Homeಅಂಕಣಗಳುರಾಜೇಂದ್ರ ಚೆನ್ನಿಯವರ 'ಲೋಕವಿಮರ್ಶೆ': ಅಧಿಕಾರಕ್ಕೆ ಪ್ರತಿರೋಧಿಸಲು ಪ್ರೇರೇಪಿಸುವ ಪ್ರಬಂಧಗಳು

ರಾಜೇಂದ್ರ ಚೆನ್ನಿಯವರ ‘ಲೋಕವಿಮರ್ಶೆ’: ಅಧಿಕಾರಕ್ಕೆ ಪ್ರತಿರೋಧಿಸಲು ಪ್ರೇರೇಪಿಸುವ ಪ್ರಬಂಧಗಳು

ಇಂದು ಭಾರತದಲ್ಲಿ ತಲೆದೋರಿರುವ ಸರ್ವಾಧಿಕಾರಿ ಧೋರಣೆಯ ಪ್ರಭುತ್ವಕ್ಕೆ - ಆಡಳಿತ ವ್ಯವಸ್ಥೆಗೆ ಪ್ರತಿಕ್ರಿಯೆಯಾಗಿ ಹಲವು ಪತ್ರಿಕೆಗಳಲ್ಲಿ ಬರೆದಿರುವ ಈ ಲೇಖನಗಳು ಇಂದು ಯುವಜನತೆ ಓದಲೇಬೇಕಿರುವಂತಹವು.

- Advertisement -
- Advertisement -

ರಾಜೇಂದ್ರ ಚೆನ್ನಿ ಕನ್ನಡದ ವಿಶಿಷ್ಟ ಸಂಸ್ಕೃತಿ ಚಿಂತಕರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ವಿಮರ್ಶೆಗಳನ್ನು ಬರೆದಿರುವುದಲ್ಲದೆ, ಪ್ರಸಕ್ತ ಸಾಮಾಜಿಕ ಸನ್ನಿವೇಶದ ಸವಾಲುಗಳನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಮೂಡಿರುವ ಸಾಹಿತ್ಯ ಮತ್ತು ಚಿಂತನೆಗಳಿಗೆ ಒರೆಗಚ್ಚಿ ತಮ್ಮ ಬರಹಗಳ ಮೂಲಕ ಪ್ರತಿಕ್ರಿಯೆ ದಾಖಲಿಸುತ್ತಾ ಬಂದಿರುವವರು.

ರಾಜೇಂದ್ರ ಚೆನ್ನಿ ಅವರ ಬರಹದ ಹರವು ಬಹಳ ವಿಸ್ತಾರವಾದದ್ದು. 2004ರಲ್ಲಿ ಬಂದಿದ್ದ ಅವರ ವಿಮರ್ಶಾ ಪ್ರಬಂಧಗಳ ಸಂಕಲನ ‘ನಡುಹಗಲಿನಲ್ಲಿ ಕಂದೀಲುಗಳು’ವಿನಲ್ಲಿ ಬಾಬಾಬುಡನ್‍ಗಿರಿಯಲ್ಲಿ ಹಿಂದುತ್ವದ ಕೋಮುವಾದಿಗಳು ಸೌಹಾರ್ದವನ್ನು ಕೆಡವಲು ನಡೆಸಿದ್ದ ವಿದ್ಯಮಾನಕ್ಕೆ ಪ್ರತಿರೋಧವನ್ನು ದಾಖಲಿಸುವುದರಿಂದ ಹಿಡಿದು, ಕುವೆಂಪು, ಬೇಂದ್ರೆ, ಕಾರಂತ, ಕುವೆಂಪು, ದೇವನೂರು ಮಹದೇವ, ತೇಜಸ್ವಿ, ಕಂಬಾರ ಮುಂತಾದ ಬರಹಗಾರರ ಸಾಹಿತ್ಯದ ಅವಲೋಕನದೊಂದಿಗೆ, ಚಾಮ್‍ಸ್ಕಿ ರಾಜಕೀಯ ಬರಹಗಳ ವಿರಾಟ್ ಕಥನ, ಅನಂತಮೂರ್ತಿ ಮತ್ತು ಶಶಿ ದೇಶಪಾಂಡೆಯವರ ಸಂದರ್ಶನ ಹೀಗೆ ವೈವಿಧ್ಯಮಯವಾದ ಮತ್ತು ಸಂಸ್ಕೃತಿ ಚಿಂತನೆಯ ಬರಹಗಳಿಂದ ಕೂಡಿತ್ತು.

ಈಗ 2020ರ ಕೊನೆಯ ಭಾಗದಲ್ಲಿ ಮೂಡಿರುವ ‘ಲೋಕವಿಮರ್ಶೆ’ ಕೂಡ ಅಂತಹ ವೈವಿಧ್ಯಮಯ ಬರಹಗಳಿಂದ ಕೂಡಿದೆ. ಹೆಸರೇ ಸೂಚಿಸುವಂತೆ ಇಂದಿನ ವರ್ತಮಾನದ ಬಿಕ್ಕಟ್ಟಿಗೆ ಸ್ಪಂದಿಸುವ ಬರಹಗಳನ್ನು ಹೆಚ್ಚೆಚ್ಚು ಒಳಗೊಂಡ ಸಂಕಲನ ಇದು. ಅವರು ಸಾಮಾಜಿಕ ಕಾರ್ಯಕರ್ತರೂ ಆಗಿ ಕೋಮುಸೌಹಾರ್ದ ವೇದಿಕೆ ಸೇರಿದಂತೆ ಮುಂತಾದ ವೇದಿಕೆಗಳಲ್ಲಿ ಕೆಲಸ ಮಾಡಿದ್ದು ತಮ್ಮ ಹಿಂದಿನ ಕೆಲವು ಸಂಕಲನಗಳ ಬರಹಗಳಲ್ಲಿ ಪ್ರತಿಫಲಿಸಿದ್ದಂತೆ, ದಕ್ಷಿಣಾಯನದ ಸಂಚಾಲಕರಾಗಿ ತೀವ್ರ ಬಲಪಂಥೀಯ ರಾಜಕೀಯಕ್ಕೆ ಬದಲಿ ಸೃಷ್ಟಿಸುವ ವೇದಿಕೆಯಾಗಿ ಚೆನ್ನಿಯವರು ನಡೆಸುತ್ತಿರುವ ಚಿಂತನೆಗಳು ಪ್ರಸಕ್ತ ಸಂಕಲನದಲ್ಲಿ ಪ್ರತಿಫಲಿಸಿವೆ.

