Homeಚಳವಳಿಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್ ಆರ್‌ ಮೌರ್ಯ

ನಾನು ಕ್ಲಾಸಲ್ಲಿ ಮಧ್ಯೆ ಒಮ್ಮೊಮ್ಮೆ ಮೀಸಲಾತಿ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆಯನ್ನು ಕೇಳಿದಾಗ ಸಾಮಾನ್ಯವಾಗಿ “ಈ ಎಪ್ಪತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದವರು ಮೀಸಲಾತಿಯಿಂದಾಗಿಯೇ ಇತರ ಮೇಲ್ಜಾತಿಯವರ ಸರಿಸಮಕ್ಕೇ ಆರ್ಥಿಕವಾಗಿ ಮುಂದುವರೆದಿದಾರೆ, ಹಾಗಾಗಿ ಮೀಸಲಾತಿ ಕೊಟ್ರೆ ಜಾತಿ ಆಧಾರಿತಕ್ಕಿಂತಲೂ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ಕೊಡುವುದು ಬೆಟರ್” ಎಂಬ ಉತ್ತರ ಬಹುತೇಕ ವಿದ್ಯಾರ್ಥಿಗಳಿಂದ ಬರ್ತಿದೆ. ಈ ವಿಷಯದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ಓದಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುವುದಕಿಂತ ಸುತ್ತಲಿನ ಸಮಾಜದ ಸಾಮಾನ್ಯ ಗ್ರಹಿಕೆಯನ್ನೇ ತಮ್ಮ ಅನಿಸಿಕೆಯನ್ನಾಗಿ ಮಾಡಿಕೊಂಡಿರುತ್ತಾರೆ ಎನ್ನುವುದು ನಮಗೆ ತಿಳಿದ ಸತ್ಯ.

ಮೀಸಲಾತಿ ಇರುವುದು ಆರ್ಥಿಕ ಅಸಮಾನತೆಗಿಂತ ಮುಖ್ಯವಾಗಿ ಸಾಮಾಜಿಕ ಅಸಮಾನತೆಯನ್ನು ಸರಿಪಡಿಸಲು ಎಂಬುದು ನಿರ್ವಿವಾದವಾದ ವಿಷಯವಾದರೂ, ಆರ್ಥಿಕ ಸಮಾನತೆ ಒಂದು ಮಟ್ಟಿಗೆ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬ ಹಿನ್ನೆಲೆಯೊಳಗೆ ಮೀಸಲಾತಿಯಿಂದ ನಮ್ಮ ವಿದ್ಯಾರ್ಥಿಗಳು ಹೇಳುವಂತೆ ಆರ್ಥಿಕ ಅಸಮಾನತೆಯಾದರೂ ಕಡಿಮೆಯಾಗಿದೆಯೇ ಎಂದು ನೋಡುವ ಪ್ರಯತ್ನ ಮಾಡೋಣ.

ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ 

2012ರ NSSO (ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್) ವರದಿಯ ಪ್ರಕಾರ ದೇಶದಲ್ಲಿ ಒಟ್ಟು ಸಂಘಟಿತ ವಲಯದಲ್ಲಿ 8.56 ಕೋಟಿ ಉದ್ಯೋಗಿಗಳಿದ್ದು ಅದರಲ್ಲಿ 6 ಕೋಟಿಯಷ್ಟು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ 2.56 ಕೋಟಿ ಸರ್ಕಾರಿ ಉದ್ಯೋಗಿಗಳಲ್ಲಿ 1.54 ಕೋಟಿಯಷ್ಟು ಮಾತ್ರ ಖಾಯಂ ಹುದ್ದೆ ಹೊಂದಿರುತ್ತಾರೆ. ಈ 1.54 ಕೋಟಿ ಕಾಯಂ ಹುದ್ದೆಗಳಿಗೆ ಮಾತ್ರ ಮೀಸಲಾತಿ ಅನ್ವಯವಾಗುತ್ತಿದ್ದು ಅದರಲ್ಲಿ 25.86 ಲಕ್ಷ ಮಂದಿಯಷ್ಟು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅಂದರೆ, ಒಟ್ಟು 8.56 ಕೋಟಿ ಉದ್ಯೋಗಗಳಲ್ಲಿ (ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳು ಸೇರಿ) ಕೇವಲ 3% ನಷ್ಟು ಮಾತ್ರ ಕಾಯಂ ಉದ್ಯೋಗಗಳನ್ನು ಮೀಸಲಾತಿಯ ಮೂಲಕ ಪರಿಶಿಷ್ಟ ಜಾತಿಯವರು ಪಡೆದಿರುತ್ತಾರೆ.

