Homeಸಿನಿಮಾಕ್ರೀಡೆಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

- Advertisement -
- Advertisement -

ಶೇನ್ ವಾರ್ನ್ ಕ್ರಿಕೆಟ್ ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದವರು ಶೇನ್ ವಾರ್ನ್. ಎದುರಾಳಿ ತಂಡ ಯಾವುದೇ ಇರಲಿ ಗೆಲುವು ಮಾತ್ರ ಆಸ್ಟ್ರೇಲಿಯಾ ತಂಡದ್ದೆ ಎನ್ನುವ ಅಭಿಪ್ರಾಯವನ್ನು ಸಾರ್ವತ್ರಿಕ ಮಾಡಿದ್ದರಲ್ಲಿ ವಾರ್ನ್ ಪಾಲು ದೊಡ್ಡದಿದೆ. ಕ್ರಿಕೆಟ್ ಆಡುವ ಪಶ್ಚಿಮದ ದೇಶಗಳಲ್ಲಿ ಹೆಸರಾಂತ ವೇಗದ ಬೌಲರ್‌ಗಳು ಮುನ್ನೆಲೆಗೆ ಬಂದರು. ವಾಲ್ಷ್, ಅಂಬ್ರೋಸ್, ಮೆಕ್‌ಗ್ರಾತ್, ಬ್ರೆಟ್‌ಲೀ, ಶಾನ್ ಪೊಲಾಕ್, ಮಖಾಯಾ ಎಂಟಿನಿ, ಶೇನ್‌ಬಾಂಡ್, ಡರೆಲ್ ಟಫಿ, ಹೀತ್ ಸ್ಟ್ರೀಕ್, ಓಲಾಂಗ, ಡೇಲ್‌ಸ್ಟೇನ್ ಹೀಗೆ ಈ ಯಾದಿ ಸಾಗುತ್ತದೆ.

ಸ್ಪಿನ್ ಬೌಲಿಂಗ್‌ನಲ್ಲಿ ವಾರ್ನ್ ಪಡೆದಷ್ಟು ಪ್ರಸಿದ್ಧಿಯನ್ನು ಪಶ್ಚಿಮದ ದೇಶದ ಯಾವ ಸ್ಪಿನ್ನರ್ ಕೂಡ ಇದುವರೆಗೂ ಪಡೆಯಲು ಸಾಧ್ಯವಾಗಿಲ್ಲ. ಇಂಗ್ಲೆಂಡಿನ ಮೈಕ್ ಗ್ಯಾಟಿಂಗ್‌ಗೆ ವಾರ್ನ್ ಹಾಕಿದ ಒಂದು ಎಸೆತ ಶತಮಾನದ ಎಸೆತ ಎನಿಸಿಕೊಂಡಿದೆ. ಬಹುಶಃ ಅವತ್ತು ಗ್ಯಾಟಿಂಗ್ ಅಷ್ಟೆ ಅಲ್ಲ ದೇವರೆ ಕ್ರಿಸ್‌ನಲ್ಲಿ ಇದ್ದಿದ್ದರೂ ವಾರ್ನ್‌ನ ಆ ಎಸೆತದಿಂದ ಬೌಲ್ಡ್ ಆಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

ವಾರ್ನ್ ಚೆಂಡು ಕೈಗೆ ಬಂದ ಕೆಲವೆ ಸೆಕೆಂಡ್‌ಗಳಲ್ಲಿ ಬ್ಯಾಟ್ಸ್‌ಮೆನ್ ಫೇಸ್‌ರೀಡ್ ಮಾಡಿಬಿಡುತ್ತಿದ್ದ. ಬ್ಯಾಟ್ಸ್‌ಮೆನ್ ಮೈಮರೆಯುವ ಸೆಮಿಸೆಕೆಂಡ್ ಸಾಕಿತ್ತು ವಾರ್ನ್‌ಗೆ, ಅಷ್ಟರಲ್ಲಿ ಆ ಬ್ಯಾಟ್ಸ್‌ಮೆನ್ ವಾರ್ನ್‌ನ ಸ್ಪಿನ್ ಬಲೆಗೆ ಬಿದ್ದಿರುತ್ತಿದ್ದ. ವಾರ್ನ್‌ನ ಈ ಸೈಕಲಾಜಿಕಲ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಸಚಿನ್ ತೆಂಡೂಲ್ಕರ್. ಶಾರ್ಜಾದಲ್ಲಿ ವಾರ್ನ್ ಎಸೆತಗಳಿಗೆ ಸಚಿನ್ ಹೊಡೆದ ಸಿಕ್ಸರ್‌ಗಳು ನನ್ನನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದವು ಎಂದು ವಾರ್ನ್ ಹೇಳಿಕೊಂಡಿದ್ದ.

