Homeಚಳವಳಿಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ.

- Advertisement -
- Advertisement -

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

ಅನುವಾದ: ನಿಖಿಲ್ ಕೋಲ್ಪೆ

“ಇತ್ತೀಚಿನ ದಿನಗಳಲ್ಲಿ ಭಾರತದಿಂದ ಹೊರಬೀಳುತ್ತಿರುವ ಸುದ್ದಿಗಳು ಚಿಂತೆಗೀಡುಮಾಡುವಂತವುಗಳು. ಮುಸುಕುಧಾರಿಗಳ ಗುಂಪೊಂದು ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನುಗ್ಗಿತು. ಗುಂಪಿನವರು ಪೊಲೀಸರ ಯಾವುದೇ ಮಧ್ಯಪ್ರವೇಶವೂ ಇಲ್ಲದೇ, ಗಂಟೆಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾ ದಾಂಧಲೆ ಎಬ್ಬಿಸಿದರು. ದಾಳಿಗೆ ಒಳಗಾದವರು ವಿದ್ಯಾರ್ಥಿ ಕಾರ್ಯಕರ್ತರು ಎಂಬುದು ಸ್ಪಷ್ಟವಾದರೂ, ಸರಕಾರದಿಂದ ನೇಮಕವಾದ ಆಡಳಿತವಾಗಲೀ, ಪೊಲೀಸರಾಗಲೀ, ಅವರಿಗೆ ರಕ್ಷಣೆ ನೀಡಲು ಏನನ್ನೂ ಮಾಡಲಿಲ್ಲ. ಇದು ನಡೆದದ್ದು ಸಾಮಾನ್ಯವಾಗಿ ಎಲ್ಲರೂ, ಯಾವಾಗಲೂ ಕಟ್ಟೆಚ್ಚರದಲ್ಲಿರುವ ದೇಶದ ರಾಜಧಾನಿಯಲ್ಲಿ. ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಕೂಡಾ ವಸ್ತುಶಃ ರಣಾಂಗಣಗಳಾಗಿರುವುದು- ಯೋಜಿತವಾಗಿ ಅಲ್ಲದಿದ್ದರೂ, ನಿರ್ಲಕ್ಷದಿಂದಲಾದರೂ ಸರಕಾರವು ಭಿನ್ನಮತವನ್ನು ದಮನಿಸುತ್ತಿದೆ ಎಂಬ ಆರೋಪಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ರಘುರಾಂ ರಾಜನ್

ಇದಕ್ಕಾಗಿ ನಾಯಕತ್ವವನ್ನು ದೂರುವುದು ಸುಲಭ. ಆದರೆ, ನಮ್ಮಂತಹ ಹೆಮ್ಮೆಯ ಮತ್ತು ಬಹುಹಂತದ ಪ್ರಜಾಪ್ರಭುತ್ವದಲ್ಲಿ ನಾವು, ಸಾರ್ವಜನಿಕರು ಕೂಡಾ ಜವಾಬ್ದಾರಿ ಹೊರಬೇಕಾಗುತ್ತದೆ. ಕೊನೆಗೂ, ಅವರ ವಿಭಜನಕಾರಿ ಪ್ರಣಾಳಿಕೆಯನ್ನು ಸಮ್ಮತಿಸಿ, ಈ ನಾಯಕರನ್ನು ಅಧಿಕಾರಕ್ಕೇರಿಸಿದವರು ಇದೇ ಸಾರ್ವಜನಿಕರಾಗಿದ್ದು, ಅದನ್ನೇ ಈ ನಾಯಕರುಗಳು ಮುನ್ನುಗ್ಗಲು ಆದೇಶ ಎಂದು ಭಾವಿಸಿದ್ದಾರೆ. ಅವರು ಆರ್ಥಿಕ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ಎಂದು ನಮಲ್ಲಿ ಕೆಲವರು ಆಶಿಸಿದ್ದರು. ನಮ್ಮದೇ ಪೂರ್ವಗ್ರಹವನ್ನು ಕೆರೆದು ಉದ್ರೇಕಿಸುವ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ರಾಜಕೀಯವು ಬೇರಾರದ್ದೋ ಸಮಸ್ಯೆ ಎಂದು ಭಾವಿಸಿ ನಿರ್ಲಿಪ್ತವಾಗಿದ್ದೆವು. ಕೆಲವರನ್ನು ನಿರ್ದಯವಾಗಿ ದಂಡಿಸಿ, ಉದಾಹರಣೆಗಳನ್ನಾಗಿ ಮಾಡಲಾಗಿರುವುದರಿಂದ ಟೀಕಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಮಲ್ಲಿ ಕೆಲವರು ಭಯಪಟ್ಟೆವು. ಕೊನೆಗೂ, ಪ್ರಜಾಪ್ರಭುತ್ವವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದೊಂದು ಜವಾಬ್ದಾರಿ ಕೂಡಾ ಹೌದು- ಚುನಾವಣೆಯ ದಿನ ಮಾತ್ರವಲ್ಲ, ಪ್ರತಿದಿನವೂ ನಮ್ಮ ಗಣರಾಜ್ಯದ ಪಾಲಕರಾಗಿರಬೇಕಾದ ಹೊರೆ.

