Homeಮುಖಪುಟವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

ವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

- Advertisement -
- Advertisement -

ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯಾತೀತ ಗಣರಾಜ್ಯ ಸ್ಥಾಪಿಸಿದ್ದೇವೆ ಎಂದಲ್ಲ, ಸ್ಥಾಪಿಸಬೇಕಿದೆ ಎಂದು ಅದರ ಅರ್ಥ. ಅದೊಂದು ಆದರ್ಶ, ಅಂತಹ ಆದರ್ಶ ಸ್ಥಾಪನೆಯ ಪ್ರಕ್ರಿಯೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.

ಆದರೆ ನಾವು ಪಡೆದ ಇದುವರೆಗಿನ ಎಲ್ಲಾ ರೀತಿಯ (ಔಪಚಾರಿಕ -ಅನೌಪಚಾರಿಕ) ಶಿಕ್ಷಣದಲ್ಲಿಯೂ ದೇವರು, ಧರ್ಮ, ಪುನರ್ಜನ್ಮ, ಕರ್ಮಸಿದ್ದಾಂತ, ಅದೃಷ್ಟ, ಸ್ವರ್ಗ-ನರಕಗಳ ಮೌಢ್ಯಗಳ ಒಳನುಸುಳುವಿಕೆಯಿಂದ ಮೌಢ್ಯಗಳ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದು ಸಾಮಾಜಿಕ ಪೂರ್ವಾಗ್ರಹಗಳನ್ನು ಕಲಿಸುತ್ತಿದ್ದು, ಸಾಮಾಜಿಕ ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವಂತಹ, ಸಮಾನತೆಗಾಗಿ ಸಮಾನ ಶಿಕ್ಷಣ ಅನುಷ್ಟಾನದ ಬಗ್ಗೆ ಗಂಭೀರವಾಗಿ ಚಿಂತನ-ಮಂಥನ ನಡೆಯಬೇಕು.

ಶಬ್ದ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಕಳೆದುಹೋದಾಗ ವೈಚಾರಿಕತೆ ಮತ್ತು ಚಿಂತನೆ ಕೇವಲ ಹತಾಶೆಯ ತತ್ವಜ್ಞಾನಗಳಾಗುತ್ತವೆ. ಬಹುಶಃ ಇಂದಿನ ಎಲ್ಲಾ ಚಿಂತನೆ ವೈಚಾರಿಕತೆಗಳು ಕೂಡ, ಬದುಕಿನ ವಾಸ್ತವ ಸ್ಥಿತಿಯಿಂದ ಸಂಬಂಧ ಕಳೆದುಕೊಳ್ಳುವುದಕ್ಕೆ ಇದೇ ಕಾರಣವಾಗಿದೆ.

ಶಬ್ಧ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಎಂದರೆ ಏನು? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು, ಸಂಪುಟ 3ರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಕ್ರಾಂತಿಯು ಎಲ್ಲಾ ತತ್ವಜ್ಞಾನಗಳ ಜನನಿ, ಅದು ಬೆಳಕನ್ನು ಬೀರುವ ಜ್ಯೋತಿ”, ಒಂದು ಬದಲಾವಣೆಯು ಅತ್ಯಮೂಲ್ಯವಾದ ತತ್ವಜ್ಞಾನವನ್ನು ಸೃಷ್ಟಿಸುತ್ತದೆಯೇ ವಿನಃ ತತ್ವಜ್ಞಾನ ಇಟ್ಟುಕೊಂಡು ಬದಲಾವಣೆಗೆ ಕಾಯವುದು, ಪರಿವರ್ತನೆಯನ್ನು ಮುಂದೂಡುತ್ತಲೇ ಇರುತ್ತದೆ.

ಆದ್ದರಿಂದ ಇಲ್ಲಿಯವರೆಗಿನ ಎಲ್ಲಾ ಚಿಂತನೆ ಮತ್ತು ವೈಚಾರಿಕತೆಯನ್ನು ಬದಿಗಿರಿಸಿ, ನಾವು ಯಾವ ವಿಚಾರದಲ್ಲಿ ಬದಲಾಗಬೇಕೆಂಬುದನ್ನು ಗುರುತಿಸಿಕೊಳ್ಳದಿದ್ದರೆ ಎಲ್ಲಾರೂ ಬೋಧಗುರುಗಳಾಗುತ್ತವೆ.

