Homeಮುಖಪುಟಮೋದಿಯವರ 20 ಲಕ್ಷ ಕೋಟಿ ಎಂಬುದು ಜುಮ್ಲಾ ಪ್ಯಾಕೇಜ್‌ : ಆಮ್‌ ಆದ್ಮಿ ಪಕ್ಷ

ಮೋದಿಯವರ 20 ಲಕ್ಷ ಕೋಟಿ ಎಂಬುದು ಜುಮ್ಲಾ ಪ್ಯಾಕೇಜ್‌ : ಆಮ್‌ ಆದ್ಮಿ ಪಕ್ಷ

- Advertisement -
- Advertisement -

ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಲ್ಲಿ ಸಾಕಷ್ಟು ಸರಕುಗಳು ಖರ್ಚಾಗದೇ ಉಳಿದಿದೆ. ಈಗಾಗಲೇ ಪೂರೈಕೆ ಸಾಕಷ್ಟು ಇದ್ದರೂ ಸಹ ಗ್ರಾಹಕರಿಂದ ಬೇಡಿಕೆ ಇಲ್ಲದಾಗಿದೆ. ಈ ಸಂದರ್ಭದಲ್ಲಿ ಬೇಡಿಕೆಯನ್ನು ಹೆಚ್ಚಳ ಮಾಡುವಂತಹ ಯೋಜನೆಗಳನ್ನು ಘೋಷಿಸಿ ಎಂದರೆ ಕೇವಲ ಸಾಲ ಮಾಡಿ ಅದಕ್ಕೆ ಕೇಂದ್ರ ದುಡ್ಡು ನೀಡುವುದು ಎನ್ನುವುದು ಯಾವ ರೀತಿಯ ಲೆಕ್ಕಾಚಾರ ಎನ್ನವುದು ತಿಳಿಯುತ್ತಿಲ್ಲ ಎಂದು ಕರ್ನಾಟಕ ಆಮ್‌ ಆದ್ಮಿ ಪಕ್ಷ ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ,  “ಕೊರೊನಾದಿಂದ ಉಂಟಾದ ಸಂಕಷ್ಟಕ್ಕೆ ಮದ್ದು ನೀಡುವುದಾಗಿ ಹೇಳಿದ ಮಾನ್ಯ ಪ್ರಧಾನಿಗಳು ಖಾಲಿ ಹಾಳೆಯಂತಹ ಸುಮಾರು 20 ಲಕ್ಷ ಕೋಟಿಯ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸಿದರು. ಈ ಖಾಲಿ ಹಾಳೆಯನ್ನು ತುಂಬಿಸುವಂತೆ ಯಾವ ಯಾವ ವಲಯಕ್ಕೆ ಎಷ್ಟು ಹಣ ಮೀಸಲು ಎನ್ನುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವರದಿ ಒಪ್ಪಿಸಿದರೇ ಹೊರತು ನಯಾ ಪೈಸೆಯಷ್ಟು ಹಣವನ್ನು ಜನರಿಗೆ ನೀಡದೆ ದಾರಿ ತಪ್ಪಿಸುವ ಪ್ಯಾಕೇಜ್ ಎಂದು ಇದನ್ನು ಕರೆಯಬಹುದು” ಎಂದಿದ್ದಾರೆ.

ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ಸಾಲ ನೀಡುವುದಕ್ಕೆ ಮೀಸಲು ಹಾಗೂ ನಿಮಗೆ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ಎಂದು ಹೇಳಿದ್ದೀರಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಿಂದ ಒಂದೂ ನಯಾ ಪೈಸೆಯೂ ಸಹ ಸರ್ಕಾರದ ಬೊಕ್ಕಸದಿಂದ ಖರ್ಚಾಗುವುದಿಲ್ಲ, ಇಲ್ಲಿ ಮತ್ತೆ ಉದ್ದಿಮೆದಾರ ಸಾಲದ ಸುಳಿಗೆ ಸಿಲುಕುವಂತಾಗುತ್ತದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.

