Homeಅಂಕಣಗಳುಆಘಾತವಾಣಿ : ಅಟ್ಯಾಕ್ ಹನ್ಮಂತ

ಆಘಾತವಾಣಿ : ಅಟ್ಯಾಕ್ ಹನ್ಮಂತ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಜಯನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾವಿನಿಂದಾಗಿ ಮುಂದೂಡಲ್ಪಟ್ಟ ಚುನಾವಣೆಯ ಫಲಿತಾಂಶದಲ್ಲಿ ಹೀನಾಯವಾಗಿ ಸೋತುಹೋದ ಕಾರಣದಿಂದ ಸನ್ಮಾನ್ಯ ಧಡಿಯೂರಪ್ಪನವರ ಎದೆ ಧಸಕ್ ಪುಸುಕ್ ಎಂದ ಸುದ್ದಿ ಬಂದಿದೆ. ಈ ಚಿಂತಾಜನಕ ಸಂದರ್ಭದಲ್ಲಿ ಮನೆ ಸೇರಿಕೊಂಡಿರೋ ಧಡಿಯೂರಪ್ಪನವರು ನಾನು ಯಾರಿಗೂ ಮುಖ ತೋರಿಸೋದಿಲ್ಲವೆಂದು ಕಂಬಳಿ ಹೊದ್ದು ಕಾಲೆತ್ತಿಕೊಂಡು ಮಲಗಿದ್ದಾರೆ. ಮಾತನಾಡಿಸಿ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರ ಮೇಲೆ ನಾಯಿ ಛೂಬಿಟ್ಟು ಓಡಿಸಲು ತಮ್ಮ ಸಹಾಯಕರಿಗೆ ತಿಳಿಸಿರುವ ಅವರು, ತಮ್ಮ ಪಕ್ಷದ ಮುಖಂಡರು ಬಂದರೆ ಅವರನ್ನು ನೆಲಕ್ಕೆ ಕೆಡವಿ, ಅವರ ಮುಖ ಮತ್ತು ಹೊಟ್ಟೆಗೆ ಕಚ್ಚಿ ಓಡಿಸಲು ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆಂದು ಸುದ್ದಿಮೂಲಗಳು ಸ್ಪಷ್ಟ ಪಡಿಸಿವೆ. ಹಾಸಿಗೆ ಹಿಡಿದಿರುವ ಧಡಿಯೂರಪ್ಪನವರಿಗೆ ಸ್ಕೋಪಕ್ಕ ತಮ್ಮ ಸೆರಗಿನಿಂದ ಗಾಳಿ ಬೀಸಿಕೊಂಡು ಶುಶ್ರೂಷೆ ಮಾಡುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

****

ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ಭಯೋತ್ಪಾದಕರು, ನಕ್ಸಲೈಟರೆಲ್ಲರೂ ಕೈಯಲ್ಲಿ ಕಾಸಿಲ್ಲದೆ ಸಾಮೂಹಿಕವಾಗಿ ಶಸ್ತ್ರತ್ಯಾಗ ಮಾಡಿ ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ ಎಂದಿದ್ದ ಫೇಕಪ್ಪನ ಸುಳ್ಳು ಮತ್ತೊಮ್ಮೆ ಮಕಾಡೆ ಮಲಗಿದೆ. ನಕ್ಸಲೈಟರು ಫೇಕಪ್ಪನನ್ನು ಕೊಲ್ಲಲು ಸಂಚು ಮಾಡಿದ್ದಾರೆ, ಇದರ ಬಗ್ಗೆ ನಕ್ಸಲೈಟರು “ಪಕೋಡೇಂದ್ರ ಮಟ್ಯಾಶ್ ಸ್ವಾಹ” ಎಂಬ ಕಾದಂಬರಿಯನ್ನು ಬರೆದು, ಅದರಲ್ಲಿ ತಮ್ಮ ಒರಿಜಿನಲ್ ಹೆಸರುಗಳನ್ನೂ ಬರೆದು ಪೊಲೀಸರ ಕೈಗೆ ಸಿಗುವಂತೆ ಇಟ್ಟಿದ್ದಾರೆ ಎಂಬ ನಗೆಪಾಟಲು ಪ್ರಚಾರಕ್ಕೆ ಫೇಕಪ್ಪ ಇಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ನನ್ನನ್ನ ಸಾಯಿಸ್ತಾರೆ, ಆದ್ರಿಂದ ಓಟು ಕೊಡಿ ಅಂತ ಗೋಳಾಡ್ತಿರೋ ಫೇಕಪ್ಪನ 3ನೇ ದರ್ಜೆ ಡ್ರಾಮೇಬಾಜಿ ಸರ್ಕಸ್ಸಿಗೆ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ತಿಳಿದುಬಂದಿದೆ.