ಇದಕ್ಕೆ ಸಂತ ಕೈವಾರ ನಾರಾಯಣತಾತ ಒಂದೆಡೆ,

“ಬೋದೆ ಗುರುಗಳ ಮಾತು,
ಬದುಕು ಚಪಲವಾಯಿತು
ಇದ್ದ ಮತಿ ನೆಗೆದೋಯಿತು
ಪಾಮರನಾದೆ” ಎಂದೆನ್ನುತ್ತಾರೆ.

ನೈಜ ಬದುಕಿನ ವಸ್ತುಸ್ಥಿತಿ ಮತ್ತು ಅದರ ಸಂಕೀರ್ಣಗಳು ಪ್ರತಿಕ್ರಿಯೆಯಲ್ಲಿರುತ್ತವೆಯೇ ವಿನಃ ಪರಿವರ್ತನೆಯಾಗಲು ಬಳಕೆಯಾಗಿದ್ದು ತೀರ ಕಡಿಮೆಯೆನ್ನಬಹುದು. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅದರ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ. ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನು ಅವುಗಳ ಪರಿಣಾಮವನ್ನು ಮಂಕಾಗಿಸುತ್ತಿರುತ್ತದೆ. ಯಥಾವತ್ತಾಗಿ ಅನುಷ್ಠಾನಗೊಳ್ಳದ ಸಂವಿಧಾನ ಲಿಖಿತರೂಪದಲ್ಲಿ ಜಾರಿಯಲ್ಲಿದೆಯೆಂದು ಹೇಳುವ ನಮಗೆ ಮನುಧರ್ಮಶಾಸ್ತ್ರದ ಗುಲಾಮ ಮನಸ್ಸಿನ ಗುಣಗಳು, ಮನ-ಮನೆಯಲ್ಲಿ ನಿರಂತರವಾಗಿ ಮುಂದುವರೆದಿರುವುದು ಸೋಜಿಗದ ಸಂಗತಿಯೇ ಸರಿ.

ಹೇಗೆಂದರೆ… ’ನಾವು ಬಾಗಿಲು ಕಿಟಕಿಗಳಲ್ಲಿ ಗೂಡುಕಟ್ಟುವ ಒಂದು ಬಗೆಯ ’ಕಣಜ’ದ ಕೀಟವನ್ನು ಎಲ್ಲರೂ ನೋಡಿರುತ್ತೀರಿ. ಕೀಟ ಮಣ್ಣಿನಿಂದ ಚಿಕ್ಕಗೂಡನ್ನು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಟ್ಟು, ಅವು ಮರಿಗಳಾಗಿ ಬೆಳವಣಿಗೆಯಾಗುವವರೆಗೆ, ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿ ಮಣ್ಣಿನ ಬಾಗಿಲನ್ನು ಮುಚ್ಚಿಹೊರಟುಹೋಗುತ್ತದೆ. ಆ ಕೀಟವು ತನ್ನ ಕೋಟೆಯ ಹತ್ತಿರ ಎಂದಿಗೂ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅದರ ಜೀವಿತಾವಧಿ ಕೊನೆಯಾಗಿರುತ್ತದೆ. ಗೂಡಿನೊಳಗಿರುವ ಮೊಟ್ಟೆಗಳು ಒಡೆದು ಮರಿಗಳಾಗಿ ಅಮ್ಮನು ಕೂಡಿಟ್ಟ ಆಹಾರವನ್ನು ತಿಂದು ಬೆಳೆದು ಲಾರ್ವ ಹಂತ ಮುಟ್ಟಿ, ರೆಕ್ಕೆಪುಕ್ಕ ಬಂದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಕೋಟೆಯ ಬಾಗಿಲನ್ನು ಸೀಳಿಕೊಂಡು ಹೊಸ ಜಗತ್ತಿಗೆ ಬಂದ ಕೂಡಲೆ ಅವು ಎಂದೂ ನೋಡಿರದ ಬದುಕಿನ ವಿಧಾನಗಳಲ್ಲಿ ಅಮ್ಮನನ್ನು ಅನುಕರಿಸುತ್ತವೆ!’

ಇದು ಹೇಗೆ ಸಾಧ್ಯ?
ಇದರ ಶಾಲೆ ಯಾವುದು?
ವಂಶದಿಂದ ವಂಶಕ್ಕೆ ಹರಿದು ಬರುತ್ತಿರುವ ತಿಳಿವಿನ ರೀತಿ-ನೀತಿಯಾದರು ಎಂತಹುದು ?

ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಭೌತಿಕವಾಗಿ ಸುಟ್ಟರೂ ಅದರ ಸಾರ ಅಳಿಯದೆ ಮಾನಸಿಕವಾಗಿ ಉಳಿದು ನಡವಳಿಕೆಯಲ್ಲಿ ಜೀವಂತಿಕೆಯಾಗಿರಲು ಸಾಧ್ಯವಾಗಿದ್ದಾದರೂ ಹೇಗೆ?

ಅಂಬೇಡ್ಕರ್‌ವಾದವೆಂದರೆ ಕೇವಲ ಒಬ್ಬ ವ್ಯಕ್ತಿಯ ವಾದವಲ್ಲ, ಅದು ಬುದ್ಧ ಬಸವಾದಿಯಾಗಿ ಎಲ್ಲ ಸಂತ, ಶರಣ, ದಾಸರ ಸಾಮಾಜಿಕ ಪರಿವರ್ತನೆಕಾರರ ಸಿದ್ಧಾಂತವಾಗಿದೆ.

ಇಂದು ಅಂಬೇಡ್ಕರ್ ದಲಿತರಿಗೆ ಹುಚ್ಚು ಕುರುಡು ಪ್ರೀತಿಯಾಗಿದ್ದಾರೆಯೇ ವಿನಃ ಒಬ್ಬ ತತ್ವಜ್ಞಾನಿಯಾಗಿ, ಸೈದ್ಧಾಂತಿಕವಾದಿಯಾಗಿ ದಲಿತ ಸಮಾಜದ ವಿಮೋಚಕನಾಗಿ ಕಂಡಿಲ್ಲ. ಅಂಬೇಡ್ಕರ್ ಮೂರ್ತಿಗಳನ್ನು ಭಗ್ನಗೊಳಿಸಿದಾಗ, ಅವರನ್ನು ಯಾರಾದರೂ ಬೈದಾಗ ಮಾತ್ರ ದಲಿತರು ಸಿಡಿದು ಸಿಟ್ಟಾಗಿ ಭಾವುಕರಾಗುತ್ತಾರೆ. ಈ ಎಚ್ಚರ ಭಾವುಕತೆಯ ಪರಿಧಿ ಮೀರಿ ತಾತ್ವಿಕ ನೆಲೆಗಟ್ಟಿನಲ್ಲಿ ದಲಿತರ ಎದೆ-ಎದೆಗೆ ತಲುಪಬೇಕಿದೆ. ಬಾಬಾಸಾಹೇಬರನ್ನು ವಿಗ್ರಹ-ಅನುಗ್ರಹ ರೂಪಗಳಲ್ಲಿ, ಆವೇಶಭರಿತ (Emotional) ಸಂಭ್ರಮಗಳ ರೂಪದಲ್ಲಿಯೂ ಚಿಂತಿಸುವುದು ಒಂದು ಅಮಲಿನಂತೆ ಸರಿ. ಏಕೆಂದರೆ ಬಾಬಾಸಾಹೇಬ ಅವುಗಳಲ್ಲಿ ಇಲ್ಲ.

ನಾವು ಮಾಡುವ ಯಾವುದೇ ಕಾರ್ಯ-ಕಾರಣ-ಪರಿಣಾಮಗಳನ್ನು ವಿವೇಕಶೀಲರಾಗಿ ನೋಡುವ ಕಿಂಚಿತ್ತು ವ್ಯವಧಾನ ಇಲ್ಲದಾಗಿದ್ದು ಇಂದ್ರಿಯಗಳ ಪ್ರಲೋಭನೆಗೆ ಒಳಗಾಗಿ ಸುಖಸಂತೋಷ ತೃಪ್ತಿಗಳೆಂಬ ಇಲ್ಲದ ಭ್ರಮೆಗಳ ದಾಸರಾಗಿ ನಿಸರ್ಗಸಹಜ ಬದುಕು ಇಲ್ಲದಾಗಿದೆ.

ಎಸ್.ಕೆ.ಥೋರಟ್ ಎಂಬ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ‘Birth is nothing, environment is everything’. ಬೆಳೆಯುವ ಮಗುವಿನ ಮನಸ್ಸು, ಪೂರ್ಣಬದುಕನ್ನು ಪರಿಸರ ರೂಪಿಸುತ್ತದೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು!

