Homeರಾಜಕೀಯಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

ಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

- Advertisement -
ದೇಶದ ಚುನಾವಣೆ ಹತ್ತಿರ ಬರುತ್ತಿದೆ. ಅದನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗಳು ಯಾವ ತಂತ್ರ ರೂಪಿಸಬಹುದೆಂದು ದೇಶದ ಬುದ್ಧಿಜೀವಿಗಳು ಗಾಢವಾಗಿ ಯೋಚಿಸುತ್ತ ಕುಳಿತಿರಬೇಕಾದರೆ, ಮೋದಿ ಟೀಮು “ಪ್ರಧಾನಿ ಹತ್ಯೆಗೆ ಸಂಚು” ಎಂಬ ಸುದ್ದಿ ಹಬ್ಬಿಸಿ ಮಾವೊವಾದಿಗಳ ಬೇಟೆಗೆ ತೊಡಗಿದೆಯಲ್ಲ. ಇನ್ನು ಮುಂದಿನ ಕಾರ್ಯ ಯಾವುದೆಂದರೆ ಮಾವೋ ಸಾಹಿತ್ಯದ ಪುಸ್ತಕ ಇಟ್ಟುಕೊಂಡುವರ ಮೇಲೆ ದಾಳಿ ಮಾಡುವುದು. ಅವರೆಲ್ಲಾ ಮೋದಿಯನ್ನು ಮನೆಗೆ ಕರೆದು ಇಲಿಪಾಶಾಣ ಹಾಕಿ ಕೊಲ್ಲಲು ರೆಡಿ ಇದ್ದರೆಂಬ ರೆಕಾರ್ಡ್ ತಯಾರಿಸುವುದು ಅಂತೂ ಬಿಜೆಪಿಗಳು ಬರಲಿರುವ ಚುನಾವಣೆ ಎದುರಿಸಲು ಸಖತ್ತಾಗಿ ಸಾಮಗ್ರಿಗಳನ್ನೇ ಸಂಗ್ರಹಿಸತೊಡಗಿವೆಯಂತಲ್ಲಾ.
ಎಷ್ಟೇ ಆಗಲಿ ಲಾಹೋರ್‍ಗೆ ಬಸ್ ಬರುತ್ತಲೇ. ಭಾರತದ ಗಡಿಯೊಳಕ್ಕೆ ಪಾಕಿಸ್ತಾನಿಗಳನ್ನು ನುಸುಳಿಸಿಕೊಂಡು ನಮ್ಮ ದೇಶದ ಅತ್ಯಂತ ಸಮರ್ಥ 580 ಜನ ಸೈನಿಕರನ್ನು ಬಲಿಕೊಟ್ಟವರಲ್ಲದೆ ಈ ಬಿಜೆಪಿಗಳು. ಇನ್ನ ಚುನಾವಣೆ ಟೈಮಿಗೆ ಯಾವ ಯಾವ ಸಂಚು ರೂಪಿಸಿ ಅದೇನು ಮಾಡುತ್ತಾರೋ ಮೋದಿ ಪರಮಾತ್ಮನೇ ಬಲ್ಲ ಥೂತ್ತೇರಿ.
*********
ದೇಶ ಆಳಿ ಅನುಭವವಿಲ್ಲದ ಚೆಡ್ಡಿಗಳು ಯಾಕಿಂತಹ ಮನೆಮುರುಕು ಕೆಲಸಕ್ಕೆ ಕೈಹಾಕಿವೆ ಎಂದರೆ. ಅರ್ಧ ರಾತ್ರಿಯಲ್ಲಿ ನೋಟುಬ್ಯಾನು  ಮಾಡಿ ದೇಶವನ್ನೇ ಸಂಕಷ್ಟಕ್ಕೆ ದೂಡಿದವು. ಹೊಸ ನೋಟು ಕೇಸರಿ ಬಣ್ಣ ಮಿಕ್ಸ್ ಮಾಡಿದವು. ಆಮೇಲೆ ಜಿ.ಎಸ್.ಟಿ ತಂದು ಸಣ್ಣಪುಟ್ಟ ಉದ್ದಿಮೆ ಬಾಗಿಲಾಕುವಂತೆ ಮಾಡಿದವು. ಅವುಗಳ ಮುಂದೆ ಇನ್ನಾವ ಘನಕಾರ್ಯವೂ ಉಳಿದಿಲ್ಲವಾಗಿ ಮತ್ತೆ ದೇಶಕ್ಕೆ ವಕ್ಕರಿಸಲು ಮೋದಿ ಮಹಾತ್ಮ ಹುತಾತ್ಮನ ನಾಟಕ ಶುರುಹಚ್ಚಿಕೊಂಡಿದೆ.