ಹೀಗೆ ಮೀಸಲಾತಿಯ ಮೂಲಕ ಕಾಯಂ ಸರ್ಕಾರೀ ಉದ್ಯೋಗ ಪಡೆದ ಪರಿಶಿಷ್ಟ ಜಾತಿಯ ಬಡತನ ಕಡಿಮೆಯಾಗಿದೆಯೇ ನೋಡೋಣ. 2011-12 ರ NSSO ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಶೇ 29 ರಷ್ಟು ರೈತರು, ಶೇ 43 ರಷ್ಟು ಕಾರ್ಮಿಕರು ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿಯ ಶೇ 23 ರಷ್ಟು ಸ್ವ ಉದ್ಯೋಗಿಗಳು ಮತ್ತು ಶೇ 38 ರಷ್ಟು ಕಾರ್ಮಿಕರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಆದರೆ, ಕಾಯಂ ಸರ್ಕಾರೀ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿಯವರಲ್ಲಿ ಕೇವಲ ಶೇ 12 ರಿಂದ 13 ರಷ್ಟು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ.

ಈ ಅಂಕಿಅಂಶಗಳ ಪ್ರಕಾರ, ಮೀಸಲಾತಿಯಿಂದ ಸಿಕ್ಕಿದ ಕಾಯಂ ಸರ್ಕಾರೀ ಉದ್ಯೋಗ ಪರಿಶಿಷ್ಟ ಜಾತಿಯವರ ಆರ್ಥಿಕ ಪರಿಸ್ಥಿತಿಯನ್ನು ಒಂದು ಮಟ್ಟಿಗಾದರೂ ಉತ್ತಮಗೊಳಿಸಿದೆ. ಈ ಲೇಖನದಲ್ಲಿ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಮೇಲಾಗಿರುವ ಪರಿಣಾಮವನ್ನು (ಒಂದು ಕಾಲದಲ್ಲಿ ಅಧಿಕೃತವಾಗಿ ಮತ್ತು ಈಗಲೂ ಅಸ್ಪೃಶ್ಯತೆಗೆ ಒಳಗಾಗಿ ಹೆಚ್ಚು ತುಳಿತಕ್ಕೊಳಗಾದವರು ಎಂಬ ಕಾರಣಕ್ಕಾಗಿ) ಚರ್ಚಿಸಲಾಗುತ್ತಿದೆ. ಮೀಸಲಾತಿಯಿಂದ ಒಂದು ಮಟ್ಟಿಗೆ ಪರಿಶಿಷ್ಟ ಜಾತಿಯಲ್ಲಾದ ಆರ್ಥಿಕ ಅಭಿವೃದ್ಧಿ ಇತರೆ ಹಿಂದುಳಿದ ಜಾತಿಗಳಲ್ಲಿ ಇನ್ನೂ ಹೆಚ್ಚಾಗಿಯೇ ಆಗಿದೆ (ಇತರೆ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟರಿಗಿಂತ ಹೆಚ್ಚಿನ ಸಾಮಾಜಿಕ ಅನುಕೂಲತೆ ಇದೆ ಎನ್ನುವ ಕಾರಣಕ್ಕೆ) ಎಂಬುದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಆದರೆ, ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿ ಈ ಎಪ್ಪತ್ತು ವರ್ಷಗಳಲ್ಲಿ ಆಗಬೇಕಿದ್ದಷ್ಟು ಆಗಿದೆಯೇ ಎಂದು ನೋಡಿದರೆ ವಾಸ್ತವ ನಿರಾಶಾದಾಯಕವಾಗಿದೆ. ಇದರಿಂದ ಮೀಸಲಾತಿ ಬಡತನ ನಿರ್ಮೂಲನದಲ್ಲಿ ಸೋತಿದೆ ಎಂದು ಹೇಳಲಾಗುವುದಿಲ್ಲ. ಇದಕ್ಕೆ ನಿಜವಾದ ಕಾರಣ, ದೇಶದಲ್ಲಿ ಇರುವ ಶೇಕಡಾ ಎಂಬತ್ತರಷ್ಟು ಉದ್ಯೋಗಗಳು ( ಸರ್ಕಾರಿ ಮತ್ತು ಖಾಸಗಿ ಎಲ್ಲವೂ ಸೇರಿ) ಮೀಸಲಾತಿಗೆ ಒಳಪಡದಿರುವುದೇ ಆಗಿದೆ. ಮೇಲಿನ ಅಂಕಿಅಂಶಗಳು ತೋರಿಸುವಂತೆ, ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಯಿಂದ ಪರಿಶಿಷ್ಟರಿಗೆ ದಕ್ಕಿರುವುದು ಕೇವಲ 3% ರಷ್ಟು ಉದ್ಯೋಗಗಳು ಎನ್ನುವುದು ಮೀಸಲಾತಿ ಪರಿಶಿಷ್ಟರ ಆರ್ಥಿಕ ಉನ್ನತಿಗೆ ಸಹಾಯ ಮಾಡಿದ್ದರೂ ಆ ಸಹಾಯ ಆಗಿರುವುದು ಕೆಲವರಿಗೆ ಮಾತ್ರ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ

ಹೋಗಲಿ, ಮೀಸಲಾತಿಯ ಪ್ರಯೋಜನ ಪಡೆದ ಬಹುತೇಕ ಪರಿಶಿಷ್ಟ ಜಾತಿಯ ಜನ ತಮ್ಮ ಬಡತನವನ್ನು ಮೀರಿ ಶ್ರೀಮಂತರಾಗಿಬಿಟ್ಟಿದ್ದಾರೆಯೇ ಎಂದು ನೋಡಿದರೆ ಅದೂ ಇಲ್ಲ. ಇಂದಿಗೂ ಶೇ 96 ರಷ್ಟು ಪರಿಶಿಷ್ಟ ಜಾತಿಯ ಕಾಯಂ ಉದ್ಯೋಗಿಗಳು ಹೊಂದಿರುವ ತಲಾ ಕೃಷಿ ಭೂಮಿ ಐದು ಎಕರೆಗಿಂತಲೂ ಕಡಿಮೆ. ಇದಕ್ಕೆ ಪ್ರಮುಖ ಕಾರಣ ತಮಗಿದ್ದ ಸಾಮಾಜಿಕ ಅನಾನುಕೂಲತೆಯಿಂದಾಗಿ ಹೆಚ್ಚು ಓದಲಾಗದೆ ಬಹುತೇಕ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದ್ದು. ಕೇಂದ್ರ ಸರ್ಕಾರದ ಪಬ್ಲಿಕ್ ಸೆಕ್ಟರುಗಳಲ್ಲಿ ಇರುವ ಪರಿಶಿಷ್ಟ ಜಾತಿಯ ಉದ್ಯೋಗಿಗಳಲ್ಲಿ ಶೇ 81 ರಷ್ಟು ಮಂದಿ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳಲ್ಲಿರುವುದು ಈ ಅಂಶವನ್ನು ದೃಢೀಕರಿಸುತ್ತದೆ.

ಇದೇ ಹಿನ್ನೆಲೆಯಲ್ಲಿ, ಈಗ ಒಟ್ಟಾರೆಯಾಗಿ ಮೇಲ್ಜಾತಿ, ಇತರೆ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಯಾವ ಸ್ಥಿತಿಯಲ್ಲಿದೆ ನೋಡೋಣ.
ಪಟ್ಟಿ 1ರಲ್ಲಿರುವ 2012 – 14ರ NSSO ಟೇಬಲ್ ಗಮನಿಸಿ.

