Homeಮುಖಪುಟಪುಣೆ ಭೂ ಅವ್ಯವಹಾರ ಪ್ರಕರಣ : ಅಜಿತ್ ಪವಾರ್ ಮಗನ ಹೆಸರು ಕೈಬಿಟ್ಟ ತನಿಖಾ ಸಮಿತಿ

ಪುಣೆ ಭೂ ಅವ್ಯವಹಾರ ಪ್ರಕರಣ : ಅಜಿತ್ ಪವಾರ್ ಮಗನ ಹೆಸರು ಕೈಬಿಟ್ಟ ತನಿಖಾ ಸಮಿತಿ

- Advertisement -
- Advertisement -

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಮಗ ಪಾರ್ಥ್ ಪವಾರ್ ಭಾಗಿಯಾಗಿದ್ದಾರೆ ಎನ್ನಲಾದ ಪುಣೆಯ ಮುಂಡ್ವಾದಲ್ಲಿನ ವಿವಾದಾತ್ಮಕ ಭೂ ವ್ಯವಹಾರದ ತನಿಖೆ ನಡೆಸುತ್ತಿರುವ ಎರಡು ಸಮಿತಿಗಳಲ್ಲಿ ಮೊದಲನೆಯದು, ಮಂಗಳವಾರ (ನವೆಂಬರ್ 18) ಸಲ್ಲಿಸಿದ ವರದಿಯಲ್ಲಿ ಅಮೇಡಿಯಾ ಎಂಟರ್‌ಪ್ರೈಸಸ್‌ ಎಲ್‌ಎಲ್‌ಪಿಯ ದಿಗ್ವಿಜಯ್ ಪಾಟೀಲ್, ಶೀತಲ್ ತೇಜ್ವಾನಿ ಮತ್ತು ಸಬ್-ರಿಜಿಸ್ಟ್ರಾರ್ ರವೀಂದ್ರ ತರು ವಿರುದ್ಧ ದೋಷಾರೋಪಣೆ ಮಾಡಿದೆ ಎಂದು ವರದಿಯಾಗಿದೆ.

ಗಮನಾರ್ಹವಾಗಿ, ಈ ಪ್ರಕರಣದಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಯಂತೆ, ವರದಿಯಲ್ಲೂ ಅಜಿತ್ ಪವಾರ್ ಅವರ ಮಗ ಪಾರ್ಥ್ ಪವಾರ್ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿ ಹೇಳಿದೆ.

ತೇಜ್ವಾನಿ ಅವರು ಮೂಲ 272 ಜನ ಮಹಾರ್ ವಾಟಂಡಾರ್‌ಗಳ (ಮಹಾರ್ ವತನ್ ಭೂಮಿಯ ಮೂಲ ಹಕ್ಕುದಾರರು) ಪರವಾಗಿ ಪವರ್ ಆಫ್ ಅಟಾರ್ನಿ (ಅಧಿಕಾರ ಪತ್ರ) ಹೊಂದಿದ್ದರು. ಪಾಟೀಲ್ ಅವರು ತಮ್ಮ ಕಂಪನಿಯ ಪರವಾಗಿ ದಾಖಲೆಗಳ ಮೇಲೆ ಸಹಿ ಹಾಕಿದ್ದಾರೆ. ಆ ಕಂಪನಿಯಲ್ಲಿ ಪಾರ್ಥ ಪವಾರ್ ಕೂಡ ಡೈರೆಕ್ಟರ್ (ನಿರ್ದೇಶಕ) ಆಗಿದ್ದಾರೆ.

ಸರ್ಕಾರವು ಸ್ವಾಧೀನಪಡಿಸಿಕೊಂಡು ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆಗೆ ಗುತ್ತಿಗೆಗೆ ಪಡೆದಿರುವ ಭೂಮಿಯನ್ನು ಈ ರೀತಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ತನಿಖಾ ಸಮಿತಿಯ ನೇತೃತ್ವವನ್ನು ನೋಂದಣಿ ಜಂಟಿ ಮಹಾನಿರೀಕ್ಷಕ ರಾಜೇಂದ್ರ ಮುಥೆ ವಹಿಸಿದ್ದರು. ವರದಿಯಲ್ಲಿ ಪುಣೆಯ ದುಬಾರಿ ಪ್ರದೇಶವಾದ ಮುಂಡ್ವಾದಲ್ಲಿ ಸುಮಾರು 1,800 ಕೋಟಿ ರೂಪಾಯಿ ಬೆಲೆ ಬಾಳುವ 40 ಎಕರೆ ಸರ್ಕಾರಿ ಭೂಮಿಯನ್ನು ಒಳಗೊಂಡ ಮಾರಾಟ-ಖರೀದಿ ಒಪ್ಪಂದದ ನೋಂದಣಿಯಲ್ಲಿ “ಬಹು ಅಕ್ರಮಗಳು ಮತ್ತು ನಿಬಂಧನೆಗಳ ಉಲ್ಲಂಘನೆ” ನಡೆದಿರುವುದನ್ನು ಅದು ಎತ್ತಿ ತೋರಿಸಿದೆ.

