Homeಮುಖಪುಟಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

ಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

- Advertisement -
- Advertisement -

ನಮ್ಮಲ್ಲಿ ಅನೇಕ ಸಂಪ್ರದಾಯಗಳು, ಹಬ್ಬಹರಿದಿನಗಳ ಧಾರ್ಮಿಕ ಆಚರಣೆಗಳು ಕೂಡಾ ಪ್ರಕೃತಿ, ಪರಿಸರ ಮತ್ತು ನಭೋಮಂಡಲದ ಆಗುಹೋಗುಗಳನ್ನೂ, ಬದಲಾವಣೆಗಳನ್ನೂ ಅವಲಂಬಿಸಿ ಆಚರಿಸುವಂತದ್ದಾಗಿವೆ. ಸೂರ್ಯಕೇಂದ್ರಿತ ಈ ಮಂಡಲದಲ್ಲಿ, ಭೂಮಿ ಮತ್ತು ಸೂರ್ಯನ ನಡುವೆ ನಡೆವ ಪಥ ಚಲನೆಯಿಂದ ಭೂಮಿಯ ಪ್ರತಿಯೊಂದು ಜೀವಿಯ ಮೇಲೂ ಮಹತ್ತರವಾದ ಬದಲಾವಣೆಗಳಾಗುತ್ತವೆ. ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಒಂದು ಜೈವಿಕ ಗಡಿಯಾರವುಂಟು. ಆ ಗಡಿಯಾರ ಸೂರ್ಯನ ಹುಟ್ಟು ಮತ್ತು ಮುಳುಗುವಿಕೆಗೆ ತಕ್ಕಂತೆ ನಡೆಯುತ್ತಿರುತ್ತದೆ ಎಂದು ಆಧುನಿಕ ಜೀವಶಾಸ್ತ್ರ ಹೇಳುತ್ತದೆ. ಇದನ್ನು ಸಿರ್ಕೇಡಿಯನ್ ರಿದಮ್ ಎಂದು ಕರೆಯುವುದು. ಅದರ ಆಧಾರದ ಮೇಲೆ ಮನುಷ್ಯನ ಆರೋಗ್ಯ ಎಷ್ಟು ಅವಲಂಬಿಸಿದೆ ಎನ್ನುವ ಅಧ್ಯಯನ ಜೀವಶಾಸ್ತ್ರದಲ್ಲಿ ಒಂದು ಹೊಸ ಶಾಖೆಯೇ ಆಗಿದೆ.

ನಮ್ಮ ಮೆದುಳಿಗೂ ಸೂರ್ಯನ ಬೆಳಕಿಗೂ ತನ್ನದೇ ಆದ ರೀತಿಯಲ್ಲಿ ಸಂಪರ್ಕವಿದೆ ಎಂದು ತಿಳಿದಿರುವ ಮನುಷ್ಯ ಅದನ್ನು ಬೆಳಕಿನ ಗುಣಾನುಶಾಸ್ತ್ರ (Optogenetic) ಎಂದು ನಾಮಕರಣ ಮಾಡಿದ. ನಮ್ಮ ಆಹಾರದಲ್ಲಿ ಅನೇಕ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಗುಣ, ಸೌರಶಕ್ತಿಯ ಪ್ರಖರತೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಬೀಜದಿಂದ ತಯಾರಿಸುವ ಎಣ್ಣೆಯಲ್ಲಿನ ಅಂಶಗಳಾದ ಲಿನೋಲೀಕ್ ಆಮ್ಲ ಶೇ.20ರಷ್ಟು ಕಿರಣಗಳ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದು. ನಮ್ಮ ದೇಹ ಅತ್ಯಂತ ಸುಲಭವಾಗಿ ದಕ್ಕುವ ಬಿಸಿಲಿಗೆ ಮೈಯೊಡ್ಡಿ ಸೂರ್ಯನ ಕಿರಣಗಳಿಂದ ಚರ್ಮದಲ್ಲಿರುವ ಕೊಲೆಸ್ರ್ಟಾಲನ್ನು ಕೋಲಿಕ್ಯಾಲ್ಸಿಫೆರಾಲ್ ಅಂದರೆ ವಿಟಮಿನ್ ಡಿ ಆಗಿ ಪರಿವರ್ತಿಸಿ ಮೂಳೆಯನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಬೇಯಿಸದಿರುವ ಅಥವಾ ಸೂರ್ಯನಿಂದಲೇ ಬೇಯಿಸಲ್ಪಟ್ಟ ಸ್ವಾಭಾವಿಕ ಆಹಾರ ಅರ್ಧಕ್ಕೆ ಅರ್ಧದಷ್ಟಿದ್ದಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಂತ ಪೂರಕವೆಂದು ಈಗ ತಿಳಿದಿರುವ ಸಂಗತಿ.