ಲಂಕೇಶ್, ಮೊಗಳ್ಳಿ ಗಣೇಶ್, ಮೂಡ್ನಾಕೂಡು ಚಿನ್ನಸ್ವಾಮಿ, ಎ ಕೆ ರಾಮಾನುಜನ್ ಮುಂತಾದ ಸಾಹಿತಿಗಳ ಬಗೆಗಿನ ವಿಮರ್ಶಾ ಲೇಖನಗಳ ಜೊತೆಗೆ ಇಂದು ಭಾರತದಲ್ಲಿ ತಲೆದೋರಿರುವ ಸರ್ವಾಧಿಕಾರಿ ಧೋರಣೆಯ ಪ್ರಭುತ್ವಕ್ಕೆ – ಆಡಳಿತ ವ್ಯವಸ್ಥೆಗೆ ಪ್ರತಿಕ್ರಿಯೆಯಾಗಿ ಹಲವು ಪತ್ರಿಕೆಗಳಲ್ಲಿ ಬರೆದಿರುವ ಈ ಲೇಖನಗಳು ಇಂದು ಯುವಜನತೆ ಓದಲೇಬೇಕಿರುವಂತಹವು. ಬ್ರೆಕ್ಟ್ ಕಾವ್ಯ, ಎರಿಕ್ ಫಾರ್ಮ್, ಟಾಲ್‍ಸ್ಟಾಯ್, ಪ್ರತಿಮಾ ರಾಜಕೀಯ, ರಾಷ್ಟ್ರ, ರಾಷ್ಟ್ರೀಯತೆ ಮತ್ತು ನಾಗರಿಕರು, ಗಾಂಧಿ ಕಟ್ಟಿಕೊಟ್ಟ ರಾಷ್ಟ್ರೀಯತೆ, ಹಿಂಸೆಯ ವ್ಯಾಖ್ಯಾನಗಳು, ಫ್ಯಾಸಿಸಂನ ನೈಜಮುಖ ಹೀಗೆ ಹಲವು ಪ್ರಬಂಧಗಳಲ್ಲಿ ಇಂದು ಜಗತ್ತಿನೆಲ್ಲೆಡೆ ಬೀಡುಬಿಡುತ್ತಿರುವ ತೀವ್ರ ಬಲಪಂಥೀಯ ಮತ್ತು ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ಮತ್ತು ಅದನ್ನು ಒಪ್ಪಿಕೊಳ್ಳುತ್ತಿರುವ ಜನಸಾಮಾನ್ಯರ ಮನಸ್ಥಿತಿಗೆ ರಾಜೇಂದ್ರ ಚೆನ್ನಿ ಮುಖಾಮುಖಿಯಾಗುತ್ತಾರೆ.

ಅಧಿಕಾರ ಕೇಂದ್ರಗಳನ್ನು ಸದಾ ಪ್ರಶ್ನಿಸಿ ಜನಸಾಮಾನ್ಯರ ಮತ್ತು ಶೋಷಿತರ ಪರವಾಗಿ ನಿಲ್ಲುವ ನಿಜ ಅರ್ಥದ ಲೋಕವಿರೋಧಿಗಳು, ಕಲಾವಿದರ, ಬರಹಗಾರರ ವಲಯದಲ್ಲಿ ಕ್ಷೀಣಿಸುತ್ತಿರುವ ಸಮಯದಲ್ಲಿ ರಾಜೇಂದ್ರ ಚೆನ್ನಿ ಅವರು ದಿಟ್ಟತನದಿಂದ ಯುವಜನತೆಗೆ ತಮ್ಮ ಚಿಂತನೆಗಳ ಮೂಲಕ ಎಚ್ಚರಿಸುತ್ತಿರುವ ಕಾರಣಕ್ಕೆ ಅವರ ಬರಹಗಳನ್ನು ಓದುವ ಮೂಲಕ ನಾವು ಅವರನ್ನು ಅಭಿನಂದಿಸಬೇಕಿದೆ.

ಲೋಕವಿಮರ್ಶೆ
(ಪ್ರಬಂಧಗಳ ಸಂಕಲನ)
ರಾಜೇಂದ್ರ ಚೆನ್ನಿ
ಮುದ್ರಣ: 2020 ಪುಟ: 344 ಬೆಲೆ: 300/-
ಪ್ರಕಾಶನ: ಅಭಿರುಚಿ, ಮೈಸೂರು


ಇದನ್ನೂ ಓದಿ: ಗಾಂಧಿ ಅನ್ನೋ ಪತ್ರಕರ್ತ : ಗಾಂಧಿಯಿಂದ ಪತ್ರಕರ್ತರು ಕಲಿಯಬೇಕಾದುದ್ದೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...