಿಸುತ್ತಿರುವಂತೆ ವಿಡಿಯೊ ರಚಿಸಲಾಗಿದೆ.

ಈ ವಿಡಿಯೊವನ್ನು ‘40% ಸರ್ಕಾರ’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಗ್ರೂಪ್‌ನಲ್ಲಿ ಆಗುವ ಚರ್ಚೆಗಳು ಸ್ವಾರಸ್ಯಕರವಾಗಿವೆ. ಬಿಜೆಪಿಯವರು ಹೀಗೆ ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಅಣಕ ಮಾಡಿದೆ.

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ ಹೀಗಿದೆ…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ಗ್ರೂಪ್ ರಚಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಡಾ.ಕೆ.ಸುಧಾಕರ್‌, ಅಶ್ವತ್ಥ್ ನಾರಾಯಣ್, ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಇದ್ದಾರೆ.

ಬೊಮ್ಮಾಯಿ ಮಾತು ಆರಂಭಿಸುತ್ತಾರೆ.

ಬೊಮ್ಮಾಯಿ: ಎಲ್ಲಿಗೆ ಬಂತಪ್ಪ? ಅಪ್‌ಡೇಟ್ ಏನು?

ಆರಗ: ತನಿಖೆ ನಡೆಯುತ್ತಿದೆ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಟಾಬ್ಲೇಟ್ ತಗೊಂಡ್ರು ನಿದ್ದೆ ಬರುತ್ತಿಲ್ಲ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಜನ ಬಿಜೆಪಿಯವರು ಪೇಸಿಎಂ ಕಾಪಿ ಮಾಡಿರೋದು ಮಜಾ ಬರುತ್ತಿಲ್ಲ ಅಂತಿದ್ದಾರೆ.

ಸುಧಾಕರ್‌: ಲೆಸ್ಟ್ ಬ್ರಿಂಗ್‌ ಔಟ್ ಲಿಂಗಾಯತ್ ಕಾರ್ಡ್ (ಲಿಂಗಾಯತ ಕಾರ್ಡ್ ಹಾಕೋಣ)

ಬೊಮ್ಮಾಯಿ: ಮಾಸ್ಟರ್‌ ಸ್ಟ್ರೋಕ್‌ ಸುಧಾಕರ್‌, ಯೂ ಡು ಇಟ್‌

ಸುಧಾಕರ್‌: ಓಕೆ (ಇಮೋಜಿ ಬಳಸಿದ್ದಾರೆ.)

(ವಿಜಯೇಂದ್ರ ಲೆಫ್ಟ್‌)

ಬೊಮ್ಮಾಯಿ: ಛೇ ಇವ್ನು ಇರೋದು ಮರೆತುಬಿಟ್ಟೆ.

ಬೊಮ್ಮಾಯಿ: (‘ಸುಧಾಕರ್‌ ಮೋಸ್ಟ್‌ಲಿ ಮೂರ್ಖ ಅನಿಸುತ್ತೆ: ಸಿದ್ದರಾಮಯ್ಯ’ ಎಂದಿರುವ ಸುದ್ದಿ ಶೇರ್‌ ಮಾಡುತ್ತಾರೆ)

ಬೊಮ್ಮಾಯಿ: ಇವಾಗ ಏನ್ ಮಾಡೋಣ.

ಈಶ್ವರಪ್ಪ: ನನಗೆ ಮಂತ್ರಿ ಸ್ಥಾನ ಕೊಟ್ಟರೆ ಐಡಿಯಾ ಕೊಡ್ತೀನಿ.

(ಬೊಮ್ಮಾರಿ ರಿಮೂವ್ಡ್‌ ಈಶ್ವರಪ್ಪ)

ಬೊಮ್ಮಾಯಿ: ಕಟೀಲ್‌ ಮೋದೀಜಿ ಹತ್ತಿರ ಮಾತಾಡಿ, ಏನಾದರೂ ಐಡಿಯಾ ಕೊಡ್ತಾರೆ.

