Homeಮುಖಪುಟವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

ವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

- Advertisement -
- Advertisement -

ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯಾತೀತ ಗಣರಾಜ್ಯ ಸ್ಥಾಪಿಸಿದ್ದೇವೆ ಎಂದಲ್ಲ, ಸ್ಥಾಪಿಸಬೇಕಿದೆ ಎಂದು ಅದರ ಅರ್ಥ. ಅದೊಂದು ಆದರ್ಶ, ಅಂತಹ ಆದರ್ಶ ಸ್ಥಾಪನೆಯ ಪ್ರಕ್ರಿಯೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.

ಆದರೆ ನಾವು ಪಡೆದ ಇದುವರೆಗಿನ ಎಲ್ಲಾ ರೀತಿಯ (ಔಪಚಾರಿಕ -ಅನೌಪಚಾರಿಕ) ಶಿಕ್ಷಣದಲ್ಲಿಯೂ ದೇವರು, ಧರ್ಮ, ಪುನರ್ಜನ್ಮ, ಕರ್ಮಸಿದ್ದಾಂತ, ಅದೃಷ್ಟ, ಸ್ವರ್ಗ-ನರಕಗಳ ಮೌಢ್ಯಗಳ ಒಳನುಸುಳುವಿಕೆಯಿಂದ ಮೌಢ್ಯಗಳ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದು ಸಾಮಾಜಿಕ ಪೂರ್ವಾಗ್ರಹಗಳನ್ನು ಕಲಿಸುತ್ತಿದ್ದು, ಸಾಮಾಜಿಕ ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವಂತಹ, ಸಮಾನತೆಗಾಗಿ ಸಮಾನ ಶಿಕ್ಷಣ ಅನುಷ್ಟಾನದ ಬಗ್ಗೆ ಗಂಭೀರವಾಗಿ ಚಿಂತನ-ಮಂಥನ ನಡೆಯಬೇಕು.

ಶಬ್ದ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಕಳೆದುಹೋದಾಗ ವೈಚಾರಿಕತೆ ಮತ್ತು ಚಿಂತನೆ ಕೇವಲ ಹತಾಶೆಯ ತತ್ವಜ್ಞಾನಗಳಾಗುತ್ತವೆ. ಬಹುಶಃ ಇಂದಿನ ಎಲ್ಲಾ ಚಿಂತನೆ ವೈಚಾರಿಕತೆಗಳು ಕೂಡ, ಬದುಕಿನ ವಾಸ್ತವ ಸ್ಥಿತಿಯಿಂದ ಸಂಬಂಧ ಕಳೆದುಕೊಳ್ಳುವುದಕ್ಕೆ ಇದೇ ಕಾರಣವಾಗಿದೆ.

ಶಬ್ಧ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಎಂದರೆ ಏನು? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು, ಸಂಪುಟ 3ರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಕ್ರಾಂತಿಯು ಎಲ್ಲಾ ತತ್ವಜ್ಞಾನಗಳ ಜನನಿ, ಅದು ಬೆಳಕನ್ನು ಬೀರುವ ಜ್ಯೋತಿ”, ಒಂದು ಬದಲಾವಣೆಯು ಅತ್ಯಮೂಲ್ಯವಾದ ತತ್ವಜ್ಞಾನವನ್ನು ಸೃಷ್ಟಿಸುತ್ತದೆಯೇ ವಿನಃ ತತ್ವಜ್ಞಾನ ಇಟ್ಟುಕೊಂಡು ಬದಲಾವಣೆಗೆ ಕಾಯವುದು, ಪರಿವರ್ತನೆಯನ್ನು ಮುಂದೂಡುತ್ತಲೇ ಇರುತ್ತದೆ.

ಆದ್ದರಿಂದ ಇಲ್ಲಿಯವರೆಗಿನ ಎಲ್ಲಾ ಚಿಂತನೆ ಮತ್ತು ವೈಚಾರಿಕತೆಯನ್ನು ಬದಿಗಿರಿಸಿ, ನಾವು ಯಾವ ವಿಚಾರದಲ್ಲಿ ಬದಲಾಗಬೇಕೆಂಬುದನ್ನು ಗುರುತಿಸಿಕೊಳ್ಳದಿದ್ದರೆ ಎಲ್ಲಾರೂ ಬೋಧಗುರುಗಳಾಗುತ್ತವೆ.

