Homeಮುಖಪುಟವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

ವೈಚಾರಿಕ ಶಿಕ್ಷಣ ಮಾನವತೆಗೆ ದಾರಿ ದೀವಿಗೆ: ಹ.ಮಾ.ರಾಮಚಂದ್ರ

- Advertisement -
- Advertisement -

ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯಾತೀತ ಗಣರಾಜ್ಯ ಸ್ಥಾಪಿಸಿದ್ದೇವೆ ಎಂದಲ್ಲ, ಸ್ಥಾಪಿಸಬೇಕಿದೆ ಎಂದು ಅದರ ಅರ್ಥ. ಅದೊಂದು ಆದರ್ಶ, ಅಂತಹ ಆದರ್ಶ ಸ್ಥಾಪನೆಯ ಪ್ರಕ್ರಿಯೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.

ಆದರೆ ನಾವು ಪಡೆದ ಇದುವರೆಗಿನ ಎಲ್ಲಾ ರೀತಿಯ (ಔಪಚಾರಿಕ -ಅನೌಪಚಾರಿಕ) ಶಿಕ್ಷಣದಲ್ಲಿಯೂ ದೇವರು, ಧರ್ಮ, ಪುನರ್ಜನ್ಮ, ಕರ್ಮಸಿದ್ದಾಂತ, ಅದೃಷ್ಟ, ಸ್ವರ್ಗ-ನರಕಗಳ ಮೌಢ್ಯಗಳ ಒಳನುಸುಳುವಿಕೆಯಿಂದ ಮೌಢ್ಯಗಳ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದು ಸಾಮಾಜಿಕ ಪೂರ್ವಾಗ್ರಹಗಳನ್ನು ಕಲಿಸುತ್ತಿದ್ದು, ಸಾಮಾಜಿಕ ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವಂತಹ, ಸಮಾನತೆಗಾಗಿ ಸಮಾನ ಶಿಕ್ಷಣ ಅನುಷ್ಟಾನದ ಬಗ್ಗೆ ಗಂಭೀರವಾಗಿ ಚಿಂತನ-ಮಂಥನ ನಡೆಯಬೇಕು.

ಶಬ್ದ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಕಳೆದುಹೋದಾಗ ವೈಚಾರಿಕತೆ ಮತ್ತು ಚಿಂತನೆ ಕೇವಲ ಹತಾಶೆಯ ತತ್ವಜ್ಞಾನಗಳಾಗುತ್ತವೆ. ಬಹುಶಃ ಇಂದಿನ ಎಲ್ಲಾ ಚಿಂತನೆ ವೈಚಾರಿಕತೆಗಳು ಕೂಡ, ಬದುಕಿನ ವಾಸ್ತವ ಸ್ಥಿತಿಯಿಂದ ಸಂಬಂಧ ಕಳೆದುಕೊಳ್ಳುವುದಕ್ಕೆ ಇದೇ ಕಾರಣವಾಗಿದೆ.

ಶಬ್ಧ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಎಂದರೆ ಏನು? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು, ಸಂಪುಟ 3ರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಕ್ರಾಂತಿಯು ಎಲ್ಲಾ ತತ್ವಜ್ಞಾನಗಳ ಜನನಿ, ಅದು ಬೆಳಕನ್ನು ಬೀರುವ ಜ್ಯೋತಿ”, ಒಂದು ಬದಲಾವಣೆಯು ಅತ್ಯಮೂಲ್ಯವಾದ ತತ್ವಜ್ಞಾನವನ್ನು ಸೃಷ್ಟಿಸುತ್ತದೆಯೇ ವಿನಃ ತತ್ವಜ್ಞಾನ ಇಟ್ಟುಕೊಂಡು ಬದಲಾವಣೆಗೆ ಕಾಯವುದು, ಪರಿವರ್ತನೆಯನ್ನು ಮುಂದೂಡುತ್ತಲೇ ಇರುತ್ತದೆ.

ಆದ್ದರಿಂದ ಇಲ್ಲಿಯವರೆಗಿನ ಎಲ್ಲಾ ಚಿಂತನೆ ಮತ್ತು ವೈಚಾರಿಕತೆಯನ್ನು ಬದಿಗಿರಿಸಿ, ನಾವು ಯಾವ ವಿಚಾರದಲ್ಲಿ ಬದಲಾಗಬೇಕೆಂಬುದನ್ನು ಗುರುತಿಸಿಕೊಳ್ಳದಿದ್ದರೆ ಎಲ್ಲಾರೂ ಬೋಧಗುರುಗಳಾಗುತ್ತವೆ.