ಇನ್ನು ಮುಂದೆ ತಾನು ದೇಶಕ್ಕಾಗಿ ಒಂದು ಚಟಾಕು ರಕ್ತ ಹರಿಸಲು ತಯಾರು ಎಂಬ ಹೃದಯವಿದ್ರಾವಕ ಭಾಷಣ ಮಾಡಲು ತಯಾರಿ ನಡೆಸಬಹುದು. ಬಿಜೆಪಿಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ಸಂಚು ಇದ್ದೇ ಇರುತ್ತದೆ. ಹಾಗೆಯೇ ಈವರೆಗಿನ ಅದರ ಆಡಳಿತವೇ ಸಂಚಿನ ಸರಮಾಲೆಯಿಂದ ಕೂಡಿದ್ದು ಮುಂದು ಕೂಡ ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಸಂಚುಗಳಿಂದಲೇ ಮುನ್ನಡೆವ ಆ ಪಕ್ಷ ದೇಶನಾಶ ಮಾಡಲೂ ಹೇಸುವುದಿಲ್ಲವಂತಲ್ಲಾ ಥೂತ್ತೇರಿ.
*********
ಇತ್ತ ಕರ್ನಾಟಕದ ಸಮಾಚಾರ ಶಾನೆ ಮಜವಾಗಿದೆಯಲ್ಲಾ. ಇನ್ನ ಕಾವೇರಿಯಲ್ಲೇ ಪವಡಿಸಿರುವ ಸಿದ್ದು ನಿದ್ದೆಯಿಂದೆದ್ದು “ನಾನು ತಿರಗ ಮುಖ್ಯಮಂತ್ರಿ ಆಯ್ತಿನಿ” ಎಂದು ಬಿಟ್ಟರಂತಲ್ಲಾ. ಇದರಿಂದ ಪುಳಕಿತರಾದ ಸುತ್ತಲೂ ಇದ್ದ ಕುರುಬ ಸಮಾಜದ ಮಾಜಿಗಳು ಮುಂದಾದ್ರು ನಮುಗ್ಯಾವುದರ ಬೊರ್ಡು, ನಿಗಮ ಅಕಾಡೆಮಿ ಇತ್ಯಾದಿ ಅನ್ನದಂಡದ ಹುದ್ದೆಗಳನ್ನು ಕರುಣಿಸಬೇಕೆಂದು ಅಂಗಲಾಚಿದರಂತಲ್ಲಾ.
