Homeಮುಖಪುಟಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

ಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

- Advertisement -
- Advertisement -

ನಮ್ಮಲ್ಲಿ ಅನೇಕ ಸಂಪ್ರದಾಯಗಳು, ಹಬ್ಬಹರಿದಿನಗಳ ಧಾರ್ಮಿಕ ಆಚರಣೆಗಳು ಕೂಡಾ ಪ್ರಕೃತಿ, ಪರಿಸರ ಮತ್ತು ನಭೋಮಂಡಲದ ಆಗುಹೋಗುಗಳನ್ನೂ, ಬದಲಾವಣೆಗಳನ್ನೂ ಅವಲಂಬಿಸಿ ಆಚರಿಸುವಂತದ್ದಾಗಿವೆ. ಸೂರ್ಯಕೇಂದ್ರಿತ ಈ ಮಂಡಲದಲ್ಲಿ, ಭೂಮಿ ಮತ್ತು ಸೂರ್ಯನ ನಡುವೆ ನಡೆವ ಪಥ ಚಲನೆಯಿಂದ ಭೂಮಿಯ ಪ್ರತಿಯೊಂದು ಜೀವಿಯ ಮೇಲೂ ಮಹತ್ತರವಾದ ಬದಲಾವಣೆಗಳಾಗುತ್ತವೆ. ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಒಂದು ಜೈವಿಕ ಗಡಿಯಾರವುಂಟು. ಆ ಗಡಿಯಾರ ಸೂರ್ಯನ ಹುಟ್ಟು ಮತ್ತು ಮುಳುಗುವಿಕೆಗೆ ತಕ್ಕಂತೆ ನಡೆಯುತ್ತಿರುತ್ತದೆ ಎಂದು ಆಧುನಿಕ ಜೀವಶಾಸ್ತ್ರ ಹೇಳುತ್ತದೆ. ಇದನ್ನು ಸಿರ್ಕೇಡಿಯನ್ ರಿದಮ್ ಎಂದು ಕರೆಯುವುದು. ಅದರ ಆಧಾರದ ಮೇಲೆ ಮನುಷ್ಯನ ಆರೋಗ್ಯ ಎಷ್ಟು ಅವಲಂಬಿಸಿದೆ ಎನ್ನುವ ಅಧ್ಯಯನ ಜೀವಶಾಸ್ತ್ರದಲ್ಲಿ ಒಂದು ಹೊಸ ಶಾಖೆಯೇ ಆಗಿದೆ.

ನಮ್ಮ ಮೆದುಳಿಗೂ ಸೂರ್ಯನ ಬೆಳಕಿಗೂ ತನ್ನದೇ ಆದ ರೀತಿಯಲ್ಲಿ ಸಂಪರ್ಕವಿದೆ ಎಂದು ತಿಳಿದಿರುವ ಮನುಷ್ಯ ಅದನ್ನು ಬೆಳಕಿನ ಗುಣಾನುಶಾಸ್ತ್ರ (Optogenetic) ಎಂದು ನಾಮಕರಣ ಮಾಡಿದ. ನಮ್ಮ ಆಹಾರದಲ್ಲಿ ಅನೇಕ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಗುಣ, ಸೌರಶಕ್ತಿಯ ಪ್ರಖರತೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಬೀಜದಿಂದ ತಯಾರಿಸುವ ಎಣ್ಣೆಯಲ್ಲಿನ ಅಂಶಗಳಾದ ಲಿನೋಲೀಕ್ ಆಮ್ಲ ಶೇ.20ರಷ್ಟು ಕಿರಣಗಳ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದು. ನಮ್ಮ ದೇಹ ಅತ್ಯಂತ ಸುಲಭವಾಗಿ ದಕ್ಕುವ ಬಿಸಿಲಿಗೆ ಮೈಯೊಡ್ಡಿ ಸೂರ್ಯನ ಕಿರಣಗಳಿಂದ ಚರ್ಮದಲ್ಲಿರುವ ಕೊಲೆಸ್ರ್ಟಾಲನ್ನು ಕೋಲಿಕ್ಯಾಲ್ಸಿಫೆರಾಲ್ ಅಂದರೆ ವಿಟಮಿನ್ ಡಿ ಆಗಿ ಪರಿವರ್ತಿಸಿ ಮೂಳೆಯನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಬೇಯಿಸದಿರುವ ಅಥವಾ ಸೂರ್ಯನಿಂದಲೇ ಬೇಯಿಸಲ್ಪಟ್ಟ ಸ್ವಾಭಾವಿಕ ಆಹಾರ ಅರ್ಧಕ್ಕೆ ಅರ್ಧದಷ್ಟಿದ್ದಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಂತ ಪೂರಕವೆಂದು ಈಗ ತಿಳಿದಿರುವ ಸಂಗತಿ.

