Homeಮುಖಪುಟವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

ವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

- Advertisement -
- Advertisement -

ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯಾತೀತ ಗಣರಾಜ್ಯ ಸ್ಥಾಪಿಸಿದ್ದೇವೆ ಎಂದಲ್ಲ, ಸ್ಥಾಪಿಸಬೇಕಿದೆ ಎಂದು ಅದರ ಅರ್ಥ. ಅದೊಂದು ಆದರ್ಶ, ಅಂತಹ ಆದರ್ಶ ಸ್ಥಾಪನೆಯ ಪ್ರಕ್ರಿಯೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.

ಆದರೆ ನಾವು ಪಡೆದ ಇದುವರೆಗಿನ ಎಲ್ಲಾ ರೀತಿಯ (ಔಪಚಾರಿಕ -ಅನೌಪಚಾರಿಕ) ಶಿಕ್ಷಣದಲ್ಲಿಯೂ ದೇವರು, ಧರ್ಮ, ಪುನರ್ಜನ್ಮ, ಕರ್ಮಸಿದ್ದಾಂತ, ಅದೃಷ್ಟ, ಸ್ವರ್ಗ-ನರಕಗಳ ಮೌಢ್ಯಗಳ ಒಳನುಸುಳುವಿಕೆಯಿಂದ ಮೌಢ್ಯಗಳ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದು ಸಾಮಾಜಿಕ ಪೂರ್ವಾಗ್ರಹಗಳನ್ನು ಕಲಿಸುತ್ತಿದ್ದು, ಸಾಮಾಜಿಕ ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವಂತಹ, ಸಮಾನತೆಗಾಗಿ ಸಮಾನ ಶಿಕ್ಷಣ ಅನುಷ್ಟಾನದ ಬಗ್ಗೆ ಗಂಭೀರವಾಗಿ ಚಿಂತನ-ಮಂಥನ ನಡೆಯಬೇಕು.

ಶಬ್ದ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಕಳೆದುಹೋದಾಗ ವೈಚಾರಿಕತೆ ಮತ್ತು ಚಿಂತನೆ ಕೇವಲ ಹತಾಶೆಯ ತತ್ವಜ್ಞಾನಗಳಾಗುತ್ತವೆ. ಬಹುಶಃ ಇಂದಿನ ಎಲ್ಲಾ ಚಿಂತನೆ ವೈಚಾರಿಕತೆಗಳು ಕೂಡ, ಬದುಕಿನ ವಾಸ್ತವ ಸ್ಥಿತಿಯಿಂದ ಸಂಬಂಧ ಕಳೆದುಕೊಳ್ಳುವುದಕ್ಕೆ ಇದೇ ಕಾರಣವಾಗಿದೆ.

ಶಬ್ಧ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಎಂದರೆ ಏನು? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು, ಸಂಪುಟ 3ರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಕ್ರಾಂತಿಯು ಎಲ್ಲಾ ತತ್ವಜ್ಞಾನಗಳ ಜನನಿ, ಅದು ಬೆಳಕನ್ನು ಬೀರುವ ಜ್ಯೋತಿ”, ಒಂದು ಬದಲಾವಣೆಯು ಅತ್ಯಮೂಲ್ಯವಾದ ತತ್ವಜ್ಞಾನವನ್ನು ಸೃಷ್ಟಿಸುತ್ತದೆಯೇ ವಿನಃ ತತ್ವಜ್ಞಾನ ಇಟ್ಟುಕೊಂಡು ಬದಲಾವಣೆಗೆ ಕಾಯವುದು, ಪರಿವರ್ತನೆಯನ್ನು ಮುಂದೂಡುತ್ತಲೇ ಇರುತ್ತದೆ.

ಆದ್ದರಿಂದ ಇಲ್ಲಿಯವರೆಗಿನ ಎಲ್ಲಾ ಚಿಂತನೆ ಮತ್ತು ವೈಚಾರಿಕತೆಯನ್ನು ಬದಿಗಿರಿಸಿ, ನಾವು ಯಾವ ವಿಚಾರದಲ್ಲಿ ಬದಲಾಗಬೇಕೆಂಬುದನ್ನು ಗುರುತಿಸಿಕೊಳ್ಳದಿದ್ದರೆ ಎಲ್ಲಾರೂ ಬೋಧಗುರುಗಳಾಗುತ್ತವೆ.