ಉದಾಹರಣೆಗೆ ಒಬ್ಬ ಉದ್ದಿಮೆದಾರ ಒಂದು ಕೋಟಿ ಸಾಲ ಮಾಡಿದರೆ ಆ 1 ಕೋಟಿಯಲ್ಲಿನ ಪ್ರತಿಶತ 20 ರಷ್ಟು ಅಂದರೆ 20 ಲಕ್ಷಕ್ಕೆ ಮಾತ್ರ ಕೇಂದ್ರ ಸರ್ಕಾರ ಗ್ಯಾರಂಟಿ ನೀಡಲಾಗುವುದೆಂದು ಘೋಷಿಸಿದ್ದಾರೆ. ಉಳಿದ 80 ಲಕ್ಷಕ್ಕೆ ಮಾಲೀಕನೇ ಗ್ಯಾರಂಟಿ ನೀಡಿ ಸಾಲವನ್ನು ಪಡೆದುಕೊಳ್ಳಬೇಕಾಗಿದೆ. ಇದಲ್ಲದೆ ಬ್ಯಾಂಕುಗಳು ಸಾಮಾನ್ಯವಾಗಿ ಗರಿಷ್ಠವೆಂದರೆ 80% ಮಾತ್ರ ಸಾಲವನ್ನು ನೀಡುತ್ತದೆ. ಈ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರದ ಯಾವ ಸಹಾಯ ಧನವೂ ಸಹ ಲಭ್ಯವಾಗುವುದಿಲ್ಲ ಎಂದು ಟೀಕಿಸಲಾಗಿದೆ.

ಕೇಂದ್ರ ಸರ್ಕಾರ ಗ್ಯಾರಂಟಿ ನೀಡಿರುವ 20 ಲಕ್ಷ ಕೈಗೆ ಸಿಗುವುದೇ ಇಲ್ಲ. ಒಂದೂ ನಯಾಪೈಸೆಯೂ ಯಾರ ಜೇಬಿಗೂ ಹೋಗುವುದಿಲ್ಲ. ಈ ಮೊತ್ತದ ಉಪಯೋಗ ಆಗಬೇಕು ಎಂದರೆ ಮಾಲೀಕನು ತನ್ನ ಉದ್ಯಮವನ್ನು ಮುಚ್ಚಬೇಕಷ್ಟೇ. ಇದು ಸಂಪೂರ್ಣವಾಗಿ ದಿಕ್ಕು ತಪ್ಪಿಸುವಂತಹ ಕೇಂದ್ರ ಬಜೆಟ್ಟಿನ ಮುಂದುವರೆದ ವರದಿ ಮಾತ್ರ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಸಾಲ ಮಾಡುವ ಶಕ್ತಿ ಇದ್ದಿದ್ದರೆ ಜನರು ಏಕೆ ಪ್ಯಾಕೇಜ್ ಕೇಳುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇರುವ ಸಾಲವನ್ನೆ ತೀರಿಸಲು ಸಾದ್ಯವಿಲ್ಲ. ಎನ್ನುವ ಪರಿಸ್ಥಿತಿ ಇರುವಾಗ ಸಾಲ ತೀರಿಸಲು ಏನಾದರೂ ಸಹಾಯ ಮಾಡಿ ಎಂದರೆ ಮತ್ತಷ್ಟು ಸಾಲ ಮಾಡಿ ಎಂದು ಹೇಳುವುದು ಯಾವ ರೀತಿಯ ಲೆಕ್ಕಾಚಾರ ಎನ್ನುವುದನ್ನು ಕೇಂದ್ರ ಸರ್ಕಾರ ಬಿಡಿಸಿ ಹೇಳಬೇಕು ಎಂದು ಆಪ್‌ ಆಗ್ರಹಿಸಿದೆ.