ಒಂದು ರೀತಿಯಲ್ಲಿ ನಾವು ಸೌರಶಕ್ತಿಯನ್ನು ರೂಪಾಂತರಗೊಳಿಸುವ ವಾಹಕಗಳಷ್ಟೇ ಸರಿ. ಥರ್ಮೋಡೈನಮಿಕ್ಸ್ ಪ್ರಕಾರ ಶಕ್ತಿಯನ್ನು ಉತ್ಪಾದಿಸಲು ಅಥವಾ ನಶಿಸಲು ಸಾಧ್ಯವಿಲ್ಲ. ಅದೇನಿದ್ದರೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುತ್ತದೆ ಮಾತ್ರ. ಇದನ್ನೇ ಆಲ್ಬರ್ಟ್ ಐನ್ಸ್ಟೈನ್ ಶಕ್ತಿ ಮತ್ತು ದ್ರವ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳೆಂದು ತನ್ನ ಹೆಸರಾಂತ e=mc2 ಸೂತ್ರದಲ್ಲಿ ತಿಳಿಸಿದ.

ಈ ರೀತಿ ವಾಸ್ತವವಾಗಿ ಭೌತಶಾಸ್ತ್ರದ ದೃಷ್ಟಿಯಲ್ಲೇ ಜಗತ್ತನ್ನು ನೋಡಿದರೆ ರಸ, ರುಚಿ, ಸತ್ವ, ಆನಂದಗಳು ನಮ್ಮ ಬದುಕಿಗೆ ಬೆಲೆಯೇ ಇಲ್ಲದಂತೆ ಕಾಣಬಹುದು. ಕೇವಲ ಶಕ್ತಿಯೇ ದೇಹಕ್ಕೆ ಸಾಕು ಎಂದು, ಮೊಬೈಲ್ ಫೋನ್ ಚಾರ್ಜ್ ಮಾಡಿಕೊಂಡಂತೆ ನಾವು ಶಕ್ತಿಯನ್ನು ಬರಿಸಿಕೊಳ್ಳಲಾಗುವುದಿಲ್ಲ. ಕೊನೆಗೆ ನಮಗೆ ಬೇಕಾಗಿರುವುದು ಶಕ್ತಿಯೇ ಆದರೂ ಸಹ ಈ ಭೂಮಿಯ ಸ್ವಾರಸ್ಯ ಅಡಗಿರುವುದು ಸೂಕ್ಷ್ಮ ವಿಶಿಷ್ಟ ಅನುಭವದ ಆಧಾರದ ಮೇಲೆ. ನಮ್ಮ ಮೂಗು ಮತ್ತು ನಾಲಿಗೆಗೆ ಲಕ್ಷಾಂತರ ಸ್ವಾದಗಳನ್ನು ಗ್ರಹಿಸುವ ಶಕ್ತಿಯೇ ಇದಕ್ಕೆ ಸಾಕ್ಷಿ. ಹಿಂದಿನವರು ಷಡ್ರಸಗಳನ್ನು, ಸಪ್ತಸ್ವರಗಳನ್ನು ಗುರುತಿಸಿದರೂ ಅವುಗಳ ಅಂತರಂಗದಲ್ಲಿ ಗುರುತಿಸಲಾಗದ ಮಿಲಿಯಗಟ್ಟಲೆ ವಿಭಿನ್ನ ನೋಟ್‌ಗಳನ್ನು ಅನುಭವದಲ್ಲಿ ಕಾಣಬಹುದು. ಇವುಗಳ ಅನುಭವಕ್ಕೆ ಒಂದು ರೀತಿಯಲ್ಲಿ ಹಬ್ಬ ಹರಿದಿನಗಳು ಅತ್ಯಂತ ಪ್ರಯೋಜನಕಾರಿಯಾಗಿ ಒದಗಿಬರುತ್ತವೆ. ಯಾರೋ ಒಬ್ಬ ನಾನು ಅನೇಕ ವರ್ಷ ನಾಸ್ತಿಕನಾಗಿದ್ದೆ, ಆಗ ಹಬ್ಬಗಳನ್ನು ತಿಳಿದು ಆಸ್ತಿಕನಾದೆ ಎನ್ನುತ್ತಾನೆ.

