Homeಎಕಾನಮಿಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ!

ಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ!

ಈಗ ವ್ಯವಹಾರವೇ ಸ್ತಬ್ದವಾಗುತ್ತಿರುವುದರಿಂದ MSMEಗಳು ಭಾರೀ ಸಂಕಷ್ಟದಲ್ಲಿದ್ದು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕೊಡಲಾರದ ಸ್ಥಿತಿಯಲ್ಲಿವೆ. ಹಾಗಾಗಿ ಅವುಗಳಿಗೆ ಬೇಕಿರುವುದು ತಮ್ಮ ಸಿಬ್ಬಂದಿಗೆ ಕನಿಷ್ಟ ಮೂರು ತಿಂಗಳು ಸಂಬಳ ಕೊಡುವಷ್ಟು ಹಣ.

- Advertisement -
- Advertisement -

ಪ್ರಧಾನಿಯವರು ಎಲ್ರಿಗೂ ಶಾಕ್ ಆಗುವ ಹಾಗೆ ಕೊರೋನಾ ಆರ್ಥಿಕ ಪ್ಯಾಕೇಜ್ ಎಂದು 20 ಲಕ್ಷ ಕೋಟಿ ಅನೌನ್ಸ್ ಮಾಡಿದ್ರು.

ಶಾಕ್ ಯಾಕಂದ್ರೆ ಇಪ್ಪತ್ತಲ್ಲ, ಅದ್ರಲ್ಲಿ ಅರ್ಧ ಅಂದರೆ ಹತ್ತು ಲಕ್ಷ ಕೋಟಿಗಳನ್ನು ಅವರು ಕನಿಷ್ಟ ಒಂದೂವರೆ ತಿಂಗಳ ಮುಂಚೆನೇ ಅನೌನ್ಸ್ ಮಾಡಬೇಕಿತ್ತು.

ಹಾಗೆ ಮಾಡಿದ್ದಿದ್ರೆ, ನಾವು ಈಗ ನೋಡ್ತಿರೋ ವಲಸೆ ಕಾರ್ಮಿಕರ ದಾರುಣ ಸ್ಥಿತಿಯನ್ನು ತಡೆಯಬಹುದಿತ್ತು ಮತ್ತು ಇತರೆ ಕೋಟ್ಯಂತರ ಜನರ ಕಣ್ಣಿಗೆ ಕಾಣದಿರುವ ಬವಣೆಗಳನ್ನೂ ಸಹ. ಜನ ಅಷ್ಟು ಬವಣೆ ಪಡ್ತಿದ್ರೂ ಅದರ ಬಗ್ಗೆ ಸರ್ಕಾರ ಮಾತೇ ಆಡದಿದ್ದಕ್ಕೆ ಜನರಿಗೆ ಸರ್ಕಾರದಿಂದ ಜನರಿಗಾಗಿ ಹಣ ಬಿಡುಗಡೆಯ ಎಲ್ಲಾ ನಂಬಿಕೆಯೂ ಹೋಗಿದ್ದರಿಂದ ಪ್ರಧಾನಿಯ ಈ ಪ್ರಕಟಣೆ ಶಾಕ್ ಅನ್ಸಿದ್ದು ನಿಜ.

ಆದ್ರೂ ಹೋಗ್ಲಿ, ಲೇಟಾಗಾದ್ರೂ ಪ್ರಧಾನಿ ಅನೌನ್ಸ್ ಮಾಡಿದ್ರಲ್ಲ. ಅದ್ರಲ್ಲೂ ಹತ್ತು ಸಾಕಾಗುತ್ತೆ ಅಂತಿದ್ರೂ ಕೂಡ ಅದರ ಡಬಲ್ ಅಮೌಂಟ್ ಅನೌನ್ಸ್ ಮಾಡಿದ್ರಲ್ಲ ಅಂತ ಬಹುತೇಕರಿಗೆ ಸಮಾಧಾನ ಆಗಿದ್ದು ನಿಜ.

