Homeಚಳವಳಿಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್ ಆರ್‌ ಮೌರ್ಯ

ನಾನು ಕ್ಲಾಸಲ್ಲಿ ಮಧ್ಯೆ ಒಮ್ಮೊಮ್ಮೆ ಮೀಸಲಾತಿ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆಯನ್ನು ಕೇಳಿದಾಗ ಸಾಮಾನ್ಯವಾಗಿ “ಈ ಎಪ್ಪತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದವರು ಮೀಸಲಾತಿಯಿಂದಾಗಿಯೇ ಇತರ ಮೇಲ್ಜಾತಿಯವರ ಸರಿಸಮಕ್ಕೇ ಆರ್ಥಿಕವಾಗಿ ಮುಂದುವರೆದಿದಾರೆ, ಹಾಗಾಗಿ ಮೀಸಲಾತಿ ಕೊಟ್ರೆ ಜಾತಿ ಆಧಾರಿತಕ್ಕಿಂತಲೂ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ಕೊಡುವುದು ಬೆಟರ್” ಎಂಬ ಉತ್ತರ ಬಹುತೇಕ ವಿದ್ಯಾರ್ಥಿಗಳಿಂದ ಬರ್ತಿದೆ. ಈ ವಿಷಯದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ಓದಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುವುದಕಿಂತ ಸುತ್ತಲಿನ ಸಮಾಜದ ಸಾಮಾನ್ಯ ಗ್ರಹಿಕೆಯನ್ನೇ ತಮ್ಮ ಅನಿಸಿಕೆಯನ್ನಾಗಿ ಮಾಡಿಕೊಂಡಿರುತ್ತಾರೆ ಎನ್ನುವುದು ನಮಗೆ ತಿಳಿದ ಸತ್ಯ.

ಮೀಸಲಾತಿ ಇರುವುದು ಆರ್ಥಿಕ ಅಸಮಾನತೆಗಿಂತ ಮುಖ್ಯವಾಗಿ ಸಾಮಾಜಿಕ ಅಸಮಾನತೆಯನ್ನು ಸರಿಪಡಿಸಲು ಎಂಬುದು ನಿರ್ವಿವಾದವಾದ ವಿಷಯವಾದರೂ, ಆರ್ಥಿಕ ಸಮಾನತೆ ಒಂದು ಮಟ್ಟಿಗೆ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬ ಹಿನ್ನೆಲೆಯೊಳಗೆ ಮೀಸಲಾತಿಯಿಂದ ನಮ್ಮ ವಿದ್ಯಾರ್ಥಿಗಳು ಹೇಳುವಂತೆ ಆರ್ಥಿಕ ಅಸಮಾನತೆಯಾದರೂ ಕಡಿಮೆಯಾಗಿದೆಯೇ ಎಂದು ನೋಡುವ ಪ್ರಯತ್ನ ಮಾಡೋಣ.

ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ 

2012ರ NSSO (ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್) ವರದಿಯ ಪ್ರಕಾರ ದೇಶದಲ್ಲಿ ಒಟ್ಟು ಸಂಘಟಿತ ವಲಯದಲ್ಲಿ 8.56 ಕೋಟಿ ಉದ್ಯೋಗಿಗಳಿದ್ದು ಅದರಲ್ಲಿ 6 ಕೋಟಿಯಷ್ಟು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ 2.56 ಕೋಟಿ ಸರ್ಕಾರಿ ಉದ್ಯೋಗಿಗಳಲ್ಲಿ 1.54 ಕೋಟಿಯಷ್ಟು ಮಾತ್ರ ಖಾಯಂ ಹುದ್ದೆ ಹೊಂದಿರುತ್ತಾರೆ. ಈ 1.54 ಕೋಟಿ ಕಾಯಂ ಹುದ್ದೆಗಳಿಗೆ ಮಾತ್ರ ಮೀಸಲಾತಿ ಅನ್ವಯವಾಗುತ್ತಿದ್ದು ಅದರಲ್ಲಿ 25.86 ಲಕ್ಷ ಮಂದಿಯಷ್ಟು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅಂದರೆ, ಒಟ್ಟು 8.56 ಕೋಟಿ ಉದ್ಯೋಗಗಳಲ್ಲಿ (ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳು ಸೇರಿ) ಕೇವಲ 3% ನಷ್ಟು ಮಾತ್ರ ಕಾಯಂ ಉದ್ಯೋಗಗಳನ್ನು ಮೀಸಲಾತಿಯ ಮೂಲಕ ಪರಿಶಿಷ್ಟ ಜಾತಿಯವರು ಪಡೆದಿರುತ್ತಾರೆ.