ಎಲ್ಲ ರೀತಿಯ ಬಹುತರದ ರಸ, ರುಚಿಗಳನ್ನು ಮತ್ತು ತಿಳಿದ ಮತ್ತು ಇನ್ನೂ ತಿಳಿಯದ ಅಗಾಧವಾದ ಪೌಷ್ಟಿಕಾಂಶಗಳನ್ನು ಪಡೆಯಲು ಒಂದೇ ಒಂದು ಮಾರ್ಗವೆಂದರೆ ನಮ್ಮ ಆಹಾರದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು. ಎಲ್ಲಿ ಆಹಾರದ ವೈವಿಧ್ಯತೆ ಇರುವುದೋ ಅಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶಗಳು ತಿಳಿಯದೇ ಬಂದೊದಗುತ್ತವೆ. ಅದಕ್ಕೆ ಒಬ್ಬ ಹೀಗೆನ್ನುತ್ತಾನೆ: ‘Let food be part of your diet plan!’ ಎಂದು. ಆಹಾರವಿದ್ದರೆ ಪೌಷ್ಟಿಕಾಂಶ. ವೈವಿಧ್ಯತೆ ಇದ್ದರೆ ಅಗಾಧವಾದ ಸೂಕ್ಷ್ಮ ಪೌಷ್ಟಿಕಾಂಶಗಳೆಲ್ಲವನ್ನೂ ಆನಂದಮಯ ಅನುಭವದೊಂದಿಗೆ ಪಡೆದುಕೊಳ್ಳಬಹುದು. ಆಹಾರ ವೈವಿಧ್ಯತೆ ನೂರಿದ್ದರೆ ಅಡುಗೆಯ ವೈವಿಧ್ಯತೆ ಸಾವಿರವಿರಬಹುದು. ನಾವು ಅನ್ನವೊಂದರಲ್ಲಿ ಎಷ್ಟು ರೀತಿಯ ತಿನಿಸುಗಳನ್ನು ಮಾಡಬಹುದು ಎಂದು ಊಹಿಸಿದರೆ ಸಾಕು! ಆದರೆ ವೈವಿಧ್ಯತೆ ಎನ್ನುವುದು ಕೇವಲ ಬಿಳಿ ಅನ್ನವನ್ನು ಹತ್ತಾರು ರೀತಿಯ ಮಸಾಲಪದಾರ್ಥಗಳಿಂದ ರುಚಿಕರಗೊಳಿಸುವುದಷ್ಟೇ ಅಲ್ಲ. ಅಡುಗೆಯ ಕಲೆಯ ದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಬಹುದಾದರೂ ವೈವಿಧ್ಯತೆಯ ದೃಷ್ಟಿಯಿಂದ ಭತ್ತದಲ್ಲೇ ಇರುವ ಸಾವಿರಾರು ತಳಿಗಳನ್ನು ಬಳಸಿದಲ್ಲಿ ಅಥವಾ ಇನ್ನೂ ಹತ್ತಾರು ಏಕದಳ ಧಾನ್ಯಗಳನ್ನು ಬಳಸಿದ್ದಲ್ಲಿ ಅದರ ಅನುಭವವೇ ಬೇರೆ! ಸಾಮಾನ್ಯವಾಗಿ ಇಂದು ಬೇಕರಿಗೆ ಹೋದರೆ ತರತರದ ಖಾದ್ಯಗಳನ್ನು ಅಲ್ಲಿ ಕಾಣಬಹುದು. ಆದರೆ ಅವೆಲ್ಲಕ್ಕೂ ಮೂಲ ಸಾಮಗ್ರಿ ಮೈದಾ, ಡಾಲ್ಡಾ ಮತ್ತು ಸಕ್ಕರೆಯೇ ಆಗಿದ್ದರೆ ಆ ವೈವಿಧ್ಯತೆ ಕೇವಲ ತೋರಿಕೆಯದ್ದು ಮಾತ್ರ ಎನ್ನುವುದು ಮರೆಯಬಾರದು.

ಬುಡಕಟ್ಟು ಜನಾಂಗದವರ ದೇಹದಲ್ಲಿನ ಸೂಕ್ಷ್ಮಜೀವಜಗತ್ತು ಪ್ರತೀ ಋತುವಿಗೂ ಸಂಪೂರ್ಣವಾಗಿ ಬದಲಾಗುತ್ತದೆ. ಆದರೆ ನಾಗರಿಕರೆನ್ನುವ ನಮಗೆ, ಏಕಮುಖಿಯಾದ ಆಹಾರ ಪದ್ಧತಿಯಿಂದ, ಋತುವಿಗೆ ತಕ್ಕಂತೆ ಅಂತಹ ಬದಲಾವಣೆ ಆಗದಿರುವುದು, ನಮ್ಮ ಅನಾರೋಗ್ಯಕ್ಕೆ ಒಂದು ರೀತಿಯಲ್ಲಿ ಬುನಾದಿ ಎನ್ನಬಹುದು. ಸಂಕ್ರಾಂತಿ ಕಾಲದಲ್ಲಿ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ಬದಲಾವಣೆಯನ್ನು ತಂದುಕೊಳ್ಳುವುದು ನಮ್ಮ ಹಿರೀಕರು ವೈಜ್ಞಾನಿಕವಾಗಿ ಸಂಪ್ರದಾಯಗಳ ಮೂಲಕ ಅಳವಡಿಸಿಕೊಂಡು ಬಂದಿರುವುದನ್ನು ನಾವು ಗಮನಿಸಬಹುದು. ಇದನ್ನು ಆಯುರ್ವೇದದಲ್ಲಿ ಋತುಬುಕ್ ಹಿತಬುಕ್ ಮತ್ತು ಮಿತಬುಕ್ ಎಂದೆಲ್ಲಾ ಹೇಳುವುದುಂಟು.