ಆದರೆ, ಈ ಪ್ರಕಟಣೆಯ ಮಾರನೆಯ ದಿನವೇ ಮತ್ತೆ ನಿರಾಸೆ ಕಾದಿತ್ತು.

ಮೊದಲನೆಯದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಈ ಇಪ್ಪತ್ತು ಲಕ್ಷ ಪ್ಯಾಕೇಜನ್ನ ಕಂತುಗಳಲ್ಲಿ ಹೇಳ್ತೀವಿ ಅಂದಿದ್ದು (ಇದು ಸರ್ಕಾರದ ಸಿದ್ಧತೆಯ ಕೊರತೆಯನ್ನ ಮತ್ತೆ ತೋರಿಸ್ತಿದೆ).

ಆತ್ಮನಿರ್ಭರ ಭಾರತ

ಎರಡನೆಯದಾಗಿ, ಈ ಮೊದಲ ಕಂತಿನಲ್ಲಿ ಜನರಿಗೆ ಮತ್ತು ಹೆಚ್ಚು ಉದ್ಯೋಗ ಕೊಡುವ MSME ಗಳಿಗೆ ಯಾವ ಹಣಕಾಸಿನ ನೆರವೂ ಸಿಗದಿದ್ದುದು.

ಮೂರನೆಯದಾಗಿ, ಈ ಮೊದಲ ಕಂತಿನಲ್ಲಿ ಮತ್ತೆ ರಾಜ್ಯಗಳಿಗೆ ಹಣ ಕೊಡದಿರುವುದು.

ವಿತ್ತ ಮಂತ್ರಿಗಳ ಇಡೀ ಪ್ರಕಟಣೆಯಲ್ಲಿ ಸರ್ಕಾರದಿಂದ ಮಾಡಲಾಗುತ್ತಿರುವ ಅಥವಾ ಭರಿಸಲಾಗುತ್ತಿರುವ ಹಣಕಾಸಿನ ವೆಚ್ಚ ಕೇವಲ 2500 ಕೋಟಿ ರೂಪಾಯಿಗಳು ಎಂದರೆ ನಾವು ನಿಜಕ್ಕೂ ಶಾಕ್ ಆಗಬೇಕಿರುವುದು ಇಲ್ಲಿ.

ಹೌದು, 100 ಸಿಬ್ಬಂದಿಗಳಿಗಿಂತ ಕಡಿಮೆಯಿರುವ ಮತ್ತು ಅದರಲ್ಲಿ ಶೇ.90ರಷ್ಟು ಜನ 15000ಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ದಿಮೆಗಳ ಮತ್ತು ಅಲ್ಲಿಯ ಉದ್ಯೋಗಿಗಳ EPF (employer and employee  ಇಬ್ಬರದೂ) ಅನ್ನು ಇನ್ನೂ ಮೂರು ತಿಂಗಳ ಕಾಲ ಸರ್ಕಾರವೇ ಭರಿಸಲಿದೆ.

ಇದರ ವೆಚ್ಚ ಒಟ್ಟು 2500 ಕೋಟಿ ಆಗಲಿದ್ದು ಇಷ್ಟನ್ನು ಮಾತ್ರವೇ ಕೇಂದ್ರ ಸರ್ಕಾರ ಈಗ ನಿಜವಾಗಿ ತನ್ನ 20 ಲಕ್ಷ ಕೋಟಿ ಪ್ಯಾಕೇಜಲ್ಲಿ ಕೊಡುತ್ತಿರುವುದು ಅಂದರೆ ನೀವು ನಂಬಲೇಬೇಕು.