ಅದೃಷ್ಟವಶಾತ್, ಭಾರತದಿಂದ ಹೊರಹೊಮ್ಮುತ್ತಿರುವ ಸುದ್ದಿಗಳು ಆಶಾದಾಯಕವೂ ಆಗಿವೆ. ವೈವಿಧ್ಯಮಯ ನಂಬಿಕೆಗಳ ಯುವಜನರು, ಹಿಂದೂಗಳು ಮತ್ತು ಮುಸ್ಲಿಮರು ರಾಷ್ಟ್ರಧ್ವಜದ ಹಿಂದೆ ಕೈಯಲ್ಲಿ ಕೈಹಾಕಿ ಸಾಗುತ್ತಾ, ರಾಜಕೀಯ ನಾಯಕರು ತಮ್ಮ ಸ್ವಂತ ಲಾಭಕ್ಕಾಗಿ ಪ್ರಚೋದಿಸುತ್ತಿರುವ ಕೃತಕ ವಿಭಜನೆಗಳನ್ನು ತಿರಸ್ಕರಿಸುತ್ತಿರುವಾಗ- ಅದು ನಮ್ಮ ಸಂವಿಧಾನದ ಬೆಳಕು ಇನ್ನೂ ಕೂಡಾ ಉಜ್ವಲವಾಗಿ ಬೆಳಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸರಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ತಾವು ವಿಶ್ವಸನೀಯವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ತಮ್ಮ ಕನಸಿನ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ- ನಮಗೆ ಸ್ವಾತಂತ್ರ‍್ಯ ದೊರಕಿಸಿಕೊಡಲು ಕೆಲವು ತಲೆಮಾರುಗಳು ಮಾಡಿರುವ ತ್ಯಾಗಗಳು ಇನ್ನೂ ಕೂಡಾ ನಮ್ಮನ್ನು ಪ್ರೇರೇಪಿಸಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ.

ಚುನಾವಣಾಧಿಕಾರಿಯೊಬ್ಬರು, ತನ್ನ ಕುಟುಂಬಕ್ಕೆ ಇರುವ ಕಿರುಕುಳದ ಭಯದ ಹೊರತಾಗಿಯೂ ನಿಷ್ಪಕ್ಷಪಾತಿಯಾಗಿ ಕೆಲಸಮಾಡಿದಾಗ, ಪ್ರಾಮಾಣಿಕತೆ ಮತ್ತು ದೃಢತೆಗಳು ಇನ್ನೂ ಸಂಪೂರ್ಣವಾಗಿ ಬೆದರಿಲ್ಲ ಎಂಬುದನ್ನು ಸಿದ್ಧಪಡಿಸುತ್ತದೆ. ತಮ್ಮ ಬಹಳಷ್ಟು ಸಹೋದ್ಯೋಗಿಗಳು ಸರಕಾರ ಒತ್ತಡಕ್ಕೆ ಶರಣಾಗಿರುವ ಹೊತ್ತಿನಲ್ಲಿ, ಮಾಧ್ಯಮದ ಕೆಲವು ಜನರು ಸತ್ಯವನ್ನು ಹೊರತರಲು ದಣಿವರಿಯದೇ ದುಡಿಯುತ್ತಿರುವಾಗ- ನಮ್ಮ ಗಣರಾಜ್ಯದ ಕರ್ತವ್ಯಶೀಲ ಪ್ರಜೆಯಾಗಿ ಹೇಗಿರಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ.

ಚುನಾವಣಾಧಿಕಾರಿ ಅಶೋಕ್‌ ಲಾವಾಸ

ಬಾಲಿವುಡ್ ನಟಿಯೊಬ್ಬರು ತನ್ನ ಇತ್ತೀಚಿನ ಚಲನಚಿತ್ರದ ಯಶಸ್ಸನ್ನು ಅಪಾಯಕ್ಕೆ ತಳ್ಳಿಯೂ, ಜೆಎನ್‌ಯು ದಾಳಿಯಲ್ಲಿ ಹಲ್ಲೆಗೀಡಾದವರನ್ನು ಭೇಟಿಯಾಗುವುದರ ಮೂಲಕ ಮೌನ ಪ್ರತಿಭಟನೆ ದಾಖಲಿಸುತ್ತಾರೆ ಎಂದಾದರೆ- ಅವರು, ದೇಶದಲ್ಲಿ ಯಾವುದೆಲ್ಲಾ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಯೋಚಿಸಿ ಲೆಕ್ಕಹಾಕುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ.