ಚೈನಾದೇಶ ಇತ್ತೀಚೆಗೆ ಒಂದು ಹೊಸ ಬೀಜಸಂಗ್ರಹಣಾ ಮತ್ತು ಸಂರಕ್ಷಣಾ ಕೇಂದ್ರವೊಂದನ್ನು ಆರಂಭಿಸಿದ ವರದಿ ಬಂದಿದೆ. ಅಲ್ಲಿಯವರು ಮುಂದಿನ ಪೀಳಿಗೆಗಾಗಿ ಸುಮಾರು ಹದಿನೈದು ಲಕ್ಷ ವಿವಿಧ ರೀತಿಯ ಆಹಾರದ ಬೀಜಗಳನ್ನು ಸಂಗ್ರಹಿಸಿದ್ದಾರೆ. ಹಿಂದೆ ಸ್ವಾಲ್ಬಾರ್ಡ್ ಎನ್ನುವ ಇದೇ ರೀತಿಯ ಬೀಜಸಂರಕ್ಷಣಾ ಬ್ಯಾಂಕ್ ಒಂದನ್ನು ನಾರ್ವೆ ದೇಶದಲ್ಲಿ ಕಟ್ಟಿರುವುದು ನಮಗೆಲ್ಲಾ ತಿಳಿದಿತ್ತು. ಅಲ್ಲಿ ಸುಮಾರು ಹತ್ತು ಲಕ್ಷ ವೈವಿಧ್ಯಮಯ ಬೀಜಗಳ ಸಂಗ್ರಹವಿದೆ ಎನ್ನುತ್ತಾರೆ. ಚೈನಾದೇಶ ಈ ದೃಷ್ಟಿಯಿಂದ ಅತ್ಯಂತ ದೂರದೃಷ್ಟಿ ಉಳ್ಳದ್ದು ಎನ್ನಬಹುದಾಗಿದೆ. ಏಕೆಂದರೆ ಇನ್ನ್ಯಾವುದೋ ಗ್ರಹಕ್ಕೆ ಮುಂದೆ ಮನುಕುಲ ಹಾರಬಹುದೋ ಇಂದು ತಿಳಿಯದು. ಆದರೆ ಈ ಭೂಮಿಯ ಮೇಲೆ ಬಹಳ ಕಾಲ ಬದುಕಬೇಕೆಂದಿದ್ದರೆ ನಮ್ಮ ಆಹಾರದ ವೈವಿಧ್ಯತೆಯನ್ನು ಬೀಜರೂಪದಲ್ಲಿ, ಆಹಾರ ರೂಪದಲ್ಲಿ ಮತ್ತು ಅಡುಗೆಯ ರೂಪದಲ್ಲಿ ಉಳಿಸಿಕೊಳ್ಳುವುದು ಅತ್ಯಂತ ಸೂಕ್ತ. ದುರಂತವೆಂದರೆ, ಸಾಮಾನ್ಯವಾಗಿ ನಮಗೆ ಇಂತಹ ವಿಷಯಗಳು, ಅತ್ಯಂತ ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನವೆಂದು ಇಲಾನ್ ಮಸ್ಕ್‌ನ ಎಲೆಕ್ಟ್ರಿಕ್ ಕಾರ್ ಕಂಡು ವಿಸ್ಮಯಗೊಂಡಂತೆ ಅನ್ನಿಸುವುದಿಲ್ಲ.

ಆಹಾರದ ವಿಷಯ ನಿಜವಾಗಿಯೂ ನಮ್ಮ ಆಂತರ್ಯದ ವಿಷಯವಾಗಿದೆ. ಈ ಜೀವಿ ಎಷ್ಟುಕಾಲ ಇಲ್ಲಿ ಬದುಕಬಹುದು ಎನ್ನುವುದು ಈ ಆಹಾರ ವೈವಿಧ್ಯತೆಯನ್ನೇ ಆಧರಿಸಿದೆ. ಹೀಗಾಗಿ ಸಂಕ್ರಾಂತಿಯಂತಹ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಮನುಕುಲದ ಬಹುಕಾಲದ ಇರುವಿಕೆ ಮತ್ತು ಒಳಿತಿಗೆ ಆಳವಾದ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಆಚರಣೆಗೆ ಇನ್ನೂ ಹೆಚ್ಚು ಮೆರಗು ನೀಡುತ್ತದೆ.

ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...