Homeಕರ್ನಾಟಕರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

ರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

- Advertisement -
- Advertisement -

ಸರ್ಕಾರಕ್ಕೆ ಬಹುಮತ ಇಲ್ಲ, ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದು ಬಿಜೆಪಿ ಅಬ್ಬರಿಸುತ್ತಿದೆ. ವಿಶ್ವಾಸಮತ ಯಾಚನೆ ಮಾಡಲಿದ್ದೇನೆ, ಸಮಯ ನಿಗದಿ ಮಾಡಿ ಎಂದು ಸ್ವತಃ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಹೋಟೆಲ್ಲಿನಲ್ಲಿ ಸೇರಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯು ತಮ್ಮನ್ನು ತೃಪ್ತರಾಗಿಸೀತೇ ಎಂದು ಕಾದುಕೊಂಡು ಕೂತಿದ್ದಾರೆ. ಯಾರ್ಯಾರಿಗೆ ಏನೇನು, ಎಷ್ಟೆಷ್ಟು ಸಿಕ್ಕಿದೆ ಅಥವಾ ಸಿಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಇಬ್ಬರಂತೂ ತಾವೇನು ಪಡೆದುಕೊಳ್ಳಲು ಇಚ್ಛಿಸಿದ್ದರೋ ಅಥವಾ ವಾಸ್ತವದಲ್ಲಿ ಯಾವುದಕ್ಕೆ ಅರ್ಹರೋ ಅದನ್ನು ಪಡೆದುಕೊಂಡಾಗಿದೆ.

ಅವರೇ ರಾಜ್ಯ ರಾಜಕಾರಣದ ಇಬ್ಬರು ಮಹತ್ವಾಕಾಂಕ್ಷಿಗಳಾದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್. ಶ್ರೀನಿವಾಸಪುರದ ಕೆ.ಆರ್.ರಮೇಶ್‍ಕುಮಾರ್ ಮುಖ್ಯಮಂತ್ರಿಯಾಗಬಹುದೆಂಬ ಆಸೆಯನ್ನೇನೂ ಇಟ್ಟುಕೊಂಡಿಲ್ಲ. ರಾಜಕೀಯ ಸಂದರ್ಭ ಮತ್ತು ಅವರದ್ದೇ ಮಿತಿಗಳ ಕಾರಣಕ್ಕೆ ಅವರನ್ನು ಸಚಿವರನ್ನಾಗಿಸಲೂ ಅವರ ಪಕ್ಷಗಳು ಸಿದ್ಧರಿಲ್ಲ. ಆದರೆ, ಸುದೀರ್ಘಕಾಲದ ರಾಜಕಾರಣದಲ್ಲಿ ತಾನು ಪಡೆದುಕೊಂಡಿರುವ ಜ್ಞಾನ ಹಾಗೂ ದೇಶದಲ್ಲಿ ಈ ಮಟ್ಟಿಗಿನ ತಿಳುವಳಿಕೆ ಇರುವ ಕೆಲವರಲ್ಲೇ ಒಬ್ಬನಾಗಿರುವ ತನಗೆ ಅದರ ‘ಸದ್ಬಳಕೆ’ಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೊರಗಂತೂ ಇದೆ. ಈ ಸಾರಿಯ ಬಿಕ್ಕಟ್ಟು ಆ ಅವಕಾಶವನ್ನು ಅವರಿಗೆ ಒದಗಿಸಿದೆ ಮತ್ತು ಇನ್ನೂ ಕೆಲಕಾಲ ಒದಗಿಸಲಿದೆ.

