Homeಕರ್ನಾಟಕರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

ರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

‘ನಾನೇಕೆ ಆರ್‌ಎಸ್‌ಎಸ್‌ ತ್ಯಜಿಸಿದೆ’ ಲೇಖನ ಸರಣಿಯಲ್ಲಿ ಸಂಘಪರಿವಾರವನ್ನು ತೊರೆದ ಹಿರಿಯ ನಾಯಕ ಪ್ರವೀಣ್ ವಾಲ್ಕೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ತಡೆ ವಿಚಾರವಾಗಿ ಪ್ರಕರಣ ಮೊಟ್ಟಮೊದಲು ದಾಖಲಾಗಿದ್ದು ನನ್ನ ಮೇಲೆ. ಬಾಲ್ಯದಿಂದಲೂ ಸಂಘ ಪರಿವಾರದಲ್ಲಿದ್ದವನು ನಾನು. ಅಲ್ಲಿ, ಜಳ್ಳನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡಾಗ, ಹಿಂದೂ ಧರ್ಮ ಪ್ರತಿಪಾದಿಸುವ ಉದಾತ್ತತೆ ಇಲ್ಲ. ಸಾಮಾನ್ಯಮಟ್ಟದಲ್ಲಿ ಧರ್ಮ ಏನು ಹೇಳುತ್ತದೆ? ಮನುಷ್ಯತ್ವವೇ ಪ್ರಧಾನವಲ್ಲವೆ? ಅದು ಅಲ್ಲಿ ಕಾಣುತ್ತಿಲ್ಲ. ಹೀಗಾಗಿ ನಮ್ಮಂತವರೊಂದಿಗೆ ಸಂಘರ್ಷ ಏರ್ಪಟ್ಟು ದೊಡ್ಡ ವರ್ಗವೇ ಸಂಘ ಪರಿವಾರವನ್ನು ತೊರೆದು ಹೊರಬಂತು.

ಅಲ್ಲಿ ಜನರನ್ನು ದಾರಿ ತಪ್ಪಿಸುವುದಲ್ಲದೇ ಮತ್ತೆ ಬೇರೇನೂ ನಡೆಯುವುದಿಲ್ಲ. ಹಿಂದೂ ಧರ್ಮ ದಾರಿ ತಪ್ಪಿ ಎಂದು ಹೇಳಿದೆಯೇ? ಒಂದು ರೀತಿಯಲ್ಲಿ ನೋಡುವುದಾದರೆ ಸಂಘ ಪರಿವಾರದವರಿಗೆ ಹಿಂದೂಗಳೇ ವಿರೋಧಿಗಳು. ಕೆಳಮಟ್ಟದ ಕಾರ್ಯಕರ್ತರಿಗೆ ಮುಸಲ್ಮಾನರನ್ನು ವಿರೋಧಿಸಲು ಹೇಳುತ್ತಾರೆ. ಆದರೆ ಸಾಮಾಜಿಕ
ವಾಸ್ತವದಲ್ಲಿ ಆ ರೀತಿಯ ಯಾವುದೇ ವಿರೋಧ-ವಿವಾದ ಇಲ್ಲ.

ಮೂಲದಲ್ಲಿ ಜನಸಾಮಾನ್ಯರಿಗೆ ಮುಸಲ್ಮಾನರ ವಿರೋಧ ಇಲ್ಲ. ಮೋಹನ್ ಭಾಗವತ್ ಹೇಳಿದಂತೆ ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ. ಆದರೆ ಒಂದು ಸಮುದಾಯವನ್ನು ತುಳಿಯುವ ಇವರ ಉದ್ದೇಶ ಅರಿತು ಹೊರಬಂದೆ. ದಲಿತರು, ಹಿಂದುಳಿದ ವರ್ಗಗಳನ್ನು ತುಳಿಯುವುದಲ್ಲದೇ ಬೇರೆ ಉದ್ದೇಶ ಅವರಿಗಿಲ್ಲ. ನಾನು ಹಿಂದೂ ಅಲ್ಲ ಎನ್ನಲಾರೆ. ಹಲವು ಕೊರತೆಗಳ ಹೊರತಾಗಿಯೂ ಹಿಂದೂ ಎಂಬುದರಲ್ಲಿ ಬಂಧುತ್ವವಿದೆ. ಮೂರ್ತಿಯನ್ನು ನಂಬುವ ಸಮುದಾಯದಲ್ಲಿ ನನ್ನ ಜನನವಾಗಿದೆ. ಈ ಧರ್ಮವನ್ನು ವಿರೋಧಿಸುವುದು ನನಗೆ ಬೇಕಾಗಿಲ್ಲ. ಆದರೆ ಸಂಘ ಪರಿವಾರದವರು ಧರ್ಮವನ್ನು ತೋರಿಸಿ ಜನರಿಗೆ ಮೋಸ ಮಾಡುತ್ತಾರೆ.

