Homeಕರ್ನಾಟಕಬಾಗಲಕೋಟೆಯಲ್ಲಿ ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ರೈತಪರ ಸಂಘಟನೆಗಳ ಖಂಡನೆ

ಬಾಗಲಕೋಟೆಯಲ್ಲಿ ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ರೈತಪರ ಸಂಘಟನೆಗಳ ಖಂಡನೆ

- Advertisement -
- Advertisement -

‘ವಿನಾಶಕಾರಿ ಕೃತ್ಯಗಳನ್ನು ರೈತಚಳವಳಿ ಎಂದೂ ಪಾಲಿಸಿಲ್ಲ’ ಬಾಗಲಕೋಟೆಯ ಸೈದಾಪುರದಲ್ಲಿ ಹಲವಾರು ಕಬ್ಬು ತುಂಬಿದ ಟ್ರಾಕ್ಟರುಗಳು ಸುಟ್ಟು ಭಸ್ಮವಾಗಿರುವುದು ವಿಷಾದನೀಯ. ಇದಕ್ಕೆ ಯಾರೇ ಪ್ರೇರಣೆ ನೀಡಿದ್ದರೂ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚುಕ್ಕಿನಂಜುಂಡಸ್ವಾಮಿ, ನೂರ್ ಶ್ರೀಧರ್, ಡಿ.ಹೆಚ್, ಪೂಜಾರ್ ಸೇರಿದಂತೆ ಹಲವು ರೈತ ನಾಯಕರು, ರೈತಪರ ಹೋರಾಟಗಾರರು ಹೇಳಿದ್ದಾರೆ. 

ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹೊತ್ತಿರುವ ದುರ್ಘಟನೆ ಕುರಿತು ರೈತ ಹಾಗೂ ರೈತಪರ ಸಂಘಟನೆಗಳು ತುರ್ತು ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ರೈತ ಚಳವಳಿ ಇತಿಹಾಸದುದ್ದಕ್ಕೂ ಶಾಂತಿಯುತವಾಗಿ ನಡೆದು ಬಂದಿದೆ. ರೈತರದು ಸದಾ ಜೀವಪರ ನಿಲುವು, ವಿನಾಶಕಾರಿ ಕೃತ್ಯಗಳನ್ನು ರೈತ ಚಳವಳಿ ಎಂದೂ ಪಾಲಿಸಿಲ್ಲ, ಸಮ್ಮತಿಸಿಲ್ಲ. 

ಆದರೆ ಈ ಘಟನೆಗೆ ಇತ್ತೀಚಿಗೆ ನಡೆದ ರೈತ ಚಳವಳಿ ಸರಿಯಾದ ರೀತಿಯಲ್ಲಿ ಸಮಾರೋಪಗೊಳ್ಳದೇ ಹೋದದ್ದು ಮುಖ್ಯ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯಸರ್ಕಾರ, ಕಾರ್ಖಾನೆ ಮಾಲೀಕರು ಹಾಗೂ ಜಿಲ್ಲಾಡಳಿತ ಪ್ರಮುಖ ಹೊಣೆಯನ್ನು ಹೊತ್ತುಕೊಳ್ಳಲೇಬೇಕಿದೆ.

ಅವೈಜ್ಞಾನಿಕ ಎಫ್‌ ಆರ್‌ ಪಿ ಯನ್ನು ನಿಗದಿಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಕೆಲಸ ಮಾಡಿದೆ.

