ಹೀಗಿದೆ ಆರೆಸೆಸ್

- Advertisement -
- Advertisement -

ಆರ್.ಎಸ್.ಎಸ್. ಬೇಡಿಕೆ: “ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿಯ ಅನುಷ್ಠಾನ” – ಹಾಗಾದರೆ ದಲಿತರು ಮತ್ತು ಮಹಿಳೆಯರ ಗತಿಯೇನು? ಭಾರತ ಸಂವಿಧಾನದ ಮೇಲಿರುವ ಆರ್.ಎಸ್.ಎಸ್. ನಿಷ್ಠೆಯನ್ನು ಗೋಲ್ವಾಲ್ಕರ್ ಅವರ “ಚಿಂತನಾಗುಚ್ಛ” ಕೃತಿಯಲ್ಲಿನ ವಿವರ ಹೇಳಿಕೆಗಳಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಕೃತಿ ಕೇವಲ ಆಯ್ದ ಲೇಖನಗಳ ಸಂಕಲನವಷ್ಟೇ ಅಲ್ಲ, ಬದಲಿಗೆ ಆರ್.ಎಸ್.ಎಸ್. ಸ್ವಯಂಸೇವಕರ ಪಾಲಿಗೆ ಒಂದು ಪವಿತ್ರ ಗ್ರಂಥ ಕೂಡ.
“ನಮ್ಮ ಸಂವಿಧಾನ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನಗಳಿಂದ ಆಯ್ದುಕೊಂಡ ವಿವಿಧ ಲೇಖನಗಳು ಮತ್ತು ಅನುಚ್ಛೇದದ ತುಣುಕುಗಳ ಸಂಚಯಿತ ರೂಪ. ಇದು ನಮ್ಮದೆಂದು ಹೇಳಿಕೊಳ್ಳಲು ನಿಚ್ಚಳವಾದ ಯಾವ ಹೆಗ್ಗಳಿಕೆಯೂ ಇಲ್ಲ. ನಮ್ಮ ರಾಷ್ಟ್ರ ಬದುಕಿನ ಧ್ಯೇಯವನ್ನಾಗಲಿ ಅಥವಾ ನಮ್ಮ ಬದುಕಿಗಿರುವ ಮಾರ್ಗದರ್ಶಿ ತತ್ತ್ವವನ್ನಾಗಲಿ ತೆರೆದು ತೋರುವ ಯಾವ ಮಾರ್ಗದರ್ಶಕ ಸಿದ್ಧಾಂತಗಳ ಒಂದು ಪದವಾದರೂ ಅದರಲ್ಲಿದೆಯೆ?
ವಾಸ್ತವ ಸಂಗತಿಯೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿ ಅಥವಾ ಮನುಸಂಹಿತೆ ಅಥವಾ ಮನುಧರ್ಮಶಾಸ್ತ್ರವಿರಬೇಕೆಂದು ಆರ್.ಎಸ್.ಎಸ್. ಅಪೇಕ್ಷಿಸಿತ್ತು. ಎಲ್ಲರೂ ತಿಳಿದಿರುವಂತೆ ಶೂದ್ರರು, ದಲಿತರು ಮತ್ತು ಮಹಿಳೆಯರ ಕುರಿತಂತೆ, ಅತ್ಯಂತ ಅವಹೇಳನಕಾರಿ ಮತ್ತು ಅಮಾನುಷ ಪ್ರಸ್ತಾಪಗಳ ಉಲ್ಲೇಖವಿರುವ ಮನುಸ್ಮøತಿ ಅವರ ಅಪೇಕ್ಷೆಯ ಸಂವಿಧಾನವಾಗಿತ್ತು. ಸಂಸದೀಯ ಸಭೆ, ಸಂವಿಧಾನ ರಚನೆ ಮತ್ತು ಮಂಡನೆಯ ಕಾರ್ಯವನ್ನು ಅಂತಿಮಗೊಳಿಸಿದಾಗ, ಆರ್.ಎಸ್.ಎಸ್ ತನ್ನ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿತು. ನವೆಂಬರ್ 30, 1949ರ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದೆ.