ಮಾತೆತ್ತಿದರೆ ಹಿಂದೂ-ಮುಸ್ಲಿಂ ಗಲಭೆ. ಯಾರೋ ಒಬ್ಬ ನಾಯಕನಿಗಾಗಿ, ಒಂದು ಮುಗ್ಧ ಜೀವಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳಿತು. ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಸ್ವತಂತ್ರವನ್ನು ಕಿತ್ತುಕೊಳ್ಳುತ್ತಿದ್ದೇವೆ ಅನಿಸಿತು. ಇದೆಲ್ಲ ಸರಿಯಲ್ಲ ಎಂದು ಅಲ್ಲಿಂದ ಹೊರಬಂದೆ. ಇವರ ಹಿಂದುತ್ವಕ್ಕೆ ಅರ್ಥ ಇಲ್ಲ. ಹಿಂದೂ ಎಂದ ಮೇಲೆ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಈಗಿರುವ ಕೊರತೆಗಳನ್ನು ನೀಗಿಸಿಕೊಂಡು ಅತ್ತ ಹೆಜ್ಜೆಯಿಡಬೇಕು. ಯಾವ ಧರ್ಮದಲ್ಲೂ ಕಡಿ-ಬಡಿ ಇಲ್ಲ. ಯಾವ ಸಮುದಾಯದ ತಾಯಿಯಾದರೂ ತನ್ನ ಮಗ ರೌಡಿಯಾಗಬೇಕು ಎಂದು ಭಾವಿಸುವುದಿಲ್ಲ. ಆದರೆ ಇಲ್ಲಿ (ದಕ್ಷಿಣ ಕನ್ನಡ) ಸಂಘಟನೆಗೆ ಬರುವ ಮಕ್ಕಳೆಲ್ಲ ಆಗುವುದು ರೌಡಿಗಳೇ ಹೊರತು, ಬೇರೇನೂ ಅಲ್ಲ. ಹಿಂದೂ ಸಂಘಟನೆಯಾಗಲೀ, ಮುಸ್ಲಿಂ ಸಂಘಟನೆಯೇ ಆಗಲಿ- ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳ ನಾಯಕರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ.

ಹಿಂದೂ ಧರ್ಮದ ಉಳಿವಿಗೆ ಸಂಘಟನೆಯ ಅಗತ್ಯವಿಲ್ಲ. ನಮ್ಮ ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ, ಹಿಂದೂ ಧರ್ಮ ಸುಧಾರಿಸಿ ಉಳಿಯುತ್ತದೆ. ಯಾವುದೇ ರಾಜಕೀಯ ನಾಯಕರ ಮಕ್ಕಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲ. ಇಲ್ಲಿನ ಕಾರ್ಯಕರ್ತರು, ಕೆಳವರ್ಗದ ಹುಡುಗರು ಮಾತ್ರ ಕೋರ್ಟ್ ಮೆಟ್ಟಿಲೇರುತ್ತಾರೆ. ಮೇಲ್ವರ್ಗದ ಹುಡುಗರಿಗೆ ಸಜೆಯಾಗಿದ್ದನ್ನಾಗಲೀ, ಪ್ರಕರಣ ದಾಖಲಾಗಿದ್ದಾಗಲೀ ನಾವು ನೋಡಲಿಲ್ಲ. ಪೂಜಾರಿಗಳು, ಶೆಟ್ಟಿಗಳು ಈ ಥರದ ಸಮುದಾಯಗಳೇ ಬಲಿಪಶುಗಳಾಗಿರುತ್ತವೆ. ಈ ಜನಾಂಗಗಳ ಜೀವನವನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಂದ ದೇಶ ಉದ್ಧಾರವಾಗುವುದಿಲ್ಲ. ದೇಶ ಉದ್ಧಾರದ ಬ್ಯಾನರ್ ಹಾಕಿಕೊಂಡು ದೇಶವನ್ನು ’ಲಗಾಡಿ’ ತೆಗೆಯುತ್ತಿದ್ದಾರೆ.