ಸೂಕ್ತ ಬೆಲೆ ಸಿಗದೆ ರೈತರ ಆಕ್ರೋಶ ಸ್ಪೋಟ ಗೊಂಡಾಗ ರಾಜ್ಯಸರ್ಕಾರ ಕೂಡಲೇ ಅದನ್ನು ಬಗೆಹರಿಸುವ ಬಿಗಿ ನಿಲುವು ತೆಗೆದುಕೊಳ್ಳಲು ಮುಂದಾಗಲಿಲ್ಲ. ಕೊನೆಗೆ ಪರಿಸ್ಥಿತಿ ಕೈಮೀರಿದಾಗ ಕಾರ್ಖಾನೆ ಮಾಲೀಕರ ಸಭೆ ಕರೆಯಿತು. ಆ ಸಭೆಯಲ್ಲಿ ಕೋಟ್ಯಾಂತರ ಲಾಭ ಮಾಡುತ್ತಿರುವ ಕಾರ್ಖಾನೆ ಮಾಲೀಕರು ರೈತರಿಗೆ ಪ್ರತಿಟನ್ನಿಗೆ ನೂರುರೂ ಹೆಚ್ಚಿಸಲು ತಯಾರಿರಲಿಲ್ಲ. 

ಇವರ ಲೋಭಕೋರತನ, ಮೊಂಡು ನಿಲುವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಕೊನೆಗೆ ರಾಜ್ಯ ಸರ್ಕಾರ ತಾನೂ 50 ರೂ ಸೇರಿಸಿ 3300 ರೂ ಕೊಡುವ ತೀರ್ಮಾನ ತೆಗೆದುಕೊಂಡಿತಾದರೂ ರಿಕವರಿಯನ್ನು10.25 ಬದಲು11.25 ಕ್ಕೆನಿಗದಿಮಾಡಿದ್ದು,  ಕೊಟ್ಟಂತೆ ಕಂಡರೂ ಏನೂ ಕೊಡಲಿಲ್ಲ, ಎಂಬ ಭಾವ ರೈತರಲ್ಲಿ ಉಳಿಯಲು ಕಾರಣವಾಯಿತು. 

ಈ ಕಾರಣಕ್ಕಾಗಿಯೇ ಬಾಗಲಕೋಟೆಯಲ್ಲಿ ಹೋರಾಟ ನಿಲ್ಲದೆ ಮುಂದುವರಿಯಿತು. ರೈತರನ್ನುಕರೆದು, ವಿಶ್ವಾಸಕ್ಕೆ ತೆಗೆದುಕೊಂಡು, ತನ್ನಿಂದ ಆಗಿರುವ ಅಚಾತುರ್ಯವನ್ನು ಸರಿಪಡಿಸಿಕೊಂಡು ರಿಕವರಿಯನ್ನು 10.25 ಗೆ ತರುವ ಬದಲು, ಜಿಲ್ಲಾಸಚಿವರು “ಹೋರಾಟ ಮುಗಿದಿದೆ, ಕಬ್ಬುಸಾಗಿಸಿ” ಎಂಬ ಸಂದೇಶವನ್ನು ಕಾರ್ಖಾನೆ ಮಾಲೀಕರಿಗೆ ಕೊಟ್ಟರು.

ರೈತರ ಪ್ರತಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಮತ್ತು ಕಾರ್ಖಾನೆ ಮಾಲೀಕರು ಸೇರಿ ಪೋಲೀಸ್‌ ಬಲದ ಬೆಂಬಲದಲ್ಲಿ ಕಬ್ಬು ಸಾಗಿಸಲು ಹೊರಟಿದ್ದು, ರೈತರ ಆಕ್ರೋಶಕ್ಕೂ, ಈ ದುರ್ಘಟನೆಗೂ ಕಾರಣವಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಜಿಲ್ಲಾಡಳಿತ ಈ ದುರ್ಘಟನೆಯ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ. ರೈತರನ್ನು ಕಾಡುವ ಬದಲು ನಷ್ಟಕ್ಕೊಳಗಾಗಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರ ಕಟ್ಟಿಕೊಟ್ಟು, ರೈತರ ಸಭೆಯನ್ನು ಕರೆದು ಮೂಲ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ಬಗೆಹರಿಸುವ ಅಗತ್ಯವಿದೆ. 

