Homeರಾಜಕೀಯಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

ಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

- Advertisement -
ದೇಶದ ಚುನಾವಣೆ ಹತ್ತಿರ ಬರುತ್ತಿದೆ. ಅದನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗಳು ಯಾವ ತಂತ್ರ ರೂಪಿಸಬಹುದೆಂದು ದೇಶದ ಬುದ್ಧಿಜೀವಿಗಳು ಗಾಢವಾಗಿ ಯೋಚಿಸುತ್ತ ಕುಳಿತಿರಬೇಕಾದರೆ, ಮೋದಿ ಟೀಮು “ಪ್ರಧಾನಿ ಹತ್ಯೆಗೆ ಸಂಚು” ಎಂಬ ಸುದ್ದಿ ಹಬ್ಬಿಸಿ ಮಾವೊವಾದಿಗಳ ಬೇಟೆಗೆ ತೊಡಗಿದೆಯಲ್ಲ. ಇನ್ನು ಮುಂದಿನ ಕಾರ್ಯ ಯಾವುದೆಂದರೆ ಮಾವೋ ಸಾಹಿತ್ಯದ ಪುಸ್ತಕ ಇಟ್ಟುಕೊಂಡುವರ ಮೇಲೆ ದಾಳಿ ಮಾಡುವುದು. ಅವರೆಲ್ಲಾ ಮೋದಿಯನ್ನು ಮನೆಗೆ ಕರೆದು ಇಲಿಪಾಶಾಣ ಹಾಕಿ ಕೊಲ್ಲಲು ರೆಡಿ ಇದ್ದರೆಂಬ ರೆಕಾರ್ಡ್ ತಯಾರಿಸುವುದು ಅಂತೂ ಬಿಜೆಪಿಗಳು ಬರಲಿರುವ ಚುನಾವಣೆ ಎದುರಿಸಲು ಸಖತ್ತಾಗಿ ಸಾಮಗ್ರಿಗಳನ್ನೇ ಸಂಗ್ರಹಿಸತೊಡಗಿವೆಯಂತಲ್ಲಾ.
ಎಷ್ಟೇ ಆಗಲಿ ಲಾಹೋರ್‍ಗೆ ಬಸ್ ಬರುತ್ತಲೇ. ಭಾರತದ ಗಡಿಯೊಳಕ್ಕೆ ಪಾಕಿಸ್ತಾನಿಗಳನ್ನು ನುಸುಳಿಸಿಕೊಂಡು ನಮ್ಮ ದೇಶದ ಅತ್ಯಂತ ಸಮರ್ಥ 580 ಜನ ಸೈನಿಕರನ್ನು ಬಲಿಕೊಟ್ಟವರಲ್ಲದೆ ಈ ಬಿಜೆಪಿಗಳು. ಇನ್ನ ಚುನಾವಣೆ ಟೈಮಿಗೆ ಯಾವ ಯಾವ ಸಂಚು ರೂಪಿಸಿ ಅದೇನು ಮಾಡುತ್ತಾರೋ ಮೋದಿ ಪರಮಾತ್ಮನೇ ಬಲ್ಲ ಥೂತ್ತೇರಿ.
*********
ದೇಶ ಆಳಿ ಅನುಭವವಿಲ್ಲದ ಚೆಡ್ಡಿಗಳು ಯಾಕಿಂತಹ ಮನೆಮುರುಕು ಕೆಲಸಕ್ಕೆ ಕೈಹಾಕಿವೆ ಎಂದರೆ. ಅರ್ಧ ರಾತ್ರಿಯಲ್ಲಿ ನೋಟುಬ್ಯಾನು  ಮಾಡಿ ದೇಶವನ್ನೇ ಸಂಕಷ್ಟಕ್ಕೆ ದೂಡಿದವು. ಹೊಸ ನೋಟು ಕೇಸರಿ ಬಣ್ಣ ಮಿಕ್ಸ್ ಮಾಡಿದವು. ಆಮೇಲೆ ಜಿ.ಎಸ್.ಟಿ ತಂದು ಸಣ್ಣಪುಟ್ಟ ಉದ್ದಿಮೆ ಬಾಗಿಲಾಕುವಂತೆ ಮಾಡಿದವು. ಅವುಗಳ ಮುಂದೆ ಇನ್ನಾವ ಘನಕಾರ್ಯವೂ ಉಳಿದಿಲ್ಲವಾಗಿ ಮತ್ತೆ ದೇಶಕ್ಕೆ ವಕ್ಕರಿಸಲು ಮೋದಿ ಮಹಾತ್ಮ ಹುತಾತ್ಮನ ನಾಟಕ ಶುರುಹಚ್ಚಿಕೊಂಡಿದೆ.