ಇದಕ್ಕೆ ಸಂತ ಕೈವಾರ ನಾರಾಯಣತಾತ ಒಂದೆಡೆ,

“ಬೋದೆ ಗುರುಗಳ ಮಾತು,
ಬದುಕು ಚಪಲವಾಯಿತು
ಇದ್ದ ಮತಿ ನೆಗೆದೋಯಿತು
ಪಾಮರನಾದೆ” ಎಂದೆನ್ನುತ್ತಾರೆ.

ನೈಜ ಬದುಕಿನ ವಸ್ತುಸ್ಥಿತಿ ಮತ್ತು ಅದರ ಸಂಕೀರ್ಣಗಳು ಪ್ರತಿಕ್ರಿಯೆಯಲ್ಲಿರುತ್ತವೆಯೇ ವಿನಃ ಪರಿವರ್ತನೆಯಾಗಲು ಬಳಕೆಯಾಗಿದ್ದು ತೀರ ಕಡಿಮೆಯೆನ್ನಬಹುದು. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅದರ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ. ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನು ಅವುಗಳ ಪರಿಣಾಮವನ್ನು ಮಂಕಾಗಿಸುತ್ತಿರುತ್ತದೆ. ಯಥಾವತ್ತಾಗಿ ಅನುಷ್ಠಾನಗೊಳ್ಳದ ಸಂವಿಧಾನ ಲಿಖಿತರೂಪದಲ್ಲಿ ಜಾರಿಯಲ್ಲಿದೆಯೆಂದು ಹೇಳುವ ನಮಗೆ ಮನುಧರ್ಮಶಾಸ್ತ್ರದ ಗುಲಾಮ ಮನಸ್ಸಿನ ಗುಣಗಳು, ಮನ-ಮನೆಯಲ್ಲಿ ನಿರಂತರವಾಗಿ ಮುಂದುವರೆದಿರುವುದು ಸೋಜಿಗದ ಸಂಗತಿಯೇ ಸರಿ.

ಹೇಗೆಂದರೆ… ’ನಾವು ಬಾಗಿಲು ಕಿಟಕಿಗಳಲ್ಲಿ ಗೂಡುಕಟ್ಟುವ ಒಂದು ಬಗೆಯ ’ಕಣಜ’ದ ಕೀಟವನ್ನು ಎಲ್ಲರೂ ನೋಡಿರುತ್ತೀರಿ. ಕೀಟ ಮಣ್ಣಿನಿಂದ ಚಿಕ್ಕಗೂಡನ್ನು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಟ್ಟು, ಅವು ಮರಿಗಳಾಗಿ ಬೆಳವಣಿಗೆಯಾಗುವವರೆಗೆ, ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿ ಮಣ್ಣಿನ ಬಾಗಿಲನ್ನು ಮುಚ್ಚಿಹೊರಟುಹೋಗುತ್ತದೆ. ಆ ಕೀಟವು ತನ್ನ ಕೋಟೆಯ ಹತ್ತಿರ ಎಂದಿಗೂ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅದರ ಜೀವಿತಾವಧಿ ಕೊನೆಯಾಗಿರುತ್ತದೆ. ಗೂಡಿನೊಳಗಿರುವ ಮೊಟ್ಟೆಗಳು ಒಡೆದು ಮರಿಗಳಾಗಿ ಅಮ್ಮನು ಕೂಡಿಟ್ಟ ಆಹಾರವನ್ನು ತಿಂದು ಬೆಳೆದು ಲಾರ್ವ ಹಂತ ಮುಟ್ಟಿ, ರೆಕ್ಕೆಪುಕ್ಕ ಬಂದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಕೋಟೆಯ ಬಾಗಿಲನ್ನು ಸೀಳಿಕೊಂಡು ಹೊಸ ಜಗತ್ತಿಗೆ ಬಂದ ಕೂಡಲೆ ಅವು ಎಂದೂ ನೋಡಿರದ ಬದುಕಿನ ವಿಧಾನಗಳಲ್ಲಿ ಅಮ್ಮನನ್ನು ಅನುಕರಿಸುತ್ತವೆ!’

ಇದು ಹೇಗೆ ಸಾಧ್ಯ?
ಇದರ ಶಾಲೆ ಯಾವುದು?
ವಂಶದಿಂದ ವಂಶಕ್ಕೆ ಹರಿದು ಬರುತ್ತಿರುವ ತಿಳಿವಿನ ರೀತಿ-ನೀತಿಯಾದರು ಎಂತಹುದು ?

ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಭೌತಿಕವಾಗಿ ಸುಟ್ಟರೂ ಅದರ ಸಾರ ಅಳಿಯದೆ ಮಾನಸಿಕವಾಗಿ ಉಳಿದು ನಡವಳಿಕೆಯಲ್ಲಿ ಜೀವಂತಿಕೆಯಾಗಿರಲು ಸಾಧ್ಯವಾಗಿದ್ದಾದರೂ ಹೇಗೆ?

ಅಂಬೇಡ್ಕರ್‌ವಾದವೆಂದರೆ ಕೇವಲ ಒಬ್ಬ ವ್ಯಕ್ತಿಯ ವಾದವಲ್ಲ, ಅದು ಬುದ್ಧ ಬಸವಾದಿಯಾಗಿ ಎಲ್ಲ ಸಂತ, ಶರಣ, ದಾಸರ ಸಾಮಾಜಿಕ ಪರಿವರ್ತನೆಕಾರರ ಸಿದ್ಧಾಂತವಾಗಿದೆ.

ಇಂದು ಅಂಬೇಡ್ಕರ್ ದಲಿತರಿಗೆ ಹುಚ್ಚು ಕುರುಡು ಪ್ರೀತಿಯಾಗಿದ್ದಾರೆಯೇ ವಿನಃ ಒಬ್ಬ ತತ್ವಜ್ಞಾನಿಯಾಗಿ, ಸೈದ್ಧಾಂತಿಕವಾದಿಯಾಗಿ ದಲಿತ ಸಮಾಜದ ವಿಮೋಚಕನಾಗಿ ಕಂಡಿಲ್ಲ. ಅಂಬೇಡ್ಕರ್ ಮೂರ್ತಿಗಳನ್ನು ಭಗ್ನಗೊಳಿಸಿದಾಗ, ಅವರನ್ನು ಯಾರಾದರೂ ಬೈದಾಗ ಮಾತ್ರ ದಲಿತರು ಸಿಡಿದು ಸಿಟ್ಟಾಗಿ ಭಾವುಕರಾಗುತ್ತಾರೆ. ಈ ಎಚ್ಚರ ಭಾವುಕತೆಯ ಪರಿಧಿ ಮೀರಿ ತಾತ್ವಿಕ ನೆಲೆಗಟ್ಟಿನಲ್ಲಿ ದಲಿತರ ಎದೆ-ಎದೆಗೆ ತಲುಪಬೇಕಿದೆ. ಬಾಬಾಸಾಹೇಬರನ್ನು ವಿಗ್ರಹ-ಅನುಗ್ರಹ ರೂಪಗಳಲ್ಲಿ, ಆವೇಶಭರಿತ (Emotional) ಸಂಭ್ರಮಗಳ ರೂಪದಲ್ಲಿಯೂ ಚಿಂತಿಸುವುದು ಒಂದು ಅಮಲಿನಂತೆ ಸರಿ. ಏಕೆಂದರೆ ಬಾಬಾಸಾಹೇಬ ಅವುಗಳಲ್ಲಿ ಇಲ್ಲ.

ನಾವು ಮಾಡುವ ಯಾವುದೇ ಕಾರ್ಯ-ಕಾರಣ-ಪರಿಣಾಮಗಳನ್ನು ವಿವೇಕಶೀಲರಾಗಿ ನೋಡುವ ಕಿಂಚಿತ್ತು ವ್ಯವಧಾನ ಇಲ್ಲದಾಗಿದ್ದು ಇಂದ್ರಿಯಗಳ ಪ್ರಲೋಭನೆಗೆ ಒಳಗಾಗಿ ಸುಖಸಂತೋಷ ತೃಪ್ತಿಗಳೆಂಬ ಇಲ್ಲದ ಭ್ರಮೆಗಳ ದಾಸರಾಗಿ ನಿಸರ್ಗಸಹಜ ಬದುಕು ಇಲ್ಲದಾಗಿದೆ.

ಎಸ್.ಕೆ.ಥೋರಟ್ ಎಂಬ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ‘Birth is nothing, environment is everything’. ಬೆಳೆಯುವ ಮಗುವಿನ ಮನಸ್ಸು, ಪೂರ್ಣಬದುಕನ್ನು ಪರಿಸರ ರೂಪಿಸುತ್ತದೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು!