ಸುಪ್ರೀಂಕೋರ್ಟು ಮತ್ತು ರಾಜ್ಯಪಾಲರಿಗೆ ‘ನನ್ನದು ಸ್ಪೀಕರ್ ಸ್ಥಾನ. ಶಾಸಕಾಂಗದ ಮಟ್ಟಿಗೆ ಇದೂ ಸಾಂವಿಧಾನಿಕ ಹುದ್ದೆಯೇ. ನನ್ನ ಕೆಲಸ ನಾನಷ್ಟೇ ಮಾಡುವುದು ಸಾಧ್ಯ. ನೀವು ನನಗೆ ಡಿಕ್ಟೇಟ್ ಮಾಡಲು ಸಾಧ್ಯವಿಲ್ಲ’ ಎಂದು ಅವರು ಸೂಚ್ಯವಾಗಿ ಹೇಳಿಯಾಗಿದೆ. ಇದು ತಲುಪಬೇಕಾದವರಿಗೆ ತಲುಪಲಿ ಎಂದು ಸಂದರ್ಭ ಇದ್ದಾಗಲೆಲ್ಲಾ ಇಂಗ್ಲಿಷಿನಲ್ಲೂ ಮಾತಾಡುತ್ತಾ, ರಾಜ್ಯಪಾಲರು ಮತ್ತು ಸುಪ್ರೀಂಕೋರ್ಟಿಗೂ ಅವರು ಸಂದೇಶ ರವಾನೆ ಮಾಡಿಯಾಗಿದೆ. ಸ್ಪೀಕರ್ ಸ್ಥಾನದಿಂದ ತಾನೇನು ಮಾಡಬಹುದೆಂಬ ಸಣ್ಣ ಸೂಚನೆಯನ್ನು ಉಮೇಶ್ ಜಾಧವ್ ರಾಜೀನಾಮೆ ಸಂದರ್ಭದಲ್ಲೇ ಅವರು ತೋರಿಸಿದ್ದರು.

ಸಂಜೆ 6 ಗಂಟೆ ಒಳಗೆ ರಾಜೀನಾಮೆ ಕೊಡಬಯಸುವ ಶಾಸಕರು ಸ್ಪೀಕರ್ ಅವರನ್ನು ಕಾಣಿ ಮತ್ತು ಇಂದೇ ರಾಜೀನಾಮೆಗಳನ್ನು ಸ್ಪೀಕರ್ ಇತ್ಯರ್ಥ ಮಾಡಲಿ ಎಂಬ ಸೂಚನೆಯನ್ನು ಸುಪ್ರೀಂಕೋರ್ಟು ನಿನ್ನೆ ಕೊಟ್ಟಿತ್ತು. ತಪ್ಪು ಲೆಕ್ಕಾಚಾರದಿಂದ ಎಚ್‍ಎಎಲ್ ಏರ್ ಪೋರ್ಟಿಗೆ ತಡವಾಗಿ ಬಂದ ತೃಪ್ತರಾಗದ ಶಾಸಕರು, ಸಿಗ್ನಲ್ ಫ್ರೀ ವ್ಯವಸ್ಥೆ ಇದ್ದರೂ 6 ಗಂಟೆ ಒಳಗೆ ವಿಧಾನಸೌಧ ತಲುಪಲಿಲ್ಲ. ಅದರ ರನ್ನಿಂಗ್ ಕಾಮೆಂಟ್ರಿ ನೀಡುತ್ತಿದ್ದ ಟಿವಿ ಆಂಕರ್ ಗಳಲ್ಲಿ ಯಾರಾದರೂ ಒಬ್ಬರು ಉಸಿರುಕಟ್ಟಿ ಸತ್ತು ಹೋಗಬಹುದು ಎನಿಸುವ ರೀತಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು.