ಶೇನ್ ವಾರ್ನ್ ಪ್ರತಿಭಾವಂತ ಎನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಶೇನ್ ವಾರ್ನ್‌ನ ಸಮಕಾಲೀನ ಕ್ರಿಕೆಟಿಗನಾಗಿದ್ದ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌ನಿಂದ ವಾರ್ನ್‌ಗೆ ತೀವ್ರವಾದ ಪೈಪೋಟಿ ಇತ್ತು. ಆದರೆ ಮುರುಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಇದ್ದ ಆರೋಪಗಳು ಕೂಡ ಪರೋಕ್ಷವಾಗಿ ವಾರ್ನ್ ಖ್ಯಾತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು.

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸೇರಿ ಸಾವಿರ ವಿಕೆಟ್‌ಗಳನ್ನು ಪಡೆದ ಖ್ಯಾತಿ ವಾರ್ನ್‌ನದು. ಆತ ಮಹಾನ್ ಕ್ರಿಕೆಟಿಗ ಎಂದು ಹೇಳಲು ನಾನು ಸ್ವಲ್ಪವೂ ಯೋಚಿಸುವುದಿಲ್ಲ ಎನ್ನುವ ಸುನಿಲ್ ಗಾವಸ್ಕರ್ ಮಾತಿಗೆ ಮಹತ್ವವಿದೆ. 2000ನೇ ಇಸವಿಯಲ್ಲಿ ಕ್ರಿಕೆಟ್ ಪರಿಣಿತರ ಸಮಿತಿಗೆ ಶತಮಾನದ ಐದು ಜನ ಕ್ರಿಕೆಟರ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ವಾರ್ನ್ ಹೆಗ್ಗಳಿಕೆ. ವಿಶೇಷವೇನೆಂದರೆ ಆ ಸಮಯದಲ್ಲಿ ವಾರ್ನ್ ಇನ್ನೂ ಆಸ್ಟ್ರೇಲಿಯಾ ಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಇದೂವರೆಗೂ ಆ ಗೌರವ ಸಿಕ್ಕ ಏಕೈಕ ಬೌಲರ್ ವಾರ್ನ್. ಸುನಾಮಿಯಿಂದ ನಿರಾಶ್ರಿತರಾದವರಿಗೆ ಸಹಾಯ ಮಾಡಲು ಮೆಲ್ಬರ್ನ್‌ನಲ್ಲಿ ಒಂದು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು, ಆ ತಂಡದಲ್ಲಿ ಶೇನ್ ವಾರ್ನ್ ಇದ್ದರು. ಇಷ್ಟೇ ಅಲ್ಲದೆ ಸುನಾಮಿಯ ದುಷ್ಪರಿಣಾಮಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ತಮ್ಮ ದೀರ್ಘಾವಧಿಯ ಪ್ರತಿಸ್ಪರ್ಧಿ ಮುತ್ತಯ್ಯ ಮುರುಳೀಧರನ್ ಜೊತೆ ವಾರ್ನ್ ಕೈಜೋಡಿಸಿದರು. ಸುನಾಮಿ ದುರಂತದಿಂದ ಹಾನಿಗೊಳಗಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಸ್ಥಿತಿಗೆ ತರಲು ವಾರ್ನ್ ಚಾರಿಟೇಬಲ್ ಟ್ರಸ್ಟ್‌ನಿಂದ ವಾರ್ನ್ ಸಹಾಯ ಮಾಡಿದ್ದರು.