ಯಾಕೆಂದರೆ ಉಳಿದುದೆಲ್ಲವೂ ಉದ್ದಿಮೆಗಳಿಗೆ ಕೊಡುತ್ತಿರುವ ಸಾಲದ ರೂಪದಲ್ಲಿದೆ ಮತ್ತು ಜನರಿಗೆ ಸರ್ಕಾರ ಕೊಡಬೇಕಿದ್ದ ಜನರ ದುಡ್ಡೇ ಆಗಿದೆ. ಈಗ ನೋಡಿ, MSMEಗಳು ಸುಮಾರು ಹತ್ತು ಕೋಟಿಗಿಂತ ಹೆಚ್ಚು ಜನರಿಗೆ ಕೆಲಸ ಕೊಟ್ಟಿವೆ. ಅವುಗಳಲ್ಲಿ ಬಹುತೇಕ ದೊಡ್ಡ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುತ್ತವೆ. ಹಾಗಾಗಿ, ಜನರ ಕೈಯಲ್ಲಿ ದುಡ್ಡಿದ್ದರೆ ಅವರು ವಾಹನ ಇತ್ಯಾದಿ ವಸ್ತುಗಳನ್ನು ಖರೀದಿಸುವುದರಿಂದ ಪರೋಕ್ಷವಾಗಿ MSMEಗಳೂ ಆರೋಗ್ಯದಿಂದಿರುತ್ತವೆ. ಅದರಿಂದಾಗಿಯೇ ಆರ್ಥಿಕ ತಜ್ಞರು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎನ್ನುತ್ತಿರುವುದು.

ಈಗ ವ್ಯವಹಾರವೇ ಸ್ತಬ್ದವಾಗುತ್ತಿರುವುದರಿಂದ MSMEಗಳು ಭಾರೀ ಸಂಕಷ್ಟದಲ್ಲಿದ್ದು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕೊಡಲಾರದ ಸ್ಥಿತಿಯಲ್ಲಿವೆ. ಹಾಗಾಗಿ ಅವುಗಳಿಗೆ ಬೇಕಿರುವುದು ತಮ್ಮ ಸಿಬ್ಬಂದಿಗೆ ಕನಿಷ್ಟ ಮೂರು ತಿಂಗಳು ಸಂಬಳ ಕೊಡುವಷ್ಟು ಹಣ ಕೊಟ್ಟರೆ ಚೇತರಿಸಿಕೊಂಡು ಸಿಬ್ಬಂದಿಗಳನ್ನೂ ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಆದರೆ ವಿತ್ತ ಮಂತ್ರಿ MSMEಗಳಿಗೆ 3 ಲಕ್ಷ ಕೋಟಿಯಷ್ಟು ಅಡಮಾನ ರಹಿತ ಸಾಲ ಕೊಡುವ ಪ್ರಕಟಣೆ ಮಾಡಿದ್ದಾರೆ. ಕನಿಷ್ಟ ಈ ಸಾಲ ಬಡ್ಡಿ ರಹಿತ ಸಾಲವೂ ಅಲ್ಲ.

ಅದೇ ರೀತಿ NBFC ಮತ್ತು MFI (Non banking finance corporations and micro financing institutions)ಗಳಿಗೆ ಒಟ್ಟಾರೆ 80000 ಕೋಟಿಯಷ್ಟು ಹಣವನ್ನು ಅವುಗಳು ಸಣ್ಣ ಉದ್ದಿಮೆಗಳಿಗೆ ಸಾಲ ಕೊಡಲು ಅನುವಾಗುವಂತೆ ವಿವಿಧ ಹೆಡಿಂಗುಗಳ ಅಡಿಯಲ್ಲಿ ಹಣ ಹರಿಸುವ ಪ್ರಕಟಣೆ ಮಾಡಲಾಗಿದೆ. ಒಟ್ಟಾರೆಯಾಗಿ ಇವುಗಳು MSMEಗಳಿಗೆ ಮತ್ತು ಇತರೆ ಸಣ್ಣ ಉದ್ದಿಮೆಗಳಿಗೆ ಸುಲಭವಾಗಿ ಸಾಲದ ರೂಪದಲ್ಲಿ ಹಣ ಹರಿಯುವಂತೆ ಮಾಡುವ ಯೋಜನೆಗಳಾಗಿವೆ.