ಬೇರೆ ಸ್ಪೀಕರ್ ಆಗಿದ್ದರೆ, 6 ಗಂಟೆ 1 ನಿಮಿಷಕ್ಕೆ ತಮ್ಮ ಕಚೇರಿಯಿಂದ ಹೊರಟು, ಎ.ಜಿ.ಕಚೇರಿ ಗೇಟಿನಿಂದ ವಿಧಾನಸೌಧ ಆವರಣ ಬಿಡಲು ವ್ಯವಸ್ಥೆ ಮಾಡಿಕೊಂಡಿರುತ್ತಿದ್ದರು. ಆಗ ಸುಪ್ರೀಂಕೋರ್ಟಿನ ತೀರ್ಪನ್ನು ಪಾಲನೆ ಮಾಡಿದ ಹಾಗೂ ಆಗಿರುತ್ತಿತ್ತು; ತಮ್ಮ ಪಕ್ಷವನ್ನು ಬಚಾವು ಮಾಡಿದ ಹಾಗೂ ಆಗಿರುತ್ತಿತ್ತು. ಆದರೆ ಸ್ಪೀಕರ್ ನೈತಿಕವಾಗಿ ತಪ್ಪು ಮಾಡಿದ ಕಳಂಕ ಹೊರಬೇಕಾಗುತ್ತಿತ್ತು. ರಮೇಶ್‍ಕುಮಾರ್ ರಿಗೆ ಇರುವ ಆತ್ಮವಿಶ್ವಾಸ ಎಷ್ಟೆಂದರೆ, ತಾನು ಈ ಪ್ರಕರಣವನ್ನು ತಾಂತ್ರಿಕವಾಗಿ ಗೆಲ್ಲಬೇಕಿಲ್ಲ; ಕೊಡಬೇಕಾದ ಪೆಟ್ಟು ಕೊಟ್ಟೇ ಗೆಲ್ಲುತ್ತೇನೆ ಎಂದು. ಹಾಗಾಗಿ ರಾಜೀನಾಮೆ ಪತ್ರವನ್ನು ತೆಗೆದುಕೊಂಡು (ಖಾಲಿ ಹಾಳೆ ಹಿಡಿದು ಬಂದ ಶಾಸಕರಿಗೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಪತ್ರ ಹೇಗಿರಬೇಕು ಎಂದು ಅವರೇ ಹೇಳಿರಲಿಕ್ಕೂ ಸಾಕು), ಹೊರಬಂದು ಪತ್ರಿಕಾಗೋಷ್ಠಿ ನಡೆಸಿದರು. ಸುಪ್ರೀಂಕೋರ್ಟು ತನಗೆ ಇಷ್ಟೇ ಸಮಯದಲ್ಲಿ ನಿರ್ಧಾರ ಹೇಳಿ ಎಂದು ತಾಕೀತು ಮಾಡುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಹೇಳಿದರು.

ಮರುದಿನ ಸುಪ್ರೀಂಕೋರ್ಟು ತಾನೇ ಸಮಯ ಕೇಳಿಕೊಂಡು ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು! ಇಂತಹ ಸಂದರ್ಭ ಬರಬಹುದೆಂದೇ ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಮೇಶ್‍ಕುಮಾರ್‍ರನ್ನು ಸ್ಪೀಕರ್ ಮಾಡಿದ್ದರು. ಮೊನ್ನೆ ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿಯೋಗವೊಂದು ಹೋಗಿತ್ತು. ಆಗ ಹಳೆಯ ಸ್ನೇಹಿತರಾದ ಸಿದ್ದರಾಮಯ್ಯ ಮತ್ತು ರಮೇಶ್‍ ಕುಮಾರ್ ನಡುವೆ ನಡೆದ ಮಾತುಕತೆ ಹೀಗಿತ್ತು.

ರಮೇಶ್ ಕುಮಾರ್: ‘ಒಟ್ಟಿನಲ್ಲಿ ನಿನಗೆ ಈಗ ಬಹಳ ಖುಷಿಯಲ್ಲವೇನಪ್ಪಾ? You are the happiest person now’,

ಸಿದ್ದರಾಮಯ್ಯ: ‘ನಾನೇಕೆ ಖುಷಿ ಪಡಬೇಕಪ್ಪಾ, ನಮ್ಮ ಕಷ್ಟ ನಮಗೆ ಆಗಿದೆ’.

ರ.ಕು: ‘ನನ್ನನ್ನ ಈ ಕಷ್ಟಕ್ಕೆ ಸಿಕ್ಕಿ ಹಾಕಿಸಿದ್ದಕ್ಕೆ’.

ಸಿ.ರಾ: ‘ಇಂಥದ್ದನ್ನೆಲ್ಲಾ ನಿಭಾಯಿಸಲು ನೀನೇ ಸರಿ. ಆ ಸಾಮಥ್ರ್ಯ, ತಿಳುವಳಿಕೆ ನಿನಗೇ ಇದೆ ಎಂಬ ಕಾರಣಕ್ಕೇ ನಿನ್ನನ್ನು ಸ್ಪೀಕರ್ ಆಗಿ ಮಾಡಿರುವುದು’.