ಕ್ರಿಕೆಟ್ ಮೈದಾನದ ಆಚೆಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ ಶೇನ್ ವಾರ್ನ್‌ದು. ಯೌವ್ವನಿಗನಾಗಿ ಕಾಣಬೇಕೆಂಬ ಹಂಬಲ ವಾರ್ನ್‌ಗೆ ಬಹಳ ಇತ್ತು. ಕೂದಲಿನ ಬಣ್ಣದ ಕುರಿತು ಅವರಿಗೆ ಅಪಾರ ಕಾಳಜಿ. ಜೀವನವನ್ನು ಮೋಜಿನಿಂದ ಕಳೆಯಬೇಕು ಎನ್ನುವ ವಿಷಯದಲ್ಲಿ ವಾರ್ನ್‌ಗೆ ಯಾವುದೇ ಅನುಮಾನವಿರಲಿಲ್ಲ. ಹಣ, ಖ್ಯಾತಿ ಎಲ್ಲವು ಆತನನ್ನು ಹುಡುಕಿ ಬಂದಿತ್ತು. ಆಧುನಿಕ ಜಗತ್ತಿನ ಐಷಾರಾಮಿ ಬದುಕು ವಾರ್ನ್ ಜೀವನಶೈಲಿಯೆ ಆಗಿಹೋಗಿತ್ತು. ಬದುಕಿರುವಷ್ಟು ದಿನ ಜೀವನವನ್ನು ಸುಖಸಂತೋಷದಿಂದ ಕಳೆಯಬೇಕು ಎನ್ನುವ ವರ್ತಮಾನದ ಜಗತ್ತಿನ ಪ್ರತಿರೂಪವಾಗಿ ವಾರ್ನ್ ನಮಗೆ ಕಾಣುತ್ತಾನೆ. ಆತ ಅನೇಕ ಟಿ.ವಿ. ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇದೆಲ್ಲವು ಆತ ಇನ್ನಷ್ಟು ಜನಪ್ರಿಯನಾಗಲು ಬಳಸುತ್ತಿದ್ದ ಮಾರ್ಗವಾಗಿತ್ತು.

ಬಹುಶಃ ತನ್ನ ವರ್ಣರಂಜಿತ ಬದುಕಿನ ಕಾರಣಕ್ಕಾಗಿ ಅನೇಕ ವಿವಾದಗಳಿಗೂ ಕೂಡ ವಾರ್ನ್ ಒಳಗಾಗಬೇಕಾಯಿತು. ವಾರ್ನ್ ಕ್ರಿಕೆಟ್ ಆಡುವ ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಸ್ಟೀವ್ ವಾನನ್ನು ಅತ್ಯಂತ ಸ್ವಾರ್ಥಿ ಕ್ರಿಕೆಟಿಗ ಎಂದು ವಾರ್ನ್ ದೂಷಿಸಿದ. 1999ರ ವೆಸ್ಟ್ ಇಂಡಿಸ್ ಪ್ರವಾಸಕ್ಕೆ ತನ್ನನ್ನು ಕೈ ಬಿಡುವುದಕ್ಕೆ ಸ್ಟೀವ್ ವಾ ಕಾರಣವೆಂದು ವಾರ್ನ್‌ನ ವಾದವಾಗಿತ್ತು. ಬ್ರಿಟಿಷ್ ನರ್ಸ್ ಒಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ವಿವಾದವೂ ಕೂಡ ವಾರ್ನ್ ಮೇಲೆ ಬಂದಿತು. ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪಕ್ಕೂ ವಾರ್ನ್ ಒಳಗಾದರು. ವೈವಾಹಿಕ ಜೀವನದಲ್ಲಿಯೂ ಹಲವು ಏರುಪೇರುಗಳನ್ನು ಕಂಡವರು ಅವರು.

ಇವುಗಳೆಲ್ಲದರ ಆಚೆ ವಾರ್ನ್ ಬೌಲಿಂಗ್ ಒಂದು ದೃಶ್ಯ ಕಾವ್ಯ. ನಾಲಿಗೆಯನ್ನು ತುಟಿಯಂಚಿಗೆ ಚಾಚಿ ಆತ ಹಾಕುತ್ತಿದ್ದ ಎಸೆತ ಇತ್ತಲ್ಲ ಅದು ಬ್ಯಾಟ್ಸ್‌ಮೆನ್‌ನನ್ನು ವಂಚಿಸುತ್ತಿದ್ದ ಪರಿ ಇತ್ತಲ್ಲ ಅದು ವರ್ಣನಾತೀತ. ಇನ್ನು ಬಹಳಷ್ಟು ಬದುಕಬೇಕಿದ್ದ ವಾರ್ನ್ ತನ್ನ 52 ವಯಸ್ಸಿನಲ್ಲಿ ಥೈಲ್ಯಾಂಡ್‌ನಲ್ಲಿ ನಿಧನ ಹೊಂದಿದ. ಆತ ಥೈಲ್ಯಾಂಡ್‌ನಲ್ಲಿ ತನ್ನ ಅಂತಿಮ ಕ್ಷಣಗಳನ್ನು ಕಳೆದಿದ್ದು ಒಂದು ರೀತಿಯ ಸೋಜಿಗವೆ. ವಿದಾಯ ವಾರ್ನ್.

ಡಾ. ನವೀನ್ ಮಂಡಗದ್ದೆ
ಉಪನ್ಯಾಸಕರು, ಕನ್ನಡಭಾರತಿ ಕುವೆಂಪು ವಿಶ್ವವಿದ್ಯಾಲಯ.


ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...