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಕ್ತನ ಭಾರತದಲ್ಲಿ ಆಗಿರಬಹುದಾದ ಒಂದು ಅನನ್ಯ ಸಂವಿಧಾನಾತ್ಮಕ ಬೆಳವಣಿಗೆಯ ವಿವರಗಳಾಗಲಿ, ಉಲ್ಲೇಖಗಳಾಗಲಿ ಲವಲೇಶವಿಲ್ಲ. ಸ್ಪಾರ್ಟ್ ದ ಲೈಕರ್ಗಸ್ (820 ಬಿ.ಸಿ) ಅಥವಾ ಪರ್ಷಿಯಾದ ಸೊಲೊನ್ (640 ಬಿ.ಸಿ) ಅವರುಗಳಿಗೂ ಪೂರ್ವದಲ್ಲೇ ಮನುಸ್ಮøತಿ ರಚಿತವಾಗಿತ್ತು. ಇಂದಿನವರೆಗೂ ಮನುಸ್ಮøತಿಯಲ್ಲಿ ಪ್ರತಿಪಾದಿತವಾಗಿರುವ ವಿಧಿ ನಿಬಂಧನೆಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ ಹಾಗೂ ಸ್ವಯಂಪ್ರೇರಿತ ನಿಷ್ಠೆ ಮತ್ತು ಅನುಸರಣೀಯ ಗುಣವನ್ನು ಪ್ರೇರೇಪಿಸಿದೆ. ಆದರೆ ಈ ಯಾವ ವಿಚಾರವು ನಮ್ಮ ಸಂವಿಧಾನದ ಪಂಡಿತೋತ್ತಮರಿಗೆ ಅರ್ಥವಾಗುವುದಿಲ್ಲ. ಹಾಗೆ ಅವರಿಗೆ ಮುಖ್ಯವೂ ಅಲ್ಲ”
ಸ್ವತಂತ್ರ ಭಾರತದಲ್ಲಿ ಮನುಧರ್ಮಶಾಸ್ತ್ರವನ್ನು ಅಂಗೀಕರಿಸಿ, ಅಧಿಕೃತವಾಗಿ ಘೋಷಿಸಬೇಕೆಂದು ಆರ್.ಎಸ್.ಎಸ್. ಒತ್ತಾಯಿಸುತ್ತಿರುವುದಕ್ಕೆ ನಿಜವಾದ ಕಾರಣವೆಂದರೆ, ತಮ್ಮ ಮಾರ್ಗದರ್ಶಿ, ತತ್ವಜಿಜ್ಞಾಸು ಮತ್ತು ವಿಚಾರ ಉದ್ದೀಪಕರಾಗಿರುವ ವಿ.ಡಿ.ಸಾವರ್ಕರ್ ಅವರನ್ನು ನಿಷ್ಠೆಯಿಂದ ಹಿಂಬಾಲಿಸುತ್ತಿರುವುದು. ಸಾವರ್ಕರರ ಮೇರೆಗೆ ;
“ನಮ್ಮ ಹಿಂದು ರಾಷ್ಟ್ರದ ಪವಿತ್ರ ಕೃತಿಗಳಾದ ವೇದಗಳ ಅನಂತರ ಅತ್ಯಂತ ಪೂಜ್ಯನೀಯ ಮತಧರ್ಮಶಾಸ್ತ್ರವೆಂದರೆ ‘ಮನುಸ್ಮøತಿ’ ಮಾತ್ರ. ಅಲ್ಲದೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ, ಸಂಪ್ರದಾಯ, ಚಿಂತನೆ ಮತ್ತು ಆಚರಣೆಯ ಮೂಲ ತಳಹದಿ ‘ಮನುಸ್ಮøತಿ’ಯಾಗಿದೆ. ಅಧ್ಯಾತ್ಮ ಮತ್ತು ದೈವಿಕತೆ ಕೇಂದ್ರಿತ ನಮ್ಮ ದೇಶ ಸಾಧಿಸಿರುವ ಮುನ್ನಡೆಯನ್ನು ಈ ಕೃತಿ ಸಂಕೇತರೂಪದಲ್ಲಿ ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದುಗಳು ತಮ್ಮ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಪಾಲಿಸುತ್ತಿರುವ ವಿಧಿನಿಯಮಗಳು ‘ಮನುಸ್ಮøತಿ’ ಯನ್ನು ಆಧರಿಸಿವೆ. ಇಂದು ಹಿಂದು ಮತೀಯರ ಕಾನೂನು ಎಂದರೆ ಅದು ‘ಮನುಸ್ಮøತಿ’ ಮಾತ್ರ
ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದು ರಾಷ್ಟ್ರದ ಸಮಾನಾರ್ಥಕ ಪದವೆಂದರೆ ‘ಜಾತೀಯತೆ’:
ಆರ್.ಎಸ್.ಎಸ್. ಪ್ರಧಾನರ ಶ್ರದ್ಧೆ, ನಂಬಿಕೆಯಿರುವುದು ಮನುಸ್ಮøತಿಯಲ್ಲಿ. ಆದ್ದರಿಂದ ಸಹಜವಾಗಿಯೆ ಜಾತೀಯತೆಯನ್ನು ನಂಬುವ ಕಡೆಗೆ ಅವರನ್ನು ಕರೆದೊಯ್ಯಿತು. ಆರ್.ಎಸ್.ಎಸ್.ಗೆ ಜಾತೀಯತೆಯೇ ಹಿಂದು ಧರ್ಮದ ಮತ್ತು ಹಿಂದು ರಾಷ್ಟ್ರೀಯತೆಯ ಅಂತಃಸ್ಸಾರ. ಮನು ಮೇರೆಗೆ ಹಿಂದು ಧರ್ಮೀಯರು ಮತ್ತಾರೂ ಅಲ್ಲ, ಆದರೆ ;
“ಹಿಂದು ಧರ್ಮೀಯರು ವಿರಾಟ್ ಪುರುಷ ಸಂಭೂತರು, ಆ ದೈವೀಶಕ್ತಿಯ ಮಾನುಷಾವತಾರಿಗಳು, ‘ಹಿಂದು’ ಶಬ್ದದ ಬಳಕೆ ಮಾಡದಿದ್ದರೂ, ‘ಪುರುಷ ಸೂಕ್ತ’ ದಲ್ಲಿ ವರ್ಣಿತವಾಗಿರುವ ದೈವೀಶಕ್ತಿಯ ವಿವರಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ಸೂರ್ಯಚಂದ್ರರು ವಿರಾಟ್ ಪುರುಷನ ಎರಡು ಕಣ್ಣುಗಳು, ಅವನ ಹೊಕ್ಕಳು ಮೂಲದಿಂದಲೇ ತಾರೆಗಳು ಮತ್ತು ಗಗನ ಸೃಷ್ಟಿತವಾಗಿದೆ. ಹಾಗು ಅವನ ಶಿರವೇ ಬಾ ್ರಹ್ಮಣರು, ತೋಳುಗಳೇ ಕ್ಷತ್ರಿಯರು, ವೈಶ್ಯರು ಅವನೆರಡು ಊರುಗಳು ಮತ್ತು ಪಾದಗಳೇ ಶೂದ್ರರು. ಇಂಥ ಪುರಾಣ ರೂಪಿಕೆಯ ಅರ್ಥವೆಂದರೆ; ಚಾತುರ್ವಣ್ರ್ಯ ವ್ಯವಸ್ಥೆಯಿರುವ ಸಮುದಾಯವೇ ಹಿಂದು ಮತೀಯರು – ನಮ್ಮ ದೇವತೆಗಳು ಹಾಗು ವಿರಾಟ್ ಪುರುಷನ ಶ್ರೇಷ್ಠಾಂಗವಾದ ಶಿರದ ಉತ್ಕøಷ್ಟ ದರ್ಶನವೇ ನಮ್ಮ ‘ರಾಷ್ಟ್ರ’ ಪರಿಕಲ್ಪನೆಯ ಆಂತರ್ಯದ ತಿರುಳು. ಈ ಅಂತಃಸತ್ತ್ವ ನಮ್ಮ ಚಿಂತನಾಕ್ರಮವನ್ನು ವಿಸ್ತರಿಸಿದೆ ಹಾಗು ನಮ್ಮ ಸಾಂಸ್ಕøತಿಕ ಪರಂಪರೆಯ ವಿವಿಧ ಅನನ್ಯ ಪರಿಕಲ್ಪನೆಗಳ ಆವಿರ್ಭಾವಕ್ಕೆ ಕಾರಣವಾಗಿದೆ”.
