Homeಮುಖಪುಟಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

ಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

- Advertisement -
- Advertisement -

ಅವನೇ ಶ್ರೀಮನ್ ನಾರಾಯಣ ಸ್ಯಾಂಡಲ್‌ವುಡ್ ನಲ್ಲಿ ತಯಾರಾಗಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ ಅಂತ ಸೂಪರ್ ಹಿಟ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ಕೊಟ್ಟ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಟ ರಕ್ಷಿತ್ ಶೆಟ್ಟಿ ಅದೇ ಹುಮ್ಮಸ್ಸಿನಲ್ಲಿ, ಗೆಲುವಿನ ಅಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಕ್ಕೆ ಕೈ ಹಾಕಿ, ಈಗ ಆ ಸಾಹಸವನ್ನ ರಿಲೀಸ್ ಹಂತಕ್ಕೆ ತಂದಿದ್ದಾರೆ. ಈಗಾಗ್ಲೇ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕನ್ನಡದ ಅತಿದೊಡ್ಡ ಸಿನಿಮಾ, ಬಹುಭಾಷೆಯಲ್ಲಿ ತಯಾರಾಗಿರೋ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದೆ.

ಇತ್ತೀಚೆಗಷ್ಟೇ ಅವನೇ ಶ್ರೀಮನ್ ನಾರಾಯಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ, ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ, ಮಾಡಲು ಹೊರಟಿರೋ ಸಾಹಸವನ್ನ ಕಂಡು, ಇಡೀ ಉದ್ಯಮ ಶಾಕ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನ ರಿಲೀಸ್ ಮಾಡ್ತಿವಿ. ಬರೊಬ್ಬರಿ 300ಕೋಟಿ ಬ್ಯುಸಿನೆಸ್ ಮಾಡ್ತೀವಿ ಅಂತ ನಿರ್ಮಾಪಕರು ದಿಲ್ದಾರಾಗಿ ಹೇಳಿಕೊಂಡಿದ್ದಾರೆ. ಇದು ಒಂದು ಕಡೆ ಸ್ಯಾಂಡಲ್ವುಡ್ ಗೆ ಶಾಕ್ ಕೊಟ್ರೆ. ಮತ್ತೆಂದು ಕಡೆ ಇದು ವರ್ಕೌಟ್ ಆದ್ರೀ ಆಗಬಹುದು ಅನ್ನೋ ಲೆಕ್ಕಾಚಾರದ ಮಾತುಗಳು ಕೇಳಿ ಬರ್ತಿವೆ..

80ಕೋಟಿ ಬಜೆಟ್.. 300 ಕೋಟಿ ಟಾರ್ಗೆಟ್…!!!
ಅವನೇ ಶ್ರೀಮನ್ ನಾರಾಯಣ ಸಿನಿಮಾದ ಮೇಲೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬರೊಬ್ಬರಿ 80ಕೋಟಿ ಸುರಿದಿದ್ದಾರೆ. ಹಳೇ ಸಿನಿಮಾಗಳಿಂದ ಗಳಿಸಿದ್ದು, ಬ್ಯುಸಿನೆಸ್ ನಲ್ಲಿ ಗಳಿಸಿದ್ದರ ಜೊತೆಗೆ ಸಾಲ ಸೋಲ ಮಾಡಿ ಈ ಚಿತ್ರದ ಮೇಲೆ ಇಷ್ಟು ದೊಡ್ಡ ಬಂಡವಾಳ ಹೂಡಿದ್ದಾರೆ. ಗೆಲ್ಲೋ ಸೂತ್ರ ನನಗೆ ಗೊತ್ತಿದೆ. ಈ ಸಿನಿಮಾದಿಂದ 300 ಕೋಟಿ ಬ್ಯುಸಿನೆಸ್ ಆಗೇ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಶ್ರೀಮನ್ ನಾರಾಯಣ ಸಿನಿಮಾದ ಜೊತೆಗೆ ನಾಲ್ಕು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಮುಂದಿನ ಆರೇಳು ತಿಂಗಳಲ್ಲಿ ಪುಷ್ಕರ್ ಬರೊಬ್ಬರಿ 5-6 ಚಿತ್ರಗಳನ್ನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ನೂರು ಕೋಟಿಗೂ ಹೆಚ್ಚು ಬಂಡವಾಳವನ್ನ ಸಿನಿಮಾಗಳ ಮೇಲೆ ಹೂಡಿದ್ದಾರೆ.