ಶೇ 25 ರಷ್ಟು ಟಿಡಿಎಸ್ ಖಡಿತಗೊಳ್ಳುವುದು ಎಂದು ತಿಳಿಸಲಾಗಿದೆ.‌ ಅಂದರೆ ನಾವು 1 ಲಕ್ಷ ಹಣದಲ್ಲಿ 10 ಸಾವಿರ ಕಡಿತಗೊಂಡರೆ ಅದರಲ್ಲಿನ ಎರಡುವರೆ ಸಾವಿರ ಹಣಕ್ಕೆ ಮಾತ್ರ ವಿನಾಯಿತಿ. ಈ ವಿನಾಯಿತಿಗೊಂಡ ಹಣವನ್ನು ಆದಾಯ ತೆರಿಗೆ ಕಟ್ಟುವ ವೇಳೆ ಮತ್ತೆ ಜಮಾ ಮಾಡಬೇಕು. ಹಾಗಾದರೆ ಇದರಿಂದ ಏನು ಲಾಭ? ಎಂದರೆ ಬರೀ ಶೂನ್ಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮೇಲಿನ ಎಲ್ಲಾ ಸೌಲಭ್ಯ ಕೇವಲ 6 ತಿಂಗಳು ಮಾತ್ರ. ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇವಲ 6 ತಿಂಗಳ ಕಾಲಾವಕಾಶ ಸಾಕೇ? ಆದಾಯ ತೆರಿಗೆ ವಿನಾಯತಿ, GST ಕಡಿತ, EMI ಮನ್ನಾ/ಬಡ್ಡಿ ಮನ್ನಾ ಇಲ್ಲ ಎಂದು ಆರೋಪಿಸಲಾಗಿದೆ.

ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಕ್ಕೆ ಮಿಡಿಯದ ಪ್ಯಾಕೇಜ್ ಎನ್ನಬಹುದು. ಸಣ್ಣ/ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಸಹಾಯ ಧನ, ಅಸಂಘಟಿತ ಕಾರ್ಮಿಕ ವಲಯಕ್ಕೆ ಉತ್ತೇಜನ ನೀಡುವಲ್ಲಿ ಈ ಪ್ಯಾಕೇಜ್ ನಿರ್ಲಕ್ಷಿಸಿದೆ ಎಂದಿದ್ದಾರೆ.

ಈ ₹20 ಲಕ್ಷ ಕೋಟಿ ಎನ್ನುವ ಜುಮ್ಲಾ ಪ್ಯಾಕೇಜ್‌ನಿಂದ ಶೇ 99 ರಷ್ಟು ಭಾರತೀಯರಿಗೆ ನಯಾಪೈಸೆಯಷ್ಟು ಲಾಭ ಇಲ್ಲ ಎನ್ನುವುದು ಸ್ಪಷ್ಟ. ಬಿಗ್ ಬಾಸ್ಕೆಟ್, ಓಯೋ ಹೀಗೆ ಅನೇಕ ಕಂಪನಿಗಳು ಚೀನಾದಲ್ಲೂ ಬಂಡವಾಳ ಹೂಡಿವೆ ಈ ಕಂಪೆನಿಗಳು ಬಂಡವಾಳ ಹಿಂಪಡೆದರೆ ಅವುಗಳ ಉತ್ತೇಜನಕ್ಕೆ ಯಾವ ಯೋಜನೆ ಇದೆ ಎನ್ನುವುದು ಸ್ಪಷ್ಟತೆ ಇಲ್ಲ ಎಂದು ಟೀಕಿಸಲಾಗಿದೆ.

ಕೈಬಿಚ್ಚಿ ಸಹಾಯ ಹಸ್ತ ಕೊಡದೆ ಮತ್ತಷ್ಟು ಸಾಲದ ಸುಳಿಗೆ ಜನರನ್ನು ದೂಡುವ ಅವೈಜ್ಞಾನಿಕ ಪ್ಯಾಕೇಜ್.
ಇನ್ನಾದರೂ ಮುಂದಿನ ಪ್ಯಾಕೇಜ್ ಗಳಲ್ಲಿ ಆದರೂ ಬೇಡಿಕೆ ಹೆಚ್ಚಳ ಮಾಡುವಂತಹ ಯೋಜನೆಗಳು ಘೋಷಿಸಲಿ, ಕೈ ಬಿಚ್ಚಿ ದುಡ್ಡು ಹಂಚಿಕೆ ಮಾಡಲಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.


ಇದನ್ನೂ ಓದಿ: ಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...