ಗೋಹತ್ಯೆ ನಿಷೇಧ ಎಂದರು. ಆದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ನಮೂನೆಯಲ್ಲಿ ಗೋವು ರಫ್ತಾಗುತ್ತಿದೆ. ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋ ಮಾಂಸದ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿಯ ಸರ್ಕಾರವಿದೆ. “ಗೋಹತ್ಯೆ ನಿಷೇಧ ಮಾಡಲು ಆಗಲ್ಲ, ಆರ್ಥಿಕತೆ ನಾಶವಾಗುತ್ತದೆ” ಎಂದಾದರೂ ಕಾರ್ಯಕರ್ತರಿಗೆ ಹೇಳಬಹುದಲ್ಲ. ಕರ್ನಾಟಕಕ್ಕೆ ಒಂದು ಕಾನೂನು, ಗೋವಾಕ್ಕೆ ಒಂದು ಕಾನೂನು, ತ್ರಿಪುರಕ್ಕೆ ಒಂದು, ಮೇಘಾಲಯಕ್ಕೆ ಒಂದು, ಅಸ್ಸಾಂಗೊಂದು ಕಾನೂನು- ಇದೆಲ್ಲ ಏಕೆ? ಅಲ್ಲಿಯ ಹುಡುಗರಲ್ಲಿ ಹಿಂದೂಗಳಿಲ್ಲವೆ? ಇಲ್ಲಿಯ ಹುಡುಗರು ಮಾತ್ರವೇ ಹಿಂದೂಗಳಾ?

ಗೋಹತ್ಯೆ ನಿಷೇಧ ಮಾಡಲು ಸಾಧ್ಯವಾದರೆ ಮಾಡಿ. ಆದರೆ ಒತ್ತಾಯವೇನೂ ಇಲ್ಲ. ವಾಸ್ತವ ಅವರಿಗೂ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಗೋಹತ್ಯೆ ನಿಷೇಧ ಪ್ರಚಾರವೂ ಮುಖ್ಯವಾಗಿತ್ತು. ಏಕೆಂದರೆ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಆಗಿಲ್ಲವಲ್ಲ. ಎಲೆಕ್ಷನ್ ಬರುವ ಹೊತ್ತಿಗೆ ಗಲಾಟೆಗಳು ಶುರುವಾಗುತ್ತವೆ. ಈಗ ಮತ್ತೆ ಶುರುವಾಗಿದೆ. ಹಿಂದೂ ಸಮಾಜೋತ್ಸವ, ಮುಸ್ಲಿಂ ಸಮಾಜೋತ್ಸವ ನಡೆಯಲಾರಂಭಿಸಿವೆ. ಕರಾವಳಿಯಲ್ಲಿ ದೊಡ್ಡ ನಮೂನೆಯಲ್ಲಿ, ರಾಷ್ಟ್ರಮಟ್ಟದ ನಾಯಕರೆಲ್ಲ ಬಂದು ಭಾಷಣ ಮಾಡುವುದು ಬಾಕಿ ಇದೆ.

ನಾನು ಭಜರಂಗದಳ ಸಂಸ್ಥಾಪಕ ವಿಭಾಗೀಯ ಸಂಚಾಲಕನಾಗಿದ್ದೆ. ಸಂಘಟನೆಗೆ ಸೇರಿದ್ದೇ ದೊಡ್ಡ ಗಿಲ್ಟ್. ಇವರ ಜೊತೆಗೆ ಸೇರಿದ್ದೇ ನೋವಿನ ಸಂಗತಿ. ಇವರು ಹೇಳುತ್ತಿದ್ದ ಹಾಗೆ, ಕಾರ್ಯಕರ್ತರನ್ನು ನೋಡಿಕೊಳ್ಳಲಿಲ್ಲ. ಇವರ ಸ್ವಾರ್ಥಕ್ಕಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳವನ್ನು ಬಳಕೆ ಮಾಡಿಕೊಂಡರು. ಸಂಘದ ಶಿಕ್ಷಣ ನಮಗೆ ಬೇಡ. ಮನೆಯಲ್ಲಿ ನಮಗೆ ಶಿಕ್ಷಣವನ್ನು ನೀಡಿದ್ದಾರೆ. ಅದರಿಂದ ಸಿಕ್ಕಿರುವ ತಿಳಿವಳಿಕೆಯೇ ಸಾಕು ಎಂದು ಈಗ ಅರಿವಾಗಿದೆ.

