Homeಚಳವಳಿಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ.

- Advertisement -
- Advertisement -

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

ಅನುವಾದ: ನಿಖಿಲ್ ಕೋಲ್ಪೆ

“ಇತ್ತೀಚಿನ ದಿನಗಳಲ್ಲಿ ಭಾರತದಿಂದ ಹೊರಬೀಳುತ್ತಿರುವ ಸುದ್ದಿಗಳು ಚಿಂತೆಗೀಡುಮಾಡುವಂತವುಗಳು. ಮುಸುಕುಧಾರಿಗಳ ಗುಂಪೊಂದು ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನುಗ್ಗಿತು. ಗುಂಪಿನವರು ಪೊಲೀಸರ ಯಾವುದೇ ಮಧ್ಯಪ್ರವೇಶವೂ ಇಲ್ಲದೇ, ಗಂಟೆಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾ ದಾಂಧಲೆ ಎಬ್ಬಿಸಿದರು. ದಾಳಿಗೆ ಒಳಗಾದವರು ವಿದ್ಯಾರ್ಥಿ ಕಾರ್ಯಕರ್ತರು ಎಂಬುದು ಸ್ಪಷ್ಟವಾದರೂ, ಸರಕಾರದಿಂದ ನೇಮಕವಾದ ಆಡಳಿತವಾಗಲೀ, ಪೊಲೀಸರಾಗಲೀ, ಅವರಿಗೆ ರಕ್ಷಣೆ ನೀಡಲು ಏನನ್ನೂ ಮಾಡಲಿಲ್ಲ. ಇದು ನಡೆದದ್ದು ಸಾಮಾನ್ಯವಾಗಿ ಎಲ್ಲರೂ, ಯಾವಾಗಲೂ ಕಟ್ಟೆಚ್ಚರದಲ್ಲಿರುವ ದೇಶದ ರಾಜಧಾನಿಯಲ್ಲಿ. ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಕೂಡಾ ವಸ್ತುಶಃ ರಣಾಂಗಣಗಳಾಗಿರುವುದು- ಯೋಜಿತವಾಗಿ ಅಲ್ಲದಿದ್ದರೂ, ನಿರ್ಲಕ್ಷದಿಂದಲಾದರೂ ಸರಕಾರವು ಭಿನ್ನಮತವನ್ನು ದಮನಿಸುತ್ತಿದೆ ಎಂಬ ಆರೋಪಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ರಘುರಾಂ ರಾಜನ್

ಇದಕ್ಕಾಗಿ ನಾಯಕತ್ವವನ್ನು ದೂರುವುದು ಸುಲಭ. ಆದರೆ, ನಮ್ಮಂತಹ ಹೆಮ್ಮೆಯ ಮತ್ತು ಬಹುಹಂತದ ಪ್ರಜಾಪ್ರಭುತ್ವದಲ್ಲಿ ನಾವು, ಸಾರ್ವಜನಿಕರು ಕೂಡಾ ಜವಾಬ್ದಾರಿ ಹೊರಬೇಕಾಗುತ್ತದೆ. ಕೊನೆಗೂ, ಅವರ ವಿಭಜನಕಾರಿ ಪ್ರಣಾಳಿಕೆಯನ್ನು ಸಮ್ಮತಿಸಿ, ಈ ನಾಯಕರನ್ನು ಅಧಿಕಾರಕ್ಕೇರಿಸಿದವರು ಇದೇ ಸಾರ್ವಜನಿಕರಾಗಿದ್ದು, ಅದನ್ನೇ ಈ ನಾಯಕರುಗಳು ಮುನ್ನುಗ್ಗಲು ಆದೇಶ ಎಂದು ಭಾವಿಸಿದ್ದಾರೆ. ಅವರು ಆರ್ಥಿಕ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ಎಂದು ನಮಲ್ಲಿ ಕೆಲವರು ಆಶಿಸಿದ್ದರು. ನಮ್ಮದೇ ಪೂರ್ವಗ್ರಹವನ್ನು ಕೆರೆದು ಉದ್ರೇಕಿಸುವ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ರಾಜಕೀಯವು ಬೇರಾರದ್ದೋ ಸಮಸ್ಯೆ ಎಂದು ಭಾವಿಸಿ ನಿರ್ಲಿಪ್ತವಾಗಿದ್ದೆವು. ಕೆಲವರನ್ನು ನಿರ್ದಯವಾಗಿ ದಂಡಿಸಿ, ಉದಾಹರಣೆಗಳನ್ನಾಗಿ ಮಾಡಲಾಗಿರುವುದರಿಂದ ಟೀಕಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಮಲ್ಲಿ ಕೆಲವರು ಭಯಪಟ್ಟೆವು. ಕೊನೆಗೂ, ಪ್ರಜಾಪ್ರಭುತ್ವವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದೊಂದು ಜವಾಬ್ದಾರಿ ಕೂಡಾ ಹೌದು- ಚುನಾವಣೆಯ ದಿನ ಮಾತ್ರವಲ್ಲ, ಪ್ರತಿದಿನವೂ ನಮ್ಮ ಗಣರಾಜ್ಯದ ಪಾಲಕರಾಗಿರಬೇಕಾದ ಹೊರೆ.