2014ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮೇಲ್ಜಾತಿಯವರು ಶೇ 21, ಇತರೆ ಹಿಂದುಳಿದ ವರ್ಗ ಶೇ 36 ಮತ್ತು ಪರಿಶಿಷ್ಟ ಜಾತಿಯವರು ಶೇ 18.6 ರಷ್ಟಿದ್ದಾರೆ.

ಪರಿಶಿಷ್ಟ ಜಾತಿಯವರಲ್ಲಿ ಶೇ 30 ರಷ್ಟು ಮತ್ತು ಹಿಂದುಳಿದ ವರ್ಗದಲ್ಲಿ ಶೇ 20 ರಷ್ಟು ಬಡವರಾಗಿದ್ದರೆ, ಮೇಲ್ಜಾತಿಯವರಲ್ಲಿ ಅದು ಕೇವಲ ಶೇ 9 ರಷ್ಟಿದೆ.

ಪ್ರತಿ ಕುಟುಂಬದ ಸರಾಸರಿ ಆಸ್ತಿ ಪರಿಶಿಷ್ಟ ಜಾತಿ 6 ಲಕ್ಷ ಮತ್ತು ಹಿಂದುಳಿದ ವರ್ಗ 13 ಲಕ್ಷವಿದ್ದರೆ, ಮೇಲ್ಜಾತಿಯದು 30 ಲಕ್ಷವಿದ್ದು ಇದು ಪರಿಶಿಷ್ಟ ಜಾತಿಗಿಂತ ಐದು ಪಟ್ಟು ಹೆಚ್ಚಾಗಿದೆ.

ನಿರುದ್ಯೋಗದ ಪ್ರಮಾಣ ಪರಿಶಿಷ್ಟರಲ್ಲಿ 7.3 ಮತ್ತು ಹಿಂದುಳಿದ ವರ್ಗದಲ್ಲಿ 5.2 ಇದ್ದರೆ, ಮೇಲ್ಜಾತಿಯಲ್ಲಿ ಇದು 4.3 ಯಷ್ಟಿದೆ. ಮೀಸಲಾತಿ ಅನುಕೂಲದ ಹೊರತಾಗಿಯೂ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿರುವುದನ್ನು ನಾವು ಗಮನಿಸಬೇಕು.
ಇದೇ ಟೇಬಲಿನಲ್ಲಿ MPCE  (Monthly per capita consumption expenditure) ಎನ್ನುವ ಅಂಶ ಗಮನಿಸಿ. ಇದು ಒಬ್ಬ ವ್ಯಕ್ತಿ ತಿಂಗಳಿಗೆ ತನ್ನ ಕನಿಷ್ಟ ಅವಶ್ಯಕತೆಗಳಿಗೆ ಎಷ್ಟು ಖರ್ಚು ಮಾಡುತ್ತಿದ್ದಾನೆ ಎಂದು ತಿಳಿಸುವ ಅಂಶ. ಇದು ಬದುಕುವ ಮಟ್ಟವನ್ನು ಸೂಚಿಸುತ್ತದೆ. ಇಲ್ಲಿ ಮೇಲ್ಜಾತಿಯವನ MPCE 2413 ರೂಗಳಿದ್ದರೆ, ಹಿಂದುಳಿದ ವರ್ಗದವನದು 1531 ಮತ್ತು ಪರಿಶಿಷ್ಟ ಜಾತಿಯವನದು ಕೇವಲ 1294 ರೂಪಾಯಿಗಳಿವೆ.

ಹಾಗೆಯೇ, ಕೆಳಗಿನ 2ನೇ ಟೇಬಲ್ ಗಮನಿಸಿ. ಇಲ್ಲಿ ಸ್ಪಷ್ಟವಾಗಿ ವಿವಿಧ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ದೇಶದ ಒಟ್ಟು ಆಸ್ತಿಯಲ್ಲಿ ಶೇಕಡಾ 45 ರಷ್ಟು ಮೇಲ್ಜಾತಿಯವರ ಒಡೆತನದಲ್ಲಿದ್ದರೆ, ಶೇಕಡಾ 31 ರಷ್ಟು ಹಿಂದುಳಿದ ಜಾತಿಗಳ ಒಡೆತನದಲ್ಲಿದೆ. ಆದರೆ, ಪರಿಶಿಷ್ಟ ಜಾತಿಯವರ ಒಡೆತನದಲ್ಲಿರುವುದು ಕೆರವಲ ಶೇಕಡಾ 7 ರಷ್ಟು ಮಾತ್ರ.