ಹೀಗೆ ಮೀಸಲಾತಿಯ ಮೂಲಕ ಕಾಯಂ ಸರ್ಕಾರೀ ಉದ್ಯೋಗ ಪಡೆದ ಪರಿಶಿಷ್ಟ ಜಾತಿಯ ಬಡತನ ಕಡಿಮೆಯಾಗಿದೆಯೇ ನೋಡೋಣ. 2011-12 ರ NSSO ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಶೇ 29 ರಷ್ಟು ರೈತರು, ಶೇ 43 ರಷ್ಟು ಕಾರ್ಮಿಕರು ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿಯ ಶೇ 23 ರಷ್ಟು ಸ್ವ ಉದ್ಯೋಗಿಗಳು ಮತ್ತು ಶೇ 38 ರಷ್ಟು ಕಾರ್ಮಿಕರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಆದರೆ, ಕಾಯಂ ಸರ್ಕಾರೀ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿಯವರಲ್ಲಿ ಕೇವಲ ಶೇ 12 ರಿಂದ 13 ರಷ್ಟು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ.

ಈ ಅಂಕಿಅಂಶಗಳ ಪ್ರಕಾರ, ಮೀಸಲಾತಿಯಿಂದ ಸಿಕ್ಕಿದ ಕಾಯಂ ಸರ್ಕಾರೀ ಉದ್ಯೋಗ ಪರಿಶಿಷ್ಟ ಜಾತಿಯವರ ಆರ್ಥಿಕ ಪರಿಸ್ಥಿತಿಯನ್ನು ಒಂದು ಮಟ್ಟಿಗಾದರೂ ಉತ್ತಮಗೊಳಿಸಿದೆ. ಈ ಲೇಖನದಲ್ಲಿ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಮೇಲಾಗಿರುವ ಪರಿಣಾಮವನ್ನು (ಒಂದು ಕಾಲದಲ್ಲಿ ಅಧಿಕೃತವಾಗಿ ಮತ್ತು ಈಗಲೂ ಅಸ್ಪೃಶ್ಯತೆಗೆ ಒಳಗಾಗಿ ಹೆಚ್ಚು ತುಳಿತಕ್ಕೊಳಗಾದವರು ಎಂಬ ಕಾರಣಕ್ಕಾಗಿ) ಚರ್ಚಿಸಲಾಗುತ್ತಿದೆ. ಮೀಸಲಾತಿಯಿಂದ ಒಂದು ಮಟ್ಟಿಗೆ ಪರಿಶಿಷ್ಟ ಜಾತಿಯಲ್ಲಾದ ಆರ್ಥಿಕ ಅಭಿವೃದ್ಧಿ ಇತರೆ ಹಿಂದುಳಿದ ಜಾತಿಗಳಲ್ಲಿ ಇನ್ನೂ ಹೆಚ್ಚಾಗಿಯೇ ಆಗಿದೆ (ಇತರೆ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟರಿಗಿಂತ ಹೆಚ್ಚಿನ ಸಾಮಾಜಿಕ ಅನುಕೂಲತೆ ಇದೆ ಎನ್ನುವ ಕಾರಣಕ್ಕೆ) ಎಂಬುದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಆದರೆ, ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿ ಈ ಎಪ್ಪತ್ತು ವರ್ಷಗಳಲ್ಲಿ ಆಗಬೇಕಿದ್ದಷ್ಟು ಆಗಿದೆಯೇ ಎಂದು ನೋಡಿದರೆ ವಾಸ್ತವ ನಿರಾಶಾದಾಯಕವಾಗಿದೆ. ಇದರಿಂದ ಮೀಸಲಾತಿ ಬಡತನ ನಿರ್ಮೂಲನದಲ್ಲಿ ಸೋತಿದೆ ಎಂದು ಹೇಳಲಾಗುವುದಿಲ್ಲ. ಇದಕ್ಕೆ ನಿಜವಾದ ಕಾರಣ, ದೇಶದಲ್ಲಿ ಇರುವ ಶೇಕಡಾ ಎಂಬತ್ತರಷ್ಟು ಉದ್ಯೋಗಗಳು ( ಸರ್ಕಾರಿ ಮತ್ತು ಖಾಸಗಿ ಎಲ್ಲವೂ ಸೇರಿ) ಮೀಸಲಾತಿಗೆ ಒಳಪಡದಿರುವುದೇ ಆಗಿದೆ. ಮೇಲಿನ ಅಂಕಿಅಂಶಗಳು ತೋರಿಸುವಂತೆ, ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಯಿಂದ ಪರಿಶಿಷ್ಟರಿಗೆ ದಕ್ಕಿರುವುದು ಕೇವಲ 3% ರಷ್ಟು ಉದ್ಯೋಗಗಳು ಎನ್ನುವುದು ಮೀಸಲಾತಿ ಪರಿಶಿಷ್ಟರ ಆರ್ಥಿಕ ಉನ್ನತಿಗೆ ಸಹಾಯ ಮಾಡಿದ್ದರೂ ಆ ಸಹಾಯ ಆಗಿರುವುದು ಕೆಲವರಿಗೆ ಮಾತ್ರ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ

ಹೋಗಲಿ, ಮೀಸಲಾತಿಯ ಪ್ರಯೋಜನ ಪಡೆದ ಬಹುತೇಕ ಪರಿಶಿಷ್ಟ ಜಾತಿಯ ಜನ ತಮ್ಮ ಬಡತನವನ್ನು ಮೀರಿ ಶ್ರೀಮಂತರಾಗಿಬಿಟ್ಟಿದ್ದಾರೆಯೇ ಎಂದು ನೋಡಿದರೆ ಅದೂ ಇಲ್ಲ. ಇಂದಿಗೂ ಶೇ 96 ರಷ್ಟು ಪರಿಶಿಷ್ಟ ಜಾತಿಯ ಕಾಯಂ ಉದ್ಯೋಗಿಗಳು ಹೊಂದಿರುವ ತಲಾ ಕೃಷಿ ಭೂಮಿ ಐದು ಎಕರೆಗಿಂತಲೂ ಕಡಿಮೆ. ಇದಕ್ಕೆ ಪ್ರಮುಖ ಕಾರಣ ತಮಗಿದ್ದ ಸಾಮಾಜಿಕ ಅನಾನುಕೂಲತೆಯಿಂದಾಗಿ ಹೆಚ್ಚು ಓದಲಾಗದೆ ಬಹುತೇಕ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದ್ದು. ಕೇಂದ್ರ ಸರ್ಕಾರದ ಪಬ್ಲಿಕ್ ಸೆಕ್ಟರುಗಳಲ್ಲಿ ಇರುವ ಪರಿಶಿಷ್ಟ ಜಾತಿಯ ಉದ್ಯೋಗಿಗಳಲ್ಲಿ ಶೇ 81 ರಷ್ಟು ಮಂದಿ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳಲ್ಲಿರುವುದು ಈ ಅಂಶವನ್ನು ದೃಢೀಕರಿಸುತ್ತದೆ.

ಇದೇ ಹಿನ್ನೆಲೆಯಲ್ಲಿ, ಈಗ ಒಟ್ಟಾರೆಯಾಗಿ ಮೇಲ್ಜಾತಿ, ಇತರೆ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಯಾವ ಸ್ಥಿತಿಯಲ್ಲಿದೆ ನೋಡೋಣ.
ಪಟ್ಟಿ 1ರಲ್ಲಿರುವ 2012 – 14ರ NSSO ಟೇಬಲ್ ಗಮನಿಸಿ.

