Homeರಾಜಕೀಯಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

ಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

- Advertisement -
ದೇಶದ ಚುನಾವಣೆ ಹತ್ತಿರ ಬರುತ್ತಿದೆ. ಅದನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗಳು ಯಾವ ತಂತ್ರ ರೂಪಿಸಬಹುದೆಂದು ದೇಶದ ಬುದ್ಧಿಜೀವಿಗಳು ಗಾಢವಾಗಿ ಯೋಚಿಸುತ್ತ ಕುಳಿತಿರಬೇಕಾದರೆ, ಮೋದಿ ಟೀಮು “ಪ್ರಧಾನಿ ಹತ್ಯೆಗೆ ಸಂಚು” ಎಂಬ ಸುದ್ದಿ ಹಬ್ಬಿಸಿ ಮಾವೊವಾದಿಗಳ ಬೇಟೆಗೆ ತೊಡಗಿದೆಯಲ್ಲ. ಇನ್ನು ಮುಂದಿನ ಕಾರ್ಯ ಯಾವುದೆಂದರೆ ಮಾವೋ ಸಾಹಿತ್ಯದ ಪುಸ್ತಕ ಇಟ್ಟುಕೊಂಡುವರ ಮೇಲೆ ದಾಳಿ ಮಾಡುವುದು. ಅವರೆಲ್ಲಾ ಮೋದಿಯನ್ನು ಮನೆಗೆ ಕರೆದು ಇಲಿಪಾಶಾಣ ಹಾಕಿ ಕೊಲ್ಲಲು ರೆಡಿ ಇದ್ದರೆಂಬ ರೆಕಾರ್ಡ್ ತಯಾರಿಸುವುದು ಅಂತೂ ಬಿಜೆಪಿಗಳು ಬರಲಿರುವ ಚುನಾವಣೆ ಎದುರಿಸಲು ಸಖತ್ತಾಗಿ ಸಾಮಗ್ರಿಗಳನ್ನೇ ಸಂಗ್ರಹಿಸತೊಡಗಿವೆಯಂತಲ್ಲಾ.
ಎಷ್ಟೇ ಆಗಲಿ ಲಾಹೋರ್‍ಗೆ ಬಸ್ ಬರುತ್ತಲೇ. ಭಾರತದ ಗಡಿಯೊಳಕ್ಕೆ ಪಾಕಿಸ್ತಾನಿಗಳನ್ನು ನುಸುಳಿಸಿಕೊಂಡು ನಮ್ಮ ದೇಶದ ಅತ್ಯಂತ ಸಮರ್ಥ 580 ಜನ ಸೈನಿಕರನ್ನು ಬಲಿಕೊಟ್ಟವರಲ್ಲದೆ ಈ ಬಿಜೆಪಿಗಳು. ಇನ್ನ ಚುನಾವಣೆ ಟೈಮಿಗೆ ಯಾವ ಯಾವ ಸಂಚು ರೂಪಿಸಿ ಅದೇನು ಮಾಡುತ್ತಾರೋ ಮೋದಿ ಪರಮಾತ್ಮನೇ ಬಲ್ಲ ಥೂತ್ತೇರಿ.
*********
ದೇಶ ಆಳಿ ಅನುಭವವಿಲ್ಲದ ಚೆಡ್ಡಿಗಳು ಯಾಕಿಂತಹ ಮನೆಮುರುಕು ಕೆಲಸಕ್ಕೆ ಕೈಹಾಕಿವೆ ಎಂದರೆ. ಅರ್ಧ ರಾತ್ರಿಯಲ್ಲಿ ನೋಟುಬ್ಯಾನು  ಮಾಡಿ ದೇಶವನ್ನೇ ಸಂಕಷ್ಟಕ್ಕೆ ದೂಡಿದವು. ಹೊಸ ನೋಟು ಕೇಸರಿ ಬಣ್ಣ ಮಿಕ್ಸ್ ಮಾಡಿದವು. ಆಮೇಲೆ ಜಿ.ಎಸ್.ಟಿ ತಂದು ಸಣ್ಣಪುಟ್ಟ ಉದ್ದಿಮೆ ಬಾಗಿಲಾಕುವಂತೆ ಮಾಡಿದವು. ಅವುಗಳ ಮುಂದೆ ಇನ್ನಾವ ಘನಕಾರ್ಯವೂ ಉಳಿದಿಲ್ಲವಾಗಿ ಮತ್ತೆ ದೇಶಕ್ಕೆ ವಕ್ಕರಿಸಲು ಮೋದಿ ಮಹಾತ್ಮ ಹುತಾತ್ಮನ ನಾಟಕ ಶುರುಹಚ್ಚಿಕೊಂಡಿದೆ.