ಇದಕ್ಕೆ ಸಂತ ಕೈವಾರ ನಾರಾಯಣತಾತ ಒಂದೆಡೆ,

“ಬೋದೆ ಗುರುಗಳ ಮಾತು,
ಬದುಕು ಚಪಲವಾಯಿತು
ಇದ್ದ ಮತಿ ನೆಗೆದೋಯಿತು
ಪಾಮರನಾದೆ” ಎಂದೆನ್ನುತ್ತಾರೆ.

ನೈಜ ಬದುಕಿನ ವಸ್ತುಸ್ಥಿತಿ ಮತ್ತು ಅದರ ಸಂಕೀರ್ಣಗಳು ಪ್ರತಿಕ್ರಿಯೆಯಲ್ಲಿರುತ್ತವೆಯೇ ವಿನಃ ಪರಿವರ್ತನೆಯಾಗಲು ಬಳಕೆಯಾಗಿದ್ದು ತೀರ ಕಡಿಮೆಯೆನ್ನಬಹುದು. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅದರ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ. ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನು ಅವುಗಳ ಪರಿಣಾಮವನ್ನು ಮಂಕಾಗಿಸುತ್ತಿರುತ್ತದೆ. ಯಥಾವತ್ತಾಗಿ ಅನುಷ್ಠಾನಗೊಳ್ಳದ ಸಂವಿಧಾನ ಲಿಖಿತರೂಪದಲ್ಲಿ ಜಾರಿಯಲ್ಲಿದೆಯೆಂದು ಹೇಳುವ ನಮಗೆ ಮನುಧರ್ಮಶಾಸ್ತ್ರದ ಗುಲಾಮ ಮನಸ್ಸಿನ ಗುಣಗಳು, ಮನ-ಮನೆಯಲ್ಲಿ ನಿರಂತರವಾಗಿ ಮುಂದುವರೆದಿರುವುದು ಸೋಜಿಗದ ಸಂಗತಿಯೇ ಸರಿ.

ಹೇಗೆಂದರೆ… ’ನಾವು ಬಾಗಿಲು ಕಿಟಕಿಗಳಲ್ಲಿ ಗೂಡುಕಟ್ಟುವ ಒಂದು ಬಗೆಯ ’ಕಣಜ’ದ ಕೀಟವನ್ನು ಎಲ್ಲರೂ ನೋಡಿರುತ್ತೀರಿ. ಕೀಟ ಮಣ್ಣಿನಿಂದ ಚಿಕ್ಕಗೂಡನ್ನು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಟ್ಟು, ಅವು ಮರಿಗಳಾಗಿ ಬೆಳವಣಿಗೆಯಾಗುವವರೆಗೆ, ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿ ಮಣ್ಣಿನ ಬಾಗಿಲನ್ನು ಮುಚ್ಚಿಹೊರಟುಹೋಗುತ್ತದೆ. ಆ ಕೀಟವು ತನ್ನ ಕೋಟೆಯ ಹತ್ತಿರ ಎಂದಿಗೂ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅದರ ಜೀವಿತಾವಧಿ ಕೊನೆಯಾಗಿರುತ್ತದೆ. ಗೂಡಿನೊಳಗಿರುವ ಮೊಟ್ಟೆಗಳು ಒಡೆದು ಮರಿಗಳಾಗಿ ಅಮ್ಮನು ಕೂಡಿಟ್ಟ ಆಹಾರವನ್ನು ತಿಂದು ಬೆಳೆದು ಲಾರ್ವ ಹಂತ ಮುಟ್ಟಿ, ರೆಕ್ಕೆಪುಕ್ಕ ಬಂದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಕೋಟೆಯ ಬಾಗಿಲನ್ನು ಸೀಳಿಕೊಂಡು ಹೊಸ ಜಗತ್ತಿಗೆ ಬಂದ ಕೂಡಲೆ ಅವು ಎಂದೂ ನೋಡಿರದ ಬದುಕಿನ ವಿಧಾನಗಳಲ್ಲಿ ಅಮ್ಮನನ್ನು ಅನುಕರಿಸುತ್ತವೆ!’

ಇದು ಹೇಗೆ ಸಾಧ್ಯ?
ಇದರ ಶಾಲೆ ಯಾವುದು?
ವಂಶದಿಂದ ವಂಶಕ್ಕೆ ಹರಿದು ಬರುತ್ತಿರುವ ತಿಳಿವಿನ ರೀತಿ-ನೀತಿಯಾದರು ಎಂತಹುದು ?

ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಭೌತಿಕವಾಗಿ ಸುಟ್ಟರೂ ಅದರ ಸಾರ ಅಳಿಯದೆ ಮಾನಸಿಕವಾಗಿ ಉಳಿದು ನಡವಳಿಕೆಯಲ್ಲಿ ಜೀವಂತಿಕೆಯಾಗಿರಲು ಸಾಧ್ಯವಾಗಿದ್ದಾದರೂ ಹೇಗೆ?

ಅಂಬೇಡ್ಕರ್‌ವಾದವೆಂದರೆ ಕೇವಲ ಒಬ್ಬ ವ್ಯಕ್ತಿಯ ವಾದವಲ್ಲ, ಅದು ಬುದ್ಧ ಬಸವಾದಿಯಾಗಿ ಎಲ್ಲ ಸಂತ, ಶರಣ, ದಾಸರ ಸಾಮಾಜಿಕ ಪರಿವರ್ತನೆಕಾರರ ಸಿದ್ಧಾಂತವಾಗಿದೆ.

ಇಂದು ಅಂಬೇಡ್ಕರ್ ದಲಿತರಿಗೆ ಹುಚ್ಚು ಕುರುಡು ಪ್ರೀತಿಯಾಗಿದ್ದಾರೆಯೇ ವಿನಃ ಒಬ್ಬ ತತ್ವಜ್ಞಾನಿಯಾಗಿ, ಸೈದ್ಧಾಂತಿಕವಾದಿಯಾಗಿ ದಲಿತ ಸಮಾಜದ ವಿಮೋಚಕನಾಗಿ ಕಂಡಿಲ್ಲ. ಅಂಬೇಡ್ಕರ್ ಮೂರ್ತಿಗಳನ್ನು ಭಗ್ನಗೊಳಿಸಿದಾಗ, ಅವರನ್ನು ಯಾರಾದರೂ ಬೈದಾಗ ಮಾತ್ರ ದಲಿತರು ಸಿಡಿದು ಸಿಟ್ಟಾಗಿ ಭಾವುಕರಾಗುತ್ತಾರೆ. ಈ ಎಚ್ಚರ ಭಾವುಕತೆಯ ಪರಿಧಿ ಮೀರಿ ತಾತ್ವಿಕ ನೆಲೆಗಟ್ಟಿನಲ್ಲಿ ದಲಿತರ ಎದೆ-ಎದೆಗೆ ತಲುಪಬೇಕಿದೆ. ಬಾಬಾಸಾಹೇಬರನ್ನು ವಿಗ್ರಹ-ಅನುಗ್ರಹ ರೂಪಗಳಲ್ಲಿ, ಆವೇಶಭರಿತ (Emotional) ಸಂಭ್ರಮಗಳ ರೂಪದಲ್ಲಿಯೂ ಚಿಂತಿಸುವುದು ಒಂದು ಅಮಲಿನಂತೆ ಸರಿ. ಏಕೆಂದರೆ ಬಾಬಾಸಾಹೇಬ ಅವುಗಳಲ್ಲಿ ಇಲ್ಲ.

ನಾವು ಮಾಡುವ ಯಾವುದೇ ಕಾರ್ಯ-ಕಾರಣ-ಪರಿಣಾಮಗಳನ್ನು ವಿವೇಕಶೀಲರಾಗಿ ನೋಡುವ ಕಿಂಚಿತ್ತು ವ್ಯವಧಾನ ಇಲ್ಲದಾಗಿದ್ದು ಇಂದ್ರಿಯಗಳ ಪ್ರಲೋಭನೆಗೆ ಒಳಗಾಗಿ ಸುಖಸಂತೋಷ ತೃಪ್ತಿಗಳೆಂಬ ಇಲ್ಲದ ಭ್ರಮೆಗಳ ದಾಸರಾಗಿ ನಿಸರ್ಗಸಹಜ ಬದುಕು ಇಲ್ಲದಾಗಿದೆ.

ಎಸ್.ಕೆ.ಥೋರಟ್ ಎಂಬ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ‘Birth is nothing, environment is everything’. ಬೆಳೆಯುವ ಮಗುವಿನ ಮನಸ್ಸು, ಪೂರ್ಣಬದುಕನ್ನು ಪರಿಸರ ರೂಪಿಸುತ್ತದೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು!