ಒಂದು ರೀತಿಯಲ್ಲಿ ನಾವು ಸೌರಶಕ್ತಿಯನ್ನು ರೂಪಾಂತರಗೊಳಿಸುವ ವಾಹಕಗಳಷ್ಟೇ ಸರಿ. ಥರ್ಮೋಡೈನಮಿಕ್ಸ್ ಪ್ರಕಾರ ಶಕ್ತಿಯನ್ನು ಉತ್ಪಾದಿಸಲು ಅಥವಾ ನಶಿಸಲು ಸಾಧ್ಯವಿಲ್ಲ. ಅದೇನಿದ್ದರೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುತ್ತದೆ ಮಾತ್ರ. ಇದನ್ನೇ ಆಲ್ಬರ್ಟ್ ಐನ್ಸ್ಟೈನ್ ಶಕ್ತಿ ಮತ್ತು ದ್ರವ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳೆಂದು ತನ್ನ ಹೆಸರಾಂತ e=mc2 ಸೂತ್ರದಲ್ಲಿ ತಿಳಿಸಿದ.

ಈ ರೀತಿ ವಾಸ್ತವವಾಗಿ ಭೌತಶಾಸ್ತ್ರದ ದೃಷ್ಟಿಯಲ್ಲೇ ಜಗತ್ತನ್ನು ನೋಡಿದರೆ ರಸ, ರುಚಿ, ಸತ್ವ, ಆನಂದಗಳು ನಮ್ಮ ಬದುಕಿಗೆ ಬೆಲೆಯೇ ಇಲ್ಲದಂತೆ ಕಾಣಬಹುದು. ಕೇವಲ ಶಕ್ತಿಯೇ ದೇಹಕ್ಕೆ ಸಾಕು ಎಂದು, ಮೊಬೈಲ್ ಫೋನ್ ಚಾರ್ಜ್ ಮಾಡಿಕೊಂಡಂತೆ ನಾವು ಶಕ್ತಿಯನ್ನು ಬರಿಸಿಕೊಳ್ಳಲಾಗುವುದಿಲ್ಲ. ಕೊನೆಗೆ ನಮಗೆ ಬೇಕಾಗಿರುವುದು ಶಕ್ತಿಯೇ ಆದರೂ ಸಹ ಈ ಭೂಮಿಯ ಸ್ವಾರಸ್ಯ ಅಡಗಿರುವುದು ಸೂಕ್ಷ್ಮ ವಿಶಿಷ್ಟ ಅನುಭವದ ಆಧಾರದ ಮೇಲೆ. ನಮ್ಮ ಮೂಗು ಮತ್ತು ನಾಲಿಗೆಗೆ ಲಕ್ಷಾಂತರ ಸ್ವಾದಗಳನ್ನು ಗ್ರಹಿಸುವ ಶಕ್ತಿಯೇ ಇದಕ್ಕೆ ಸಾಕ್ಷಿ. ಹಿಂದಿನವರು ಷಡ್ರಸಗಳನ್ನು, ಸಪ್ತಸ್ವರಗಳನ್ನು ಗುರುತಿಸಿದರೂ ಅವುಗಳ ಅಂತರಂಗದಲ್ಲಿ ಗುರುತಿಸಲಾಗದ ಮಿಲಿಯಗಟ್ಟಲೆ ವಿಭಿನ್ನ ನೋಟ್‌ಗಳನ್ನು ಅನುಭವದಲ್ಲಿ ಕಾಣಬಹುದು. ಇವುಗಳ ಅನುಭವಕ್ಕೆ ಒಂದು ರೀತಿಯಲ್ಲಿ ಹಬ್ಬ ಹರಿದಿನಗಳು ಅತ್ಯಂತ ಪ್ರಯೋಜನಕಾರಿಯಾಗಿ ಒದಗಿಬರುತ್ತವೆ. ಯಾರೋ ಒಬ್ಬ ನಾನು ಅನೇಕ ವರ್ಷ ನಾಸ್ತಿಕನಾಗಿದ್ದೆ, ಆಗ ಹಬ್ಬಗಳನ್ನು ತಿಳಿದು ಆಸ್ತಿಕನಾದೆ ಎನ್ನುತ್ತಾನೆ.