ಎಂ.ಪಿ., ಎಂ.ಎಲ್.ಎ.ಗಳೆಲ್ಲ ಸಂಘದ ಶಿಕ್ಷಣ ಪಡೆದವರು, ಆದರೆ ಏಕೆ ಭ್ರಷ್ಟಾಚಾರ ಮಾಡುತ್ತಾರೆ? ರಾಷ್ಟ್ರ ಜಾಗೃತಿ ಇರಬೇಕು ಎನ್ನುವ ಸಂಘದವರು ಭ್ರಷ್ಟರಾಗಿದ್ದಾರೇಕೆ? ರಾಷ್ಟ್ರೀಯತೆ ಮತ್ತು ಧರ್ಮದ ಕುರಿತು ಮಾತನಾಡುವವರು ಭ್ರಷ್ಟರಾಗಿರುವುದು ವಿಪರ್ಯಾಸವಲ್ಲವೇ? ಕೆಲವು ಮಠಾಧೀಶರು ಕೂಡ ಭ್ರಷ್ಟರಾಗಿದ್ದಾರೆ, ರಾಜಕಾರಣಿಗಳ ಗುಲಾಮರಾಗಿದ್ದಾರೆ. ಶೇ. 90ರಷ್ಟು ಸಾಧುಗಳು ಅಂಗಡಿ ತೆರೆದಿದ್ದಾರೆ. ಸರ್ವತ್ಯಾಗಿಯಾದವರಿಗೂ ಇವರಿಂದ ಏನೋ ಸಿಗುತ್ತದೆ ಎಂದಾಗ ಧರ್ಮದ ಬಗ್ಗೆ ಮಾತನಾಡೋದೇನಿದೆ? “ಹಿಂದೂ ಹುಡುಗಿಯರನ್ನು ಮುಸಲ್ಮಾನ್ ಹುಡುಗರು ಪ್ರೀತಿಸಿ ಲವ್ ಜಿಹಾದ್ ಮಾಡುತ್ತಿದ್ದಾರೆ” ಎಂದು ಪ್ರಚೋದಿಸುತ್ತಾರೆ. ಆದರೆ ಸಂಘದವರು ಈ ವಿಚಾರಗಳನ್ನು ತಮ್ಮ ಮಕ್ಕಳಿಗೆ ಹೇಳುವುದಿಲ್ಲ. ಬಡಪಾಯಿಗಳ ಮಕ್ಕಳಿಗೆ ಹೇಳಿ ಪ್ರಚೋದಿಸುತ್ತಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂದು ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ: ಬಿ.ಎಲ್.ಸಂತೋಷ್

ಸಂಘಪರಿವಾರ ಒಗ್ಗೂಡಿದೆ. ಆದರೆ ಅದರಿಂದ ಹೊರಗೆ ಬಂದವರು ಒಟ್ಟಿಗೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಹೊರಗೆ ಬಂದ ಹತ್ತು ಜನರು ಒಂದಾಗಿ ನಿಂತಿದ್ದರೆ ಇದನ್ನೆಲ್ಲ ಯಾವತ್ತೋ ಮಟ್ಟ ಹಾಕಬಹುದಿತ್ತು. ಹೊರಗೆ ಬಂದವರು ಬೇರೆ ಬೇರೆ ಸಂಘಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಸಂಘ ಪರಿವಾರದಲ್ಲಿ ದೇಶಪ್ರೇಮ ಯಾರ ಬಳಿಯೂ ನೋಡಲಿಲ್ಲ. ದೇಶಪ್ರೇಮ, ಹಿಂದುತ್ವ- ಎಲ್ಲ ಬ್ಯಾನರ್‌ಗಳಲ್ಲಿದೆ ಅಷ್ಟೇ. ಎಲ್ಲ ಕಡೆ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಹಿಂದೆಲ್ಲ ಜುಗಾರಿ, ವೇಶ್ಯಾವಾಟಿಕೆ, ಮರಳುದಂಧೆ ಎಂದೆಲ್ಲ ದನಿ ಎತ್ತುತ್ತಿದ್ದವರು ಈಗ ಏಕೆ ಮಾತನಾಡುತ್ತಿಲ್ಲ? ಏಕೆಂದರೆ ಅಂದು ದನಿ ಎತ್ತಿದವರೇ ಇಂದು ಇವುಗಳನ್ನು ನಡೆಸುತ್ತಿದ್ದಾರೆ. ಹೀಗಾದಾಗ ದೇಶ ಜಾಗೃತಿ ಆಗುತ್ತದೆಯೇ?

