Homeಮುಖಪುಟಮತ್ತೆ 25 ರೂ ಹೆಚ್ಚಳ: ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ

ಮತ್ತೆ 25 ರೂ ಹೆಚ್ಚಳ: ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ

- Advertisement -
- Advertisement -

ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ, ಸಬ್ಸಿಡಿ ರಹಿತ ಧ್ರುವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು ಮತ್ತೆ ಏರಿಸಲಾಗಿದೆ. ಇಂದು ಮಾರ್ಚ್ 1 ರ ಸೋಮವಾರ 25 ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಈಗ 819 ರೂ. ಪಾವತಿಸಬೇಕು!

ಫೆಬ್ರವರಿ 25 ರಂದು, ಅಡುಗೆ ಅನಿಲದ ಬೆಲೆಯನ್ನು 25 ರೂ.ಗೆ ಏರಿಸಲಾಯಿತು. ವಾಸ್ತವವಾಗಿ, ಫೆಬ್ರವರಿ ತಿಂಗಳಲ್ಲಿ ಇದು ಮೂರನೆಯ ಹೆಚ್ಚಳವಾಗಿದೆ. ಫೆಬ್ರವರಿ 4 ಮತ್ತು ಫೆಬ್ರವರಿ 14 ರಂದು ಗ್ಯಾಸ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಿಂದ ಅಡುಗೆ ಅನಿಲ ಬೆಲೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಡಿಸೆಂಬರ್ 1 ರಂದು 594 ರಿಂದ 644 ರೂ.ಗೆ ಹೆಚ್ಚಿಸಲಾಯಿತು. ಹದಿನೈದು ದಿನಗಳಲ್ಲಿ, ಡಿಸೆಂಬರ್ 15 ರಂದು, ಬೆಲೆಗಳು ಮತ್ತೆ 644 ರೂ.ಗಳಿಂದ 694 ರೂ.ಗೆ ಏರಿಕೆಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಅಡುಗೆ ಅನಿಲದ ಬೆಲೆ 100 ರೂ.ಗಳಷ್ಟು ಏರಿಕೆ ಕಂಡಿತ್ತು. ಆದಾಗ್ಯೂ, ಜನವರಿ ತಿಂಗಳಲ್ಲಿ ಯಾವುದೇ ಸಿಲಿಂಡರ್ ಅನ್ನು 694 ರೂಗಳಿಗೆ ಯಾವುದೇ ಹೆಚ್ಚಳವಿಲ್ಲದೆ ಮಾರಾಟ ಮಾಡಲಾಯಿತು.

ಫೆಬ್ರವರಿಯಲ್ಲಿ ಏನಾಯಿತು?

ಬೆಲೆಗಳು ಮತ್ತೆ ಏರಿಕೆಯಾಗಲು ಪ್ರಾರಂಭಿಸಿದವು. ಫೆಬ್ರವರಿ 4 ರಂದು, ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮತ್ತೆ ಪರಿಷ್ಕರಿಸಲಾಯಿತು ಅದನ್ನು 719 ರೂ.ಗೆ ಮಾರಾಟ ಮಾಡಲಾಯಿತು. ಫೆಬ್ರವರಿ 14 ರಂದು ಅಸ್ತಿತ್ವದಲ್ಲಿರುವ ಬೆಲೆಗೆ ಮತ್ತೊಂದು 50 ರೂಗಳನ್ನು ಸೇರಿಸಲಾಯಿತು. ಆಗ ಸಿಲಿಂಡರ್ ಬೆಲೆ 769 ರೂಗಳಿಗೆ ಮುಟ್ಟಿತು.

ಅಡುಗೆ ಅನಿಲದ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಏರುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಸಾಮಾನ್ಯ ಜನರ ಜೇಬಿಗೆ ಹೊರೆಯಾಗುತ್ತಿವೆ. ಇಂದು ಮಾರ್ಚ್ 1, ಸೋಮವಾರ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 81.47 ರೂ.

ಮೇ 2020ರಿಂದ ಉಜ್ವಲಾ ಯೋಜನೆಯಡಿ ಲಭ್ಯವಿರುವ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವುದನ್ನು ಸರ್ಕಾರ ಹೆಚ್ಚಾಗಿ ನಿಲ್ಲಿಸಿರುವುದರಿಂದ, ಹೆಚ್ಚಿನ ಸಂಖ್ಯೆಯ ಕುಟುಂಬಗಳಿಗೆ ಈಗ ಮಾರುಕಟ್ಟೆ ಬೆಲೆಯನ್ನು ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಳೆದ ವರ್ಷದ ಆರಂಭದಿಂದ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಕುಸಿತವಾಗಿದ್ದರೂ ಸರ್ಕಾರ ಮಾತ್ರ ಸಬ್ಸಿಡಿ ಹಿಂತೆಗೆತ ಮಾಡಿ ತೆರಿಗೆ ಹೆಚ್ಚಿಸುತ್ತಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲಿ ಎಲ್‌ಪಿಜಿ ಸಬ್ಸಿಡಿಗಳ ಹಂಚಿಕೆಯನ್ನು 35,605 ಕೋಟಿ ರೂ.ಗಳಿಂದ ಕೇವಲ 12,480 ಕೋಟಿ ರೂ.ಗೆ ಇಳಿಸಲಾಗಿದೆ.


ಇದನ್ನೂ ಓದಿ: ಇಂಧನ ಬೆಲೆ ಏರಿಕೆಗೆ ವ್ಯಂಗ್ಯ: ಚಾಕೋಲೆಟ್ ಹಂಚಿ, ಟ್ರ್ಯಾಕ್ಟರ್ ಎಳೆದು ವಿಭಿನ್ನ ಪ್ರತಿಭಟನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...