****

ಸಲ್ಮಾನ್ ಖಾನ್ ‘ಚುಲ್‍ಬುಲ್ ಪಾಂಡೆ’ ಅವತಾರದಲ್ಲಿ ದಬಾಂಗ್ ಚಿತ್ರದಲ್ಲಿ ರಂಜಿಸಿದ ನಂತರ ಅದೇ ರೇಂಜಿಗೆ ‘ಬೋಂಡಾ ಪಾಂಡೆ’ ಎಂದು ರಾಜ್ಯದಾದ್ಯಂತ ಫೇಮಸ್ಸಾಗಿರುವ ಆರುವಿ ದೋಶಪಾಂಡೆ ಬಗ್ಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಉದ್ಯೋಗಕ್ಕಾಗಿ ನಮ್ಮನ್ನು ನೆಚ್ಚಿಕೊಳ್ಳಬೇಡಿ, ಬೋಂಡಾ ಬಜ್ಜಿ ಮಾರುವ ಗೌರವಯುತ ಕೆಲಸ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಎಂದು ಶ್ರೀ ಬೋಂಡಾಪಾಂಡೆಯವರು ವದರಿದ್ದಾರೆ. ಈ ತಲೆಕೆಟ್ಟ ಹೇಳಿಕೆಯ ಗಮನಿಸಿದರೆ, ‘ಉದ್ಯೋಗ ಕೊಟ್ಟು ಸಾಯ್ರಿ’ ಎಂಬ ಜನರ ಬೇಡಿಕೆಗೆ ಪಕೋಡ ಮಾರಿ, ಪಂಚರ್ ಹಾಕಿ ಅಂತ ಬಡಬಡಿಸುತ್ತಿದ್ದ ಫೇಕೇಂದ್ರನೇನಾದ್ರೂ ಈ ‘ದೋಶಪಾಂಡೆ’ಯ ಆಯಕಟ್ಟಿನ ಭಾಗಕ್ಕೆ ಕಚ್ಚಿರಬಹುದಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

