Homeಫ್ಯಾಕ್ಟ್‌ಚೆಕ್ಭಗತ್‌ಸಿಂಗ್‌ಗೆ ಗಲ್ಲುಶಿಕ್ಷೆಯಾಗಲು ಆರ್‌ಎಸ್‌ಎಸ್ ನಾಯಕ ಹೆಡ್ಗೆವಾರ್‌ ಸಹವರ್ತಿ ಕಾರಣವೆ?

ಭಗತ್‌ಸಿಂಗ್‌ಗೆ ಗಲ್ಲುಶಿಕ್ಷೆಯಾಗಲು ಆರ್‌ಎಸ್‌ಎಸ್ ನಾಯಕ ಹೆಡ್ಗೆವಾರ್‌ ಸಹವರ್ತಿ ಕಾರಣವೆ?

- Advertisement -
- Advertisement -

‘ಅಸೆಂಬ್ಲಿ ಬಾಂಬ್ ಸ್ಫೋಟ’ ಪ್ರಕರಣದಲ್ಲಿ ಭಗತ್ ಸಿಂಗ್ ಅವರ ವಿಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಎಲ್ಲಾ ವಕೀಲರು ಪ್ರಕರಣವನ್ನು ನಿರಾಕರಿಸಿದಾಗ ನ್ಯಾಯಾಲಯದಲ್ಲಿ ಭಗತ್ ಸಿಂಗ್ ಪರವಾಗಿ ಮುಸ್ಲಿಂ ವಕೀಲ ಆಸಫ್ ಅಲಿ ವಾದಿಸಿದರು” ಎಂದು ಪೋಸ್ಟ್ ಹೇಳುತ್ತದೆ; ಆದರೆ ಆರ್‌‌ಎಸ್‌ಎಸ್‌ ಸದಸ್ಯ ಮತ್ತು ಆರ್‌ಎಸ್‌ಎಸ್‌ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರ ನಿಕಟ ಸಹವರ್ತಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಅವರು ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ವಾದಿಸಿ ಭಗತ್ ಸಿಂಗ್‌ ಅವರಿಗೆ ಮರಣದಂಡನೆ ವಿಧಿಸಲು ಕಾರಣರಾದರು ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.


ಭಗತ್ ಸಿಂಗ್ ಪರವಾಗಿ ಮುಸ್ಲಿಂ ವ್ಯಕ್ತಿ ಆಸಫ್ ಅಲಿ ವಾದಿಸಿದರು. ಆರ್‌ಎಸ್‌ಎಸ್‌ಸದಸ್ಯ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್‌ಗೆ ಮರಣದಂಡನೆ ವಿಧಿಸಿದರು ಎಂಬುದು ಈ ವೈರಲ್‌ ವಿಡಿಯೊ ಪ್ರತಿಪಾದನೆಯಾಗಿದೆ. ಈ ವಿಡಿಯೊದಲ್ಲಿನ ಸತ್ಯಾಸತ್ಯತೆಯನ್ನು ‘ಫ್ಯಾಕ್ಟ್‌ಲಿ.ಇನ್‌’ ತೆರೆದಿಟ್ಟಿದೆ.

ಸತ್ಯಾಂಶವೇನು?

ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲ ವಿಚಾರಣೆಯು ದೆಹಲಿಯಲ್ಲಿನ ಭಾರತೀಯ ಕೇಂದ್ರ ಶಾಸನ ಸಭೆಯ (CLA) ಬಾಂಬ್ ದಾಳಿಯಲ್ಲಿ ಕೊಲೆಯ ಯತ್ನ ಮತ್ತು ಪಿತೂರಿಯ ಆರೋಪಗಳಿಗೆ ಸಂಬಂಧಿಸಿತ್ತು. ಆದರೆ ಎರಡನೆಯದ್ದು ಲಾಹೋರ್‌ನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಹತ್ಯೆಯ ಆರೋಪವಾಗಿತ್ತು. ಈ ಪ್ರಕರಣವನ್ನು ಲಾಹೋರ್ ಪಿತೂರಿ ಪ್ರಕರಣ ಎಂದೂ ಕರೆಯುತ್ತಾರೆ.

ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ

08 ಏಪ್ರಿಲ್ 1929ರಂದು, ಭಗತ್ ಸಿಂಗ್ ಬಟುಕೇಶ್ವರ ದತ್ (ದತ್ತ) ಜೊತೆಗೆ ದೆಹಲಿಯ ಕೇಂದ್ರ ಅಸೆಂಬ್ಲಿಗೆ ಕಡಿಮೆ ತೀವ್ರತೆಯ ಬಾಂಬ್ ಎಸೆದರು. ಅಲ್ಲಿ ಭಗತ್ ಸಿಂಗ್ ಮತ್ತು ದತ್ ಇಬ್ಬರೂ ಶರಣಾದರು. ವಿಚಾರಣೆಯು 07 ಮೇ 1929ರಂದು ಪ್ರಾರಂಭವಾಯಿತು ಮತ್ತು 12 ಜೂನ್ 1929ರಂದು ನ್ಯಾಯಾಲಯವು ಭಗತ್ ಸಿಂಗ್ ಮತ್ತು ದತ್ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸುವ ತೀರ್ಪು ಪ್ರಕಟಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಡಿಜಿಟಲ್ ದಾಖಲೆಗಳು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾಅಭಿಲೇಖ್ ಪಾತಾಳ ಪೋರ್ಟಲ್‌ನಲ್ಲಿ ಲಭ್ಯವಿವೆ. ಅದೇ ಡಾಕ್ಯುಮೆಂಟ್ ಇಂಡಿಯನ್‌ ಕಲ್ಚರ್‌‌ ಪೋರ್ಟಲ್‌ನಲ್ಲಿಯೂ ಲಭ್ಯವಿದೆ (ಸಂಪುಟ 1 ಮತ್ತು ಸಂಪುಟ 2).


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ


ಈ ತೀರ್ಪಿನ ದಾಖಲೆಗಳಲ್ಲಿ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಆರೋಪಿಗಳಾಗಿದ್ದು ಮತ್ತು ಅಸಫ್ ಅಲಿ ಇಬ್ಬರಿಗೂ ವಕೀಲರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಅವರು ಬ್ರಿಟಿಷರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಆದರೂ ಪ್ರಖ್ಯಾತ ಕಾನೂನು ವಿದ್ವಾಂಸರಾದ ಎ.ಜಿ.ನೂರಾನಿ ಅವರು ತಮ್ಮ ಪುಸ್ತಕ ‘ದಿ ಟ್ರಯಲ್ ಆಫ್ ಭಗತ್ ಸಿಂಗ್ — ಪಾಲಿಟಿಕ್ಸ್ ಆಫ್ ಜಸ್ಟಿಸ್’ನಲ್ಲಿ ಅಸಫ್ ಅಲಿ ಬಟುಕೇಶ್ವರ್ ದತ್ ಅವರನ್ನು ಪ್ರತಿನಿಧಿಸಿದರೆ, ಭಗತ್ ಸಿಂಗ್ ಅವರಿಂದ ಕಾನೂನು ಸಲಹೆ ಪಡೆದು ತಮ್ಮ ಪರವಾಗಿ ತಾವೇ ವಾದಿಸಿದರು ​​ಎಂದು ಹೇಳಿದ್ದಾರೆ. ಭಗತ್ ಸಿಂಗ್ ತನ್ನ ತಂದೆಗೆ ಬರೆದ ಪತ್ರದ ಆಯ್ದ ಭಾಗವನ್ನು ನೂರಾನಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕಾನೂನು ಸಲಹೆಗಾರರನ್ನು ಕೋರಿರುವುದು ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಹಂಚಿಕೊಂಡ ಆಯ್ದ ಭಾಗವು “ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಾನು ಕೆಲವು ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ, ಆದರೆ ಅವು ಅಷ್ಟು ಮುಖ್ಯವಲ್ಲ”. “ಕರಡು ಭಗತ್ ಸಿಂಗ್ ಅವರದ್ದಾಗಿದ್ದರೂ, ಅವರು ಭಾಷೆಯನ್ನು ಪಾಲಿಶ್ ಮಾಡಿದ್ದಾರೆ ಎಂದು ಆಸಫ್‌ಅಲಿ ಪ್ರತಿಪಾದಿಸಿದ್ದಾರೆ” ಎಂದು ಪುಸ್ತಕದ ಇನ್ನೊಂದು ಉಲ್ಲೇಖಿತ ಭಾಗದಿಂದ ಸ್ಪಷ್ಟವಾಗಿದೆ. ಅಸಫ್ ಅಲಿ ಅವರು ದತ್ ಅವರನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್ ಸ್ವತಃ ವಾದಿಸಲು ಸಲಹೆ ನೀಡಿದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಈ ಪುಸ್ತಕವು “ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಬ್ರಿಟಿಷರನ್ನು ಪ್ರತಿನಿಧಿಸಿದರು” ಎಂಬ ಅಂಶವನ್ನು ಪುನರುಚ್ಚರಿಸಿದೆ. ಆದರೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಆರ್‌ಎಸ್‌ಎಸ್ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರೊಂದಿಗಿನ ನಿಕಟವರ್ತಿಯಾಗಿದ್ದಾರೆ ಎಂದು ತೀರ್ಮಾನಿಸಲು ನಮಗೆ ಯಾವುದೇ ಮಹತ್ವದ ಪುರಾವೆಗಳು ಕಂಡುಬಂದಿಲ್ಲ.