ಇದು ವಾಸ್ತವವೇ. ಹಾಗೆಯೇ ಅದಕ್ಕಿಂತ ಜಾಸ್ತಿ ರಮೇಶ್‍ ಕುಮಾರ್ ರವರಿಗೆ ಅವಕಾಶ ಕೊಡಬಾರದು ಎಂಬುದು ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರಿಗೂ ಗೊತ್ತು. ಸಂಸದೀಯ ನಿಯಮಾವಳಿಗಳ ಬಗ್ಗೆ ಅಪಾರ ಜ್ಞಾನವಿರುವ ರಮೇಶ್‍ಕುಮಾರ್, ಈ ಅವಧಿಯಲ್ಲಿ ಎರಡೆರಡು ಸಾರಿ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ರಿಂದಲೂ ಸಲಹೆ ಪಡೆದುಕೊಂಡಿದ್ದಾರೆ. ಅವೆಲ್ಲದರ ಪರಿಣಾಮವಾಗಿ ಈ ಪ್ರಕರಣವನ್ನು ವಿಶೇಷ ರೀತಿಯಲ್ಲಿ ನಿಭಾಯಿಸಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿದೆ.

ಸಂವಿಧಾನದ 10ನೇ ಶೆಡ್ಯೂಲ್‍ನ ಪ್ರಕಾರ ಶಾಸಕರನ್ನು ಅನರ್ಹಗೊಳಿಸುವ ಪರಮಾಧಿಕಾರ ಸ್ಪೀಕರ್ ಗೆ ಇದೆ. ಅದನ್ನು ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದಾದರೂ, ಕೋರ್ಟಿಗೆ ಕೆಲವು ಮಿತಿಗಳಿವೆ. ಈಗಾಗಲೇ ಕಿಹೊಟೊ ಹೊಲ್ಲೊಹಾನ್ ವರ್ಸಸ್ ಜಾಚಿಲ್ಹು (Kihoto Hollohan v/s Zachillhu) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟೇ ಅದನ್ನು ಹೇಳಿದೆ. ಹಾಗಾಗಿ ಇದು ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರವ್ಯಾಪ್ತಿಯ ಕುರಿತ ತಿಕ್ಕಾಟವಾಗುವ ಸಂಭವವಿದೆ. ಹಾಗಾದಾಗ, ಸಾಂವಿಧಾನಿಕ ಮೌಲ್ಯಗಳು ಏನಿರಬೇಕು ಎಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಸ್ಪೀಕರ್ ಇಲ್ಲಿರುವುದರಿಂದ ಸುಪ್ರೀಂಕೋರ್ಟು ಸಹಾ ಇಕ್ಕಟ್ಟಿಗೆ ಸಿಲುಕುತ್ತದೆ.

ಇವೆಲ್ಲದರ ಕೇಂದ್ರದಲ್ಲಿರುವ ರಮೇಶ್‍ ಕುಮಾರ್ ರವರಿಗೆ ಇವೆಲ್ಲವೂ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸುತ್ತಾ ಹೋಗುತ್ತದೆ ಮತ್ತು ಅವರೂ ಅದನ್ನು ಬಯಸುತ್ತಾರೆ. ಇವೆಲ್ಲದರ ಪರಿಣಾಮವಾಗಿ ಪ್ರಜಾತಂತ್ರಕ್ಕೆ ಒಳಿತಾಗುವುದಾದರೆ ಮತ್ತು ಅನೈತಿಕ ಪಕ್ಷಾಂತರವನ್ನು ತಡೆಯುವಲ್ಲಿ ಮೈಲುಗಲ್ಲನ್ನು ನಿರ್ಮಿಸುವುದಾದರೆ ಅದಕ್ಕಿಂದ ಒಳ್ಳೆಯದು ಇನ್ನೊಂದಿಲ್ಲ.

ಇದನ್ನೂ ಓದಿ: ಮುಂಬೈಗೆ ಹೋಗಿ ತನ್ನ ಪರವಾದ ವಿಶ್ವಾಸಮತ ಗೆದ್ದುಕೊಂಡ ಡಿ.ಕೆ.ಶಿವಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...