2014ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮೇಲ್ಜಾತಿಯವರು ಶೇ 21, ಇತರೆ ಹಿಂದುಳಿದ ವರ್ಗ ಶೇ 36 ಮತ್ತು ಪರಿಶಿಷ್ಟ ಜಾತಿಯವರು ಶೇ 18.6 ರಷ್ಟಿದ್ದಾರೆ.

ಪರಿಶಿಷ್ಟ ಜಾತಿಯವರಲ್ಲಿ ಶೇ 30 ರಷ್ಟು ಮತ್ತು ಹಿಂದುಳಿದ ವರ್ಗದಲ್ಲಿ ಶೇ 20 ರಷ್ಟು ಬಡವರಾಗಿದ್ದರೆ, ಮೇಲ್ಜಾತಿಯವರಲ್ಲಿ ಅದು ಕೇವಲ ಶೇ 9 ರಷ್ಟಿದೆ.

ಪ್ರತಿ ಕುಟುಂಬದ ಸರಾಸರಿ ಆಸ್ತಿ ಪರಿಶಿಷ್ಟ ಜಾತಿ 6 ಲಕ್ಷ ಮತ್ತು ಹಿಂದುಳಿದ ವರ್ಗ 13 ಲಕ್ಷವಿದ್ದರೆ, ಮೇಲ್ಜಾತಿಯದು 30 ಲಕ್ಷವಿದ್ದು ಇದು ಪರಿಶಿಷ್ಟ ಜಾತಿಗಿಂತ ಐದು ಪಟ್ಟು ಹೆಚ್ಚಾಗಿದೆ.

ನಿರುದ್ಯೋಗದ ಪ್ರಮಾಣ ಪರಿಶಿಷ್ಟರಲ್ಲಿ 7.3 ಮತ್ತು ಹಿಂದುಳಿದ ವರ್ಗದಲ್ಲಿ 5.2 ಇದ್ದರೆ, ಮೇಲ್ಜಾತಿಯಲ್ಲಿ ಇದು 4.3 ಯಷ್ಟಿದೆ. ಮೀಸಲಾತಿ ಅನುಕೂಲದ ಹೊರತಾಗಿಯೂ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿರುವುದನ್ನು ನಾವು ಗಮನಿಸಬೇಕು.
ಇದೇ ಟೇಬಲಿನಲ್ಲಿ MPCE  (Monthly per capita consumption expenditure) ಎನ್ನುವ ಅಂಶ ಗಮನಿಸಿ. ಇದು ಒಬ್ಬ ವ್ಯಕ್ತಿ ತಿಂಗಳಿಗೆ ತನ್ನ ಕನಿಷ್ಟ ಅವಶ್ಯಕತೆಗಳಿಗೆ ಎಷ್ಟು ಖರ್ಚು ಮಾಡುತ್ತಿದ್ದಾನೆ ಎಂದು ತಿಳಿಸುವ ಅಂಶ. ಇದು ಬದುಕುವ ಮಟ್ಟವನ್ನು ಸೂಚಿಸುತ್ತದೆ. ಇಲ್ಲಿ ಮೇಲ್ಜಾತಿಯವನ MPCE 2413 ರೂಗಳಿದ್ದರೆ, ಹಿಂದುಳಿದ ವರ್ಗದವನದು 1531 ಮತ್ತು ಪರಿಶಿಷ್ಟ ಜಾತಿಯವನದು ಕೇವಲ 1294 ರೂಪಾಯಿಗಳಿವೆ.

ಹಾಗೆಯೇ, ಕೆಳಗಿನ 2ನೇ ಟೇಬಲ್ ಗಮನಿಸಿ. ಇಲ್ಲಿ ಸ್ಪಷ್ಟವಾಗಿ ವಿವಿಧ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ದೇಶದ ಒಟ್ಟು ಆಸ್ತಿಯಲ್ಲಿ ಶೇಕಡಾ 45 ರಷ್ಟು ಮೇಲ್ಜಾತಿಯವರ ಒಡೆತನದಲ್ಲಿದ್ದರೆ, ಶೇಕಡಾ 31 ರಷ್ಟು ಹಿಂದುಳಿದ ಜಾತಿಗಳ ಒಡೆತನದಲ್ಲಿದೆ. ಆದರೆ, ಪರಿಶಿಷ್ಟ ಜಾತಿಯವರ ಒಡೆತನದಲ್ಲಿರುವುದು ಕೆರವಲ ಶೇಕಡಾ 7 ರಷ್ಟು ಮಾತ್ರ.

