Homeಸಿನಿಮಾಕ್ರೀಡೆಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

- Advertisement -
- Advertisement -

ಶೇನ್ ವಾರ್ನ್ ಕ್ರಿಕೆಟ್ ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದವರು ಶೇನ್ ವಾರ್ನ್. ಎದುರಾಳಿ ತಂಡ ಯಾವುದೇ ಇರಲಿ ಗೆಲುವು ಮಾತ್ರ ಆಸ್ಟ್ರೇಲಿಯಾ ತಂಡದ್ದೆ ಎನ್ನುವ ಅಭಿಪ್ರಾಯವನ್ನು ಸಾರ್ವತ್ರಿಕ ಮಾಡಿದ್ದರಲ್ಲಿ ವಾರ್ನ್ ಪಾಲು ದೊಡ್ಡದಿದೆ. ಕ್ರಿಕೆಟ್ ಆಡುವ ಪಶ್ಚಿಮದ ದೇಶಗಳಲ್ಲಿ ಹೆಸರಾಂತ ವೇಗದ ಬೌಲರ್‌ಗಳು ಮುನ್ನೆಲೆಗೆ ಬಂದರು. ವಾಲ್ಷ್, ಅಂಬ್ರೋಸ್, ಮೆಕ್‌ಗ್ರಾತ್, ಬ್ರೆಟ್‌ಲೀ, ಶಾನ್ ಪೊಲಾಕ್, ಮಖಾಯಾ ಎಂಟಿನಿ, ಶೇನ್‌ಬಾಂಡ್, ಡರೆಲ್ ಟಫಿ, ಹೀತ್ ಸ್ಟ್ರೀಕ್, ಓಲಾಂಗ, ಡೇಲ್‌ಸ್ಟೇನ್ ಹೀಗೆ ಈ ಯಾದಿ ಸಾಗುತ್ತದೆ.

ಸ್ಪಿನ್ ಬೌಲಿಂಗ್‌ನಲ್ಲಿ ವಾರ್ನ್ ಪಡೆದಷ್ಟು ಪ್ರಸಿದ್ಧಿಯನ್ನು ಪಶ್ಚಿಮದ ದೇಶದ ಯಾವ ಸ್ಪಿನ್ನರ್ ಕೂಡ ಇದುವರೆಗೂ ಪಡೆಯಲು ಸಾಧ್ಯವಾಗಿಲ್ಲ. ಇಂಗ್ಲೆಂಡಿನ ಮೈಕ್ ಗ್ಯಾಟಿಂಗ್‌ಗೆ ವಾರ್ನ್ ಹಾಕಿದ ಒಂದು ಎಸೆತ ಶತಮಾನದ ಎಸೆತ ಎನಿಸಿಕೊಂಡಿದೆ. ಬಹುಶಃ ಅವತ್ತು ಗ್ಯಾಟಿಂಗ್ ಅಷ್ಟೆ ಅಲ್ಲ ದೇವರೆ ಕ್ರಿಸ್‌ನಲ್ಲಿ ಇದ್ದಿದ್ದರೂ ವಾರ್ನ್‌ನ ಆ ಎಸೆತದಿಂದ ಬೌಲ್ಡ್ ಆಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

ವಾರ್ನ್ ಚೆಂಡು ಕೈಗೆ ಬಂದ ಕೆಲವೆ ಸೆಕೆಂಡ್‌ಗಳಲ್ಲಿ ಬ್ಯಾಟ್ಸ್‌ಮೆನ್ ಫೇಸ್‌ರೀಡ್ ಮಾಡಿಬಿಡುತ್ತಿದ್ದ. ಬ್ಯಾಟ್ಸ್‌ಮೆನ್ ಮೈಮರೆಯುವ ಸೆಮಿಸೆಕೆಂಡ್ ಸಾಕಿತ್ತು ವಾರ್ನ್‌ಗೆ, ಅಷ್ಟರಲ್ಲಿ ಆ ಬ್ಯಾಟ್ಸ್‌ಮೆನ್ ವಾರ್ನ್‌ನ ಸ್ಪಿನ್ ಬಲೆಗೆ ಬಿದ್ದಿರುತ್ತಿದ್ದ. ವಾರ್ನ್‌ನ ಈ ಸೈಕಲಾಜಿಕಲ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಸಚಿನ್ ತೆಂಡೂಲ್ಕರ್. ಶಾರ್ಜಾದಲ್ಲಿ ವಾರ್ನ್ ಎಸೆತಗಳಿಗೆ ಸಚಿನ್ ಹೊಡೆದ ಸಿಕ್ಸರ್‌ಗಳು ನನ್ನನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದವು ಎಂದು ವಾರ್ನ್ ಹೇಳಿಕೊಂಡಿದ್ದ.