ಮುಖ್ಯಮಂತ್ರಿಗಿರಿ ಹೋದ ನೂರೇ ದಿನಕ್ಕೆ ನಿರುದ್ಯೋಗ ಎದುರಿಸುತ್ತಿರುವ ಸಿದ್ದು. ಈ ತರಹ ಹೇಳಿಕೆ ಕೊಡಬೇಕಾದರೆ ಕಾರಣವೇನೆಂದು ಮಾಧ್ಯಮದ ಮಂದಮತಿಗಳು ಸದರಿ ಹೇಳೆಕೆಯನ್ನ ಅಳೆದು ಸುರಿದು ಹಂಚುತ್ತಿರಬೇಕಾದರೆ, ಅತ್ತ ಕುಮಾರಣ್ಣ ಸಿದ್ದು ಮಾತಿಗೆ ಆಕ್ರೋಶಗೊಂಡರೂ ಅದುಮಿಟ್ಟುಕೊಂಡು ಸಂತೋಷ ಬಹಳ ಸಂತೋಷ ಎಂದರಂತಲ್ಲಾ. ಹೇಳಿಕೇಳಿ ಇದು ಸಮ್ಮಿಶ್ರ ಸರಕಾರ ಕಾಂಗೈದು ಎಪ್ಪತ್ತೈದು ಭಾಗವಾದರೆ ಜೆಡಿಎಸ್‍ದು ಇಪ್ಪತ್ತೈದು ಭಾಗ. ಆದ್ದರಿಂದ ನಾಯಿಬಾಲ ಅಲ್ಲಾಡಿಸಬೇಕೆ ಹೊರತು, ಬಾಲವೇ ನಾಯಿ ಅಲ್ಲಾಡಿಸಬಾರದು ಎಂದು ಕಡ್ಡಿರಂಗ ವಾದಿಸುತ್ತಿರಲಾಗಿ, ಇತ್ತ ರಂಗನನ್ನು ಕಂಡಲಾಗದ ಸಿಂಗರು ನಾಯಿ ದುರ್ಬಲವಾಗಿರುವಾಗ ಅಕಸ್ಮಾತ್ ಅದು ಬಾಲ ಅಲ್ಲಾಡಿಸಲು ಯತ್ನಿಸಿದಾಗ ಅದೂ ಕೂಡ ಅಲ್ಲಾಡಬೇಕಾಗುತ್ತೆ. ಒಟ್ಟು ಕುಮ್ಮಿ ಸರಕಾರ ಈಗ ಅಲ್ಲಾಡುತ್ತಿದೆ ಎಂದವಂತಲ್ಲಾ ಥೂತ್ತೇರಿ.
*********
ಸಿರ್ಸಿ ಸಿದ್ದಾಪುರ ಕಡೆಯ ಅನಂತಕುಮಾರ ಹೆಗಡೆ ಎಂಬ ತಲೆಕೆಟ್ಟ ಗಿರಾಕಿ, ತಲೆಗೆ ಏಟುಬಿದ್ದಂತೆ ಸುಮ್ಮನಿರುವಾಗ ಬಿಜಾಪುರದ ಯತ್ನಾಳ್ ಎಂಬ ಯಡವಟ್ಟನ ಮೇಲೆ ಹೆಗಡೆ ಭೂತ ಆವರಿಸಿಕೊಂಡಿದೆಯಂತಲ್ಲಾ. ಕೇರಳದಲ್ಲಿನ ಭೀಕರ ಮಳೆಗೆ ನಾಡೇ ಕೊಚ್ಚಿ ಹೋಗಿದೆ. ಜನ ಜಾನುವಾರು, ಕಟ್ಟಡ, ರಸ್ತೆಗಳು ನೀರು ಪಾಲಾಗಿದೆ, ಇಂತಹ ಪ್ರಕೃತಿ ವಿಕೋಪಕ್ಕೆ ಯತ್ನಾಳಿಗೆ ಹೊಳೆದ ಕಾರಣವೆಂದರೆ ಕೇರಳಿಗರು ಗೋವುಗಳನ್ನು ಹತ್ಯೆ ಮಾಡಿರುವುದು. ಇಂತದೇ ಅನಾಹುತ ಕೊಡಗಿನಲ್ಲೂ ಸಂಭವಿಸಿದೆ. ಆದರೆ ಯತ್ನಾಳ್ ಎಂಬ ಮೂರ್ಖನಿಗೆ ಇಲ್ಲಿಯ ಕಾರಣ ಹೊಳೆದಿಲ್ಲ. ಏಕೆಂದರೆ ಕೊಡಗು ಈಗ ಬಿಜಿಪಿ ಮಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ ಈ ಯತ್ನಾಳ್‍ನ ಮೆದುಳಿಗೆ ಕಾರಣ ಹೊಳೆಯಬೇಕಿತ್ತು. ಅದಾವುದಪ್ಪ ಎಂದರೆ ಕೊಡಗಿನಲ್ಲಿ ವರಾಹ ಸಂತತಿಯ ಮಾರಣಹೋಮ ನಡೆಯುತ್ತಲೇ ಇದೆ. ವರಹ ವಿಷ್ಣುವಿನ ಅವತಾರ ಆ ಅವತಾರವೆತ್ತಿದ ಮಹಾವಿಷ್ಣು ಭೂದೇವಿಯನ್ನ ರಕಿÀ್ಷಸಿ ಸ್ಥಾಪಿಸದಿದ್ದರೆ ಕೊಡಗೇನು ಭೂಮಂಡಲವೇ ಇರುತ್ತಿರಲಿಲ್ಲ. ಇಂತಹ ಕಾರಣ ಮಂದಮತಿ ಯತ್ನಾಳನಿಗೆ ಈವರೆಗೆ ಹೊಳೆಯದಿರುವುದೇ ಬಿಜಾಪುರದ ದುರಂತವಲ್ಲವೆ ಥೂತ್ತೇರಿ.