ಇದಕ್ಕೆ ಸಂತ ಕೈವಾರ ನಾರಾಯಣತಾತ ಒಂದೆಡೆ,

“ಬೋದೆ ಗುರುಗಳ ಮಾತು,
ಬದುಕು ಚಪಲವಾಯಿತು
ಇದ್ದ ಮತಿ ನೆಗೆದೋಯಿತು
ಪಾಮರನಾದೆ” ಎಂದೆನ್ನುತ್ತಾರೆ.

ನೈಜ ಬದುಕಿನ ವಸ್ತುಸ್ಥಿತಿ ಮತ್ತು ಅದರ ಸಂಕೀರ್ಣಗಳು ಪ್ರತಿಕ್ರಿಯೆಯಲ್ಲಿರುತ್ತವೆಯೇ ವಿನಃ ಪರಿವರ್ತನೆಯಾಗಲು ಬಳಕೆಯಾಗಿದ್ದು ತೀರ ಕಡಿಮೆಯೆನ್ನಬಹುದು. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅದರ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ. ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನು ಅವುಗಳ ಪರಿಣಾಮವನ್ನು ಮಂಕಾಗಿಸುತ್ತಿರುತ್ತದೆ. ಯಥಾವತ್ತಾಗಿ ಅನುಷ್ಠಾನಗೊಳ್ಳದ ಸಂವಿಧಾನ ಲಿಖಿತರೂಪದಲ್ಲಿ ಜಾರಿಯಲ್ಲಿದೆಯೆಂದು ಹೇಳುವ ನಮಗೆ ಮನುಧರ್ಮಶಾಸ್ತ್ರದ ಗುಲಾಮ ಮನಸ್ಸಿನ ಗುಣಗಳು, ಮನ-ಮನೆಯಲ್ಲಿ ನಿರಂತರವಾಗಿ ಮುಂದುವರೆದಿರುವುದು ಸೋಜಿಗದ ಸಂಗತಿಯೇ ಸರಿ.

ಹೇಗೆಂದರೆ… ’ನಾವು ಬಾಗಿಲು ಕಿಟಕಿಗಳಲ್ಲಿ ಗೂಡುಕಟ್ಟುವ ಒಂದು ಬಗೆಯ ’ಕಣಜ’ದ ಕೀಟವನ್ನು ಎಲ್ಲರೂ ನೋಡಿರುತ್ತೀರಿ. ಕೀಟ ಮಣ್ಣಿನಿಂದ ಚಿಕ್ಕಗೂಡನ್ನು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಟ್ಟು, ಅವು ಮರಿಗಳಾಗಿ ಬೆಳವಣಿಗೆಯಾಗುವವರೆಗೆ, ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿ ಮಣ್ಣಿನ ಬಾಗಿಲನ್ನು ಮುಚ್ಚಿಹೊರಟುಹೋಗುತ್ತದೆ. ಆ ಕೀಟವು ತನ್ನ ಕೋಟೆಯ ಹತ್ತಿರ ಎಂದಿಗೂ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅದರ ಜೀವಿತಾವಧಿ ಕೊನೆಯಾಗಿರುತ್ತದೆ. ಗೂಡಿನೊಳಗಿರುವ ಮೊಟ್ಟೆಗಳು ಒಡೆದು ಮರಿಗಳಾಗಿ ಅಮ್ಮನು ಕೂಡಿಟ್ಟ ಆಹಾರವನ್ನು ತಿಂದು ಬೆಳೆದು ಲಾರ್ವ ಹಂತ ಮುಟ್ಟಿ, ರೆಕ್ಕೆಪುಕ್ಕ ಬಂದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಕೋಟೆಯ ಬಾಗಿಲನ್ನು ಸೀಳಿಕೊಂಡು ಹೊಸ ಜಗತ್ತಿಗೆ ಬಂದ ಕೂಡಲೆ ಅವು ಎಂದೂ ನೋಡಿರದ ಬದುಕಿನ ವಿಧಾನಗಳಲ್ಲಿ ಅಮ್ಮನನ್ನು ಅನುಕರಿಸುತ್ತವೆ!’

ಇದು ಹೇಗೆ ಸಾಧ್ಯ?
ಇದರ ಶಾಲೆ ಯಾವುದು?
ವಂಶದಿಂದ ವಂಶಕ್ಕೆ ಹರಿದು ಬರುತ್ತಿರುವ ತಿಳಿವಿನ ರೀತಿ-ನೀತಿಯಾದರು ಎಂತಹುದು ?

ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಭೌತಿಕವಾಗಿ ಸುಟ್ಟರೂ ಅದರ ಸಾರ ಅಳಿಯದೆ ಮಾನಸಿಕವಾಗಿ ಉಳಿದು ನಡವಳಿಕೆಯಲ್ಲಿ ಜೀವಂತಿಕೆಯಾಗಿರಲು ಸಾಧ್ಯವಾಗಿದ್ದಾದರೂ ಹೇಗೆ?

ಅಂಬೇಡ್ಕರ್‌ವಾದವೆಂದರೆ ಕೇವಲ ಒಬ್ಬ ವ್ಯಕ್ತಿಯ ವಾದವಲ್ಲ, ಅದು ಬುದ್ಧ ಬಸವಾದಿಯಾಗಿ ಎಲ್ಲ ಸಂತ, ಶರಣ, ದಾಸರ ಸಾಮಾಜಿಕ ಪರಿವರ್ತನೆಕಾರರ ಸಿದ್ಧಾಂತವಾಗಿದೆ.

ಇಂದು ಅಂಬೇಡ್ಕರ್ ದಲಿತರಿಗೆ ಹುಚ್ಚು ಕುರುಡು ಪ್ರೀತಿಯಾಗಿದ್ದಾರೆಯೇ ವಿನಃ ಒಬ್ಬ ತತ್ವಜ್ಞಾನಿಯಾಗಿ, ಸೈದ್ಧಾಂತಿಕವಾದಿಯಾಗಿ ದಲಿತ ಸಮಾಜದ ವಿಮೋಚಕನಾಗಿ ಕಂಡಿಲ್ಲ. ಅಂಬೇಡ್ಕರ್ ಮೂರ್ತಿಗಳನ್ನು ಭಗ್ನಗೊಳಿಸಿದಾಗ, ಅವರನ್ನು ಯಾರಾದರೂ ಬೈದಾಗ ಮಾತ್ರ ದಲಿತರು ಸಿಡಿದು ಸಿಟ್ಟಾಗಿ ಭಾವುಕರಾಗುತ್ತಾರೆ. ಈ ಎಚ್ಚರ ಭಾವುಕತೆಯ ಪರಿಧಿ ಮೀರಿ ತಾತ್ವಿಕ ನೆಲೆಗಟ್ಟಿನಲ್ಲಿ ದಲಿತರ ಎದೆ-ಎದೆಗೆ ತಲುಪಬೇಕಿದೆ. ಬಾಬಾಸಾಹೇಬರನ್ನು ವಿಗ್ರಹ-ಅನುಗ್ರಹ ರೂಪಗಳಲ್ಲಿ, ಆವೇಶಭರಿತ (Emotional) ಸಂಭ್ರಮಗಳ ರೂಪದಲ್ಲಿಯೂ ಚಿಂತಿಸುವುದು ಒಂದು ಅಮಲಿನಂತೆ ಸರಿ. ಏಕೆಂದರೆ ಬಾಬಾಸಾಹೇಬ ಅವುಗಳಲ್ಲಿ ಇಲ್ಲ.

ನಾವು ಮಾಡುವ ಯಾವುದೇ ಕಾರ್ಯ-ಕಾರಣ-ಪರಿಣಾಮಗಳನ್ನು ವಿವೇಕಶೀಲರಾಗಿ ನೋಡುವ ಕಿಂಚಿತ್ತು ವ್ಯವಧಾನ ಇಲ್ಲದಾಗಿದ್ದು ಇಂದ್ರಿಯಗಳ ಪ್ರಲೋಭನೆಗೆ ಒಳಗಾಗಿ ಸುಖಸಂತೋಷ ತೃಪ್ತಿಗಳೆಂಬ ಇಲ್ಲದ ಭ್ರಮೆಗಳ ದಾಸರಾಗಿ ನಿಸರ್ಗಸಹಜ ಬದುಕು ಇಲ್ಲದಾಗಿದೆ.

ಎಸ್.ಕೆ.ಥೋರಟ್ ಎಂಬ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ‘Birth is nothing, environment is everything’. ಬೆಳೆಯುವ ಮಗುವಿನ ಮನಸ್ಸು, ಪೂರ್ಣಬದುಕನ್ನು ಪರಿಸರ ರೂಪಿಸುತ್ತದೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು!