****

ಗೌರಿ ಲಂಕೇಶ್ ಹತ್ಯೆಯ ಒಬ್ಬೊಬ್ಬ ಪಾತಕಿಗಳನ್ನೂ ಎರಡೂ ಕಾಲಿಗೆ ಹಗ್ಗ ಕಟ್ಟಿ ಸತ್ತನಾಯಿಗಳಂತೆ ದರದರ ಎಳೆದು ತಂದು ರುಬ್ಬುತ್ತಿರುವ ರಾಜ್ಯದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಜನರ ಪ್ರಶಂಸೆಗೆ ಪಾತ್ರವಾಗಿದೆ. ರೌಡಿಗಳು ಕೊಲೆಗಡುಕರ ಕೈಗೆ ಧರ್ಮದ ಹೆಂಡ ಕೊಟ್ಟು ತಮಗಾಗದವರನ್ನು ಕೊಲ್ಲಿಸೋ ಸಣಕಲು ತೊಡೆಯ ಹೇಡಿಪಡೆಗಳ ಪಂಚೆ ಲಳಲಳನೆ ಒದ್ದೆಯಾಗುತ್ತಿರುವುದು ಕೇಳಿಬರುತ್ತಿದೆ. ಗೌರಿಹತ್ಯೆಯ ಕೇಸಿನಲ್ಲಿ ಆ ಸೇನೆ ಈ ಸೇನೆ, ಈ ಜಾಗೃತಿ, ಆ ವಿಕೃತಿ ಅಂತ ಮಕಮೂತಿ ನೋಡದೇ ಎಸ್.ಐ.ಟಿ ತಂಡವು ಒಬ್ಬೊಬ್ಬರನ್ನೇ ಹಿಡಿದುತಂದು ಬೋನಿಗೆ ಬಿಸಾಕುತ್ತಿದ್ದರೆ, ಅತ್ತ ದಾಬೋಲ್ಕರ್, ಪನ್ಸಾರೆ ಕೊಲೆ ಕೇಸನ್ನು ಏನೋ ಕಿತ್ತು ದಬಾಕ್ತೀವಿ ಎಂದು ಕೈಗೆತ್ತಿಕೊಂಡ ಸಿಬಿಐ ಪೊಮೇರಿಯನ್‍ಗಳು ಸರ್ಕಾರಿ ದುಡ್ಡಲ್ಲಿ ಕುಷ್ಕ ಕಬಾಬ್ ಮುಕ್ಕಿಕೊಂಡು ಓತ್ಲಾ ಹೊಡೆಯುತ್ತಿದ್ದಾರೆಂದು ಜನರು ಆಡಿಕೊಂಡು ನಗುತ್ತಿರುವ ವರದಿಗಳು ಬರುತ್ತಿವೆ.

****

ಭೂಮಿಯ ಮೇಲೆ ಇನ್ನೆಲ್ಲೂ ಕಾಣಸಿಗದ ಮಾಸ್ಟರ್ ಪೀಸ್ ಮೆಂಟ್ಲು ಗಿರಾಕಿಗಳಾದ ಉತ್ತರ ಕೊರಿಯಾದ ಕಿಮ್‍ಜಾಂಗ್ ಉನ್ನೇಶ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪೇಶ ಅವರು ಸಿಂಗಪೂರ್‍ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ನಿನ್ ಮೇಲೆ ನಾನು ಬಾಂಬ್ ಹಾಕಲ್ಲ, ನನ್ ಮೇಲೆ ನೀನು ಬಾಂಬ್ ಹಾಕ್ಬೇಡ’ ಅಂತ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಐತಿಹಾಸಿಕ ತಲೆತಿಕ್ಕಲರ ಸಂಗಮದಲ್ಲಿ ನಮ್ ಹಾಫ್ ಮೆಂಟ್ಲು ಫೇಕಪ್ಪನೂ ಇದ್ದಿದ್ರೆ ಈ ಶುದ್ದ ಮುಠ್ಠಾಳರ ಸಮ್ಮೇಳನ ಸಂಪೂರ್ಣವಾಗುತ್ತಿತ್ತೆಂದು ತೇಜಾವರ ಶ್ರೀಗಳು ನಿದ್ದೆಯಲ್ಲೇ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಕನವರಿಸಿಕೊಳ್ಳುತ್ತಿದ್ದರೆಂದು ಅವರ ಕಾರ್ ಡ್ರೈವರ್ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾನೆ.