ಕೆ.ಜಿ.ಎಫ್ ಸಿನಿಮಾ ಸ್ಫೂರ್ತಿಯಿಂದ ಈ ರಿಸ್ಕ್
ಅವನೇ ಶ್ರೀಮನ್ ನಾರಾಯಣ ಸಿನಿಮಾ ಮೇಲೆ 80ಕೋಟಿಯಷ್ಟು ದೊಡ್ಡ ಬಜೆಟ್ ನ ರಿಸ್ಕ್ ತಗೆದುಕೊಂಡಿದ್ದರು, ಚಿತ್ರದ ಕಥೆ ಮತ್ತು ಮೇಕಿಂಗ್ ಅಷ್ಟೇ ಕ್ವಾಲಿಟಿಯಾಗಿ ಮೂಡಿ ಬಂದಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ದೇಶದಾದ್ಯಂತ ಸೃಷ್ಟಿಸಿದ ಸಂಚಲನ ಮತ್ತು ಆ ಚಿತ್ರವನ್ನ ನಿರ್ಮಿಸಿದ್ದ ರೀತಿ ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದೆ. ಅದೇ ಸ್ಫೂರ್ತಿಯಲ್ಲಿ, ಅಂತಹದ್ದೇ ಮ್ಯಾಜಿಕ್ ರಕ್ಷಿತ್ ಶೆಟ್ಟಿ ಸಿನಿಮಾನೂ ಮಾಡುತ್ತೆ. ಒಳ್ಳೆಯ ಯೂನಿವರ್ಸಲ್ ಕಥೆ, ಒಳ್ಳೆಯ ಸ್ಟಾರ್ ಕಾಸ್ಟ್, ಕ್ವಾಲಿಟಿ ಮೇಕಿಂಗ್ ಇವೆಲ್ಲದ್ರ ಜೊತೆಗೆ ಎಲ್ಲಾ ಕಡೆ ಸಲ್ಲುವ, ಎಲ್ಲಾ ಕಾಲಕ್ಕೂ ಸಲ್ಲುವ ರಂಜನೀಯ ಅಂಶಗಳನ್ನ ಹದವಾಗಿ ಮಿಶ್ರಣಗೊಳಿಸಿದ್ರೆ, ಸಾಕು ಸಿನಿಮಾ ವರ್ಕೌಟ್ ಆಗುತ್ತೆ. ಗೆದ್ದೆ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿ ಅವನೇ ಶ್ರೀಮನ್ ನಾರಾಯಣನ ಮೇಲೆ ಅಷ್ಟು ಕೋಟಿ ಸುರಿದಿದ್ದಾರೆ.
ಕಿರಿಕ್ ಪಾರ್ಟಿ ರಿಲೀಸ್ ಡೇಟ್ಗೆ ಶ್ರೀಮನ್ ನಾರಾಯಣ ರಿಲೀಸ್

ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡಿ ದೊಡ್ಡ ಸಕ್ಸಸ್ ಪಡೆದಿದ್ದ ಕಿರಿಕ್ ಪಾರ್ಟಿ ರಿಲೀಸ್ ಆದ ಅದೃಷ್ಟದ ಡೇಟ್ಗೆನೇ ಅವನೇ ಶ್ರೀಮನ್ ನಾರಾಯಣ ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದ್ದು, ಆಗ್ಲೇ ನಾವು ಇದೇ ಡಿಸೆಂಬರ್ 27ಕ್ಕೆ ವರ್ಲ್ಡ್ ವೈಡ್ ಸಿನಿಮಾವನ್ನ ರಿಲೀಸ್ ಮಾಡ್ತೀವಿ ಅಂತ ಅನೌನ್ಸ್ ಮಾಡಿದೆ.
ಅವನೇ ಶ್ರೀಮನ್ ನಾರಾಯಣದ ಮೈನ್ ಸ್ಟ್ರೆಂಥ್ ಅಂದ್ರೆ ಅದು ರಕ್ಷಿತ್ ಶೆಟ್ಟಿ ಒಬ್ಬರೇ, ನೇಮೂ ಫೇಮೂ ಇರೋದು ಇವರೊಬ್ಬರದೇ. ಅದ್ರೆ ಜೊತೆಗೆ ಪುಷ್ಕರ್ ಫಿಲಂಸ್ ಬ್ಯಾನರ್ ವಿಚಾರವಾಗಿ ಹೆಸರು ಮಾಡಿದೆ. ಅದು ಬಿಟ್ರೆ, ಸಚಿನ್ ರವಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ, ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿ ನೆಚ್ಚಿನ ಸಂಗೀತ ನಿರ್ದೇಶಕನಾಗಿರೋದಿಂದ, ಈ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ವರ್ಕೌಟ್ ಆಗೋ ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ಬಾಲಾಜಿ ಮೋಹನ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂದ್ದಾರೆ.