ಲಾಹೋರ್ ಪಿತೂರಿ ಪ್ರಕರಣ

ಈ ಪ್ರಕರಣದಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರು ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಅವರನ್ನು ಕೊಂದ ಆರೋಪದಲ್ಲಿ ಮರಣದಂಡನೆ ವಿಧಿಸಲಾಯಿತು. ಅಂತಿಮವಾಗಿ, ಮೂವರನ್ನು 23 ಮಾರ್ಚ್ 1931ರಂದು ಗಲ್ಲಿಗೇರಿಸಲಾಯಿತು.

ಇಂಡಿಯನ್‌ ಕಲ್ಚರ್‌ ಪೋರ್ಟಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಬಹು ಡಿಜಿಟಲ್ ದಾಖಲೆಗಳು ಲಭ್ಯವಿವೆ. ಈ ಪೋರ್ಟಲ್‌ನಲ್ಲಿ ಲಭ್ಯವಿರುವ ತೀರ್ಪಿನ ದಾಖಲೆಯ ಪ್ರಕಾರ, ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್‌ಗೆ ಸಲಹೆ ನೀಡಿದವರು ಅಸಫ್ ಅಲಿ ಅಲ್ಲ ಬದಲಿಗೆ ಲಾಲಾ ದುನಿ ಚಂದ್ ಆಗಿದ್ದಾರೆ. ಮತ್ತೊಂದೆಡೆ, ಅಸಫ್ ಅಲಿ ಅವರು ನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರಾಗಿ ಸುಖ್‌ದೇವ್ ರವರನ್ನು ಪ್ರತಿನಿಧಿಸಿದರು.

ದಾಖಲೆಗಳ ಪ್ರಕಾರ, ನೋದ್ ಅವರು ಬ್ರಿಟಿಷ್ ಸಾಮ್ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡರು. ಇದಲ್ಲದೆ, ದಾಖಲೆಯಲ್ಲಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಎಂಬ ಯಾವುದೇ ವ್ಯಕ್ತಿಯ ಉಲ್ಲೇಖವಿಲ್ಲ. ನೂರಾನಿ ಅವರ ಪುಸ್ತಕದಲ್ಲಿಯೂ, ಭಗತ್ ಸಿಂಗ್ ಅವರು ಕಾನೂನು ಸಲಹೆಗಾಗಿ ಲಾಲಾ ದುನಿ ಚಂದ್ ಅವರನ್ನು ಆಯ್ಕೆ ಮಾಡಿಕೊಂಡರು ಮತ್ತು ನೋದ್ ಅವರು ಬ್ರಿಟಿಷರ ಪರವಾಗಿ ಕಾಣಿಸಿಕೊಂಡರು ಎಂದು ಉಲ್ಲೇಖಿಸಿದ್ದಾರೆ. ಲಭ್ಯವಿರುವ ಎಲ್ಲಾ ಮಾಹಿತಿಗಳಿಂದ ಹೇಳುವುದಾದರೆ ಗಲ್ಲುಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಭಗತ್ ಸಿಂಗ್ ವಿರುದ್ಧ ವಾದಿಸಿದ ವ್ಯಕ್ತಿ ಆರ್‌ಎಸ್‌ಎಸ್‌ಗೆ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಗತ್ ಸಿಂಗ್ ಲಾಲಾ ದುನಿ ಚಂದ್ ಅವರಿಂದ ಕಾನೂನು ಸಲಹೆಯನ್ನು ಪಡೆದರು; ಆರೆಸ್ಸೆಸ್ ಸಹವರ್ತಿಯೊಬ್ಬರು ವಿಚಾರಣೆಯಲ್ಲಿ ಬ್ರಿಟಿಷರನ್ನು ಪ್ರತಿನಿಧಿಸಿರಲಿಲ್ಲ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಮತ್ಸ್ಯಕನ್ಯೆ ಸಿಕ್ಕಿದೆ ಎಂಬುದು ನಿಜವಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಕಮ್ಯುನಿಸ್ಟ್ ರವರಿಗೆ ಸ್ವಾತಂತ್ರ್ಯದ ಪೂರ್ವದಿಂದಲೂ ಸುಳ್ಳು ಇತಿಹಾಸ ಬರೆದು ,ಅದನ್ನೇ ಜನರಿಗೆ ನಂಬಿಸುವ ಪ್ರಯತ್ನ ನಡಿತಲೇ ಇದೆ ,ಅದರಲ್ಲಿ ಇದೂ ಸಹ ಒಂದು ,ಭಗತ್ ಸಿಂಗ್ ಪರ ಕೋರ್ಟ್ ನಲ್ಲಿ ವಾದ ಮಾಡಿದ್ದು ಮುಸ್ಲಿಮ್ ಅನ್ನೋದು ಶುದ್ದ ಸುಳ್ಳು ,ನಿಮ್ಮ ಯೋಗ್ಯತೆಗೆ ಒಂದು ಸತ್ಯವಾದ ಮಾಹಿತಿಯಾದರೂ ನೀಡಿ ಇನ್ನಾದರು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...