ಎಲ್ಲ ರೀತಿಯ ಬಹುತರದ ರಸ, ರುಚಿಗಳನ್ನು ಮತ್ತು ತಿಳಿದ ಮತ್ತು ಇನ್ನೂ ತಿಳಿಯದ ಅಗಾಧವಾದ ಪೌಷ್ಟಿಕಾಂಶಗಳನ್ನು ಪಡೆಯಲು ಒಂದೇ ಒಂದು ಮಾರ್ಗವೆಂದರೆ ನಮ್ಮ ಆಹಾರದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು. ಎಲ್ಲಿ ಆಹಾರದ ವೈವಿಧ್ಯತೆ ಇರುವುದೋ ಅಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶಗಳು ತಿಳಿಯದೇ ಬಂದೊದಗುತ್ತವೆ. ಅದಕ್ಕೆ ಒಬ್ಬ ಹೀಗೆನ್ನುತ್ತಾನೆ: ‘Let food be part of your diet plan!’ ಎಂದು. ಆಹಾರವಿದ್ದರೆ ಪೌಷ್ಟಿಕಾಂಶ. ವೈವಿಧ್ಯತೆ ಇದ್ದರೆ ಅಗಾಧವಾದ ಸೂಕ್ಷ್ಮ ಪೌಷ್ಟಿಕಾಂಶಗಳೆಲ್ಲವನ್ನೂ ಆನಂದಮಯ ಅನುಭವದೊಂದಿಗೆ ಪಡೆದುಕೊಳ್ಳಬಹುದು. ಆಹಾರ ವೈವಿಧ್ಯತೆ ನೂರಿದ್ದರೆ ಅಡುಗೆಯ ವೈವಿಧ್ಯತೆ ಸಾವಿರವಿರಬಹುದು. ನಾವು ಅನ್ನವೊಂದರಲ್ಲಿ ಎಷ್ಟು ರೀತಿಯ ತಿನಿಸುಗಳನ್ನು ಮಾಡಬಹುದು ಎಂದು ಊಹಿಸಿದರೆ ಸಾಕು! ಆದರೆ ವೈವಿಧ್ಯತೆ ಎನ್ನುವುದು ಕೇವಲ ಬಿಳಿ ಅನ್ನವನ್ನು ಹತ್ತಾರು ರೀತಿಯ ಮಸಾಲಪದಾರ್ಥಗಳಿಂದ ರುಚಿಕರಗೊಳಿಸುವುದಷ್ಟೇ ಅಲ್ಲ. ಅಡುಗೆಯ ಕಲೆಯ ದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಬಹುದಾದರೂ ವೈವಿಧ್ಯತೆಯ ದೃಷ್ಟಿಯಿಂದ ಭತ್ತದಲ್ಲೇ ಇರುವ ಸಾವಿರಾರು ತಳಿಗಳನ್ನು ಬಳಸಿದಲ್ಲಿ ಅಥವಾ ಇನ್ನೂ ಹತ್ತಾರು ಏಕದಳ ಧಾನ್ಯಗಳನ್ನು ಬಳಸಿದ್ದಲ್ಲಿ ಅದರ ಅನುಭವವೇ ಬೇರೆ! ಸಾಮಾನ್ಯವಾಗಿ ಇಂದು ಬೇಕರಿಗೆ ಹೋದರೆ ತರತರದ ಖಾದ್ಯಗಳನ್ನು ಅಲ್ಲಿ ಕಾಣಬಹುದು. ಆದರೆ ಅವೆಲ್ಲಕ್ಕೂ ಮೂಲ ಸಾಮಗ್ರಿ ಮೈದಾ, ಡಾಲ್ಡಾ ಮತ್ತು ಸಕ್ಕರೆಯೇ ಆಗಿದ್ದರೆ ಆ ವೈವಿಧ್ಯತೆ ಕೇವಲ ತೋರಿಕೆಯದ್ದು ಮಾತ್ರ ಎನ್ನುವುದು ಮರೆಯಬಾರದು.

ಬುಡಕಟ್ಟು ಜನಾಂಗದವರ ದೇಹದಲ್ಲಿನ ಸೂಕ್ಷ್ಮಜೀವಜಗತ್ತು ಪ್ರತೀ ಋತುವಿಗೂ ಸಂಪೂರ್ಣವಾಗಿ ಬದಲಾಗುತ್ತದೆ. ಆದರೆ ನಾಗರಿಕರೆನ್ನುವ ನಮಗೆ, ಏಕಮುಖಿಯಾದ ಆಹಾರ ಪದ್ಧತಿಯಿಂದ, ಋತುವಿಗೆ ತಕ್ಕಂತೆ ಅಂತಹ ಬದಲಾವಣೆ ಆಗದಿರುವುದು, ನಮ್ಮ ಅನಾರೋಗ್ಯಕ್ಕೆ ಒಂದು ರೀತಿಯಲ್ಲಿ ಬುನಾದಿ ಎನ್ನಬಹುದು. ಸಂಕ್ರಾಂತಿ ಕಾಲದಲ್ಲಿ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ಬದಲಾವಣೆಯನ್ನು ತಂದುಕೊಳ್ಳುವುದು ನಮ್ಮ ಹಿರೀಕರು ವೈಜ್ಞಾನಿಕವಾಗಿ ಸಂಪ್ರದಾಯಗಳ ಮೂಲಕ ಅಳವಡಿಸಿಕೊಂಡು ಬಂದಿರುವುದನ್ನು ನಾವು ಗಮನಿಸಬಹುದು. ಇದನ್ನು ಆಯುರ್ವೇದದಲ್ಲಿ ಋತುಬುಕ್ ಹಿತಬುಕ್ ಮತ್ತು ಮಿತಬುಕ್ ಎಂದೆಲ್ಲಾ ಹೇಳುವುದುಂಟು.