ಸಾಮಾಜಿಕ ಪರಿಸರದಲ್ಲಿನ ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳಲು ಬಳಸುವ ಸಂಕೇತಗಳು, ಆಚರಣೆಗಳು, ಮೇಲು-ಕೀಳು, ಎಡ-ಬಲ, ಹೆಚ್ಚು-ಕಡಿಮೆ, ಸ್ಪೃಶ್ಯ-ಅಸ್ಪೃಶ್ಯ, ಸಹ್ಯ-ಅಸಹ್ಯ ಹೀಗೆ ಒಂದು ಬೇಧವು ಇಲ್ಲದ ಬೇಧಗಳನ್ನು ಉದ್ದೀಪಿಸಬಲ್ಲದಾಗಿರುತ್ತದೆ.

ಇದು ಮಗುವಿನ ಆಲೋಚನಾಕ್ರಮದ ಮೇಲೆ ಸೂಕ್ಷ್ಮ ಹಾಗೂ ಪರೋಕ್ಷ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಣವು ಮಗವಿನ ಸರ್ವತೋಮುಖ ಅಭಿವೃದ್ಧಿಯ ಪರಮೋಚ್ಛಗುರಿಯಾಗಿದ್ದು, ಶೋಷಣೆಯ ಅಸ್ತ್ರಗಳನ್ನು ಗುರುತಿಸಿಕೊಳ್ಳವ, ಧಾರ್ಮಿಕ ಅಚರಣೆಯ ಮುಖವಾಡಗಳನ್ನು ಕಳಚಿ ಗುಲಾಮತನದಿಂದ ವಿಮುಕ್ತಿ ಪಡೆಯುವಂತಿರಬೇಕು. ಶಿಕ್ಷಣತಜ್ಞ ಯಶಪಾಲ್‌ರ ಪ್ರತಿಪಾದನೆಯಂತೆ ’ಜೀವನ ಮೌಲ್ಯಗಳು ಕಲಿಕೆಯ ಭಾಗವಾಗಬೇಕು; ಜ್ಞಾನಾರ್ಜನೆ ಜೀವನದ ಭಾಗವಾಗಬೇಕು’. ಶಿಕ್ಷಣಕ್ಷೇತ್ರವು ವೈಜ್ಞಾನಿಕದೃಷ್ಟಿ ಮತ್ತು ನೈತಿಕ ನೆಲಗಟ್ಟಿನ ಮೇಲೆ ರೂಪಿಸಲ್ಪಟ್ಟಾಗ ವೈಚಾರಿಕತೆ ಮನೋಭಾವ ಬೆಳೆಯಲು ಸಾದ್ಯವಾಗುತ್ತದೆ.

ಮೇಲ್ಜಾತಿ ಮನಸ್ಸುಗಳು ನಮ್ಮನ್ನು ಹೊರಗಿಟ್ಟು ನೋಡುತ್ತಿರುವಂತೆ, ನಾವು ಅಂಬೇಡ್ಕರ್‌ರ ಆಶಯಗಳನ್ನು ಹೊರಗಿಟ್ಟಿದ್ದೇವೆ. ಇದು ಕೇವಲ ಮೂರ್ತಿಪೂಜೆ, ದಿನಾಚರಣೆಗಳಿಗೆ, ಚರ್ಚೆಗಳಿಗೆ ಸೀಮಿತವಾಗಿದೆ. ಹೀಗಾಗಿ ಬಾಬಾಸಾಹೇಬರು ಹೇಳುವ ಶಿಕ್ಷಣ-ಸಂಘಟನೆ-ಹೋರಾಟ-ಕ್ರಾಂತಿ ಇವೆಲ್ಲವೂ ಕೂಡ ಬುದ್ಧಿಮತ್ತೆಯಿಂದ ಕೆಳಗಿಳಿದು ನಡೆಗಳಲ್ಲಿ ಬರಬೇಕಿದೆ.

ಹ.ಮಾ.ರಾಮಚಂದ್ರ

ಹ.ಮಾ.ರಾಮಚಂದ್ರ

ಅವಿಭಜಿತ ಕೋಲಾರ ಜಿಲ್ಲೆಯ ದಲಿತ ಚಳವಳಿಯ ಹಿರಿಯ ನಾಯಕರಲ್ಲೊಬ್ಬರು. ಪ್ರಸ್ತುತ ಕೋಲಾರದ ಆದಿಮದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಇದನ್ನೂ ಓದಿ: ನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...