ಸಾಮಾಜಿಕ ಪರಿಸರದಲ್ಲಿನ ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳಲು ಬಳಸುವ ಸಂಕೇತಗಳು, ಆಚರಣೆಗಳು, ಮೇಲು-ಕೀಳು, ಎಡ-ಬಲ, ಹೆಚ್ಚು-ಕಡಿಮೆ, ಸ್ಪೃಶ್ಯ-ಅಸ್ಪೃಶ್ಯ, ಸಹ್ಯ-ಅಸಹ್ಯ ಹೀಗೆ ಒಂದು ಬೇಧವು ಇಲ್ಲದ ಬೇಧಗಳನ್ನು ಉದ್ದೀಪಿಸಬಲ್ಲದಾಗಿರುತ್ತದೆ.

ಇದು ಮಗುವಿನ ಆಲೋಚನಾಕ್ರಮದ ಮೇಲೆ ಸೂಕ್ಷ್ಮ ಹಾಗೂ ಪರೋಕ್ಷ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಣವು ಮಗವಿನ ಸರ್ವತೋಮುಖ ಅಭಿವೃದ್ಧಿಯ ಪರಮೋಚ್ಛಗುರಿಯಾಗಿದ್ದು, ಶೋಷಣೆಯ ಅಸ್ತ್ರಗಳನ್ನು ಗುರುತಿಸಿಕೊಳ್ಳವ, ಧಾರ್ಮಿಕ ಅಚರಣೆಯ ಮುಖವಾಡಗಳನ್ನು ಕಳಚಿ ಗುಲಾಮತನದಿಂದ ವಿಮುಕ್ತಿ ಪಡೆಯುವಂತಿರಬೇಕು. ಶಿಕ್ಷಣತಜ್ಞ ಯಶಪಾಲ್‌ರ ಪ್ರತಿಪಾದನೆಯಂತೆ ’ಜೀವನ ಮೌಲ್ಯಗಳು ಕಲಿಕೆಯ ಭಾಗವಾಗಬೇಕು; ಜ್ಞಾನಾರ್ಜನೆ ಜೀವನದ ಭಾಗವಾಗಬೇಕು’. ಶಿಕ್ಷಣಕ್ಷೇತ್ರವು ವೈಜ್ಞಾನಿಕದೃಷ್ಟಿ ಮತ್ತು ನೈತಿಕ ನೆಲಗಟ್ಟಿನ ಮೇಲೆ ರೂಪಿಸಲ್ಪಟ್ಟಾಗ ವೈಚಾರಿಕತೆ ಮನೋಭಾವ ಬೆಳೆಯಲು ಸಾದ್ಯವಾಗುತ್ತದೆ.

ಮೇಲ್ಜಾತಿ ಮನಸ್ಸುಗಳು ನಮ್ಮನ್ನು ಹೊರಗಿಟ್ಟು ನೋಡುತ್ತಿರುವಂತೆ, ನಾವು ಅಂಬೇಡ್ಕರ್‌ರ ಆಶಯಗಳನ್ನು ಹೊರಗಿಟ್ಟಿದ್ದೇವೆ. ಇದು ಕೇವಲ ಮೂರ್ತಿಪೂಜೆ, ದಿನಾಚರಣೆಗಳಿಗೆ, ಚರ್ಚೆಗಳಿಗೆ ಸೀಮಿತವಾಗಿದೆ. ಹೀಗಾಗಿ ಬಾಬಾಸಾಹೇಬರು ಹೇಳುವ ಶಿಕ್ಷಣ-ಸಂಘಟನೆ-ಹೋರಾಟ-ಕ್ರಾಂತಿ ಇವೆಲ್ಲವೂ ಕೂಡ ಬುದ್ಧಿಮತ್ತೆಯಿಂದ ಕೆಳಗಿಳಿದು ನಡೆಗಳಲ್ಲಿ ಬರಬೇಕಿದೆ.

ಹ.ಮಾ.ರಾಮಚಂದ್ರ

ಹ.ಮಾ.ರಾಮಚಂದ್ರ

ಅವಿಭಜಿತ ಕೋಲಾರ ಜಿಲ್ಲೆಯ ದಲಿತ ಚಳವಳಿಯ ಹಿರಿಯ ನಾಯಕರಲ್ಲೊಬ್ಬರು. ಪ್ರಸ್ತುತ ಕೋಲಾರದ ಆದಿಮದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಇದನ್ನೂ ಓದಿ: ನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...