ಅದೃಷ್ಟವಶಾತ್, ಭಾರತದಿಂದ ಹೊರಹೊಮ್ಮುತ್ತಿರುವ ಸುದ್ದಿಗಳು ಆಶಾದಾಯಕವೂ ಆಗಿವೆ. ವೈವಿಧ್ಯಮಯ ನಂಬಿಕೆಗಳ ಯುವಜನರು, ಹಿಂದೂಗಳು ಮತ್ತು ಮುಸ್ಲಿಮರು ರಾಷ್ಟ್ರಧ್ವಜದ ಹಿಂದೆ ಕೈಯಲ್ಲಿ ಕೈಹಾಕಿ ಸಾಗುತ್ತಾ, ರಾಜಕೀಯ ನಾಯಕರು ತಮ್ಮ ಸ್ವಂತ ಲಾಭಕ್ಕಾಗಿ ಪ್ರಚೋದಿಸುತ್ತಿರುವ ಕೃತಕ ವಿಭಜನೆಗಳನ್ನು ತಿರಸ್ಕರಿಸುತ್ತಿರುವಾಗ- ಅದು ನಮ್ಮ ಸಂವಿಧಾನದ ಬೆಳಕು ಇನ್ನೂ ಕೂಡಾ ಉಜ್ವಲವಾಗಿ ಬೆಳಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸರಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ತಾವು ವಿಶ್ವಸನೀಯವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ತಮ್ಮ ಕನಸಿನ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ- ನಮಗೆ ಸ್ವಾತಂತ್ರ‍್ಯ ದೊರಕಿಸಿಕೊಡಲು ಕೆಲವು ತಲೆಮಾರುಗಳು ಮಾಡಿರುವ ತ್ಯಾಗಗಳು ಇನ್ನೂ ಕೂಡಾ ನಮ್ಮನ್ನು ಪ್ರೇರೇಪಿಸಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ.

ಚುನಾವಣಾಧಿಕಾರಿಯೊಬ್ಬರು, ತನ್ನ ಕುಟುಂಬಕ್ಕೆ ಇರುವ ಕಿರುಕುಳದ ಭಯದ ಹೊರತಾಗಿಯೂ ನಿಷ್ಪಕ್ಷಪಾತಿಯಾಗಿ ಕೆಲಸಮಾಡಿದಾಗ, ಪ್ರಾಮಾಣಿಕತೆ ಮತ್ತು ದೃಢತೆಗಳು ಇನ್ನೂ ಸಂಪೂರ್ಣವಾಗಿ ಬೆದರಿಲ್ಲ ಎಂಬುದನ್ನು ಸಿದ್ಧಪಡಿಸುತ್ತದೆ. ತಮ್ಮ ಬಹಳಷ್ಟು ಸಹೋದ್ಯೋಗಿಗಳು ಸರಕಾರ ಒತ್ತಡಕ್ಕೆ ಶರಣಾಗಿರುವ ಹೊತ್ತಿನಲ್ಲಿ, ಮಾಧ್ಯಮದ ಕೆಲವು ಜನರು ಸತ್ಯವನ್ನು ಹೊರತರಲು ದಣಿವರಿಯದೇ ದುಡಿಯುತ್ತಿರುವಾಗ- ನಮ್ಮ ಗಣರಾಜ್ಯದ ಕರ್ತವ್ಯಶೀಲ ಪ್ರಜೆಯಾಗಿ ಹೇಗಿರಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ.

ಚುನಾವಣಾಧಿಕಾರಿ ಅಶೋಕ್‌ ಲಾವಾಸ

ಬಾಲಿವುಡ್ ನಟಿಯೊಬ್ಬರು ತನ್ನ ಇತ್ತೀಚಿನ ಚಲನಚಿತ್ರದ ಯಶಸ್ಸನ್ನು ಅಪಾಯಕ್ಕೆ ತಳ್ಳಿಯೂ, ಜೆಎನ್‌ಯು ದಾಳಿಯಲ್ಲಿ ಹಲ್ಲೆಗೀಡಾದವರನ್ನು ಭೇಟಿಯಾಗುವುದರ ಮೂಲಕ ಮೌನ ಪ್ರತಿಭಟನೆ ದಾಖಲಿಸುತ್ತಾರೆ ಎಂದಾದರೆ- ಅವರು, ದೇಶದಲ್ಲಿ ಯಾವುದೆಲ್ಲಾ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಯೋಚಿಸಿ ಲೆಕ್ಕಹಾಕುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ.