ಶೇನ್ ವಾರ್ನ್ ಪ್ರತಿಭಾವಂತ ಎನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಶೇನ್ ವಾರ್ನ್‌ನ ಸಮಕಾಲೀನ ಕ್ರಿಕೆಟಿಗನಾಗಿದ್ದ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌ನಿಂದ ವಾರ್ನ್‌ಗೆ ತೀವ್ರವಾದ ಪೈಪೋಟಿ ಇತ್ತು. ಆದರೆ ಮುರುಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಇದ್ದ ಆರೋಪಗಳು ಕೂಡ ಪರೋಕ್ಷವಾಗಿ ವಾರ್ನ್ ಖ್ಯಾತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು.

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸೇರಿ ಸಾವಿರ ವಿಕೆಟ್‌ಗಳನ್ನು ಪಡೆದ ಖ್ಯಾತಿ ವಾರ್ನ್‌ನದು. ಆತ ಮಹಾನ್ ಕ್ರಿಕೆಟಿಗ ಎಂದು ಹೇಳಲು ನಾನು ಸ್ವಲ್ಪವೂ ಯೋಚಿಸುವುದಿಲ್ಲ ಎನ್ನುವ ಸುನಿಲ್ ಗಾವಸ್ಕರ್ ಮಾತಿಗೆ ಮಹತ್ವವಿದೆ. 2000ನೇ ಇಸವಿಯಲ್ಲಿ ಕ್ರಿಕೆಟ್ ಪರಿಣಿತರ ಸಮಿತಿಗೆ ಶತಮಾನದ ಐದು ಜನ ಕ್ರಿಕೆಟರ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ವಾರ್ನ್ ಹೆಗ್ಗಳಿಕೆ. ವಿಶೇಷವೇನೆಂದರೆ ಆ ಸಮಯದಲ್ಲಿ ವಾರ್ನ್ ಇನ್ನೂ ಆಸ್ಟ್ರೇಲಿಯಾ ಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಇದೂವರೆಗೂ ಆ ಗೌರವ ಸಿಕ್ಕ ಏಕೈಕ ಬೌಲರ್ ವಾರ್ನ್. ಸುನಾಮಿಯಿಂದ ನಿರಾಶ್ರಿತರಾದವರಿಗೆ ಸಹಾಯ ಮಾಡಲು ಮೆಲ್ಬರ್ನ್‌ನಲ್ಲಿ ಒಂದು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು, ಆ ತಂಡದಲ್ಲಿ ಶೇನ್ ವಾರ್ನ್ ಇದ್ದರು. ಇಷ್ಟೇ ಅಲ್ಲದೆ ಸುನಾಮಿಯ ದುಷ್ಪರಿಣಾಮಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ತಮ್ಮ ದೀರ್ಘಾವಧಿಯ ಪ್ರತಿಸ್ಪರ್ಧಿ ಮುತ್ತಯ್ಯ ಮುರುಳೀಧರನ್ ಜೊತೆ ವಾರ್ನ್ ಕೈಜೋಡಿಸಿದರು. ಸುನಾಮಿ ದುರಂತದಿಂದ ಹಾನಿಗೊಳಗಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಸ್ಥಿತಿಗೆ ತರಲು ವಾರ್ನ್ ಚಾರಿಟೇಬಲ್ ಟ್ರಸ್ಟ್‌ನಿಂದ ವಾರ್ನ್ ಸಹಾಯ ಮಾಡಿದ್ದರು.