ಮೇಲಿನೆಲ್ಲ ಅಂಕಿಅಂಶಗಳು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿವೆ, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ, ಮೀಸಲಾತಿಯ ಬೆಂಬಲವಿದ್ದರೂ ಕೂಡ ಇವತ್ತಿಗೂ ಎಲ್ಲ ಸ್ತರಗಳಲ್ಲಿಯೂ ಪರಿಶಿಷ್ಟ ಜಾತಿಯ ಜನ ಮೇಲ್ಜಾತಿಯವರಿಂತ ಬಹಳ ಹಿಂದುಳಿದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ನ್ಯಾಯಬದ್ಧವಾಗಿ ದಕ್ಕಬೇಕಾದ್ದು ಇನ್ನೂ ದಕ್ಕಿಯೇ ಇಲ್ಲ. ಇದನ್ನು ನಾವೆಲ್ಲರೂ ಗಂಭೀರವಾಗಿ ಅವಲೋಕಿಸಬೇಕಿದೆ. ನಾವು ಒಂದು ಸ್ವತಂತ್ರ ಮತ್ತು ವೇಗವಾಗಿ ಮುಂದುವರೆಯುತ್ತಿರುವ ದೇಶವಾಗಿ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸೋತಿದ್ದೇವೆ. ಜಾತಿಗಳ ನಡುವಿನ ಸಾಮಾಜಿಕ ಅಸಮಾನತೆಯಿರಲಿ, ಕನಿಷ್ಟ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಕೂಡ ನಮ್ಮ ಕೈಲಾಗಿಲ್ಲ.

ಇದನ್ನೂ ಓದಿ: ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ

ಮೇಲ್ಜಾತಿಗೂ ಮತ್ತು ಪರಿಶಿಷ್ಟ ಜಾತಿಗೂ ನಡುವಿನ ಈ ಅಗಾಧ ಅಂತರಕ್ಕೆ ಮೇಲ್ಜಾತಿಯವರು ಅತೀವ ಬುದ್ಧಿವಂತರು ಎಂಬ ಕಾರಣವನ್ನು ಹೇಳುವ ಮೇಲ್ಜಾತಿಯವರೂ ಇದ್ದಾರೆ. ಮಾನವಶಾಸ್ತ್ರ ಸಂಬಂಧಿ ಸಂಶೋಧನೆಗಳು ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿವೆ. ಮೇಲ್ಜಾತಿಯವರ ಈ ಮುಂದುವರಿಕೆಗೆ ಬಹುಮುಖ್ಯ ಕಾರಣ ಅವರಿಗಿರುವ ಸಾಮಾಜಿಕ ಅನುಕೂಲತೆ ಅಷ್ಟು. ಅದು ಮೊದಲೂ ಇತ್ತು , ಈಗಲೂ ಇದೆ.