ಈ ಬಾರಿಯ ಚಳವಳಿ ಐಕ್ಯನಾಯಕತ್ವದಲ್ಲಿ ನಡೆಯದೆ ಹಲವಾರು ಕೇಂದ್ರಗಳಾಗಿ ನಡೆದದ್ದೂ ಸಹ ಈ ಗೊಂದಲಕ್ಕೆಇಂಬುಕೊಟ್ಟಿದೆ. ರೈತ ಚಳವಳಿಯ ಭಾಗವಾಗಿ ನಾವೂ ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರಗಳು ಇವೆ ಎಂದಿದ್ದಾರೆ. 

ರಾಜ್ಯ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳು:

  1. ಕಬ್ಬಿನ ಪ್ರತಿ ಟನ್ನಿಗೆ, 10.25 ರಿಕವರಿ ಮಾನದಂಡದ ಮೇಲೆ, ಕನಿಷ್ಟ 3300 ಬೆಲೆ ನಿಗದಿ ಮಾಡಬೇಕು.
  2. ನಷ್ಟಕ್ಕೊಳಗಾಗಿರುವ ರೈತರಿಗೆ ಕಾರ್ಖಾನೆಗಳು ಹಾಗೂ ಸರ್ಕಾರ ಸೇರಿ ಸುಟ್ಟು ಹೋಗಿರುವ ಟ್ರಾಕ್ಟರ್‌ ಗಳಿಗೂ ಸೇರಿದಂತೆ
    ನಷ್ಟ ಪರಿಹಾರ ಕಟ್ಟಿಕೊಡಬೇಕು.

3.ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಗೆ ಹರಿಸಲು ಕೂಡಲೇ ಮುಖ್ಯಮಂತ್ರಿಗಳು ಸಭೆ ಕರೆಯಬೇಕು.

  1. ರಿಕವರಿ ಟೆಸ್ಟಿನಲ್ಲಿ, ತೂಕದಲ್ಲಿ, ಪಾವತಿಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
  2. ಎಫ್‌ ಆರ್‌ ಪಿ ದರದಲ್ಲಿ, ಎಥೆನಾಲ್‌ ಪ್ರಮಾಣದಲ್ಲಿ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಲು ಹಾಗೂ ರಿಕವರಿಯನ್ನು ಈಗಿರುವ 10.25 ಬದಲು ಮೊದಲಿನಂತೆ 9.25 ಗೆ ಇಳಿಸಬೇಕುಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯಸರ್ಕಾರ ಮುಂದೊಡಗು ತೆಗೆದು ಕೊಳ್ಳಬೇಕು.

ಹೆಚ್.‌ ಆರ್.‌ ಬಸವರಾಜಪ್ಪ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘಹಾಗೂಹಸಿರುಸೇನೆ]
ಬಡಗಲಪುರನಾಗೇಂದ್ರ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘ]
ಚುಕ್ಕಿನಂಜುಂಡಸ್ವಾಮಿ [ರಾಜ್ಯಅಧ್ಯಕ್ಷೀಯಮಂಡಳಿಸದಸ್ಯರು, ಕರ್ನಾಟಕರಾಜ್ಯರೈತಸಂಘ (ಸಾಮೂಹಿಕನಾಯಕತ್ವ)]
ಸಿದ್ಗೌಡಮೋದಗಿ [ಅಧ್ಯಕ್ಷರು, ಭಾರತೀಯಕೃಷಿಕಸಮಾಜ [ಸಂಯುಕ್ತ]]
ನೂರ್‌ ಶ್ರೀಧರ್‌, [ಅಧ್ಯಕ್ಷರು, ಕರ್ನಾಟಕಜನಶಕ್ತಿ]
ಡಿ.ಹೆಚ್.‌ ಪೂಜಾರ್‌ [ಅಧ್ಯಕ್ಷರು, AIUKS]
ಭಗವಾನ್‌ ರೆಡ್ಡಿ, [ರಾಜ್ಯಕಾರ್ಯದರ್ಶಿ, AIKKMS]
ಸಿರಿಮನೆನಾಗರಾಜ್‌ [ಉಪಾಧ್ಯಕ್ಷರು, ಭೂಮಿಮತ್ತುವಸತಿಹಕ್ಕುವಂಚಿತರಹೋರಾಟಸಮಿತಿ]

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...