*******
ಕುಮ್ಮಿ ಸರಕಾರದ ಮನರಂಜನೆ ಎಂದರೆ ರೇವಣ್ಣ. ಯಾವುದೇ ಸರಕಾರ ಘನಗಂಭೀರವಾಗಿ ಸಾಗಬಾರದು. ಅಲ್ಲಿ ಒಂದಿಷ್ಟು ಮನರಂಜನೆ ಇರಬೇಕು, ಆದರೆ ಈ ರೇವಣ್ಣನಂತಹ ರೇವಣ್ಣನನ್ನ ಇನ್ನೂ ಐದು ವರ್ಷ ಸಹಿಸಿಕೊಳ್ಳಬೇಕಲ್ಲಾ ಎಂದು ನೆನಸಿಕೊಂಡರೆ ನೇತಾಕಿಕೊಳ್ಳಬೇಕೆನಿಸುತ್ತದಲ್ಲಾ. ನೇತಾಕಿಕೊಳ್ಳೋಣವೆಂದರೆ, ಕುಮಾರಣ್ಣ ನಮ್ಮ ಸಾಲವನ್ನು ಸಂಪೂರ್ಣ ಮನ್ನ ಮಾಡಿದ್ದಾರೆ. ಇರೋಣವೆಂದರೆ ರೇವಣ್ಣ ರಾದ್ಧಾಂತ. ಅಂತೂ ನಮ್ಮ ಪಿತೃಸಮಾನರಾದ ದೇವೇಗೌಡರಿಗೆ ಕರ್ನಾಟಕದ ಮೇಲೆ ಅದೆಂತಹ ಪ್ರೀತಿಯಿತ್ತೋ ಏನೋ ಮುದ್ದಾದ ನಾಲ್ಕು ಮಕ್ಕಳನ್ನ ಕರ್ನಾಟಕದ ಮೇಲೆ ಎಸೆದಿದ್ದಾರೆ. ಆ ಪೈಕಿ ರೇವಣ್ಣನ ಜೊಲ್ಲು-ಗೊಣ್ಣೆಯನ್ನು ಯಾರಾದರೂ ಒರೆಸಲೇಬೇಕಿದೆ. ತಾಯಿ ಭವಾನಿ ನಿಜಕ್ಕೂ ಮಹಾಮಾತೆ, ಆ ಮಾತೆ ತಮ್ಮ ಪ್ರಾಣಕಾಂತನಿಗೆ ಒಂದಿಷ್ಟು ನಾಗರಿಕ ನಡವಳಿಕೆ ಕಲಿಸಿ ಕೈಬಿಟ್ಟಿದ್ದರೇ ಕನ್ನಡ ಜನತೆ ಕೃತಾರ್ಥವಾಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ. ತಾಯಿ ಭವಾನಿ ತಮ್ಮ ಆರ್ಯಪುತ್ರನಿಗೆ ಒಳ್ಳೆ ಕಟಿಂಗ್ ಮಾಡಿಸಿ, ಒಳ್ಳೆ ಬಟ್ಟೆ ಇಕ್ಕಿ, ಹಾಗೆ ಬಾಯಿ ಮೂಗು ಕ್ಲೀನ್ ಮಾಡಿ, ಕೈಗೆ ಸಿಕ್ಕಿದ್ದನ್ನು ಎಸೆಯದಂತೆ ಬುದ್ಧಿ ಹೇಳಿ ಕಳಿಸಿದರೆ; ಕನ್ನಡ ಜನತೆ ಆರ್ಯಪುತ್ರನ ಅಭಿಮಾನಿಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ ಥೂತ್ತೇರಿ.
– ಯಾಹೂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...