ಇವುಗಳಿಂದ ನಾವು ಪ್ರೇರಿತರಾಗದಿದ್ದರೆ, ಖಂಡಿತವಾಗಿಯೂ ನಾವು ಸಿನಿಕರಾಗಿರಲೇಬೇಕು. ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರು ಜೀವಕೊಟ್ಟ ಭಾರತಕ್ಕಾಗಿ ಇಂದು ಹೋರಾಡುತ್ತಿರುವವರು ಅವರೇ. ಅವರು ಸ್ವಾತಂತ್ರ‍್ಯ ಗಳಿಸಲು ಹೋರಾಡುತ್ತಿಲ್ಲ; ಬದಲಾಗಿ, ಆ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. “ಸ್ವಾತಂತ್ರ‍್ಯದ ಸ್ವರ್ಗದಲ್ಲಿ, ಓ ನನ್ನ ದೇವರೇ, ನನ್ನ ದೇಶವು ಎದ್ದೇಳಲಿ” ಎಂಬ ಕವಿ ರವೀಂದ್ರನಾಥ ಠಾಗೋರರ ಕನಸು ಇನ್ನು ಮುಂದೆಯೂ ನನಸಾಗಿ ಉಳಿಯಲಿದೆ ಎಂಬ ಆಶಾವಾದವನ್ನು ಅವರು ನಮಗೆ ನೀಡುತ್ತಿದ್ದಾರೆ.

ಜನವರಿ 26ರಂದು ಭಾರತವು ಬಹಳಷ್ಟು ಆದರ್ಶಗಳು ಮತ್ತು ಉದಾರವಾದವನ್ನು ತುಂಬಿಕೊಂಡಂತಹ ಸಂವಿಧಾನವನ್ನು ಪಡೆದುಕೊಂಡುದರ 70ನೇ ವರ್ಷಾಚರಣೆಯಾಗಿದೆ. ನಮ್ಮ ಸಂವಿಧಾನವು ಪರಿಪೂರ್ಣವಾಗಿರಲಿಲ್ಲ. ಆದರೆ, ವಿಚ್ಛಿದ್ರಕಾರಿ ವಿಭಜನೆಯ ಭಯಾನಕತೆಯಿಂದ ಹೊರಬಂದು, ಭಾರತವು ಹೆಚ್ಚು ಏಕೀಕೃತವಾದ ಭವಿಷ್ಯವನ್ನು ಹೊಂದಿರಬೇಕು ಎಂದು ಬಯಸಿದ್ದಂತಹ ಸುಶಿಕ್ಷಿತರಾದ ಪುರುಷರು ಮತ್ತು ಮಹಿಳೆಯರು ಅದನ್ನು ರೂಪಿಸಿದರು. ಭಾರತವು ಬಹಳಷ್ಟು ಒಳ್ಳೆಯದನ್ನು ಮಾಡಲು ಸಮರ್ಥವಾಗಿದೆ; ಆದರೆ, ಅದು ಭಯಾನಕವಾದ ಸ್ವಯಂವಿನಾಶಕಾರಿ ಶಕ್ತಿಗಳನ್ನೂ ಹುಟ್ಟುಹಾಕಬಹುದು ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇದನ್ನು ನಮ್ಮ ಕೆಲವು ಈಗಿನ ನಾಯಕರು ಅರ್ಥಮಾಡಿಕೊಂಡರೆ ಒಳ್ಳೆಯದು. ಆದುದರಿಂದಲೇ ಅವರು ಸಮಾನ ಉದ್ದೇಶ ಹಾಗೂ ಆತ್ಮಗೌರವಗಳ ಚೈತನ್ಯದ ಮೂಲಕ ನಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಹೊಮ್ಮಿಸಬಲ್ಲ ದಾಖಲೆಯಾಗಿರುವ ಸಂವಿಧಾನವನ್ನು ರೂಪಿಸಲೆತ್ನಿಸಿದರು. ನಮ್ಮೊಳಗಿನ ಪ್ರತಿಯೊಬ್ಬರಲ್ಲೂ ಈ ಚೈತನ್ಯವು ಉರಿಯುತ್ತಿರಲಿ ಎಂಬ ಮರುಸಂಕಲ್ಪವನ್ನು ಮಾಡುವುದಕ್ಕಿಂತ ಹೆಚ್ಚಿನ ನಿರ್ಧಾರ ಈ ಹೊಸ ದಶಕದಲ್ಲಿ ಬೇರೇನಿದೆ? ಈ ಸಂಕಷ್ಟದ ಕಾಲದಲ್ಲಿ ನಮ್ಮ ದೇಶದ ನಿರ್ಮಾತೃಗಳು ಸಂಕಲ್ಪಿಸಿದ್ದಂತೆ ಭಾರತವನ್ನು ಸಹಿಷ್ಣುತೆ ಮತ್ತು ಗೌರವದ ಉಜ್ವಲ ಉದಾಹರಣೆಯನ್ನಾಗಿ ರೂಪಿಸಲು ಜೊತೆಯಾಗಿ ಕೆಲಸ ಮಾಡೋಣ. ಅಸಹನೆಯ ಪ್ರಪಂಚದಲ್ಲಿ ದಾರಿದೀಪವಾಗೋಣ. ಹೊಸ ದಶಕದಲ್ಲಿ ಇದುವೇ ನಮ್ಮ ಕಾರ್ಯವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...