ಮೇಲಿನೆಲ್ಲ ಅಂಕಿಅಂಶಗಳು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿವೆ, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ, ಮೀಸಲಾತಿಯ ಬೆಂಬಲವಿದ್ದರೂ ಕೂಡ ಇವತ್ತಿಗೂ ಎಲ್ಲ ಸ್ತರಗಳಲ್ಲಿಯೂ ಪರಿಶಿಷ್ಟ ಜಾತಿಯ ಜನ ಮೇಲ್ಜಾತಿಯವರಿಂತ ಬಹಳ ಹಿಂದುಳಿದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ನ್ಯಾಯಬದ್ಧವಾಗಿ ದಕ್ಕಬೇಕಾದ್ದು ಇನ್ನೂ ದಕ್ಕಿಯೇ ಇಲ್ಲ. ಇದನ್ನು ನಾವೆಲ್ಲರೂ ಗಂಭೀರವಾಗಿ ಅವಲೋಕಿಸಬೇಕಿದೆ. ನಾವು ಒಂದು ಸ್ವತಂತ್ರ ಮತ್ತು ವೇಗವಾಗಿ ಮುಂದುವರೆಯುತ್ತಿರುವ ದೇಶವಾಗಿ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸೋತಿದ್ದೇವೆ. ಜಾತಿಗಳ ನಡುವಿನ ಸಾಮಾಜಿಕ ಅಸಮಾನತೆಯಿರಲಿ, ಕನಿಷ್ಟ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಕೂಡ ನಮ್ಮ ಕೈಲಾಗಿಲ್ಲ.

ಇದನ್ನೂ ಓದಿ: ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ

ಮೇಲ್ಜಾತಿಗೂ ಮತ್ತು ಪರಿಶಿಷ್ಟ ಜಾತಿಗೂ ನಡುವಿನ ಈ ಅಗಾಧ ಅಂತರಕ್ಕೆ ಮೇಲ್ಜಾತಿಯವರು ಅತೀವ ಬುದ್ಧಿವಂತರು ಎಂಬ ಕಾರಣವನ್ನು ಹೇಳುವ ಮೇಲ್ಜಾತಿಯವರೂ ಇದ್ದಾರೆ. ಮಾನವಶಾಸ್ತ್ರ ಸಂಬಂಧಿ ಸಂಶೋಧನೆಗಳು ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿವೆ. ಮೇಲ್ಜಾತಿಯವರ ಈ ಮುಂದುವರಿಕೆಗೆ ಬಹುಮುಖ್ಯ ಕಾರಣ ಅವರಿಗಿರುವ ಸಾಮಾಜಿಕ ಅನುಕೂಲತೆ ಅಷ್ಟು. ಅದು ಮೊದಲೂ ಇತ್ತು , ಈಗಲೂ ಇದೆ.