ಸರ್ಕಾರಿ ಸ್ವಾಮ್ಯದ 43 ಎಕರೆ ಜಮೀನನ್ನು ಅಮೇಡಿಯಾ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿಗೆ 300 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಇದು ಜಮೀನಿನ ಅಂದಾಜು ಮಾರುಕಟ್ಟೆ ಮೌಲ್ಯ 1,800 ಕೋಟಿ ರೂ.ಗಳಿಗಿಂತ ಬಹಳ ಕಡಿಮೆಯಾಗಿದೆ.

300 ಕೋಟಿ ರೂಪಾಯಿಗಳ ಘೋಷಿತ ಒಪ್ಪಂದದ ಮೌಲ್ಯವು ಸುಮಾರು 21 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕ ಮತ್ತು ಸಂಬಂಧಿತ ತೆರಿಗೆಗಳನ್ನು ಒಳಗೊಳ್ಳಬೇಕಿತ್ತು. ಆದರೆ, ತನಿಖಾಧಿಕಾರಿಗಳು ಈ ಪತ್ರವನ್ನು 500 ರೂಪಾಯಿಗಳ ಟೋಕನ್ ಮುದ್ರಾಂಕ ಶುಲ್ಕ ಮತ್ತು 30,000 ರೂಪಾಯಿಗಳ ನೋಂದಣಿ ಶುಲ್ಕದೊಂದಿಗೆ ನೋಂದಾಯಿಸಲಾಗಿದೆ ಎಂದು ಕಂಡುಕೊಂಡಿದ್ದಾರೆ. ಇದರಿಂದಾಗಿ ರಾಜ್ಯ ಖಜಾನೆಗೆ ಭಾರಿ ನಷ್ಟವಾಗಿದೆ.

ಪಾರ್ಥ್ ಪವಾರ್ ಅವರನ್ನು ಅಮೇಡಿಯಾದಲ್ಲಿ ಪಾಲುದಾರ ಎಂದು ಪಟ್ಟಿ ಮಾಡಲಾಗಿದೆ. ಆದರೆ, ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯಲ್ಲಿ ಅವರ ಹೆಸರು ಕಂಡುಬರುವುದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಪರಿಣಾಮವಾಗಿ, ಸಮಿತಿಯು ತನ್ನ ವರದಿಯಲ್ಲಿ ಅವರ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

“ನಮಗೆ ಲಭ್ಯವಾದ ವರದಿಯ ಒಂದು ಭಾಗದ ಪ್ರಕಾರ, ಭೂಮಿ ವ್ಯವಹಾರಗಳಲ್ಲಿ ಸ್ಟಾಂಪ್ ಡ್ಯೂಟಿ ಮನ್ನಾ ಕೋರಿದ ಪ್ರಕರಣಗಳಲ್ಲಿ, ಸಂಬಂಧಿತ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಆ ವ್ಯವಹಾರಕ್ಕೆ ಸ್ಟಾಂಪ್ ಕಲೆಕ್ಟರ್ ಅನುಮೋದನೆ ನೀಡಿಯೇ ತೀರಬೇಕು. ಅಂದರೆ, ಸ್ಟಾಂಪ್ ಡ್ಯೂಟಿ ಮನ್ನಾ ಪಡೆಯಲು ಅರ್ಜಿ ಸಲ್ಲಿಸಿದ ಎಲ್ಲಾ ಭೂಮಿ ಖರೀದಿ-ಮಾರಾಟ/ದಾಖಲಾತಿ ಪ್ರಕರಣಗಳಲ್ಲಿ ಕಲೆಕ್ಟರ್ ಆಫ್ ಸ್ಟಾಂಪ್ಸ್ ಅವರ ಅನುಮತಿ ಕಡ್ಡಾಯವಾಗಿರುತ್ತದೆ. ಇಲ್ಲದಿದ್ದಲ್ಲಿ ಆ ವ್ಯವಹಾರ ಮಾನ್ಯವಾಗುವುದಿಲ್ಲ” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ಹೇಳಿದೆ.