ಸಾಮಾಜಿಕ ಪರಿಸರದಲ್ಲಿನ ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳಲು ಬಳಸುವ ಸಂಕೇತಗಳು, ಆಚರಣೆಗಳು, ಮೇಲು-ಕೀಳು, ಎಡ-ಬಲ, ಹೆಚ್ಚು-ಕಡಿಮೆ, ಸ್ಪೃಶ್ಯ-ಅಸ್ಪೃಶ್ಯ, ಸಹ್ಯ-ಅಸಹ್ಯ ಹೀಗೆ ಒಂದು ಬೇಧವು ಇಲ್ಲದ ಬೇಧಗಳನ್ನು ಉದ್ದೀಪಿಸಬಲ್ಲದಾಗಿರುತ್ತದೆ.

ಇದು ಮಗುವಿನ ಆಲೋಚನಾಕ್ರಮದ ಮೇಲೆ ಸೂಕ್ಷ್ಮ ಹಾಗೂ ಪರೋಕ್ಷ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಣವು ಮಗವಿನ ಸರ್ವತೋಮುಖ ಅಭಿವೃದ್ಧಿಯ ಪರಮೋಚ್ಛಗುರಿಯಾಗಿದ್ದು, ಶೋಷಣೆಯ ಅಸ್ತ್ರಗಳನ್ನು ಗುರುತಿಸಿಕೊಳ್ಳವ, ಧಾರ್ಮಿಕ ಅಚರಣೆಯ ಮುಖವಾಡಗಳನ್ನು ಕಳಚಿ ಗುಲಾಮತನದಿಂದ ವಿಮುಕ್ತಿ ಪಡೆಯುವಂತಿರಬೇಕು. ಶಿಕ್ಷಣತಜ್ಞ ಯಶಪಾಲ್‌ರ ಪ್ರತಿಪಾದನೆಯಂತೆ ’ಜೀವನ ಮೌಲ್ಯಗಳು ಕಲಿಕೆಯ ಭಾಗವಾಗಬೇಕು; ಜ್ಞಾನಾರ್ಜನೆ ಜೀವನದ ಭಾಗವಾಗಬೇಕು’. ಶಿಕ್ಷಣಕ್ಷೇತ್ರವು ವೈಜ್ಞಾನಿಕದೃಷ್ಟಿ ಮತ್ತು ನೈತಿಕ ನೆಲಗಟ್ಟಿನ ಮೇಲೆ ರೂಪಿಸಲ್ಪಟ್ಟಾಗ ವೈಚಾರಿಕತೆ ಮನೋಭಾವ ಬೆಳೆಯಲು ಸಾದ್ಯವಾಗುತ್ತದೆ.

ಮೇಲ್ಜಾತಿ ಮನಸ್ಸುಗಳು ನಮ್ಮನ್ನು ಹೊರಗಿಟ್ಟು ನೋಡುತ್ತಿರುವಂತೆ, ನಾವು ಅಂಬೇಡ್ಕರ್‌ರ ಆಶಯಗಳನ್ನು ಹೊರಗಿಟ್ಟಿದ್ದೇವೆ. ಇದು ಕೇವಲ ಮೂರ್ತಿಪೂಜೆ, ದಿನಾಚರಣೆಗಳಿಗೆ, ಚರ್ಚೆಗಳಿಗೆ ಸೀಮಿತವಾಗಿದೆ. ಹೀಗಾಗಿ ಬಾಬಾಸಾಹೇಬರು ಹೇಳುವ ಶಿಕ್ಷಣ-ಸಂಘಟನೆ-ಹೋರಾಟ-ಕ್ರಾಂತಿ ಇವೆಲ್ಲವೂ ಕೂಡ ಬುದ್ಧಿಮತ್ತೆಯಿಂದ ಕೆಳಗಿಳಿದು ನಡೆಗಳಲ್ಲಿ ಬರಬೇಕಿದೆ.

ಹ.ಮಾ.ರಾಮಚಂದ್ರ

ಹ.ಮಾ.ರಾಮಚಂದ್ರ

ಅವಿಭಜಿತ ಕೋಲಾರ ಜಿಲ್ಲೆಯ ದಲಿತ ಚಳವಳಿಯ ಹಿರಿಯ ನಾಯಕರಲ್ಲೊಬ್ಬರು. ಪ್ರಸ್ತುತ ಕೋಲಾರದ ಆದಿಮದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಇದನ್ನೂ ಓದಿ: ನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...