ಒಬ್ಬ ಹುಡುಗ ಮೊದಲ ಬಾರಿಗೆ ಜೈಲಿಗೆ ಹೋದಾಗ ಸಂಘ ಪರಿವಾರದಲ್ಲಿ ಬಹಳ ಮುರ್ಯಾದೆ ಕೊಡಲಾಗುತ್ತದೆ. ಮತ್ತೆಮತ್ತೆ ಇದೇ ರೀತಿ ಗಲಾಟೆಯಾಯಿತೆಂದರೆ ಅವನನ್ನು ಸಂಘಟನೆಯವರು ಹಿಂದಕ್ಕೆ ಹಾಕುತ್ತಾರೆ. ಹಿಂದೂ ಆಗಲಿ, ಮುಸ್ಲಿಂ ಆಗಲೀ- ದಕ್ಷಿಣ ಕನ್ನಡ ಜಿಲ್ಲೆ ಗ್ಯಾಂಗ್ ಕಟ್ಟಿ ಎದುರುಬದುರಾಗಿಸಲು ಒಂದು ಕಾರ್ಖಾನೆಯಂತಾಗಿದೆ. ಯುವಕರನ್ನು ರೌಡಿಸಂ ಕಾರ್ಖಾನೆಗೆ ಹಿಂದೂ ಮುಸ್ಲಿಂ ಧರ್ಮಗಳ ಕಟ್ಟರ್ ಸಂಘಟನೆಗಳು ದೂಡುತ್ತಿವೆ.

ಒಬ್ಬ ಹುಡುಗ ಸತ್ತನೆಂದರೆ ಆ ಮನೆಯ ಪರಿಸ್ಥಿತಿ ಏನಾಗಬೇಕು? ಯಾವ ಲೀಡರ್ ಮಗ ಸತ್ತಿದ್ದಾನೆ? ಇಲ್ಲಿನ ಹುಡುಗರಿಗೆ ಕೆಲಸಗಳಿಲ್ಲ. ಹೀಗಾಗಿ ಈ ಕಟ್ಟರ್ ಸಂಘಟನೆಗಳಿಗೆ ಹೋಗಿ ಯಡವಟ್ಟುಗಳಾಗುತ್ತಿವೆ. ಕೆಲಸವಿದ್ದರೆ ಯಾರಿಗೆ ಬೇಕು ಈ ಗಲಾಟೆಗಳು? ನಾಳೆ ಸೆಕೆಂಡ್ ಶಿಪ್ಟ್ ಕೆಲಸವಿದೆ ಎಂದಾದರೆ, ಯಾವುದಾದರೂ ಗಲಾಟೆಗೆ ಹೋಗುತ್ತೀರಾ? ಮನೆಯ ಜವಾಬ್ದಾರಿ ಇಲ್ಲದವ ಸಂಘಟನೆಗೆ ಸೇರುತ್ತಾನಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾಧ್ಯವಾಗುವ ಸ್ಥಿತಿ ಇಲ್ಲ. ಪ್ರವಾಹದ ಎದುರು ಎದೆಗೊಡುವುದಕ್ಕೆ ಆಗುವುದಿಲ್ಲ. ಏನೋ ಆಗಲಿಕ್ಕಿದೆ. ರಾಜಕಾರಣಿಗಳು ಸಾಮರಸ್ಯ ಸಾಧ್ಯವಾಗಲು ಬಿಡುವುದಿಲ್ಲ. ಯಾಕೆಂದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಅವರಿಗೆ ಅನುಕೂಲವಾಗುತ್ತದೆ.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಮುಂದಿನ ದಿನಗಳು ಇನ್ನೂ ಆತಂಕಕಾರಿಯಾಗಲಿವೆ!

(ನಿರೂಪಣೆ): ಯತಿರಾಜ್ ಬ್ಯಾಲಹಳ್ಳಿ

ಪ್ರವೀಣ್ ವಾಲ್ಕೆ

ಪ್ರವೀಣ್ ವಾಲ್ಕೆ
ದಕ್ಷಿಣ ಕನ್ನಡದಲ್ಲಿ ಭಜರಂಗದಳ ಸಂಘಟನೆಗೆ ಭದ್ರಬುನಾದಿ ಹಾಕಿದ ಪ್ರಮುಖರಲ್ಲಿ ಪ್ರವೀಣ್ ವಾಲ್ಕೆ ಕೂಡ ಒಬ್ಬರು. ಸಂಘಪರಿವಾರದ ಇಬ್ಬಂದಿತನದಿಂದ ಬೇಸತ್ತು ಹೊರಬಂದಿದ್ದಾರೆ. ಈಗ ’ಹಿಂದುತ್ವದಿಂದ ಭಂದುತ್ವದೆಡೆಗೆ’ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...