ಕೆ.ಜಿ.ಎಫ್ ಹಿಂದೆ ಬಂದ ಕುರುಕ್ಷೇತ್ರ, ಪೈಲ್ವಾನ್ ವರ್ಕ್ ಆಗ್ಲಿಲ್ಲ
ಅಂದ್ಹಾಗೆ ಕೆ.ಜಿ.ಎಫ್ ಸಿನಿಮಾದ ಪ್ಯಾನ್ ಇಂಡಿಯಾ ಸಕ್ಸಸ್ ನೋಡಿದ್ಮೇಲೆ, ಅದೇ ತರಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಭರದಲ್ಲಿ, ಕಿಚ್ಚ ಸುದೀಪ್ ಪೈಲ್ವಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರಗಳನ್ನ ಬಹುಭಾಷೆಯಲ್ಲಿ ರಿಲೀಸ್ ಮಾಡಿದ್ರೂ, ಆದ್ರೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಈ ಎರಡೂ ಚಿತ್ರಗಳು ವರ್ಕೌಟ್ ಆಗ್ಲಿಲ್ಲ. ಕೆ.ಜಿ.ಎಫ್ ಸಿನಿಮಾಗಿದ್ದ ಕಂಟೆಂಟ್ ಕ್ವಾಲಿಟಿಯಾಗ್ಲಿ, ಮೇಕಿಂಗ್ ಕ್ವಾಲಿಟಿಯಾಗ್ಲಿ ಈ ಚಿತ್ರಗಳಲ್ಲಿ ಇರಲಿಲ್ಲ ಅನ್ನೋ ರೆಸ್ಪಾನ್ಸ್ ರಿಸಲ್ಟ್ ಆಚೆ ಬಂದಾಯ್ತು.
ಅವನೇ ಶ್ರೀಮನ್ನಾರಾಯಣ ಏನಾಗಬಹುದು…?

ಯಶ್ ಎರಡು ವರ್ಷದ ಪರಿಶ್ರಮಕ್ಕೆ ಕೆ.ಜಿ.ಎಫ್ ಪ್ಯಾನ್ ಇಂಡಿಯಾ ಸಕ್ಸಸ್ ಕೊಟ್ಟಿತ್ತು. ಆದ್ರೆ ದರ್ಶನ್, ಸುದೀಪ್ ಅಂತಹ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವ್ವೆಲ್ ನಲ್ಲಿ ಮಕ್ಕಾಡೆ ಮಲಗಿದ್ವು. ಹೀಗಿರೋವಾಗ ಅದ್ರ ಬೆನ್ನಿಗೇನೇ ಬರ್ತಿರೋ ಅವನೇ ಶ್ರೀಮನ್ ನಾರಾಯಣ ಸಿನಿಮಾ ಏನಾಗಬಹುದು ಅನ್ನೋ ಪ್ರಶ್ನೆಗಳು ಈಗ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ಅವನೇ ಶ್ರೀಮನ್ ನಾರಾಯಣ ನಿರ್ಮಾಪಕರು ತೆಗೆದುಕೊಂಡಿರೋ ರಿಸ್ಕ್ ಕಂಡು ಬೆಚ್ಚಿ ಬಿದ್ದಿದೆ. ಕೆ.ಜಿ.ಎಫ್ ಹುಟ್ಟಿಸಿದ್ದ ಭರವಸೆ, ವಿಸ್ತರಿಸಿರೋ ಮಾರುಕಟ್ಟೆಯನ್ನ, ಲಾಸ್ಟ್ ಎರಡು ಸಿನಿಮಾಗಳ ಸೋಲು ಕುಗ್ಗಿಸಿವೆ. ಇದನ್ನ ಕಂಡು ಚಿತ್ರರಂಗ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಹೆದರಿ ನಿಂತಿದೆ. ಇಂತಹ ಸಮಯದಲ್ಲಿ ಅವನೇ ಶ್ರೀಮನ್ ನಾರಾಯಣ ಚಿತ್ರತಂಡ ನಾವು ಕೆಜಿಎಫ್ ಗಿಂತ ಯಾವುದ್ರಲ್ಲೂ ಕಡಿಮೆಯಿಲ್ಲ. ನಮ್ಮ ಸಿನಿಮಾ ಅವ್ರಿಗಿಂತ ಒಂದು ಪಟ್ಟು ಜಾಸ್ತೀನಿ ಅನ್ನೋ ಓವರ್ ಕಾನ್ಫಿಡೆನ್ಸ್ ನಲ್ಲಿದೆ.
ಯಡವಟ್ಟಾದ್ರೆ ಬೀದಿಗೆ ಬರ್ತಾರೆ ನಿರ್ಮಾಪಕರು

