Homeಮುಖಪುಟಜಾತಿವಾದಿ ಶಿಕ್ಷಕರ ಗುಂಪಿನ ಮಸಲತ್ತು : ಮಹಿಳಾ ಡಿಡಿಪಿಐ ಎತ್ತಂಗಡಿಗೆ ನಡೆದಿದೆಯಾ ಕಸರತ್ತು!

ಜಾತಿವಾದಿ ಶಿಕ್ಷಕರ ಗುಂಪಿನ ಮಸಲತ್ತು : ಮಹಿಳಾ ಡಿಡಿಪಿಐ ಎತ್ತಂಗಡಿಗೆ ನಡೆದಿದೆಯಾ ಕಸರತ್ತು!

- Advertisement -
- Advertisement -

ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಕಾಮಾಕ್ಷಮ್ಮ ಅವರ ಎತ್ತಂಗಡಿಗೆ ಜಾತಿವಾದಿ ‘ರಾಜಕಾರಣಿ ಶಿಕ್ಷಕರ ಗುಂಪು’ ಲಾಬಿ ನಡೆಸಿದೆ. ಡಿಡಿಪಿಐ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು. ಹೇಳಿದಂತೆ ಕೇಳಬೇಕು ಎಂಬುದೇ ಈ ಶಿಕ್ಷಕರ ಗುಂಪಿನ ಉದ್ದೇಶ. ಕಾರ್ಯಸಾಧನೆಗೆ ಯಾರ ಕಾಲನ್ನಾದರೂ ಹಿಡಿಯಬಲ್ಲರಾದ ಇವರು ತಮ್ಮ ಉದ್ದೇಶ ಈಡೇರದಿದ್ದರೆ ಯಾರ ಕಾಲೆಳೆಸಲು ಸಹ ಸಿದ್ಧರು.

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆಯನ್ನು ಕೇಂದ್ರೀಕರಣಗೊಳಿಸಿದೆ. ಕೌನ್ಸಿಲ್ ಮೂಲಕವೇ ಶಿಕ್ಷಕರ ವರ್ಗಾವಣೆ ನಡೆಯುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ವರ್ಗಾವಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಲಾಗಿದೆ.

ಮೇಲಧಿಕಾರಿಗಳು ಅಧಿಕಾರ ನೀಡಿದರೆ ಮಾತ್ರ ಡಿಡಿಪಿಐಗೆ ಶಿಕ್ಷಕರ ವರ್ಗಾವಣೆ ಮಾಡುವ ಅಧಿಕಾರವಿದೆ. ವಿಶೇಷ ಪ್ರಕರಣಗಳಲ್ಲಿಯೂ ಮೇಲಿನ ಆದೇಶವಿಲ್ಲದೆ ಏನೂ ಮಾಡುವ ಹಾಗಿಲ್ಲ. ಆದರೆ ಶಿಕ್ಷಕರ ಡೆಪ್ಯೂಟೇಶನ್ ಮಾಡುವ ಅಧಿಕಾರ ಡಿಡಿಪಿಐಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕೆಲವು ಜಾತಿವಾದಿ ಪಟ್ಟಭದ್ರ ಶಿಕ್ಷಕರ ಗುಂಪು ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ಡಿಡಿಪಿಐ ಕಾಮಾಕ್ಷಮ್ಮ ವರ್ಗಾವಣೆಗೆ ಮಸಲತ್ತು ನಡೆಸಿದೆ.

ಕಾಮಾಕ್ಷಮ್ಮ

ಕಾಮಾಕ್ಷಮ್ಮ ಅವರು ಈ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡಿಬಂದವರು. ಬಾಗಲಕೋಟೆಯಲ್ಲಿ ಉತ್ತಮ ಕೆಲಸ ಮಾಡಿ ಹೆಸರು ಮಾಡಿದ್ದರು. ತುಮಕೂರಿಗೆ ಬಂದ ಮೇಲೆ ಜಾತಿವಾದಿ ರಾಜಕಾರಣಿ ಶಿಕ್ಷಕರ ಗುಂಪು ಡಿಡಿಪಿಐ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಲೇ ಇದೆ. ಮಹಿಳಾ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿ ತಮ್ಮ ಮಾತು ಕೇಳುವವರನ್ನು ತಂದು ಹಾಕಿಸಿಕೊಳ್ಳುವುದು ಈ ಗುಂಪಿನ ಉದ್ದೇಶವಾಗಿದೆ ಎಂದು ಹೇಳಾಗುತ್ತಿದೆ.

ಇದೀಗ ಮತ್ತೊಂದು ಸುದ್ದಿ ಹಬ್ಬಿದೆ. ತುಮಕೂರಿನ ಡಾ. ರಾಧಾಕೃಷ್ಣನ್ ರಸ್ತೆಯ ಸೋಮೇಶ್ವರ ಮುಖ್ಯರಸ್ತೆಯ ತಿರುವಿನಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಆವರಣದಲ್ಲಿ ದೊಡ್ಡದೊಂದು ಗುಂಡಿ ತೆಗೆಯಲಾಗಿದೆ. ಈ ಮಾಹಿತಿ ಜಿಲ್ಲಾ ಪಂಚಾಯಿತಿ ಸಿಇಒ ಶುಭ ಕಲ್ಯಾಣ್ ಅವರಿಗೆ ತಲುಪಿ ರಾತ್ರಿ 9 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಷ್ಟೊತ್ತಿಗೆ ಡಿಡಿಪಿಐ ಕಾಮಾಕ್ಷಮ್ಮ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಮಹಿಳಾ ಅಧಿಕಾರಿಯ ಪತಿಗೆ ಕರೆ ಮಾಡಿದ ಸಿಐಒ ಸ್ಥಳಕ್ಕೆ ಕರೆಸಿಕೊಂಡು ವಿವರ ಕೇಳಿದ್ದಾರೆ. ಕಸ ಮುಚ್ಚಲು ಗುಂಡಿ ತೋಡಿ ಎಂದು ನಾನೇ ಹೇಳಿದ್ದ ಎಂದು ಡಿಡಿಪಿಐ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಿಇಓ ಶುಭಕಲ್ಯಾಣ್ ಗುಂಡಿಯನ್ನು ಸೋಮವಾರದವರೆಗೆ ಮುಚ್ಚಬಾರದು. ಸ್ಧಳದಲ್ಲಿ ಸಿಸಿ ಕ್ಯಾಮೆರ ಅವಳವಡಿಸಬೇಕೆಂದು ಸೂಚಿಸಿ ಹೋಗಿದ್ದಾರೆ.