ಇನ್ನು ಮುಂದೆ ತಾನು ದೇಶಕ್ಕಾಗಿ ಒಂದು ಚಟಾಕು ರಕ್ತ ಹರಿಸಲು ತಯಾರು ಎಂಬ ಹೃದಯವಿದ್ರಾವಕ ಭಾಷಣ ಮಾಡಲು ತಯಾರಿ ನಡೆಸಬಹುದು. ಬಿಜೆಪಿಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ಸಂಚು ಇದ್ದೇ ಇರುತ್ತದೆ. ಹಾಗೆಯೇ ಈವರೆಗಿನ ಅದರ ಆಡಳಿತವೇ ಸಂಚಿನ ಸರಮಾಲೆಯಿಂದ ಕೂಡಿದ್ದು ಮುಂದು ಕೂಡ ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಸಂಚುಗಳಿಂದಲೇ ಮುನ್ನಡೆವ ಆ ಪಕ್ಷ ದೇಶನಾಶ ಮಾಡಲೂ ಹೇಸುವುದಿಲ್ಲವಂತಲ್ಲಾ ಥೂತ್ತೇರಿ.
*********
ಇತ್ತ ಕರ್ನಾಟಕದ ಸಮಾಚಾರ ಶಾನೆ ಮಜವಾಗಿದೆಯಲ್ಲಾ. ಇನ್ನ ಕಾವೇರಿಯಲ್ಲೇ ಪವಡಿಸಿರುವ ಸಿದ್ದು ನಿದ್ದೆಯಿಂದೆದ್ದು “ನಾನು ತಿರಗ ಮುಖ್ಯಮಂತ್ರಿ ಆಯ್ತಿನಿ” ಎಂದು ಬಿಟ್ಟರಂತಲ್ಲಾ. ಇದರಿಂದ ಪುಳಕಿತರಾದ ಸುತ್ತಲೂ ಇದ್ದ ಕುರುಬ ಸಮಾಜದ ಮಾಜಿಗಳು ಮುಂದಾದ್ರು ನಮುಗ್ಯಾವುದರ ಬೊರ್ಡು, ನಿಗಮ ಅಕಾಡೆಮಿ ಇತ್ಯಾದಿ ಅನ್ನದಂಡದ ಹುದ್ದೆಗಳನ್ನು ಕರುಣಿಸಬೇಕೆಂದು ಅಂಗಲಾಚಿದರಂತಲ್ಲಾ.