ಅವನೇ ಶ್ರೀಮನ್ ನಾರಾಯಣ ಸಿನಿಮಾ ನಿರ್ಮಾಪಕರು ಅಂದುಕೊಂಡಂತೆ ಆಗಲಿಲ್ಲ ಅಂದ್ರೆ, ಖಂಡಿತ ನಿರ್ಮಾಪಕರು ಬೀದಿಗೆ ಬರ್ತಾರೆ. ಇರೋಬರೋದನ್ನೆಲ್ಲಾ ಈ ಸಿನಿಮಾ ಮೇಲೆ ಹಾಕಿ, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರೋ ಪುಷ್ಕರ್ ಮಲ್ಲಿಕಾರ್ಜುನಯ್ಯರಿಗೆ, ಬರೀ ಕನ್ನಡದಲ್ಲಿ ಮಾತ್ರ ಸಿನಿಮಾ ವರ್ಕೌಟ್ ಆದ್ರೂ ಕಷ್ಟ. ಶತಾಯಗತಾಯ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಚೆನ್ನಾಗಿ ಓಡಿದ್ರೆ ಮಾತ್ರ ಇವ್ರು ಹಾಕಿದ ಬಂಡವಾಳ ವಾಪಸ್ ಬರುತ್ತೆ. ಲಾಭ ಬರುತ್ತೆ. ಇಲ್ಲವಾದಲ್ಲಿ, ಭಾರಿ ತೊಂದರೆ ಎದುರಾಗುತ್ತೆ. ಸಿನಿಮಾ ನಿರ್ಮಾಣದ ಹಂತದಲ್ಲೇ ಕನ್ನಡದವತರಣಿಕೆಯ ಸ್ಯಾಟಿಲೈಟ್ ಮತ್ತಿ ಡಿಜಿಟಲ್ ರೈಟ್ಸ್ ನ ಸೇಲ್ ಮಾಡಿರೋ ಪುಷ್ಕರ್, ಪರಭಾಷೆಯ ಸ್ಯಾಟಿಲೈಟ್ ಮತ್ತು ಡಿಜಿಟಲ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಸಿನಿಮಾ ರಿಲೀಸ್ಗೂ ಎರಡು ತಿಂಗಳ ಮೊದ್ಲೇ ಎಲ್ಲಾ ಭಾಷೆಯ ವಿತರಣೆಯ ಹಕ್ಕು, ಡಿಜಿಟಲ್, ಸ್ಯಾಟಿಲೈಟ್ ಹಕ್ಕನ್ನ ವ್ಯಾಪಾರ ಮಾಡಿಕೊಂಡು, ಪ್ರತಿಭಾಷೆಯಲ್ಲೂ ಪ್ರಚಾರ ಕಾರ್ಯವನ್ನ ಆರಂಭಿಸಿದ್ರು, ಆದ್ರೆ ಹಾಗೇ ಕಂಪೇರ್ ಮಾಡೋದಾದ್ರೆ, ಅವನೇ ಶ್ರೀಮನ್ ನಾರಾಯಣ ತಂಡದಿಂದ ಅಂತಹ ಯಾವುದೇ ದೊಡ್ಡಮಟ್ಟದ ಪ್ರೋಗ್ರೇಸೀವ್ ಕೆಲಸ ಆಗಿಲ್ಲ. ಹಾಗಾಗಿ, ಮೂಲಗಳು ಹೇಳೋ ಪ್ರಕಾರ ಈ ಚಿತ್ರದ ಕಂಟೆಂಟ್ ಚೆನ್ನಾಗಿದೇ ಆದ್ರೂ, ಈ ಚಿತ್ರತಂಡ ಮಾಡಿರೋ ಸಾಹಸ ಪ್ರಯೋಗಕ್ಕೆ, ಇವರು ನಿರೀಕ್ಷಿಸಿರೋ 300ಕೋಟಿ ಬರೋದು ದೂರದ ಮಾತು ಅಂತ ಗಾಂಧಿನಗರದ ಸಿನಿಮಾ ಬ್ಯುಸಿನೆಸ್ ಪಂಡಿತರು ಹೇಳ್ತಿದ್ದಾರೆ. ಅದೇನೆ ಇದ್ರೂ ಈ ವರ್ಷಾಂತ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಆದ್ರೆ ಅದು ಪಾಸಿಟೀವಾ..? ನೆಗೆಟೀವಾ..? ಅನ್ನೋದೇ ಸದ್ಯ ಗಾಂಧಿನಗರವನ್ನ ಕಾಡ್ತಿರೋ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...