ಈ ಸುದ್ದಿಗೆ ಈಗ ರೆಕ್ಕೆಪುಕ್ಕಗಳು ಬಂದಿವೆ. ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೆಲ ಫೈಲ್ ಗಳನ್ನು ಮಣ್ಣಿನಲ್ಲಿ ಮುಚ್ಚಿಹಾಕಲು ಡಿಡಿಪಿಐ ಯತ್ನಿಸಿದ್ದಾರೆ ಎಂಬ ಆರೋಪ ತೇಲಿಬಿಡಲಾಗಿದೆ. ಗುಂಡಿ ತೋಡಿರುವುದು ಅನುಮಾನ ಹುಟ್ಟುಹಾಕುತ್ತದೆ ಸರಿ. ಆದರೆ ಎಂಥಾ ಮೂರ್ಖರು ಕೂಡ ದಾಖಲೆಗಳನ್ನು ಕಣ್ಣಮುಂದೆಯೇ ಹೂತು ಹಾಕುವಷ್ಟು ಅಧಿಕಾರಿಗಳು ದಡ್ಡರಲ್ಲ. ಹಾಗಾಗಿ ಡಿಡಿಪಿಐ ಅವರನ್ನು ವರ್ಗಾವಣೆ ಮಾಡಿಸುವುದೇ ಈ ಕುತಂತ್ರದ ಹಿಂದಿನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

ಗುಬ್ಬಿಯ ತಹಶೀಲ್ದಾರ್ ಮಮತ, ಜಿಲ್ಲೆಯ ಆರೋಗ್ಯಾಧಿಕಾರಿ ಚಂದ್ರಿಕಾ ಎತ್ತಂಗಡಿಯಾದ ಮೇಲೆ ಈಗ ಡಿಡಿಪಿಐ ಕಾಮಾಕ್ಷಮ್ಮ ಅವರನ್ನು ವರ್ಗಾವಣೆ ಮಾಡಿಸಲು ಪಿತೂರು ನಡೆದಿದೆ. ಅತ್ಯಂತ ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕಾಮಾಕ್ಷಮ್ಮ ಅವರ ಕೈಕೆಳಗೆ ಕೆಲಸ ಮಾಡಲು ಒಪ್ಪದ ಜಾತಿವಾದಿ ಮನಸ್ಸುಗಳು ಅನಗತ್ಯವಾಗಿ ಹುಯ್ಯಿಲೆಬ್ಬಿಸಿ ಮಹಿಳಾ ಅಧಿಕಾರಿಯ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಶೋಚನೀಯ ಸಂಗತಿ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಮತ್ತಷ್ಟು ಸುದ್ದಿಗಳು

ಬೋಧನಾ ಕೆಲಸದಿಂದ ವಜಾ: ಬದುಕು ಸಾಗಿಸಲು ಬಾಳೆಹಣ್ಣು ಮಾರಾಟ ಆರಂಭಿಸಿದ ಶಿಕ್ಷಕ!

BJP ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು; ಮಾರಕಾಸ್ತ್ರಗಳಿಂದ JDS ಕಾರ್ಯಕರ್ತರ ಮೇಲೆ ಹಲ್ಲೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. DDPI ಕಾಮಾಕ್ಷಮ್ಮನವರು ಹೆಣ್ಣು ಎಂಬ ಕಾರಣಕ್ಕೆ, ಕೆಲವು ಪಟ್ಟಭದ್ರ ಹಿತಾಸಕ್ತಿ, ಜಾತಿವಾದಿ ಶಿಕ್ಷಕರ ಮತ್ತು ಕಾಣದ ಕೈಗಳ ಮಸಲತ್ತಿನಿಂದ ವರ್ಗಾವಣೆ ಮಾಡುತ್ತಿರುವುದು ಪ್ರಜಾಪ್ರಭುತ್ವ ತತ್ವ ವಿ ೋಧಿ.

  2. ಇಂತಹ ಮನುವಾದಿ ಶಿಕ್ಷಕರು ಮಕ್ಕಳಿಗೆ ಬೋದಿಸುವುದಾದರೂ ಏನನ್ನು? ವಿದ್ಯೆ ಮನುಷ್ಯನನ್ನು ವಿವೇಕಿಯನ್ನಾಗಿಸಬೇಕು. ಆದರಿಲ್ಲಿ ಶಿಕ್ಷಕರೇ ಜಾತೀವಾದಿಗಳಾಗಿದ್ದಾರೆ. ಇದು ನಮ್ಮ ದುರಂತ. ಜಾತೀಯತೆ ಎಂಬ ರೋಗಾಣು ನಮ್ಮ ದೇಶದಿಂದ ತೊಲಗುವುದೇ ಇಲ್ಲವೇನೋ?

LEAVE A REPLY

Please enter your comment!
Please enter your name here

- Advertisment -

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....