ಇವುಗಳಿಂದ ನಾವು ಪ್ರೇರಿತರಾಗದಿದ್ದರೆ, ಖಂಡಿತವಾಗಿಯೂ ನಾವು ಸಿನಿಕರಾಗಿರಲೇಬೇಕು. ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರು ಜೀವಕೊಟ್ಟ ಭಾರತಕ್ಕಾಗಿ ಇಂದು ಹೋರಾಡುತ್ತಿರುವವರು ಅವರೇ. ಅವರು ಸ್ವಾತಂತ್ರ‍್ಯ ಗಳಿಸಲು ಹೋರಾಡುತ್ತಿಲ್ಲ; ಬದಲಾಗಿ, ಆ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. “ಸ್ವಾತಂತ್ರ‍್ಯದ ಸ್ವರ್ಗದಲ್ಲಿ, ಓ ನನ್ನ ದೇವರೇ, ನನ್ನ ದೇಶವು ಎದ್ದೇಳಲಿ” ಎಂಬ ಕವಿ ರವೀಂದ್ರನಾಥ ಠಾಗೋರರ ಕನಸು ಇನ್ನು ಮುಂದೆಯೂ ನನಸಾಗಿ ಉಳಿಯಲಿದೆ ಎಂಬ ಆಶಾವಾದವನ್ನು ಅವರು ನಮಗೆ ನೀಡುತ್ತಿದ್ದಾರೆ.

ಜನವರಿ 26ರಂದು ಭಾರತವು ಬಹಳಷ್ಟು ಆದರ್ಶಗಳು ಮತ್ತು ಉದಾರವಾದವನ್ನು ತುಂಬಿಕೊಂಡಂತಹ ಸಂವಿಧಾನವನ್ನು ಪಡೆದುಕೊಂಡುದರ 70ನೇ ವರ್ಷಾಚರಣೆಯಾಗಿದೆ. ನಮ್ಮ ಸಂವಿಧಾನವು ಪರಿಪೂರ್ಣವಾಗಿರಲಿಲ್ಲ. ಆದರೆ, ವಿಚ್ಛಿದ್ರಕಾರಿ ವಿಭಜನೆಯ ಭಯಾನಕತೆಯಿಂದ ಹೊರಬಂದು, ಭಾರತವು ಹೆಚ್ಚು ಏಕೀಕೃತವಾದ ಭವಿಷ್ಯವನ್ನು ಹೊಂದಿರಬೇಕು ಎಂದು ಬಯಸಿದ್ದಂತಹ ಸುಶಿಕ್ಷಿತರಾದ ಪುರುಷರು ಮತ್ತು ಮಹಿಳೆಯರು ಅದನ್ನು ರೂಪಿಸಿದರು. ಭಾರತವು ಬಹಳಷ್ಟು ಒಳ್ಳೆಯದನ್ನು ಮಾಡಲು ಸಮರ್ಥವಾಗಿದೆ; ಆದರೆ, ಅದು ಭಯಾನಕವಾದ ಸ್ವಯಂವಿನಾಶಕಾರಿ ಶಕ್ತಿಗಳನ್ನೂ ಹುಟ್ಟುಹಾಕಬಹುದು ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇದನ್ನು ನಮ್ಮ ಕೆಲವು ಈಗಿನ ನಾಯಕರು ಅರ್ಥಮಾಡಿಕೊಂಡರೆ ಒಳ್ಳೆಯದು. ಆದುದರಿಂದಲೇ ಅವರು ಸಮಾನ ಉದ್ದೇಶ ಹಾಗೂ ಆತ್ಮಗೌರವಗಳ ಚೈತನ್ಯದ ಮೂಲಕ ನಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಹೊಮ್ಮಿಸಬಲ್ಲ ದಾಖಲೆಯಾಗಿರುವ ಸಂವಿಧಾನವನ್ನು ರೂಪಿಸಲೆತ್ನಿಸಿದರು. ನಮ್ಮೊಳಗಿನ ಪ್ರತಿಯೊಬ್ಬರಲ್ಲೂ ಈ ಚೈತನ್ಯವು ಉರಿಯುತ್ತಿರಲಿ ಎಂಬ ಮರುಸಂಕಲ್ಪವನ್ನು ಮಾಡುವುದಕ್ಕಿಂತ ಹೆಚ್ಚಿನ ನಿರ್ಧಾರ ಈ ಹೊಸ ದಶಕದಲ್ಲಿ ಬೇರೇನಿದೆ? ಈ ಸಂಕಷ್ಟದ ಕಾಲದಲ್ಲಿ ನಮ್ಮ ದೇಶದ ನಿರ್ಮಾತೃಗಳು ಸಂಕಲ್ಪಿಸಿದ್ದಂತೆ ಭಾರತವನ್ನು ಸಹಿಷ್ಣುತೆ ಮತ್ತು ಗೌರವದ ಉಜ್ವಲ ಉದಾಹರಣೆಯನ್ನಾಗಿ ರೂಪಿಸಲು ಜೊತೆಯಾಗಿ ಕೆಲಸ ಮಾಡೋಣ. ಅಸಹನೆಯ ಪ್ರಪಂಚದಲ್ಲಿ ದಾರಿದೀಪವಾಗೋಣ. ಹೊಸ ದಶಕದಲ್ಲಿ ಇದುವೇ ನಮ್ಮ ಕಾರ್ಯವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...