****

ಹೋರಿಯ ಹಿಂದೆ ನಡೆಯುತ್ತ ಅದರ ಯಾವುದಾದರೊಂದು ಪಾರ್ಟು ಲೂಸಾಗಿ ಕಳಚಿಕೊಂಡು ಉದುರಬಹುದೆಂದು ಆಸೆಯಿಂದ ಫಾಲೋ ಮಾಡುತ್ತಿರೋ ಗುಳ್ಳೆನರಿಯಂತೆ ಧಡಿಯೂರಪ್ಪನವರು ರಾಜ್ಯದ ಬೆರಕೆ ಸರ್ಕಾರದ ಹಿಂದೆ ಬಿದ್ದಿರುವುದು ತಿಳಿದ ಸಂಗತಿ. ದಿನಕಳೆದಂತೆ ಬೆರಕೆ ಸರ್ಕಾರದ ಮಂದಿ ಕೇರಳದ ಮಾಟಮಂತ್ರ ತಜ್ಞರೂ ನಾಚಿ ನೀರಾಗುವ ಹಾಗೆ ಬುರುಡೆ ಮಂತ್ರವಾದಿಗಳಂತೆ ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ ಗಾಬರಿಯಾಗಿದ್ದಾರೆಂದು ಸುದ್ದಿ ಲಭ್ಯವಾಗಿದೆ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ರೆ ಏನೇನು ನೌಟಂಕಿ ಆಟವಾಡುತ್ತಿದ್ದೆವೋ, ಅದೆಲ್ಲವನ್ನೂ ತಮ್ಮ ಎದುರಾಳಿಗಳೇ ಕಚ್ಚೆ ಬಿಚ್ಚಿಕೊಂಡು ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ, ತಮ್ಮ ಪಕ್ಷದೋರು ಯಾರು? ಬೆರಕೆ ಸರ್ಕಾರದ ಪಕ್ಷದೋರು ಯಾರು? ಎಂದು ಗುರುತಿಸಲಾಗದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಸ್ಕೋಪಕ್ಕನವರು ಚೀಟಿ ರೆವಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆಂದು ಗೊತ್ತಾಗಿದೆ.

****

ಭೀಮ ಕೊರೆಗಾಂವ್ ಮೆರವಣಿಗೆಯಲ್ಲಿ ತನ್ನ ಪಟಾಲಂನಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಪೊರಕೆ ಮೀಸೆ ಸಂಘಿ ಮುದುಕನೊಬ್ಬ ತಾನು ತನ್ನ ತೋಟದಲ್ಲಿ ಬೆಳೆಯೋ ಮಾವಿನಹಣ್ಣು ತಿಂದ್ರೆ ಗಂಡು ಮಕ್ಕಳಾಗ್ತವೆ, ಅಂಥ ವಿಶೇಷ ಶಕ್ತಿ ತನ್ನ ಮ್ಯಾಂಗೋಗಳಿಗೆ ಇದೆಯೆಂದು ಕಕ್ಕಿಕೊಂಡಿದ್ದಾನೆ. ಸಂಘಿ ಮಂಗಿಗಳ ಈ ಮ್ಯಾಂಗೋ ಸಂತಾನ ಪ್ರಾಪ್ತಿ ಮ್ಯಾಜಿಕ್ ಥಿಯರಿ ಕೇಳಿದ ದೇಶದ ಜನರು ನಗಬಾರದ ಜಾಗದಲ್ಲೆಲ್ಲ ನಗುತ್ತ “ಅಲ್ಲಾ ಕಣೋ ಬುಡ್ಡಾ, ಮ್ಯಾಂಗೋ ತಿಂದ್ರೆ ಮಕ್ಕಳಾಗ್ತವೆ ಅಂದ್ರೆ ಜನ ಬಾಟಾ ಕಂಪನಿ ಮೆಟ್ಟು ತಗೊಂಡು ಅಟ್ಟಿಸಿಕೊಂಡು ಬಂದು ಬಡೀತಾರೆ” ಎಂದು ಆಡಿಕೊಳ್ಳುತ್ತಿರುವ ಸುದ್ದಿ ತಡವಾಗಿ ವರದಿಯಾಗಿದೆ. ಬೆದರಿದ ಸಂಘಿ ಮುದುಕನು ಮಹಾರಾಷ್ಟ್ರ ಸಿಎಂ ಭಡ್ನಊಸು ಕಚೇರಿಯ ಶೌಚಾಲಯದಲ್ಲಿ ಕದ್ದು ಕುಳಿತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತಕಾರಿ ಸುದ್ದಿಗಳನ್ನು ನಿಮ್ಮ ಮುಂದಿಡುವ ‘ಆಘಾತವಾಣಿ’ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ. ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...