ಕಟೀಲ್: ಮೋದೀಜಿ ನವಿಲಿನೊಟ್ಟಿಗೆ ಫೋಟೋಶೂಟ್ ಮಾಡ್ತಾ ಇದ್ದಾರಂತೆ.  ಮೆಸೇಜ್ ಮಾಡಿದ್ದೇನೆ.

ಬೊಮ್ಮಾಯಿ: ಓಕೆ, ಅಶ್ವತ್ಥ್ ಎನಿ ಐಡಿಯಾ?

ಅಶ್ವತ್ಥ್‌: ವೀ ಕೆನ್‌ ಮೇಕ್ ಎ ಮೂವಿ. ಯೂವರ್‌ ಬಯೋಗ್ರಫಿ.

ಮಾಧುಸ್ವಾಮಿ: ಪೂರ್ತಿ ಮೂವಿ ಟ್ರೇಲರ್‌ರಷ್ಟು ಉದ್ದ ಕೂಡ ಬರಲ್ಲ.

ಬೊಮ್ಮಾಯಿ: ಕಟೀಲ್, ಸಮ್‌ಥಿಂಗ್ ಬಿಗ್ ವೀ ಶುಡ್ ಡೂ.

ನಳೀನ್‌: ಹಿಂದುತ್ವ ತರೋಣ.

ಬೊಮ್ಮಾಯಿ: ಹೌ? (ಹೇಗೆ)

ನಳೀನ್: ಸೇಮ್‌ ಆಸ್ ಆಲ್ವೇಸ್‌ (ನಗುವ ಇಮೋಜಿ.)

ಆರಗ: ನೋ. ಆಮೇಲೆ ನಾನು ತನಿಖೆ ಮಾಡಿಸಬೇಕು.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

ಸಿ.ಟಿ.ರವಿ: ಯೆಸ್ ಟಿಪ್ಪು ಸುಲ್ತಾನ್ ತರೋಣ.

ಬೊಮ್ಮಾಯಿ: (ಹಣೆಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ.)

ಕಟೀಲ್: ಮೋದೀಜಿ ಮೆಸೇಜ್ ಮಾಡಿದ್ದಾರೆ. (ಬ್ಯುಸಿ ಎಂಬ ಆಡಿಯೋ ಸಂದೇಶ ಬಂದಿದೆ.)

ಸಿಟಿ ರವಿ: ಪಿಎಫ್‌ಐನವರು ದೇವಸ್ಥಾನದಲ್ಲಿ ಪಾಕಿಸ್ತಾನ್ ಬಾವುಟ ಹಾರಿಸಲಿ. ಬೊಮ್ಮಾಯಿ ಸರ್‌ ಅದಕ್ಕೆ ಬೆಂಗಳೂರಿಂದ ಪಾದಯಾತ್ರೆ ಹೋಗಿ ಹಿಂದುತ್ವ ಫ್ಲಾಗ್ ಹಾರಿಸಬೇಕು.

ಕಟೀಲ್: ಗುಡ್ ಐಡಿಯಾ

ಬೊಮ್ಮಾಯಿ: ನೋ. ನನಗೆ ಪಾದೆಯಾತ್ರೆ ಆಗಲ್ಲ, ಕಾಲ್ ನೋವು.

ಕಟೀಲ್: ಶಾ ಟೆಕ್ಸ್ಟ್‌ ಮಾಡಿದ್ದಾರೆ.

ಬೊಮ್ಮಾಯಿ: ವಾಟ್ ಡಿಡ್ ಶಾ ಟೆಲ್?

(ನಳೀನ್‌ ಕುಮಾರ್ ಕಟೀಲ್‌ ಬೊಮ್ಮಾಯಿಯವರನ್ನು ರಿಮೂವ್ ಮಾಡುತ್ತಾರೆ.)

– ಈ ರೀತಿಯಲ್ಲಿ ಸಂಭಾಷಣೆ ನಡೆದಿರುವಂತೆ ಟ್ರೋಲ್ ಮಾಡಲಾಗಿದೆ.

40 % ಕಮಿಷನ್ ಸರ್ಕಾರ ಎಂಬ ಅಸ್ತ್ರವನ್ನು ಕಾಂಗ್ರೆಸ್ ಬಲವಾಗಿ ಪ್ರಯೋಗಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...