ಅದೇ ಒಬ್ಬ ಪರಿಶಿಷ್ಟ ಜಾತಿಯ ಮನುಷ್ಯನಿಗೆ ತನಗಿರುವ ಸಾಮಥ್ರ್ಯ ಬಳಸಿಕೊಳ್ಳಲು ಆಗದಂಥ ಸಾಮಾಜಿಕ ಅನಾನುಕೂಲತೆ ಇದೆ. ಇದಕ್ಕೆ ಒಂದು ಅತೀ ಸರಳ ಉದಾಹರಣೆಯಾಗಿ ಒಬ್ಬ ಮೇಲ್ಜಾತಿಯವ ಒಂದು ಹೋಟೆಲು ನಡೆಸಿದರೆ ಆಗುವ ಬುಸಿನೆಸ್ಸಿಗೂ ಅದೇ ಒಬ್ಬ ಪರಿಶಿಷ್ಟ ಜಾತಿಯವನ ಹೋಟೆಲಿಗೆ ಆಗುವ ಬುಸಿನೆಸ್ಸಿಗೂ ಹೋಲಿಸಿ ನೋಡಿ. ಈತ ಪರಿಶಿಷ್ಟ ಜಾತಿಯವ ಎಂಬ ಒಂದೇ ಕಾರಣಕ್ಕೆ ಮೇಲ್ಜಾತಿ ಮತ್ತು ಮಧ್ಯಮ ಜಾತಿಯ ಬಹುತೇಕರು ಆ ಹೋಟೆಲಿಗೇ ಹೋಗದ ವಿಷಯ ನಮಗೆಲ್ಲಾ ತಿಳಿದಿದೆ.
ಇದೇ ಸಾಮಾಜಿಕ ಅನಾನುಕೂಲತೆಯ ಕಾರಣಕ್ಕೆ ವಿವಿಧ ವಲಯಗಳಲ್ಲಿ ಮೇಲ್ಜಾತಿಯವರಿಗೆ ಸಿಕ್ಕಷ್ಟು ಸುಲಭವಾಗಿ ಉದ್ಯೋಗಗಳೂ ಕೂಡ ಪರಿಶಿಷ್ಟ ಜಾತಿಯವರಿಗೆ ಇಂದಿಗೂ ಸಿಗುತ್ತಿಲ್ಲ.

ಕಡೆಗೆ, ಇಷ್ಟೊಂದು ಜಾತಿಯಾಧಾರಿತ ಅಸಮಾನತೆ ಇರುವ ಯಾವುದೇ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಕೂಡ ಸಾಧ್ಯವಿಲ್ಲ.

ಹಾಗಾದರೆ, ಈ ಅಸಮಾನತೆಯ ನಿವಾರಣೆಗೆ ದಾರಿಗಳೇನು?

ಮೊದಲನೆಯದಾಗಿ, ಹಿಂದುಳಿದವರ ಮತ್ತು ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿಗೆ ನಿಜಕ್ಕೂ ಸಹಾಯ ಮಾಡುವಂಥ ಮೀಸಲಾತಿಯನ್ನು ಖಾಸಗಿಯೂ ಸೇರಿ ಎಲ್ಲ ಉದ್ಯೋಗಗಳಿಗೂ ಜಾರಿಮಾಡುವುದು.

ಪರಿಶಿಷ್ಟ ಜಾತಿಯ ಜನರು ಸಾಮಾಜಿಕ ಅಸಮಾನತೆಯನ್ನು ಮೀರಿ ಉದ್ಯಮದಲ್ಲಿ ಮುಂದೆ ಬರಲು ಅನುಕೂಲವಾಗುವಂಥ ಪ್ರೋತ್ಸಾಹಕರ ಯೋಜನೆಗಳನ್ನು ಸರ್ಕಾರ ರೂಪಿಸುವುಂತೆ ಮಾಡುವುದು ಮತ್ತು ಈಗಾಗಲೇ ಇರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದು.

ಹಾಗೂ, ಅಂಬೇಡ್ಕರ್ ಕನಸಿನಂತೆ ಈ ಸಮಾಜದ ಕಟ್ಟಕಡೆಯವರಿಗೆ ಹೆಚ್ಚು ಹೆಚ್ಚು ರಾಜಕೀಯ ಅಧಿಕಾರ ಸಿಗುವ ಹೊಸಾ ದಾರಿಗಳನ್ನು ಹುಡುಕುವುದು. (ಅಂಬೇಡ್ಕರರ ಕ್ರಾಂತಿಕಾರಿ ಕನಸಾದ ಭೂಮಿಯ ರಾಷ್ಟ್ರೀಕರಣ ಮತ್ತು ಮರುಹಂಚಿಕೆ ಈ ಅಸಮಾನತೆಯನ್ನು ನಿಜಕ್ಕೂ ದೊಡ್ಡಮಟ್ಟಿಗೆ ಹೋಗಲಾಡಿಸಬಲ್ಲುದು, ಆದರೆ ಅದು ಸಾಧ್ಯವೆ?)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...