ಇನ್ನು ಇತರೆಲ್ಲ ಉದ್ದಿಮೆಗಳು ತಮ್ಮ ಸಿಬ್ಬಂದಿಗಳಿಗೆ ಕೊಡಬೇಕಿರುವ 12.5% EPF ಕಡ್ಡಾಯ ಕೊಡುಗೆಯನ್ನು ಮತ್ತು ಸಿಬ್ಬಂದಿಗಳ ಸಂಬಳದಲ್ಲಿ ಕಡಿತವಾಗುವ 12.5%ಅನ್ನು 10%ಗೆ ಇಳಿಸಲಾಗಿದೆ. ಇದರಿಂದಾಗಿ ಒಟ್ಟು 6750 ಕೋಟಿಗಳನ್ನು ಸಿಬ್ಬಂದಿಗಳ ಮತ್ತು ಉದ್ದಿಮೆಗಳ ಕೈಯಲ್ಲಿ ಉಳಿಸಿ ಅವರು ಖರ್ಚು ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ. ವಾಸ್ತವದಲ್ಲಿ ಇದು ನಮ್ಮದೇ ದುಡ್ಡನ್ನು ನಮ್ಮ ಹತ್ತಿರ ಉಳಿಸಿದಂತಾಗಿದೆಯಷ್ಟೆ. ಅದಕ್ಕಿಂತ ಹೆಚ್ಚಾಗಿ ನಾಳೆಗೆಂದು ಉಳಿತಾಯ ಮಾಡುತ್ತಿದ್ದುದನ್ನು ಇಂದೇ ಖರ್ಚು ಮಾಡುವಂತೆ ಮಾಡುವ ಕ್ರಮವಾಗಿದ್ದು ಇದು ವೈಯಕ್ತಿಕ ಆರ್ಥಿಕತೆಗೆ ತೊಂದರೆ ಕೊಡುವಂತದ್ದಾಗಿದೆ.

ಆಮೇಲೆ ಹಲವು ವೃತ್ತಿಪರರ ಸಂಪಾದನೆಯಲ್ಲಿ ಮಾಡಲಾಗುತ್ತಿದ್ದ TDSನಲ್ಲಿ (tax deduction at source) 25% ನಷ್ಟು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅವರುಗಳಿಗೆ ಒಟ್ಟಾರೆ 50000 ಕೋಟಿಗಳಷ್ಟು ಕೈಯಲ್ಲಿ ಉಳಿಯುವಂತೆ ಮಾಡಲಾಗಿದೆ ಎಂದೂ ಹೇಳಲಾಗಿದೆ. ಆದರೆ ಈ 25%ನ್ನು ಅವರು ವರ್ಷದ ಕಡೆಯ ತೆರಿಗೆಯಲ್ಲಿ ಕಟ್ಟಲೇಬೇಕಾಗಿದೆ. ಅಂದರೆ, ಇದು ನಮ್ಮ ಹಣವನ್ನು 6 ತಿಂಗಳ ನಂತರ ಅವರಿಗೆ ಕೊಡಬೇಕಿದ್ದದ್ದನ್ನು ಈಗ ನಮ್ಮಲ್ಲೇ ಉಳಿಸಿ ಈಗಲೇ ಖರ್ಚು ಮಾಡಿ ಎಂದಂತೆ ಅಷ್ಟೆ.