ಮುಖ್ಯಮಂತ್ರಿಗಿರಿ ಹೋದ ನೂರೇ ದಿನಕ್ಕೆ ನಿರುದ್ಯೋಗ ಎದುರಿಸುತ್ತಿರುವ ಸಿದ್ದು. ಈ ತರಹ ಹೇಳಿಕೆ ಕೊಡಬೇಕಾದರೆ ಕಾರಣವೇನೆಂದು ಮಾಧ್ಯಮದ ಮಂದಮತಿಗಳು ಸದರಿ ಹೇಳೆಕೆಯನ್ನ ಅಳೆದು ಸುರಿದು ಹಂಚುತ್ತಿರಬೇಕಾದರೆ, ಅತ್ತ ಕುಮಾರಣ್ಣ ಸಿದ್ದು ಮಾತಿಗೆ ಆಕ್ರೋಶಗೊಂಡರೂ ಅದುಮಿಟ್ಟುಕೊಂಡು ಸಂತೋಷ ಬಹಳ ಸಂತೋಷ ಎಂದರಂತಲ್ಲಾ. ಹೇಳಿಕೇಳಿ ಇದು ಸಮ್ಮಿಶ್ರ ಸರಕಾರ ಕಾಂಗೈದು ಎಪ್ಪತ್ತೈದು ಭಾಗವಾದರೆ ಜೆಡಿಎಸ್‍ದು ಇಪ್ಪತ್ತೈದು ಭಾಗ. ಆದ್ದರಿಂದ ನಾಯಿಬಾಲ ಅಲ್ಲಾಡಿಸಬೇಕೆ ಹೊರತು, ಬಾಲವೇ ನಾಯಿ ಅಲ್ಲಾಡಿಸಬಾರದು ಎಂದು ಕಡ್ಡಿರಂಗ ವಾದಿಸುತ್ತಿರಲಾಗಿ, ಇತ್ತ ರಂಗನನ್ನು ಕಂಡಲಾಗದ ಸಿಂಗರು ನಾಯಿ ದುರ್ಬಲವಾಗಿರುವಾಗ ಅಕಸ್ಮಾತ್ ಅದು ಬಾಲ ಅಲ್ಲಾಡಿಸಲು ಯತ್ನಿಸಿದಾಗ ಅದೂ ಕೂಡ ಅಲ್ಲಾಡಬೇಕಾಗುತ್ತೆ. ಒಟ್ಟು ಕುಮ್ಮಿ ಸರಕಾರ ಈಗ ಅಲ್ಲಾಡುತ್ತಿದೆ ಎಂದವಂತಲ್ಲಾ ಥೂತ್ತೇರಿ.
*********
ಸಿರ್ಸಿ ಸಿದ್ದಾಪುರ ಕಡೆಯ ಅನಂತಕುಮಾರ ಹೆಗಡೆ ಎಂಬ ತಲೆಕೆಟ್ಟ ಗಿರಾಕಿ, ತಲೆಗೆ ಏಟುಬಿದ್ದಂತೆ ಸುಮ್ಮನಿರುವಾಗ ಬಿಜಾಪುರದ ಯತ್ನಾಳ್ ಎಂಬ ಯಡವಟ್ಟನ ಮೇಲೆ ಹೆಗಡೆ ಭೂತ ಆವರಿಸಿಕೊಂಡಿದೆಯಂತಲ್ಲಾ. ಕೇರಳದಲ್ಲಿನ ಭೀಕರ ಮಳೆಗೆ ನಾಡೇ ಕೊಚ್ಚಿ ಹೋಗಿದೆ. ಜನ ಜಾನುವಾರು, ಕಟ್ಟಡ, ರಸ್ತೆಗಳು ನೀರು ಪಾಲಾಗಿದೆ, ಇಂತಹ ಪ್ರಕೃತಿ ವಿಕೋಪಕ್ಕೆ ಯತ್ನಾಳಿಗೆ ಹೊಳೆದ ಕಾರಣವೆಂದರೆ ಕೇರಳಿಗರು ಗೋವುಗಳನ್ನು ಹತ್ಯೆ ಮಾಡಿರುವುದು. ಇಂತದೇ ಅನಾಹುತ ಕೊಡಗಿನಲ್ಲೂ ಸಂಭವಿಸಿದೆ. ಆದರೆ ಯತ್ನಾಳ್ ಎಂಬ ಮೂರ್ಖನಿಗೆ ಇಲ್ಲಿಯ ಕಾರಣ ಹೊಳೆದಿಲ್ಲ. ಏಕೆಂದರೆ ಕೊಡಗು ಈಗ ಬಿಜಿಪಿ ಮಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ ಈ ಯತ್ನಾಳ್‍ನ ಮೆದುಳಿಗೆ ಕಾರಣ ಹೊಳೆಯಬೇಕಿತ್ತು. ಅದಾವುದಪ್ಪ ಎಂದರೆ ಕೊಡಗಿನಲ್ಲಿ ವರಾಹ ಸಂತತಿಯ ಮಾರಣಹೋಮ ನಡೆಯುತ್ತಲೇ ಇದೆ. ವರಹ ವಿಷ್ಣುವಿನ ಅವತಾರ ಆ ಅವತಾರವೆತ್ತಿದ ಮಹಾವಿಷ್ಣು ಭೂದೇವಿಯನ್ನ ರಕಿÀ್ಷಸಿ ಸ್ಥಾಪಿಸದಿದ್ದರೆ ಕೊಡಗೇನು ಭೂಮಂಡಲವೇ ಇರುತ್ತಿರಲಿಲ್ಲ. ಇಂತಹ ಕಾರಣ ಮಂದಮತಿ ಯತ್ನಾಳನಿಗೆ ಈವರೆಗೆ ಹೊಳೆಯದಿರುವುದೇ ಬಿಜಾಪುರದ ದುರಂತವಲ್ಲವೆ ಥೂತ್ತೇರಿ.