“ರಾಜ್ಯದಲ್ಲಿ ಆದಾಯ ಸಂಗ್ರಹಣೆಗೆ ಮುಖ್ಯವಾದ ಜಿಲ್ಲೆಗಳಲ್ಲಿ ಜಂಟಿ ಉಪ ನೋಂದಣಿದಾರರ ಹುದ್ದೆಗಳಿಗೆ ಅರ್ಹ ಹಿರಿಯ ಮತ್ತು ಅನುಭವಿ ಜಂಟಿ ಉಪ ನೋಂದಣಿದಾರರನ್ನು ನೇಮಿಸಬೇಕು ಮತ್ತು ಈ ಹುದ್ದೆಗಳು ಖಾಲಿಯಾಗಿ ಉಳಿಯದಂತೆ ನೋಡಿಕೊಳ್ಳಬೇಕು” ಎಂದು ವರದಿಯು ಶಿಫಾರಸು ಮಾಡಿದೆ. 1908ರ ನೋಂದಣಿ ಕಾಯ್ದೆಯ ಸೆಕ್ಷನ್ ಕೆ, ಭೂಮಿಯ 7/12 ಸಾರವು ಒಂದು ತಿಂಗಳಿಗಿಂತ ಹಳೆಯದಾಗಿರದಿದ್ದರೆ ಮಾತ್ರ ಅಂತಹ ದಾಖಲಾತಿಯನ್ನು ಪೂರ್ಣಗೊಳಿಸಬಹುದು ಎಂದು ಹೇಳುತ್ತದೆ” ಎಂದಿದೆ.

“ವರದಿಯು 1908ರ ನೋಂದಣಿ ಕಾಯ್ದೆಯಲ್ಲಿ ಮಾರ್ಪಾಡುಗಳನ್ನು ಶಿಫಾರಸು ಮಾಡಿದೆ” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ಹೇಳಿದೆ.

“28/04/2025ರ ತಿದ್ದುಪಡಿಯ ಪ್ರಕಾರ, 1908ರ ನೋಂದಣಿ ಕಾಯ್ದೆಯಲ್ಲಿ ಸೆಕ್ಷನ್ 18ಎ ಅನ್ನು ಸೇರಿಸಲಾಗಿದೆ. ಅದರ ಉಪವಿಭಾಗ (1) ರ ಷರತ್ತು (ಬಿ) ಪ್ರಕಾರ, ಸರ್ಕಾರ ಮತ್ತು ಅಂತಹುದೇ ಅಧಿಕಾರಿಗಳ ಒಡೆತನದ ಆಸ್ತಿಗಳ ಖರೀದಿ ಮತ್ತು ಮಾರಾಟ ಇತ್ಯಾದಿಗಳ ಪತ್ರಗಳನ್ನು ದ್ವಿತೀಯ ನೋಂದಣಿದಾರರು ನೋಂದಾಯಿಸದಿರುವುದು ಕಡ್ಡಾಯವಾಗಿದೆ” ಎಂದು ಅದು ಹೇಳಿದೆ” ಎಂದು ವಿವರಿಸಿದೆ.

“ಆದಾಗ್ಯೂ, ಈ ನಿಬಂಧನೆಯು ‘ಮಾಲೀಕತ್ವ’ಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರವು ಇನ್ನೂ ‘ಮಾಲೀಕತ್ವ’ ಹೊಂದಿಲ್ಲದ ಆದರೆ ಸರ್ಕಾರದ ಸ್ವಾಧೀನದಲ್ಲಿರುವ ಮತ್ತು/ಅಥವಾ ಇತರ ಹಿತಾಸಕ್ತಿಗಳನ್ನು ಹೊಂದಿರುವ ಆಸ್ತಿಗಳ ದಾಖಲೆಗಳನ್ನು ನೋಂದಾಯಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸದರಿ ಕಾಯಿದೆಯಲ್ಲಿ ಸ್ಪಷ್ಟವಾದ ನಿಬಂಧನೆಯನ್ನು ಮಾಡುವುದು ಅಗತ್ಯವೆಂದು ತೋರುತ್ತದೆ” ಎಂದಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...