ಕ್ರಿಕೆಟ್ ಮೈದಾನದ ಆಚೆಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ ಶೇನ್ ವಾರ್ನ್‌ದು. ಯೌವ್ವನಿಗನಾಗಿ ಕಾಣಬೇಕೆಂಬ ಹಂಬಲ ವಾರ್ನ್‌ಗೆ ಬಹಳ ಇತ್ತು. ಕೂದಲಿನ ಬಣ್ಣದ ಕುರಿತು ಅವರಿಗೆ ಅಪಾರ ಕಾಳಜಿ. ಜೀವನವನ್ನು ಮೋಜಿನಿಂದ ಕಳೆಯಬೇಕು ಎನ್ನುವ ವಿಷಯದಲ್ಲಿ ವಾರ್ನ್‌ಗೆ ಯಾವುದೇ ಅನುಮಾನವಿರಲಿಲ್ಲ. ಹಣ, ಖ್ಯಾತಿ ಎಲ್ಲವು ಆತನನ್ನು ಹುಡುಕಿ ಬಂದಿತ್ತು. ಆಧುನಿಕ ಜಗತ್ತಿನ ಐಷಾರಾಮಿ ಬದುಕು ವಾರ್ನ್ ಜೀವನಶೈಲಿಯೆ ಆಗಿಹೋಗಿತ್ತು. ಬದುಕಿರುವಷ್ಟು ದಿನ ಜೀವನವನ್ನು ಸುಖಸಂತೋಷದಿಂದ ಕಳೆಯಬೇಕು ಎನ್ನುವ ವರ್ತಮಾನದ ಜಗತ್ತಿನ ಪ್ರತಿರೂಪವಾಗಿ ವಾರ್ನ್ ನಮಗೆ ಕಾಣುತ್ತಾನೆ. ಆತ ಅನೇಕ ಟಿ.ವಿ. ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇದೆಲ್ಲವು ಆತ ಇನ್ನಷ್ಟು ಜನಪ್ರಿಯನಾಗಲು ಬಳಸುತ್ತಿದ್ದ ಮಾರ್ಗವಾಗಿತ್ತು.

ಬಹುಶಃ ತನ್ನ ವರ್ಣರಂಜಿತ ಬದುಕಿನ ಕಾರಣಕ್ಕಾಗಿ ಅನೇಕ ವಿವಾದಗಳಿಗೂ ಕೂಡ ವಾರ್ನ್ ಒಳಗಾಗಬೇಕಾಯಿತು. ವಾರ್ನ್ ಕ್ರಿಕೆಟ್ ಆಡುವ ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಸ್ಟೀವ್ ವಾನನ್ನು ಅತ್ಯಂತ ಸ್ವಾರ್ಥಿ ಕ್ರಿಕೆಟಿಗ ಎಂದು ವಾರ್ನ್ ದೂಷಿಸಿದ. 1999ರ ವೆಸ್ಟ್ ಇಂಡಿಸ್ ಪ್ರವಾಸಕ್ಕೆ ತನ್ನನ್ನು ಕೈ ಬಿಡುವುದಕ್ಕೆ ಸ್ಟೀವ್ ವಾ ಕಾರಣವೆಂದು ವಾರ್ನ್‌ನ ವಾದವಾಗಿತ್ತು. ಬ್ರಿಟಿಷ್ ನರ್ಸ್ ಒಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ವಿವಾದವೂ ಕೂಡ ವಾರ್ನ್ ಮೇಲೆ ಬಂದಿತು. ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪಕ್ಕೂ ವಾರ್ನ್ ಒಳಗಾದರು. ವೈವಾಹಿಕ ಜೀವನದಲ್ಲಿಯೂ ಹಲವು ಏರುಪೇರುಗಳನ್ನು ಕಂಡವರು ಅವರು.

ಇವುಗಳೆಲ್ಲದರ ಆಚೆ ವಾರ್ನ್ ಬೌಲಿಂಗ್ ಒಂದು ದೃಶ್ಯ ಕಾವ್ಯ. ನಾಲಿಗೆಯನ್ನು ತುಟಿಯಂಚಿಗೆ ಚಾಚಿ ಆತ ಹಾಕುತ್ತಿದ್ದ ಎಸೆತ ಇತ್ತಲ್ಲ ಅದು ಬ್ಯಾಟ್ಸ್‌ಮೆನ್‌ನನ್ನು ವಂಚಿಸುತ್ತಿದ್ದ ಪರಿ ಇತ್ತಲ್ಲ ಅದು ವರ್ಣನಾತೀತ. ಇನ್ನು ಬಹಳಷ್ಟು ಬದುಕಬೇಕಿದ್ದ ವಾರ್ನ್ ತನ್ನ 52 ವಯಸ್ಸಿನಲ್ಲಿ ಥೈಲ್ಯಾಂಡ್‌ನಲ್ಲಿ ನಿಧನ ಹೊಂದಿದ. ಆತ ಥೈಲ್ಯಾಂಡ್‌ನಲ್ಲಿ ತನ್ನ ಅಂತಿಮ ಕ್ಷಣಗಳನ್ನು ಕಳೆದಿದ್ದು ಒಂದು ರೀತಿಯ ಸೋಜಿಗವೆ. ವಿದಾಯ ವಾರ್ನ್.

ಡಾ. ನವೀನ್ ಮಂಡಗದ್ದೆ
ಉಪನ್ಯಾಸಕರು, ಕನ್ನಡಭಾರತಿ ಕುವೆಂಪು ವಿಶ್ವವಿದ್ಯಾಲಯ.


ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...