*******
ಕುಮ್ಮಿ ಸರಕಾರದ ಮನರಂಜನೆ ಎಂದರೆ ರೇವಣ್ಣ. ಯಾವುದೇ ಸರಕಾರ ಘನಗಂಭೀರವಾಗಿ ಸಾಗಬಾರದು. ಅಲ್ಲಿ ಒಂದಿಷ್ಟು ಮನರಂಜನೆ ಇರಬೇಕು, ಆದರೆ ಈ ರೇವಣ್ಣನಂತಹ ರೇವಣ್ಣನನ್ನ ಇನ್ನೂ ಐದು ವರ್ಷ ಸಹಿಸಿಕೊಳ್ಳಬೇಕಲ್ಲಾ ಎಂದು ನೆನಸಿಕೊಂಡರೆ ನೇತಾಕಿಕೊಳ್ಳಬೇಕೆನಿಸುತ್ತದಲ್ಲಾ. ನೇತಾಕಿಕೊಳ್ಳೋಣವೆಂದರೆ, ಕುಮಾರಣ್ಣ ನಮ್ಮ ಸಾಲವನ್ನು ಸಂಪೂರ್ಣ ಮನ್ನ ಮಾಡಿದ್ದಾರೆ. ಇರೋಣವೆಂದರೆ ರೇವಣ್ಣ ರಾದ್ಧಾಂತ. ಅಂತೂ ನಮ್ಮ ಪಿತೃಸಮಾನರಾದ ದೇವೇಗೌಡರಿಗೆ ಕರ್ನಾಟಕದ ಮೇಲೆ ಅದೆಂತಹ ಪ್ರೀತಿಯಿತ್ತೋ ಏನೋ ಮುದ್ದಾದ ನಾಲ್ಕು ಮಕ್ಕಳನ್ನ ಕರ್ನಾಟಕದ ಮೇಲೆ ಎಸೆದಿದ್ದಾರೆ. ಆ ಪೈಕಿ ರೇವಣ್ಣನ ಜೊಲ್ಲು-ಗೊಣ್ಣೆಯನ್ನು ಯಾರಾದರೂ ಒರೆಸಲೇಬೇಕಿದೆ. ತಾಯಿ ಭವಾನಿ ನಿಜಕ್ಕೂ ಮಹಾಮಾತೆ, ಆ ಮಾತೆ ತಮ್ಮ ಪ್ರಾಣಕಾಂತನಿಗೆ ಒಂದಿಷ್ಟು ನಾಗರಿಕ ನಡವಳಿಕೆ ಕಲಿಸಿ ಕೈಬಿಟ್ಟಿದ್ದರೇ ಕನ್ನಡ ಜನತೆ ಕೃತಾರ್ಥವಾಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ. ತಾಯಿ ಭವಾನಿ ತಮ್ಮ ಆರ್ಯಪುತ್ರನಿಗೆ ಒಳ್ಳೆ ಕಟಿಂಗ್ ಮಾಡಿಸಿ, ಒಳ್ಳೆ ಬಟ್ಟೆ ಇಕ್ಕಿ, ಹಾಗೆ ಬಾಯಿ ಮೂಗು ಕ್ಲೀನ್ ಮಾಡಿ, ಕೈಗೆ ಸಿಕ್ಕಿದ್ದನ್ನು ಎಸೆಯದಂತೆ ಬುದ್ಧಿ ಹೇಳಿ ಕಳಿಸಿದರೆ; ಕನ್ನಡ ಜನತೆ ಆರ್ಯಪುತ್ರನ ಅಭಿಮಾನಿಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ ಥೂತ್ತೇರಿ.
– ಯಾಹೂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...