ಚೈನಾದೇಶ ಇತ್ತೀಚೆಗೆ ಒಂದು ಹೊಸ ಬೀಜಸಂಗ್ರಹಣಾ ಮತ್ತು ಸಂರಕ್ಷಣಾ ಕೇಂದ್ರವೊಂದನ್ನು ಆರಂಭಿಸಿದ ವರದಿ ಬಂದಿದೆ. ಅಲ್ಲಿಯವರು ಮುಂದಿನ ಪೀಳಿಗೆಗಾಗಿ ಸುಮಾರು ಹದಿನೈದು ಲಕ್ಷ ವಿವಿಧ ರೀತಿಯ ಆಹಾರದ ಬೀಜಗಳನ್ನು ಸಂಗ್ರಹಿಸಿದ್ದಾರೆ. ಹಿಂದೆ ಸ್ವಾಲ್ಬಾರ್ಡ್ ಎನ್ನುವ ಇದೇ ರೀತಿಯ ಬೀಜಸಂರಕ್ಷಣಾ ಬ್ಯಾಂಕ್ ಒಂದನ್ನು ನಾರ್ವೆ ದೇಶದಲ್ಲಿ ಕಟ್ಟಿರುವುದು ನಮಗೆಲ್ಲಾ ತಿಳಿದಿತ್ತು. ಅಲ್ಲಿ ಸುಮಾರು ಹತ್ತು ಲಕ್ಷ ವೈವಿಧ್ಯಮಯ ಬೀಜಗಳ ಸಂಗ್ರಹವಿದೆ ಎನ್ನುತ್ತಾರೆ. ಚೈನಾದೇಶ ಈ ದೃಷ್ಟಿಯಿಂದ ಅತ್ಯಂತ ದೂರದೃಷ್ಟಿ ಉಳ್ಳದ್ದು ಎನ್ನಬಹುದಾಗಿದೆ. ಏಕೆಂದರೆ ಇನ್ನ್ಯಾವುದೋ ಗ್ರಹಕ್ಕೆ ಮುಂದೆ ಮನುಕುಲ ಹಾರಬಹುದೋ ಇಂದು ತಿಳಿಯದು. ಆದರೆ ಈ ಭೂಮಿಯ ಮೇಲೆ ಬಹಳ ಕಾಲ ಬದುಕಬೇಕೆಂದಿದ್ದರೆ ನಮ್ಮ ಆಹಾರದ ವೈವಿಧ್ಯತೆಯನ್ನು ಬೀಜರೂಪದಲ್ಲಿ, ಆಹಾರ ರೂಪದಲ್ಲಿ ಮತ್ತು ಅಡುಗೆಯ ರೂಪದಲ್ಲಿ ಉಳಿಸಿಕೊಳ್ಳುವುದು ಅತ್ಯಂತ ಸೂಕ್ತ. ದುರಂತವೆಂದರೆ, ಸಾಮಾನ್ಯವಾಗಿ ನಮಗೆ ಇಂತಹ ವಿಷಯಗಳು, ಅತ್ಯಂತ ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನವೆಂದು ಇಲಾನ್ ಮಸ್ಕ್‌ನ ಎಲೆಕ್ಟ್ರಿಕ್ ಕಾರ್ ಕಂಡು ವಿಸ್ಮಯಗೊಂಡಂತೆ ಅನ್ನಿಸುವುದಿಲ್ಲ.

ಆಹಾರದ ವಿಷಯ ನಿಜವಾಗಿಯೂ ನಮ್ಮ ಆಂತರ್ಯದ ವಿಷಯವಾಗಿದೆ. ಈ ಜೀವಿ ಎಷ್ಟುಕಾಲ ಇಲ್ಲಿ ಬದುಕಬಹುದು ಎನ್ನುವುದು ಈ ಆಹಾರ ವೈವಿಧ್ಯತೆಯನ್ನೇ ಆಧರಿಸಿದೆ. ಹೀಗಾಗಿ ಸಂಕ್ರಾಂತಿಯಂತಹ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಮನುಕುಲದ ಬಹುಕಾಲದ ಇರುವಿಕೆ ಮತ್ತು ಒಳಿತಿಗೆ ಆಳವಾದ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಆಚರಣೆಗೆ ಇನ್ನೂ ಹೆಚ್ಚು ಮೆರಗು ನೀಡುತ್ತದೆ.

ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...