ಇನ್ನು ಮುಂದೆ ತಾನು ದೇಶಕ್ಕಾಗಿ ಒಂದು ಚಟಾಕು ರಕ್ತ ಹರಿಸಲು ತಯಾರು ಎಂಬ ಹೃದಯವಿದ್ರಾವಕ ಭಾಷಣ ಮಾಡಲು ತಯಾರಿ ನಡೆಸಬಹುದು. ಬಿಜೆಪಿಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ಸಂಚು ಇದ್ದೇ ಇರುತ್ತದೆ. ಹಾಗೆಯೇ ಈವರೆಗಿನ ಅದರ ಆಡಳಿತವೇ ಸಂಚಿನ ಸರಮಾಲೆಯಿಂದ ಕೂಡಿದ್ದು ಮುಂದು ಕೂಡ ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಸಂಚುಗಳಿಂದಲೇ ಮುನ್ನಡೆವ ಆ ಪಕ್ಷ ದೇಶನಾಶ ಮಾಡಲೂ ಹೇಸುವುದಿಲ್ಲವಂತಲ್ಲಾ ಥೂತ್ತೇರಿ.
*********
ಇತ್ತ ಕರ್ನಾಟಕದ ಸಮಾಚಾರ ಶಾನೆ ಮಜವಾಗಿದೆಯಲ್ಲಾ. ಇನ್ನ ಕಾವೇರಿಯಲ್ಲೇ ಪವಡಿಸಿರುವ ಸಿದ್ದು ನಿದ್ದೆಯಿಂದೆದ್ದು “ನಾನು ತಿರಗ ಮುಖ್ಯಮಂತ್ರಿ ಆಯ್ತಿನಿ” ಎಂದು ಬಿಟ್ಟರಂತಲ್ಲಾ. ಇದರಿಂದ ಪುಳಕಿತರಾದ ಸುತ್ತಲೂ ಇದ್ದ ಕುರುಬ ಸಮಾಜದ ಮಾಜಿಗಳು ಮುಂದಾದ್ರು ನಮುಗ್ಯಾವುದರ ಬೊರ್ಡು, ನಿಗಮ ಅಕಾಡೆಮಿ ಇತ್ಯಾದಿ ಅನ್ನದಂಡದ ಹುದ್ದೆಗಳನ್ನು ಕರುಣಿಸಬೇಕೆಂದು ಅಂಗಲಾಚಿದರಂತಲ್ಲಾ.