ಸಾಮಾಜಿಕ ಪರಿಸರದಲ್ಲಿನ ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳಲು ಬಳಸುವ ಸಂಕೇತಗಳು, ಆಚರಣೆಗಳು, ಮೇಲು-ಕೀಳು, ಎಡ-ಬಲ, ಹೆಚ್ಚು-ಕಡಿಮೆ, ಸ್ಪೃಶ್ಯ-ಅಸ್ಪೃಶ್ಯ, ಸಹ್ಯ-ಅಸಹ್ಯ ಹೀಗೆ ಒಂದು ಬೇಧವು ಇಲ್ಲದ ಬೇಧಗಳನ್ನು ಉದ್ದೀಪಿಸಬಲ್ಲದಾಗಿರುತ್ತದೆ.

ಇದು ಮಗುವಿನ ಆಲೋಚನಾಕ್ರಮದ ಮೇಲೆ ಸೂಕ್ಷ್ಮ ಹಾಗೂ ಪರೋಕ್ಷ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಣವು ಮಗವಿನ ಸರ್ವತೋಮುಖ ಅಭಿವೃದ್ಧಿಯ ಪರಮೋಚ್ಛಗುರಿಯಾಗಿದ್ದು, ಶೋಷಣೆಯ ಅಸ್ತ್ರಗಳನ್ನು ಗುರುತಿಸಿಕೊಳ್ಳವ, ಧಾರ್ಮಿಕ ಅಚರಣೆಯ ಮುಖವಾಡಗಳನ್ನು ಕಳಚಿ ಗುಲಾಮತನದಿಂದ ವಿಮುಕ್ತಿ ಪಡೆಯುವಂತಿರಬೇಕು. ಶಿಕ್ಷಣತಜ್ಞ ಯಶಪಾಲ್‌ರ ಪ್ರತಿಪಾದನೆಯಂತೆ ’ಜೀವನ ಮೌಲ್ಯಗಳು ಕಲಿಕೆಯ ಭಾಗವಾಗಬೇಕು; ಜ್ಞಾನಾರ್ಜನೆ ಜೀವನದ ಭಾಗವಾಗಬೇಕು’. ಶಿಕ್ಷಣಕ್ಷೇತ್ರವು ವೈಜ್ಞಾನಿಕದೃಷ್ಟಿ ಮತ್ತು ನೈತಿಕ ನೆಲಗಟ್ಟಿನ ಮೇಲೆ ರೂಪಿಸಲ್ಪಟ್ಟಾಗ ವೈಚಾರಿಕತೆ ಮನೋಭಾವ ಬೆಳೆಯಲು ಸಾದ್ಯವಾಗುತ್ತದೆ.

ಮೇಲ್ಜಾತಿ ಮನಸ್ಸುಗಳು ನಮ್ಮನ್ನು ಹೊರಗಿಟ್ಟು ನೋಡುತ್ತಿರುವಂತೆ, ನಾವು ಅಂಬೇಡ್ಕರ್‌ರ ಆಶಯಗಳನ್ನು ಹೊರಗಿಟ್ಟಿದ್ದೇವೆ. ಇದು ಕೇವಲ ಮೂರ್ತಿಪೂಜೆ, ದಿನಾಚರಣೆಗಳಿಗೆ, ಚರ್ಚೆಗಳಿಗೆ ಸೀಮಿತವಾಗಿದೆ. ಹೀಗಾಗಿ ಬಾಬಾಸಾಹೇಬರು ಹೇಳುವ ಶಿಕ್ಷಣ-ಸಂಘಟನೆ-ಹೋರಾಟ-ಕ್ರಾಂತಿ ಇವೆಲ್ಲವೂ ಕೂಡ ಬುದ್ಧಿಮತ್ತೆಯಿಂದ ಕೆಳಗಿಳಿದು ನಡೆಗಳಲ್ಲಿ ಬರಬೇಕಿದೆ.

ಹ.ಮಾ.ರಾಮಚಂದ್ರ

ಹ.ಮಾ.ರಾಮಚಂದ್ರ

ಅವಿಭಜಿತ ಕೋಲಾರ ಜಿಲ್ಲೆಯ ದಲಿತ ಚಳವಳಿಯ ಹಿರಿಯ ನಾಯಕರಲ್ಲೊಬ್ಬರು. ಪ್ರಸ್ತುತ ಕೋಲಾರದ ಆದಿಮದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಇದನ್ನೂ ಓದಿ: ನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...