ಆರ್.ಎಸ್.ಎಸ್. ಮತ್ತು ಹಿಂದುತ್ವದ ಸಂಘಟನೆಗಳು ಮನುಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಯಾವ ಬಗೆಯ ನಾಗರಿಕತೆಯನ್ನು ಕಟ್ಟಲು ಹೊರಟಿದ್ದಾರೆ ಎಂಬುದನ್ನು ಕೂಲಂಕಷವಾಗಿ ತಿಳಿಯಬೇಕಾದರೆ, ಮನುತತ್ತ್ವ ಶೂದ್ರರು ಮತ್ತು ಮಹಿಳೆಯರನ್ನು ಕುರಿತಂತೆ ರೂಪಿಸಿರುವ ನ್ಯಾಯವಿಧಿಗಳತ್ತ ಒಮ್ಮೆ ಅವಲೋಕಿಸಬೇಕಾಗುತ್ತದೆ. ಅಮಾನವೀಯವೂ ಮತ್ತು ಭ್ರಷ್ಟವೂ ಆಗಿರುವ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇವುಗಳೇ ತಮ್ಮ ಅರ್ಥವನ್ನು ಸ್ವಯಂ ನಿರ್ವಚಿಸಿಕೊಳ್ಳುತ್ತವೆ.
ಪ್ರಜಾಪ್ರಭುತ್ವದ ವಿರುದ್ಧ :
ಪ್ರಜಾಪ್ರಭುತ್ವದ ತಾತ್ತ್ವಿಕತೆಗೆ ತದ್ವಿರುದ್ಧವಾದ ನಿರಂಕುಶ ಆಳ್ವಿಕೆಯ ಅಡಿಯಲ್ಲಿ ಭಾರತ ತನ್ನ ಆಡಳಿತ ನಡೆಸಬೇಕೆಂದು ಆರ್.ಎಸ್.ಎಸ್. ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದೆ. 1940 ರಂದು ಆರ್.ಎಸ್.ಎಸ್. ಕೇಂದ್ರಸ್ಥಾನವಾಗಿರುವ ನಾಗಪುರದ ರೇಷಮ್ ಭಾಗ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಆರ್‍ಎಸ್‍ಎಸ್‍ನ ಸುಮಾರು 1350 ಮಂದಿ ಉನ್ನತ ಸ್ತರದ ಸಂಘಟನೆಯ ಸ್ವಯಂಸೇವಕ ಪದವೃಂದವನ್ನುದ್ದೇಶಿಸಿ ಮಾತಾಡುತ್ತಾ ಗೋಲ್ವಾಲ್ಕರ್ ಮಹತ್ತರ ಹೇಳಿಕೆಯೊಂದನ್ನು ಘೋಷಿಸಿದರು ;
“ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬ ನಿಲುವಿನಿಂದ ಆರ್.ಎಸ್.ಎಸ್. ಸ್ಫೂರ್ತಿ ಪಡೆದಿದೆ. ಈ ಸ್ಫೂರ್ತಿ ಜ್ಯೋತಿಯೇ ನಮ್ಮ ಮಹಾನ್ ನೆಲದ ಮೂಲೆಮೂಲೆಯಲ್ಲೂ ಹಿಂದುತ್ವದ ದೀಪ ಹಚ್ಚಿ ದೇದಿಪ್ಯಮಾನಗೊಳಿಸುತ್ತಿದೆ”.
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತವೆಂಬ ಈ ಘೋಷಣೆ, ಯುರೋಪಿನ ನಾಜಿ ಮತ್ತು ಉಗ್ರ ಬಲಪಂಥೀಯರಿಂದ ನೇರವಾಗಿ ಎರವಲು ಪಡೆದ, ಸ್ವಪಜ್ಞತೆಯಿರದ ಅನುಕರಣಾರ್ಥಕ ಘೋಷಣೆ. ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಹಿಂದು ಮಹಾಸಭಾದ ಮುಖಂಡರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೂ ಈ ಸಭೆಯಲ್ಲಿ ಉಪಸ್ಥಿತರಿದ್ದದ್ದು. ಇದೇ ಮುಖರ್ಜಿಯವರು, ವಿಭಜನೆ ಪೂರ್ವದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಹಿಂದು ಮಹಾಸಭಾ ಜೊತೆಗೂಡಿ 1942ರಲ್ಲಿ ರಚಿಸಿದ್ದ ಸಂಮಿಶ್ರ ಸರ್ಕಾರದಲಿ ್ಲ ಉಪಮುಖ್ಯಮಂತ್ರಿಯಾಗಿದ್ದವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...