ಮುಖ್ಯಮಂತ್ರಿಗಿರಿ ಹೋದ ನೂರೇ ದಿನಕ್ಕೆ ನಿರುದ್ಯೋಗ ಎದುರಿಸುತ್ತಿರುವ ಸಿದ್ದು. ಈ ತರಹ ಹೇಳಿಕೆ ಕೊಡಬೇಕಾದರೆ ಕಾರಣವೇನೆಂದು ಮಾಧ್ಯಮದ ಮಂದಮತಿಗಳು ಸದರಿ ಹೇಳೆಕೆಯನ್ನ ಅಳೆದು ಸುರಿದು ಹಂಚುತ್ತಿರಬೇಕಾದರೆ, ಅತ್ತ ಕುಮಾರಣ್ಣ ಸಿದ್ದು ಮಾತಿಗೆ ಆಕ್ರೋಶಗೊಂಡರೂ ಅದುಮಿಟ್ಟುಕೊಂಡು ಸಂತೋಷ ಬಹಳ ಸಂತೋಷ ಎಂದರಂತಲ್ಲಾ. ಹೇಳಿಕೇಳಿ ಇದು ಸಮ್ಮಿಶ್ರ ಸರಕಾರ ಕಾಂಗೈದು ಎಪ್ಪತ್ತೈದು ಭಾಗವಾದರೆ ಜೆಡಿಎಸ್‍ದು ಇಪ್ಪತ್ತೈದು ಭಾಗ. ಆದ್ದರಿಂದ ನಾಯಿಬಾಲ ಅಲ್ಲಾಡಿಸಬೇಕೆ ಹೊರತು, ಬಾಲವೇ ನಾಯಿ ಅಲ್ಲಾಡಿಸಬಾರದು ಎಂದು ಕಡ್ಡಿರಂಗ ವಾದಿಸುತ್ತಿರಲಾಗಿ, ಇತ್ತ ರಂಗನನ್ನು ಕಂಡಲಾಗದ ಸಿಂಗರು ನಾಯಿ ದುರ್ಬಲವಾಗಿರುವಾಗ ಅಕಸ್ಮಾತ್ ಅದು ಬಾಲ ಅಲ್ಲಾಡಿಸಲು ಯತ್ನಿಸಿದಾಗ ಅದೂ ಕೂಡ ಅಲ್ಲಾಡಬೇಕಾಗುತ್ತೆ. ಒಟ್ಟು ಕುಮ್ಮಿ ಸರಕಾರ ಈಗ ಅಲ್ಲಾಡುತ್ತಿದೆ ಎಂದವಂತಲ್ಲಾ ಥೂತ್ತೇರಿ.
*********
ಸಿರ್ಸಿ ಸಿದ್ದಾಪುರ ಕಡೆಯ ಅನಂತಕುಮಾರ ಹೆಗಡೆ ಎಂಬ ತಲೆಕೆಟ್ಟ ಗಿರಾಕಿ, ತಲೆಗೆ ಏಟುಬಿದ್ದಂತೆ ಸುಮ್ಮನಿರುವಾಗ ಬಿಜಾಪುರದ ಯತ್ನಾಳ್ ಎಂಬ ಯಡವಟ್ಟನ ಮೇಲೆ ಹೆಗಡೆ ಭೂತ ಆವರಿಸಿಕೊಂಡಿದೆಯಂತಲ್ಲಾ. ಕೇರಳದಲ್ಲಿನ ಭೀಕರ ಮಳೆಗೆ ನಾಡೇ ಕೊಚ್ಚಿ ಹೋಗಿದೆ. ಜನ ಜಾನುವಾರು, ಕಟ್ಟಡ, ರಸ್ತೆಗಳು ನೀರು ಪಾಲಾಗಿದೆ, ಇಂತಹ ಪ್ರಕೃತಿ ವಿಕೋಪಕ್ಕೆ ಯತ್ನಾಳಿಗೆ ಹೊಳೆದ ಕಾರಣವೆಂದರೆ ಕೇರಳಿಗರು ಗೋವುಗಳನ್ನು ಹತ್ಯೆ ಮಾಡಿರುವುದು. ಇಂತದೇ ಅನಾಹುತ ಕೊಡಗಿನಲ್ಲೂ ಸಂಭವಿಸಿದೆ. ಆದರೆ ಯತ್ನಾಳ್ ಎಂಬ ಮೂರ್ಖನಿಗೆ ಇಲ್ಲಿಯ ಕಾರಣ ಹೊಳೆದಿಲ್ಲ. ಏಕೆಂದರೆ ಕೊಡಗು ಈಗ ಬಿಜಿಪಿ ಮಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ ಈ ಯತ್ನಾಳ್‍ನ ಮೆದುಳಿಗೆ ಕಾರಣ ಹೊಳೆಯಬೇಕಿತ್ತು. ಅದಾವುದಪ್ಪ ಎಂದರೆ ಕೊಡಗಿನಲ್ಲಿ ವರಾಹ ಸಂತತಿಯ ಮಾರಣಹೋಮ ನಡೆಯುತ್ತಲೇ ಇದೆ. ವರಹ ವಿಷ್ಣುವಿನ ಅವತಾರ ಆ ಅವತಾರವೆತ್ತಿದ ಮಹಾವಿಷ್ಣು ಭೂದೇವಿಯನ್ನ ರಕಿÀ್ಷಸಿ ಸ್ಥಾಪಿಸದಿದ್ದರೆ ಕೊಡಗೇನು ಭೂಮಂಡಲವೇ ಇರುತ್ತಿರಲಿಲ್ಲ. ಇಂತಹ ಕಾರಣ ಮಂದಮತಿ ಯತ್ನಾಳನಿಗೆ ಈವರೆಗೆ ಹೊಳೆಯದಿರುವುದೇ ಬಿಜಾಪುರದ ದುರಂತವಲ್ಲವೆ ಥೂತ್ತೇರಿ.