ಕಡೆಯದಾಗಿ, ಹಲವು ಸಂಸ್ಥೆಗಳಿಗೆ ಕೊಡಬೇಕಿರುವ ತೆರಿಗೆ ಬಾಕಿಯನ್ನು ನಲವತ್ತೈದು ದಿನಗಳ ಒಳಗೆ ಕೊಡಲಾಗುವುದೆಂದು ಹೇಳಲಾಗಿದೆ. ಇದೂ ಕೂಡ ಅವರಿಗೆ ಬರಬೇಕಾದ ಹಣವನ್ನು ಕೊಟ್ಟಂತೆ ಅಷ್ಟೆ. ಜತೆಗೆ ಕಂಟ್ರಾಕ್ಟರುಗಳಿಗೆ ಎಷ್ಟು ಕೆಲಸ ಆಗಿದೆಯೋ ಅಷ್ಟಕ್ಕೆ ಹಣ ಬಿಡುಗಡೆ ಮಾಡಲು ಬ್ಯಾಂಕ್ ಗ್ಯಾರಂಟಿಗೆ ಸೂಚಿಸಲಾಗಿದೆ.

ಒಟ್ಟಾರೆಯಾಗಿ ಮೊದಲ ಕಂತಿನಲ್ಲಿ ಜನರ ಕೈಗೆ ನಿಜಕ್ಕೂ ಹಣ ಸಿಗುತ್ತಿರುವುದು ಕೇವಲ 2500 ಕೋಟಿ ರೂಪಾಯಿಗಳಷ್ಟು ಮಾತ್ರ. ಉಳಿದುದು ಕೆಲವು ಸುಲಭ ಸಾಲದ ರೂಪದಲ್ಲಿದೆ.

ಇನ್ನು ಕೆಲವು ಜನರ ದುಡ್ಡನ್ನೇ ಜನರಿಗೆ ಸಿಗುವಂತೆ (ಸ್ವಲ್ಪ ಬೇಗ ಸಿಗುವಂತೆ) ಮಾಡಿ ಅದನ್ನೇ ಆರ್ಥಿಕ ಪ್ಯಾಕೇಜ್‌ನ ಭಾಗ ಎಂದು ಹೇಳುತ್ತಿರುವುದು ಆಶ್ಚರ್ಯಕರವಾಗೂ ಮತ್ತು ಅನುತ್ತೇಜಕವಾಗಿಯೂ ಇದೆ. ಜನರ ಕೈಗೆ ಹಣ ಸಿಕ್ಕಿ ಅದರಿಂದ ಅವರೂ ಬದುಕಿ ಆರ್ಥಿಕತೆಯನ್ನೂ ಚೇತರಿಸುವಂತೆ ಮಾಡುವ ಅಂಶ ಈ ಇಪ್ಪತ್ತು ಲಕ್ಷ ಕೋಟಿಯ ಮೊದಲ ಪ್ಯಾಕೇಜಲ್ಲಿ ಬಹುತೇಕ ಮಿಸ್ ಆಗಿದೆ.

ಆದರೂ, ಶೀಘ್ರದಲ್ಲಿಯೇ ಬರಲಿರುವ (ಶೀಘ್ರದಲ್ಲಿಯೇ ಬರಲಿ ಎಂದು ಆಶಿಸುತ್ತಾ) ಎರಡನೇ ಕಂತಿನಲ್ಲಿಯಾದರೂ ಜನರ ಕೈಗೆ ಹಣ ಸಿಗುವಂತ ಪ್ರಕಟಣೆಗಳು ಆಗಲಿ ಎಂದು ಆಗ್ರಹಿಸುತ್ತಾ ಮತ್ತು ಹಾಗೆ ಆಗುವುದೆಂದು ಆಶಿಸುತ್ತಾ ಶೀಘ್ರ ಬರಲಿರುವ ಆ ಎರಡನೆ ಕಂತಿಗಾಗಿ ಕಾಯೋಣ.


ಇದನ್ನೂ ಓದಿ: ಇಂದು ಸಂಜೆ ಮತ್ತೆ ಪತ್ರಿಕಾಗೋಷ್ಟಿ ನಡೆಸಲಿರುವ ನಿರ್ಮಲಾ ಸೀತಾರಾಮನ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...