ಅದೇ ಒಬ್ಬ ಪರಿಶಿಷ್ಟ ಜಾತಿಯ ಮನುಷ್ಯನಿಗೆ ತನಗಿರುವ ಸಾಮಥ್ರ್ಯ ಬಳಸಿಕೊಳ್ಳಲು ಆಗದಂಥ ಸಾಮಾಜಿಕ ಅನಾನುಕೂಲತೆ ಇದೆ. ಇದಕ್ಕೆ ಒಂದು ಅತೀ ಸರಳ ಉದಾಹರಣೆಯಾಗಿ ಒಬ್ಬ ಮೇಲ್ಜಾತಿಯವ ಒಂದು ಹೋಟೆಲು ನಡೆಸಿದರೆ ಆಗುವ ಬುಸಿನೆಸ್ಸಿಗೂ ಅದೇ ಒಬ್ಬ ಪರಿಶಿಷ್ಟ ಜಾತಿಯವನ ಹೋಟೆಲಿಗೆ ಆಗುವ ಬುಸಿನೆಸ್ಸಿಗೂ ಹೋಲಿಸಿ ನೋಡಿ. ಈತ ಪರಿಶಿಷ್ಟ ಜಾತಿಯವ ಎಂಬ ಒಂದೇ ಕಾರಣಕ್ಕೆ ಮೇಲ್ಜಾತಿ ಮತ್ತು ಮಧ್ಯಮ ಜಾತಿಯ ಬಹುತೇಕರು ಆ ಹೋಟೆಲಿಗೇ ಹೋಗದ ವಿಷಯ ನಮಗೆಲ್ಲಾ ತಿಳಿದಿದೆ.
ಇದೇ ಸಾಮಾಜಿಕ ಅನಾನುಕೂಲತೆಯ ಕಾರಣಕ್ಕೆ ವಿವಿಧ ವಲಯಗಳಲ್ಲಿ ಮೇಲ್ಜಾತಿಯವರಿಗೆ ಸಿಕ್ಕಷ್ಟು ಸುಲಭವಾಗಿ ಉದ್ಯೋಗಗಳೂ ಕೂಡ ಪರಿಶಿಷ್ಟ ಜಾತಿಯವರಿಗೆ ಇಂದಿಗೂ ಸಿಗುತ್ತಿಲ್ಲ.

ಕಡೆಗೆ, ಇಷ್ಟೊಂದು ಜಾತಿಯಾಧಾರಿತ ಅಸಮಾನತೆ ಇರುವ ಯಾವುದೇ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಕೂಡ ಸಾಧ್ಯವಿಲ್ಲ.

ಹಾಗಾದರೆ, ಈ ಅಸಮಾನತೆಯ ನಿವಾರಣೆಗೆ ದಾರಿಗಳೇನು?

ಮೊದಲನೆಯದಾಗಿ, ಹಿಂದುಳಿದವರ ಮತ್ತು ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿಗೆ ನಿಜಕ್ಕೂ ಸಹಾಯ ಮಾಡುವಂಥ ಮೀಸಲಾತಿಯನ್ನು ಖಾಸಗಿಯೂ ಸೇರಿ ಎಲ್ಲ ಉದ್ಯೋಗಗಳಿಗೂ ಜಾರಿಮಾಡುವುದು.

ಪರಿಶಿಷ್ಟ ಜಾತಿಯ ಜನರು ಸಾಮಾಜಿಕ ಅಸಮಾನತೆಯನ್ನು ಮೀರಿ ಉದ್ಯಮದಲ್ಲಿ ಮುಂದೆ ಬರಲು ಅನುಕೂಲವಾಗುವಂಥ ಪ್ರೋತ್ಸಾಹಕರ ಯೋಜನೆಗಳನ್ನು ಸರ್ಕಾರ ರೂಪಿಸುವುಂತೆ ಮಾಡುವುದು ಮತ್ತು ಈಗಾಗಲೇ ಇರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದು.

ಹಾಗೂ, ಅಂಬೇಡ್ಕರ್ ಕನಸಿನಂತೆ ಈ ಸಮಾಜದ ಕಟ್ಟಕಡೆಯವರಿಗೆ ಹೆಚ್ಚು ಹೆಚ್ಚು ರಾಜಕೀಯ ಅಧಿಕಾರ ಸಿಗುವ ಹೊಸಾ ದಾರಿಗಳನ್ನು ಹುಡುಕುವುದು. (ಅಂಬೇಡ್ಕರರ ಕ್ರಾಂತಿಕಾರಿ ಕನಸಾದ ಭೂಮಿಯ ರಾಷ್ಟ್ರೀಕರಣ ಮತ್ತು ಮರುಹಂಚಿಕೆ ಈ ಅಸಮಾನತೆಯನ್ನು ನಿಜಕ್ಕೂ ದೊಡ್ಡಮಟ್ಟಿಗೆ ಹೋಗಲಾಡಿಸಬಲ್ಲುದು, ಆದರೆ ಅದು ಸಾಧ್ಯವೆ?)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...