*******
ಕುಮ್ಮಿ ಸರಕಾರದ ಮನರಂಜನೆ ಎಂದರೆ ರೇವಣ್ಣ. ಯಾವುದೇ ಸರಕಾರ ಘನಗಂಭೀರವಾಗಿ ಸಾಗಬಾರದು. ಅಲ್ಲಿ ಒಂದಿಷ್ಟು ಮನರಂಜನೆ ಇರಬೇಕು, ಆದರೆ ಈ ರೇವಣ್ಣನಂತಹ ರೇವಣ್ಣನನ್ನ ಇನ್ನೂ ಐದು ವರ್ಷ ಸಹಿಸಿಕೊಳ್ಳಬೇಕಲ್ಲಾ ಎಂದು ನೆನಸಿಕೊಂಡರೆ ನೇತಾಕಿಕೊಳ್ಳಬೇಕೆನಿಸುತ್ತದಲ್ಲಾ. ನೇತಾಕಿಕೊಳ್ಳೋಣವೆಂದರೆ, ಕುಮಾರಣ್ಣ ನಮ್ಮ ಸಾಲವನ್ನು ಸಂಪೂರ್ಣ ಮನ್ನ ಮಾಡಿದ್ದಾರೆ. ಇರೋಣವೆಂದರೆ ರೇವಣ್ಣ ರಾದ್ಧಾಂತ. ಅಂತೂ ನಮ್ಮ ಪಿತೃಸಮಾನರಾದ ದೇವೇಗೌಡರಿಗೆ ಕರ್ನಾಟಕದ ಮೇಲೆ ಅದೆಂತಹ ಪ್ರೀತಿಯಿತ್ತೋ ಏನೋ ಮುದ್ದಾದ ನಾಲ್ಕು ಮಕ್ಕಳನ್ನ ಕರ್ನಾಟಕದ ಮೇಲೆ ಎಸೆದಿದ್ದಾರೆ. ಆ ಪೈಕಿ ರೇವಣ್ಣನ ಜೊಲ್ಲು-ಗೊಣ್ಣೆಯನ್ನು ಯಾರಾದರೂ ಒರೆಸಲೇಬೇಕಿದೆ. ತಾಯಿ ಭವಾನಿ ನಿಜಕ್ಕೂ ಮಹಾಮಾತೆ, ಆ ಮಾತೆ ತಮ್ಮ ಪ್ರಾಣಕಾಂತನಿಗೆ ಒಂದಿಷ್ಟು ನಾಗರಿಕ ನಡವಳಿಕೆ ಕಲಿಸಿ ಕೈಬಿಟ್ಟಿದ್ದರೇ ಕನ್ನಡ ಜನತೆ ಕೃತಾರ್ಥವಾಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ. ತಾಯಿ ಭವಾನಿ ತಮ್ಮ ಆರ್ಯಪುತ್ರನಿಗೆ ಒಳ್ಳೆ ಕಟಿಂಗ್ ಮಾಡಿಸಿ, ಒಳ್ಳೆ ಬಟ್ಟೆ ಇಕ್ಕಿ, ಹಾಗೆ ಬಾಯಿ ಮೂಗು ಕ್ಲೀನ್ ಮಾಡಿ, ಕೈಗೆ ಸಿಕ್ಕಿದ್ದನ್ನು ಎಸೆಯದಂತೆ ಬುದ್ಧಿ ಹೇಳಿ ಕಳಿಸಿದರೆ; ಕನ್ನಡ ಜನತೆ ಆರ್ಯಪುತ್ರನ ಅಭಿಮಾನಿಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ ಥೂತ್ತೇರಿ.
– ಯಾಹೂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...